ನಿನ್ನ ಕೆಂದುಟಿಯಂಚಿಂದ ಮಧು...
ಬಟ್ಟಲನೊಮ್ಮೆ ಚುಂಬಿಸಿ ಕೊಟ್ಟುಬಿಡು
ಸಾಕಿ...
ಒಲವಲ್ಲಿ ಬಾಯಾರಿ ಮಣ್ಣು ಸೇರಿದ
ಎಷ್ಟೋ....ಭಗ್ನ ಹೃದಯಗಳಿವೆ.... ಎರಡು
ಬಟ್ಟಲು ಮದಿರೆಯನ್ನಾದರು...ಸುರಿದು
ಬರುವೆ, ತಣ್ಣಗಿರಲೆಂದು ಗೋರಿಯಾ ಮೇಲೆ...
ನಿನ್ನ ಮಧುವೊಂದನ್ನು ಬಿಟ್ಟು....
ಮುಕ್ತಿಕೊಡುವ ಬೇರಾವ ಅಮೃತವು ಉಂಟು
ಸಾಕಿ...
ವಿಷವನ್ನೆ...ಕುಡಿದವರು ಬದುಕಿದ್ದರಲ್ಲ...!!!!
ನಿನ್ನ ಮಧುವನ್ನೆ ಕುಡಿದು...,ಅಮೃತವೇನಲ್ಲ
ವಾದರು...ಉಳಿಸಿಕೊಂಡಿತ್ತಲ್ಲ, ಉಳಿದರಾದರೂ...
ಅವಳ ನೆನಪುಗಳ ಉರುಳಿಗೆ ಸಿಕ್ಕವರೊಬ್ಬರಾದರು....
ಉಳಿಯಲಿಲ್ಲವಲ್ಲ...
ಘಲ್...ಘಲ್..ಘಲ್...ಎನ್ನುವ ನಿನ್ನ
ಗೆಜ್ಜೆಯ ಕಟ್ಟಿಕೊಂಡು...ಈ ನೀರವ
ನಿಷ್ಕರುಣಿ ಮಸಣದಲ್ಲೊಮ್ಮೆ ನಡೆದು ಹೋಗು
ಸಾಕಿ...
ಗೆಜ್ಜೆ ನಾದಗಳ ಸದ್ದಿಗೆ...ಅತೃಪ್ತ ಆತ್ಮಗಳೆಲ್ಲವು
ಅರೆ ಘಳಿಗೆ, ಶಾಂತಿಯಿಂದಾದರು ನಿದ್ರಿಸಲಿ...
ಹ್ಹ....ಹ್ಹ...ಹ್ಹ...ಹುಚ್ಚನೆನ್ನುವರು, ನನ್ನನೆಲ್ಲರು
ಸಾಕಿ... ಗೋರಿಗಳ ಮುಂದೆ ಕುಳಿತು ನಾ....
ಮಾತನಾಡುವುದ ಕಂಡು..., ಹಣ್ಣಿನ ರುಚಿ...ಕಚ್ಚಿ...
ಸವಿದ ಗಿಳಿಗಳಿಗೆ ಮಾತ್ರ ಗೊತ್ತು..!!!
ಹೆಣ್ಣಿನ ಪ್ರೀತಿಯ ಸವಿಯನ್ನು ಸವಿಯಲಾಗದೆ
ಅನುಭವಿಸುವ ಯಾತನೆ ಪ್ರೇಮಾತ್ಮಗಳಿಗಷ್ಟೇ...ಗೊತ್ತು..
ಏನೆಂತ ವಿವರಿಸಲಿ ಸಾಕಿ... ನಿನಗೆ, ಹುಗಿದ ಮಣ್ಣಿನೊಳಗು
ಸಿಕ್ಕಿಲ್ಲವಂತೆ ಶಾಂತಿ... ಸೀಗುವುದಾದರು ಹೇಗೆ ?
ಲೆಕ್ಕವಿರದಷ್ಟು ದೇಹಗಳ ನುಂಗಿ..ನುಂಗಿ...ಮಲಗಿಸಿಕೊಂಡ ಭೂ ಒಡಲ ಕಣಕಣದಲ್ಲೂ...
ಬರಿ ವಿರಹದ ತಾಪವೆ.... ತುಂಬಿಕೊಂಡುಬಿಟ್ಟಿದೆಯಂತೆ,
ಬದುಕಿದ್ದಾಗಲೆ ಬೇಯಿಸಿದಂತಹ ವಿರಹದ ತಾಪ,
ಇನ್ನೂ ಮಣ್ಣು ಸೇರಿದ ಮೇಲೆ...? ನೀನೆ ಊಹಿಸಿ ನೋಡು...
ಗೋರಿಯೊಳಗೆ ಹುಗಿದು ಹೋದವರ ಪಾಡು
ನಿನಗೇನು ಗೊತ್ತು ಸಾಕಿ....
ನೀನೇನೊ...ಬದುಕಿದ್ದಾಗ, ಉರಿಯುವ ಎದೆಗಳನ್ನು
ಉಳಿಸಿಕೊಳ್ಳಲೆತ್ನಿಸಿದೆ ಮಧುವನ್ನು ಹಾಕಿ...
ಗೋರಿಯ ಮೇಲೆ ಅವಳಿಟ್ಟು ಹೋದ ಗುಲಾಬಿಯ
ಮುಳ್ಳುಗಳು ಇವರನ್ನು.... ನರಕಕ್ಕೂ ಹೋಗದಂತೆ
ಬೇಲಿಯ ಹಾಕಿಬಿಟ್ಟಿವೆಯಂತೆ ಮಿಸುಕದಂತೆ, ಕಟ್ಟಿಹಾಕಿ...
ಹೇಗೆ ಹೇಳಲಿ....? ಸಾಕಿ....
ಗೋರಿಯೊಳಗೆ ಮಲಗಿದವರೆಲ್ಲ...ಸತ್ತದ್ದು
ಹೊರನೋಟಕ್ಕಷ್ಟೆ.....ಒಳಗಣ್ಣನು ತೆರೆದಾದರು ನೋಡೊಮ್ಮೆ...ಅವಳ ಹೆಸರಿನ ಜಪದಲ್ಲೆ...
ಸುತ್ತುತಿಹವು...ದುರಾತ್ಮಗಳು...? ಮಸಣವನು...
ಸಾಕಿ......
ದಿನವು ನರ್ತಿಸಿ...ನರ್ತಿಸಿ....ಮದರಂಗಿ ಮೆತ್ತಿದ
ನಿನ್ನ ಕಾಲಡಿಯಲಿ ಸಿಕ್ಕು, ಹೊಸಕಿ ಹೋದ
ಮಲ್ಲಿಗೆಗಳನ್ನಾದರು......ತಂದು, ಚೆಲ್ಲಿಬಿಡು ಈ ಗೋರಿಗಳ ಮೇಲೆ, ನೆಮ್ಮದಿ ಎನ್ನುವುದಾದರೂ... ನಿನ್ನ ಪಾದದ
ಧೂಳಿನಿಂದಾದರು ಸಿಗಲಿ...
No comments:
Post a Comment