ಜ್ಯೋತಿ ಹೊತ್ತಿಸುವರಯ್ಯಾ
ಮಂದಿರಗಳಲಿ...ಪೂಜಾ ಕೋಣೆಗಳಲಿ
ಹೊರಗೆ ಹೊತ್ತಿಸಿದ ದೀಪವು
ಹೊರಜಗದ ಕತ್ತಲೆಯ ಕಳೆಯುವುದಲ್ಲದೆ
ಅಂತರಂಗದ ತಮವವನೆಂತು
ಹೋಗಲಾಡಿಸಿತು...
ಎನ್ನಂತರಂಗದ ಕೋಣೆಯ ಜ್ಞಾನದ
ಜ್ಯೋತಿಯಿಂದ ಹೊತ್ತಿಸದಾ ಹೊರತು
ಅರಿವೆಂತು ಮೂಡುವುದಯ್ಯಾ ಮಸ್ತಕಕೆ
ಕಾಣಬಲ್ಲೆನೆ ಹೊಸಬೆಳಕನು ಈ ಜಗದಿ
ಕೇವಲ ಎಣ್ಣೆ ಬತ್ತಿಯ ಸುಟ್ಟು ಲೋಕದಂತರಂಗದ
ಕತ್ತಲೆಯ ಕಳೆಯುವ ಹಾಗಿದ್ದರೆ....
ನರರು ಮಾಡಿದ ಪಾಪದ ಮೂಟೆಗಳ
ಗಂಟುಗಳ ಭಾರಕೆ ಅವರ ಬೆನ್ನು ಗೂನವಾಗುತ್ತಿರಲಿಲ್ಲವಲ್ಲಾ
ಶರಣಬಸವ
No comments:
Post a Comment