Thursday, January 10, 2019

ನಾನೇನು ಬರೆಯಲಯ್ಯ

ನಾನೇನು ಬರೆಯಲಿ ಅಕ್ಷರ
ಬಡವನಯ್ಯ..
ಮನವಿದು ಈಗ ಗೊಂದಲದ
ಗೂಡಾಗಿರುವಾಗ

ನಾನೊಬ್ಬನು ನರನಲ್ಲವೆ?
ಕಾಲನ ಕರಗಳಲಿ ಸಿಕ್ಕು
ಸೀಳಿ ಹೋಗುತಿರುವೆ...
ಹುಸಿನಗುವ ಹೊತ್ತ
ಮನುಜರ ಸುಳಿಗೆ ಸಿಕ್ಕು
ನರಳಾಡುತಿರುವೆ.

ಹಾಕಿಕೊಂಡ ಉದ್ದೇಶಗಳಿಗೆಲ್ಲ
ಭದ್ರ ಬುನಾದಿಗಳೆ ಸಿಗುತಿಲ್ಲ
ಕನಸುಗಳ ಕಟ್ಟುವ ಕೆಲಸವಂತೂ
ಇನ್ನೂ ದೂರದ ಮಾತು.

ಪ್ರಯತ್ನವೊಂದನ್ನು ಬಿಟ್ಟಿಲ್ಲ..
ಮೆಟ್ಟಿ...ಮೆಟ್ಟಿ ಮೇಲೆರಲೆ ಪ್ರಯತ್ನಿಸುತ್ತಿರುವೆ,
ಜಾರುತಿರುವೆ, ಹತ್ತುತಿರುವೆ,
ಜಾರುತಿರುವೆ. ಏರು ಜಾರುವಿಕೆಯ
ಮಧ್ಯೆ... ಮನಸ್ಸೆಷ್ಟೊ ಘಾಸಿಕೊಂಡಿದೆ.

ಸಂತೈಸುವವರಿಗಿಂತ ಹುಳಿ ಹಿಂಡುವವರೆ
ಹೆಚ್ಚಿರುವಾಗ... ಸಹಿಸಿಕೊಳ್ಳಲಾದರು
ಎಷ್ಟು ದಿನ?
ಬಾಳ ಕ್ಷೀರವು ಖುದ್ದು..ಖುದ್ದು...
ಹೊತ್ತು...ಕರಕಲಾಗಿ, ಪಾತ್ರಗೆ
ಮೆತ್ತಿಕೊಂಡಿರುವಾಗ

ನನ್ನೊಳಗೆ ನನ್ನನೆ ಸುತ್ತಿಕೊಂಡ ಹತ್ತಿ
ಹುಳುವಿನಂತಾಗಿದೆ ನನ್ನ ಸ್ಥಿತಿ..
ಬರುವೆ... ಬಂದೆ ಬರುವೆ...ಹಿಸುಕಿ
ಉಸಿರಕಟ್ಟಿಸುತ್ತಿರುವ ಪೊರೆಯನು
ಸೀಳಿ ಬರುವೆ...ಬರುವೆ...ಕಾಲವೆ
ಎದುರು ನೋಡುತ್ತಿರು ನನ್ನನು...

No comments:

Post a Comment