ಬಿರುದು ಬಾವಲಿಗಳ ಪಡೆಯಲು
ಹಪಹಪಿಸುವ ಮನದ ಹೆಮ್ಮರವನ್ನು
ಕತ್ತರಿಸಿ ಒಗೆಯುವ ನೆಮ್ಮದಿಯ
ಗರಗಸವೊಂದನ್ನು ನೀಡಯ್ಯ..
ಸೀಳಿದೆದೆಯಲ್ಲಿ ನಾಲ್ಕು
ಅಕ್ಷರಗಳಿಲ್ಲದಾಗ.. ಬರೆಯುತ್ತೇನೆಂಬ
ಹುಂಬುತನದ ಬಣಿವೆಗೆ ಜ್ಞಾನದ
ಕಿಡಿಯನ್ನಾದರೂ ಸೋಕಿಸಯ್ಯ..
ನಾನೆಂಬ ಕೊರಡೊಂದು ಸುಟ್ಟು
ಬೂದಿಯಾದರು ಆಗಲಯ್ಯ
ಶ್ರೀ ಶರಣಬಸವ
No comments:
Post a Comment