ಎಷ್ಟು ಸುಕೋಮಲೆ.... ತಾಯೆ ನೀನು ಭುವನೇಶ್ವರಿ
ಲೋಕದಲಿ ನಿನ್ನಷ್ಟು ಯಾರಿಲ್ಲವಿಲ್ಲಿ ಸುಗಂಧವತಿ
ಶಿಲ್ಪಿಯ ಶಿಲೆಯ ಕಲೆಯ ಬಲೆಯೊಳರಳಿ ನಿಂತ
ಸೌಂದರ್ಯವತಿ
ಅಷ್ಟಪೀಠಗಳಿಗೆ ಜನ್ಮವನಿತ್ತ ತಪೋ ಭೂಮಿಯು ನೀನು
ಕಾವೇರಿ ಗೋದಾವರಿಗಳ ತುಂಬಿ ಹರಿಯುವಂತ
ಜೀವ ನದಿಗಳ ಒಡಲು ನೀನು
ಕವಿ ರನ್ನ ಪಂಪ ರಾಘವಾಂಕರ ಪದಗಳಲಿ ಮಿಂದ
ನಿನ್ನನು....ನಾನಾವ ಪದಗಳಲಿ ಕಟ್ಟಿಕೊಡಲಿ ತಾಯೆ...
ಏನು ಮಾಡುತ್ತಿರುವರು ನೋಡು ? ನಿನ್ನನು..
ಗಂಧವತಿ ಎಂದೆ ಸದ್ದು ಗದ್ದಲವಿಲ್ಲದೆ ಕಡೆದು
ಕಡೆದು ಕಳ್ಳ ಸಾಗಾಣಿಕೆಯ ಮಾಡುತಿಹರು...!!
ಪ್ರೇಮ ಮೋಹದ ಮತಿಹೀನರು ನಿನ್ನ ಶಿಲೆಯ
ಕಲೆಯ ಕೊಳಕಾಗಿಸುತಿಹರು...!!
ಪುಣ್ಯದ ಮಣ್ಣೆಂದೆ ಲಾರಿ..ಲಾರಿಗಟ್ಟಲೆ ಅಗೆದು
ಬಗೆದು ಮಾರಿಬಿಟ್ಟರು...ಮಾರುತಿಹರು..ಮಾರಾಟದ
ಹೊಸ ದಾರಿಗಳನ್ನೂ... ಹುಡುಕುತಿಹರು
ಜೀವನದಿಗಳ ಹೊಂದಿದುರಿಂದಲೆ ತಾಯೆ.. ನೆರೆ
ಹೊರೆಯವರು ನಿನ್ನ ಮಕ್ಕಳು.. ಬಾಯಾರಿಕೆಯಿಂದ
ಸತ್ತರೂ ನೋಡದೆ.. ತಮ್ಮ ಹೊಲ ಗದ್ದೆಗಳಿಗೆ ಜಲವ
ಹರಿಸಿಕೊಂಡು.... ನಮ್ಮ ಬದುಕಿನಂಗಳವ ಬರಡಾಗಿಸಿ
ತಮ್ಮ ನೆಲಗಳನು ಹಸಿರಾಗಿಸಿಕೊಳ್ಳುತಿಹರು
ಸಾಕು ತಾಯೆ.. ಸಾಕಿನ್ನು ಕನ್ನಡಿಗರು ಶಾಂತಿ ಪ್ರಿಯರೆಂಬ
ಬಿರುದು... ಎಳೆದಿಕೊ ತುಕ್ಕು ಹಿಡಿಯುತ್ತಿರುವ ಖಡ್ಗವನು
ಝಳಪಳಿಸಿ ಬಿಡು.. ಎದುರಾಳಿಗಳ ಎದೆಯು ನಡಗುವಂತೆ
ಸಾರಿ ಬಿಡು ಯುದ್ಧವನು.. ಅನ್ಯರು ನಮ್ಮ ನೆಲವೆಂದು ಕಬಳಿಸಲು ಬರುವವರ ಕಾಲನು ಕತ್ತರಿಸಲು...
ನಮ್ಮ ನೆಲದನ್ನವನುಂಡು ಪರಕೀಯ ಭಾಷೆಯ
ಮಾತನಾಡುವ ನಾಲಿಗೆಯನ್ನು ಸೀಳಲು...
ಕಲೆಯ ಬೆಲೆಯನರಿಯದೆ ಶಿಲೆಯ ವಿರೂಪಗೊಳಿಸುವ
ಕೈಗಳನು ಕತ್ತರಿಸಲು...
ಇನ್ನೊಬ್ಬರ ಬಗೆಗೆ ಅನುಕಂಪವಿರದೆ ನೀರು..ನೀರೆನ್ನುವವರ
ನೆತ್ತರಿನ ಕಾಲುವೆಯನೆ... ಹರಿಸಲು...
ನಿನ್ನನೆ ಮಾರಿ... ಮೈ ತುಂಬಾ ರೋಗ ರುಜಿನಗಳ ಹೊಂದುವ
ಶ್ರೀಮಂತರ ದೇಹವನ್ನು ಅದೇ ಮಣ್ಣಲಿ ಮಣ್ಣಾಗಿಸಲು...
ಏನು ಮಾಡುವುದು ತಾಯೆ....? ಏನು ಮಾಡುವುದು ?
ನಾಡ ಕಾಯಲು ನಿಂತ ಕನ್ನಡಿಗರ ನೆತ್ತರದ ಸವಿಯನ್ನು
ಕೋವಿಯು ಸವೆಯುತಿದೆ...
ಹಿರಿಯರು ಹೊತ್ತಿಸಿದ ದೀಪವಿಂದು ಕ್ಷೀಣಿಸುತ್ತಿದೆ....
ಈಗಲೋ.. ಆಗಲೋ ಎಂಬಂತೆ ಬಿಕ್ಕುತಿದೆ...
ಬಿಸಿ ರಕ್ತದ ಯುವಶಕ್ತಿಯ ಮತಿಗಳ ಜ್ಞಾನದಾ...
ಎಣ್ಣೆಯು ಬೇಕಿದೆಯಿಂದು ತಾಯೆ....ಸೋಕಿಸೆಲ್ಲರ
ಮನದಲಿ ಜಾಗೃತಿಯ ಕಿಡಿಗಳನು.....ತಾಯಿ ಭುವನೇಶ್ವರಿ
ಮತ್ತೆ ಭೂ ಪಟದಲಿ ಹಿಂದೆಂದಿಗಿಂತಲೂ...ಪ್ರಜ್ವಲಿಸಲು
No comments:
Post a Comment