ತೋರಿಸಬ್ಯಾಡ ನಿನ್ನ ಲಟ್ಟಣಿಕೆ
ಹತ್ತಬೇಕಾದಿತು ನಾನು ಮಾಳಗಿಯ ನಿಚ್ಚುಣಕೆ
ಮರೆತು ಬಂದಿರುವೆ ನೀ ಆಜ್ಞಾಪಿಸಿದ ಕಾಣಿಕೆ
ನಾಳೆ ತಪ್ಪದೆ ತಂದುಕೊಡುವೆ ತಂಪಗಾಗೆ ಚಂದ್ರಿಕೆ
ಬಾರಿಸದಿರು... ಲಟ್ಟಣಿಗೆಮೇಳ
ತಾಳಲಾರದು ದೇಹವಿದು ನೀ...ಮಿಡಿಯುವ ತಾಳ
ಅರಿವಾಗುತಿಲ್ಲವೇನೆ ತಲೆಯಲೆದ್ದ ಗಂಟುಗಳ ಗೋಳ
ನೋಯ್ತಾವ ಕಣೆ ಖಂಡಗಳು.... ಹೊಡಿಬೇಡ ನಿ ಬಹಳ
ನಿನ್ನ ಕೋಪದ ತಾಪಕೆ ತೊಡೆ ತಟ್ಟಿ ನಿಲ್ಲಬಲ್ಲೇನೇನೆ
ನಾನು...| ಕಾಳಿ ಕಣ್ಣಿನ ಅಗ್ನಿ ದೃಷ್ಟಿಯೊಂದೆ ಸಾಕು
ನಾ ಸುಟ್ಟು ಬೂದಿಯಾಗಲು..| ಅದಾವ ಭಟ್ ರ ಹಾಡ
ಹಾಡಿ...ಮೈಸೂರು ಸಿಲ್ಕ ಸಾರಿಯನ್ನ ಅರ್ಪಿಸಲಿ..
ಮೂಲೋಕದೊಳದಾವ ಗಂಡುಗಳುಂಟು ಚೆಲುವೆ,
ನಿನ್ನಾಯುಧವನೇದುರಿಸಿ ನಿಲ್ಲುವ ಭಂಟರು
ನಾನೊ... ನಿರಾಯುಧ, ಶಾಂತಿದ್ಯೂತಕ....ನಿನ್ನ ಸೀರೆಯ ಸೆರಗಂಚಲ್ಲದೆ, ಇನ್ನಾವುದನು ಎತ್ತಲಾರದಷ್ಟು ಅಮಾಯಕ
ಶಾಂತಳಾಗು ದೇವಿ.. ರಾತ್ರಿಗೆಲ್ಲ ಹಾಡುವೆ ಪ್ರೇಮಾಯಣ
ಕಡಕೊಟ್ಟದಾರೂ ಸರಿ ತಂದು ಹೂಡುವೆ ಮನ್ಮಥನ ಬಾಣ
ಖರ್ಚಿಲ್ಲದ ಪ್ರೀತಿಯ ಸುರಿಸಲು ನಾನಲ್ಲ ಜಿಪುಣ
ಮಡಿಲಿಗೆ ಬಂಗಾರದ ಬೊಂಬೆಯ ಕೊಡಬಲ್ಲನೀ..ನಿಪುಣ
No comments:
Post a Comment