Tuesday, April 11, 2017

ತೇರು

ಬಾನೊಳು ಮೂಡಿರೆ
ಜೋಡಿ ತಾರೆಗಳು
ಭಕ್ತರ ಸಮೂಹವ
ಕುಣಿಸಿಹೆ ಘಂಟೆಗಳು

ಜೈ ಜೈಕಾರವ ಮೊಳಗಿಸುತ
ರಥದ ಹಗ್ಗವ ಹೀಡಿದರು
ಹರುಷದಿ ಎಳೆದರೆಲ್ಲರು
ಮಲ್ಲಯ್ಯನ ತೇರನು

ಬೇಡಿದ ವರಗಳ
ನೀಡುವ ಕಾಲೇಶ
ಭಕ್ತರ ಇಷ್ಟಾರ್ಥಗಳ
ಅನುಗ್ರಹಿಸುವ ಈಶ

ಜಾಲೀಂದ್ರ ಗಿರಿಯ
ಗುಹೆಯಲಿ ನೆಲೆಸಿಹನು
ಬೆಟ್ಟವನೇರಿ ಬರುವವರೆಲ್ಲರಿಗೂ
ನೀಡುವನು ಅಭಯವನು

ಅಂತರಗಂಗೆಯ ಜಿನುಗುತಲಿರಲು
ಮಾಡಿದ ಪಾಪವದಳಿಯುತಿರಲು
ದಕ್ಷಿಣಾಭಿಮುಖವಾಗಿ ಗಿರಿಯಿರಲು
ದಕ್ಷೀಣಕಾಶಿಯೆಂದೆ ಕರೆಯುತಿಹರು

ಏನೀ ಜಾತ್ರೆಯ ಸೊಬಗು
ನೋಡಿದವರೆ ಧನ್ಯ
ಅನುಭವಿಸಿದ ಜನರೆಲ್ಲರೂ
ಪಡೆದರೆಲ್ಲ ಪುಣ್ಯ

ರವಿಯು ಕರಗಿರೆ
ಸೂಸಿ ತಂಪನು
ದವನವು ಮೆರುಗಿರೆ
ಜಾತ್ರೆಯ ಕಂಪನು

ನವ ಜೋಡಿಗಳು
ಕಣ್ತುಂಬಿರೆ ಜಾತ್ರೆಯನು
ಹೂಡಿರೆ ತರುಣ ತರುಣಿಯರು
ನಯನ ಕದನವನು

ಬನ್ನಿ ನೋಡಿರೀ...
ಸುತ್ತ ಹತ್ತೂರಿನ ಜಾತ್ರೆಯನು
ಬರುವಾಗ ತಪ್ಪದೆ ತನ್ನಿ ನಿಮ್ಮ
ಕುಡಿಯುವ ನೀರನ್ನು

ಈ ಐದು ದಿನದ ಜಾತ್ರೆಗೆ
ಬರುವ, ಬಂದಿರುವ
ಬಂದು ಹೋಗುವ ಎಲ್ಲ
ಕಳಕಮಲ್ಲಯ್ಯನ ಭಕ್ತರಿಗೆ
ನಮ್ಮ ಸ್ವಾಗತಗಳು

No comments:

Post a Comment