Saturday, September 1, 2018

ನನ್ನ ನಾ ಕಂಡುಕೊಳ್ಳಲೊಲ್ಲೆ
ಮಾಧವ... ನಿನ್ನ ಮಾರ್ಗದರ್ಶನವಿಲ್ಲದೆ...
ಅರಿತುಕೊಳ್ಳಲಾದರು ಹೇಗೆ..? ನನ್ನೊಳಗೆ
ನೀನಿರುವೆಂಬುದರ ಸಾಕ್ಷಾತ್ಕಾರವಾಗದ ಹೊರತು..

ಏನು ಮಾಡಲಿ...? ಬೆಳಕಲ್ಲಿ ನಿಂತವರೆ...
ಕತ್ತಲೆಗೆ ದೂಡುತಿಹರು...
ದೋಣಿಯ ಹತ್ತಿಸಿಕೊಂಡವರೆ...
ನಡು ನೀರಿನಲ್ಲಿ ದೂಡುತಿಹರು

ಗಿರಿಯನೆತ್ತಿದೆ... ಕಿರುಬೆರಳಿನಲಿ
ಗಿರಿಬಿಡು ಅಂಧಕಾರದ ಪೊರದೆಯನು
ಉಗಿರಿನಲಿ...
ದಯೆ ತೋರಿದೆ ನೂರೊಂದು ತಪ್ಪುಗಳಿಗೂ ಕಂಸನಲಿ...
ನಾ ಕಾಯಲಾರೆ, ಸುಟ್ಟುಬಿಡು ಲೆಕ್ಕವಿಡದೆ
ನನ್ನೆಲ್ಲ ತಪ್ಪುಗಳನು ಉರಿದುಹೋಗಲಿ

ನುಡಿಸು ನಿ ಮನತಣಿಸುವ ರಾಗವನು
ಅಂಕೆಯಿರದ ಮನವು ಸೋತು ಶರಣಾಗಲಿ
ಓದಿ ಸಾರವ ಸವಿಯುವ ಸಂತ ನಾನೇನಲ್ಲ
ಬೆಳಗಿಸಿಬಿಡು ಬೆಳಕೊಂದನು ಎದೆಯಲಿ,
ಬದುಕು ಸಾರ್ಥಕಗೊಳ್ಳಲಿ ನಿನ್ನದೆ ಸ್ಮರಣೆಯಲಿ...

ತಮ್ಮ ಮೂಕವಿಸ್ಮಿತ ಸಾಲುಗಳಿಗೆ ಈ
ಅಕ್ಷರ ಬಡವನ ಜೋಳಿಗೆಯಿಂದೆರಡು ಸಾಲುಗಳು ಅಣ್ಣವ್ರೆ ಒಪ್ಪಿಸಿಕೊಳ್ಳಿ.
ಶುಭೋದಯ

No comments:

Post a Comment