ಅವನಂದು, ಹೂವನ್ನು
ಹಿಡಿದುಕೊಂಡು ಬಂದಾಗಲೇ..
ನೋಡಿರಲಿಲ್ಲ..!!
ಇನ್ನೂ...ಇಂದವನ ಹೆಣದ
ಮೆರವಣಿಗೆಯನ್ನು ಹೇಗೆ...
ನೋಡಲಿ...!!
ಮುಡಿಯವ ಮಲ್ಲಿಗೆಯೆನ್ನೆ..
ನಿರಾಕರಿಸಿದವಳಿಗೆ..
ಪರಿಮಳವನ್ನು ಸವಿಯುವ
ಹಕ್ಕುಂಟೇನು...?
ಅಕ್ಷರ ಬಡವ 🙏
ಅವನಂದು, ಹೂವನ್ನು
ಹಿಡಿದುಕೊಂಡು ಬಂದಾಗಲೇ..
ನೋಡಿರಲಿಲ್ಲ..!!
ಇನ್ನೂ...ಇಂದವನ ಹೆಣದ
ಮೆರವಣಿಗೆಯನ್ನು ಹೇಗೆ...
ನೋಡಲಿ...!!
ಮುಡಿಯವ ಮಲ್ಲಿಗೆಯೆನ್ನೆ..
ನಿರಾಕರಿಸಿದವಳಿಗೆ..
ಪರಿಮಳವನ್ನು ಸವಿಯುವ
ಹಕ್ಕುಂಟೇನು...?
ಅಕ್ಷರ ಬಡವ 🙏
'ಕಥೆ' ಈ ಒಂದು ಶಬ್ದ ಬಾಲ್ಯದಿಂದಲೂ ನನಗೆ ಬಹಳಷ್ಟು ಅಪ್ಯಾಯಮಾನವಾದಂತಹದ್ದು ಒಂದು ರೀತಿಯಲ್ಲಿ ಇಲ್ಲಿಯವರೆಗೂ ಜೀವಾಮೃತವನ್ನೆ ಉಣಿಸಿಕೊಂಡೆ ಬಂದಿದೆ ಎನ್ನಬಹುದು ಅಷ್ಟರಮಟ್ಟಿಗೆ ನನ್ನನ್ನು ಆವರಿಸಿಕೊಂಡಂತಹ ಭಾವ; ನಮ್ಮ ಮನೆಯಲ್ಲಿ ಅಷ್ಟೇ ಏನು, ನಮ್ಮ ವಂಶಸ್ಥರಲ್ಲಾಗಲಿ, ದೂರದೂರದ ಸಂಬಂದಗಳಲ್ಲಾಗಲಿ ಯಾರೆಂದರೆ ಯಾರೊಬ್ಬರಿಗೂ ಸಾಹಿತ್ಯದ ಗಂಧ-ಗಾಳಿ ಗೊತ್ತಿರಲಿಲ್ಲ!. ಕೆಲವು ಹಿರಿಕರು ಹೊಟ್ಟೆಪಾಡಿಗಾಗಿ ಹುಟ್ಟೂರನ್ನು ಬಿಟ್ಟು ಹೋದ ಹಾಗೆ ನಮ್ಮ ಹಿರಿಯರು ಹೊಟ್ಟೆ ಪಾಡಿಗಾಗಿಯೆ ಹಳ್ಳಿಯನ್ನು ಬಿಟ್ಟು ಊರೂರು ಅಲೆದು ಗಜೇಂದ್ರಗಡದಲ್ಲಿ ನೆಲೆಯೂರಲು ಆಯ್ಕೆ ಮಾಡಿಕೊಂಡ ಕೆಲಸವೆಂದರೆ ಚಹಾದಂಗಡಿ. ಅಪ್ಪ-ಅವ್ವ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಎಂಟರವರೆಗೂ ಬಿಡುವಿರದೆ ದುಡಿಯುತ್ತಿದ್ದರು ನಾವೊ ಉಂಡಿದ್ದು-ಆಡಿದ್ದು ಸರಿ. ಓದಿದ್ದು?- ಬರೆದಿದ್ದು? ಇಲ್ಲಿಯೆ ನೋಡಿ ದೊಡ್ಡ ಸಮಸ್ಯೆ. ಮನೆಯಲ್ಲಿ ಬೇರೆ ಯಾರು ವಿದ್ಯಾವಂತರಿರಲಿಲ್ಲ ಏನು ಬರೆದೆ? ಏನು ಓದಿದೆ?, ಮುಂದಿನ ಭವಿಷ್ಯವೇನು? ಇಂತಹುದನೆಲ್ಲ ವಿಚಾರಿಸಿ, ಸರಿದಾರಿಗೆ ಅಂದರೆ ನೌಕರಿ ಸೇರಲು/ತನ್ನ ಕಾಲಿನ ಮೇಲೆ ತಾನು ನಿಂತು ದುಡಿಯುವಂತಹ ಕೌಶಲ್ಯ ತರಬೇತಿಯ ಯಾವ ಯಾವ ಕೋರ್ಸ್ಗಳನ್ನು ಮಾಡಬೇಕು ಮತ್ತು ಹೇಗೆ ಪರೀಕ್ಷೆಗಳನ್ನು ಎದುರಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಹೇಳುವರಾರು ಇರಲಿಲ್ಲ ಹೀಗಾಗಿ ಈ 'ಕಥೆ' ಎನ್ನುವ ಪದ ಆಗ ನನ್ನನ್ನು ಬಹಳಷ್ಟು ಆಳವಾಗಿ... ಅಂದರೆ ಹೇಗೆ ಹೇಳಬೇಕೆಂದರೆ ತಾಯಿ ಅಕ್ಕಮಹಾದೇವಿಯ ಎದೆಯಾಳದಲ್ಲಿ ಬೇರೂರಿದ ಚೆನ್ನಮಲ್ಲಿಕಾರ್ಜುನನಂತೆ ಈ ವಿಷಯವು ಬೇರೂರಿಬಿಟ್ಟಿತು. ಮುಖ್ಯವಾಗಿ ಆಗೆಲ್ಲ ನನ್ನನ್ನು ಚಹಾದಂಗಡಿಯ ಹುಡುಗನೆಂದೆ ಗುರುತಿಸುತ್ತಿದ್ದರು. ಒಂಥರಾ ಕಿಳರಿಮೆಯ ಭಾವ, ತಾತ್ಸರತೆಯ ನೋಟ, ಗುರುತಿಸಿಕೊಳ್ಳಲು ಹೋರಾಡುವಾಗಲೂ ತುಳಿತ, ಚಿತ್ರಕಲೆಗೆ ಕೈ ಹಾಕಿದೆ ಇದೇನು ಹೊಟ್ಟಿಗೆ ಅನ್ನ ಹಾಕುತ್ತದೇನಯ್ಯ ಎಂದರು, ಚೆಸ್ - ಟೆನಿಕ್ವಾಯಿಟ್ ಆಟಗಳಲ್ಲಿ ಗಜೇಂದ್ರಗಡದ ಪ್ರತಿನಿಧಿಯಾಗಿ ಧಾರವಾಡ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಅರ್ಹತೆ ಅಲ್ಲದೆ ಕೊನೆಕೊನೆಗೆ ಹೋಗುವುದು ಖಚಿತವೆಂದು ತಿಳಿಸಿ ಕೊನೆಯ ಕ್ಷಣದಲ್ಲಿ ಆ ಅವಕಾಶವನ್ನು ಕಸಿದುಕೊಂಡು ಮುಂದಿನ ಸಲ ನೋಡೋಣ ಬಿಡಯ್ಯ ಎಂಬ ಉದಾಸೀನ ಉತ್ತರ ಯಾವಾಗಲೂ ನನ್ನ ಪಾಲಿಗಿರುತ್ತಿತ್ತು. ಇಂತಹ ಹೇಳಿಕೊಳ್ಳಲಾರದಂತಹ ಅವಮಾನ, ಈ ಗುರುತಿಸಿಕೊಳ್ಳುವಿಕೆ ಎಂಬುದೊಂದು ನನ್ನೊಳಗೆ ಒಂಥರಾ ಯಾರಲ್ಲೂ ಹೇಳಿಕೊಳ್ಳಲಾರದಂತಹ ಕಸಿವಿಸಿ, ಸಂಕಟವಾಗುತ್ತಿತ್ತು. ಇದರಿಂದ ಹೊರಬರಲು ಪಟ್ಟ ಹಲವಾರು ಪ್ರಯತ್ನಗಳಲ್ಲಿ ಈ ಬರಹವು ಒಂದು. ಆದರೆ ಬೆಳೆಯುತ್ತ.. ಬೆಳೆಯುತ್ತ ಬಂದಂತೆಲ್ಲ ಬದುಕಿಗೆ ಕೀಳರಿಮೆ, ಅಹಸ್ಯವೇನಿಸುವಿಕೆ, ಗುರುತಿಸುವುದಿರುವಿಕೆ ಇವೆಲ್ಲದಕ್ಕೂ ಮೀಗಿಲಾಗಿ ಹಸಿವೊಂದಿತ್ತು... ಬಾಳಿನ ಹಸಿವು ಎಲ್ಲವನ್ನು ಕಸಿದುಕೊಂಡುಬಿಟ್ಟಿತ್ತು, ಅದರಲ್ಲೂ ನಮ್ಮ ಗಜೇಂದ್ರಗಡದಂತಹ ವಾಣಿಜ್ಯ ನಗರದಲ್ಲಿ ಕಲೆ-ಸಾಹಿತ್ಯ-ಸಾಂಸ್ಕೃತಿಕ ವಿಷಯಕ್ಕೆ ಅಷ್ಟೊಂದು ಪ್ರಾಮುಖ್ಯತೆಯನ್ನು ಕೊಡುತ್ತಿರಲಿಲ್ಲ ಶಾಲೆಯ ಗೋಡೆಯ ಮೇಲೆ ನೀತಿ ಕಥೆಯ ಹೇಳುವ ತೈಲವರ್ಣ ಚಿತ್ರಗಳು, ಜಾಲಿಹಾಳ ಸರ್ ಕೈಯಲ್ಲಿ ಆಕಳದ ಗೆಜ್ಜೆಯನ್ನು ಕಟ್ಟಿ, ತಾಳಕ್ಕೆ ತಕ್ಕಂತೆ ಟೇಬಲ್ ಗೆ ಕುಟ್ಟುತ್ತಾ 'ಧರಣಿ ಮಂಡಲ ಮಧ್ಯದೊಳಗೆ' ಎಂಬ ಹಾಡನ್ನು ಮಣ್ಣಿನಲ್ಲಿ ಮಣ್ಣಾಗುವವರೆಗೂ ಎದೆಯಲ್ಲಿ ಜೀವಂತಿಕೆಯಿಂದ ತುಳುಕುವಂತೆ ಹಾಡಿ- ಹಾಡಿಸಿದ ಜನಪದ ಗೀತೆ ಅಲ್ಲದೆ ಟೋಪಿ ಮಾರುವವ ಮತ್ತು ಮಂಗ, ಮೊಸಳೆ ಮತ್ತು ಮಂಗ, ಬೆಕ್ಕು ಮತ್ತು ಮಂಗ, ಹಾಲು ಮಾರುವವ, ಮೊಲ ಮತ್ತು ಆಮೆ ಹೀಗೆ ಹತ್ತು ಹಲವಾರು ಕಥೆಗಳು ಬದುಕಿಗೆ ಬೇಕಾದಂತಹ ನೈತಿಕತೆ ಹಾಗೂ ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಲು, ಮಾರ್ಗದರ್ಶಕವಾಗಿಯೂ ಪ್ರೇರಣೆಯಾಗಿದ್ದವು.
ಇದೀಷ್ಟು ಪೀಠಿಕೆಯನ್ನು ಏಕೆ ಕೊಟ್ಟೆನೆಂದರೆ, ಈಗ ರಾಶಿ ರಾಶಿಗಟ್ಟಲೆ ಹರಿದು ಬರುತ್ತಿರುವ ಸಾಹಿತ್ಯದಲ್ಲಿ ಏನಿದೆ? ಓದಿದರೆ ಏನು ಪ್ರಯೋಜನವಿದೆ? ಯಾವ ದಿಕ್ಕಿನಲ್ಲಿ ನಮ್ಮನ್ನು ಕೊಂಡೊಯ್ಯುತ್ತದೆ? ನಮ್ಮೊಳಗೆ ಯಾವ ಮೌಲ್ಯವನ್ನು ಕಟ್ಟಿಕೊಡುತ್ತದೆ? ಸಮಾಜದಲ್ಲಿ ಬದುಕಲು ಹೇಗೆ ಪ್ರೇರಿಪಿಸುತ್ತದೆ? ಬದುಕಿಗೊಬ್ಬ ಮಾದರಿ ಮನುಷ್ಯನನ್ನಾಗಿಸಿ ರೂಪಗೊಳಿಸಲು ಎಷ್ಟೊಂದು ಬಲವನ್ನು ತುಂಬುತ್ತದೆ? ಒಂದೇ... ಎರಡೇ... ಹೀಗೆ ಕೆದಕುತ್ತಾ ಹೋದಂತೆ ನಮಗೆ ನಿರಾಶೆ ಭಾವವೊಂದನ್ನು ಬಿಟ್ಟು ಮತ್ತಿನ್ನೇನು ದೊರಕದು. ಪದಕ್ಕೆ ಪದ ಪೋಣಿಸಿ ಕವಿತೆಯೆಂದರು, ಸಾಲಿಗೆ ಸಾಲು ಸೇರಿಸಿ ಕಥೆ ಎಂದರು, ಪುಟಕ್ಕೆ-ಪುಟ ಜೋಡಿಸಿ ಕಾದಂಬರಿ ಎಂದರು, ಸರಿ ಎಂದರು ಹಿಂಬಾಲಕರು, ಬಹುಪರಾಕ್ ಹಾಕಿದರು ಬಾಯಿ ಬಡುಕರು. ಇಂತಹ ಪುಸ್ತಕಗಳಿಂದ/ವಿಷಯಗಳಿಂದ ಸ್ವಾಭಿಮಾನವಿಲ್ಲದ ಓದುಗರನ್ನು ಸೃಷ್ಟಿಸುತ್ತಾ ಸಾಗುತ್ತಿದ್ದೇವೆ.
ಹೀಗಾದರೆ.. ಮುಂದಿನ ಪೀಳಿಗೆ ನಮ್ಮನ್ನು ಬಿಡಿ ಬೇಂದ್ರೆ-ಕುವೆಂಪು ಅಂಥವರನ್ನೆ ಮರೆತುಬಿಡುತ್ತಾರೆ. ನಮ್ಮ ಓದು ಮತ್ತು ಬರಹ ಇಂದಿನ ವಾಸ್ತವಿಕತೆಯನ್ನು ಮುಂದಿನ ತಲೆಮಾರಿಗೆ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಡುವಂತಹ ವಿಷಯವಾಗಿರಬೇಕು, ಓದುಗ ಪುಸ್ತಕವನ್ನು ಓದುತ್ತಾ ಹೋದಂತೆ ಮಗ್ನನಾಗಬೇಕು, ಭಾವಪರವಶಗೊಳ್ಳಬೇಕು, ಅಳಬೇಕು, ನಗಬೇಕು, ಉತ್ಸಾಹಿತನಾಗಿ ಆ ಕಥೆಯ/ಕಾದಂಬರಿಯ ನಾಯಕ/ಕಿಯು ಅವನ ಬದುಕಿನಲ್ಲಿ ತಿರುವನ್ನು ತಂದುಕೊಡಬೇಕು, ಕಾಡುಮೃಗದಂತಹ ಮನಸ್ಸಿನವರು ಹೂವಾಗಿ ಅರಳಬೇಕು, ಹುಟ್ಟುತ್ತಾ ಯಾರು ಒಳ್ಳೆಯವರು ಆಗಿರುವುದಿಲ್ಲ, ಕೆಟ್ಟವರು ಆಗಿರುವುದಿಲ್ಲ ಕಾಲ, ಸಮಯ, ಸಂದರ್ಭಗಳು ಒಳ್ಳೆಯವನನ್ನು - ಕೆಟ್ಟವನನ್ನಾಗಿಸುತ್ತದೆ, ಕಟುಕರನ್ನು- ಸಾಧುವಿರಂತೆ ಮಾಡುತ್ತವೆ. ಹಾಗಂತ ನಾವು ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ ಈ ಭೂಮಿಯಲ್ಲಿ ಹುಟ್ಟಿದಂತಹ ಪ್ರತಿಯೊಂದು ಜೀವಿಗೂ ಒಂದಲ್ಲ ಒಂದು ದಿನ ಒಂದು ತಿರುವು ಬಂದೆ ಬರುತ್ತದೆ ಆ ತಿರುವನ್ನು ಹೇಗೆ ತನಗೆ ಲಾಭವನ್ನಾಗಿಸಿಕೊಂಡೊ/ಬಳಸಿಕೊಳ್ಳುತ್ತಾನೋ ಅದರ ಮೇಲೆ ಅವನ ಮುಂದಿನ ಭವಿಷ್ಯ ನಿರ್ಧಾರಗೊಳ್ಳುತ್ತದೆ.
ಬರಹ ಸಮಾಜಕ್ಕೆ ಹೊರೆಯಾಗದೆ ಓದುಗನ ಅಂತಃಕರಣವನ್ನು ಜಾಗೃತಿಗೊಳಿಸಿದರೆ ಸಾಕು! ಅರ್ಧ ಊರು, ದೇಶ ನಿಶ್ಚಿಂತೆಯಿಂದ ಉಸಿರಾಡಿದಂತೆ.
ಬದುಕು ಹೇಗೆ? ಯಾವಾಗ? ಎಲ್ಲಿಗೆ ತಂದು ನಿಲ್ಲಿಸುತ್ತದೇಯೊ ಅರಿವಾಗುವುದೇ ಇಲ್ಲ! ಎರಡು ಸಾಲುಗಳನ್ನು ಬರೆಯುತ್ತಿದ್ದವನನ್ನು ಧೀರ್ಘ ಕವನ, ಚುಟುಕು, ಕಾದಂಬರಿ, ಶಾಯರಿ, ಕಜಲ್ ಗಳನ್ನು ಬರೆಯುವಂತೆ ಪ್ರೇರೆಪಿಸಿದ ನಮ್ಮ ನಿಕಟಪೂರ್ವ ಕ.ಸಾ.ಪ.ದ ಸಾಹಿತ್ಯ ಬಳಗಕ್ಕೂ, ನಿಕಟಪೂರ್ವ ಅಧ್ಯಕ್ಷರು ಆದಂತಹ ಶ್ರೀಯುತ ಐ.ಎ.ರೇವಡಿ. ಶಿಕ್ಷಕರು ಇವರಿಗೆ ಮತ್ತು ಮುಖ್ಯವಾಗಿ ದಾರವಾಡದ ಮೌನಿ ಎಂ.ಧಾರವಾಡ ಇವರು ಮುಂಬೈನ ಡೊಂಬಿವಿಲಿಯಲ್ಲಿ ಆಯೋಜಿಸಿದ್ದಂತಹ ರಾಷ್ಟ್ರ ಮಟ್ಟದ ಕಥಾ ಸ್ಪರ್ಧೆಯಲ್ಲಿ ನನ್ನ ಚೊಚ್ಚಲ ಅಂದರೆ ಇದೆ ಸ್ಪರ್ಧೆಗಾಗಿ ಬರೆದಂತಹ ಮೊದಲ ಕಥೆ 'ಚಂದ್ರವ್ವ' ಕಥೆಗೆ ವಿಶೇಷ ಬಹುಮಾನವನ್ನು ನೀಡುವ ಮೂಲಕ ಮತ್ತಷ್ಟು ಕಥೆಗಳನ್ನು ಬರೆಯಲು ದಾರಿಮಾಡಿಕೊಟ್ಟರೆಂದರೆ ತಪ್ಪಾಗಲಾರದು ಹಾಗೂ ಗುರುರಾಜ್ ಎಲ್. ಶ್ರೀಮತಿ ಗೀತಾ ಶ್ರೀಧರ ಯಾಳಗಿ, ಚಂದ್ರಶೇಖರ ಮಾಡಲಗೇರಿ ಇನ್ನೂ ಹಲವರು ನನ್ನ ಕಥಾಯಾನಕ್ಕೆ ಸಾಥ ನೀಡಿದಂತವರಿಗೂ ಹಾಗೂ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ - ತಾಲೂಕ ಘಟಕ ಗಜೇಂದ್ರಗಡದ ಅಧ್ಯಕ್ಷರು - ಸದಸ್ಯರುಗಳಿಗೆಲ್ಲರಿಗೂ, ಮುಖಪುಟದ ಎಲ್ಲ ಸಹೃದಯಿಗರೆಲ್ಲರಿಗೂ ಈ ಅಕ್ಷರ ಬಡವನಿಂದ ಅನಂತ... ಅನಂತ.. ಪ್ರಣಾಮಗಳು.
ಕೊನೆಯದಾಗಿ ಈ ಎರಡು ತಿಂಗಳ ಹಿಂದೆಯೆ ಈ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ್ದರೆ ಅದು ನಮ್ಮ ದಿ. ಶ್ರೀ ಈಶ್ವರಪ್ಪ ಎ. ರೇವಡಿ ಇವರ ಕೈಯಿಂದಲೆ ನೆರವೇರಿರುತ್ತಿತ್ತು. ಅವರ ಅಕಾಲಿಕ ಅಗಲಿಕೆಯಿಂದಾಗಿ ನಮ್ಮ ಭಾಗದ ಸಾಹಿತ್ಯವಷ್ಟೆ ಅಲ್ಲ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ವರ್ಗಕ್ಕೆ ಅಪಾರವಾದ ತುಂಬಲಾರದಂತಹ ನಷ್ಟವನ್ನು ಅನುಭವಿಸುತ್ತಿದ್ದೇವೆ. ಈ ನೋವು ಮಾತ್ರ ಶಾಶ್ವತ....
"ಎಲ್ಲ ಬಲ್ಲವರಿಲ್ಲ,
ಬಲ್ಲವರು ಬಹಳಿಲ್ಲ,
ಸಾಹಿತ್ಯವೆಂಬುವುದು
ಎಲ್ಲರಿಗಿಲ್ಲ" ಎಂಬ ಸರ್ವಜ್ಞನ ನುಡಿಯಂತೆ ವೃತ್ತಿಯಿಂದ ವ್ಯಾಪಾರಸ್ಥರಾದರು ಪ್ರವೃತ್ತಿಯಿಂದ ಭಾವನಾ ಜೀವಿಯಾಗಿ ಸಾಹಿತ್ಯದತ್ತ ವಾಲಿರುವ ಅಪರೂಪದ ವ್ಯಕ್ತಿತ್ವ ಹೊಂದಿರುವಂತಹ ಶ್ರೀ ಶರಣಪ್ಪ ಕ.ಬೇವಿನಕಟ್ಟಿ ಇವರು ನಿಷ್ಠುರ ಮಾತಿನ, ಮೃದು ಮನಸ್ಸಿನ ಹಾಗೂ ಜಾನಪದ ಶೈಲಿಯ ಕವನಗಳ ಬರೆಯುವಲ್ಲಿ ಇವರು ನಿಸ್ಸೀಮರು, ಪದಗಳ ಜೋಡಣೆಯ ಅಕ್ಕಸಾಲಿಗ, ಆಡು ಮಾತಿನ ಪದಗಳಿಂದಲೆ ಕವನ ಕಟ್ಟುವ ಕಲೆ ಇವರಿಗೆ ಕರತಲಾಮಲಕವಾಗಿದೆ. ಗಜೇಂದ್ರಗಡ ನಗರವು ಸುತ್ತಮುತ್ತಲಿನ ನಗರಗಳಾದಂತಹ ರೋಣ, ನರೇಗಲ್, ಯಲಬುರ್ಗಾ, ಗುಡೂರು, ಬೇಲೂರು ಇವೆಲ್ಲ ನಗರಗಳ ವ್ಯಾಪಾರಕ್ಕಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತಿರುತ್ತದೆ ಇಂತಹ ವಾತಾವರಣದಲ್ಲಿದ್ದುಕೊಂಡು ಸ್ವತಃ ಒಬ್ಬ ವ್ಯಾಪಾರಸ್ಥರಾಗಿ, ರೈತರಾಗಿ, ಸಾಮಾಜಿಕವಾಗಿ ಕ್ರಿಯಾಶೀಲವಾಗಿದ್ದುಕೊಂಡು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನ ವಾಚನ, ಅಲ್ಲದೇ ನಾಡಿನ ಪ್ರತಿಷ್ಠಿತ ಸಾಹಿತ್ತಿಕ ಸಂಸ್ಥೆಗಳು ಆಯೋಜಿಸಿದಂತಹ ಕಾರ್ಯಕ್ರಮಗಳಲ್ಲಿ ಅಧ್ಯಕ್ಷತೆ, ಉಪನ್ಯಾಸ, ಅತಿಥಿಯಾಗಿ ಭಾಗವಹಿಸಿ ಊರ ಕೀರ್ತಿಯನ್ನು ನಾಡಿನಾದ್ಯಂತ ಪಸರಿಸಿದ್ದಾರಲ್ಲದೆ, ನಮ್ಮ ಗಜೇಂದ್ರಗಡ ನಗರದಲ್ಲಿ ನಡೆಸುತ್ತಿದ್ದಂತಹ ಮಹತ್ವಪೂರ್ಣ ವಾರದ ಸಾಹಿತ್ಯ ಚಿಂತನಾಗೋಷ್ಠಿಗಳಾದಂತಹ ೧೫೦, ೧೭೫, ೨೦೦ ವಾರಗಳ ಸಾಹಿತ್ಯ ಚಿಂತನಾಗೋಷ್ಠಿಗಳ ಸಂಭ್ರಮಾಚರಣೆಯ ಪ್ರಯುಕ್ತವಾಗಿ ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಮತ್ತು ಸಾಹಿತ್ಯ ಸಿರಿ ಎಂಬ ಪುಸ್ತಕ ಪ್ರಶಸ್ತಿಗಳ ಆಯ್ಕೆಯಲ್ಲಿ ಮುಖ್ಯ ವಿಮರ್ಶಕರಾಗಿ ಯಾವುದೇ ಕಪ್ಪು ಚುಕ್ಕೆ ಬರದ ಹಾಗೆ ಕಾರ್ಯ ನಿರ್ವಹಿಸಿದ್ದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಈಗಾಗಲೇ ನಮ್ಮವ್ವ - ಅವಳೆದೆಯ ಮಾತುಗಳು ಕವನ ಸಂಕಲನ ಹಾಗೂ ನಿರ್ಣಯ - ಕಾದಂಬರಿ ಈಗ ಚಂದ್ರವ್ವ ಎಂಬ ಕಥಾ ಸಂಕಲನವನ್ನು ಹೊರತರುತ್ತಿರುವುದು ನಮಗೆಲ್ಲ ಅತೀವ ಸಂತೋಷವನ್ನುಂಟುಮಾಡಿದೆ. ಚಂದ್ರವ್ವ ಎಂಬ ಕಥೆಗೆ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ವಿಶೇಷ ಬಹುಮಾನವನ್ನು ಪಡೆದುಕೊಂಡು ಬಂದು ನಮ್ಮ ಕನ್ನಡ ಕಂಪನ್ನು ನಾಡಿನಾಚೆಗೂ ಪಸರಿಸಿದ ಚೈತನ್ಯವಿದು. ಐದುವರೆ ವರ್ಷಗಳ ಕಾಲ ನಮ್ಮೊಡಗೂಡಿ ಕನ್ನಡ ಸಾಹಿತ್ಯ ಪರಿಷತ್ತು ರೋಣ-ಗಜೇಂದ್ರಗಡ ತಾಲೂಕ ಘಟಕದ ಅವಿಭಾಜ್ಯ ಅಂಗವಾಗಿ ಕಾರ್ಯವನ್ನು ನಿರ್ವಹಿಸಿದ್ದು
ಈ ಕಥಾಸಂಕಲನದ ಮೂಲಕ ನಾಡು ಮೆಚ್ಚುವ ಅದ್ಭುತ ಕಥೆಗಾರನಾಗಿ ಸಾಹಿತ್ಯ ಲೋಕಕ್ಕೆ ಪರಿಚಿತವಾಗಿ ಅವರು ಊರಿನ ಅಭಿನವ ಬೇಂದ್ರೆಯಾಗಿ ಬೆಳೆಯಲಿ ಎಂಬುದೆ ನನ್ನ ಹಾಗೂ ನಮ್ಮ ಕಸಾಪ ಬಳಗದ ಸದಸ್ಯರೆಲ್ಲರ ಸದಾಶಯ.
ಈಶ್ವರಪ್ಪ ಎ. ರೇವಡಿ
ಶಿಕ್ಷಕರು, ನಿಕಟಪೂರ್ವ ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ
ರೋಣ-ಗಜೇಂದ್ರಗಡ
.
ಇದು...ಸರಿಯಲ್ಲ ಎಂದು ಹೇಗೆ
ಸಮರ್ಥಿಸಿಕೊಳ್ಳಲಿ...!! ತಾಯಿ...
ಇಂತಹ ಕೃತ್ಯಕ್ಕೆ ಅನಾದಿಕಾಲದಿಂದಲೂ
ಇತಿಹಾಸವಿದೆ, ಪ್ರೋತ್ಸಾಹವಿದೆ, ಅನುಕಂಪವಿದೆ
ಹೋರಾಟವು ಇದೆ..!! ನಿಸ್ಸಹಾಯಕತೆಯೂ ಇದೆ..
ಇಲ್ಲಿ ಯಾರನ್ನೂ ದೂಷಿಸಲಿ..!! ಅಕ್ಕ..
ಕಾಲಕಾಲಕ್ಕೆ ಅಜ್ಞಾನವನ್ನು ಹೊಡೆದೊಡಿಸುವಂತಹ
ಜ್ಞಾನಿಗಳನ್ನೆ ಹುರಿದು ಮುಕ್ಕಿಬಿಟ್ಟಿದ್ದೇವೆ..
ಈಗೇನಿದ್ದರೂ ಜಾತಿಗಾಗಿ ಬಡಿದೆಬ್ಬಿಸುವ ಕಾವಿಗಳು,
ಸರಿಯೋ-ತಪ್ಪೊ ವಿಮರ್ಶಿಸದೆ ಪತ್ವಾ ಹೊರಡಿಸುವ ಮೌಲ್ವಿಗಳು!!
ಯಾವ ನೆಲವಾದರೇನು ಕಬಳಿಸಲು ಬಾಯ್ತೆರೆದು
ಕುಳಿತ ಕ್ರೈಸ್ತ ಮಿಶನರಿಗಳು..!!
ಇವುಗಳೆಲ್ಲದರ ಗೊಡವೆಗಳ ನಡುವೆ ನಿನ್ನ ಕೂಗು
ಕೇಳಿಸುವುದೆ...
ಜಾತಿಯ ಸೌಧಕ್ಕೆ ಎಲ್ಲ (ಅ)ಜ್ಞಾನಿಗಳು ಒಂದೊಂದಾಗಿ
ಇಟ್ಟಿಗೆಯನ್ನು ಕಟ್ಟುತ್ತಾ ಬಂದವರಲ್ಲವೆ ತಾಯಿ..
ಅದರ ಕಂದರದೊಳಗೆ ಬಿದ್ದು, ಬೆಂದು, ಉರಿದು
ಹೋಗುವವರು ನಮ್ಮಂತಹ ನಿಸ್ಸಹಾಯಕರೆ ಅಲ್ಲವೇ?
ಇಷ್ಟರ ಮೇಲೆ ಬೆಳೆ ಬೇಯಿಸಿಕೊಳ್ಳುವವರ ಸಂಖ್ಯೆಗೆನೂ
ಕಡಿಮೆ ಇಲ್ಲ..!!
ಏನು ಮಾಡುವುದು..!! ನಿಟ್ಟುಸಿರೊಂದನ್ನು ಹೊರಚೆಲ್ಲಿ
ಜಿಟಿಜಿಟಿ ಸುರಿಯುವ ಮಳೆಯಲ್ಲಿ, ತಂಪು ಗಾಳಿಯೊಡಗೂಡಿ
ಬಿಸಿಬಿಸಿ ಎರಡು ಬೊಂಡಾ, ಒಂದು ಕಾಫೀಯನ್ನು ಹೀರುತ್ತ
ಛೇ.. ಹೀಗಾಗಬಾರದಿತ್ತೆಂದು ಲೊಚಗುಟ್ಟಿದರೆ ಸಾಕು
ಇಲ್ಲದಿದ್ದರೆ ಅವರ ಕಪ್ ನಲ್ಲಿ ನೊಣ ಬಿದ್ದು ಸತ್ತು ಹೋಗಿಬಿಟ್ಟರೆ..!! ಅನಾಮತ್ತು ಮೂವತ್ತು ರೂಪಾಯಿ ಲುಕ್ಸಾನು..
ಈ ಮಣ್ಣಿನಲ್ಲಿ ಯಾವುದಕ್ಕೂ ಕೊರತೆಯಿಲ್ಲ..!! ಅಕ್ಕ
ಒಂದೆಡೆ ತುಂಬಿ ತುಳುಕುವ ವಿದ್ವತ್ ಕೋಶ...
ಮತ್ತೊಂದೆಡೆ ಅನಕ್ಷರಸ್ಥ ಕೂಪ..!! ಕೈ ಹಿಡಿದೆತ್ತುವವರನ್ನು
ಮಣ್ಣಲ್ಲಿ ಮಣ್ಣಾಗಿಸಿ ಸಂಭ್ರಮಿಸುತ್ತೇವೆ...
ಅದುಮಿ, ತುಳಿದು, ತಿಂದು, ತೇಗಿ ಕೊಬ್ಬಿದವನನ್ನು
ಹೊತ್ತುಕೊಂಡು ಮೆರೆದಾಡುತ್ತೇವೆ... ವಿಪರ್ಯಾಸವಾದರೂ
ಸತ್ಯವಲ್ಲವೇನು..?
ಅಬ್ಬಾ... ಅಂತೂ ಇಂತೂ ನಿನ್ನ ವಿಷಯವಂತೂ
ಕೆಲವರ ಬೆರಳಿಗೆ ಸಾಕಷ್ಟು ಕೆಲಸವನ್ನು ಕೊಟ್ಟಿತು ತಾಯಿ..
ನಿನ್ನನ್ನು ಬೆತ್ತಲಾಗಿಸಿ...., ಬೆಚ್ಚಗಿನ ಗೂಡಿನವರು ಬೆಂಕಿಯನ್ನು
ಕಾಯಿಸಿಕೊಂಡರು, ಹೊಟ್ಟೆಯನ್ನು ತುಂಬಿಸಿಕೊಂಡರು!
ಇವತ್ತಿಗೆ ನಿನ್ನದು, ನಾಳೆಗೆ ಇನ್ನಾರದ್ದೊ... ನಿನ್ನ ಸುದ್ದಿಯಂತೂ
ನಾಳೆಗೆ ರದ್ದಿಯಲ್ಲವೆ...
ಇಟ್ಸ್ ಆಲ್ ರೈಟ್ ಮುಂದಕ್ಕ ಹೋಗೊಣ
ಮಸೀದಿ-ಮಂದಿರ ಚರ್ಚಗಳೆಲ್ಲ ಬಿಕ್ಷೆ
ಬೇಡುವ ಕೇಂದ್ರಗಳಾಗಿ ಮಾರ್ಪಟ್ಟು ಬಿಟ್ಟಿವೆ..!!
ಡೇಬಿಟ್/ಕ್ರೇಡಿಟ್ ಕಾರ್ಡಗಳಿದ್ದರೆ ಮಾತ್ರ... ಕಲಿಯಗದ
ಶ್ರೀಮಂತ ಅಲ್ಲಾ-ಯೇಸು-ದೇವರುಗಳ ದರ್ಶನ
ವಾಗುವುದು ಸಾಕಿ...
ದೇಹಿ ಎಂದು ಹೋದವರೆಲ್ಲ... ದೀನವಾಗಿ
ಸುಡು ಬಿಸಿಲಿನಲ್ಲಿ, ಕಂಕುಳಲ್ಲೊ..ಹೆಗಲ ಮೇಲೊ
ಮಕ್ಕಳನ್ನು ಹೊತ್ತುಕೊಂಡು ಕಾಯುತ್ತಿರಬೇಕಷ್ಟೆ..!!
ಅವರು ಮೆಕ್ಕಾಗೆ ಹೋದರೆ, ಇವರು ಕಾಶಿಯನ್ನು
ಸುತ್ತಿ ಬಂದರು ಮತ್ತವರು ಜೆರುಸೇಲಂ ಗೆ ಹೋಗಿದ್ದರು
ಮತ್ತೊಂದಿಷ್ಟು ಜನ..... ಹಾಲು-ತುಪ್ಪ
ಕುರಿ-ಕೋಳಿಗಳನ್ನು ಬಲಿ ಕೊಡುವ ದೇವ-ದೇವತೆಯರನ್ನು
ಪೂಜಿಸಿದರು-ಆರಾಧಿಸುತ್ತಿರುವರು ಸಾಕಿ...
ಅಲ್ಲಿ, ಇಲ್ಲಿ, ಮತ್ತೆಲ್ಲಿಗೋ... ಹೋಗಿ ಬಂದವರು
ಸಂತರಾದರೂ..? ಸಮಾಜಕ್ಕೆ ಮಾದರಿಯಾದರೂ..?
ಲೋಕೊದ್ಧಾರಕರಾದರೊ..? ಹೋಗಲಿ ಮನೆಯನ್ನು
ಬಿಡಿ... ಮನಸ್ಸಿಗಾದರೂ ಶಾಂತಿ ದಕ್ಕಿದೇಯಾ..?
ಯಾವ ಕಂಪೋಡಿನ ಹತ್ತಿರ ಹೋದರೂ...
ಕಾಮದ ಘಮಟು ವಾಸನೆ ಮೂಗಿಗೆ ಬಡೆಯುತ್ತದೆ..!!
ಕಟ್ಟಡಗಳ ಯಾವ ಮೂಲೆಯೂ ಸಾಕಾಗುತ್ತಿಲ್ಲ
ಕಂತೆ..ಕಂತೆಗಳ ಮೂಟೆಯನ್ನು ಒಟ್ಟಲು
ಸಾಕಿ....
ಕೋರ್ಟಿನ ಕಟಕಟೆಗಳಿಗೂ ಗೆದ್ದಲು ಹತ್ತಿರಬಹುದು!
ಜೈಲಿನ ಕಂಬಿಗಳಿಗೂ.. ತುಕ್ಕು ಹಿಡಿದಿರಬಹುದು..!!
ಶಿಕ್ಷೆಯನ್ನು ಬರೆಯುವ ಲೇಖನಿಯ ಮಸಿಯು ಮಂಕಾಗಿರಬಹುದು...!!
ಎಲ್ಲವನ್ನೂ... ಗೆದ್ದವೆಂದುಕೊಂಡವರು... ಮೇಲಿನವನ
ಲೆಕ್ಕದಿಂದ ನುಣುಚಿಕೊಳ್ಳಬಲ್ಲರಾ...?
ಜಗತ್ತಿನ ಬಗ್ಗೆ ನೀನು
ಯಾವತ್ತೂ ತಲೆಯನ್ನು
ಕೆಡಸಿಕೊಳ್ಳಬೇಡ..!! ಅದು
ಯಾವಾಗಲೂ ಸುಟ್ಟು ಉರಿದು
ಬೂದಿಯಾಗುವುದನ್ನೇ....
ಕಾಯುತ್ತಿರುತ್ತದೆ ರಂಗೀ....
ನಮ್ಮ ಬುಡಕ್ಕೆ ನಾವೆ...
ನೀರೇರೆದುಕೊಳ್ಳಬೇಕು..!!
ಬಿರುಗಾಳಿಗೂ ಬೇರುಗಳು
ಜಗ್ಗದಂತೆ..!!
ನಿನ್ನದೊಂದು ಸಿಹಿಯೋ..ಅಥವಾ
ಕಹಿ ಮುತ್ತಿಗಾಗಿ ನಾನು
ಬೇಲಿ ಮೇಲಿನ ಹೂವಾಗಿ
ಅರಳಿಬಿಡುತ್ತೇನೆ
ಗೆಳೆಯ...
ಮತ್ತೊಂದು ದುಂಬಿಯ
ದಾಳಿಗೆ ಸಿಕ್ಕು ನಲುಗಿ
ಹೋಗದಂತೆ
ಕಾಪಿಟ್ಟುಕೊಳ್ಳುವೇಯಾ..?
ಇಲ್ಲಿ...ಹೂವಾದರೇನು?
ಹೆಣ್ಣಾದರೇನು..? ಸೌಂದರ್ಯದ
ಘಮಲಿನಮಲು ಇರುವವರೆಗೆ
ಮಾತ್ರ ಬೆಲೆ
ಗೆಳೆಯ...
ಆಸ್ವಾದಿಸುವವರೆಲ್ಲ
ರಸಿಕರೆ..? ಎಂದು ಹೇಗೆ
ಕರೆಯಲಿ... ಮುಡಿಯ
ಮಲ್ಲಿಗೆಯನ್ನೆ.. ಹೊಸಕಿ
ಹಾಕುವ ಜನರಿಹರಿಲ್ಲಿ...!!
ನೀನು ಹೊರಟು ಹೋದ
ದಾರಿಯನ್ನೇನು...ನಾನು
ನೆನಪಿಟ್ಟುಕೊಂಡಿಲ್ಲ
ಗೆಳೆಯ...
ಬರುವ ಹಾದಿಯನ್ನೆ
ಕಾಯುತ್ತಿದ್ದೇನೆ...!!
ಕವಲಾಗಿಸಿಬಿಡಬೇಡ
ಯಾಕೇ....
ಎಲ್ಲರೂ ನೋವಿನಲ್ಲಿರುವಾಗ
ವೀಣೆಯನ್ನೆ...ನುಡಿಸುತ್ತಾರೆ
ಎಂಬುದು ನನಗರಿವಾಗಿರಲಿಲ್ಲ
ಗೆಳೆಯ...
ಈಗರಿವಾಯಿತು... ನೋಡು
ಬಿಟ್ಟು ಹೋದ ನಿನ್ನ ನೋವಿನ
ನೆನಪುಗಳ ತೊಡೆದು
ಹಾಕಲು ಈ ತಂತಿಗಳ
ನಾದವೇ.... ಮದ್ದೆಂಬುದು..
ಹೂವಿನಂತವಳು....ನೀ
ಹೂವಿಗೆ ನೋವು ಕೊಟ್ಟರೆ
ಹೇಗೆ ಹೇಳು..
ರಂಗೀ...
ಚುಚ್ಚು ಮಾತುಗಳಿಂದ
ನನ್ನೆದೆಯನ್ನು
ಇರಿದಿದ್ದೆ ಸಾಕಿತ್ತು..!!
ಯಾವ ಧರ್ಮದ
ದೇವರನ್ನು ಅಮೃತ ಶಿಲೆಯಲ್ಲಿ
ಕೆತ್ತಿಸಿಟ್ಟರೇನಾಯಿತು?
ಪೂಜಿಸುವ ಎದೆಗಳೆ
ಕಲ್ಲಾಗಿ ಹೋಗಿರುವಾಗ..!!!
ರಂಗೀ...
ಕತ್ತಲು... ಕಳೆದು, ಬೆಳಕನ್ನು
ಸಂಭ್ರಮಿಸುವುದಾದರು
ಯಾವಾಗ..? ಪ್ರೀತಿಯನ್ನು
ಹಂಚುವ ಕೈಯಲ್ಲಿ
ಬಂದೂಕನ್ನು ಹಿಡಿದಿರುವಾಗ..!!!
ಅವಳು ಹೊರಟು
ಹೋದ ಮೇಲೆ... ಹೆಚ್ಚು
ಗಾಬರಿಗೊಂಡುಬಿಟ್ಟಿದ್ದೆ..!!
ಜಗತ್ತು ನನ್ನ ಬಗ್ಗೆ ಏನೆಲ್ಲ
ಯೋಚಿಸುತ್ತದೆ ಅಂತಾ
ರಂಗೀ....
ಯಾವ ಮಣ್ಣಿನಲ್ಲಿ...
ಮಡಿದ ಯೋಧರನ್ನು
ನೆನಪಿಸಿಕೊಳ್ಳುವುದಿಲ್ಲವೊ
ಅಂತವರು ನನ್ನ ಬಗ್ಗೆ ಯಾವ
ರೀತಿಯ ಕಾಳಜಿಯನ್ನು ಮಾಡುತ್ತಾರೆ
ಬಿಡು...
ಯಾರೋ... ಹೇಳಿದರು
ಅವಳ ಕೆನ್ನೆ ರೇಷ್ಮೆಗಿಂತಲೂ
ಮೃದುವಾಗಿದೆ ಎಂದು
ರಂಗೀ....
ಮುಟ್ಟಲು ಹೋದೆ..!!
ನನ್ನ ಕೆನ್ನೆಗೆ ಕರೆಂಟ್
ಹೊಡೆದಂತಹ
ಅನುಭವವಾಯಿತು..!!
ಅವಳು ಕೈ ಬಿಟ್ಟಳೆಂದು
ನನ್ನ ಪಾಲಿನ ಜಗತ್ತು
ಮುಗಿದು ಹೋಯಿತೆಂದು
ಕಣ್ಮುಚ್ಚಿಕೊಂಡು ಬಿಟ್ಟೆ
ರಂಗೀ....
ಅಲ್ಲಿ ನನ್ನ
ತಾಯಿ ಕಂಡಳು....
ಮತ್ತೊಂದು ಹೊಸ
ಜಗತ್ತು ತೆರೆದುಕೊಂಡಿತು.
ಆ ದೀಪವನ್ನು
ಆರಿಸಿಬಿಡು
ರಂಗೀ....
ಬಾಳಲ್ಲಿ ಬೆಳಕಾಗ
ಬೇಕಾದವಳೆ,
ಎಂದೋ...ಕತ್ತಲೆಗೆ
ದೂಡಿ ಹೋಗಿದ್ದಾಳೆ...
ಎದೆಯ ದುಃಖವನ್ನು
ಯಾರೊಂದಿಗೂ ನಾನು
ಹಂಚಿಕೊಳ್ಳಲಾರೆ... ಬೇಕಿದ್ದರೆ
ಚೂರು ವಿಷವನ್ನು ಕೊಟ್ಟುಬಿಡಲಿ
ನುಂಗಿ ಬಿಡುತ್ತೇನೆ...!!
ರಂಗೀ...
ಆ ವಿಷವು ನನ್ನನ್ನು ಕೊಲ್ಲುವುದು
ಇಲ್ಲವೋ... ಗೊತ್ತಿಲ್ಲ..!!
ಅಷ್ಟೊಂದು ನಂಜೆರಿಬಿಟ್ಟಿದೆ
ದೇಹದಲ್ಲಿ..
ದುಃಖವು ಒಂದು
ಸಿರಿಯಲ್ಲವೇನು..?
ಎಲ್ಲರಿಗೂ ಅದನ್ನು ಹೇಗೆ
ಹಂಚುತ್ತಾ... ಬರಲಿ
ರಂಗೀ....
ಬಟ್ಟಲು ಮದಿರೆಗೆ
ಜೊತೆಯಾದವರು...
ನೋವಿನಲ್ಲಿ
ಬಾಗಿಯಾಗುವರೇನು?
ಪಾಪ ಕಳೆಯುತ್ತವೆ ಎಂಬ
ಎಲ್ಲ ಹರಿಯುವ ನೀರಿನಲ್ಲೂ
ಅಂಗೈಯನ್ನು ಉಜ್ಜಿ...ಉಜ್ಜಿ
ತೊಳೆದುಕೊಂಡೆ
ರಂಗೀ...
ಕಾಣಿಸಲೆ... ಇಲ್ಲ..
ಯಾವುದು ಇರಬಹುದದು..!!
ಅವಳನ್ನು ಒಲಿಸಿಕೊಂಡವನ
ಅಂಗೈಯ ರೇಖೆ..
ಅವಳ ಕಣ್ಣಂಚಿನಿಂದ
ನನ್ನೆದೆಗೆ ನಂಜನ್ನು
ಸುರಿದುಬಿಟ್ಟರೂ ಸಾಕಿತ್ತು...
ರಂಗೀ...
ಒಲವಿನ ನಶೆಯನ್ನೆ...
ಏರಿಸಿಬಿಟ್ಟಳು...
ವಿರಹದ ನಗರಕ್ಕೆ
ನಾನೇ ರಾಜನೀಗ..
ಏನೂ... ಗೊತ್ತಿಲ್ಲದ
ಅಮಾಯಕ ನಾನು
ನಡೆಯತ್ತಿದ್ದೆ ಬೀದಿಯಲ್ಲಿ
ರಂಗೀ....
ಅವಳು ನಕ್ಕುಬಿಟ್ಟಳು
ಬದುಕಿನ ಹಾದಿಯೆ
ಬದಲಾಗಿ ಹೋಯಿತು..!!
ಹೇಳಿದ ಅದೇಷ್ಟೊ..
ಮಾತುಗಳಿಗವಳು
ಕಿವಿಯಾಗಲೆ ಇಲ್ಲ
ರಂಗೀ...
ಹಿತ್ತಲಿನಲ್ಲಿ ಹಚ್ಚಿದ್ದ
ಹೂವಿನ ಗಿಡಗಳು
ಬಾಡಿ ಹೋಗುತ್ತೀವೆ..
ಹುಟ್ಟಿದವರ ಕೊನೆಯ
ನಿಲ್ದಾಣ ಇದೆ...ತಾನೇ..?
ನಾನೇನು ಹೊತ್ತು ತರಲಿಲ್ಲ
ರಂಗೀ....
ನನ್ನವರೇ...ಇಲ್ಲಿ
ನನ್ನನ್ನು ಸುಟ್ಟು
ಹಾಕಿದರು....
ಅವಳು ನನ್ನನ್ನು
ಬದಲಿಸಿದಳು....
ಜಗತ್ತು ನನ್ಮನ್ನು
ಬದಲಿಸಲಿಲ್ಲ..!
ರಂಗೀ..
ಜಗತ್ತಿಗೆ ನನ್ನ
ಅವಶ್ತಕತೆ ಇತ್ತು
ಅವಳಿಗೆ ಮಾತ್ರ ನನ್ನ
ಜರೂರತ್ತು ಇರಲಿಲ್ಲ.
ಎಲ್ಲರೂ...ಕೇಳಿದರು
ನಿನ್ನೆದೆಗೆ ಗಾಯವನ್ನು
ಮಾಡಿದವರು ಯಾರು..?
ರಂಗೀ...
ಹೇಗೆ ಹೇಳಲಿ....
ಆಕೆಯಿನ್ನೂ... ಮುಖದ
ಪರದೆಯನ್ನೆ ಸರಿಸಿಲ್ಲ..!!
ಕೇವಲ.... ಅವಳ ನಗೆಯ
ಸದ್ದನ್ನು ಕೇಳಿ.. ಎದೆಯ ಹಕ್ಕಿ
ಬೇಟೆಗಾರ ಬಿಸಿದ ಬಲೆಗೆ ಸಿಕ್ಕು
ವಿಲವಿಲನೆ ಒದ್ದಾಡುವಂತೆ
ಮಾಡಿಬಿಟ್ಟಿದೆ ರಂಗೀ...
ಇನ್ನವಳು... ಎದುರಿಗೆ
ಬಂದು ಬಿಟ್ಟರೆ...!!
ಇಂದವಳ ಪಾದವನ್ನು
ಸ್ಪರ್ಶಿಸಿದೆ ರಂಗೀ...
ಹೂವಿಗಿಂತಲೂ...
ಮೃದುವಾಗಿದೆ ಆದರೂ
ಅದರೊಳಗಿನ ಗಂಧ
ಇಲ್ಲಿ ಸಿಗಲಿಲ್ಲ..
ಪ್ರೀತಿಯೆಂಬುದು
ಕೆಸರಿದ್ದ ಹಾಗೆ...
ಒಮ್ಮೆ ಇಳಿದರೆ
ಎದ್ದು ಬರುವುದು ಕಷ್ಟ..!!
ಗೆಳೆಯ...
ಅಲ್ಲಿ ಸುಮ್ಮನೆ
ಕಾಲಹರಣ ಮಾಡಬಾರದು
ಮಾಡಿದರೆ....
ಯೌವ್ವನಕ್ಕೆ ನಷ್ಟ..!!
ಅವಳ
ತುಟಿಯಂಚಿನಲ್ಲಿ
ಹೇಗೆ ಇಷ್ಟೊಂದು
ಸಿಹಿಯಿದೆ
ರಂಗೀ...
ಬಹುಶಃ ಅವಳಿಗೆ
ಇದ್ದಿರಬಹದೇನೊ
ಸಕ್ಕರೆಯ ಕಾಯಿಲೆ 😝
ಮುರಿದು ಬೀಳುವ
ಸಂಬಂಧಗಳಿಗೇತಕೆ
ಮನಸ್ಸು ಹಾತೊರೆಯುತ್ತದೆ
ರಂಗೀ...
ಖಾರ ಅರಿಯುವವರ
ಮಧ್ಯದಲ್ಲಿ...
ಬೆಣ್ಣೆ ತಿನ್ನುವವನಿಗೇನು
ಕೆಲಸ..
ಕವಿತೆ...ಘಜಲ್
ಶಾಯರಿಗಳನ್ನು
ಬರೆದು ನನ್ನ ದುಃಖವನ್ನು
ಮರೆಯುತ್ತೇನೆ ಎನ್ನುವುದು
ನಿಜವಾದರೆ ರಂಗೀ...
ಮದ್ಯವನ್ನು ಮುಟ್ಟದೆ
ಅವಳ ಕಹಿ ನೆನಪುಗಳನ್ನು
ಕೊಲ್ಲಬಲ್ಲೆ ಎಂಬುದು
ಸತ್ಯ..
ಎದೆಯ ಮೇಲಿನ
ಖಾಲಿ ಜೇಬು...ಸಂಬಂಧಗಳ
ನಡುವೆ ಅಳೆದು ತೂಗಿ
ಕೂರಿಸುತ್ತದೆ
ರಂಗೀ...
ಖಾತೆ ಚಲಾವಣೆ ಇಲ್ಲವೆಂದ
ಮೇಲೆ.. ಅವರ ಪಟ್ಟಿಯಲ್ಲಿ
ನಮ್ಮ ಹೆಸರನ್ನು ಹುಡುಕುವುದು
ಹುಚ್ಚತನವಲ್ಲದೆ..
ಬೆರಿನ್ನೇನು..?
ಮೊನ್ನೆ-ನಿನ್ನೆ ಕೂಡಿ
ನಡೆದ ದಾರಿಗಳೆಲ್ಲ
ಈಗ ಹೆದ್ದಾರಿಗಳಾಗಿವೆ
ರಂಗೀ...
ನಡೆಯುವ ಹಾದಿಗಳೆ
ವಿಸ್ತಾರವಾಗಿರುವಾಗ...
ಇಂದೇಕೆ ನಿನ್ನ ಮನಸ್ಸು
ಸಂಕುಚಿತಗೊಳ್ಳುತ್ತಿದೆ..!!
ನಮ್ಮ ಪ್ರೀತಿ....
ಹರಿಯುವ ನೀರಿನಲ್ಲಿ
ಬಿಟ್ಟ ಕಾಗದದ
ದೋಣಿಯಂತಾಯಿತಲ್ಲ..!!
ಗೆಳೆಯ....
ಹುಟ್ಟು ಹಾಕುವ
ಮೊದಲೇ... ಕೈ ಚೆಲ್ಲಿ
ಕುಳಿತರೆ...
ತೀರದ ಮೇಲಿನ ದುರಾಸೆ
ತಪ್ಪಲ್ಲವೇನು..?
ಜನರು ಆಡಿದ ಚುಚ್ಚು
ಮಾತುಗಳಿಗಿಂತ
ನಿಮ್ಮ ಸೂಜಿಯ
ನೋವೇನು ದೊಡ್ಡದಲ್ಲ
ಬಿಡಿ ಡಾಕ್ಟ್ರೆ.....
ಕೆಲವೊಂದು ಕಾಯಿಲೆಗಳಿಗೆ
ಔಷಧಿಯ ಅವಶ್ಯಕತೆ
ಇರುವುದಿಲ್ಲ... ಭರವಸೆಯ
ನಾಲ್ಕು ಮಾತುಗಳೆ
ಸಂಜೀವಿನಿಯಾಗಿ ಬಿಡುತ್ತವೆ.
ಮುರಿದು ಬೀಳುವ
ಸಂಬಂಧಗಳಿಗೇತಕೆ
ಮನಸ್ಸು ಹಾತೊರೆಯುತ್ತದೆ
ರಂಗೀ...
ಖಾರ ಅರಿಯುವವರ
ಮಧ್ಯದಲ್ಲಿ...
ಬೆಣ್ಣೆ ತಿನ್ನುವವನಿಗೇನು
ಕೆಲಸ..
ಜಗತ್ತಿನ ಬಗ್ಗೆ ನೀನು
ಯಾವತ್ತೂ ತಲೆಯನ್ನು
ಕೆಡಸಿಕೊಳ್ಳಬೇಡ..!! ಅದು
ಯಾವಾಗಲೂ ಸುಟ್ಟು ಉರಿದು
ಬೂದಿಯಾಗುವುದನ್ನೇ....
ಕಾಯುತ್ತಿರುತ್ತದೆ ರಂಗೀ....
ನಮ್ಮ ಬುಡಕ್ಕೆ ನಾವೆ...
ನೀರೇರೆದುಕೊಳ್ಳಬೇಕು..!!
ಬಿರುಗಾಳಿಗೂ ಬೇರುಗಳು
ಜಗ್ಗದಂತೆ..!!
ನಿನ್ನದೊಂದು ಸಿಹಿಯೋ..ಅಥವಾ
ಕಹಿ ಮುತ್ತಿಗಾಗಿ ನಾನು
ಬೇಲಿ ಮೇಲಿನ ಹೂವಾಗಿ
ಅರಳಿಬಿಡುತ್ತೇನೆ
ಗೆಳೆಯ...
ಮತ್ತೊಂದು ದುಂಬಿಯ
ದಾಳಿಗೆ ಸಿಕ್ಕು ನಲುಗಿ
ಹೋಗದಂತೆ
ಕಾಪಿಟ್ಟುಕೊಳ್ಳುವೇಯಾ..?
ಇಲ್ಲಿ...ಹೂವಾದರೇನು?
ಹೆಣ್ಣಾದರೇನು..? ಸೌಂದರ್ಯದ
ಘಮಲಿನಮಲು ಇರುವವರೆಗೆ
ಮಾತ್ರ ಬೆಲೆ
ಗೆಳೆಯ...
ಆಸ್ವಾದಿಸುವವರೆಲ್ಲ
ರಸಿಕರೆ..? ಎಂದು ಹೇಗೆ
ಕರೆಯಲಿ... ಮುಡಿಯ
ಮಲ್ಲಿಗೆಯನ್ನೆ.. ಹೊಸಕಿ
ಹಾಕುವ ಜನರಿಹರಿಲ್ಲಿ...!!
ನೀನು ಹೊರಟು ಹೋದ
ದಾರಿಯನ್ನೇನು...ನಾನು
ನೆನಪಿಟ್ಟುಕೊಂಡಿಲ್ಲ
ಗೆಳೆಯ...
ಬರುವ ಹಾದಿಯನ್ನೆ
ಕಾಯುತ್ತಿದ್ದೇನೆ...!!
ಕವಲಾಗಿಸಿಬಿಡಬೇಡ
ಯಾಕೇ....
ಎಲ್ಲರೂ ನೋವಿನಲ್ಲಿರುವಾಗ
ವೀಣೆಯನ್ನೆ...ನುಡಿಸುತ್ತಾರೆ
ಎಂಬುದು ನನಗರಿವಾಗಿರಲಿಲ್ಲ
ಗೆಳೆಯ...
ಈಗರಿವಾಯಿತು... ನೋಡು
ಬಿಟ್ಟು ಹೋದ ನಿನ್ನ ನೋವಿನ
ನೆನಪುಗಳ ತೊಡೆದು
ಹಾಕಲು ಈ ತಂತಿಗಳ
ನಾದವೇ.... ಮದ್ದೆಂಬುದು..
ಹೂವಿನಂತವಳು....ನೀ
ಹೂವಿಗೆ ನೋವು ಕೊಟ್ಟರೆ
ಹೇಗೆ ಹೇಳು..
ರಂಗೀ...
ಚುಚ್ಚು ಮಾತುಗಳಿಂದ
ನನ್ನೆದೆಯನ್ನು
ಇರಿದಿದ್ದೆ ಸಾಕಿತ್ತು..!!
ಯಾವ ಧರ್ಮದ
ದೇವರನ್ನು ಅಮೃತ ಶಿಲೆಯಲ್ಲಿ
ಕೆತ್ತಿಸಿಟ್ಟರೇನಾಯಿತು?
ಪೂಜಿಸುವ ಎದೆಗಳೆ
ಕಲ್ಲಾಗಿ ಹೋಗಿರುವಾಗ..!!!
ರಂಗೀ...
ಕತ್ತಲು... ಕಳೆದು, ಬೆಳಕನ್ನು
ಸಂಭ್ರಮಿಸುವುದಾದರು
ಯಾವಾಗ..? ಪ್ರೀತಿಯನ್ನು
ಹಂಚುವ ಕೈಯಲ್ಲಿ
ಬಂದೂಕನ್ನು ಹಿಡಿದಿರುವಾಗ..!!!
ಮಸೀದಿ-ಮಂದಿರ ಚರ್ಚಗಳೆಲ್ಲ ಬಿಕ್ಷೆ
ಬೇಡುವ ಕೇಂದ್ರಗಳಾಗಿ ಮಾರ್ಪಟ್ಟು ಬಿಟ್ಟಿವೆ..!!
ಡೇಬಿಟ್/ಕ್ರೇಡಿಟ್ ಕಾರ್ಡಗಳಿದ್ದರೆ ಮಾತ್ರ... ಕಲಿಯಗದ
ಶ್ರೀಮಂತ ಅಲ್ಲಾ-ಯೇಸು-ದೇವರುಗಳ ದರ್ಶನ
ವಾಗುವುದು ಸಾಕಿ...
ದೇಹಿ ಎಂದು ಹೋದವರೆಲ್ಲ... ದೀನವಾಗಿ
ಸುಡು ಬಿಸಿಲಿನಲ್ಲಿ, ಕಂಕುಳಲ್ಲೊ..ಹೆಗಲ ಮೇಲೊ
ಮಕ್ಕಳನ್ನು ಹೊತ್ತುಕೊಂಡು ಕಾಯುತ್ತಿರಬೇಕಷ್ಟೆ..!!
ಅವರು ಮೆಕ್ಕಾಗೆ ಹೋದರೆ, ಇವರು ಕಾಶಿಯನ್ನು
ಸುತ್ತಿ ಬಂದರು ಮತ್ತವರು ಜೆರುಸೇಲಂ ಗೆ ಹೋಗಿದ್ದರು
ಮತ್ತೊಂದಿಷ್ಟು ಜನ..... ಹಾಲು-ತುಪ್ಪ
ಕುರಿ-ಕೋಳಿಗಳನ್ನು ಬಲಿ ಕೊಡುವ ದೇವ-ದೇವತೆಯರನ್ನು
ಪೂಜಿಸಿದರು-ಆರಾಧಿಸುತ್ತಿರುವರು ಸಾಕಿ...
ಅಲ್ಲಿ, ಇಲ್ಲಿ, ಮತ್ತೆಲ್ಲಿಗೋ... ಹೋಗಿ ಬಂದವರು
ಸಂತರಾದರೂ..? ಸಮಾಜಕ್ಕೆ ಮಾದರಿಯಾದರೂ..?
ಲೋಕೊದ್ಧಾರಕರಾದರೊ..? ಹೋಗಲಿ ಮನೆಯನ್ನು
ಬಿಡಿ... ಮನಸ್ಸಿಗಾದರೂ ಶಾಂತಿ ದಕ್ಕಿದೇಯಾ..?
ಯಾವ ಕಂಪೋಡಿನ ಹತ್ತಿರ ಹೋದರೂ...
ಕಾಮದ ಘಮಟು ವಾಸನೆ ಮೂಗಿಗೆ ಬಡೆಯುತ್ತದೆ..!!
ಕಟ್ಟಡಗಳ ಯಾವ ಮೂಲೆಯೂ ಸಾಕಾಗುತ್ತಿಲ್ಲ
ಕಂತೆ..ಕಂತೆಗಳ ಮೂಟೆಯನ್ನು ಒಟ್ಟಲು
ಸಾಕಿ....
ಕೋರ್ಟಿನ ಕಟಕಟೆಗಳಿಗೂ ಗೆದ್ದಲು ಹತ್ತಿರಬಹುದು!
ಜೈಲಿನ ಕಂಬಿಗಳಿಗೂ.. ತುಕ್ಕು ಹಿಡಿದಿರಬಹುದು..!!
ಶಿಕ್ಷೆಯನ್ನು ಬರೆಯುವ ಲೇಖನಿಯ ಮಸಿಯು ಮಂಕಾಗಿರಬಹುದು...!!
ಎಲ್ಲವನ್ನೂ... ಗೆದ್ದವೆಂದುಕೊಂಡವರು... ಮೇಲಿನವನ
ಲೆಕ್ಕದಿಂದ ನುಣುಚಿಕೊಳ್ಳಬಲ್ಲರಾ...?
ನಿನ್ನ ಅವಳ ಪ್ರೇಮ ಚರಿತ್ರೆಯನ್ನು
ಬರೆದ ಗೋಡೆಗಳ ಮೇಲೀಗ, ಎಲೆಯಡಿಕೆ
ಜಗಿದುಗುಳಿದ ಕೆಂಪು ಕಲೆಯಿಂದಲೆ ತುಂಬಿ ಹೋಗಿದೆ
ಗಾಲೀಬ್...!!
ಅದಕ್ಕೂ... ಇನ್ನೇನು ಕೆಲವೆ ದಿನಗಳಲ್ಲಿ
ಬಣ್ಣವನ್ನು ಬಳೆದುಬಿಡುತ್ತಾರೆ..!!
ಹಚ್ಚಿದಷ್ಟು ನೆರೆತು ಹೋಗುವ ತಲೆಗೂದಲುಗಳಿಗೆ
ಸವರಿದಂತೆ
ಮಧುಶಾಲೆಯಿಂದ ಎದ್ದು ಹೋದವರು...
ಮರಳಿಬಂದ ಇತಿಹಾಸವೇ.. ಇಲ್ಲ..!!
ಅವರೇನು ಭೋದಿ ವೃಕ್ಷದ ಕೆಳಗೆ ಕುಳಿತು
ಜ್ಞಾನವನ್ನೇನು ಹೊಂದಲಿಲ್ಲ.... ಬದಲಾಗಿ
ಆ ಮರದ ಬೇರಿಗೆ ಗೊಬ್ಬರವಾಗಿ ಮಣ್ಣಾಗಿ ಹೋಗಿದ್ದಾರೆ
ಗಾಲೀಬ್...
ಅವರಿಗೆ ಮೊದಲೆ ಹೇಳಿದ್ದೆ.. ನಾನು ಕೊಡುವುದು
ಅಮೃವಲ್ಲ ವಿಷವೆಂದು..ಆದರೂ.. ಗುಟುಕರಿಸಿ
ಕುಡಿಯುತ್ತ, ನಗುತ್ತ, ಅಳುತ್ತ, ನೋವನೆಲ್ಲ ಗೆದ್ದವರ
ಹಾಗೆ ಬೀಗುತ್ತಿದ್ದರಷ್ಟೆ...
ಅವಳ ಪಾದವ ತೊಳೆದು ನೀರು
ಕುಡಿದವರೆಲ್ಲ... ನನ್ನ ಮಧು ಶಾಲೆಯ
ಮಧುವನ್ನು ಹೀರದೆ ಹೋದವರೇನು..?
ಗಾಲಿಬ್...
ಬದುಕಿನ ಕೊನೆಯ ಉಸಿರಿನವರೆಗೂ ಅವಳೆಂದಿಗೂ
ತೀರದ ದಾಹದಂತೆ.... ಹನಿ... ಹನಿ... ಪ್ರೀತಿಗಾಗಿ
ಚಡಪಡಿಸಿ, ತಡವರಿಸುತ್ತ, ನರಳಾಡುತ್ತಿರಬೇಕಷ್ಟೆ...
ಯಾರೋ ಹೇಳಿದರು ಬಿಕ್ಕುತ್ತಿರುವ ನಿನ್ನ
ಗಂಟಲಿಗೆ, ಗಂಗಾಜಲವನ್ನು ಸುರಿಯಿರೆಂದು...
ಅವರಿಗೆಲ್ಲ ಏನು ಗೊತ್ತು? ಬೇಕಿರುವುದು ಹನಿ ಮಧು.!!
ಉಸಿರು ನಿಲ್ಲಲು ಅವಳ ಕೊನೆಯ ಭೇಟಿ ಅಲ್ಲವೆ
ಗಾಲೀಬ್....!!
ಉರಿದು.. ಸುಟ್ಟು ಹೋದ ನಿನ್ನ ಭಸ್ಮವನ್ನು...
ಅವಳ ಮೇಲ್ಮುದ್ದೆ ಮಾಳಿಗೆಯಲ್ಲಿ ಸುರಿದು ಬರುವೆ..
ಜಿಟಿಜಿಟಿಯಾಗಿ... ಸುರಿಯುವ ಮಳೆಯ ಹನಿಗಳು
ಬೂದಿಯೊಡಗೂಡಿ ಜಂತಿಯ ಒಳಗಿಳಿದು, ಅವಳ
ಪಾದದ ಮೇಲೆ ಬಿದ್ದು ತೋಯಿಸಿ ಹೋದರೆ.....
ನಿನ್ನ ಸಾವು ಸಾರ್ಥಕವಲ್ಲವೇನು...?
ಪದಕ್ಕ ಪದ ಪೋಣಿಸಿ ನೂರಾರು
ಕವಿತಾ ಬರ್ದ ಕೊಡೊದಿಕ್ಕ ಕೈಗೆನಾಗತ್ತ ಬ್ಯಾನಿ!!
ಪೈಸೆಗೆ ಪೈಸೆ ಕೂಡಿಸಿ ಕೆಂಪ....ನ
ಗುಲಾಬಿ ತಂದಿನಿ, ಅದ್ಕ ಮಾಡಬ್ಯಾಡ ಹಾನಿ!!
ಮೂರು ಹೊತ್ತು ನಿನ್ನ ಹೆಸರನ್ನ
ಜಪ ಮಾಡ್ಕೊತ ಕುಂತ್ರುನೂ ಹೋಗೊದೇನೈತಿ ಗಂಟು!!
ಮೂರ ಲೋಕದಾಗ ಯಾರೀದ್ದಾರು ನನ್ಹಂಗ
ಬಿಡ್ಸಕೊಬೇಡ ಇದು ಬ್ರಹ್ಮ ಬಿಗಿದ ನಂಟು!!
ದುಡಿಲಿಲ್ಲ ದು:ಖ ಪಡಲಿಲ್ಲ ಅನಬ್ಯಾಡ
ಅರಮನಿ ಇಲ್ಲೇನಾತು.. ತಲಿಮ್ಯಾಲ ಹೊತ್ಗೊತಿನಿ ರಾಣಿ!!
ಷ
######
ಕೋಳಿ ಕೂಗೊ ಮುಂಚೇಕ ಎದ್ದೇಳುವಾಕಿ
ಹೊತ್ತಾತೇಳು ಧಡಿಯಾಂತ ಕತ್ತ್ ಹಿಚ್ಗುವಾಕಿ!!
ನೀರೊಲಿಗೆ ಹಸಿ ಕಟಗಿ ಹಾಕಿ ಕುಂದ್ರಾಕಿ
ಮನಿಯೆಲ್ಲ ಹೊಗಿಯೆಬ್ಬಿಸಿ ಅತಗೊಂತ ಒಡಾಡುವಾಕಿ!!
ಈಕಿ... ನನ್ನಾಕಿ... ಈಕಿ ನನ್ನಾಕಿ...
ಬಿಸಿಬಿಸಿ ರೊಟ್ಟಿ ಬಡ್ದ ಕೊಡ್ತೀನಿ ಬಾ...ಂತ ಕರಿಯುವಾಕಿ
ಸಂತಿನ ಜಾಸ್ತಿ ತಂದಿಲ್ಲಂತ ಚಮಚ ಕಾಸಿ ಬರಿ ಇಡಾಕಿ!!
ನಾ ಉಪವಾಸಿದ್ರು ಸರಿ, ನಿನ್ನ ಹೊಟ್ಟಿ ತಣ್ಣಗಿರ್ಲಿ ಅನ್ನಾಕಿ
ನುಗ್ಗೊಳು ಹಸಿಕಾರ ಚಟ್ನಿ ಕಲ್ ನ್ಯಾಗ ಅರ್ದ್ ತಾಟಿನ ತುಂಬ ಹಚ್ಚಿ ಕೊಡುವಾಕಿ!!
ಈಕಿ... ನನ್ನಾಕಿ ಈಕಿ...ನನ್ನಾಕಿ...!!
ಈ ಸಲದ ಹಬ್ಬಕ್ಕ ಹೊಸಾ ದಡಿ ಸೀರಿನ ಬೇಕನ್ನಾಕಿ
ಹ್ವಾರೆಕ ಹೊಂಟನಿಂತ್ರ, ಛಲೊ ಸೀರಿನ ಹರ್ದ ಬುತ್ತಿರೊಟ್ಟಿ
ಕಟ್ಟಿ ಕಳಸಾಕಿ!!
ಹೊರಗ ಚಾ ಕುಡದೇನಂದ್ರ ಕಿಸೆದನ್ ರೊಕ್ಕಾನೆಲ್ಲ ಕಳುಮಾಡಿರುವಾಕಿ
ಸಂಜಿಕ್ ಮನೆಗ್ ಬಂದ್ನೆಂದ್ರ ನನ್ ಬಿಟ್ಟ ಹೊರಗ
ಏನ್ ತಿಂದ್ ಬಂದ್ರೆಂತ ಕೇಳುವಾಕಿ
ಈಕಿ...ನನ್ನಾಕಿ... ಈಕಿ..... ನನ್ನಾಕಿ
ತವ್ರಿಗೆ ಹೊಕ್ಕೇನಂತ ನಸಿನ್ಯಾಗ ಎದ್ದು ರೆಡಿಯಾಗಾಕಿ
ನೀವೊಬ್ರ ಆಕ್ಕಿರಲ್ಲ ಮನಿಯಾಗಂತಂದು ಗಂಟುಮೂಟಿ
ಹೊರ್ಸಕೊಂಡು ಕರ್ಕೊಂಡ ಹೋಗಾಕಿ!!
ಹೋದಮ್ಯಾಲ ಚಾ ಕುಡಿಯೋಣ ತಡಿರಿ ಅನ್ನಾಕಿ
ಖಾಲಿ ಕುಂತ ಏನ್ಮಾಡ್ತೀರಿ... ಹೊಲದ ಕಡೆಗೆ
ಎಮ್ಮಿನರ ಹೊಡ್ಕೊಂಡ ಹೋಗ್ರಿ ಅಂತ ಕಳಿಸುವಾಕಿ
ಈಕಿ... ನನ್ನಾಕಿ... ಈಕಿ... ನನ್ನಾಕಿ...
ಶಿವನ ನೆತ್ತಿಮ್ಯಾಲಿನ ಗಂಗವ್ವ ಅಪ್ಪಿತಪ್ಪಿಯಾದ್ರೂ
ಇಳ್ದ ಬರಬೊದ್ರಿ.. ಈಕಿ ಸರಿಯೊದಿಲ್ರಿ...
ಕಂಕುಳದಾಗಿನ ಕೂಸನ್ನಾದ್ರು ಮರಿಬೋದು
ನನ್ ಮಾತ್ರ ಮರಿಯೊದಾಗ್ಲಿ, ಬಿಡೊದಾಗ್ಲಿ
ಉಣ್ಸದಾಗ್ಲಿ, ಅಳ್ಸೊದಾಗ್ಲಿ, ನಗ್ಸೊದಾಗ್ಲಿ ಯಾವದಂದ್ರ
ಯಾವುದಕ್ಕೂ ಬಿಡಾಕಲ್ರಿ.. ಈಕಿ.. ಬಿಡಾಕಲ್ರಿ ಈಕಿ
********
ಕಂಬದ ಹಿಂದ ನಿಂತ್ಕೊಂಡ
ಒಂಟಿ ಕಣ್ಣಿಲೆ ಹಿಂಗ ನನ್ ನೋಡಬ್ಯಾಡ!!
ಕಾರ್ತಿಕ ಮಾಸ ಐತಿದು
ಮೈ ಬಣವಿಗೆ ಮೋಹದ ಕಿಚ್ಚ ಹಚ್ಚಬ್ಯಾಡ!!
ಬಂಗಾರ ಬಳೆನ ಯಾಕ
ತರಲಿಲ್ಲಂತ ಸೆಡವು ಮಾಡ್ಕೊಂಡ ಕುಂದ್ರಬ್ಯಾಡ!!
ಬಂಗಾರದಂತ ಮೈಯ್ಯಾಕಿಗೆ ಯಾಕಂತ
ಹಸಿರ ಬಳೆ ತಂದೇನ.. ಹಾಕ್ಕೊಳ್ದ ಇರಬ್ಯಾಡ!!
ಗೌರಿ ಹುಣ್ಮಿ ಬೆಳ್ಕನ್ಯಾಗ
ಆರತಿ ತಾಟ ಹಿಡ್ಕೊಂಡ ಎದುರು ಬರಬ್ಯಾಡ!!
ಮಳ್ಳ ಹುಡ್ಗನ ಎದಿಯಾಗ
ಕೊಡಿ ಬಿದ್ದ ಕೆರಿ ಹಂಗ ಪ್ರೀತಿನ ಉಕ್ಕಸಬ್ಯಾಡ!!
ವಳ್ ನ್ಯಾಗ ರುಬ್ಬಿದ ಹೂರಣದ
ಖಡ್ಬ ಮಾಡಿ ತಾಟಿನ ತುಂಬಿಟ್ಟ ಕೊಡ್ಬೇಡ!!
ಚಮಚ ಆಕಳ ತುಪ್ಪದ್ಕೀನ ನಿನ್
ತುಟಿ ತುಪ್ಪದ ಗಿಂಡಿ ಬೇಕಿತ್ ಅಳತಿ ಮಾಡಬ್ಯಾಡ!!
ಕಡ್ಲಿ ಹೊಲ್ದಾನ ಹುಳಿಹತ್ತಿ ಉರಿಯುವಂಗ
ನನ್ ಮನಸನ್ನ ಉರ್ಸಗೊಂತ ಕುಂದ್ರಬ್ಯಾಡ!!
ಬೇವಿನಕಟ್ಟಿ ಬೆಂದ ಹೊಂಟಾನಿಲ್ಲೆ
ಬೆಣ್ಣಿ ಮಾತಿಲೆ ಮಾತ ಕೊಡೊದ ಮರಿಬ್ಯಾಡ!!
###
ಮಾತನ್ಯಾಗ ಹೇಳಲಿಕ್ ಹೋತು
ನಗುನ್ಯಾಗರ ಒಪ್ಗಿ ಕೊಡಬೇಕಿತ್ತಿಲ್ಲ!!
ಹೋಗುವಾಗ ಹೊಳ್ಳಿ ನೋಡ್ದಿದ್ರೇನಾತು?
ಕೊಟ್ಟ ಹೂವಾನ ಮುಡ್ಕೊಂಡಿದ್ರ ಸಾಕಿತ್ತಿಲ್ಲ!!
ಕಳ್ಸಿದ ಪತ್ರಾನ ಓದ್ಲಿಲ್ಲಂದ್ರೇನಾತು?
ಕಣ್ಣಾಗ ಮಾತಾಡ್ಸಿದ್ರ ಸಾಕಿತ್ತು!!
ಕಳ್ಸಿದ ಮೆಹಂದಿನ ಹಚ್ಗೊಲಿಲ್ಲಂದ್ರಾತು
ನಾಚ್ಕಿಲೆ ರಂಗೇರಿದ ಕೆನ್ನಿ ತೋರ್ಸಿದ ಸಾಕಿತ್ತು!!
ಊರ ಜಾತ್ರಿಗೆ ಬರದಿದ್ರ ಏನಾತು?
ಕೊಟ್ಟ ಮುತ್ತಿನ ಸರಾನ ಹಾಕ್ಕೊಂಡಿದ್ರ ಸಾಕಿತ್ತು!!
ಹಬ್ಬಕ್ಕ ಮಾಡಿದ ಮಾದ್ಲಿ ತಿನ್ನದಿದ್ರ ಏನಾತು ?
ಬೆಲ್ಲದಂತಾವು ನಾಕ ಮಾತಾಡಿದ್ರು ಸಾಕಿತ್ತು!!
ತುಪ್ಪದಾಗ ನೆನಿಸಿಟ್ಟ ಉತ್ತತ್ತಿಯಂತ ಸಕ್ರಿ ಗಲ್ಲಾದವು!
ಮುಖ ಉದಿಸಿಕೊಂಡ ಕುಂದ್ರೊದ ಏನ್ ಚೆಂದ ಹೇಳು?
ಬ್ಯಾಸ್ಗಿ ಬಿಸ್ಲಿಗೆ ಕುಂತ ಬೇವಿನಕಟ್ಟಿ ಒಣಗಿ ಹೊಂಟಾನಿಲ್ಲೆ
ಲಿಂಬಿ ಪಾನ್ಕನರ ಮಾಡ್ಕೊಂಡ ಬಂದು ಕುಡ್ಸಬಾರದಿತ್ತನು!!
***
ನೀನಿಲ್ದ ಹೊತ್ತನ್ಯಾಗ, ಕರೆಂಟು
ಆಟ ಆಡಾಕ ಹತ್ತೈತಿ!
ಹಚ್ಚಿಟ್ಟ ಕಂದೀಲು ಸಣ್ಣ..ಗ ಹೊತ್ತ
ತಿನ್ನಾಕುಂತೈತಿ!
ಬ್ಯಾಸ್ಗಿ ಝಳ.. ಮೈ ಮ್ಯಾಲಿನ ಬಟ್ಟಿನೆಲ್ಲ
ತೊಯ್ಸಿ ಬಿಟ್ಟೈತಿ!
ಸುಡುಗಾಡ ಹಳೆ ನೆಪ್ಪೊಂದು ನೆನಪಾಗಿ
ಮೈಗೆಲ್ಲಾ ಬೆಂಕಿ ಹಚ್ಚಿ ಮಲಗಿಬಿಟ್ಟೈತಿ!
ಬೆಳಕ ಹರದ್ರ...ಯುಗಾದಿ ಐತಿ, ಬೇಗ ಬಂದು
ಕೊಡಬಾರದೇನೊ? ಗಲ್ಲಕ್ಕೊಂದು ಬೆಲ್ಲ!
ಸಿಹಿ ಬಿಟ್ಟು, ಬರೀ ಕಹೀ...ನ ಕೊಟ್ರ
ನಾ..ಹ್ಯಾಂಗರ ತಡಕೊಳ್ಳಲೊ ನಲ್ಲ!
ತೊಳದಿಟ್ಟ ಅನ್ನದ ಬೊಗೊಣಿ ಹಂಗ,
ಬರಿಗೈಯ್ಲೆ ಕಾಯಕ ಹತ್ತಿನೊ ಮಲ್ಲ!
ಬಿಸಿ ಜೋಳದ ರೊಟ್ಟಿ ಮ್ಯಾಲಿಟ್ಟ
ಬೆಣ್ಣಿಯಂತಾಗಿ ನಾ... ಕರಗಿ ಹೊಂಟೇನಿ!
ಎಷ್ಟ ಹಾರಾಡಿ, ಜಿಗಿದಾಡಿದ್ರು ಕೈಗೆ ಸಿಗ್ದ ಹಾಲನ್ನ
ಕಂಡ, ಚಟಪಟ ಒದ್ದಾಡೊ ಕಳ್ಳ ಬೆಕ್ಕನಂಗ ಆಗೀನಿ!
ಮೈ ಮ್ಯಾಲ ನಿನ್ ಮುತ್ತಿನ ಅಚ್ಚಿಲ್ದನ, ಮಣಭಾರ
ಬಂಗಾರದ ಸಾಮಾನ ಹಾಕ್ಕೊಂಡ ನಿಂತಿನಿ!
ಮತ್ತ ಇಳಿಲಾರ್ದನ ಗುಂಗ ಹಿಡ್ಸಾಕುಂತೈತಿ
ಮದ್ಯಾನದಾಗ...ಮುಡ್ಕೊಂಡ ಮಲ್ಗಿ ಹೂವಿನ
ವಾಸ್ನಿ!
ನಕ್ಕೆನಂದ್ರ ನಗು ಬರಾವಲ್ದು, ಅತ್ತೆನಂದ್ರ ಅಳು ಬರಾವಲ್ದು, ಏನೂ... ತಿಳಿದಂತ ಮಳ್ಳಿಯಂತಾಗಿನಿ!
ಇಳಕಲ್ ಸೀರಿ ಬ್ಯಾಡ, ಗುಳೇದಗುಡ್ಡದ ಖಣ ಬ್ಯಾಡ
ನಕ್ರ, ಸಾವ್ರ ಮುತ್ತ ಸುರಿಸೊ ಆ ನಗು ಮುಖಾನ
ಹೊತ್ಗೊಂಡ ಯಾವಾಗ ಬರ್ತೀಯಂತ ಕಾಯಾಕ
ಹತ್ತೀನಿ.... ನಾ ಕಾಯಾಕ ಹತ್ತೀನಿ...
###
ಮಾತ್..ಮಾತನ್ಯಾಗ ಬೆಲ್ಲ ತುಂಬಿ ಮಾತಾಡಾಕಿ
ನೂರ್ ಕೆಲ್ಸ ಹೇಳಿದ್ರ, ಒಂದ ಮಾಡಿ ಹಲ್ಬಿಟ್ಗೊಂಡ ನಿಂದ್ರುವಾಕಿ
ಅನ್ನ-ಸಾರು ಉಪ್ಪಾಗೈತಂದ್ರ ಹಣಿಹಣಿ ಬಡ್ಕೊಳ್ಳಾಕಿ
ಸಂಜಿಕೆಲ್ಲ, ಕೊಬ್ರಿ-ಬೆಲ್ಲ ಕುಟ್ಟಿಕೊಟ್ಟ ಬಾಯ್ನೆಲ್ಲ ಸಿಹಿ ಮಾಡಾಕಿ
ಕಸಮುಸರಿನೆಲ್ಲ ಬೂದಿ ಹಚ್ಚಿ ಬೆಳ್ಳನ ಬೆಳ್ಗ ತಿಕ್ಕುವಾಕಿ
ಬೆಳ್ಳನ ಬಟ್ಟಿಗೆ ಜಗ್ಗಷ್ಟು ನೀಲಿ ಹಾಕಿ ಲೊಚಗುಟ್ಟಾಕಿ
ವಗ್ದ...ವಗ್ದ.. ಟಾಕಿ ನೀರೆಲ್ಲ ಖಾಲಿ ಮಾಡಿ ಹಾಕಾಕಿ
ಹೊತ್ತ ಹಾಕಂದ್ರ, ನಡು ಬ್ಯಾನೆಂತಂದ ಚಾದರ ಹೊತ್ಗೊಂಡ ಮಲ್ಗುವಾಕಿ
ಸಿಂಬ್ಳ ಸೀನಕೊಂತನ ಖೊಣ್ಗಿ ರೊಟ್ಟಿ ಬಡ್ದ ಹಾಕಾಕಿ
ಮಗಳ ಮುಕ್ಳಿ ತೊಳಿತಲೆ, ಊಟಕ್ಕ ಬಂದ ಬಡಿಸುವಾಕಿ
ರುಚಿ ಹ್ಯಾಂಗೈತೆಂದು ಛೇಷ್ಟಿ ಮಾಡ್ಕೊಂತ ನಗುವಾಕಿ
ಬೆಕ್ಕ ಕುಡ್ದ ಹಾಲಿನ ಗಿಂಡಿ ನೋಡಿ ಅತಗೊಂತ ಕುಂದ್ರುವಾಕಿ
ಕತ್ಲದಾಗ, ಎಲ್ಲೇದಿ ಅಂದ್ರ ಹಲ್ಬಿಟ್ಟ ದಾರಿ ತೊರ್ಸುವಾಕಿ
ಒಂದ ಸಾಕಂದ್ರನು ಮೂರ ಮೂರ ಹಡ್ದ ಕೊಟ್ಟಾಕಿ
ಶ್ಯಾಣೆ ಅಂದ್ರು ಸೈನಾ, ದಡ್ಡಿ ಅಂದ್ರನು ಸೈ ಅನ್ನಾಕಿ
ಬಾಯ್ಬಿಟ್ರಂದ್ರ ಗಂಡ್ನಾಯಿಗಳ ಬಾಲಾನು ಮುದ್ರುಸ್ವಾಕಿ
ಕಪ್ಗಿದ್ರೇನ..ಬೆಳ್ಗಿದ್ರೇನ...ಸೊಟ್ಗಿದ್ರೇನ, ನೆಟ್ಗಿದ್ರೇನ
ಹ್ಯಾಂಗಿದ್ರೇನ... ಆಕಿ ನನ್ನಾಕಿ
ಬಳಕ ಬಳ್ಳೆಂತೂ ಅಲ್ಲ, ಬದ್ಕಿಗೆ ಗಂಧದ ತನ್
ತಾ ತಿಕ್ಕುವಾಕಿ ಆಕಿ ನನ್ನಾಕಿ
ಬೇಕ ಅನ್ಲಿಲ್ಲ.. ಬ್ಯಾಡ ಅನ್ಲಿಲ್ಲ, ತಂದ್ಕೊಟ್ಟದ್ರಾಗ
ಸುಖ ಕಾಣಾಕಿ ಆಕಿ ನನ್ನಾಕಿ
ಎದಿಹಾಲ ಕೊಟ್ಟಿಲ್ಲನ್ನೊದಷ್ಟ ಖರೆ...ಅವ್ವನ್ನ ಬಿಟ್ರ
ಈಕಿನ ನನ್ ತಾಯಿ ಈಕಿ ನನ್ನಾಕಿ
ನನ್ನಾಕಿ ನನ್ನಾಕಿ.
##
ಮೂರ್ ಹೊತ್ತು ಕೆಲ್ಸ-ಬಗ್ಸಿ ಬಿಟ್ಗೊಂಡು
ಬಿಟ್ ಕಣ್ ಬಿಟ್ಗೊತ ಕುಂದ್ರಾವ!
ತವ್ರಿಗ್ ಬಂದ್ ವಾರಾಗಿ ಹೋತು, ನಿಂಗಿನ್ನ
ನನ್ ನೆಪ್ ಬರುವಲ್ದೇನೊ? ಮಾಂವ!
ಕುಚಲಕ್ಕಿ ಅನ್ನ, ಹುರಳಿಕಟ್ಟಿನ ಸಾರ
ಕೈ ತುತ್ ಇಲ್ದನಾ... ಉಣಲಾರ್ದಾಂವ!
ಸಂಜಿಕೆಲ್ಲ ಹೂ ಮುಡ್ಸಿ ರಾತ್ರಿಗೆಲ್ಲ ನಿದ್ದಿಗೆಡ್ಸಿ,
ಕೋಳಿ ಕೂಗೊ ಮುಂಚೇಕ ಎದ್ದ ಕುಂದ್ರಾಂವ!
ಊರ ಬಾವಿ ನೀರ ಸೇದಿ..ಸೇದಿ ಬಿಂದ್ಗಿಲ್
ತಂದ ಅಡ್ಗಿ ಮನ್ಯಾನ ಹಂಡೆ ತುಂಬ್ಸಾವ!
ಖೊಣ್ಗಿ ರೊಟ್ಟಿ ಬುತ್ತಿ ಕಟ್ಗೊಂಡ ಬಂಡಿ
ಹೂಡಿ ಹೋಗೊ ಮುಂದ ನಡ್ವ ಗಿಲ್ಲಾಂವ!
ಏನ್ ಹೇಳ್ಲಿ?, ಹ್ಯಾಂಗ ತಡಕೊಳ್ಲಿ
ರಾತ್ರಿ ಹಾಸ್ಗ್ಯಾಗೆಲ್ಲ ನೆಪ್ಪಿನ ತಿಗ್ಣಿ ಕಡಿಯಾ ಕುಂತಾವ!
ಮನಿ ಮುಂದಿನ ಮಲ್ಗಿ ಬಳ್ಳ್ಯಾನ ಹೂವೆಲ್ಲ
ನೀ.. ಯಾವಾಗ ಬರ್ತಿಯಂತ ಕಾಯಾಕುಂತಾವ!
ಮಂಗ್ಯಾನಂತ ವಾರ್ಗಿ ಗೆಳತ್ಯಾರೆಲ್ಲ, ಮಾವಿನಕಾಯಿ ಯಾವಾಗ ತಿಂತಿಯಂತ ಕೇಳಾಕ್ಹತ್ತಾಂವ!
ಕೇಳಬಾರ್ದನ್ನೆಲ್ಲ ಕೇಳಿ..ಕೇಳಿ ನನ್ನ ಮೈಯೊಳಗಿನ
ಚಳಿನೆಲ್ಲ ಬಿಡ್ಸಾಕುಂತಾವ!
ಜೋಕ್ಮಾರ ಸತ್ರೇನ, ಸುಕ್ಮಾರ ಹುಟ್ಟಿದ್ರೇನ
ಇವತ್ತ್, ಸಂಜಿ ವಸ್ತಿಗರ ಬಂದಬಿಡೊ ಮಾಂವ!
ತಡ್ಕೊಳ್ಳಾಕ ಆಗುವಲ್ದಾಗೈತಿ ಹೊಸ್ಮಾಲಗಿತ್ತಿ
ಹಸಿಬಿಸಿ ಮನ್ಸಿನ ಕನಸ್ನಾಗಿನ ಸಾಂವ!
ಅಕ್ಷರ ಬಡವ.
ಬಿಟ್ಯಾಕ ಹೋದಿ ನನ್ ಮರೆತ
ಬಿಟ್ಟ್ಯಾಕ ಹೋದಿ ನನ್ ಮರೆತ...
ಯಾರು ಇಲ್ಲ ಈ ಜಗದಾಗ ನಿನ್ನ ಪರತ
ಹ್ಯಾಂಗರ ಇರ್ತೀ ನೀ.. ನನ್ನ ಹೊರತ
ಸೇರೊನು ಬಾರಾ.. ಹಾಲು ಜೇನ್ಹಂಗ
ಒಂದಾಗಿ ಬೇರೆತ
ಅರಿತ ಬಾಳಿದ್ರ... ನಮ್ಮಿಬ್ರಿಗೂ ಒಳಿತ
ಪ್ರೀತಿ ಹಾಲಿಗೆ ಹೆಪ್ಪ ಹಾಕೋದ ಬಿಟ್ಟು
ಉಪ್ಪ.. ಹಾಕಿ ಹೋಗೊದೇನ
ನಂಬ್ಕಿ ಮಡ್ಕಿಗೆ ತೂತು... ಹಾಕಿದ್ದು ಮರಿತೇನ
ಯಾರ್ದರ ಮಾತಿಗೆ ತಾಮ್ರದ ಕಿವಿ ಕೊಟ್ಟ
ಕೆಡ್ಸಕೊಂಡಿ ಯಾಕ ನಿನ್ನ ನಡ್ತಿ
ಬೆಲ್ಲದ ಮಾತನ್ಯಾಗ ವಿಷ ತುಂಬೊದ್ನ
ನೀ.. ಯಾರಿಂದ ಕಲ್ತಿ..
ಪ್ರೀತಿ ಬಳ್ಳಿ ಇಷ್ಟೇತ್ತರಕ್ಕ ಬೆಳಸಿ... ಹೂವಾ
ಬಿಡೊ ಮುಂದ.... ಅದನ್ಯಾಕ ಚಿವುಟಿದಿ
ಬದುಕಿನ ಅಂಗಳ್ದಾಗ... ಕನಸಾ ಕಂಡ...
ಬಿಡಿಸಿದ ರಂಗೋಲಿಗೆ.... ನೀರ..ರ ಯಾಕ ಸುರ್ದಿ...
ನಿನ್ನ ನಗುವಿನಾ ರೂಪಾನ... ಹೊತ್ಕೊಂಡ ತಿರ್ಗತೀದ್ದ
ನನ್ನೇದಿ ಕನ್ನಡಿನ.. ಯಾಕರ ಒಡ್ದಿ..
ನಿನ್ನ ನೆಪ್ಪನ್ಯಾಗ ನೆಂದ.. ನೆಂದ..ತುಕ್ಕ
ಹಿಡಿಯಾಕ ಹತ್ತೈತಿ..ಈ ಪ್ರೀತಿಯ ಕಂಬಿ
ಹೋಗಬ್ಯಾಡ ನೀ ಹಿಂಗ.. ಮನಸಿನ
ಮಡಿಕ್ಯಾಗ ನೋವಿನ ಬ್ಯಾನಿ ತುಂಬಿ...
ಬಾಳೆನರ.. ಹ್ಯಾಂಗ ಮಾಡ್ಲಿ ನಾನು..ನೀನಿಲ್ದ
ವಿಷಾ ತುಂಬಿದ ಈ ಜಗತ್ತನ್ನ ನಂಬಿ...
@@@@
ಹಿಂಗ್ ಕಣ್ಣನ್ಯಾಗ ಮಾತಾಡೊದನ್ನ ನೀ... ಯಾವಾಗ
ಬಿಡ್ತಿದಿ?, ಲೆಕ್ಕ ಇಡಲಾರ್ದಷ್ಟ ದಿವ್ಸಾ...ಸುಟ್ಟ್ಹೊಂಟಾವಿಲ್ಲೆ...
ಯಾಕ್ ಸುಮ್ನ ಕಾಲ ಕಳಿಯಾಕ ಹತ್ತಿದಿ?
ಬೆಂಕಿ ಹಚ್ಚಲಾರ್ದನ ಒಳ್ಗೊಳ್ಗ ಸುಟ್ಟ ಹೊಂಟೆನ ನಾನಿಲ್ಲೆ
ಗೊತ್ತಿಲ್ಲೇನ, ತಣ್ಗ ಮಾಡೊ ದವಾ ನಿನ್ಹತ್ರನ ಐತಿ...
ಬಿಟ್ಟ ಕಣ್ ಬಿಟ್ಕೊಂತ ಮಳ್ಳಿಯಂಗ ಕುತ್ಗೊಂಡಿಯಲ್ಲೆ ಅಲ್ಲೆ
ಅನುಮಾನ ಮಾಡಬ್ಯಾಡ ಹುಡ್ಗಿ, ನಿನ್ಮ್ಯಾಲಿನ ಪ್ರೀತಿ ಮ್ಯಾಲೆ
ಗೊತ್ತೈತನು ಅಳ್ದ, ತೂಗಿ ಲೆಕ್ಕ ಮಾಡಾಕ ಪ್ರೀತಿಗಿನ್ನೂ ಎಲ್ಲಿ ತಕ್ಕಡಿ..ನ ಸಿಕ್ಕಿಲ್ಲ...
ಚೀಲ್ದಾಗ ತುಂಬಲಾರ್ದಷ್ಟ, ಗೋದಾಮನ್ಯಾಗ ನಿಟ್ಟ ಒಟ್ಟಲಾರದಷ್ಟು ನನ್ನೆದಿಯೊಳ್ಗ ತುಂಬಿ ತುಳ್ಕಾಕ್ಹತ್ತೈತಿ
ಇದು ನಿಂಗಿನ್ನ್.. ಗೊತ್ತಿಲ್ಲ...
ಸೇರನ್ಯಾಗ ತುಂಬಾಕ ಹೋಗಬ್ಯಾಡ, ಮರದಾಗ ಹಸ್ನss
ಮಾಡ್ಕೊಂತ ಕುಂದ್ರಬ್ಯಾಡ... ಬೇಕಿದ್ರ ಸಾಣ್ಗಿ ಹಿಡ್ದ ನೋಡ!!!
ಒಂದ್ಸಲ!!!, ಒಂದ ಒಂದ ಕಾಳ ಹುಳ್ಕ ಬರೋದಿಲ್ಲ ನನ್ನ ಪ್ರೀತ್ಯಾಗ
ನಿಗಿನಿಗಿ ಕೆಂಡದ ಮ್ಯಾಲಿಟ್ಟ ನೋಡ...ಕುದ್ದು..ಕುದ್ದು...ಅರಳಿ ಹೂವಾಕ್ಕೈತಿ.. ಹೊರ್ತ...ಹಳಿಸಂತು ಹೋಗುದಿಲ್ಲ!
ಊಟದಾಗಿನ ಉಪ್ಪಿನಕಾಯ್ಹಂಗ....ನೆಕ್ಕಿ ನೋಡಬ್ಯಾಡ,
ಹುಣ್ಮಿ ಹೊಳ್ಗಿಯಂಗ ಬಾಯ್ಚಪ್ಪರಿಸಿ ನೋಡ....
ನನ್ನೊಳ್ಗ ಬೇವು.. ಐತಿ, ಬೆಲ್ಲಾನೂ ಐತಿ... ಎರ್ಡನ್ನ
ಬೇರ್ಸಿ ಯುಗಾದಿ ಮಾಡ್ಕೊ, ಸಾಕ್ಷಿಗೆ ಕಾರ್ತಿಕಕ್ಕೊಂದ
ತೊಟ್ಲ ತೂಗಸ್ಲಿಲ್ಲಂದ್ರ ಕೇಳ!!
ಇನ್ನ ತಡಮಾಡಬ್ಯಾಡ ಲಡ್ಕಿ.... ಹರೆ ಹರ್ದ ಹೊಂಟೈತಿ
ಖಾಲಿಯಾದ ಮೇಲೆನೈತಿ
ನೀನು ಒಳ್ಳಾಗು...ನಾ ರುಬ್ಬಗುಂಡ ಆಕ್ಕಿನಿ..ಬಾಳ್ವೆದಾಗಿನ
ಎಲ್ಲಾ ಕಷ್ಟಾನೂ ರುಬ್ಬಿ ಹಾಕೋನು...
ಮತ್ತ್ ನೀ ಮಡ್ಕಿಯಾಗು... ನಾ ಕೂಡಗೋಲ ಆಕ್ಕೈನಿ
ಅರ್ಮನಿಯಂತ ಗುಡ್ಸಿಲೊಳ್ಗು ನಾವ್ ಸುಖಾ ಅನ್ನೊ
ಬೆಣ್ಣಿ ಕಡಿಯೊನ ಚೆನ್ನಿ.... ಸುಖಾ ಅನ್ನೊ ಬೆಣ್ಣಿ ಕಡಿಯೊನು
###
ಬಲು... ಗಟ್ಟಿಯಾಗೈತಿ ಕುಂತ್ಗೊಂಡಿರೊ ಕಟ್ಟಿ!
ಆರಿ ಹೊಂಟಾವು ಕೆರಸ್ಯಾಗ ಮಾಡಿಟ್ಟ ರೊಟ್ಟಿ!
ಬೇಗ ಊಟಕ್ಕ ಬಾರೊ ನನ್ಬಾಳಿನ ಜಟ್ಟಿ!
ನಿನ್ ದಾರಿಕಾಯೋದ್ರಾಗ ತಳಮಳ್ಸತೈತಿ ಹೊಟ್ಟಿ!
ನಿನಗಂತನ ಬಂದಿಲ್ಲೇನ ಈ ಭೂಮಿ ಮ್ಯಾಗ ಹುಟ್ಟಿ!
ಮನೀನರ ತುಂಬಸ್ಕೊಬಾರ್ದನ ಕೊರ್ಳಿಗೊಂದು ತಾಳಿ ಕಟ್ಟಿ!
ಬೇವೇನು-ಬೆಲ್ಲೇನು? ನಾನಂತೂ ಬಾಳೆ ಮಾಡಾಕದೀನಿ ಗಟ್ಟಿ
ಬಾಳೆ ಹೆಂಗಿದ್ರೇನ ನಿಂದ್ರತಿಯಿಲ್ಲೊ ತೊಡೆಯನ್ನ ತಟ್ಟಿ!
ನನ್ ಪ್ರೀತಿಯೊಳ್ಗ ಎಳ್ಳಷ್ಟು ಇಲ್ಲ ಖೊಟ್ಟಿ!!
ಮೇಣದ ಗೊಂಬಿ ಅದೀನ ನಾ ನೋಡಬಾರ್ದ್ಯಾಕೊಮ್ಮೆ ಮುಟ್ಟಿ!
ಮಾತಾಡಲಾರ್ದನ ರಾತ್ರಿ ನಿದ್ರಿನೆಲ್ಲ ನೀ..ಸುಟ್ಟಿ!
ನೆಪ್ ನ್ಯಾಗನ ಉರ್ದ್ ಹೋಗ್ಲಂತ ಯಾಕರ ಬಿಟ್ಟಿ!
###
ಈ ಪ್ರೀತಿಗೆ ಬೆಂಕಿನರ ಹಚ್ಚ.....
ಹೋಗೊದ ಹೊಂಟಿ ನೋಡಬ್ಯಾಡ
ನಿ ನನ್ನ ಹೊಳ್ಳಿ
ಕರುಳಿಲ್ದ...ಪ್ರೀತಿ ಬಣವಿ ಒಣಗಿಸಿ
ಇಟ್ಟ ಹೊಂಟಿಯಲ್ಲ ಉರಿಯೊ ಕೊಳ್ಳಿ
ಮಾವಿನ ತೋಟದ ನಡು ತೋಪನ್ಯಾಗ
ಎಷ್ಟರ ಮಾತಾಡ್ತೀದ್ದಿ ಮಳ್ಳಿ
ಅಗಸಿ ಬಾಗಲ್ದಾಗ ನಿಂದ್ರೀಸಿ ಹೊಂಟಿಯಲ್ಲ ನನ್ನ
ನಗಾಕ ಹತ್ತೈತಿ ನೋಡಿಲ್ಲೆ....ನಾವ್ ಕೂಡಿ ಆಡಿದ ಹಳ್ಳಿ
ಗಂಧದಂತ ನಿನ್ನ ರೂಪಾನ ತುಂಬ್ಕೊಂಡಿದ್ದ ಈ
ಜೋಡಿ ಕಣ್ಣಾಗ ಹಾಕಿ ಹೊಂಟೊಯಲ್ಲ.. ಬೊಗಸೆ ಮಣ್ಣ
ಕಾಡಿ.. ಬೇಡಿ ಕೇಳಿದ್ರೂನು ವರ ಕೊಡ್ತಾನ ಆ ಕರಿ ಕಲ್ಲಿನ
ದ್ಯಾವ್ರು... ಕೊಟ್ಟ ವರಾನ ಶಾಪ ಮಾಡಿ ಹೊಂಟ ನಿಂತಿಯಲ್ಲ ನೀನೆಂಥ ಹೆಣ್ಣ
ನನಗ ಗೊತ್ತಾಗ್ಲಿಲ್ವಲ್ಲೆ..... ಚೆಲ್ವಿ ನಿನ್ನ ಊಸರವಳ್ಳಿ ಬಣ್ಣ
ನಿನ್ನನ್ನ ನಂಬಿ ಹೊಡ್ಕೊಂತಿದ್ದ ಈ ಎದಿಯಾಗ...
ಮಾಸಲಾರ್ದಂತದ್ದು ಮಾಡಿಟ್ಟಿಯಲ್ಲೆ ಪ್ರೀತಿಯ ಹುಣ್ಣ
ನಾ.. ಕೊಟ್ಟ ಮಲ್ಗಿ ದಂಡಿ ಕಿತ್ತ ಒಗ್ದಿಯಲ್ಲ ಸೆಗಣಿ ಗುಂಡ್ಯಾಗ
ಸಾವುಕಾರನ್ ಮನಿ ಸೊಸಿಯಾಗಿ ಹೊಂಟಿಯಲ್ಲ ಜೋಡೆತ್ತಿನ
ಬಂಡ್ಯಾಗ
ನನ್ನ ನೆಪ್ಪಾಗಿ ಓಡೋಡಿ ಬರ್ತೀಯೇನೊ...? ಅಂಥಾ ಕಾಯ್ಕೊಂತ ಕುಂತೇನ ಈ ಕೆರಿ ದಂಡ್ಯಾಗ
ಆಗೋದಿಲ್ಲಂದ್ರ... ನಿನ್ನ ನೆಪ್ಪನ್ಯಾಗ ಒಣಗಿ ಕುಂತ ನನ್
ಮೈಗೆ ಬೆಂಕಿನರ ಹಚ್ಚಿಬಿಡು... ಸುಟ್ಟ ಹೋಗ್ತಿನಿ ನಿನ್ನ
ನೆನಪಿನ ತಂಡ್ಯಾಗ
'ಕಥೆ' ಈ ಒಂದು ಶಬ್ದ ಬಾಲ್ಯದಿಂದಲೂ ನನಗೆ ಬಹಳಷ್ಟು ಅಪ್ಯಾಯಮಾನವಾದಂತಹದ್ದು ಒಂದು ರೀತಿಯಲ್ಲಿ ಇಲ್ಲಿಯವರೆಗೂ ಜೀವಾಮೃತವನ್ನೆ ಉಣಿಸಿಕೊಂಡೆ ಬಂದಿದೆ ಎನ್ನಬಹುದು ಅಷ್ಟರಮಟ್ಟಿಗೆ ನನ್ನನ್ನು ಆವರಿಸಿಕೊಂಡಂತಹ ಭಾವ; ನಮ್ಮ ಮನೆಯಲ್ಲಿ ಅಷ್ಟೇ ಏನು, ನಮ್ಮ ವಂಶಸ್ಥರಲ್ಲಾಗಲಿ, ದೂರದೂರದ ಸಂಬಂದಗಳಲ್ಲಾಗಲಿ ಯಾರೆಂದರೆ ಯಾರೊಬ್ಬರಿಗೂ ಸಾಹಿತ್ಯದ ಗಂಧ-ಗಾಳಿ ಗೊತ್ತಿರಲಿಲ್ಲ!. ಕೆಲವು ಹಿರೀಕರು ಹೊಟ್ಟೆಪಾಡಿಗಾಗಿ ಹುಟ್ಟೂರನ್ನು ಬಿಟ್ಟು ಹೋದ ಹಾಗೆ ನಮ್ಮ ಹಿರಿಯರು ಹೊಟ್ಟೆ ಪಾಡಿಗಾಗಿಯೆ ಹಳ್ಳಿಯನ್ನು ಬಿಟ್ಟು ಊರೂರು ಅಲೆದು ಗಜೇಂದ್ರಗಡದಲ್ಲಿ ನೆಲೆಯೂರಲು ಆಯ್ಕೆ ಮಾಡಿಕೊಂಡ ಕೆಲಸವೆಂದರೆ ಚಹಾದಂಗಡಿ. ಅಪ್ಪ-ಅವ್ವ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಎಂಟರವರೆಗೂ ಬಿಡುವಿರದೆ ದುಡಿಯುತ್ತಿದ್ದರು ನಾವೊ ಉಂಡಿದ್ದು-ಆಡಿದ್ದು ಸರಿ. ಓದಿದ್ದು?- ಬರೆದಿದ್ದು? ಇಲ್ಲಿಯೆ ನೋಡಿ ದೊಡ್ಡ ಸಮಸ್ಯೆ. ಮನೆಯಲ್ಲಿ ಬೇರೆ ಯಾರು ವಿದ್ಯಾವಂತರಿರಲಿಲ್ಲ ಏನು ಬರೆದೆ? ಏನು ಓದಿದೆ?, ಮುಂದಿನ ಭವಿಷ್ಯವೇನು? ಇಂತಹುದನೆಲ್ಲ ವಿಚಾರಿಸಿ, ಸರಿದಾರಿಗೆ ಅಂದರೆ ನೌಕರಿ ಸೇರಲು/ತನ್ನ ಕಾಲಿನ ಮೇಲೆ ತಾನು ನಿಂತು ದುಡಿಯುವಂತಹ ಕೌಶಲ್ಯ ತರಬೇತಿಯ ಯಾವ ಯಾವ ಕೋರ್ಸ್ಗಳನ್ನು ಮಾಡಬೇಕು ಮತ್ತು ಹೇಗೆ ಪರೀಕ್ಷೆಗಳನ್ನು ಎದುರಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಹೇಳುವರಾರು ಇರಲಿಲ್ಲ ಹೀಗಾಗಿ ಈ 'ಕಥೆ'' ಎನ್ನುವ ಪದ ಆಗ ನನ್ನನ್ನು ಬಹಳಷ್ಟು ಆಳವಾಗಿ... ಅಂದರೆ ಹೇಗೆ ಹೇಳಬೇಕೆಂದರೆ ಅಕ್ಕಮಹಾದೇವಿಯ ಎದೆಯಾಳದಲ್ಲಿ ಬೇರೂರಿದ ಚೆನ್ನಮಲ್ಲಿಕಾರ್ಜುನನಂತೆ ಈ ವಿಷಯವು ಬೇರೂರಿಬಿಟ್ಟಿತು. ಮುಖ್ಯವಾಗಿ ಆಗೆಲ್ಲ ನನ್ನನ್ನು ಚಹಾದಂಗಡಿಯ ಹುಡುಗನೆಂದೆ ಗುರುತಿಸುತ್ತಿದ್ದರು. ಈ ಗುರುತಿಸುವಿಕೆಯಿಂದಾಗಿ ನನ್ನೊಳಗೆ ಒಂಥರಾ ಯಾರಲ್ಲೂ ಹೇಳಿಕೊಳ್ಳಲಾರದಂತಹ ಕಸಿವಿಸಿ, ಸಂಕಟವಾಗುತ್ತಿತ್ತು. ಇದರಿಂದ ಹೊರಬರಲು ಪಟ್ಟ ಹಲವಾರು ಪ್ರಯತ್ನಗಳಲ್ಲಿ ಇದು ಒಂದು. ಆದರೆ ಬೆಳೆಯುತ್ತ.. ಬೆಳೆಯುತ್ತ ಬಂದಂತೆಲ್ಲ ಬದುಕಿಗೆ ಕೀಳರಿಮೆ, ಅಹಸ್ಯವೇನಿಸುವಿಕೆ, ಗುರುತಿಸುವುದಿರುವಿಕೆ ಇವೆಲ್ಲದಕ್ಕೂ ಮೀಗಿಲಾಗಿ ಹಸಿವೊಂದಿತ್ತು... ಬಾಳಿನ ಹಸಿವು ಎಲ್ಲವನ್ನು ಕಸಿದುಕೊಂಡುಬಿಟ್ಟಿತ್ತು, ಅದರಲ್ಲೂ ನಮ್ಮ ಗಜೇಂದ್ರಗಡದಂತಹ ವಾಣಿಜ್ಯ ನಗರದಲ್ಲಿ ಕಲೆ-ಸಾಹಿತ್ಯ-ಸಾಂಸ್ಕೃತಿಕ ವಿಷಯಕ್ಕೆ ಅಷ್ಟೊಂದು ಪ್ರಾಮುಖ್ಯತೆಯನ್ನು ಕೊಡುತ್ತಿರಲಿಲ್ಲ ಶಾಲೆಯ ಗೋಡೆಯ ಮೇಲೆ ನೀತಿ ಕಥೆಯ ಹೇಳುವ ತೈಲವರ್ಣ ಚಿತ್ರಗಳು, ಜಾಲಿಹಾಳ ಸರ್ ಕೈಯಲ್ಲಿ ಆಕಳದ ಗೆಜ್ಜೆಯನ್ನು ಕಟ್ಟಿ, ತಾಳಕ್ಕೆ ತಕ್ಕಂತೆ ಟೇಬಲ್ ಗೆ ಕುಟ್ಟುತ್ತಾ 'ಧರಣಿ ಮಂಡಲ ಮಧ್ಯದೊಳಗೆ' ಎಂಬ ಹಾಡನ್ನು ಮಣ್ಣಿನಲ್ಲಿ ಮಣ್ಣಾಗುವವರೆಗೂ ಎದೆಯಲ್ಲಿ ಜೀವಂತಿಕೆಯಿಂದ ತುಳುಕುವಂತೆ ಹಾಡಿ- ಹಾಡಿಸಿದ ಜನಪದ ಗೀತೆ ಅಲ್ಲದೆ ಟೋಪಿ ಮಾರುವವ ಮತ್ತು ಮಂಗ, ಮೊಸಳೆ ಮತ್ತು ಮಂಗ, ಬೆಕ್ಕು ಮತ್ತು ಮಂಗ, ಹಾಲು ಮಾರುವವ, ಮೊಲ ಮತ್ತು ಆಮೆ ಹೀಗೆ ಹತ್ತು ಹಲವಾರು ಕಥೆಗಳು ಬದುಕಿಗೆ ಬೇಕಾದಂತಹ ನೈತಿಕತೆ ಹಾಗೂ ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಲು, ಮಾರ್ಗದರ್ಶಕವಾಗಿಯೂ ಪ್ರೇರಣೆಯಾಗಿದ್ದವು.
ಇದೀಷ್ಟು ಪೀಠಿಕೆಯನ್ನು ಏಕೆ ಕೊಟ್ಟೆನೆಂದರೆ, ಈಗ ರಾಶಿ ರಾಶಿಗಟ್ಟಲೆ ಹರಿದು ಬರುತ್ತಿರುವ ಸಾಹಿತ್ಯದಲ್ಲಿ ಏನಿದೆ? ಓದಿದರೆ ಏನು ಪ್ರಯೋಜನವಿದೆ? ಯಾವ ದಿಕ್ಕಿನಲ್ಲಿ ನಮ್ಮನ್ನು ಕೊಂಡೊಯ್ಯುತ್ತದೆ? ನಮ್ಮೊಳಗೆ ಯಾವ ಮೌಲ್ಯವನ್ನು ಕಟ್ಟಿಕೊಡುತ್ತದೆ? ಸಮಾಜದಲ್ಲಿ ಬದುಕಲು ಹೇಗೆ ಪ್ರೇರಿಪಿಸುತ್ತದೆ? ಬದುಕಿಗೊಬ್ಬ ಮಾದರಿ ಮನುಷ್ಯನನ್ನಾಗಿಸಿ ರೂಪಗೊಳಿಸಲು ಎಷ್ಟೊಂದು ಬಲವನ್ನು ತುಂಬುತ್ತದೆ? ಒಂದೇ... ಎರಡೇ... ಹೀಗೆ ಕೆದಕುತ್ತಾ ಹೋದಂತೆ ನಮಗೆ ನಿರಾಶೆ ಭಾವವೊಂದನ್ನು ಬಿಟ್ಟು ಮತ್ತಿನ್ನೇನು ದೊರಕದು. ಪದಕ್ಕೆ ಪದ ಪೋಣಿಸಿ ಕವಿತೆಯೆಂದರು, ಸಾಲಿಗೆ ಸಾಲು ಸೇರಿಸಿ ಕಥೆ ಎಂದರು, ಪುಟಕ್ಕೆ-ಪುಟ ಜೋಡಿಸಿ ಕಾದಂಬರಿ ಎಂದರು, ಸರಿ ಎಂದರು ಹಿಂಬಾಲಕರು, ಬಹುಪರಾಕ್ ಹಾಕಿದರು ಬಾಯಿ ಬಡುಕರು. ಇಂತಹ ಪುಸ್ತಕಗಳಿಂದ/ವಿಷಯಗಳಿಂದ ಸ್ವಾಭಿಮಾನವಿಲ್ಲದ ಓದುಗರನ್ನು ಸೃಷ್ಟಿಸುತ್ತಾ ಸಾಗುತ್ತಿದ್ದೇವೆ.
ಹೀಗಾದರೆ.. ಮುಂದಿನ ಪೀಳಿಗೆ ನಮ್ಮನ್ನು ಬಿಡಿ ಬೇಂದ್ರೆ-ಕುವೆಂಪು ಅಂಥವರನ್ನೆ ಮರೆತುಬಿಡುತ್ತಾರೆ. ನಮ್ಮ ಓದು ಮತ್ತು ಬರಹ ಇಂದಿನ ವಾಸ್ತವಿಕತೆಯನ್ನು ಮುಂದಿನ ತಲೆಮಾರಿಗೆ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಡುವಂತಹ ವಿಷಯವಾಗಿರಬೇಕು, ಓದುಗ ಪುಸ್ತಕವನ್ನು ಓದುತ್ತಾ ಹೋದಂತೆ ಮಗ್ನನಾಗಬೇಕು, ಭಾವಪರವಶಗೊಳ್ಳಬೇಕು, ಅಳಬೇಕು, ನಗಬೇಕು, ಉತ್ಸಾಹಿತನಾಗಿ ಆ ಕಥೆಯ/ಕಾದಂಬರಿಯ ನಾಯಕ/ಕಿಯು ಅವನ ಬದುಕಿನಲ್ಲಿ ತಿರುವನ್ನು ತಂದುಕೊಡಬೇಕು, ಕಾಡುಮೃಗದಂತಹ ಮನಸ್ಸಿನವರು ಹೂವಾಗಿ ಅರಳಬೇಕು, ಹುಟ್ಟುತ್ತಾ ಯಾರು ಒಳ್ಳೆಯವರು ಆಗಿರುವುದಿಲ್ಲ, ಕೆಟ್ಟವರು ಆಗಿರುವುದಿಲ್ಲ ಕಾಲ, ಸಮಯ, ಸಂದರ್ಭಗಳು ಒಳ್ಳೆಯವನನ್ನು - ಕೆಟ್ಟವನನ್ನಾಗಿಸುತ್ತದೆ, ಕಟುಕರನ್ನು- ಸಾಧುವಿರಂತೆ ಮಾಡುತ್ತವೆ. ಹಾಗಂತ ನಾವು ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ ಈ ಭೂಮಿಯಲ್ಲಿ ಹುಟ್ಟಿದಂತಹ ಪ್ರತಿಯೊಂದು ಜೀವಿಗೂ ಒಂದಲ್ಲ ಒಂದು ದಿನ ಒಂದು ತಿರುವು ಬಂದೆ ಬರುತ್ತದೆ ಆ ತಿರುವನ್ನು ಹೇಗೆ ತನಗೆ ಲಾಭವನ್ನಾಗಿಸಿಕೊಂಡೊ/ಬಳಸಿಕೊಳ್ಳುತ್ತಾನೋ ಅದರ ಮೇಲೆ ಅವನ ಮುಂದಿನ ಭವಿಷ್ಯ ನಿರ್ಧಾರಗೊಳ್ಳುತ್ತದೆ.
ಬರಹ ಸಮಾಜಕ್ಕೆ ಹೊರೆಯಾಗದೆ ಓದುಗನ ಅಂತಃಕರಣವನ್ನು ಜಾಗೃತಿಗೊಳಿಸಿದರೆ ಸಾಕು! ಅರ್ಧ ಊರು, ದೇಶ ನಿಶ್ಚಿಂತೆಯಿಂದ ಉಸಿರಾಡಿದಂತೆ.
ಬದುಕು ಹೇಗೆ? ಯಾವಾಗ? ಎಲ್ಲಿಗೆ ತಂದು ನಿಲ್ಲಿಸುತ್ತದೇಯೊ ಅರಿವಾಗುವುದೇ ಇಲ್ಲ! ಎರಡು ಸಾಲುಗಳನ್ನು ಬರೆಯುತ್ತಿದ್ದವನನ್ನು ಧೀರ್ಘ ಕವನ, ಚುಟುಕು, ಕಾದಂಬರಿ, ಶಾಯರಿ, ಕಜಲ್ ಗಳನ್ನು ಬರೆಯುವಂತೆ ಪ್ರೇರೆಪಿಸಿದ ನಮ್ಮ ನಿಕಟಪೂರ್ವ ಕ.ಸಾ.ಪ.ದ ಸಾಹಿತ್ಯ ಬಳಗಕ್ಕೂ, ನಿಕಟಪೂರ್ವ ಅಧ್ಯಕ್ಷರು ಆದಂತಹ ಶ್ರೀಯುತ ಐ.ಎ.ರೇವಡಿ. ಶಿಕ್ಷಕರು ಇವರಿಗೆ ಮತ್ತು ಮುಖ್ಯವಾಗಿ ದಾರವಾಡದ ಮೌನಿ ಎಂ.ಧಾರವಾಡ ಇವರು ಮುಂಬೈನ ಡೊಂಬಿವಿಲಿಯಲ್ಲಿ ಆಯೋಜಿಸಿದ್ದಂತಹ ರಾಷ್ಟ್ರ ಮಟ್ಟದ ಕಥಾ ಸ್ಪರ್ಧೆಯಲ್ಲಿ ನನ್ನ ಚೊಚ್ಚಲ ಅಂದರೆ ಇದೆ ಸ್ಪರ್ಧೆಗಾಗಿ ಬರೆದಂತಹ ಮೊದಲ ಕಥೆ 'ಚಂದ್ರವ್ವ' ಕಥೆಗೆ ವಿಶೇಷ ಬಹುಮಾನವನ್ನು ನೀಡುವ ಮೂಲಕ ಮತ್ತಷ್ಟು ಕಥೆಗಳನ್ನು ಬರೆಯಲು ದಾರಿಮಾಡಿಕೊಟ್ಟರೆಂದರೆ ತಪ್ಪಾಗಲಾರದು ಹಾಗೂ ಗುರುರಾಜ್ ಎಲ್. ಶ್ರೀಮತಿ ಗೀತಾ ಶ್ರೀಧರ ಯಾಳಗಿ, ಚಂದ್ರಶೇಖರ ಮಾಡಲಗೇರಿ ಇನ್ನೂ ಹಲವರು ನನ್ನ ಕಥಾಯಾನಕ್ಕೆ ಸಾಥ ನೀಡಿದಂತವರಿಗೂ ಹಾಗೂ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ - ತಾಲೂಕ ಘಟಕ ಗಜೇಂದ್ರಗಡದ ಅಧ್ಯಕ್ಷರು - ಸದಸ್ಯರುಗಳಿಗೆಲ್ಲರಿಗೂ, ಮುಖಪುಟದ ಎಲ್ಲ ಸಹೃದಯರಿಗೂ ಈ ಅಕ್ಷರ ಬಡವನಿಂದ ಅನಂತ... ಅನಂತ.. ಪ್ರಣಾಮಗಳು.
"ಎಲ್ಲ ಬಲ್ಲವರಿಲ್ಲ,
ಬಲ್ಲವರು ಬಹಳಿಲ್ಲ,
ಸಾಹಿತ್ಯವೆಂಬುವುದು
ಎಲ್ಲರಿಗಿಲ್ಲ" ಎಂಬ ಸರ್ವಜ್ಞನ ನುಡಿಯಂತೆ ವೃತ್ತಿಯಿಂದ ವ್ಯಾಪಾರಸ್ಥರಾದರು ಪ್ರವೃತ್ತಿಯಿಂದ ಭಾವನಾ ಜೀವಿಯಾಗಿ ಸಾಹಿತ್ಯದತ್ತ ವಾಲಿರುವ ಅಪರೂಪದ ವ್ಯಕ್ತಿತ್ವ ಹೊಂದಿರುವಂತಹ ಶ್ರೀ ಶರಣಪ್ಪ ಕ.ಬೇವಿನಕಟ್ಟಿ ಇವರು ನಿಷ್ಠುರ ಮಾತಿನ, ಮೃದು ಮನಸ್ಸಿನ ಹಾಗೂ ಜಾನಪದ ಶೈಲಿಯ ಕವನಗಳ ಬರೆಯುವಲ್ಲಿ ಇವರು ನಿಸ್ಸೀಮರು, ಪದಗಳ ಜೋಡಣೆಯ ಅಕ್ಕಸಾಲಿಗ, ಆಡು ಮಾತಿನ ಪದಗಳಿಂದಲೆ ಕವನ ಕಟ್ಟುವ ಕಲೆ ಇವರಿಗೆ ಕರತಲಾಮಲಕವಾಗಿದೆ. ಗಜೇಂದ್ರಗಡ ನಗರವು ಸುತ್ತಮುತ್ತಲಿನ ನಗರಗಳಾದಂತಹ ರೋಣ, ನರೇಗಲ್, ಯಲಬುರ್ಗಾ, ಗುಡೂರು, ಬೇಲೂರು ಇವೆಲ್ಲ ನಗರಗಳ ವ್ಯಾಪಾರಕ್ಕಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತಿರುತ್ತದೆ ಇಂತಹ ವಾತಾವರಣದಲ್ಲಿದ್ದುಕೊಂಡು ಸ್ವತಃ ಒಬ್ಬ ವ್ಯಾಪಾರಸ್ಥರಾಗಿ, ರೈತರಾಗಿ, ಸಾಮಾಜಿಕವಾಗಿ ಕ್ರಿಯಾಶೀಲವಾಗಿದ್ದುಕೊಂಡು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನ ವಾಚನ, ಅಲ್ಲದೇ ನಾಡಿನ ಪ್ರತಿಷ್ಠಿತ ಸಾಹಿತ್ತಿಕ ಸಂಸ್ಥೆಗಳು ಆಯೋಜಿಸಿದಂತಹ ಕಾರ್ಯಕ್ರಮಗಳಲ್ಲಿ ಅಧ್ಯಕ್ಷತೆ, ಉಪನ್ಯಾಸ, ಅತಿಥಿಯಾಗಿ ಭಾಗವಹಿಸಿ ಊರ ಕೀರ್ತಿಯನ್ನು ನಾಡಿನಾದ್ಯಂತ ಪಸರಿಸಿದ್ದಾರಲ್ಲದೆ, ನಮ್ಮ ಗಜೇಂದ್ರಗಡ ನಗರದಲ್ಲಿ ನಡೆಸುತ್ತಿದ್ದಂತಹ ಮಹತ್ವಪೂರ್ಣ ವಾರದ ಸಾಹಿತ್ಯ ಚಿಂತನಾಗೋಷ್ಠಿಗಳಾದಂತಹ ೧೫೦, ೧೭೫, ೨೦೦ ವಾರಗಳ ಸಾಹಿತ್ಯ ಚಿಂತನಾಗೋಷ್ಠಿಗಳ ಸಂಭ್ರಮಾಚರಣೆಯ ಪ್ರಯುಕ್ತವಾಗಿ ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಮತ್ತು ಸಾಹಿತ್ಯ ಸಿರಿ ಎಂಬ ಪುಸ್ತಕ ಪ್ರಶಸ್ತಿಗಳ ಆಯ್ಕೆಯಲ್ಲಿ ಮುಖ್ಯ ವಿಮರ್ಶಕರಾಗಿ ಯಾವುದೇ ಕಪ್ಪು ಚುಕ್ಕೆ ಬರದ ಹಾಗೆ ಕಾರ್ಯ ನಿರ್ವಹಿಸಿದ್ದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಈಗಾಗಲೇ ನಮ್ಮವ್ವ - ಅವಳೆದೆಯ ಮಾತುಗಳು ಕವನ ಸಂಕಲನ ಹಾಗೂ ನಿರ್ಣಯ - ಕಾದಂಬರಿ ಈಗ ಚಂದ್ರವ್ವ ಎಂಬ ಕಥಾ ಸಂಕಲನವನ್ನು ಹೊರತರುತ್ತಿರುವುದು ನಮಗೆಲ್ಲ ಅತೀವ ಸಂತೋಷವನ್ನುಂಟುಮಾಡಿದೆ. ಚಂದ್ರವ್ವ ಎಂಬ ಕಥೆಗೆ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ವಿಶೇಷ ಬಹುಮಾನವನ್ನು ಪಡೆದುಕೊಂಡು ಬಂದು ನಮ್ಮ ಕನ್ನಡ ಕಂಪನ್ನು ನಾಡಿನಾಚೆಗೂ ಪಸರಿಸಿದ ಚೈತನ್ಯವಿದು. ಐದುವರೆ ವರ್ಷಗಳ ಕಾಲ ನಮ್ಮೊಡಗೂಡಿ ಕನ್ನಡ ಸಾಹಿತ್ಯ ಪರಿಷತ್ತು ರೋಣ-ಗಜೇಂದ್ರಗಡ ತಾಲೂಕ ಘಟಕದ ಅವಿಭಾಜ್ಯ ಅಂಗವಾಗಿ ಕಾರ್ಯವನ್ನು ನಿರ್ವಹಿಸಿದ್ದು
ಈ ಕಥಾಸಂಕಲನದ ಮೂಲಕ ನಾಡು ಮೆಚ್ಚುವ ಅದ್ಭುತ ಕಥೆಗಾರನಾಗಿ ಸಾಹಿತ್ಯ ಲೋಕಕ್ಕೆ ಪರಿಚಿತವಾಗಿ ಅವರು ಊರಿನ ಅಭಿನವ ಬೇಂದ್ರೆಯಾಗಿ ಬೆಳೆಯಲಿ ಎಂಬುದೆ ನನ್ನ ಸದಾಶಯ.
.
ಮಜ್ಜಿಗೆ ಕಡಿಯಾಕ ಕಡಗೋಲ.. ಬೇಕು
ಮನಸ್ಸ ತಣ್ಣಗಾಗಾಕ ಆಕಿವು ನಾಕ ಮಾತ ಸಾಕು!!
ಗ್ವಾಡಿ ಅಂದಮ್ಯಾಲ ಸುಣ್ಣ ಬಳಿಬೇಕು
ಬಯಲ ಸೀಮೆ ಹೆಣ್ಣಿನ ತುಟಿಗೆ ಬಣ್ಣ ಹಚ್ಚಬೇಕು!!
ಜೋಗ ನೋಡಾಕ ಅಷ್ಟ ದೂರ ಯಾಕ ಹೋಗಬೇಕು
ತುಳುಕೊ ಬಿಂದ್ಗಿ ಹೊತ್ಗೊಂಟ ಹೊಂಟವಳ ನಡು ನೋಡಿದ್ರ
ನನ್ನರಮನೆಯ ಮೇಲಿಂದು ಗರಡಿಯ
ಮನೆಯಲ್ಲಿ ಮೈ ಹುರಿಗೊಳಿಸಿಕೊಂಡ
ಸುಲ್ತಾನನಂತೆ......ಮೈದುಂಬಿ ಬಂದಿರುವ
ಚಂದಿರನಿಂದು ಗಾಲಿಬ್!!!
ಇಷ್ಟು ಹೊತ್ತು... ಹಸಿದವರಿಗೆ ಬಿಸಿಯಾಗಿ
ಬಡಿಸಿ..ಉಣಿಸಿ..ತಣಿಸಿ ಕಾದು ನಿಂತವಳು ನಾನು!!
ಹಳಸಿದ ಅನ್ನವನುಂಡು ಕೈ ತೊಳೆಯದ, ನಿನ್ನ ಒರಟು ಎಂಜಲು ಬೆರಳುಗಳಿಂದ ಈ ತುಟಿಯಂಚನ್ನು ಸವರದೆ
ಹೋದರೆ.... ನನ್ನೊಳಗಿನ ಬಿಸಿ, ಹೇಗೆ ತಾನೆ ಆರಿ ಹೋದಿತು!!
ಅವನಿಗೇನುಬಿಡು ಊರೊಳೊಗೆ ಅವನನನ್ನು
ಕಾಯುತ್ತಿರುವವರು... ಒಬ್ಬರೆ... ? ಇಬ್ಬರೆ..?
ಹಸಿದ ದೇಹಗಳೇಷ್ಟೊ?, ಬೆಂದ ಮನಸುಗಳೇಷ್ಟೊ?
ಎಲ್ಲರಿಗೂ ಅವನೇ ಬೇಕು...ನನಗೆ..!!? ನನಗೆ ಮಾತ್ರ
ನೀನೆ ಬೇಕು ಗಾಲಿಬ್ ನೀನೆ ಬೇಕು...
ಹೊಟ್ಟೆ ತುಂಬಿದವರಿಗೇನು ಗೊತ್ತು!!? ಹಸಿದವನ
ಸಂಕಟ, ಕೇವಲ ಕಾಮದ ವಾಸನೆಯನ್ನೆ....
ತುಂಬಿಕೊಂಡಂತಹ ಮಲ್ಲಿಗೆಯನ್ನು ಎಷ್ಟೂ...ಅಂತ
ಮೂಸಲಿ..ಮುಡಿಯಲಿ..ವಾಕರಿಕೆ ಬರುತ್ತಿದೆ!!
ಈಗೀಗ ಏತಕೋ...ಕಮಟು ವಾಸನೆ ತುಂಬಿದ ನಿನ್ನೆದೆಯ
ಮೇಲಿನ ಬಟ್ಟೆಯೆ ಹಿತವೆನಿಸುತ್ತಿದೆ..
ನೀನಿನ್ನು ಪ್ರೇಮಿಯಾಗಿರಲಿಲ್ಲ.... ದೊಡ್ಡ ಬಟ್ಟಲಿನಲ್ಲಿ
ಕಾಮಧೇನುವಿನ ಕೆಚ್ಚಲಿನಿಂದ ಕರೆದ, ನೊರೆಯಿಲ್ಲದ
ಹೊಳೆಯುವ ಹಾಲಿನಂತವನಿಗೆ, ನಾ ಮಧುಶಾಲೆಗೆ
ಕಾಲಿಟ್ಟಾಗಿನಿಂದ ಮೋಹಿತಳಾಗಿರುವೆ ಗಾಲಿಬ್!!
ಹುಟ್ಟು ಕಿವುಡನಿರಬೇಕವನು!! ಯಾರು ಕೇಳದ ನೋವು,
ಯಾರಲ್ಲಿ ಹೇಳಿಕೊಳ್ಳಲಾಗದಂತಹ ಸಂಕಟ, ಅನುಭವಿಸುವ
ಅವಮಾನ-ಯಾತನೆಯನ್ನು.... ದಿನೆ...ದಿನೆ
ಮೋಡದ ಮರೆಯಿಂದ ಇಣುಕಿಣುಕಿ ನೋಡುತ್ತಲೆ
ಪೂರ್ಣವಾಗುತ್ತಾನೆ...
ನಾನು ಹೀಗೆ, ಮಧುಶಾಲೆಯ ಮಹಡಿಯ ಮೇಲೆ ನಿಂತು
ಆಸೆ ಕಂಗಳಲ್ಲಿ ಅವನನ್ನು ನೋಡುತ್ತಾ, ಮಾತಾಡುತ್ತ
ನಿಂತೆನೆಂದರೆ ಸಾಕು...... ತಣ್ಣಗೆ ಕರಗುತ್ತ, ಹೊಟ್ಟೆಯಲ್ಲಿ
ಆರದ ಕಿಚ್ಚನ್ನು ಹಚ್ಚಿ ಕರಗಿ ಹೋಗಿಬಿಡುತ್ತಾನೆ.
ಇವನನ್ನು ನಂಬುವುದಾದರೂ ಹೇಗೆ? ತಬ್ಬಿ
ಮುದ್ದಾಡಲು... ಸನಿಹದಲ್ಲಿಲ್ಲ!! ಹಗಲಿಗೆ..? ಹೆಗಲಾಗುವುದಿಲ್ಲ !!
ಉತ್ತರಕುಮಾರನಷ್ಟೇ ಪೌರುಷ ಇವನದು ಗಾಲಿಬ್!!
ನಾನು ಹೂವಂತೆ ಹಗುರಾಗಬೇಕು ನಿನ್ನ
ಮಡಿಲೊಳಗೆ...!
ಬೆಚ್ಚಗಾಗಬೇಕು ಕಾವುಣ್ಣುವ ಮೊಟ್ಟೆಯಂತೆ!
ಜಗವನೇ....ಮರೆಯಬೇಕು ತೆಕ್ಕೆಯೊಳಗೆ!!
ಜೀವಸೆಲೆಯಾಗಿಬಿಡು ಈ ರಾತ್ರಿಗೆ...
ಇದೆಲ್ಲವ... ಕಂಡವನು ಹೊಟ್ಟೆಯುರಿದುಕೊಂಡು
ಮರೆಯಾಗಬೇಕು ನೋಡವನು ಮೊಡದೊಳಗೆ!!
ದಾರವಾಡದಲ್ಲಿ ಜರುಗಿದಂತಹ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ ನಂತರ ಇಂದು ಮತ್ತೆ ಸುಶೀಲಣ್ಣ ಕುಂದರಗಿ ಇವರ ಆಜ್ಞೆಯ ಮೇರೆಗೆ ಇಂದಿಲ್ಲಿ ಒಂದೆರಡು ಮಾತುಗಳನ್ನಾಡುವ ಸದಾವಕಾಶ ಒದಗಿ ಬಂದಿದೆ. ಅವರಿಗೂ ಕಾರ್ಯಕ್ರಮದ ಆಯೋಜಕರಿಗೂ ಮತ್ತು ಇಲ್ಲಿಯ ತನಕ ಸುಶ್ರಾವ್ಯವಾಗಿ ಹಾಡಿ ಎಲ್ಲರ ಮನಸೂರೆಗೊಳಿಸಿದಂತಹ ಎಲ್ಲ ಗಾನ ಕೋಗಿಲೆಗಳಿಗೆ ಮತ್ತು ಇಲ್ಲಿ ನೆರೆದಿರುವಂತಹ ಎಲ್ಲ ಸಾಹಿತ್ಯಾಸಕ್ತರಿಗೂ ನನ್ನ ನಮನಗಳನ್ನು ಸಲ್ಲಿಸುತ್ತ ಸಮಯದ ಅಭಾವವಿರುವುದರಿಂದ ನೇರವಾಗಿ ವಿಷಯಕ್ಕೆ ಬರುತ್ತಿದ್ದೇನೆ. ಜನಪದ ವ್ಯಾಖ್ಯಾನ ಇದು ನನ್ನ ಪಾಲಿಗೆ ಬಂದಂತಹ ಸೌಭಾಗ್ಯವೆ ಎಂದು ಹೇಳಬೇಕು ಕಾರಣವಿಷ್ಟೆ. ಈ ಜನಪದಕ್ಕೆ ಯಾವುದೇ ಜಾತಿ -ಧರ್ಮ ಮೇಲು-ಕೀಳು ಅಸ್ಪೃಶ್ಯತೆ-ಕೀಳರಿಮೆ, ದೌರ್ಜನ್ಯ-ದರ್ಪ, ಅಹಂಕಾರ-ಹಗೆತನ ಯಾವುದೆಂದರೆ ಯಾವುದರ ಸೊಂಕು ಇದರಲ್ಲಿ ಸುಳಿದಿಲ್ಲ. ಇಲ್ಲಿ ನಮಗೆ ದಕ್ಕುವುದು ಬರೀ ಪ್ರೀತಿ-ಪ್ರೇಮ, ನಿವೇದನೆ, ಅಂತಃಕರಣದ ನೋವು, ಹೇಳಲಾಗದಷ್ಟು ಸಂತೋಷ, ಕರುಣೆ-ದಯೆ, ಸಹಾನುಭೂತಿ ಒಟ್ಟಾರೆಯಾಗಿ ಸಿಗುವುದು ಒಡಲಾಳದ ಮಡಿಕೆಯಲ್ಲಿ ಕಟೆದ ಅನುಭವದ ಬೆಣ್ಣೆ ಇದನ್ನು ನಾವು ಯಾವಾಗ? ಎಷ್ಟು? ಹ್ಯಾಗಬೇಕೊ ಹಾಗೆ ಕರಗಿಸಿಯೊ ಅಥವಾ ಸವರಿಕೊಂಡು ಬಾಯ್ಚಪ್ಪರಿಸಿ ಉಣ್ಣುವಂತಹದ್ದಾಗಿದೆ ಹಾಗೆ ಇನ್ನೂ ಗರ್ವಪಟ್ಟು ಹೇಳುವುದಾದರೆ ಇವುಗಳಿಗೆಲ್ಲ ಯಾರೊಬ್ಬರ ಹೆಸರಿನ ಹಂಗಿಲ್ಲ. ಯಾರು? ಎಲ್ಲಿ? ಹೇಗೆ? ಬರೆದರು ಎಂಬ ಹೆಸರು- ಗುರುತಿನ ಹಂಗಿಲ್ಲ.
ನನ್ನ ಪಾಲಿಗೆ ಇಂದು ವ್ಯಾಖ್ಯಾನಿಸಲು ಸಿಕ್ಕ ಜನಪದ ಗೀತೆ ಸಂಸಾರ. ಸಂ ..... ಸಾರ
ಸಂ...ಸಾರ ಅಂತಂದ ಯಾಕ ಅಂತಂದನೆಪಾ ಅಂತಂದ್ರ ಈಗ ನೀವ್ ನೋಡ್ರಿ ಇವತ್ತಿನ ಹತ್ತ ನಿಮಿಷ ಮಾತಾಡೊ ಕಾರ್ಯಕ್ರಮಕ್ಕ ನಿಮ್ಮ ನಿಮ್ಮ ಮನಿಯಾಗ ನಿಮ್ಮ ಹೆಣ್ಮಕ್ಳು ಜಲ್ದಿ ಎದ್ದು ನೀರ ಕಾಸಿ ಬಟ್ಟಿ ಇಸ್ತ್ರೀ ಮಾಡಿಕೊಟ್ಟು ಬರುವಾಗ ಹುಷಾರು ಹೊತ್ತಿಗೆ ಊಟ ನಾಷ್ಟ ಮಾಡ್ರಿ, ಸಂಜಿಕ ಜಲ್ದಿ ಬಂದ್ಬಿಡ್ರಿ ಗಿರಮಿಟ್ ಮಿರ್ಚಿನೊ, ಮಂಡಕ್ಕಿನೊ ಮಾಡಿಟ್ಟಿರತಿನಿ ಬಂದು ತಿನ್ನೊರುವಿರಂತ ಅಂತಂದ ಅಷ್ಟ ಜ್ವಾಕಿ ಮಾಡಿ ಕಳಿಸಿಕೊಡ್ತಾರ ನಮ್ಮ ಮನಿಯಾಗ ಹಂಗಿಲ್ಲ ಮುಂಜಾನೆ ಎದ್ದ ದಾಡಿ ಮಾಡ್ಕೊಂಡ ಜಳಕ ಮಾಡಿ ಹೊಸ ಬಟ್ಟಿ ಹಾಕ್ಕೊಂಡು ನಮ್ಮಾಕಿ ಮುಂದ ನಿಂತಗೊಂಡು
ಆಕಿಗೆ ಅಂದೆ
ಈಗ ಹ್ಯಾಂಗ ಕಾಣಕ
ಹತ್ತೀನಿ!!😘
ಯಾಕ ಇಷ್ಟ ಜಲ್ದಿ ಎದ್ದು
ಎಲ್ಲಿಗೆ ಹೊಂಟಿರಿ ಅಂದ್ಲು!!🤔
ಕುಂದಗೋಳ ದೇಸಾಯರ
ವಾಡೇಕಾ...😍
ಯಾಕ ದನಾ ಕಾಯೋರ
ಕಮ್ಮಿ ಬಿದ್ದಾರನು ಅಂದ್ಲು...,🤐
ಮಾತ... ಇಲ್ಲ. ಸುಮ್ನ ಬ್ಯಾಗ ಎತ್ಕೊಂಡ ಬಸಸ್ಟ್ಯಾಂಡಗೆ ಬಂದಬಿಟ್ಟ್ಯಾ...
-------
ಅಡಗೀಯ ಮನಿಯಾಗ ಮಡದೀಯ ಸುಳಿವಿಲ್ಲ |
ಅಡಿಗೆ ಬಾಯಿಗೆ ರುಚಿಯಿಲ್ಲ | ಹಡೆದವ್ವ |
ಮಡದಿ ತವರಿಗೆ ಹೋಗ್ಯಾಳ
ಮೂರು ದೃಷ್ಟಾಂತಗಳು
೧. ರಸಿಕತೆ - ಯಾಕ ಬಾಯಿಗೆ ರುಚಿ ಬರೋದಿಲ್ಲಪಾ ಅಂತಂದ್ರ ನಮ್ಮ ದೋಸ್ತಂದ ಮದುವಿಯಾದ ಸಂತೋಷಕ್ಕ ಅವ್ರ ಮನಿಗೆ ಉಟಕ್ಕ ಕರದಿದ್ನಾ ಮೂರ ಮಂದಿ ಹೋಗಿದ್ವಿ, ಕೈ ತೊಳಕೊಂಡು ಸಾಲ ಹಿಡಿದು ನಾಲ್ಕು ಮಂದಿ ಕುಂತಗೊಂಡ್ವಿ ಅವ್ನ ಹೆಂಡ್ತಿ ಬಂದ ಊಟದ ತಾಟ ಇಟ್ಟ ಹೋದಳು ನೋಡ್ತೀವಿ ಕಾಮತ ಹೋಟಲ್ ನ್ಯಾಗ ಉಪ್ಪಿಟ್ಟು ಇಟ್ಟ ಕೊಟ್ಟಂಗ ಅನ್ನ ಇಟ್ಟ ಕೊಟ್ಟಿದ್ರು ನಾನವಂಗ ಕೇಳಿದ್ಯಾ
"ಯಾಕೊ ನಿಮ್ಮ ಹೆಣ್ಮಕ್ಳು ಬ್ರಾಹ್ಮಣ್ಸನು'
'ಯೇ.. ಅಲ್ಲೊ ಮಾರಾಯ ನಮ್ಮ ಮಂದಿಯಾಕಿಯ'
'ಮತ್ ಬರೀ ಅನ್ನಾ ನಿಡ್ಯಾರಲ್ಲೊ'
'ಏ ಮತ್ ನಿಮ್ ಮನಿಯಾಗ ನಿಮ್ಮ ತಂಗಿಗೆ ಅಡಗಿ ಮಾಡದ ಕಲಿಸಿ ಕೊಟ್ಟಿಲ್ಲಲ್ಲ ಆಕಿಗೆ' ಅಂತಂದ ನನ್ನ ಮ್ಯಾಲ ಮುರಕೊಂಡ ಬಿದ್ದ
'ಹೋಗ್ಲಿಬಿಡು, ಒಂದಿಷ್ಟು ಸ್ವೀಟಾದ್ರು ಮಾಡ್ಸಬೇಕಿತ್ತಿಲ್ಲೊ'
'ಯೇ...ಹೇ... ಹಾಗಿಲ್ಲಪ್ಪ ಇಬ್ರೂ ಡಯಟ್ ನ್ಯಾಗ ಅದೀವಿ ಅದ್ಕ ಸ್ವೀಟ್ ಗೀಟ ಏನು ಮಾಡಿಲ್ಲ '
ಅಲ್ಲ ಇಬ್ರನ್ನೂ ಸೇರಿಸಿ ತೂಗಿದ್ರೂನು ೫೦ ಕೆ.ಜಿ. ತೂಗೊದಿಲ್ಲ ಅಂತದ್ರಾಗ ಮತ್ ಡಯಟ್!! ಹಾಳಾಗಿ ಹೋಗ್ಲಿ ಅತ್ಲಾಗ ಅನ್ಕೊಂಡ, ಉಣ್ಣೊಕ ನನ್ನ ಕೈ ಚೂರು ಮುಂದ ದಬದಬ ಸಾರ ಹಾಕ್ಕೊಂಡ ಗಬಗಬ ಕಲಿಸಿಕೊಂಡ ಒಂದ ತುತ್ತ ಬಾಯಿಗೆ ಇಟ್ಗೊಂಡನ್ರೀ.... ಹೇಳ್ತಿನ್ ನಿಮ್ಗ ಕರೆಂಟ್ ಹೊಡ್ದ ಕಾಗಿ ಹಂಗ ಆಗಿಬಿಡ್ತ ಆಗ ನನ್ನ ಪಾಡು. ಜಗಿಲಿಲ್ಲ, ನುಂಗಲಿಲ್ಲ ಮಗ್ಗಲದಾಗ ಕುಂತಗೊಂಡ ಇಬ್ರು ಗೆಳೆಯರಿಗೆ ತಲಿಲೆ ಸೊನ್ನಿ ಮಾಡಿದ್ಯಾ ತಿನಬ್ಯಾಡ್ರಲೆ ಅಂತ, ಅವ್ರು ಮಕ್ಳು ಬ್ಯಾರೆನ ತಿಳ್ಕೊಂಡ ಬಿಟ್ರೊ ಎನೊ ಹ್ಞಾಂ ಮಗ ಅಡಗಿ ಮಸ್ತ್ ಇದ್ದಾಗ ಐತಿ, ಅದ್ಕ ಎಲ್ಲಾ ತಾನ ತಿನ್ನಾಕ ನಮ್ಗ ಬ್ಯಾಡ ಅನ್ನಾಕ ಹತ್ತಾನ ಅಂದ್ಕೊಂಡ್ರೊ ಏನೋ ಅವ್ರು ತಡನ ಮಾಡ್ಲಿಲ್ಲ ಗಬಗಬ ಅಂತ ಹೇಳಿ ಒಂದೊಂದು ತುತ್ತು ಬಾಯಿಗೆ ಹಾಕ್ಕೊಂಡ ಬಿಟ್ರು...!! ಏನ್ ಹೇಳ್ಲಿ ನಿಮ್ಗ ಅವ್ರ ಕತಿನಾ... ಎಮ್ಮೆ ಗಂಜಲಾ ಕುಡದ ಮ್ಯಾಲ ಮೊಸಡಿ ಹ್ಯಾಂಗ ಮಾಡಿರತಾವಲ್ಲ ಹಾಂಗ ಮಾರಿ ಮಾಡಕೊಂಡ ನನ್ನ ನೋಡಾಕ ಹತ್ತಿಬಿಟ್ರು. ಯಾಕಂತಂದ್ರ ಆ ತಂಗೆವ್ವ ಅನ್ನಕ್ಕ ಉಪ್ಪು ಹಾಕಿದ್ಲೊ ಏನ... ಉಪ್ಪನ್ಯಾಗ ಅಕ್ಕಿ ಹಾಕಿ ಅನ್ನ ಮಾಡಿದ್ಲೊ ಗೊತ್ತಿಲ್ಲ ಒಂದ ತುತ್ತಿಗೆ ಬಾಯಿ ಕೊರದಂಗ ಆಗಿ ಮುಖ-ಮುಖ ನೋಡ್ಕೊಂತ ಕುಂತಗೊಂಡ್ವಿ. ನಮ್ದ ಹಿಂಗಾತು ಇನ್ನ... ಗಂಡನ ಪಾಡ ಹ್ಯಾಂಗ ಆಗೀರಬ್ಯಾಡ ಅನ್ಕೊತ ಮೂವಾರು ಅವನ್ನ ನೋಡ್ತೀವಿ ಅಂವಾ... ಹೆಂಡ್ತಿ ಮುಖಾ ನೊಡ್ಕೊಂತನಾ ಉಣ್ಣಾಕ ಹತ್ತ್ಯಾನ ಆಕಿ ಕಣ್ಣ ಸನ್ಯಾಗ ಕೇಳಾಕ ಹತ್ತ್ಯಾಳ ಅಡಗಿ ಹ್ಯಾಂಗ ಆಗೈತಿ ಅಂತ
ಇವನು ಕಣ್ಣ ಸನ್ನಿಲೆ ಮಸ್ತ್ ಆಗೈತಂತಂದು ಸೊನ್ನಿ ಮಾಡಾಕ ಹತ್ಯಾನ. ಇದನ್ನ ನೋಡಿ ಒಂದ ತುತ್ತಿಗೆ ದಿಕ್ಕನೆ ಎದ್ದ ನಿಂತ ಹೊಂಟನಿಂತ ತಕ್ಷಣ ಅಂವಾ ಅಂದ
ಯಾಕೊ ದೋಸ್ತ' ನಾ ಅಂದೆ 'ಹೊಟ್ಟಿ ತುಂಬಿ ಹೋತೊ ಮಾರಾಯ'
ಅವನ ಹೆಂಡ್ತಿ ಅಂದ್ಲು 'ಅಣ್ಣಾರ ಇನ್ನೊಂದ ತುತ್ತ ರೀ'
ನಾನು ಕೈ ಮುಗಿದು 'ಸಾಕ ತಾಯಿ ಮಹಾಭಾರತದೊಳಗ ಶ್ರೀ ಕೃಷ್ಣ ಪರಮಾತ್ಮ ಹ್ಯಾಂಗ ದ್ರೌಪದಿ ಕೈಯ್ಯಾನ ಒಂದ ಅಗಳ ಉಂಡು ಸಂತೃಪ್ತನಾಗ್ತನಲ್ಲ ಹಾಂಗ ಇದೊಂದು ತುತ್ತು ಸಾಯೊ ತನಕ ಮರೆಯೊದಿಲ್ಲವ್ವ' ಅಂತ ಹೇಳಿದ್ದಷ್ಟ ತಡ ಮುಸುರಿ ಕೈನ ಮುಕುಳಿ ಹಿಂದ ಪ್ಯಾಂಟಿಗೆ ಒರಿಸಗೊಂತ ಮನಿಕಡೆಗೆ ಓಟನ..
ಹಿಂಗ ಮಣ್ಣೇತ್ತಿನ ಅಮವಾಸೆ ಸುನೆ ಹೆಂಡ್ತಿ ತವ್ರಿಗೆ ಹೋಗಿದ್ಲು ಇಂವಾ ಮತ್ ಪೋನ ಮಾಡಿದ ದೋಸ್ತ ನಿಮ್ ತಂಗಿ ಊರಿಗೆ ಹೋಗಿ ವಾರಾತೊ ಯಾಕೊ ಮನಿಯಾನ ಅಡುಗಿನ ರುಚಿ ಬರುವಲ್ದೊ ಅಂದ
ನಾನಂದೆ ಬರೋದಿಲ್ಲ ದೋಸ್ತ..ಬರೋದಿಲ್ಲ ಇನ್ನೊಂದ ವಾರ ತಡಿ ನಾನಾ ಹೋಗಿ ತಂಗ್ಯಮ್ಮನ್ನ ಕರಕೊಂಡ ಬಂದ ನಿನ್ ಕಡೆ ಬಿಟ್ಟ ಬರ್ತಿನಿ ಅಂತ ಹೇಳಿ ಕಾಲ್ ಕಟ್ ಮಾಡಿಬಿಟ್ಯಾ
ಇದು ಬಾಂಧವ್ಯದ ರಸಿಕತೆ
೨. ಬೇಸರ - ಮೊದ್ಲ ನಂ ಗಂಡ ಮಕ್ಳ ಗಿಡದಾನ ಮಂಗ್ಯಾ ಇದ್ಹಂಗ ಹೆಂಡ್ತಿ ತವ್ರಿಗೆ ಹೋಗ್ಯಾಳಂತಂದ ತಕ್ಷಣ ಅವತ್ತ ರಾತ್ರಿ ಏನೊ ಬೆಳಕ ಹರೆತನಾನು ಡಾಬಾದಾಗ ಟೆಂಟ್ ಎರಡನೆ ದಿನ ಸಾವಜಿ ಖಾನಾವಳಿ ಮೂರನೆ ದಿನಕ್ಕ ಭೀಮಾಂಬಿಕಾ ಖಾನಾವಳಿ ನಾಲ್ಕನೆ ದಿನಕ್ಕ ಬಾಯಿ ರುಚಿ ಇಲ್ಲ ರುಚಿ ಇಲ್ಲ
೩. ಸರ್ವಾಧಿಕಾರಿ- ಹೆಂಡ್ತಿ ಮ್ಯಾಲ ದೌಲತ್ತ ತೋರಸಿಲಿಕ್ಕಂತಂದ್ರ ನಮ್ಗ ಊಟ ಸೇರೊದರಿಲ್ಲ ನಾಕ ಬೈಗಳ ಬೈದ ಮ್ಯಾಲ ಗಂಟಲದಾಗ ಅನ್ನ ಇಳಿತಿರ್ತದ. ಏನ್ ಪಲ್ಯ ಮಾಡಿಲೆ ಇವನೌನ ಒಂದಕ್ಕರ ಉಪ್ಪಿಲ್ಲ ಖಾರಿಲ್ಲ ಒಂದಿಷ್ಟು ಕೊಬ್ರಿ, ಗುರಳ್ಳ ಪುಡಿ ಹಾಕಿ ಮಾಡಿದ್ರ ಏನ ನಿಮ್ಮಪ್ಪನ ಮನಿ ಗಂಟ ಹೊಕ್ಕಿತ್ತನ ದನಾನರ ತಿಂತಾವನಲೆ ಇಂತ ಖೂಳನ ಅಂದಾಗ
ಒಳಗಿಂದ ಒಂದ ಮಾತ ಬರ್ತದ್ರಿ ಅದ್ಕ ನಿಂಗ ಹಾಕಿನ
ನಮ್ಮಪ್ಪಗ ಹೇಳಿದ್ಯಾ ಇನ್ನೊಂದ ಎರಡ ವರ್ಷ ಬ್ಯಾಡ ತಡಿಯೊ ಮಾರಾಯ ಅಂತಂದ್ರು ಕೇಳಲಿಲ್ಲ ಇಂತಾಕಿನ ತಂದು ಜೋಡ ಮಾಡಿದ ನಂಗ
ಹ್ಞೂಂ.. ಮತ್ತೆ ನಾವೆನರ ಕರಿಯಾಕ ಬಂದಿದ್ವೇನು ಮನಿತನಕ ಇಪ್ಪತ್ತ ಊರ ಅಡ್ಯಾಡಿ ಕೊನಿಗೆ ಬಂದಿದ್ರೆಲ್ಲ ಮಾಡ್ಕೊಂಡ್ರ ಈಕಿನಾ ಮಾಡ್ಕೊತಿನಿ ಅಂತಂದ
ಆವಾಗ ಮಂಕ ಬಡದಿತ್ತಲೆ, ಇವಾಗ ಆಗಿದ್ರ ಲಕ್ಷ ಲಕ್ಷ ರೂಪಾಯಿ ವರದಕ್ಷಿಣೆ ಎಂಟೆಂಟ ತೊಲಿ ಬಂಗಾರ..
ಹೌದಪ್ಪ ಜೊಕಮಾರ ಕೊಡ್ತಿದ್ರ ನಿನ್ಗ, ಹದಿನೈದ ದಿನದ್ದ ಹೋತ್ತಾತ ಕಾಂತಾರ ಸಿನಿಮಾಕ ಕರ್ಕೊಂಡ ಹೋಗಂತಂದ
ಅಂದ ತಕ್ಷಣ ಗಂಟಲನ್ನ ಕ್ಯಾಕರಿಸಿ ಸರಿಮಾಡಿಕೊಂಡು
ಒಂದು ಕವನ ಹೇಳಿ ಬಿಡೊದು
ಎಷ್ಟರ ಸೆಡವು ನನ್ ಮ್ಯಾಲೆ
ಮುಡಿಗೆ ತೊಡಿಸ್ಲೇನ ಮಲ್ಲಿಗೆ ಮಾಲೆ
ಕೇಳ್ಲಿಲ್ಲಂತ ಸಿಟ್ಟಾಗಬೇಡ ನೀನು ಆ ಮೇಲೆ
ಆ ಮೊಗದಾಗ ಮಲ್ಗಿ ನಗುನ ಇಲ್ಲಂತಂದ್ರ
ನಾ ಹ್ಯಾಂಗರ ಬದುಕಿರ್ಲ್ಯಾ ಈ ಭೂಮಿ ಮ್ಯಾಲೆ!!
ಹಚ್ಚಡದ ಪದರಾಗ ಅಚ್ಚ ಮಲ್ಲಿಗೆ ಹೂವ|
ಬೆಚ್ಚಿ ನನ್ನ ಮ್ಯಾಲೆ ಒಗೆವಂಥ |ರಾಯರನ
ಬಿಟ್ಟಾಂಗ ಬರಲಿ ಹಡೆದವ್ವ ||
ಬಿಚ್ಚಿ ನನ್ನ ಮ್ಯಾಲೆ ಒಗೆವಂತ ಆಹಾ.... ಜೇನಿನ ಹುಟ್ಟಿಗೆ ಕೈ ಹಾಕಿ ಸೀದಾ ಬಾಯೊಳಗೆ ಹಿಂಡಿಕೊಂಡಂತಹ ಭಾವ. ಇದನ್ನ ನೆನಸಿಕೊಂಡರೆ ಹರೆದ ಹುಡುಗರು ಎರಡ ಹೆಜ್ಜೆ ಮುಂದಕ್ಕ ಹೋಗ್ತಾರ ನಮ್ಮಂತೊರು ಒಂದ ಹೆಜ್ಜಿ ಹಿಂದಕ್ಕ ಹೋಕ್ಕಿವಿ.
ಇಲ್ಲಿ ಒಂದು ಸಂದರ್ಭವನ್ನು ನಾನು ನೆನಪಿಸಿಕೊಳ್ಳ ಇಷ್ಟಪಡ್ತೀನಿ ಬಹುಶಃ ಆ ತಾಯಿ ಶಾರದೆ ಇಂತಹ ಗಳಿಗೆಯಲ್ಲಿ ಅಂತಹ ವಿಷಯವನ್ನು ನನಗೆ ನೆನಪು ಮಾಡಿಕೊಟ್ಟಿದ್ದಕ್ಕೆ ನಾನು ಧನ್ಯ ಎಂದುಕೊಳ್ಳುತ್ತೇನೆ. ೧೯೯೭-೯೮ ರಲ್ಲಿ ಗಂಗಾವತಿಯಿಂದ ೧೩ ಕಿ.ಮೀ ದೂರ ಇರುವ ಹೊಸಳ್ಳಿ ಕ್ಯಾಂಪನಲ್ಲಿ ನಾನು ಯಾವುದು ಒಂದು ಕಾರಣಕ್ಕೆ ೨೦ ದಿನ ಇದ್ದೆ ಈಗೀನ ಹಾಗೆ ಅಲ್ಲಿನ್ನೂ ಕಾಂಕ್ರೀಟ ಕಟ್ಟಡಗಳು ತಲೆಯೆತ್ತಿದ್ದಲ್ಲ. ಗುಡಿಸಲುಗಳೆ ಜಾಸ್ತಿ, ನಾನಿದ್ದ ಎದುರು ಗುಡಿಸಲಿನಲ್ಲಿ ಒಂದು ಕುಟುಂಬವಿತ್ತು ಇಬ್ಬರೆ ಗಂಡ-ಹೆಂಡತಿ ಅವರದ್ದು ಚಹಾದಂಗಡಿಯ ವ್ಯಾಪಾರ ಬೆಳಿಗ್ಗೆ ೫-೩೦ ಕ್ಕೆ ಆ ತಾಯಿ ಇಡ್ಲಿ ವಡೆ ಮತ್ತು ರಸಂ ನ್ನು ಮಾಡಿಟ್ಟಿರುತ್ತಿದ್ದಳು ಆ ಸುತ್ತಮುತ್ತಲಿನ ಗುಡಿಸಲುಗಳಲ್ಲಿ ವಾಸಿಸುತ್ತಿದ್ದವರು ಬೆಳಿಗ್ಗೆ ಆರು ಗಂಟೆಗೆ ಎದ್ದು ಇವರ ಅಂಗಡಿಯಲ್ಲಿ ಇಡ್ಲಿ ವಡೆಯನ್ನು ತಿಂದು ಗದ್ದೆಗಳಿಗೆ ಹೊರಟುಬಿಡುತ್ತಿದ್ದರು ಎಂಟು ಗಂಟೆಯೊಳಗೆ ಮಾಡಿದ ಎಲ್ಲ ತಿಂಡಿ ಖಾಲಿಯಾಗಿಬಿಡುತ್ತಿತ್ತು. ಮತ್ತೆ ತಿಂಡಿಯೇನಾದರು ಬೇಕಾದರೆ ಗಂಗಾವತಿಗೆ ಹೋಗಬೇಕಾಗಿತ್ತಿತ್ತು. ಆದರೆ ಇದಲ್ಲ ವಿಶೇಷತೆ ವಿಷಯ ಏನಪ್ಪಾ ಅಂದರೆ ಆಕೆಯ ಗಂಡ ಸಾಯಂಕಾಲ ಐದು ಗಂಟೆಗೆ ಸೈಕಲ್ ತಗೊಂಡು ಗಂಗಾವತಿಗೆ ಹೋಗಿ ಅಲ್ಲಿಂದ ಕಿರಾಣಿ ಸಾಮಾನನ್ನು ತರುವುದರ ಜೊತೆಗೆ ಮಲ್ಲಿಗೆ ಹೂವನ್ನು ಹಿಡಿದುಕೊಂಡು ಬರುತ್ತಿದ್ದ, ರಾತ್ರಿ ಎಂಟು ಗಂಟೆಯನ್ನುವಷ್ಟರಲ್ಲಿ ಮಲಗಿಬಿಡುತ್ತಿದ್ದರು ನಾನು ಹೋದ ದಿನದಿಂದ ಹಿಡಿದು ಬರುವ ಹಿಂದಿನ ದಿವಸದವರೆಗೂ ಇದನ್ನೆ ಗಮನಿಸುತ್ತಿದ್ದೆ ನನಗೆ ಕುತೂಹಲವನ್ನು ತಡೆದುಕೊಳ್ಳಲಾರದೆ ನಾನುಳಿದುಕೊಂಡಿದ್ದ ಗುಡಿಸಲಿನ ಮಾಲೀಕನ ಮಗನನ್ನು ಕೇಳಿಯೆಬಿಟ್ಟೆ. ಅವನೆಂದ ಇವತ್ತು ರಾತ್ರಿ ಆ ರಹಸ್ಯನ ನಿನಗೆ ತೋರಿಸ್ತೀನಿ ಅಂದ ನನಗೆ ಒಳಗೊಳಗೆ ಏನೇನೊ ಒಂಥರಾ
ಖುಷಿ ಮತ್ತು ಕಳವಳ ಈ ವಿಷಯವಂತೂ ಇಡಿ ಹಳ್ಳಿಗೆ ಗೊತ್ತಾದ್ದರಿಂದ ಯಾರು ಇವರ ಬಗ್ಗೆ ಅಷ್ಟೊಂದು ತಲೆಯನ್ನು ಕೆಡಸಿಕೊಳ್ಳುತ್ತಿರಲಿಲ್ಲ ನಾನು ಹೊಸಬ ನನಗೇನೊ ಕುತೂಹಲ. ಸರಿ ರಾತ್ರಿ ಎಂಟರ ಸಮಯ ನಮ್ಮ ಮಾಲೀಕನ ಮಗ ಗುಡಿಸಲಿನ ಬಾಗಿಲಿನ ಕಿಂಡಿಯಿಂದ ನನ್ನನ್ನು ನೋಡಲು ತಿಳಿಸಿದ ನಾನು ತುಂಬಾ ಮುಜುಗರದಿಂದಲೆ ನೋಡತೊಡಗಿದೆ.
ಒಳಗಡೆ ಗುಡಿಸಲಿನಲ್ಲಿ ಇಬ್ಬರು ಊಟಕ್ಕೆ ಕುಳಿತುಕೊಂಡಿದ್ದರು. ಊಟವಾದ ನಂತರ ಅ ಅಜ್ಜ ಅಜ್ಜಿಯ ಭುಜವನ್ನು ಹಿಡಿದು ಮಂಚದ ಮೇಲೆ ಕುಳ್ಳರಿಸಿ ತಾನು ತಂದಂತಹ ಮಲ್ಲಿಗೆಯನ್ನು ಬಾಯಿಯಿಂದ ಹರಿದು ಎರಡು ಭಾಗ ಮಾಡಿ ಒಂದನ್ನು ಅಜ್ಜಿಯ ತುರುಬಿಗೆ ಮುಡಿಸಿ ಹಿಂದೆ ಸರಿದು ಅವಳ ಕಾಲಡಿಯಲ್ಲಿ ಕುಳಿತುಕೊಂಡು ಅಜ್ಜಿಯ ಪಾದಗಳೆರಡನ್ನು ತನ್ನ ತೊಡೆಯ ಮೇಲೆ ತೆಗೆದುಕೊಂಡು ಪೂಜೆ ಮಾಡಿ ಹೂವನ್ನು ಹಾಕಿ ಮತ್ತೆ ಆ ಪಾದಗಳನ್ನು ನೆಲಕ್ಕೆ ಸೋಕಿಸದೆ ಹಾಗೆ ಎತ್ತಿ ಹಾಸಿಗೆಯ ಮೇಲೆ ಇಟ್ಟು ಅಜ್ಜಿಯನ್ನು ಮಲಗಿಸಿ, ಸೊಳ್ಳೆಗಳನ್ನು ಓಡಿಸಲು ಹೊಗೆಯನ್ನು ಹಾಕಿ ನಂತರದಲ್ಲಿ ಮಂಚದ ಸುತ್ತ ಸೊಳ್ಳೆ ಪರದೆಯನ್ನು ಬಿಟ್ಟು ತಾನು ಕೆಳಗಡೆ ಮಲಗಿಕೊಂಡ ಇಂತಹ ದೃಶ್ಯ ಇಂದಿಗೂ ನನ್ನೆದೆಯಲ್ಲಿ ಅಚ್ಛಳಿಯದೆ ಉಳಿದುಬಿಟ್ಟಿದೆ. ಆಶಯ ನುಡಿಗಳನ್ನಾಡುವ ಸಂದರ್ಭದಲ್ಲಿ ಶ್ರೀಯುತರು ಹೇಳಿದ ಹಾಗೆ ನಾವೆಲ್ಲ ಪೂರ್ವ ಜನ್ಮದಲ್ಲಿ ನಿಜವಾಗಲೂ ತಪಸ್ಸನ್ನು ಮಾಡಿರಬೇಕು. ಎಲ್ಲಿಯ ಗಂಗಾವತಿ!! ಎಲ್ಲಿಯ ಕುಂದಗೋಳ!! ಎಷ್ಟೋ ವರ್ಷದ ಹಳೆಯ ನೆನಪು ಇಂದು ಇಲ್ಲಿ ನಾನು ಈ ಸಾಲುಗಳಿಗೆ ಸಂದರ್ಭಕ್ಕನುಗುಣವಾಗಿ ಹೇಳುವುದೆಂದರೆ ನನ್ನದು ದೊಡ್ಡ ಪುಣ್ಯವೆ.
ಹಾಗೆ ನಾನು ನಮ್ಮಾಕಿಗೆ ಅಗಾಗ ಕಾಲೆಳೆಯಲು ಈ ಕೆಳಗಿನ ಸಾಲುಗಳನ್ನು ಹೇಳುತ್ತಿರುತ್ತೇನೆ.
ತಳಕ್ಯಾಡಿ ನುಳಿಕ್ಯಾಡಿ
ನುಲಿಯತ್ತ ಬರಬೇಡ!!
ನಿಮ್ಮಪ್ಪ ಕೊಟ್ಟ
ಮಂಚದ ಕಾಲು ಗಟ್ಟಿಲ್ಲ!!
ಮುರಿದು ಬಿದ್ದರೆ...
ಎರಡನೆ ಮದುವೆಗಾಗಿ ನನ್ನಲ್ಲಿ
ಸಮಯವಿಲ್ಲ!!
ಈ ಸಾಲುಗಳನ್ನು ಹೇಳಿದ ಮೇಲೆ ಗಂಡಸರ ಪಾಡು ಏನಾಗಿರಬೇಡ!!?
ಗಂಡ ಹೆಂಡಿರ ಜಗಳ ಗಂಧ ತೀಡಿಧಾಂಗ
ಲಿಂಗಕ ನೀರು ಎರೆದಾಂಗ| ಹಿಡಿ ಹೊಳೆಯ
ಗಂಗಪ್ಪ ಸಾಗಿ ಹರಿಧಾಗ ||
ಸಂಸಾರ ಅಂದಮೇಲೆ ಜಗಳ ಇದ್ದಿದ್ದ. ಜಗಳ ಮಾಡಲಾರ್ದ ಇರೋ ಸಂಸಾರದೊಳಗ ಸಾರನ ಇರೋದಿಲ್ಲ. ಅಂತ ಶಿವ ಪಾರ್ವತಿಯರ ಸಂಸಾರದೊಳಗ ಜಗಳಾಟ ಆಗ್ಯಾವು ಇನ್ನ ನಮ್ಮಂಥ ಸಾಮಾನ್ಯ ಜನರ ಬದುಕನ್ಯಾಗ ಜಗಳ ಇಲ್ಲಂತಂದ್ರ ಹ್ಯಾಂಗ ಅಂದ್ರ ನಾಹೇಳೊ ಅರ್ಥ ಬದುಕನ್ನ ಜಗಳ ಮಾಡ್ಕೊಂತ ಹೋಗಿಬಿಡ್ರಿ ಅನ್ನೊದಲ್ಲ ಮುನಿಸು ಒಂದಿಟು ಬಾಯಿ ಮಾಡ್ರಿ ಬಿ.ಪಿ. ಮತ್ತು ಮಾನಸಿಕ ಒತ್ತಡ ಕಮ್ಮಿ ಅಕ್ಕೈತಿ ಸಂತೋಷ ಸಮಯ ಇದ್ದಾಗ ಜೊತೆಗೆ ಹಂಚಿಕೊಂಡು ನಕ್ಕೊತ ಇರ್ರಿ ಆಯುಷ್ಯ ಹೆಚ್ಚಾಗ್ತದ ಅದ್ಕ ಶಿವ ತನ್ನ ನೆತ್ತಿ ತಣ್ಣಗಿರ್ಲೆಂತಂದ ಗಂಗಿನ ಕುಂದ್ರ್ಸಕೊಂಡು ಪಾರ್ವತಿನ ಪಕ್ಕಕ್ಕ ಕರ್ಕೊಂಡ ಕುಂತಾನ. ನಮ್ದು ನೆತ್ತಿ ತಣ್ಣಗಿರ್ಲೆಂತಂದ ಮತ್ತ ಇನ್ನೊಬ್ರನ್ನ ಕಟ್ಗೊಬ್ಯಾಡ್ರ ಮತ್ತ
ಒಬ್ರ ಹೆಂಡ್ರಿಗೆ ಎರಡು ಕ್ರೆಡಿಟ್ ಕಾರ್ಡ್ ಸಾಲೊದಿಲ್ಲ ಅಂತಾದ್ರೊಳಗ ಮತ್ತೊಬ್ಬಾಕಿನ ಕಟ್ಗೊಂಡ ಬಂದ್ವೆಂದ್ರ ತಲಿಮ್ಯಾಲ ಎ.ಟಿ.ಎಮ್ ಮೇಷಿನ್ ಇಟ್ಗೊಂಡ ತಿರಗ್ಯಾಡ
ಬೇಕಾಗ್ತದ.
ನಮ್ಮ ಮನಿಯಾಗನೂ ನಮ್ಮಾಕಿ ಯಾವುದಕ್ಕರ ಸಿಟ್ಟಾದ್ರ
ನಾನು ಹಿಂಗ ಹೇಳ್ತಿನ್ರಿ...
ಸಿಡಿದಾರ ಸಿಡಿಸಿಬಿಡು ನಿನ್ನ
ಮಾತಿನ ಸಿಡಿಮದ್ದು
!!ಕಣ್ಣೀರ ತುಂಬಿದ ಕಣ್ಣಿಲೆ
ನನ್ನ ನೋಡಬ್ಯಾಡ!!
ನೊಂದು - ಬೆಂದು ಬರೆಯಾಕ
ನಾ ಬೇಂದ್ರೆ ಅಜ್ಜ ಅಲ್ಲ
ಹಾಸಿಗೆ ಹಾಸಿಂದ ಮಲ್ಲಿಗೆ ಮುಡಿಯೆಂದ|
ಬೇಸತ್ತರೆ ಮಡದಿ ಮಲಗಿಂದ| ನನ ರಾಯ|
ತನ್ನ ನೋಡಿ ತವರ ಮನೆಯೆಂದ||
ಮಡದೀಯ ಬಡಿದಾನ ಮನದಾಗ ಮರುಗ್ಯಾನ |
ಒಳಗೋಗಿ ಸೆರಗ ಹಿಡಿಯೂತ | ಕೇಳ್ಯಾನ |
ನಾ ಹೆಚ್ಚೋ ನಿನ್ನ ತವರ ಹೆಚ್ಚೋ ||
ಬಹುಶಃ ಜಗತ್ತೀನಲ್ಲಿ ಅತೀ ಭಾವುಕ, ಅಂಜುಬುರುಕ, ಭಾವೋದ್ವೇಗ ಜೀವಿ ಯಾವುದಾದರು ಇದೆ ಅಂತಂದ್ರೆ ಅದು ಗಂಡು ಪ್ರಾಣಿ. ಹುಟ್ಟಿನಿಂದ ಹೆಣ್ಣು ಸಾಯುವವರೆಗೂ ಗಂಡಿನ ನೆರಳಿನಲ್ಲಿಯೆ ಬದುಕಬೇಕೆಂಬುದನ್ನ ಸಮಾಜ ಶಾಸ್ತ್ರ, ಧರ್ಮ ಕಟ್ಟು ಪಾಡುಗಳೆಲ್ಲ ಹೇಳಿವೆ, ಹೇಳಿಕೊಂಡು ಬಂದಿವೆ ಹೇಳಿಕೊಂಡೆ ಸಾಗುತ್ತಿವೆ ಇದು ತಪ್ಪು. ಗಂಡೆ ಹುಟ್ಟಿನಿಂದ ಹಿಡಿದು ಸಾಯುವವರೆಗೂ ಹೆಣ್ಣಿನ ಆಶ್ರಯ, ಮಡಿಲು ಆಕೆಯ ಸಹಾಯ ಸಹಕಾರ ಧೈರ್ಯದಿಂದಲೆ ಬದುಕನ್ನ ಸಾಗಿಸುತ್ತಾನೆ ಮಗುವಾಗಿದ್ದಾಗ ತಾಯಿ ಮಡಿಲು ಯೌವ್ವನಾವಸ್ಥೆಗೆ ಮಡದಿ ಮುಪ್ಪಿನಲ್ಲಿ ಮಗಳು ಮತ್ತು ಮೊಮ್ಮಗಳ ಮೇಲೆ ಹೆಚ್ಚು ವ್ಯಾಮೋಹವನ್ನು ಹೊಂದುಕೊಂಡಿರುವಂತವನಾಗಿರುತ್ತಾನೆ. ಮಕ್ಕಳು ಬೆಳೆದು ಕಾಲೇಜೊ ಹಾಸ್ಟೆಲೊ ಎಂದು ದೂರದೂರಿಗೆ ಹೋದಾಗ ಆಗ ಹೆಂಡತಿ ತವರೂರಿಗೆ ಹೋಗಿ ಬರುತ್ತೇನೆ ಎಂದಾಗ ಮೇಲ್ನೊಟಕ್ಕೆ ಹ್ಞೂಂ ಎಂದರು ಒಳಗೊಳಗೆ ಒಂಟಿತನದ ಭಾವ ಕಾಡಲು ಶುರುವಾಗಿರುತ್ತದೆ.
ನಮ್ಮಾಕಿ ತವರಿಗೆ
ಹೊಂಟು ನಿಂತಾಗಲೆಲ್ಲ ಅವಳ
ಸೇರಗನ್ನು ಹಿಡಿದು ನಾನು
ಬೇಡಿಕೊಳ್ಳುತ್ತೇನೆ ಹೋಗಬೇಡ
ಹೋಗಬೇಡ!! ಎಂದು...
ಆಗ ನನ್ನಾಕೆ ಕಣ್ಣಲ್ಲೆ ಕಣ್ಣೀಟ್ಟು
ಕೈಯಲ್ಲಿದ್ದ ಲಗೇಜನ್ನು ಕೇಳಗಿಟ್ಟು
ಕೇಳುತ್ತಾಳೆ...ಹಂಗಿದ್ರ ಜಾತ್ರಿಗೆ ಸೀರಿ
ತರಾಕ ಸೇಡಜಿ ಅಂಗಡಿಗೆ ಯಾವಾಗ
ಹೋಗುನು...?
ನಾನೆನ್ನುತ್ತೇನೆ ೭ - ೧೫ ರ ಲಾಸ್ಟ್ ಬಸ್
ಮಿಸ್ ಆಕ್ಕೈತಿ ಜಲ್ದಿ ನಡಿ
ಬಸ್ ಸ್ಟ್ಯಾಂಜಡಿಗೆ ಹೋಗುಣು.
ಇಂತಹ ಒಂದು ಸುಂದರ ಅನುಭವದ ಮೂಟೆಯನ್ನು ಕಟ್ಟಿಕೊಡಲು ಅವಕಾಶ ಮಾಡಿಕೊಟ್ಟಂತಹ ಸುಶೀಲಣ್ಣ ಕುಂದರಗಿ ಹಾಗೂ ರವಿ ಕಮದೊಳ್ಳಿ ಮತ್ತು ಕುಂದಗೋಳ ಧಣಿ ಮತ್ತವರ ತಂಡಕ್ಕ ನನ್ನ ಅನಂತ ಶರಣು 🙏