ಬಿರು ಬಿಸಿಲಲ್ಲಿ ಮಾರತ್ತಿದ್ದೆ... ಕಾಯಿ
ಮುನಿದ ವರುಣ ಸುರಿದ ಮಳೆಯ...
ಕಾದು ಕೆಂಡವಾಗಿದ್ದವಳು ತಂಪಾದಳು ಹನಿಗಳಿಗೆ ಭೂತಾಯಿ...
ತಣಿದರೆ ಧರಣಿ...ಕೊಳ್ಳುವನೇನು ಕಾಯನ್ನು ಗ್ರಾಹಕ ಧಣಿ
ಹಣವಿಲ್ಲದೆ...ಹೊಟ್ಟೆಗೆ ತಣ್ಣೀರ ಬಟ್ಟೆಯ ಸುತ್ತಿಕೊಂಡು
ಮಲಗಬೇಕಿದೆ ಈ ಬಡಪಾಯಿ...
ಕುಡಿಯದಿರಿ...ಸುಸಂಸ್ಕೃತರೆ ಬಾಟಲೊಳಗಿನ ಪೇಯ
ಕುಡಿಯಿರಿ ಎಳೆನೀರನ್ನು ನಿಮ್ಮೆಲ್ಲ ರೋಗರುಜಿನಗಳು ಮಾಯ
ಹೊತ್ತೊಯ್ವರು ಹಣದ ಥೇಲಿಯನು ಹೊರಗಿನವರು ಬಂದು
ಹಣ ಹಣವೆಂದೆ ಹೆಣವಾಗುತಿರುವ ನಮಗೆ.... ನೇರವಾಗಿರಿಂದು
ಕುಡಿದು ಎಸೆಯದಿರಿ ಬಾಟಲುಗಳನ್ನು ಪ್ರಕೃತಿಗೆ ಮಾರಕ
ನಿಮ್ಮ ಸಹಕಾರವು ಇರಲಿ ಬಡ ರೈತರ ವ್ಯವಸಾಯಕ್ಕೆ ಪ್ರೇರಕ
ಹೇಗೆ ತಾಳಲಿನ್ನು ಬಡತನದ ಬಡಿತಕ್ಕೆ ಬಾಗಿ ಹೋಗಿದೆ ಬೆನ್ನು..
ಕಷ್ಟಗಳ ಭಾರಕ್ಕೆ ಸೋತು ಸೋರಗಿವೆ ಹೆಗಲುಗಳು
ತಲೆತಗ್ಗಿಸಿ...ಕೈ ಕಟ್ಟಿಕೊಂಡು ಕುಳಿತುಬಿಟ್ಟಿರುವೆ,
ನಿನಗೆ ಸೋತೆನೆಂದಲ್ಲ...!!!! ಕಾಲವೆ...ಮರೆಯದಿರು
ಹೋರಾಟದ ಕಿಚ್ಚು ಹೊಟ್ಟೆಯೊಳಗಡೆ ಇನ್ನೂ ಉರಿಯುತ್ತಲೆ ಇದೆ...
ಸಿಕ್ಕು ನೋಡು ಒಮ್ಮೆ... ಓ.. ಕ್ರೂರ ವಿಧಿಯೆ..
ಕಾಯಿಯ ತಲೆಯನ್ನು ಕೊಚ್ಚಿದ ಹಾಗೆ ಚಕಚಕನೆ
ಕೊಚ್ಚಿ ಹಾಕುವೆ, ಕಣ್ಣೇದುರಿಗೆ ತುತ್ತನಿಕ್ಕಿ ಸಲುಹಿದ
ಎಲ್ಲರನ್ನೂ... ಬಡಿದು ಬಾಯಿಗೆ ಹಾಕಿಕೊಂಡುಬಿಟ್ಟೆ..
ಚಿಂತೆಯಿಲ್ಲದೆ ಚಿತೆಯೇರಿ ಬೂದಿಯಾಗಬೇಕಿದ್ದ ನನ್ನನು
ಕ್ಷಣಕ್ಷಣವು ಚಿಂತೆಗಳ ಕಿಡಿಯಲ್ಲೆ ನರಳುವಂತೆ ಉಳಿಸಿಬಿಟ್ಟೆ
ತಗ್ಗುವೆ.... ಬಗ್ಗುವೆ...ತಲೆ ತಗ್ಗಿಸಿಯೂ...ನಡೆಯುವೆ
ಹೆಮ್ಮರವಾಗಲಿ....ನನ್ನದೊಂದು ಉರುಗೋಲು
ನೆರಳಲಿ ನಿಂತು ತೊಡೆತಟ್ಟಿ ಕರೆಯುವೆ ನಿನ್ನನಾಗ ವಿಧಿಯೆ,
ಮಳೆಯೊ.... ಬಿಸಿಲೊ... ಇದೆ ರಸ್ತೆಯಲ್ಲಿ ದುಡಿದುಣ್ಣುತ್ತೇವೆ.
ನಿನ್ನಾಟಕೆ ಸಿಕ್ಕು ಹಸಿವಿನಿಂದ ಸತ್ತರೂ....ಸರಿಯೆ...
ಹಸುಳೆಯ ಮುಂದುರಿಸಿಕೊಂಡು ಭಿಕ್ಷೆಯನ್ನಂತು ಬೇಡಲಾರೆ
ಮಾರದೆ ಹೋದರೆ ಎಳೆನೀರು...
ಬದುಕುವೆವು ಕುಡಿದಾದರು ಕಣ್ಣೀರು
ನಿನಗಿಷ್ಟವಾಗದಿದ್ದರೆ......ಬಿಟ್ಟುಬಿಡು
ನಮ್ಮಿಬ್ಬರ ಬಾಳಿಗೆ ಎಳ್ಳು...ನೀರು..
No comments:
Post a Comment