![]() | ||
ಕನ್ನಡಿಗರೆ ನಾವೆಲ್ಲಾ |
ದಶರಥ ಸುತನ ಸೀತೆಗಾಗಿ
ಸೇತುವೆ ಕಟ್ಟಿದ ವಾನರು ನಾವಲ್ಲಾ
ಕುಂತಿ ಸುತರ ರಾಜ್ಯಕ್ಕಾಗಿ
ಮಡಿದ ವೀರ ಸೇನಾನಿಗಳಲ್ಲ
ಬಿಳಿಯರ ವಿರುದ್ದ ದಂಗೆಯ ಹೂಡಿ
ಸೆರೆಯನು ಸೇರಿದ ಕಲಿಗಳಲ್ಲ
ಬಿಸಿಲನು ಉಂಡು ಬೆವರನು ಕುಡಿದು
ಬೀಜವ ಬಿತ್ತಿ ಬೆಳೆಯನು ಬೆಳೆವ ಬೆಳೆವ
ಮಣ್ಣಿನ ಮಕ್ಕಳಲ್ಲ
ಹಸಿ ಹುಸಿ ಮಿಥ್ಯವನುಡಿದು
ಮತವನು ಯಾಚಿಸುವ ನಾಯಕರಲ್ಲ
ನಗರವ ಕಟ್ಟಿ ನಾಯಕರಾದ
ಕೆಂಪೆಗೌಡರ ವಂಶಸ್ಥರಲ್ಲ
ನೆತ್ತರು ಸುರಿಸಿ ಏಕೀಕರಣದ ಪೌರುತ್ಯ
ವಹಿಸಿದ ಹುತಾತ್ಮರ ಹಿಂಬಾಲಕರಲ್ಲ
ಕಲಿಗಳು ಕಟ್ಟಿದ. ಕವಿಗಳು ಹಾಡಿದ
ರಸರುಷಿಗಳು ಪೂಜಿಸಿದ ಕನ್ನಡ
ತೇರನು ಎಳೆಯುವ ಸೇವಕರು ನಾವೆಲ್ಲಾ ...
No comments:
Post a Comment