Wednesday, September 12, 2018

ವಚನ ೯

ಮದಗಜದ ದಾಳಿಗೆ ಸಿಕ್ಕವನನ್ನಾದರೂ
ಬದುಕಿಸಿಕೊಳ್ಳಬಹುದು
ಕಾಲನ ತುಳಿತಕ್ಕೆ ಸಿಕ್ಕವರನ್ನು
ಉಳಿಸಿಕೊಳ್ಳುವುದು ಬಲು ಕಷ್ಟಕರ
ಕೇಳಯ್ಯ..
ಅರೆ ಹೊಟ್ಟೆಯಲ್ಲಾದರೂ ಸರಿ, ಅರಗಿನ
ಅರಮನೆಯಲ್ಲಿ ವಾಸಿಸಬಲ್ಲೇನು...
ಮೃಷ್ಟಾನ್ನ ಭೋಜನವನೆ ತುಂಬಿಟ್ಟು
ಹಂಗಿನರಮನೆಗೆನ್ನ ದೂಡದಿರಯ್ಯ
ಶ್ರೀಶರಣಬಸವ

No comments:

Post a Comment