Wednesday, September 26, 2018

ವಚನ ೧೦

ಬಿರುದು ಬಾವಲಿಗಳ ಪಡೆಯಲು
ಹಪಹಪಿಸುವ ಮನದ ಹೆಮ್ಮರವನ್ನು
ಕತ್ತರಿಸಿ ಒಗೆಯುವ ನೆಮ್ಮದಿಯ
ಗರಗಸವೊಂದನ್ನು ನೀಡಯ್ಯ..
ಸೀಳಿದೆದೆಯಲ್ಲಿ ನಾಲ್ಕು
ಅಕ್ಷರಗಳಿಲ್ಲದಾಗ.. ಬರೆಯುತ್ತೇನೆಂಬ
ಹುಂಬುತನದ ಬಣಿವೆಗೆ ಜ್ಞಾನದ
ಕಿಡಿಯನ್ನಾದರೂ ಸೋಕಿಸಯ್ಯ..
ನಾನೆಂಬ ಕೊರಡೊಂದು ಸುಟ್ಟು
ಬೂದಿಯಾದರು ಆಗಲಯ್ಯ
ಶ್ರೀ ಶರಣಬಸವ

No comments:

Post a Comment