ಈ ಬಡವನ ಜೋಳಿಗೆಯಿಂದ
ಅದೇಷ್ಟೊ... ಕವನಗಳನ್ನು
ಅವಳ ಹಾದಿಗೆ ಸುರಿದಿದ್ದೆ
ಸಾಕಿ....
ಕಣ್ಣೆತ್ತಿಯು ನೋಡದೆ
ನಡೆದು ಬಿಟ್ಟಳಲ್ಲ
ಏನು ಗೊತ್ತಿಲ್ಲದವಳಂತೆ
Sunday, September 30, 2018
ಶಾಯರಿ ೨೬೭
ಶಾಯರಿ ೨೬೯
ಸೋತವರಿಗೆಲ್ಲ...
ಇತಿಹಾಸದಲ್ಲಿ
ಜಾಗವೆ ಇಲ್ಲ
ಸಾಕಿ....
ಹೋಗಲಿ ಬಿಡು
ಗೆದ್ದಿದ್ದರೆ...
ನಿನ್ನ ಮದಿರೆ
ಬಟ್ಟಲಿಗೆ
ದಾಸನಾಗುತ್ತಿದ್ದನೇನು...?
ಶಾಯರಿ ೨೭೦
ಕೂಡಾಡಿದವಳೆ...
ಕೊಡವಿಕೊಂಡೋಡಿರುವಾಗ
ಕಳೆದುಕೊಳ್ಳುವುದೇನಿದೆ
ಈಗ
ಸಾಕಿ....
ಕೈಗೆ ಸಿಕ್ಕದ್ದನ್ನೆ
ಹಿಡಿದಿಡಿದುಕೊಳ್ಳಲಾಗದವನಿಗೆ,
ಮತ್ತೆ...ಮತ್ತೆ... ಹುಡುಕುವ
ಹುಂಭು ಹಂಬಲವು
ಬೇಕೆನು...?
Saturday, September 29, 2018
ಶಾಯರಿ ೨೬೬
ಮದಿರೆಯ ಬಟ್ಟಲೊಳಗಿನ
ಮಧುವನ್ನು ಹೀರಿದಾಗಲೆ
ಸಾಕಿ
ಗೊತ್ತಾದದ್ದು....
ಅವಳ
ತುಟಿಯಂಚಿನ
ಮಧುವಿನ ತಾಕತ್ತು
ಎಷ್ಟೆಂಬುದು..
Friday, September 28, 2018
ಶಾಯರಿ ೨೭೧
ಅವಳ ಪ್ರೇಮದೆದೆಗೆ
ಲೆಕ್ಕವಿಲ್ಲದಷ್ಟು
ಒಲವನ್ನು ಸುರಿದಿದ್ದೆ
ಧಾರಾಳಾವಾಗಿ
ಸಾಕಿ...
ನಿನೇಕೆ ಇಷ್ಟೊಂದು
ಕಂಜೂಸು..
ವಿರಹದಿ ಬೆಂದ
ನನ್ನೆದೆಗೆ, ಮದ್ಯವನ್ನು
ಬಟ್ಟಲು ಬಟ್ಟಲುಗಳ
ಲೆಕ್ಕದಲ್ಲಿ
ಸುರಿಯುತ್ತಿರುವೆ...
ಶಾಯರಿ ೨೭೨
ಈ ಹುಚ್ಚು ಬಡವನ
ಬಗ್ಗೆ, ಮಾತನಾಡುವವರು
ಮಾತನಾಡಿಕೊಳ್ಳಲಿ
ಬಿಡು ಸಾಕಿ...
ಅವರ ತುಟಿಯಂಚಿನಲ್ಲಿ
ನನ್ನ ಭಗ್ನ ಪ್ರೇಮದ
ಕಥೆಯಿದೆ...
ಚಿಂತೆಯಿಲ್ಲ,
ನನ್ನ ತುಟಿಯಂಚಿನಲ್ಲಿಗ
ನಿನ್ನ ಮಧು
ಬಟ್ಟಲಿದೆಯಲ್ಲ..
Wednesday, September 26, 2018
ವಚನ ೧೦
ಬಿರುದು ಬಾವಲಿಗಳ ಪಡೆಯಲು
ಹಪಹಪಿಸುವ ಮನದ ಹೆಮ್ಮರವನ್ನು
ಕತ್ತರಿಸಿ ಒಗೆಯುವ ನೆಮ್ಮದಿಯ
ಗರಗಸವೊಂದನ್ನು ನೀಡಯ್ಯ..
ಸೀಳಿದೆದೆಯಲ್ಲಿ ನಾಲ್ಕು
ಅಕ್ಷರಗಳಿಲ್ಲದಾಗ.. ಬರೆಯುತ್ತೇನೆಂಬ
ಹುಂಬುತನದ ಬಣಿವೆಗೆ ಜ್ಞಾನದ
ಕಿಡಿಯನ್ನಾದರೂ ಸೋಕಿಸಯ್ಯ..
ನಾನೆಂಬ ಕೊರಡೊಂದು ಸುಟ್ಟು
ಬೂದಿಯಾದರು ಆಗಲಯ್ಯ
ಶ್ರೀ ಶರಣಬಸವ
ಸೋಲಿಲ್ಲ....
ಕಣ್ತುಂಬ....ಕಾಮದ ಪೊರೆಯನ್ನೆ ತುಂಬಿಕೊಂಡು
ಸುಟ್ಟುಬಿಟ್ಟೆ ನನ್ನ ಸುಕೋಮಲ ಸೌಂದರ್ಯವನ್ನು..
ಚೂರು ಕರುಣೆಯಿಲ್ಲದೆ..
ತುಸು ಪರಿಮಳವನ್ನಾದರೂ ಚೆಲ್ಲಿದ್ದರು... ಒಪ್ಪಿಕೊಳ್ಳುವ
ಮನಸ್ಸನ್ನಾದರು ಮಾಡುತ್ತಿದ್ದೆನೇನೊ..? ಅದ್ಹೇಗಾದಿತು...?
ವಿಕೃತವೆಂಬುದು ನಿನ್ನ ಮನಸ್ಸಿನಲ್ಲಿಯೆ ಮನೆ ಮಾಡಿ
ಕುಳಿತಿರುವಾಗ, ಆರಾಧಿಸುವುದಂತು ದೂರದ ಮಾತು...
ನಿ ಕೊಟ್ಟ ಕಾಣಿಕೆಯ ನೋವು... ನಿನಗರಿವಾದಿತಾದರು ಹೇಗೆ ?
ಮನೆಯ ಗೋಡೆಯ ಮೇಲಿನ ಕನ್ನಡಿ ಬೆಚ್ಚಿಬಿಳುತಿದೆಯಿಂದು
ನನ್ನೀ ಪ್ರತಿರೂಪವನೆ ತೋರಲು....
ಮರೆತಾದರೂ ಸುಳಿಯದಿರು... ನಮ್ಮ ಸುತ್ತಮುತ್ತವೆಂದು,
ಧೂಳು...ಜೇಡರಬಲೆಯನ್ನೆ ಮೈ ತುಂಬಾ ಹೊದ್ದು
ಕುಳಿತುಬಿಟ್ಟಿವೆ....ಸೌಂದರ್ಯ ವರ್ಧಕ ಸಾಧನಗಳು...
ನನ್ನ ಕಾಲ್ಗೆಜ್ಜೆಯ ಸದ್ದಿಗಾಗಿಯೆ ಕಾಯುತ್ತಿದ್ದ ಬೀದಿಯ ರೋಮಿಯೊಗಳು...ಕನಸಲ್ಲಿಯೂ ನನ್ಹೆಸರನ್ನು ನೆನಪಿಸಲು
ಭಯಬಿಳುತಿಹರಂತೆ...
ಅಪ್ಪನ ಮುದ್ದು... ಅಮ್ಮನ ಮಮತೆ... ಅಣ್ಣನ ತುಂಟಾಟ,
ಕಾಲೇಜು ಗೆಳತಿಯರೊಡಗಿನ ಮೋಜು,ಮಸ್ತಿಗಳೆಲ್ಲವು...
ಸತ್ತ ಹೆಣಕ್ಕೆ ಗಂಧದ ಕಟ್ಟಿಗೆಗಳಿಂದ ಸುಟ್ಟ ಹಾಗೆ,
ಬದುಕಿನ ಸಂತೋಷಗಳೆಲ್ಲ ಸುಟ್ಟು ಹೋಗಿಬಿಟ್ಟವು...
ಹರೆಯದ ಹುಮ್ಮಸ್ಸಿನಲ್ಲಿ ಹಾರಾಡಬೇಕಿದ್ದೀ...ಹಕ್ಕಿಯ
ರೆಕ್ಕೆಯ ಕತ್ತರಿಸಿ...ದೂಡಿಬಿಟ್ಟೆ ಗೃಹ ಬಂಧನಕೆ
ಇಷ್ಟಾದರೂ... ನಾನೇನು ಸೋತಿಲ್ಲ..., ಸುಟ್ಟದ್ದು.. ಮೂರು
ದಿನಕೆ ಮಣ್ಣಾಗುವ ಮಾಂಸವನ್ನು..., ಬದುಕಿ ಗೆದ್ದೆ..
ಗೆಲ್ಲುವೆನೆಂಬ ವಿಶ್ವಾಸದ ನಗೆಯನ್ನೇನು ನಿ.. ಕಸಿದುಕೊಳ್ಳಲಾಗಲಿಲ್ಲ.., ಅದು ನಿನ್ನಿಂದಾಗದು ಕೂಡಾ...
ಕಟ್ಟಿಕೊಳ್ಳುವೆ ಬದುಕನ್ನು... ಇದೆ ವಿರೂಪದಿಂದಲೆ, ಬೆರಗಾಗಬೇಕು... ನಿನ್ನನ್ನು ಸೇರಿಸಿ ಈ ಜಗತ್ತು...ಸೋತು
ಕುತಿದ್ದವಳು ಇವಳೇನಾ ಎಂದು...
ನೋಡಿಂದು... ನರಕದ ಬಾಗಿಲನು ದಾಟಿ, ಸಂತಸದ ಹಸೆಮಣೆಯನೇರಿರುವೆ... ನನಗಿಂದೂ ಚೂರಾದರು
ಗೆಲುವಾಗಿದೆಯೇನೊ...? ನಾನರಿಯೆ...
ಅರಳುವ ಮೊಗ್ಗುಗಳ ಕನಸುಗಳ ಉಸಿರಗಟ್ಟಿಸುವ
ವಿಷ ಗಾಳಿಗಳಂತಹ ಅಸುರರಿರುವ ತನಕ....
ನೆಮ್ಮದಿಯಾಗಿ ಉಸಿರಾಡಾವುದಾದರು ಹೇಗೆ
ನಮ್ಮಂತವರೆಲ್ಲ...
Tuesday, September 25, 2018
ಶಾಯರಿ ೨೭೮
ಅವಳ ಹೆಜ್ಜೆ
ಮೂಡಿದ ಮಣ್ಣನ್ನೊಂದಿಷ್ಟು
ಎತ್ತಿಟ್ಟಿಕೊ....
ಸಾಕಿ....
ನನ್ನ ಮರಣದ
ನಂತರ....
ಗೋರಿಯನ್ನು
ಕಟ್ಟಲು ಬೇಕಲ್ಲವೆ..?
ಶಾಯರಿ ೨೮೦
ಅವಳು ಬಿಟ್ಟು
ಹೋಗುವ ಘಳಿಗೆಯಲ್ಲಿ,
ಅಮೃತದಲ್ಲಿ ಚೂರು
ವಿಷವನ್ನಾದರೂ ಬೇರಸಿ
ಕೊಟ್ಟಿದ್ದರು ಸಾಕಿತ್ತು
ಸಾಕಿ...
ನೆಮ್ಮದಿಯಾಗಿ
ಉಸಿರನ್ನಾದರು
ಬಿಟ್ಟುಬಿಡಬಹುದಿತ್ತು...
ಹೀಗೆ ಅವಳ ನೆನಪುಗಳ
ಉರುಳಿನಲಿ ಸಿಕ್ಕು...
ನರಳಾಡುವುದಾದರು
ತಪ್ಪುತ್ತಿತ್ತು...
ಶಾಯರಿ ೨೭೯
ತಪ್ಪುಗಳನ್ನರಿತು
ನಡೆದಾಗಲಲ್ಲವೆ
ಸಾಕಿ...
ಬದುಕಲ್ಲಿ ಸಾಕ್ಷಾತ್ಕಾರವನ್ನಾದರು
ಹೊಂದಬಹುದು...
ಕಣ್ಮುಚ್ಚಿಕೊಂಡೆ ನಡೆದರೆ,
ಬೀಳುವುದು ತಪ್ಪುವುದಿಲ್ಲ
ನೋಡು.. ನಮ್ಮವರೆ
ತೋಡಿದ ಗುಂಡಿಯಲ್ಲಿ
ಶಾಯರಿ ೨೭೭
ಎಲ್ಲವನ್ನು....
ಕಿತ್ತುಕೊಂಡವಳು,
ಹೂವೊಂದನೇಕೆ
ಬಿಟ್ಟು ಹೋದಳು
ಸಾಕಿ...
ಒಯ್ದಿದ್ದರೆ...,
ಹುಗಿದ ನನ್ನ
ಗೋರಿಯ ಮೇಲಾದರು
ಇಡಲು ಉಪಯೋಗವಾಗುತ್ತಿತ್ತಲ್ಲ...
ಶಾಯರಿ ೨೮೧
ಜಂಭದ ಕೋಳಿ
ಸಂಜೆಗೆ.. ಖಾರದೂಟ
ವಾಗಿತ್ತು ಸಾಕಿ...
ಮದವೇರಿದ ಮತಿಗೆ
ಕಾಲವೆ ಪೆಟ್ಟಿಕ್ಕುವುದು
ನಮ್ಮೊಳಗೆ ಶಾಂತಿಯೆಂಬುದೊಂದು
ಇದ್ದಾಗ ಮಾತ್ರ
ಶಾಯರಿ ೨೮೨
ಯಾರು..
ಯಾರ ಜೊತೆಯಲ್ಲಿ
ಬಾಳಬೇಕೆಂಬುದು
ಯಾರ ಕೈಯಲ್ಲಿಲ್ಲ
ಸಾಕಿ...
ಮೇಲಿನವನು..
ಗಂಟು ಹಾಕಿದವರ
ಜೊತೆಯಲ್ಲಿ ನಂಟು
ಬಿಳುವವರೆಗೂ...
ಬದುಕಿನ ಹಾದಿಯಲ್ಲಿ
ನಡೆಯುವುದೊಂದೆ
ಬಾಕಿ
ಶಾಯರಿ ೨೬೮
ಇಂದೊ...
ನಾಳೆಯೊ... ಈಗಲೊ..
ಬಂದೆ.. ಬರುವ
ಮರಣದ ಚಿಂತೆ
ನನಗೇಕಿಗ
ಸಾಕಿ...
ಜಗ ಮರೆಸುವ
ಮದ್ಯದ ಬಟ್ಟಲೊಂದಿದೆಯಲ್ಲ
ಕೈಯಲ್ಲಿ..
ಬರಡು ಬದುಕಿನಲ್ಲಿ
ಬೆಳೆಯುವುದಕ್ಕೆನೀದೆ
ಈಗ ಬಾಕಿ...
Sunday, September 23, 2018
ಶಾಯರಿ ೨೮೩
ಅವಳ ಪ್ರೀತಿಯ
ವರ್ಷಧಾರೆಯನ್ನೆ
ತಡೆದುಕೊಂಡವನಿಗೆ...
ವಿರಹದ ಮಂಜಿನ ಹನಿ
ಹನಿಯನಿಂದು ಹೊರ
ಲಾಗುತ್ತಿಲ್ಲ
ಸಾಕಿ....
ಹೂವೆದೆಯ ಗಂಧ
ಕೈಗೆ ಸಿಗದೆಂದು ಅರಿತಿದ್ದರು,
ಎಸಳು...ಎಸಳು...
ದಳಗಳ ಕಿತ್ತು...
ಹಾಕುತ್ತಿರುವರೇಕೊ...
Saturday, September 22, 2018
ಜಾರದ ಕಂಬನಿ
ನೊಂದುಕೊಳ್ಳದಿರು.... ಕಂದ
ಚುಚ್ಚಿರುವುದು ಚಿಕ್ಕ ಮುಳ್ಳು..
ಹೊಸತೆನಲ್ಲ ನನಗೆ, ಬಾಳಿನ ಗಡಿಯಾರದಲ್ಲಿ
ಎಂದು ಕಿತ್ತು ಹೋಗಿದೆ ಸಂತಸದ ಮುಳ್ಳು
ಹೊತ್ತಿರುವ ಬಿಂದಿಗೆ ಭಾರವಾಗಿಲ್ಲ..
ಹೆತ್ತಿರುವ ನೀವಿಬ್ಬರೇನು ಬೇಸರವಾಗಿಲ್ಲ...
ಹಸಿವಿನ ಕಾವಿಗಿಂತ, ಸುಡುವ ಸೂರ್ಯನ ಉರಿಯೇನು ದೊಡ್ಡದೆನಲ್ಲ..
ಮೈ ತುಂಬಾ ಬೆಂಕಿಯನ್ನೆ ತುಂಬಿಕೊಂಡವಳಿಗೆ, ಕಾದ
ಹಾದಿಯೊಂದು ಲೆಕ್ಕವೇನಲ್ಲ...
ಅರಿವಿದೆ..ಬಾಳಿನುದ್ದದ ಹಾದಿ ಹೂಹಾಸುವೇನಲ್ಲ,
ತುಸು ನಕ್ಕರೆ, ಕರೆದು ಮಂಚಕೆ ಹೂವನು ಹಾಸುವವರೆ ಎಲ್ಲ
ಮುಂಜಾವು ಕಾಸಿದಂಬಲಿ ಸಂಜೆಗಿಲ್ಲ..., ಅಂಜಿಲ್ಲ
ನಡುವಲ್ಲಿ ಶಕ್ತಿಯಿದೆ, ಬಂಧು ಬಳಗದ ಮುಂದೆ ನಾನೆಂದು ಬಾಗೋಲ್ಲ
ಬಡತನದ ಬೇಗೆಗಂಜಿ ಗಂಡನು ಸತ್ತು ಹೋದನಲ್ಲ..!!!
ಒಂಟಿ ಬಾಳಿಗಂಜಿ, ಮರದ ರೆಂಬೆಗೆ ಭಾರವಾಗುವುದಿಲ್ಲ
ಬಳ್ಳಿಯೊಳಗಿನೆರಡು ಕಾಯಿಗಳಿವೆ, ಹಣ್ಣಾಗಿಸಬೇಕಲ್ಲ..
ಹೆಣ್ಣು ಬಾಳಿನ ಕಣ್ಣೆಂಬುದನು ಜಗಕೆ ಅರಿವಾಗಿಸಬೇಕಲ್ಲ..
ಬಾಳಿನ ದಾರಿ ಎಷ್ಟಿದೇಯೊ...? ನಡೆಯಲೆಬೇಕಲ್ಲ..
ಯಾವ ತಿರುವಿನಲಿ...ಕಾಲನದಾವ ಹೊಂಚಿದೆಯೊ ಅರಿವಿಲ್ಲ...
ಬದುಕಾಡಿಸುವಾಟಕಕೆ ಸೋಲದೆ, ನಡೆಯಲೆಬೇಕಲ್ಲ..
ಅತ್ತು ಎದೆ ಭಾರವ ಹಗುರು ಮಾಡಿಕೊಳ್ಳಬೇಕಿದೆ ಈಗ
ಕಣ್ಣಂಚಲಿ ಏಕೋ... ಕಂಬನಿಯೊಂದು ಜಾರುತಿಲ್ಲವಲ್ಲ..
Friday, September 21, 2018
ಶಾಯರಿ ೨೮೪
ಅವಳ ನಗುವ
ನಶೆಯ ಮರೆಯಲೆಂದೆ
ಇಲ್ಲಿಗೆ ಬಂದದ್ದು
ಸಾಕಿ...
ಅವಳಿಗಿಂತ...
ಮಧು ಬಟ್ಟಲೊಳಗಿನ
ಮದ್ಯಕ್ಕಿಂತ...ನಿನ್ನ
ನಗೆಯೆ ನಶೆಯೆ...
ನನ್ನನ್ನು...
ಹುಚ್ಚನನ್ನಾಗಿಸಿಬಿಟ್ಟಿದೆಯಲ್ಲ
ಶಾಯರಿ ೨೭೬
ನನ್ನನು ಹುಗಿದ
ಗೋರಿಯ ಮುಂದೆ
ಅವಳೇಕೆ ಬಂದು
ನಿಂತಳಿಂದು...
ಸಾಕಿ....
ಎಲ್ಲ ಮರೆತು ಮಲಗಿದ
ನಾನು... ಅವಳ ಕೈ
ಬಳೆಯ ನಾದಕ್ಕೆ
ನನ್ನೆದೆಯ ಬಡಿತವಿದು
ಮತ್ತೆ ಮಿಡಿದಾತು...
ಶಾಯರಿ ೨೭೫
ಚಿತೆಯೇರುವ ಚಿಂತೆ
ನನಗಿನ್ನೂ ಬಂದಿಲ್ಲ
ಸಾಕಿ...
ಬರುವುದಾದರೆ...
ಬರಲಿಬಿಡು.. ಈಗೀಗ
ಮದ್ಯದಮಲಿನಲ್ಲಿ, ನಿನ್ನ
ಮಡಿಲಲ್ಲಿ ಮಲಗುತ್ತಿರುವೆ..
ಬಂದಾಗ ಅಲ್ಲಿ ನಿಶ್ಚಿಂತೆಯಿಂದಲೆ
ಮಲಗಿಬಿಡುವೆ.
ಶಾಯರಿ ೨೮೬
ಕ್ಷಮೆಯೆಂಬುದೊಂದು
ಮರಿಚಿಕೆಯಾಗಿಬಿಟ್ಟಿದೆ
ಸಾಕಿ...
ಹೇಗೆ ಕ್ಷಮಿಸಲಿ
ಅವಳನ್ನು ನಾನು
ನಡು ' ಮದ್ಯದಲ್ಲಿ'
ಬಿಟ್ಟು ಹೋದರೆ
ಹೀಗೆ..
ಶಾಯರಿ ೨೮೫
ಅವಳು ನಿರಾಕರಿಸುವ
ಮೊದಲು, ಸಾಯಲು
ನನಗೂ.. ಸಾಕಷ್ಟು
ಹಾದಿಗಳಿದ್ದವು
ಸಾಕಿ...
ಒಪ್ಪಿ... ತೊರೆದು
ನಡೆದುಬಿಟ್ಟಳಲ್ಲ..!!!
ಸಾಯುವುದಕ್ಕೆ... ಅವಳ
ನೆನಪುಗಳಿಂದು ದಾರಿಯನ್ನೆ
ಬಿಡುತ್ತಿಲ್ಲ....
ಶಾಯರಿ ೨೮೭
ಮಾಡಿದ ತಪ್ಪುಗಳ
ಲೆಕ್ಕವನ್ನಿಡುವುದೇಕೆ
ಸಾಕಿ....
ತಪ್ಪು- ಒಪ್ಪುಗಳ
ಮರೆಯಲೆಂದೆ....
ಬಂದಿರುವೆನಿಲ್ಲಿಗೆ
ಕುಡಿದ ಮದಿರೆ
ಬಟ್ಟಲುಗಳ ಲೆಕ್ಕ
ತಪ್ಪದಿದ್ದರಷ್ಟೆ...
ಸಾಕಿಲ್ಲವೆ ಈಗ
ಶಾಯರಿ ೨೮೮
ಅವಳೇರಿಸಿದ
ಪ್ರೇಮದ ಬಿಸಿಯನ್ನು
ಆರಿಸಿಕೊಳ್ಳಲೆಂದೆ
ಬಟ್ಟಲು... ಬಟ್ಟಲು
ಮದಿರೆಯನ್ನು
ಕುಡಿಯುತ್ತಿರುವೆ
ಸಾಕಿ...
ಈ ಹುಣ್ಣಿಮೆಗೆ
ಇಂದೆನಾಗಿಹುದೊ...
ಚೆಲ್ಲಿದ ಹಾಲ್ಬೆಳದಿಂಗಳಲೂ
ಸುಡುವ ಬಿಸಿಯ
ತುಂಬಿಹುದದೇಷ್ಟೊ...
Saturday, September 15, 2018
ಶಾಯರಿ ೨೭೪
ಝುಳು...ಝುಳು...
ಹರಿಯುವ ಹಳ್ಳದಲ್ಲಿ...
ಅವಳ ನೆನಪುಗಳನ್ನೆಲ್ಲವ
ಕಾಗದದ ದೋಣಿ ಮಾಡಿ
ಹರಿಯಬಿಟ್ಟಿದ್ದೆ
ಸಾಕಿ......
ದುರಾದೃಷ್ಟವೆ ಹೀಗೆ...
ದಡ ಸೇರದ ಒಲವಿನಂತೆ
ನೆನಪುಗಳ ಹೊತ್ತು ಸಾಗುವ
ಕಾಗದದ ದೋಣಿಯೂ...
ಮಧ್ಯದಲ್ಲಿಯೆ ಮುಳುಗಿಬಿಟ್ಟಿತು...
Thursday, September 13, 2018
ಶಾಯರಿ ೨೭೩
ಸದಾ ಕಣ್ಣ
ಕೊಳದಲ್ಲಿಯೆ
ಈಜಾಡುತ್ತಿರಬೇಡ
ಗಾಲಿಬ್...
ಆಗಾಗ ಎದೆಯಾಳಕ್ಕೂ
ಜಾರುತ್ತಿರು...
ಗೊತ್ತಿಲ್ಲ, ಯಾವ ನೋವಿನ
ಕಣ್ಣ ಹನಿಯು ನಿನ್ನನು
ಹೊರ ನೂಕಿಬಿಟ್ಟಾತು.
Wednesday, September 12, 2018
ವಚನ ೯
ಮದಗಜದ ದಾಳಿಗೆ ಸಿಕ್ಕವನನ್ನಾದರೂ
ಬದುಕಿಸಿಕೊಳ್ಳಬಹುದು
ಕಾಲನ ತುಳಿತಕ್ಕೆ ಸಿಕ್ಕವರನ್ನು
ಉಳಿಸಿಕೊಳ್ಳುವುದು ಬಲು ಕಷ್ಟಕರ
ಕೇಳಯ್ಯ..
ಅರೆ ಹೊಟ್ಟೆಯಲ್ಲಾದರೂ ಸರಿ, ಅರಗಿನ
ಅರಮನೆಯಲ್ಲಿ ವಾಸಿಸಬಲ್ಲೇನು...
ಮೃಷ್ಟಾನ್ನ ಭೋಜನವನೆ ತುಂಬಿಟ್ಟು
ಹಂಗಿನರಮನೆಗೆನ್ನ ದೂಡದಿರಯ್ಯ
ಶ್ರೀಶರಣಬಸವ
ವಚನ ೮
ಸಿರಿಯಿಲ್ಲದವನ ಮನೆಯು
ಸುಡುವ ಸುಡುಗಾಡಿಗಿಂತಲೂ
ಕಡೆಗಾಣುವರು ನೋಡಯ್ಯ..
ಕಾಸಿಲ್ಲದವನನ್ನು ಕಣ್ಣಲಿ ಬೀಳುವ
ಕಸಕ್ಕಿಂತಲೂ ಕೀಳಾಗಿಸಿ
ಕಾಣುವರಯ್ಯ...
ನಡೆ ಬೇಡ... ನುಡಿ ಬೇಡ..
ತಲೆಯ್ಹೊಡಿದಾದರು ಸರಿ....ಧನವ
ತಾರೆಂಬರಯ್ಯ... ಶರಣ
ಮನವಿದು ಪಾಪದ ಹೊನ್ನ ಮಡಿಕೆಗೆ
ಕೈ ಹಾಕುವ ಹೊಂಚೊಂದನು
ಹೆಣೆಯುವ ಮೊದಲೆ,
ಎನ್ನ ಪ್ರಾಣ ಹರಣವ ಮಾಡಿಬಿಡು ಶರಣ.
ನರಿಯಂತೆ, ನಿಷ್ಠೆಯಿಲ್ಲದ ಬಾಳನ್ನು ಬಾಳುವಂತೆ
ಹರಸದಿರಯ್ಯ....
ಮಡಿದರು ಗರಿಕೆ ಮುಟ್ಟದ
ವ್ಯಾಘ್ರದಂತಾದರು ಇರಿಸಯ್ಯ
ಶ್ರೀ ಶರಣಬಸವ
ಶಾಯರಿ ೨೮೯
ಮೌನಕ್ಕಿಂತಲೂ...
ಆಡಿದ ಮಾತಿಗೆ ಸಾವಿರ
ಬಣ್ಣವ ಬಳಿದರು
ಸಾಕಿ....
ನಂಬಿಕೆಯೆನ್ನುವುದು
ಹುಗಿದ ಗೋರಿಯೊಳೊಳಗೂ
ದಕ್ಕಲಿಲ್ಲ...
Saturday, September 8, 2018
ಚು. ೩೭೬
ಸದ್ದಿಲ್ಲದೆ ನಿ... ಹೋದರು
ಸದ್ದು ಮಾಡುತ್ತಲೆ ನಿನ್ನ ಕಳಿಸುವರು
ಸದ್ದಡಗುವ ಮುನ್ನವೇ... ಏನನ್ನಾದರೂ
ಸಾಧಿಸು..
ಸಾಧಿಸಿದನ್ನಿ ಹೊತ್ತುಕೊಂಡುವರಾದರು
ಹೇಳುವರು
Friday, September 7, 2018
ಚು ೩೭೮
ತಿಡಿಕೊಳ್ಳುವೆಯಲ್ಲ ಅದೇಷ್ಟು ಕಾಡಿಗೆ
ದೃಷ್ಟಿಯೇನಾಗದು ಬಿಡು ನಿನ್ನ ಕಣ್ಣಿಗೆ
ಆಗುವುದೆನಿದ್ದರು ಎಲ್ಲ ಪುಂಡರೆದೆಗೆ
ಮತ್ತೆ.. ನೀನು ನಡೆದು ಬಿಡುವೆ ಎಂದಿನಂತೆ
ನನಗೇನು ಗೊತ್ತಿಲ್ಲ ಎನ್ನುವ ಹಾಗೆ..
Sunday, September 2, 2018
ಸಿಡಿದೆದ್ದ ನ್ಯಾಯಾಂಗ
ಸಿಡಿದೆದ್ದಿದೆ..ಮೈ ಕೊಡವೆದ್ದಿದೆ..ನ್ಯಾಯಾಂಗ ವ್ಯವಸ್ಥೆ..!!!! ಭೂಗಳ್ಳರ ಮೈ ಚಳಿಯನ್ನು ಬಿಡಿಸುತಿದೆ...ಅಕ್ರಮದ ಮಣ್ಣಿನಲ್ಲಿ ಹೂತಿಹ ಹೆಣಗಳಿಗೂ ಭಯ ಬೀಳಿಸುತಿದೆ...
ಅಟ್ಟುತಿದೆ, ಜೈಲಿಗಟ್ಟುತಿದೆ...ನ್ಯಾಯ ದೇವತೆ ಕಣ್ಣಿಗೆ
ಬಟ್ಟೆಯ ಕಟ್ಟಿಕೊಂಡೆ ದಬ್ಬುತಿದೆ... ಕಗ್ಗತ್ತಲೆಯ ಕೋಣೆಗೆ
ಸಿಕ್ಕವರು...ಸೆರೆಯ ಹೊಕ್ಕವರು ಧನಿಕರೆನಲ್ಲ
ಕೆರೆಯ ಮಾಯವಾಗಿಸಿ, ಕಟ್ಟಡಗಳ ಕಟ್ಟಿದ ಬಿಲ್ಡರ್ ಗಳೆನಲ್ಲ
ಆಶ್ರಯಾಸೆಯ ತೋರಿಸಿ... ಲಕ್ಷ..ಲಕ್ಷಗಟ್ಟಲೆ ಹಣವ
ನುಂಗಿ, ಜನತೆಗೆ ನೀರು ಕುಡಿಸಿದ ವಸತಿ ವಂಚಕರಲ್ಲ
ಶಾಸಕರ ಹೊಟ್ಟೆಯ ತುಂಬಿಸುವ ದಲ್ಲಾಳಿಗಳಲ್ಲ..
ಬಲೆಗೆ ಬಿದ್ದದ್ದು... ಚಿಕ್ಕ ಚಿಕ್ಕ ಮೀನಗಳೆ...😢😢
ಕರಿದು...ಹುರಿದು ಮುಕ್ಕುತಿರುವುದು ಇವರನ್ನೆ...
ಹೊಟ್ಟೆಪಾಡಿಗಾಗಿ.. ಗೇಣುದ್ದ ಭೂಮಿಯ ಊಳಿದ
ಊಳಿಗರನ್ನೆ...
ಬಿಸಿಲೊ..ಮಳೆಯೊ.. ಒಂದೆಣಿಸದೆ ದುಡಿಯುವ
ಮಣ್ಣ ಮಕ್ಕಳನ್ನ...
ಮಳೆ-ಬೆಳೆಯಿಲ್ಲದೆ ಊರೂರು ಅಲೆಯುವ
ಅಲೆಮಾರಿಗಳನ್ನ....
ಬೆಳೆದ ಬೆಳೆಗೆ ಬೆಂಬಲ ಬೆಲೆಯನ್ನು ಕೊಡುವ
ಯೋಗ್ಯತೆಯಿಲ್ಲ... ಹೊಲದ ಬದುವಿನ ಗಿಡಕ್ಕೆ
ನೇಣುಕೊಟ್ಟವರ ಬದುಕಿನ ಬಂಡಿಗೆ ನೇರವಾದವರಿಲ್ಲ
ಸಾಲದ ಶೂಲಕ್ಕೆ ಸಿಕ್ಕು ನರಳಾಡುತಿರುವವರ
ಉಪಚರಿಸುವವರಿಲ್ಲ...ಓಟಿಗಾಗಿ ಇವರುಗಳ
ಮನೆಯ ಕದವ ತಟ್ಟದವರೆ ಇಲ್ಲ... ಮೇವು
ನೀರಿಲ್ಲದೆ ಸಾಯುವ ದನಕರಗಳ ಗೋಳು..
ಇವರಿಗೆ ಬೇಕಿಲ್ಲ...
ಅಂತೂ...ಇಂತು ಹೂಡಿದೆ ಯುದ್ದ, ಭೂಗಳ್ಳರ ವಿರುದ್ಧ
ನ್ಯಾಯಾಂಗ ಬೀಸಿದ ಬಲೆಯಲ್ಲೂ ರಂಧ್ರಗಳುಂಟು
ಉಳ್ಳವರು ನುಣುಚಿಕೊಳ್ಳುವರು... ಹೊಟ್ಟೆಗೆ ಹಿಟ್ಟೆ
ಇಲ್ಲದವರು... ನುಣುಚಿಕೊಳ್ಳುವ ಮಾತೆಲ್ಲಿ...ನ್ಯಾಯ
ದೇವತೆ ಕಣ್ಣಿಗೆ ಬಟ್ಟೆಯನ್ನೆ ಕಟ್ಟಿಕೊಂಡು ತೀರ್ಪು
ನೀಡಿಬಿಟ್ಟಿರುವಳಲ್ಲ... ಒಂದು ವರ್ಷ ಜೈಲು...
ಹತ್ತು ಸಾವಿರ ದಂಡ...!!!!!! ಇನ್ನೇನುಳಿಯಿತು..?
ಅವನ ಸಂಸಾರದ ಬಾಗಿಲಿಗೊಂದು ಇಡಬೇಕಿದೆಯಲ್ಲ
ಪಿಂಡ...
Saturday, September 1, 2018
ನನ್ನ ನಾ ಕಂಡುಕೊಳ್ಳಲೊಲ್ಲೆ
ಮಾಧವ... ನಿನ್ನ ಮಾರ್ಗದರ್ಶನವಿಲ್ಲದೆ...
ಅರಿತುಕೊಳ್ಳಲಾದರು ಹೇಗೆ..? ನನ್ನೊಳಗೆ
ನೀನಿರುವೆಂಬುದರ ಸಾಕ್ಷಾತ್ಕಾರವಾಗದ ಹೊರತು..
ಏನು ಮಾಡಲಿ...? ಬೆಳಕಲ್ಲಿ ನಿಂತವರೆ...
ಕತ್ತಲೆಗೆ ದೂಡುತಿಹರು...
ದೋಣಿಯ ಹತ್ತಿಸಿಕೊಂಡವರೆ...
ನಡು ನೀರಿನಲ್ಲಿ ದೂಡುತಿಹರು
ಗಿರಿಯನೆತ್ತಿದೆ... ಕಿರುಬೆರಳಿನಲಿ
ಗಿರಿಬಿಡು ಅಂಧಕಾರದ ಪೊರದೆಯನು
ಉಗಿರಿನಲಿ...
ದಯೆ ತೋರಿದೆ ನೂರೊಂದು ತಪ್ಪುಗಳಿಗೂ ಕಂಸನಲಿ...
ನಾ ಕಾಯಲಾರೆ, ಸುಟ್ಟುಬಿಡು ಲೆಕ್ಕವಿಡದೆ
ನನ್ನೆಲ್ಲ ತಪ್ಪುಗಳನು ಉರಿದುಹೋಗಲಿ
ನುಡಿಸು ನಿ ಮನತಣಿಸುವ ರಾಗವನು
ಅಂಕೆಯಿರದ ಮನವು ಸೋತು ಶರಣಾಗಲಿ
ಓದಿ ಸಾರವ ಸವಿಯುವ ಸಂತ ನಾನೇನಲ್ಲ
ಬೆಳಗಿಸಿಬಿಡು ಬೆಳಕೊಂದನು ಎದೆಯಲಿ,
ಬದುಕು ಸಾರ್ಥಕಗೊಳ್ಳಲಿ ನಿನ್ನದೆ ಸ್ಮರಣೆಯಲಿ...
ತಮ್ಮ ಮೂಕವಿಸ್ಮಿತ ಸಾಲುಗಳಿಗೆ ಈ
ಅಕ್ಷರ ಬಡವನ ಜೋಳಿಗೆಯಿಂದೆರಡು ಸಾಲುಗಳು ಅಣ್ಣವ್ರೆ ಒಪ್ಪಿಸಿಕೊಳ್ಳಿ.
ಶುಭೋದಯ
ಚು ೩೭೧
ಹೀಗೆ ಎದೆಗಿರಿಯುವುದು ಸರಿಯೆ...
ತುಟಿಯಂಚಿನ ನಗುವಿನಿಂದಲೆ...
ಮೋಹಗೊಳಿಸಿ, ಬಂಧಿಸಿಬಿಡುವುದೇಕೆ
ಸೇಬುಗೆನ್ನೆಯೊಳಗಿನ ಗುಳಿಯ ಕಾರಾಗೃಹದಲ್ಲಿ
ನೀರ ಹೊಕ್ಕೈತಿ
ಫಟ್...ಫಟ್ ಅಂತ ಮತ್ತೇರಡು ಏಟು ಬಿದ್ದವು. ' ಯವ್ವಾ...' ಎನ್ನುತ್ತಲೆ ಹೊಡೆತಬಿದ್ದ ನೋವನ್ನು ಅವುಡುಗಚ್ಚಿ ಸಹಿಸಿಕೊಂಡು ನೆಲದ ಮೇಲೆ ಮಲಗಿದಳು ಶಾಂತಾ. ಬೆನ್ನ ಮೇಲೆಲ್ಲ ಕಟ್ಟಿಗೆಯಿಂದ ಹೊಡೆದ ಬಾಸುಂಡೆಗಳೆದ್ದು ಹನಿ...ಹನಿ ರಕ್ತವನ್ನು ಜಿನಗುತ್ತಿದ್ದವು...
'ಈಕೀ ಮೊಖಾ ನೊಡ್ದಾಗ್ಲೆ ಚಂದ್ರ್ಯಾಗ ಹೇಳಿದ್ನಿ, ಕೆಲ್ಸ ಕೆಟ್ತ್ಲೆ ತಮ್ಮಾ, ಈಕಿ ಕಾಲ್ಗುಣ ಸಜ್ಜಿಲ್ಲ, ನಮ್ಮುರಾಗ ಏಟಾಕೊಂಡ ಕನ್ಯೆ ಹೊಸಲ ದಾಟ್ದ, ನಡ ಬಗ್ಗಾಕ ಹತ್ತಾವು, ಆ ಬಸರಗಿಡ್ದ ಮಗ್ಗಲ್ದ ಮನಿ ಸೋಮ್ಯಾನ ಮಗ್ಳ ಏನಾಗಿತ್ತಲೆ, ಬೆಳ್ಳಿ..ಬೆಳ್ಳಿ ಹಂಗ ಅದಾಳ, ಕೇಳ್ಲಿಲ್ಲ..ಈಕಿನ್ನ ಕಟ್ಕೊಂಡ ಬಂದ ಮೂರ ತಿಂಗ್ಳಿಗೆ ನೆಗ್ದ ಬಿದ್ದ, ಈಕಿ ಈ ಕೆಲ್ಸಕ್ಕ ಕೈ ಹಚ್ಚಿದ್ಲು, ಅಷ್ಟಿಲ್ದ ಹೇಳ್ತಾರನು ಹಗ್ಗ ತಿನ್ನೊ ಹೋರಿ ಇರ್ಬಾರ್ದಂತ,ಮನಿ ಮುಂದ ಬಾಯಿ ಇರ್ಬಾರ್ದಂತ ' ಕಣ್ಣುಗಳನ್ನ ಕೆಂಪಾಗಿಸಿಕೊಂಡು, ಶಾಂತಾಳನ್ನು ದುರುಗುಟ್ಟಿಕೊಂಡು ನೋಡುತ್ತಾ, ಮತ್ತೆರಡೆಟನ್ನು ಹೊಡೆಯಲು ಕೈಯತ್ತಿದನು