ಬಾನೊಳು ಮೂಡಿರೆ
ಜೋಡಿ ತಾರೆಗಳು
ಭಕ್ತರ ಸಮೂಹವ
ಕುಣಿಸಿಹೆ ಘಂಟೆಗಳು
ಜೈ ಜೈಕಾರವ ಮೊಳಗಿಸುತ
ರಥದ ಹಗ್ಗವ ಹೀಡಿದರು
ಹರುಷದಿ ಎಳೆದರೆಲ್ಲರು
ಮಲ್ಲಯ್ಯನ ತೇರನು
ಬೇಡಿದ ವರಗಳ
ನೀಡುವ ಕಾಲೇಶ
ಭಕ್ತರ ಇಷ್ಟಾರ್ಥಗಳ
ಅನುಗ್ರಹಿಸುವ ಈಶ
ಜಾಲೀಂದ್ರ ಗಿರಿಯ
ಗುಹೆಯಲಿ ನೆಲೆಸಿಹನು
ಬೆಟ್ಟವನೇರಿ ಬರುವವರೆಲ್ಲರಿಗೂ
ನೀಡುವನು ಅಭಯವನು
ಅಂತರಗಂಗೆಯ ಜಿನುಗುತಲಿರಲು
ಮಾಡಿದ ಪಾಪವದಳಿಯುತಿರಲು
ದಕ್ಷಿಣಾಭಿಮುಖವಾಗಿ ಗಿರಿಯಿರಲು
ದಕ್ಷೀಣಕಾಶಿಯೆಂದೆ ಕರೆಯುತಿಹರು
ಏನೀ ಜಾತ್ರೆಯ ಸೊಬಗು
ನೋಡಿದವರೆ ಧನ್ಯ
ಅನುಭವಿಸಿದ ಜನರೆಲ್ಲರೂ
ಪಡೆದರೆಲ್ಲ ಪುಣ್ಯ
ರವಿಯು ಕರಗಿರೆ
ಸೂಸಿ ತಂಪನು
ದವನವು ಮೆರುಗಿರೆ
ಜಾತ್ರೆಯ ಕಂಪನು
ನವ ಜೋಡಿಗಳು
ಕಣ್ತುಂಬಿರೆ ಜಾತ್ರೆಯನು
ಹೂಡಿರೆ ತರುಣ ತರುಣಿಯರು
ನಯನ ಕದನವನು
ಬನ್ನಿ ನೋಡಿರೀ...
ಸುತ್ತ ಹತ್ತೂರಿನ ಜಾತ್ರೆಯನು
ಬರುವಾಗ ತಪ್ಪದೆ ತನ್ನಿ ನಿಮ್ಮ
ಕುಡಿಯುವ ನೀರನ್ನು
ಈ ಐದು ದಿನದ ಜಾತ್ರೆಗೆ
ಬರುವ, ಬಂದಿರುವ
ಬಂದು ಹೋಗುವ ಎಲ್ಲ
ಕಳಕಮಲ್ಲಯ್ಯನ ಭಕ್ತರಿಗೆ
ನಮ್ಮ ಸ್ವಾಗತಗಳು
No comments:
Post a Comment