Tuesday, October 24, 2017

ಶರಣ ೨

ಕತ್ತಿಯ ಹೊಡೆತಕ್ಕೆ ಗಾಯಗೊಂಡವನನ್ನು
ಉಳಿಸಿಕೊಳ್ಳಬಹುದು
ಹಾವು ಕಚ್ಚಿ ವಿಷವೇರಿದವನನ್ನು
ಬದುಕಿಸಿಕೊಳ್ಳಬಹುದು
ನದಿಯ ಸುಳಿಗೆ ಸಿಕ್ಕು ಸಾಯುತ್ತಿರುವವನನ್ನೂ
ಕಾಪಾಡಿಕೊಳ್ಳಬಹುದು
ಆದರೆ... ಎಲುಬಿಲ್ಲದೆ ಆಡುವ ನಾಲಿಗೆಯ
ಬೆಂಕಿಯ ಮಳೆಗೆ ಸಿಕ್ಕವರನ್ನು
ಉಳಿಸಿಕೊಳ್ಳಲಾದಿತೆ..
ಶರಣಬಸವ

No comments:

Post a Comment