ಸಾವಾದರೂ.... ಬರಬಾರದೆ ಕಂದ ನಿನಗೆ ?
ಶಕ್ತಳಾಗಿಲ್ಲ ನಾನು... ನೋವಿನ ದಿನಗಳಿಗೆ ಕಟ್ಟಲು ತೆರಿಗೆ !!!
ಎಷ್ಟೋ ಕನಸುಗಳ ಕಟ್ಟಿಕೊಂಡು... ತವರು ಮನೆಯಲ್ಲಿ
ಮಾಡಿಸಿಕೊಂಡಿದ್ದೆ ಹೆರಿಗೆ !!!
ಪಟ್ಟ ಆಸೆಗಳೆಲ್ಲ.... ಹರೆವ ಹೊಳೆಯಲ್ಲಿ ಹಿಂಡಿದ
ಹಣ್ಣಂತಾಯಿತು ಬಾಳ್ವೆಗೆ !!!
ನವಮಾಸಗಳ ಗರ್ಭದಲಿ ಹೊತ್ತ ನನಗೆ
ಇನ್ನೂ... ಹೊರೆಯಾಗಿಯೆ ಇರುವೆಯಲ್ಲ
ಇಪ್ಪತ್ತೇರಡು ವಸಂತಗಳ ಕಂಡರೂ ನನ್ನ ಕಂಕುಳಿಗೆ!!!
ಅದೇಷ್ಟು ಪ್ರೀತಿಯೊ ಆ ಶಿವನಿಗೆ ನಿನ್ನ ಮೇಲೆ
ಕಲ್ಮಷವಿರದ ನಗುವ ಮೊಗದಲಿಟ್ಟು...ಹಾಲಂತ
ಮನದ ಸಜೀವ ಬೊಂಬೆಯನ್ನಾಗಿಸಿ.....
ಕಾಣಿಕೆಯನ್ನಾಗಿಸಿದನಲ್ಲ ನನ್ನ ಮಡಿಲಿಗೆ !!!
ಹಠಮಾಡಿ...... ಯಾವುದಕ್ಕಾದರೂ ಒಂದಿನವು
ಅಳಲಿಲ್ಲ...
ಒಂದಕ್ಕಾದರೂ.. ನಕ್ಕು ನಮ್ಮನು ನಗಿಸಲಿಲ್ಲ
ಆಡುವ ಮಾತುಗಳಿಗೆ ನಿನ್ನಲಿ ಪ್ರತಿಸ್ಪಂದನೆಯಿಲ್ಲ
ವಂಶದ ಬಳ್ಳಿಯ ಚಿಗುರು ಸತ್ವಹೀನವಾಗಿಹುದಲ್ಲ
ಮುಪ್ಪಾವಸ್ಥೆಗೆ ನಿನ್ನಯ ನೆರಳು ನಮ್ಮ ನೆತ್ತಿಯ ಕಾಯುವುದಿಲ್ಲ
ಇಹಲೋಕವ ತ್ಯಜಿಸಿದ ನಮ್ಮ ದೇಹಗಳಿಗೆ ಅಗ್ನಿಯನ್ನಾದರೂ.... ಸ್ಪರ್ಶಿಸುವೆಯೋ..? ಇಲ್ಲವೊ..?
ನಾನಳಿದ ಮೇಲೆ ಇನ್ನಾರು ಕಂದ ದಿಕ್ಕು ನಿನಗೆ ?
ಜಗದಪವಾದವು ಬಂದರೂ.... ಬರಲೇನಗೆ
ನಾನೆ ಹಾಡಬೇಕೆಂದಿರುವೆ ಕಂದಾ... ಚರಮಗೀತೆ
ನಿನ್ನ ಬದುಕಿಗೆ
ನನ್ನ ಮಡಿಲಲ್ಲಿಯೆ ಬಂದರೂ... ಬರಲಿ ಸಾವು ಕೊನೆಗೆ
ಓ..ದೇವರೆ ಇಂಥ ಫಲವ ಕೊಡುವ ಬದಲು
ಬಂಜೆಯ ಪಟ್ಟವನ್ನಾದರೂ... ಕೊಟ್ಟಿದ್ದರೆ ಸಾಕಿತ್ತೆನೆಗೆ
ಓ.. ಕಂದಾ... ಸಾವಾದರೂ ಬರಬಾರದೆ ನಿನಗೆ
No comments:
Post a Comment