ಸಿರಿಯಿಲ್ಲದವನ ಮನೆಯು
ಸುಡುವ ಸುಡುಗಾಡಿಗಿಂತಲೂ
ಕಡೆಗಾಣುವರು ನೋಡಯ್ಯ..
ಕಾಸಿಲ್ಲದವನನ್ನು ಕಣ್ಣಲಿ ಬೀಳುವ
ಕಸಕ್ಕಿಂತಲೂ ಕೀಳಾಗಿಸಿ
ಕಾಣುವರಯ್ಯ...
ನಡೆ ಬೇಡ... ನುಡಿ ಬೇಡ..
ತಲೆಯ್ಹೊಡಿದಾದರು ಸರಿ....ಧನವ
ತಾರೆಂಬರಯ್ಯ... ಶರಣ
ಮನವಿದು ಪಾಪದ ಹೊನ್ನ ಮಡಿಕೆಗೆ
ಕೈ ಹಾಕುವ ಹೊಂಚೊಂದನು
ಹೆಣೆಯುವ ಮೊದಲೆ,
ಎನ್ನ ಪ್ರಾಣ ಹರಣವ ಮಾಡಿಬಿಡು ಶರಣ.
ನರಿಯಂತೆ, ನಿಷ್ಠೆಯಿಲ್ಲದ ಬಾಳನ್ನು ಬಾಳುವಂತೆ
ಹರಸದಿರಯ್ಯ....
ಮಡಿದರು ಗರಿಕೆ ಮುಟ್ಟದ
ವ್ಯಾಘ್ರದಂತಾದರು ಇರಿಸಯ್ಯ
ಶ್ರೀ ಶರಣಬಸವ
No comments:
Post a Comment