Thursday, December 29, 2016

ಅರಿವಿನ ಜ್ಞಾನ

ನೀನುಣ್ಣವ ಮೊದಲೇ ಅನ್ನವ
ನೀಡಿದರೆ ಅದು ಪ್ರಸಾದವಾಗುತ್ತದೆ
ನೀನುಂಡು ಮಿಕ್ಕ ಅನ್ನವ
ಹಂಚಿದರೆ ಅದು ಭಿಕ್ಷೆಯಾಗುತ್ತದೆ

ನೀನೊದದೆ ಪರರಿಗೆ ನೀಡುವ
ಪುಸ್ತಕ ನಿನ್ನ ಅಜ್ಞಾನವಾಗುತ್ತದೆ
ನೀನೊದಿ ಸಂಗಡಿಗರಿಗೆ ಕೊಡುವ
ಪುಸ್ತಕವು ನಿನ್ನ ಜ್ಞಾನವನ್ನು ಹೇಳುತ್ತದೆ

ಅನುಭವಿಸದೆ ಆಡುವ ಮಾತುಗಳು
ಬಾಲಿಷತನ ತೋರಿದರೆ
ಬದುಕಲಿ ಕಲಿತ ಪಾಠಗಳ ಹೇಳಿದರೆ
ಹಿರಿಮೆಯನ್ನು ತೋರುತ್ತದೆ

ದುಡಿಯದೆ ಉಂಡು ಮಲುಗುವದು
ಸೋಮಾರಿತನವನ್ನು ಸೂಚಿಸುತ್ತದೆ
ದುಡಿದು ನೀನುಂಡು ಇನ್ನೊಬ್ಬರಿಗೆ
ಸಹಾಯ ಮಾಡುವದು ಏಳಿಗೆಯನ್ನು
ಸಾರುತ್ತದೆ

No comments:

Post a Comment