Thursday, August 23, 2012

ನಾನಾರು...

ನಾನಾರು....?

                       ನಾನೆನು ಸಭೆಯೊಳು ಬಿಲ್ಲನು ಮುರಿದು
                       ಸೀತೆಯನು ಗೆದ್ದ ರಾಮನಲ್ಲ ..

ಸೀತೆಗಾಗಿ ಮಾಯಾ ಜಿಂಕೆಯ
ಬೆನ್ನು ಹತ್ತುವ ಹುಚ್ಚು ಗಂಡನಲ್ಲ

                     ದ್ರೌಪದಿಯ ಮುಡಿಯನ್ನು ಕಟ್ಟಲು
                     ದುಶ್ಯಾಸನನ ಎದೆಯನು  ಬಗೆದ  ಭೀಮನಲ್ಲ

ಏಳಿ, ಎದ್ದೇಳಿ  ಎಂಬ ಅಮೃತವಾಣಿಯ
ಕರ್ತೃ ನಾನಲ್ಲ

                   ನನಗೆ ರಕ್ತವ ಕೊಡಿ ನಿಮಗೆ ಸ್ವಾತಂತ್ರ್ಯ
                  ನಿದುವೆನೆಂದವನು ನಾನಲ್ಲ

ಕೋಟೆ ಕೊತ್ತಲುಗಳಿಗೆ ರಕ್ತದ
ಕಾಲುವೆಯನು ಹರಿಸಿದವನು  ನಾನಲ್ಲ

                  ಹರಿವ ನೀರಿಗೆ ಗೋಡೆಯ ಕಟ್ಟಿ
                  ಬಂಜರು ಒಡಲನು ಹಸಿರಾಗಿಸಿದವನು ನಾನಲ್ಲ

 ಕಡಲನು ಹೊಕ್ಕು ಚಿಪ್ಪನು ಹೆಕ್ಕಿ
ಮುತ್ತನು ಸೂಸಿದ ಕುಶಲನು ನಾನಲ್ಲ

ನಾನಾರು ...?

No comments:

Post a Comment