Thursday, December 17, 2020

ತಮ್ಮಾ - ತಿಮ್ಮಾ

ಕತ್ತಿ ಮ್ಯಾಲ ಏನ್ ಹೊರ್ಸಿದ್ರುನೂ ಬಾಯ್ಮುಚ್ಗೊಂಡ ಹೊಕ್ಕೈತಿ ಅನ್ಕೊಂಡ
ಏನೇನರ ಇಲ್ಲ ಸಲ್ಲದ್ದನ್ನ ಹೇರಬ್ಯಾಡೊ ತಮ್ಮಾ...
ತಡ್ಕೊತೈತಿ...ತಡ್ಕೊತೈತಿ ತಡ್ಕೊತೈತಿ ಎಲ್ಲಿ ತನ್ಕ? ಕಸುವು ನಿಗೋತನ್ಕ. ಕಸುವು ಮಿಕ್ಕಿದ ಮ್ಯಾಲೊಂದು
ಜಾಡ್ಸಿ ಒತ್ತಂತಂದ್ರ ಕೋಳಿ ಕೆಬ್ರಿದ ಸೆಗಣಿ ತಿಪ್ಪ್ಯಾಗ್ಹೋಗಿ ಬಿಳ್ತಿಯೋ ತಿಮ್ಮ...

ತಲಿಗೆ ಹೆಲ್ಮೆಟ್ ಹಾಕ್ಕೊಂಡ ರಸ್ತಾದಾಗ ಹೋಗೊರ
ಒಮ್ಮೊಮ್ಮೆ ಯಮನ ಪಾದನ ಸೇರ್ಕೊಂಡ ಬಿಡ್ತಾರೊ ತಮ್ಮಾ..
ತಲಿ ಗಟ್ಟಿ ಐತನ್ನೊ ಮದದಾಗ ಕಂಡ ಕಂಡ ಹೆಣ್ಮಕ್ಳ 
ತಲಿಗೆ ಉಣ್ಣಿ ಟೋಪ್ಗಿ ಹಾಕಕ ಹೋಗಬ್ಯಾಡ, 
ಆಕಿ ಒಮ್ಮೆಂದ್ರ ಒಮ್ಮೆ ಕೈಯ್ಯಾನ ಕುಟ್ಟೊ
ಒಂದ ಒನಕಿ ಏಟ ಹಾಕಿದ್ರ ಸಾಕ ನೆತ್ತಿಗೆರಿದ ಪಿತ್ತ ಇಳಸಾಕ ತಿಮ್ಮಾ...

 ವಿಶ್ವಾಸಕ್ಕ ಬಂದೊರ್ನ ಮನಿತಂಕ ಕರ್ದು ಉಣ್ಣೊ ತಾಟನ್ಯಾಗ ವಿಷ ಬೆರಸಿಕೊಡಬ್ಯಾಡೊ ತಮ್ಮ..
ರೊಕ್ಕೇನು? ಬಸ್ ಸ್ಟ್ಯಾಂಡನೊಳ್ಗ ಪಾಯ್ಕಾನಿ
ತೊಳಿಯೊ ಹೆಣ್ಮಗ್ಳು ದುಡಿತಾಳ. ಆಕಿಗಿಂತ 
ಕೀಳಾಗಿ ಬಾಳಬ್ಯಾಡೊ ತಿಮ್ಮಾ...

ಅವ್ರದ ತಂದ ಇವ್ರ ಅಂಗಳ್ದಾಗ, ಇವ್ರದ ತಂದ
ಅವ್ರ ಅಂಗಳ್ದಾಗ ಎಷ್ಟ ದಿನಾನಂತ ಹೇಸ್ಗಿ ಕೆಲ್ಸ
ಮಾಡ್ಕೊಂಡ ಇರ್ತಿಯೊ ತಮ್ಮಾ...
ಮೈ ಹೊಲಸಾದ್ರೇನಾತ ಗಟಾರ ನೀರಿಲೆರ ತೊಳ್ಕೊಬೊದು!
ಮನಸ್ಸ ಮೈಲ್ಗಿ ಮಾಡ್ಕೊ ಬ್ಯಾಡಲೆ, ಬ್ಯಾಡ.
ಕುಂಬಾರ ಮಡ್ಕಿನ ಒಂದ ಸಲ ಮಾಡ್ತಾನ,
ಅದ್ನ ಒಡ್ದ, ತೋಯ್ಸಿ, ತುಳ್ದ ಹದಮಾಡಿ ಮತ್
ಮಡ್ಕಿ ಮಾಡಾಕ ಹ್ಯಾಂಗ ಬರೊದಿಲ್ಲೊ ಹಾಂಗ
ನಂಬ್ಕಿ ಅನ್ನೋದು ಮತ್ ಹುಟ್ಟುದಿಲ್ಲ, ಕಟ್ಟೊಕೂ
ಆಗೋದಿಲ್ಲ ನೋಡ್ತಿಮ್ಮಾ....

ಕರಿ ನೆಲ್ದ ಮ್ಯಾಲ ಕೆಂಪ ಮಣ್ಣ ಹಾಕಿ ಸೈಟ್
ಮಾರ್ದಂಗಲ್ಲೊ ಗೆಣೆತನ್ದ ನಂಬ್ಕಿ ಗಳಸೊದ
ತಮ್ಮಾ...
ಅಡಿಪಾಯಕ್ಕ ತೆಗ್ಗ ತೋಡ್ದಾಗ ಗೊತ್ತಾಗೋದು
ಒಳಗ ಎಷ್ಟ ಗಟ್ಟಿ, ಎಷ್ಟ ಸಡ್ಲ ಐತೆನ್ನೊದ, ಸಡ್ಲ
ಕಂಡ್ತೂ ಚಿಗುರಾಕು ಬಿಡ್ದಂಗ ತುಳ್ದ ಹಾಕಬಿಡ್ತಾರೊ
ತಿಮ್ಮಾ...

ಗದ್ಗಿ ಏರಿದ ಮ್ಯಾಲ ಎಲ್ಲಾ ಭಂಡ ನನ್ಮಕ್ಳು ಹೇಳೊ
ಮಾತ ಒಂದ, ನಾನ್ಯಾರಿಂದಾನೂ ಮ್ಯಾಲ ಬಂದಿಲ್ಲಂತ ತಮ್ಮಾ...
ಹುಟ್ಟಿದ ಜೀವ ಕೈ ಚಾಚ್ದನ ಸತ್ತಿದ್ದಿಲ್ಲ, ಮುಕ್ಕಣ್ಣನು ಕಪಾಲ ಹಿಡ್ಕೊಂಡ ಭಿಕ್ಷೆ ಬೇಡ್ದಾವ ಅದಾನ, ಕಾಲಾನ‌ ನೀ ಮರಿಬೊದು.
ಕಾಲ ನಿನ್ನ ಮರೆಯೊದಿಲ್ಲೊ ತಿಮ್ಮಾ...
ನಿನ್ನ ಮರಿಯೊದಿಲ್ಲ..

Wednesday, December 16, 2020

ರಂಗೀ..೧

'ತಣ್ಣ'ಗಾದ ಒಲವನು
ನಿನ್ನೆದೆಯಲಿ ಹುಗಿದು,
ಅದನ್ನೇಕೆ ಮಸಣವನ್ನಾಗಿಸಲಿ
ರಂಗೀ....
ಬೇಕಿದ್ದರೆ ಒಂದೆರಡು
ಪ್ರೀತಿಯ ಸಸಿಗಳನ್ನು
ನೆಡುವೆ.
ಗಟ್ಟಿಗಿತ್ತಿಯಾದರೆ?
ನೀರೆರೆದು ಪೋಷಿಸಿಕೊ.

Tuesday, December 15, 2020

ಶಾಯರಿ

ಸಿಹಿ-ಕಹಿಗಳನೆರಡನ್ನು
ಸಮನಾಗಿ ಸ್ವೀಕರಿಸುವಷ್ಟು
ಪ್ರಭುದ್ಧನೇನಲ್ಲ
ಸಾಕಿ....
ಮದ್ಯ ಕಹಿಯಾದರು
ಚುಚ್ಚುವ ರಂಗೀಯ
ಸಿಹಿಯಾದ ನೆನಪುಗಳನ್ನು
ಅರೆಕ್ಷಣವಾದರು
ಮರೆಸುತ್ತದಲ್ಲ!
ಅಷ್ಟು ಸಾಕು.

Saturday, December 12, 2020

ಶಾಯರಿ

ಮುರಿದು ಹೋದ
ಲೇಖನಿಯ ನಿಬ್ಬಿನ
ಕುರಿತು ಚಿಂತಿಸದಿರು.
ಎದೆಯಲ್ಲಿನ್ನೂ ಬತ್ತದ
ನೂರಾರು ಸಾಲುಗಳಿವೆ
ಸಾಕಿ...
ಒಡೆದು ಹೋದ,
ಗಾಜಿನ‌ ಮಧು ಬಟ್ಟಲಿನ
ಚಿಂತೆ ಏಕೀಗ?
ಸುರಿದುಬಿಡು ಬೊಗೆಸೆಗೊಂದಿಷ್ಟು 
ತೀರ್ಥವನ್ನೆ ಉಂಡ
ಅಂಗೈ ರೇಖೆಗಳಿಗೂ
ಮಧುವಿನ ಸ್ಪರ್ಶ ಸುಖ
ಸಿಗಲಿ.

ನನ್ನಾಕಿ

ಮಾತ್..ಮಾತನ್ಯಾಗ ಬೆಲ್ಲ ತುಂಬಿ ಮಾತಾಡಾಕಿ
ನೂರ್ ಕೆಲ್ಸ ಹೇಳಿದ್ರ, ಒಂದ ಮಾಡಿ ಹಲ್ಬಿಟ್ಗೊಂಡ ನಿಂದ್ರುವಾಕಿ
ಅನ್ನ-ಸಾರು ಉಪ್ಪಾಗೈತಂದ್ರ ಹಣಿಹಣಿ ಬಡ್ಕೊಳ್ಳಾಕಿ
ಸಂಜಿಕೆಲ್ಲ, ಕೊಬ್ರಿ-ಬೆಲ್ಲ ಕುಟ್ಟಿಕೊಟ್ಟ ಬಾಯ್ನೆಲ್ಲ ಸಿಹಿ ಮಾಡಾಕಿ

ಕಸಮುಸರಿನೆಲ್ಲ ಬೂದಿ ಹಚ್ಚಿ ಬೆಳ್ಳನ ಬೆಳ್ಗ ತಿಕ್ಕುವಾಕಿ
ಬೆಳ್ಳನ ಬಟ್ಟಿಗೆ ಜಗ್ಗಷ್ಟು ನೀಲಿ ಹಾಕಿ ಲೊಚಗುಟ್ಟಾಕಿ
ವಗ್ದ...ವಗ್ದ.. ಟಾಕಿ ನೀರೆಲ್ಲ ಖಾಲಿ ಮಾಡಿ ಹಾಕಾಕಿ
ಹೊತ್ತ ಹಾಕಂದ್ರ, ನಡು ಬ್ಯಾನೆಂತಂದ ಚಾದರ ಹೊತ್ಗೊಂಡ ಮಲ್ಗುವಾಕಿ

ಸಿಂಬ್ಳ ಸೀನಕೊಂತನ ಖೊಣ್ಗಿ ರೊಟ್ಟಿ ಬಡ್ದ ಹಾಕಾಕಿ
ಮಗಳ ಮುಕ್ಳಿ ತೊಳಿತಲೆ, ಊಟಕ್ಕ ಬಂದ ಬಡಿಸುವಾಕಿ
ರುಚಿ ಹ್ಯಾಂಗೈತೆಂದು ಛೇಷ್ಟಿ ಮಾಡ್ಕೊಂತ ನಗುವಾಕಿ
ಬೆಕ್ಕ ಕುಡ್ದ ಹಾಲಿನ ಗಿಂಡಿ ನೋಡಿ ಅತಗೊಂತ ಕುಂದ್ರುವಾಕಿ

ಕತ್ಲದಾಗ, ಎಲ್ಲೇದಿ ಅಂದ್ರ ಹಲ್ಬಿಟ್ಟ ದಾರಿ ತೊರ್ಸುವಾಕಿ
ಒಂದ ಸಾಕಂದ್ರನು ಮೂರ ಮೂರ ಹಡ್ದ ಕೊಟ್ಟಾಕಿ
ಶ್ಯಾಣೆ ಅಂದ್ರು ಸೈನಾ, ದಡ್ಡಿ ಅಂದ್ರನು ಸೈ ಅನ್ನಾಕಿ
ಬಾಯ್ಬಿಟ್ರಂದ್ರ ಗಂಡ್ನಾಯಿಗಳ ಬಾಲಾನು ಮುದ್ರುಸ್ವಾಕಿ

ಕಪ್ಗಿದ್ರೇನ..ಬೆಳ್ಗಿದ್ರೇನ...ಸೊಟ್ಗಿದ್ರೇನ, ನೆಟ್ಗಿದ್ರೇನ
ಹ್ಯಾಂಗಿದ್ರೇನ... ಆಕಿ ನನ್ನಾಕಿ
ಬಳಕ ಬಳ್ಳೆಂತೂ ಅಲ್ಲ, ಬದ್ಕಿಗೆ ಗಂಧದ ತನ್
ತಾ ತಿಕ್ಕುವಾಕಿ ಆಕಿ ನನ್ನಾಕಿ
ಬೇಕ ಅನ್ಲಿಲ್ಲ.. ಬ್ಯಾಡ ಅನ್ಲಿಲ್ಲ, ತಂದ್ಕೊಟ್ಟದ್ರಾಗ
ಸುಖ ಕಾಣಾಕಿ ಆಕಿ ನನ್ನಾಕಿ
ಎದಿಹಾಲ ಕೊಟ್ಟಿಲ್ಲನ್ನೊದಷ್ಟ ಖರೆ...ಅವ್ವನ್ನ ಬಿಟ್ರ
ಈಕಿನ ನನ್ ತಾಯಿ ಈಕಿ ನನ್ನಾಕಿ
ನನ್ನಾಕಿ ನನ್ನಾಕಿ.

Friday, December 11, 2020

ಚುಟುಕು

ಕಿರು ಬೆರಳ ಹಿಡಿದು
ಸಪ್ತಪದಿಯ ತುಳಿದು,
ಹಿಂದಿಂದೆ ಬಂದವಳು
ನೀನಲ್ಲವೆ!?
ಬರುವ ಸಾವು, ಕ್ಷಣ
ಮುಂಚೆ ನನ್ನನ್ನೆ
ಕರೆದೊಯ್ಯಲಿ.
ಕಣ್ತುಂಬಿಕೊಳ್ಳುವುದಾದರೂ
ಹೇಗೆ?
ಎದೆಯುಸಿರು ನೀನು..
ಕೊನೆಯುಸಿರೆಳೆಯುವುದನ್ನೆ.

Thursday, December 10, 2020

ಶಾಯರಿ

'ಕಳೆದು' ಹೋಗಲೆಂದೆ
ಬಟ್ಟಲನ್ನು
ಎತ್ತಿಕೊಳ್ಳುತ್ತೇನೆ
ಸಾಕಿ....
'ಮುಳುಗಿ' ಹೋಗುತ್ತೇನೆ
ನಶೆ ಏರಿದಷ್ಟು
ರಂಗೀಯ ನೆನಪಿನ
ಕಡಲಿನಲ್ಲಿ.

Tuesday, December 8, 2020

ಶಾಯರಿ

ಅರಸಿಕರಿಗೇನು
ಗೊತ್ತು?
ಕೊನೆಯ ಗುಟುಕಿನ
ಸಿಹಿ...
ಸಾಕಿ...
ನೆನಪಿಸುವುದಿಲ್ಲವೇನು?
ಬಿಟ್ಟು ಹೋಗುವಾಗ,
ತುಟಿಯಂಚಲಿ ತುಂಬಿ
ಹೋದ ರಂಗೀಯ
ಕಹಿ..

Sunday, December 6, 2020

ಚುಟುಕು

ಸಾಕುಬಿಡು!
ಕರಗಿ ಹೋಗಿ
ಬಿಡುವೇನು
ಬಿಸಿ ಮುತ್ತಿಗೆ!
ತಾಳಿಕೊಳ್ಳಲಾದಿತೆ?
ಇರುಳಲಿ ಅಪ್ಪುವ
ನಿನ್ನ ನೆನಪುಗಳ
ಮುತ್ತಿಗೆಗೆ!

Saturday, December 5, 2020

ಚುಟುಕು

ಬೀಗುಮಾನವ ಬಿಟ್ಟು
ಹೂ ನಗೆಯೊಂದನು
ಚೆಲ್ಲಿಬಿಡು ಚೆಲುವೆ!
ಮಾಗಿಯು ಮುಗಿಯುತ್ತ
ಬರುತ್ತಿದೆ. ಈ ಹೊತ್ತಲ್ಲಿ
ಬಿಂಕು-ಬಿನ್ನಾಣ ತರವೆ!

ನಿರ್ಭಾವುಕತೆಗಳು

ಬತ್ತಿ ಹೋದ ಈ
ತುಟಿಯ ತೊರೆಗೊಂದಿಷ್ಟು
ಸವಿಜೇನ ಸುರಿಸಿಬಿಡು!
ಕರಾಳತೆಯ ತುಂಬಿದೀ...
ಕಂಗಳ ಕೊಳದಲ್ಲಿ, ಭರವಸೆಯ
ಬೆಳಕನ್ನು ತುಂಬಿಬಿಡು!
ಬೇಕು-ಬೇಡಗಳ ಸಂದಿಗ್ಧಗಳ
ಸಂಕೋಲೆಯಲಿ ಸಿಕ್ಕ ಮಸ್ತಕಕ್ಕೆ
ಹೆಗಲೊಂದನ್ನು ನೀಡು!
ಮಾತಲ್ಲಿಯೆ ಬೆನ್ನ ಮೇಲೆ ಗೀರಿದ,
ಮಾಯದ ಗಾಯಗಳ ಮೇಲೆ
ಬೆರಳುಗಳಿಂದ, ನಾನಿರುವೆನೆಂದು ದೃಢೀಕರಿಸು.
ನಾಳೆಯ ಚಿಂತೆ ನನಗಿಲ್ಲ!
ಬರುವಂತಿದ್ದರೆ ಸಾವು, ಅದಿಂದೆ,
ಈಗಲೇ ಅಪ್ಪಿಕೊಂಡು ಬಿಡಲಿ!
ಜಗದ ಬೇರಾವ ಸುಖವು ಬೇಡ
ನನಗೀಗ! 
ಜಗವು ಅಳುತ್ತದೆ ಮೂರು ದಿನ!
ಮತ್ತೆ, ಬದುಕು ನಗುತ್ತಲೆ ಸಾಗುತ್ತದೆ ಮರುದಿನ!

Sunday, November 29, 2020

ಚುಟುಕು

ಬೇಕಿದ್ದರೆ, ಮರಗಟ್ಟಿಸುವ 
ಮಂಜು ಗಡ್ಡೆಯಂತಹ 
ಮೌನವನ್ನಾದರು ಸಹಿಸಿಕೊಂಡೇನು.
ತಾಳಿಕೊಳ್ಳಲಿ ಹೇಗೆ?
ಜಿಂಕೆ ಕಣ್ಣುಗಳಿಂದಲೆ, ಎದೆ
ಇರಿಯುವ ಈ... ಹರಿತವಾದ
ನೋಟದ ಭಾವವನು.

Wednesday, November 25, 2020

ಶಾಯರಿ

ಹಗಲಿನಲ್ಲಿ ಕೊಟ್ಡ
ಮುತ್ತಿನ ಸರವನ್ನು
ಹರಿದು ಹಾಕಿ ನಡೆದುಬಿಟ್ಟಳಲ್ಲ
ಸಾಕಿ...
ಈರುಳಿನಲ್ಲಿ ಕೊಟ್ಡ
ಮುತ್ತುಗಳ ಲೆಕ್ಕವನ್ನು
ಯಾರಲ್ಲಿ ಕೇಳಿಲಿ.

ಶಾಯರಿ

ಹೀಗೆ...
ಬರೆಯುತ್ತಾ ಹೋಗು
ಓದುತ್ತಾ ಹಿಂದೆ ಹಿಂದೆಯೆ
ಬರುವೆನೆಂದಿದ್ದಳು
ಸಾಕಿ...
ಕ್ಷಣ ಅನುಮಾನಿಸಿಯಾದರು
ಹಿಂತಿರುಗಿ ನೋಡಿರಲಿಲ್ಲ!
ನೋಡಿದ್ದರೆ ಚೆಂದವಿತ್ತೇನೊ?

ಶಾಯರಿ

ರಂಗೀ... ಹಳಸಿದ
ಅನ್ಮವನ್ನೆ ಮತ್ತೆ...ಮತ್ತೆ..
ಕಾಯಿಸಿ, ಬಿಸಿಮಾಡಿ
ಕೊಟ್ಟಳು! ಊಟ ಮಾಡಿದೆ
ಅಜೀರ್ಣವಾಗಲೆ ಇಲ್ಲ!!
ಆದದ್ದು ರಕ್ತ ವಾಂತಿ
ಸಾಕಿ...
ವಿರಹದ ಹಾಲಾಹಲವನ್ನೆ
ಬಡಿಸಿಬಿಟ್ಟಿದ್ದಳಲ್ಲ!!
ಹಾಲಿನಂತ ನಗುವನ್ನು
ಚೆಲ್ಲಿ

ಶಾಯರಿ

ಬದುಕು ರಂಗೀಯ ಪಾಲಾಯಿತು.
ಒಲವು ಬೀದಿಯ ಪಾಲಾಯಿತು.
ಧನಕನಕವೆಲ್ಲ ನಿನ್ನ ತಿಜೋರಿಯ 
ಪಾಲಾಯಿತು
ಸಾಕಿ...
ನನ್ನ ಪಾಲಿಗೀಗ, ಬಂಧುಗಳಿಲ್ಲ
ಗೆಳೆಯರಿಲ್ಲ, ಕೊನೆಕೊನೆಗೂ
ನೀನು ಇಲ್ಲ!! ಮಸಣದಲ್ಲಾದರೂ
ಇದೇಯೋ ಗೋರಿಯ 
ಪಾಲು.

ಶಾಯರಿ

ಮಧು ಬಟ್ಟಲಿಗೆ
ಅಳತೆ ಮಾಡಿ ಹಾಕಿದ
ಹಾಗೆ, ನನ್ನೆದೆಯ
ದುಃಖವನ್ನು ಹೇಗೆ? ತೂಗಿ
ತೋರಿಸಲಿ
ಸಾಕಿ...
ಕಡಿಮೆಯಾದ ಮದ್ಯಕ್ಕೆ
ನೀರನ್ನಾದರು ಬೆರಸಿ
ಕುಡಿಯಬಹುದು!
ಕಡಿಮೆಯೇ...ಯಾಗದ
ದುಃಖಕ್ಕೆ!!

ಶಾಯರಿ

ಹಾಕಿದ ಕಣ್ಣೀರನ್ನು
ಕೂಡಿಟ್ಟಿಲ್ಲ!
ಕುಡಿದ ಮದ್ಯದ
ಬಟ್ಟಲುಗಳನ್ನು ಲೆಕ್ಕವಿಟ್ಟಿಲ್ಲ
ಸಾಕಿ....
ಕಣ್ಣೀರನ್ನು ಹಾಕದಿದ್ದರೆ!
ಮದ್ಯ ಸೇರುವುದಿಲ್ಲ,
ಮದ್ಯವನ್ನು ಬಿಟ್ಟುಬಿಟ್ಟರೆ
ಕಣ್ಣೀರೆ ಬರುವುದಿಲ್ಲ!
ಯಾವುದನ್ನು ಉಳಿಸಿಕೊಳ್ಳಲಿ
ಯಾವುದನ್ನು ಕಳೆದುಕೊಳ್ಳಲಿ.

Tuesday, November 24, 2020

ಶಾಯರಿ

ಮಧು ಬಟ್ಟಲಿನ 
ಅಂಚಿಗಿಂದು ಮುತ್ತಿಡುತ್ತಿರುವುದು
ಮೇಲಿನವನು ಬರೆದ ಹಣೆಬರಹವೊ?
ರಂಗೀಯು ಕೈ ಕೊಟ್ಟ
ಕಾರಣವೊ?
ಯಾವುದೆಂದು ವಿಮರ್ಶಿಸಿಕೊಳ್ಳಲಿ
ಸಾಕಿ...
ಸುರಿದುಬಿಡು ಅಳಿದುಳಿದ
ಮದ್ಯವನ್ನು ಇಂದೇ!
ನಾಳೆ, ನೀನು ಅವರುಗಳ
ಹಾಗೆ ಬದಲಾದರೆ?
ಅಳಿದುಳಿದ ಸಂಜೆಗಳ
ಪಾಡೇನು?

Friday, November 20, 2020

ಚುಟುಕು

'ಕಲ್ಲು'ಗಳ ಆಧಾರವಿಲ್ಲದೆ
ನಿಂತ ಬಾಗಿಲಿನ
ಚೌಕಟ್ಟಿಗೆ, ತಳಿರು
ತೋರಣವೆ ಸಿಂಗಾರ!!
ಎರಡು ಕೈಗಳ ಜೋಡಿಸಿ
ನಿಂತುಬಿಡುತ್ತೇನೆ ಬೇಡುವ
ಭಿಕ್ಷುಕನಂತೆ, ನೀಡಿಬಿಡು
ಹಿಡಿಯಾದರು ಪ್ರೀತಿಯಂಬ
ಬಂಗಾರ!!

Thursday, November 19, 2020

ಚುಟುಕು

ಬೇಡದ ಮಾತಿನ
ಕಲ್ಲೊಗೆದು, ಮನದ
ಮೌನ ಕೊಳದಲ್ಲಿ
ತಳಮಳದ ಅಲೆಗಳನ್ನೇಕೆ
ಎಬ್ಬಿಸಲಿ!!
ನನಗಿಲ್ಲಾರು? ನೀನು...
ಹೊರಟು ಹೋದರೆ,
ತುಂಬು ಜಗದಲ್ಲಿ
ನಾನಾಗುವುದಿಲ್ಲವೇನು?
ತಬ್ಬಲಿ.

Tuesday, November 17, 2020

ಚುಟುಕು

ಸಖಿ....
ಹುಟ್ಟುತ್ತಲೆ
ಸಾವನ್ನು ಬೆನ್ನಿಗೆ
ಕಟ್ಟಿಕೊಂಡು
ಬಂದವರು ನಾವು!!
ಬಂದಾಗ ಬರಲಿ...
ಅಲ್ಲಿಯವರೆಗಾದರೂ
ನಿನ್ನ ತೆಕೆಯಲಿ 
ಪ್ರೀತಿಗೆ ಕೊಡುತ್ತಿರು
ಕಾವು!!

ಚುಟುಕು

ನಾಲಿಗೆಯ
ತುದಿಯಲ್ಲಿ
ಕಾರ್ಕೊಟಕ
ವಿಷ ತುಂಬಿದೆ
ಕಚ್ಚಿಸಿಕೊಂಡವನು
ನಾನೊಬ್ಬನೇನಾ?
ಮದ್ದಿಲ್ಲದೆ
ತ್ರೇತಾಯುಗದಲ್ಲಿ
ಇದಕ್ಕೆ ಸೀತೆಯು
ಬಲಿಯಾಗಿದ್ದಾಳೆ
ಅವಳಿಗಿಂತಲೂ...
ನಾನು ದೊಡ್ಡವನಾ?

ಚುಟುಕು


ಅವಳನ್ನು
ಕಲ್ಪನೆಗಳ
ಭಾವದಲ್ಲಿ
ಬಂಧಿಸಿಟ್ಟೆ....
ಕವಿಯಾಗಿ!!
ಬಿಗಿದಪ್ಪಿ
ಕೊಳ್ಳಲಾಗುತ್ತಿಲ್ಲ!!!
ವಾಸ್ತವದಲ್ಲಿ
ಪ್ರೇಮಿಯಾಗಿ...

ತಿದ್ದುಪಡಿ

ನನ್ನದೂ...
ಇಲ್ಲಿ ಇದೆ ಪಾಡು
ಗೆಳತಿ!
ನಿ ಕುಳಿತುಕೊಂಡ
ಕೆರೆ ದಂಡೆಯೇನೊ
ಗಟ್ಟಿಯಿದ್ದ ಹಾಗಿದೆ...
ನಿನ್ನ ನೆನೆದ ಮನದ
ದಂಡೆಯಿಲ್ಲಿ
ಮೆತ್ತಗಾಗಿದೆ.

ಮೌನವಾಗಿ
ಹೀಗೆ....
ಗಿಡದ ನೆರಳನಲ್ಲಿ
ನಿಂತುಕೊಳ್ಳಬೇಡ
ಗೆಳತಿ...
ಬಿಸಿ ಬರುವ
ತಂಗಾಳಿಯಲ್ಲಿ
ಎದೆಯ ಮಾತುಗಳನ್ನು
ಕಳುಹಿಸಿ ಕೊಟ್ಟಿದ್ದೇನೆ
ಆಲಿಸದೆ...
ಸುಮ್ಮನಿರಬೇಡ.

ನಾ ಹೇಳುವ
ಮಾತುಗಳೆಲ್ಲ
ಕವಿತೆಗಳಾಗಿವೆ!
ನೀ ಹೇಳುವ
ಮಾತುಗಳಿಗೆ
ಅವುಗಳೆಲ್ಲ....
ಈಗ
ಕಿವಿಯಾಗಿವೆ!

ಸೃಷ್ಟಿಯ
ಸೊಬಗದು
ಎಂದಿಗೂ
ಮುಗಿಯದ
ಯಾನ!!
ನೋಡುತ್ತಲೆ...
ಮಾಡುತ್ತಿರಬೇಡ
ಕಾಲಹರಣ..
ಮುರಿದುಬಿಡು
ಇಂದಾದರು
ಬಿಗು ಮೌನ!!

ಉಕ್ಕುವ ಬೇವರಿನ
ಬಗ್ಗೆ ಚಿಂತಿಸಬೇಡ...
ಅದು ಕಾಮದಲ್ಲೂ
ಹರಿಯುವುದು...
ಎಂಟಂಕಣದ
ಅರಮನೆಯೇನಿಲ್ಲ
ಬಂದು ಸೇರೊಮ್ಮೆ
ತೋಳ್ಬಂಧನದಲಿ
ಒಲವ ಸುಧೆಯೆ
ಹರಿಯುವುದು...

ಕಾಮ!!!!!!
ಬೇಡ...ಬೇಡವೆನ್ನುತಲೆ
ವಂಶಗಳೆ ಹುಟ್ಟಿ...
ಅಳಿದು ಹೋಗಿವೆ
ಈ ಮಣ್ಣಿನಲ್ಲಿ...
ಎಸಳು ಹೂಗಳನ್ನು
ಹೊಸಕಿ ಹಾಕುತ್ತಿರುವರು
ಕರುಣೆ ಇಲ್ಲದಲಿ..
ಮರೆತು ಬಿಟ್ಟೆಯಾ?
ಕಾಮಸೂತ್ರದ
ಕಟ್ಟನ್ನು ಕಟ್ಟಿಕೊಟ್ಟ
ಕೋಟೆಯಿದೆಂಬುದನು...
ಮರೆತುಬಿಡು, ಹೊರಗೆ
ಬಂದುಬಿಡು ಮೈ ಮೈಲಿಗೆಗಳಿಂದಾಚೆ
ಮಗುವಾಗಿ ಬಿಡು
ಮಡಿಲೊಳಗೊಮ್ಮೆ... ತೇಲಿಸಿ
ಕರೆದೊಯ್ದು ಬಿಡುವೆ ಈ
ಲೋಕದಾಚೆ...
ಅಲ್ಲಿ ನವರಸಗಳ ಹಂಗಿಲ್ಲ
ಇವರು ಹೀಗೇಕೆ ಎಂದು ಹಂಗೀಸುವರು ಇಲ್ಲ...

ಬಿಟ್ಟು ಹೋದೆಯೆಂದು
ನಾನೇನು
ಸಾಯುವುದಿಲ್ಲ!!!
ಸಾಯುವೆನೆಂದರೆ?
ನಿನ್ನ ನೆನಪುಗಳು
ಬಿಡುವುದಿಲ್ಲ!!

ಸಿಂಹವೂ...
ಇಂದು ಹಳ್ಳಕೆ
ಬಿದ್ದಿದೆ!!!
ಉರಿದುರಿದು
ಮೆರೆಯುತ್ತಿದ್ದವರು
ಸದ್ದಿಲ್ಲದೆ ಮಣ್ಣಲ್ಲಿ
ಹೂತು ಹೋದದ್ದು
ಎಷ್ಟು ಜನರಿಗೆ
ಗೊತ್ತಿದೆ!!

ಎದೆಗೆ ಸುಧೆಯನ್ನು
ಸುರಿಯುತ್ತೇನೆ
ಎಂದವರು...
ಹೊಟ್ಟೆಗೆ ಹಾಲಾಹಲವನ್ನೆ
ಕುಡಿಸಿಬಿಟ್ಟರು..!!
ಬೆನ್ನಿಗೆ ಚೂರಿ
ಹಾಕಿದ್ದರು ಚಿಂತಿಸುತ್ತಿರಲಿಲ್ಲ
ನಂಬಿಕೆಯ ಕತ್ತನ್ನೆ
ಹಿಚುಕಿಬಿಟ್ಟರು..!!

ಎಷ್ಟು ಮತ್ತು
ತುಂಬಿದೆ ಈ
ಒಂಟಿ
ಕಣ್ಣಿನಲ್ಲಿ....!!!
ನೋಡುಗರ
ಎದೆ ಬಡಿತವು
ನಿಂತು ಹೋಗುವುದೇನೊ?
ಈ ಕ್ಷಣದಲ್ಲಿ!!!

ನನಗೂ...
ಮತ್ತೊಬ್ಬರ ಬೆನ್ನ
ತುಳಿದು, ಮೇಲೆ
ಹೋಗಲು ಸಾಕಷ್ಟು
ಅವಕಾಶಗಳಿವೆ!
ಹೀಗೆ ಹೋದಾಗ,
ಕೀಳರಿಮೆಯೆಂಬ
ರಣಹದ್ದುಗಳು...
ನನ್ನನು ಕುಕ್ಕಿ
ತಿಂದು ಬಿಡುತ್ತವೆ!!

ಮೌಲ್ಯವಿದ್ದರೆ...
ಹರಿದ ನೋಟು
ಚಲಾವಣೆಗೊಳ್ಳುವುದು!!
ಬರೀ...ಧನವನ್ನೆ
ತುಂಬಿಟ್ಟುಕೊಳ್ಳುತ್ತಿದ್ದರೆ?
ಮಾನವೀಯ ಮೌಲ್ಯ
ದ್ವಿಗುಣಗೊಳ್ಳದು!!

ನಮ್ಮನು
ಬೆಳೆಸುತ್ತಿದ್ದಾರೆ
ಎಂದುಕೊಳ್ಳುವುದು
ತಪ್ಪು...!!!
ನಮ್ಮಿಂದಲೆ
ಅವರು
ಬೆಳೆಯುತ್ತಿದ್ದಾರೆ
ಇದು ಒಪ್ಪು..!!!

ಕಲಬೆರಕೆ ಮಾಡಲು
ಬಾರದ, ತೆಂಗಿನಕಾಯಿಯ
ನೀರು... ಒಮ್ಮೊಮ್ಮೆ
ಹುಳಿಯಾಗಿರುವುದು
ಸಾಕಿ...

ಶುಭವಾಗಲೆಂದೆ
ದೇವರ ಮುಂದೆ
ಒಡೆಯುತ್ತಾರೆ
ಕಾಯಿ...!!!
ಶುಭ ಘಳಿಗೆ
ಬರುವವರೆಗಾದರೂ
ನೀನು ಸ್ವಲ್ಪ
ಕಾಯೀ...

ನಿದಿರೆ
ಮಾಡಲು
ಮುಚ್ಚಿಕೊಳ್ಲಲೆಬೇಕು
ರೆಪ್ಪೆಗಳನ್ನು
ನಾವಿಬ್ಬರು
ಮಲಗಲೂ...
ಮೊದಲು
ಮುಚ್ಚಲೆ ಬೇಕು
ಕೋಣೆಯ ಬಾಗಿಲನ್ನು

ಹುಟ್ಟುತ್ತಲೆ
ಸಾವನ್ನು ಬೆನ್ನಿಗೆ
ಕಟ್ಟಿಕೊಂಡು
ಬಂದವರು ನಾವು!!
ಬಂದಾಗ ಬರಲಿ...
ಅಲ್ಲಿಯವರೆಗಾದರೂ
ತೆಕ್ಕೆಯಲಿ ಕೊಡುತ್ತಿರು
ನೀ... ಪ್ರೀತಿಗೆ
ಕಾವು!!!

ನಾಲಿಗೆಯ
ತುದಿಯಲ್ಲಿ
ಕಾರ್ಕೊಟಕ
ವಿಷ ತುಂಬಿದೆ
ಕಚ್ಚಿಸಿಕೊಂಡವನು
ನಾನೊಬ್ಬನೇನಾ?
ಮದ್ದಿಲ್ಲದೆ
ತ್ರೇತಾಯುಗದಲ್ಲಿ
ಇದಕ್ಕೆ ಸೀತೆಯು
ಬಲಿಯಾಗಿದ್ದಾಳೆ
ಅವಳಿಗಿಂತಲೂ...
ನಾನು ದೊಡ್ಡವನಾ?

ಅವಳನ್ನು
ಕಲ್ಪನೆಗಳ
ಭಾವದಲ್ಲಿ
ಬಂಧಿಸಿಟ್ಟೆ....
ಕವಿಯಾಗಿ!!
ಬಿಗಿದಪ್ಪಿ
ಕೊಳ್ಳಲಾಗುತ್ತಿಲ್ಲ!!!
ವಾಸ್ತವದಲ್ಲಿ
ಪ್ರೇಮಿಯಾಗಿ...

Friday, November 13, 2020

ಕಥೆ ಹತ್ಯೆ...?

ಹತ್ಯೆ...?

'ಛೇ.. ಈ ಸುಲ್ಯಾ ಒಂದ್ಕೊಡ ನೀರ್ ತುಂಬ್ಕಂಡ ಬಾ ಅಂತಂದ್ರ, ಮಾವನ ಮನಿಗೆ ಹೋಗಿ ಬರುವಂಗ ಮಾಡಾಕ ಹತ್ತ್ಯಾನಲ್ಲಿವ, ಅಲ್ಲೇನ ಗೆಣ್ಸ-ಗಿಣ್ಸ ಏನರ ಕೆಬರಾ ಕುಂತಾನನ ಇವ್ನ ಹೆಡ್ತಿ, ಅಲ್ಲಾ ಇಲ್ಲೆ ಆಳ-ಪಾಳು ಎಲ್ಲಾ ಕುಡಿಯಾಕ ನೀರ... ನೀರ ಅನ್ನಾಕತ್ಹಾವು ಇಷ್ಟೊತ್ತಾದ್ರು ಬರ್ಲಿಲ್ಲಲಿವ' ಪೇಚಾಡುತ್ತಲೆ ದುರ್ಗಪ್ಪ, ಹೆಸರು ಕಾಯಿಗಳನ್ನು ಬಿಡಿಸುತ್ತಿದ್ದ ಎಲ್ಲ ಅಳುಗಳನ್ನು ಬೇವಿನ ಗಿಡದ ಬುಡದ ನೆರಳಿಗೆ ಊಟಕ್ಕೆಂದು ಕಳುಹಿಸಿ, ತಲೆಗೆ ಕಟ್ಟಿದ್ದ ಟವಲ್ ನ್ನು ಬಿಚ್ಚಿ ಜಾಡಿಸಿಕೊಂಡು,ಮುಖವನ್ನು ವರಿಸಿಕೊಳ್ಳುತ್ತಾ, ಮತ್ತೆರಡು ಕೊಡಗಳನ್ನು ಹಿಡಿದುಕೊಂಡು ನೀರು ತರಲೆಂದು ಸುಲೇಮಾನ್ ಹೋದ ಕಡೆಗೆ ಹೆಜ್ಜೆ ಹಾಕಿದನು.
ಐದು ನಿಮಿಷ ಅಷ್ಟೇ... ನೀರು ತರಲು ಹೋದ ಮೂಲೆಯಿಂದ ದುರ್ಗಪ್ಪ ಲಬೊಲಬೋ... ಹೊಯ್ಕೊಂಡು ಊಟ ಮಾಡುತ್ತ ಕುಳಿತಿದ್ದ ಆಳುಗಳ ಹತ್ತಿರ ಎದ್ದು ಬಿದ್ದು ಓಡಿ ಬರುತ್ತಿದ್ದನು. ದುರ್ಗಪ್ಪನು ಬರುವ ರೀತಿಯನ್ನು ಕಂಡು, ಹಳ್ಳದ ಸರುವಿನಲ್ಲಿರುವ ತೋಳಗೀಳ ಏನಾದರು ಬೆನ್ನು ಹತ್ತಿದೇಯೋ ಏನೊ ಎಂಬ ಭಯದಿಂದ ಕೆಲಸಕ್ಕೆ ಬಂದಿದ್ದ ಹೆಣ್ಣಾಳುಗಳು ಉಣ್ಣುವ ತಾಟನ್ನು ಅಲ್ಲಿಯೆ ಬಿಟ್ಟು, ಬುತ್ತಿಯ ಪುಟ್ಟಿಯಲ್ಲಿಟ್ಟಿದ್ದ ಕುಡಗೋಲನ್ನು ಹಿಡಿದುಕೊಂಡು ದುರ್ಗಪ್ಪನ ಎದುರಿಗೆ ಓಡಿ ಹೊರಟರು. 
   ನಡುವಲ್ಲಿ ಸಿಕ್ಕ ದುರ್ಗಪ್ಪನ ಹಿಂದೆ ಯಾವ ನಾಯಿ ನರಿ ನರಪಿಳ್ಳೆಯು ಇದ್ದಿರಲಿಲ್ಲ, 'ಏನಾತ ತಮ್ಮ ಹಿಂಗ್ಯಾಕ ಸತ್ಗೊಂತ-ಬಿದ್ಗೊಂತ ಓಡಿ ಬರಾಕ ಹತ್ತಿದಿ' 
ಅಂದಳು ದುಗುಡದಿಂದ ಮೂಲಿಮನಿ ಬಸಮ್ಮ.
ದುರ್ಗಪ್ಪನಿಗೆ ಓಡಿ ಬಂದ ರಭಸಕ್ಕೆ ಎದುರುಸಿರು ಹತ್ತಿತ್ತು, 'ಅಯ್ಯ ಏನಾತ ಹೇಳ ಮಾಂವ ಹಿಂಗ್ಯಾಕ ಓಡಿ ಬಂದಿ, ಅಂವಾ ಎಲ್ಲದನಾಂವ ಸುಲ್ಯಾ ಕಾಣುವಲ್ನಲ್ಲ?' ಸೊಸಿ ಸೀನವ್ವ ಭಯದಿಂದ ಕೇಳಿದಳು.
ಎದುರುಸಿರನ್ನು ಬಿಡುತ್ತ ದುರ್ಗಪ್ಪ 'ಸುಲ್ಯಾ....
ಸುಲ್ಯಾ... ಸುಲ್ಯಾ ಸತ್ತ ಬಿದ್ದಾನ..!!, ಯಾರ ಅವ್ನ ಗೋಣ ಮುರ್ದ ಹಾಕಿ ಹೊಗ್ಯಾರ' ಮುಂಗಾರಿ ಬೇಸಿಗೆ ಬಿಸಿಲಿನ ಮಳೆಗೆ ಹೊಡೆಯೊ ಸಿಡಿಲಿನ ಹಾಗಿತ್ತು ಅವನಾಡಿದ ಮಾತು. ಎಲ್ಲರು ಕರೆಂಟ ಹೊಡೆದವರ ಹಾಗೆ ದುರ್ಗಪ್ಪನನ್ನು ಬಿಟ್ಟು ದೂರ ಸರಿದು ನಿಂತು ಬಿಟ್ಟರು. 
ಅಷ್ಟರಲ್ಲಿ ಸಾವರಿಸಿಕೊಂಡ ಪರ್ವಿನ ತಾನು ತಂದಿದ್ದ  ಪೋನಿನಿಂದ ಹಳ್ಳಿಗೆ ಸುದ್ದಿಯನ್ನು ಮುಟ್ಟಿಸಿದಳು. ಹಳ್ಳಿಗೆ ಮುಟ್ಟಿದ ಸುದ್ದಿ, ಮೆಂಬರ್ ಕಿವಿಯ ಮೇಲೆ ಬಿತ್ತು, ಅಲ್ಲಿಂದ ಹಾರಿ ಎಮ್ ಎಲ್ ಎ ಕಿವಿಯ ಮೇಲೆ ಕೂತಿತ್ತು, ಇಲ್ಲಿಂದ ಜಿಗಿದು ಪೋಲಿಸ್ ಸ್ಟೇಶನಗೆ ಬಂದು ಬಡಿದಿತ್ತು. ಏನಾಯಿತು, ಯಾಕಾಯಿತು ಹೇಗಾಯಿತು ಎನ್ನುವಷ್ಟರಲ್ಲಿ ಅರ್ಧ ಹಳ್ಳಿಯ ಜನರೆಲ್ಲ ಸುಲೇಮಾನ್ ಸತ್ತುಬಿದ್ದ ಜಾಗದಲ್ಲಿ ಜಾತ್ರೆಯ ರೀತಿಯಲ್ಲಿ ನೆರೆದುಬಿಟ್ಟಿದ್ದರು.
ರಸ್ತೆಯಲ್ಲಿ ಜೀಪನ್ನು ಬಿಟ್ಟು ಇಬ್ಬರು ಪಿ.ಸಿ.ಯೊಂದಿಗೆ ಹತ್ಯೆಯಾದ ಸ್ಥಳಕ್ಕೆ ನಡೆದುಕೊಂಡು ಬಂದನು ಎಸ್. ಐ. ಕಾಶಪ್ಪ.
  ಕಣ್ಣಿಗೆ ಹಾಕಿಕೊಂಡಿದ್ದ ಕಪ್ಪು ಕನ್ನಡಕವನ್ನು ತೆಗೆದು ಸೂಕ್ಷ್ಮವಾಗಿ ಹೆಣದ ಸುತ್ತಲು ಹದ್ದಿನ ಕಣ್ಣನ್ನಾಡಿಸಿದನು, ಹಳ್ಳಿಯ ಜನರು ಇವರು ಬರುವುದಕ್ಕಿಂತ ಮುಂಚೆಯೆ ಹೆಣದ ಸುತ್ತ ಮುತ್ತ ಅಲೆದಾಡಿದ್ದರಿಂದ ಹೆಜ್ಜೆ ಗುರುತುಗಳ ಸುಳಿವು ಕಷ್ಟ ಎಂಬುದು ಸ್ಪಷ್ಟವಾಗಿತ್ತು. ಹೆಣದ ಕಡೆಗೆ ನೋಡಿದನು ಕೊಳಿಯ ಗೋಣನ್ನು ಮುರಿದು ಒಗೆದಾಗ ಹೇಗೆ ತಿರುಗಿ ಬಿದ್ದಿರುತ್ತದೊ ಹಾಗೆ ಸುಲೇಮಾನ್ ನ ದೇಹವು ಬಿದ್ದುಕೊಂಡಿತ್ತು, ಮೈ ಮೇಲೆ ಯಾವುದೆ ಚೂರು ಗಾಯವಾಗಿರಲಿಲ್ಲ!, ಕಟ್ಟು‌ಮಸ್ತಾದ ಆಳು. ಒಬ್ಬರು ಇಬ್ಬರಿಗಂತೂ ಜಗ್ಗುವ ಹಾಗೆ ಕಾಣುತ್ತಿರಲಿಲ್ಲ, ಗುದ್ದಾಡಿ ಅಂಗಿ ಹರಿದ, ಮೈ ಮೇಲೆ ತೆರಚಿದ ಗಾಯದ ಗುರುತುಗಳಾಗಲಿ ಕಾಣ ಸಿಗಲಿಲ್ಲ, ನೀರು ತರಲೆಂದು ತಂದಂತಹ ತಾಮ್ರದ ಕೊಡ ಅಷ್ಟು ದೂರ ಉರಳಿಕೊಂಡು ಹೋಗಿ ಬಿದ್ದು ಅರ್ಧ ನೀರೆಲ್ಲ ಚೆಲ್ಲಿ ಹೋಗಿದ್ದವು. 
 ದೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟು, ಶ್ವಾನದಳಕ್ಕೆ ಕರೆಮಾಡಿ ತಿಳಿಸಿದರು. ಬರುವುದಕ್ಕೆ ನಾಲ್ಕು ತಾಸು ಸಮಯವಾಗುತ್ತದೆ ಎಂದು ಗೊತ್ತಾಯಿತು. ನೆರೆದಿದ್ದ ಜನರನ್ನೆಲ್ಲ ದೂರಕ್ಕೆ ಕಳುಹಿಸಿದರು. ಸುಣ್ಣದ ಪುಡಿಯನ್ನು ತಂದು ಹೆಣದ ಸುತ್ತ ಗೇರೆಯನ್ನು ಹಾಕಿದರು. 
'ಈ ಹೆಣಾನ ಮೊದ್ಲ ನೋಡ್ದೊರು ಯಾರಿಲ್ಲೆ' ಎಂದು ಕನ್ನಡಕವನ್ನು ಹಾಕಿಕೊಳ್ಳುತ್ತಾ ಗುಂಪಿನತ್ತ ತಿರುಗಿದನು ಗತ್ತಿನಲಿ.
'ನಾನರಿ ಧನಿ' ಎನ್ನುತ್ತಾ ಕೈಯಲ್ಲಿ ಟವಲ್ ನ್ನು ಹಿಡಿದುಕೊಂಡು ಬೆನ್ನನ್ನು ಅರ್ಧ ಚಂದ್ರಾಕೃತಿಗೆ ಬಾಗಿಸಿ, ನಡುಗುವ ಕೈಗಳಿಂದ ನಮಿಸುತ್ತ ಮುಂದೆ ಬಂದನು ದುರ್ಗಪ್ಪ.
'ಏನ್ ನಿನ್ನ ಹೆಸ್ರು'
'ದುರ್ಗಪ್ಪ ರಿ ಸರ್'
'ನಿ ಬಂದಾಗ ಈ ಹೆಣ ಹಿಂಗ ಬಿದ್ದಿತ್ತನು?'
'ಹೆಣಾ ಅಲ್ರಿ ಸರ್ ಅಂವಾ ಸುಲ್ಯಾ.. ಸುಲೇಮಾನ್ ಅದಾನ್ರಿ'
'ಹೌದೊ ಬದ್ಮಾಷ್ ಅಂವಾ ಜೀವಂತ ಇದ್ದಾಗ ಸುಲ್ಯಾನೊ ಸುಲೇಮಾನೊ, ಈಗ ಹೆಣ ಅಂವಾ ಹೆಣ. ಉಸ್ರ ನಿಂತ ಮ್ಯಾಲೆ ಹೆಣಾ ಅಂತಾರ ಹೊರ್ತ ಅದ್ಕ ಯಾರು ಹೆಸರಿಟ್ಟು ಕರಿಯೊದಿಲ್ಲಲೆ. ಅರ್ಥ ಆತನು?'
ಹ್ಞೂಂ ಎಂದು ತಲೆಯಾಡಿಸಿದನು ದುರ್ಗಪ್ಪ
'ಮತ್ತೀಗ ಹೇಳು, ಈ ಹೆಣಾ ನೀ ಬಂದಾಗ ಹಿಂಗ ಬಿದ್ದಿತ್ತನು'
ಹೌದೆನ್ನುಂತೆ ತಲೆಯನ್ನು ಹಾಕಿದನು.
'ಯಾಕ ಬಾಯ್ಗೇನು ಲಕ್ವಾ ಹೊಡ್ದತನು?'
'ಇಲ್ರೀ..'
'ಮತ್ತ್ ಬಾಯ್ಬಿಟ್ಟ ಬೊಗಳಲೆ ಮತ್'
' ಹೌದ್ರಿ ಈಗ ಹ್ಯಾಂಗ ಮಲ್ಕೊಂಡಾನಲ್ರಿ, ಹಿಂಗಾ ಬಿದ್ದಿದ್ನ ರಿ'
'ಥೂ ಇವನೌನ, ಅಂವಾ ಮಲ್ಕೊಂಡಿಲ್ಲ‌ ಲೇ.. ಹೆಣ ಆಗ್ಯಾನವ ಈಗ ಹೆಣಾ.. ನಿ ಬಂದಾಗ ಒಟ್ಟ ಹಿಂಗ ಬಿದ್ದಿತ್ತಿಲ್ಲಿದು'
' ಹೌದ್ರಿ' 
'ಮತ್ ನಿ ಬಂದಾಗ ಇಲ್ಲೆ ಅನುಮಾನ ಬರುವಂಗ ಯಾರರ ಓಡಾಡ್ತಿದ್ರನು ಮತ್'
'ಇಲ್ರಿ'
'ಇಲ್ಲಿಗೆ ಯಾಕ್ ಬಂದಿದ್ದಂವ'
'ಕುಡಿಯಾಕ ನೀರ್ ತರಾಕಂತ ಬಂದಿದ್ನರಿ'
'ಯಾಕ ಊರಾಗಿಂದ ತರಾಕ ನಡಾ ಬ್ಯಾನಿಯಾಕ್ಕವನು ನಿಮ್ಗ. ಹ್ಞಾಂ ಎರಡ ಹೆಜ್ಜಿ ಹಾಕಿದ್ರ ನಿಮ್ಮೂರ ಸಿಗ್ತೈತಿ, ಬಂಡ್ಯಾಗರ ಒಂದ ನಾಕ ಕೊಡ ಹೆಚ್ಗಿ ತುಂಬಕೊಂಡ ಬರಾಕ ಏನ ದಾಡಿ ನಿಮ್ಗ'
'ಇಲ್ರೀ.. ಇಲ್ಲೆ ಒಂದ ಹೊಲ ದಾಟಿದ್ರ ಕೆರಿ ಐತಲ್ರಿ ಮತ್ಯಾಕಂತಂದ ಬಿಟ್ಟ ಬಂದ್ವರ್ಯಾ, ಅದ್ರಾಗ ಇವತ್ತ ಕೆಲ್ಸಾನು ಭಾಳ ಇದ್ದಿಲ್ರೀ, ಇನ್ನೇನು ಇನ್ನೊಂದು ನುಮ್ಮು ಮುಟ್ಟಿಸಿಬಿಟ್ಟಿದ್ರ ಆಗಿ ಹೊಕ್ಕಿತ್ರಿ, ನೀರ ತಂದ್ಕೊಟ್ಟು ಮಾವನ ಊರಿಗೆ ಹೋಗಿ ಹೆಂಡ್ತಿನ ಕರ್ಕೊಂಡ ಬರ್ತಿನಂತ ಅನ್ನಾಕ ಹತ್ತಿದ್ನರಿ ಅಷ್ಟರೊಳ್ಗ ಯಾರೊ ಪಾಪಿಗಳು ಹಿಂಗ ಮಾಡಿ ಬಿಟ್ಟಾರ ನೋಡ್ರಿ'
'ಹೌದಾ.?.. ಮತ್ ಹುಡ್ಗ ಹ್ಯಾಂಗ'
'ಅಂದ್ರೀ!!?'
'ಅಂದ್ರ, ಊರಾಗ ಯಾರ ಜೊತಿನರ ಜಗ್ಳ-ಪಗ್ಳ ಮಾಡಿ ಕೊಲೆ ಮಾಡುವಂತ ದ್ವೇಷ ಏನರ ಕಟ್ಗೊಂಡಿದ್ನನು?'
'ಹೇ...ಹೇ.. ಊರ ಉಸಾಬ್ರಿಗೆ ಹೋಗುಂವಲ್ರಿ ಅಂವ, ಏನ ಹ್ವಾದ ವಾರ ಅವ್ರ ಮಾವನ ಜೊತಿ ಚೂರ ಬಾಯಿ ಆಗಿತ್ತಷ್ಟರಿ'
'ಬಾಯಿ ಅಷ್ಟಾನೊ.. ಏನ್ ಕೈ ಕೈ ಮಿಲಾಯ್ಸಿಕೊಂಡಿದ್ರೊ'
'ಹ್ಞೂಂ ಸ್ವಲ್ಪ ಮೈ ಕೈ ಮುಟ್ಟೊ ಪ್ರಮಾಣಕ್ಕೂ ಹೋಗಿತ್ರಿ ಆದ್ರ ಊರಾನ ಮಂದಿ ಬೈದು ಬಿಡಿಸಿ ಕಳಸಿದ್ರರಿ'
'ಯಾಕ ಜಗಳಾತು?'
'ಅದು..' ಊರ ಜನರ ಮುಂದೆ ಹೇಳಲು ತಡವರಿಸಿದನು ದುರ್ಗಪ್ಪ.
ಅವನ ಸಂದಿಗ್ಧತೆಯನ್ನು ಕಂಡು, ದುರ್ಗಪ್ಪನ ಹತ್ತಿರಕ್ಕೆ ಹೋಗಿ ಅವನ ಹೆಗಲ ಮೇಲೆ ಕೈ ಹಾಕಿ ಹೊಲದ ಕೆರೆಯ ದಂಡೆಯ ಹತ್ತಿರ ಕರೆದುಕೊಂಡು ಬಂದು
'ಈಗ ಹೇಳು' ಎಂದು ಸಮಾಧಾನದಿಂದ ಕೇಳಿದನು.
ಎಸ್. ಐ. ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಬಂದು ಸಮಾಧಾನದಿಂದ ಕೇಳಿದಾಗ, ಮೈ ಚಳಿಯನ್ನು ಬಿಟ್ಟವರ ಹಾಗೆ ಎದೆಯನ್ನುಬ್ಬಿಸಿ
'ಅದೇನಿಲ್ರಿ ಸರ್, ಗಂಡಾ ಹೆಂಡ್ತಿ ಜಗಳ. ಹೆಂಡ್ತಿ ದಿಲ್ ದಾರ ಇದ್ದಾಕಿರಿ ತವ್ರ ಮನಿಯಾಗ ವಾರಕ್ಕೆರಡ ಸಿನಿಮಾ ನೋಡೊದು, ತಿಂಗ್ಳದಾಗ ನಾಕ ಸಲ ಹೊಸ ಹೊಸ ಬಟ್ಟಿ ಖರೀದಿ ಮಾಡೊದು. ಲಗ್ನ ಆದ ಮೊದ ಮೊದ್ಲು ಇವ್ನು ಚೆನ್ನಾಗಿ ನೊಡ್ಕೊಂಡನ್ರಿ‌. ಕೇಳಿಕೇಳಿದ್ದ ಬಟ್ಟಿ ವಾಚ್, ಪೋನ್, ಕಂಡಕಂಡಿದ್ದ ತಿನ್ನಾಕ ತಂದ ಕೊಡಾಂವ. ಆದ್ರ ಇತ್ತಿತ್ಲಾಗ ಕೈ ಕಟ್ಟಾದ್ವರ್ಯಾ, ಸರಿಯಾಗಿ ಮಳಿ ಬೆಳಿನೂ ಅಗ್ಲಿಲ್ರಿ. ನೋಡ್ತಿರಲ್ಲ ನೀವಾ, ಹಂತ್ಯಾಕ ರೊಕ್ಕ ಇಲ್ದಂಗ ಆತ್ರ್ಯಾ, ಅದ್ರಾಗ ಎರ್ಡ ಹೆಣ್ಮಕ್ಳು ಬ್ಯಾರೆ. ಹೋದ ವರ್ಷ ಸುಗ್ಗಿಗೆ ಮಂಗ್ಳೂರಿಗೆ ದುಡಿಯಾಕ ಹೋದಲ್ಲೆ ಇವನ ಹೆಂಡ್ತಿಗೆ ಒಂದ ಬ್ಯಾರೆ ಲಿಂಕ್ ಸಿಕ್ಕ ಇವನ್ನ ಸ್ವಲ್ಪ ಕಸಬರ್ಗಿ ಹಂಗ ಮಾಡಿಬಿಟ್ಟಿದ್ಲಾ ರೀ ಆ ಹೆಣ್ಮಗ್ಳು. ಅದು ಗೊತ್ತಾಗಿ ಬ್ಯಾಡ ಬ್ಯಾಡ ಸರಿ ಅನಕೊಂಡು ಹೊಳ್ಳಿ ಹಳ್ಳಿಗೆ ಬಂದ ನನ್ನ ಜೊತಿ ಕೂಡ್ಕೊಂಡ ಈ ಎರಡ ಎಕರೆ ಶೆಟ್ರ ಹೊಲಾನ ೧ ಲಕ್ಷ ರೂಪಾಯಿಗೆ ಬಡ್ಯಾಗ ಹಾಕ್ಕೊಂಡು ಬಿತ್ತಾಕ ಹತ್ತಿದ್ವಿ ರಿ, ಅವನ ಹೆಂಡ್ತಿ ಇಲ್ಲಿಗೆ ಬಂದ ಮ್ಯಾಲ‌ ಮತ್ ಪೋನ್ ನ್ಯಾಗ ಗರಣಿಯಾನ ಜೊತಿ ಕಾಂಟ್ಯಾಕ್ಟನ್ಯಾಗ ಉಳ್ಕೊಂಡಳ್ರ್ಯಾ ಇದ ನೆವಕ್ಕ ಇವ್ರ ಹೆಣ್ಣಕೊಟ್ಟ ಮಾವನ ಜೊತಿ ಚೂರ ಜಗಳ ಆಗಿತ್ರೀ. ಜಗಳ ಮಾಡಿ ಅವತ್ತ ಮಗ್ಳನ್ನ ತಮ್ಮನಿಗೆ ಕರ್ಕೊಂಡ ಹೋಗಿ ಬಿಟ್ಟಿದ್ನಿರಿ, ಹೋಗೊ ಮುಂದ ನನ್ನ ಮಗ್ಳ ಇಷ್ಟ ಗೋಳ ಹೊಯ್ಕೊಂಡಿಯಂತಂದ್ರ ನಿಂಗೊಂದ
ಗತಿ ಕಾಣಿಸ್ತಿನಲೆ ಮಗ್ನ ಅಂತಂದ ಅವಾಜ್ ಹಾಕಿ ಹೋಗಿದ್ನರಿ'
'ಹಿಂಗನ ಹಂಗರ, ಸರಿ ಆತಬಿಡು ಮಿಂಡನ ಜೊತಿ ಸೇರ್ಕೊಂಡು ಗಂಡನ್ನ ಯಾಕ ಕೊಲ್ಸಿರಬಾರ್ದಕಿ?'
'ಹೇ.. ಬಿಡ್ತ ಅನ್ರೀ.. ಅಂತಾವೆಲ್ಲ ಸಾಧ್ಯ ಅದಾವೇನ್ರಿ?'
'ಸಾಕಷ್ಟು ಕೇಸ್ ಅದಾವೊ ದುರ್ಗಪ್ಪ. ಅದಿರ್ಲಿ ಬಿಡ ಮತ್ತ್ ಯಾರ್ಯಾರ ಕೂಡರ ಹಿಂಗ ...'
'ಹ್ಞಾಂ... ನೆಪ್ಪಿಗ ಬಂತ್ರಿ. ಈಗ ನಾವ್ ನಿಂತಿವಲ್ರಿ ಈ ಹೊಲ ನಮ್ಮೂರ ಐನೇರ ಈರಯ್ಯನೊರ್ದ ರಿ. ನಿನ್ನೀನು ಹಿಂಗ ನೀರ ತರಾಕ ಬಂದಾಗ ಐನೋರು ನುಗ್ಗು ಬಾಯಿ ಮಾಡಿ ಹೆಣಾನ ಎತ್ತತೀನ ನೋಡ ನಿಮ್ದು ಅಂತಾ ಅವಾಜ್ ಹಾಕಿದ್ರ ರಿ'
'ಯಾಕ ನೀರ ತುಂಬ್ಕೊಂಡಿದ್ಕ ಅಷ್ಟ ಅವಾಜ್ ಹಾಕಿದ್ನಾ ಆ ಸ್ವಾಮಿ?'
'ಅದು ಹಂಗಲ್ರೀ.. ಅವ್ರು ಐನೇರ ಅಕ್ಕಾರ ನಾವ್ ಕಮ್ಮಿ ಜಾತಿಯರ ಆಕ್ಕಿವಿ. ನಾವು ಕುರಿ ಕೋಳಿ ತಿನ್ನೊ ಮಂದಿ ಹಿಂಗಾಗಿ..'
ಅವನ ಮಾತಿನ ಒಳಾರ್ಥವನ್ನು ಅರಿತುಕೊಂಡಂತಹ ಎಸ್.ಐ.ಕಾಶಪ್ಪನವರು ಆ ಸ್ವಾಮಿಯ ಮೊಬೈಲ್ ನಂಬರನ್ನು ಪಡೆದುಕೊಂಡು ಕರೆಮಾಡಿ ಎಲ್ಲೆ ಇದ್ದರು ಹತ್ಯೆ ನಡೆದ ಸ್ಥಳಕ್ಕೆ ಬರುವಂತೆ ಸೂಚಿಸಿ, ದುರ್ಗಪ್ಪನನ್ನು ಮರಳಿ ಜನರ ಗುಂಪಿನತ್ತ ಕಳುಹಿಸಿ, ಸ್ವಾಮಿಯು ಬರುವ ತನಕ ಕಾಯತೊಡಗಿದರು.
ಇತ್ತ ದುಡಿಯಲಿಕ್ಕೆಂದು ಬಂದಂತಹ ಹೆಣ್ಮಕ್ಕಳೆಲ್ಲ ಬಾಯಿಗೆ ಅರಿವೆಯನ್ನು ಹಿಡಿದುಕೊಂಡು 'ಎಂಥಾ ಛಲೊದ ಇತ್ತಲ್ಲ ನಮ್ಮವ್ವ ಯಾ ಪಾಪಿ ಮುಂಡೆಮಗ  ಹಿಂಗ ಹೆಣ ಮಾಡಿ ಒಗದಾನ, ಅವ್ನ ಕೈ ಕತ್ತರಿಸಿ ಹೋಗ್ಲಿ, ಅವ್ನ ಹೆಂಡ್ತಿ ರಂಡಿಮುಂಡಿ ಆಗ್ಲಿ,' ಎನ್ನುತ್ತಾ ಎರಡು ಕೈಗಳಿಂದ ಲಟಕಿಯನ್ನು ಮುರಿದು ಹಾಕುತ್ತ ಶಪಿಸುತ್ತಿದ್ದಳು
ಮತ್ತೊಬ್ಬಳು' ಹ್ಞೂಂ.. ನೋಡ ಯವ್ವ, ಯಾಡ ಹೆಣ್ಣ ಅದಾವು ಬಂಗಾರದಂತಾವು, ಮನ್ಯಾಗ ವಯಸ್ಸಾದ ಮುದುಕಿ ಬ್ಯಾರೆ, ಆ ಹಾದರಗಿತ್ತಿ ಮಾಡೊ ಆಟಕ್ಕ ಇವಂಗೂ ಸಾಕಸಾಕಾಗಿತ್ತ, ಎಲ್ಲೆ ಇಬ್ರೂ ಕೂಡಿ ಇವನ್ನ ಹೊಡ್ದ ಹಾಕೇರ ಏನವ ಯವ್ವಾ' ಮೆಲುದನಿಯಲ್ಲಿ ಹೇಳಿದಳು.
'ಅಯ್ಯ ಸುಮ್ನಿರ ನಮ್ಮವ್ವ ಮಾಡ್ದೊರ ಪಾಪ ಆಡ್ದೊರ ಬಾಯಾಗಂತ!! ಯಾವ್ ಹುತ್ತನ್ಯಾಗ ಯಾಂ ಹಾವ್ ಇರ್ತದೊ ಏನೊ? ನಿನ್ಯಾಕ ಅಂದ ಬಾಯಿ ಹೊಲ್ಸ ಮಾಡ್ಕೊಂತಿ ಸುಮ್ಕಿರ ಅತ್ಲಾಗ'
ಗದರಿಸಿದಳು
ಇನ್ನೊಬ್ಬಳು' ಇದೇನ ಬಂತ ನಮ್ಮವ್ವ ಹಾಡ ಹಗಲ, ಬರಿ ಕೆಮ್ಮಿದ್ರ ಕೇಳುವಷ್ಟ ದೂರ ಇದ್ವಿ ನಾವು ಹಿಂಗ ಹೆಣ ಮಾಡಿ ಒಗದಾರ ಅಂದ್ರ!!? ನಾಳೆ ನಾವ್ ಈ ಕಡೆ ಜೋಳದ ಸುಗ್ಗಿಗೆ ಹ್ಯಾಂಗ ಬರೊದಬೆ ಚಿಗವ್ವ, ಗಂಡ್ಮಕ್ಳನ ಬಿಡಲಾರ್ದೊರು ಇನ್ನ ನಮ್ಮನ್ನ ಬಿಡ್ತಾರನಬೆ' ಭಯದಿಂದ ಕೇಳಿದಳು.
ಅಜ್ಜಿ ' ಅಯ್ಯ ನಿನ್ನ, ಅವಂಗ ಅವ್ರಿಗೆ ಬ್ಯಾಡ ಆಗೈತಿ ಅದ್ಕ ಹೊಡ್ದ ಹಾಕ್ಯಾರ ನಮ್ಗ ನಿಮ್ಗ ಯಾರ ಏನ್ ಮಾಡ್ತಾರಬೆ! ಅದು ಬಿಡು ಈಗ ಹ್ವಾದಂವಾ ಹೋದ. ಈಗ ನಂ ಪಾಡೇನ ಹೇಳ ನಮ್ಮವ್ವ ಅರ್ದಬಂರ್ಧ ದಗ್ದ (ಕೆಲಸ) ಆತು, ಅರ್ದಂಬರ್ಧ ಊಟಾತು, ಇತ್ಲಾಗ ಊರುನೂ ಇಲ್ಲ ಕೇರಿನೂ ಇಲ್ಲ ಅಂದಂಗಾತಲ್ಲ ನಂ ಬಾಳೆ, ನೆತ್ತಿ ಮ್ಯಾಲ ನೋಡಿದ್ರ ಮಳಿಯಪ್ಪ ಸೆಟಗೊಂಡ ಮುಖ ದಪ್ಪಗ ಮಾಡ್ಕೊಂಡ ಕುಂತಾನ, ಯಾ ಹೊತ್ತನ್ಯಾಗ ಹೊಡಿಬಾರ್ದ ಹೊಡ್ದನಂತಂದ್ರ ಓಸೂರು (ಎಲ್ಲರು) ಲೈನ (ಮುಖ್ಯ ರಸ್ತೆ) ಮುಟ್ಟೊದು ವಜ್ಜೈತಿ!'
ಆತಂಕವನ್ನು ಹೊರಹಾಕಿದಳು.
'ಈಗ ಹ್ಯಾಂಗಬೆ ಚಿಗವ್ವ, ಆ ದುರ್ಗಪ್ಪನ್ನರ ಕರ್ದ ಕೇಳ ಬೆ, ನಾನೊಳೆ ಇವತ್ತ ಆಡಿನ ಮರಿ ಹೊಡಕೊಂಡ ಬಂದೀನಿ, ಮನ್ಯಾಗ ಸಣ್ಣಸಣ್ಣವು ಹುಡ್ರನ ಬಿಟ್ಟ ಬಂದಿನಿ. ಇನ್ನೆರ್ಡ ದಿನ ಬಿಟ್ರ ನಾಗಪ್ಪನ ಪಂಚಮಿ ಐತಿ, ಮನಿ ಸಾರಸಬೇಕು, ಸಂತಿ ತರಬೇಕು, ಉಂಡಿ ಕಟ್ಟಬೇಕ, ಯವ್ವಾ ಶಿವ್ನ ಒಂದ ಎರಡ ಕೆಲಸ ಅಂತಾದ್ರಾಗ ಇದೊಂದು ಹಿಂಗಾಗಿ ಬಿಡ್ತಲ್ಲಬೆ!' ಆತಂಕವನ್ನು ವ್ಯಕ್ತಪಡಿಸಿದಳು.
ಅಜ್ಜಿ ಧೈರ್ಯಮಾಡಿ ದುರ್ಗಪ್ಪನನ್ನು ಕರೆದು ತಮ್ಮ ತಮ್ಮ ಸಂಕಟಗಳನ್ನು ತೋಡಿಕೊಂಡರು. ದುರ್ಗಪ್ಪನು ಮೆಲ್ಲಗೆ ಹೆಜ್ಜೆಯ ಮೇಲೊಂದು ಹೆಜ್ಜೆಯನ್ನು ಹಾಕುತ್ತ ಪೋಲಿಸಪ್ಪನ ಹತ್ತಿರ ಹೋಗಿ ಕೂಲಿ ಆಳುಗಳ ಸಂಕಟವನ್ನು ಹೇಳಿಕೊಂಡನು. ಎರಡು ನಿಮಿಷ ಯೋಚಿಸಿದ ನಂತರ, ಪಿ.ಸಿ.ಯನ್ನು ಕರೆದು ಎಲ್ಲ ಕೂಲಿ ಆಳುಗಳನ್ನು ಜೀಪಿನಲ್ಲಿ ಹಳ್ಳಿಗೆ ಬಿಟ್ಟು ಬರುವಂತೆ ಸೂಚಿಸಿದನು. ಎಸ್. ಐ. ಹೇಳುವುದಷ್ಟೆ ತಡ ಸತ್ನೊ ಬಿದ್ನೊ ಎನ್ನುತ್ತಲೆ ಬುತ್ತಿಗಂಟುಗಳನ್ನು ಸುತ್ತಿಕೊಂಡು ತಲೆಯ ಮೇಲೆ, ನಡುವಿನಲ್ಲಿ ಹಿಡಿದುಕೊಂಡು ಜೀಪಿನತ್ತ ಬಿರಬಿರನೆ ಹೆಜ್ಜೆಯನ್ನು ಹಾಕಿಬಿಟ್ಟರು. ಆಡುಗಳನ್ನು ಹಿಡಿದುಕೊಂಡು ಬಂದವರು, ಹಳ್ಳಿಗೆ ಹೋಗುವ ಅಡ್ಡದಾರಿಯನ್ನು ಬಿಟ್ಟು ಮುಖ್ಯ ರಸ್ತೆಯಿಂದಲೆ ನಡೆದುಕೊಂಡು ಹೊರಟರು.
ಇಷ್ಟರಲ್ಲಿ ಸ್ವಾಮಿಯು ಬಂದದ್ದಾಯ್ತು, ತನ್ನ ಹೊಲದಲ್ಲಿ ಅಷ್ಟೊಂದು ಜನರು ಮತ್ತು ಪೊಲೀಸ್ ಸಿಬ್ಬಂದಿ ನಿಂತಿದ್ದನ್ನು ನೋಡಿ ಈರಯ್ಯನ ಗಂಟಲು ಪಸೆ ಆರಿ ಹೋಯಿತು. ನಡಗುತ್ತ, ತಡವರಿಸುತ್ತ ಸುಲೇಮಾನ್ ನ ಹೆಣವಿದ್ದ ಕಡೆಗೆ ಬಂದನು. ಬಂದು ಸುಲೇಮಾನ್ ನ ಹೆಣವನ್ನು ನೋಡಿ ಗರ ಬಡಿದವರಂತೆ ನಿಂತುಬಿಟ್ಟನು. ಆಗ ಹಿಂಬದಿಯಿಂದ ಹೆಗಲ ಮೇಲೆ ಯಾರೊ ಕೈ ಇಟ್ಟರು ಚಿಟ್ಟನೆ ಚೀರಿ ಹಿಂದೆ ಸರಿದು ನೋಡಿದರೆ, ಎಸ್. ಐ. ಕಾಶಪ್ಪನವರು ನಿಂತಿದ್ದರು. ಊರ ಜನ ಎಲ್ಲಾ ಮೂಕಸ್ತಬ್ಧರಾಗಿ ಇವರಿಬ್ಬರನ್ನೆ ನೋಡ ತೊಡಗಿದರು. ಪರಿಸ್ಥಿತಿಯನ್ನು ಅರಿತುಕೊಂಡಂತ ಎಸ್.ಐ. ಈರಯ್ಯನನ್ನು ಕೆರೆಯ ದಂಡೆಯ ಹತ್ತಿರ ಕರೆದುಕೊಂಡು ಹೋಗಿ ಕುಳ್ಳರಿಸಿ ನೀರನ್ನು ಕೊಟ್ಟನು. ನಡಗುವ ಕೈಗಳಿಂದ ನೀರಿನ ಬಾಟಲನ್ನು ತೆಗೆದುಕೊಂಡು ಗಟಗಟನೆ ಕುಡಿದು ಖಾಲಿ‌ಮಾಡಿ ಬಿಟ್ಟನು. ಮೈಯಿಂದ ಬೆವರು ಹಾಗೆ ಸಣ್ಣಗೆ ಬರತೊಡಗಿತು. ಎರಡು ನಿಮಿಷ ಮೌನವಾಗಿದ್ದುಕೊಂಡ ಎಸ್.ಐ, 'ಏನಂತೀರಿ ಈರಯ್ಯಜ್ಜರ ' ಎಂದು ತೀಕ್ಷ್ಣವಾಗಿ ನೋಡುತ್ತಾ.
ಎಸ್.ಐ ಅವರ ಮುಖವನ್ನೆ ನೋಡುತ್ತಾ
'ಏನಿಲ್ಲರಿ ಸಾಹೇಬ್ರ'
'ಅಲ್ಲಾ ಮತ್ತ ನಿಮ್ ಹೊಲದಾಗ ಆ ವ್ಯಕ್ತಿದು ಕೊಲೆ ಆಗೈತಲ್ಲ ಇದಕ್ಕೇನಂತಿರಿ ಅಂತಂದ್ಯಾ'
ಥಟ್ಟನೆ ತಲೆಎತ್ತಿ ನೋಡಿ ಕಣ್ತಂಬ ನೀರನ್ನು ತುಂಬಿಕೊಂಡು ಕೈ ಮುಗಿದು ದಯನೀಯವಾಗಿ 
'ಸಾಹೇಬ್ರ ನಾವ್ ಸ್ವಾಮೇರ ಅದಿವ್ರಿ. ಬೆಳ್ಕ ಹರದ್ರ ದೇವ್ರು ದಿಂಡ್ರು ಅನ್ಕೊತ ಬಾಳೆ ಮಾಡೊರ ರಿ, ನಾವ್ಯಾಕ ಇಂತ ಹೆಸ್ಗಿ ಕೆಲ್ಸಕ್ಕ ಕೈ ಹಾಕೊನೊ ನಮ್ಮಪ್ಪ'
'ಮತ್ ಹಂಗಿದ್ರ ಮೊನ್ನೆ, ಇದ ಕೆರೆನ ನೀರ ತರಾಕ ಬಂದಂತ ಸುಲೇಮಾನ್ಗ ಕೊಲೆ ಧಮ್ಕಿ ಹಾಕಿದ್ರಂಥ!?'
ಈರಯ್ಯ ಈಗ ನೆಲದಲ್ಲಿ ತಲೆಯನ್ನಿಟ್ಟುಕೊಂಡು
'ಹೌದ್ರಿ'
'ಯಾಕ?'
'ಅಂವಾ ಸಾಬ್ರಾವ ಅದಾನರಿ ರಾತ್ರಿ ಆತಂದ್ರ ಸಾಕು ಕುರಿ ಕೋಳಿ ತಿನ್ನೋದು, ಕುಡಿಯೋದು ಮಾಡ್ತಾನ್ರೀ, ನಾವ್ ಮಡಿವಂತ್ರ ರೀ ಅದ್ಕ ನಂ ಕೆರಿಯಾನ ನೀರ್ ತಗೊಬ್ಯಾಡಂತಂದ ಸೂಕ್ಷ್ಮಿ ಹೇಳಿದ್ನಿರಿ'
'ಅಂದ್ರ ನಿಮ್ಮ ಕೆರಿಯಾನ ನೀರ ನೀವಷ್ಟ ಬಳಸಬೇಕ ಅನ್ಕೊಂಡಿರೇನು?. ಎಲ್ಲದರಿ ಸ್ವಾಮಿಗಳೆ ಜನ ಎಲ್ಲಾ ಜಾತಿ-ಪಾತಿ ಬಿಟ್ಟು ಒಗ್ಗಟ್ಟಾಗಿ ಇರಾಕ ಪ್ರಯತ್ನ ಮಾಡಾಕ ಹತ್ಯಾರ ಅಂತದ್ರಾಗ ನೀವು!! ಛೀ...ಛೀ.. ಅದು ಹೋಗ್ಲಿ ಕುಡಿಯೋ ನೀರಿಗೆ ಏನ್ ಜಾತಿ ಐತನ್ರೀ ಸ್ವಾಮೇರ.
ನೋಡ್ರಿಲ್ಲೆ ನಿಮ್ಮ ಹೊಲ ತೆಗ್ಗನ್ಯಾಗ ಐತಿ ಅಷ್ಟು ಹೊಲದ ನೀರು ಹರ್ದ ಬಂದು ನಿಮ್ಮ ಕೆರಿ ಸೆರತೈತಿ ಹೌದಿಲ್ಲೊ, ಹ್ಞಾಂ... ಮ್ಯಾಲಿ ಹೊಲ ಮಾದ್ರವಂದಂತ, ಅತ್ತಾ ಕಡೆಲ್ದು ಹೊಲೆರವಂದಂತ, ಅದು ಮಾಲಿಂಗ ಶೆಟ್ರದ್ದು ಹಿಂಗ ಬ್ಯಾರೆ ಬ್ಯಾರೆ ಜಾತಿ ಮಂದಿದು ಹೊಲ ಅದಾವು, ಅವ್ರು ಅಲ್ಲೆ ಉಂಡಿರ್ತಾರ, ತುಳಿದಿರ್ತಾರ, ಸೇದಿರ್ತಾರ, ಕುಡದಿರ್ತಾರ, ಮಳಿ ಬಂದಾಗ ಎಲ್ಲಾ ತೋಯ್ದು ನೀರು ಎಲ್ಲಾರ ಹೊಲ್ದಾಗಲಿಂದ ಹರ್ಕೊಂಡ ಬಂದು ನಿಮ್ಮ ಕೆರಿಯಾಗ ಬಿಳತ್ತಲ್ಲ!! ಮತ್ ಆ ನೀರನ್ನ ಬ್ಯಾರೆ ಬ್ಯಾರೆ ಮಾಡ್ಬೇಕಿಲ್ರಿ'
ಈರಯ್ಯ ತಲೆಯನ್ನು ಎತ್ತಲಿಲ್ಲ
'ತಿಳದೊರ ಅದಿರಿ, ಮಂದಿಗೆ ಬುದ್ದಿ ಹೇಳ್ತಿರಿ ಇರ್ಲಿ, ಮತ್ ಈ ಕೊಲೆನ ಹ್ಯಾಂಗ ಮಾಡಿದ್ರಿ ಹೇಳ್ರಿ ಮತ್'
'ಯಪ್ಪಾ, ಶಿವ...ಶಿವ ಎಂತ ಮಾತಂದ್ರಿ ನಾನ್ಯಾಕ ಅಂತಾ ಕೆಲ್ಸ ಮಾಡಾಕ ಹೋಗ್ಲಿರಿ ಸಾಹೇಬ್ರ' ಈರಯ್ಯನ ಧ್ವನಿಯಲ್ಲೀಗ ಉದ್ವೇಗ ಮತ್ತು ಆವೇಶಗಳೆರಡು ಮೆಳೈಸಿದ್ದವು.
'ಮತ್ ಮೊನ್ನೆ ನಡೆದ ಜಗಳದಾಗ ನೀವು ಅವನ್ನ ಕಡದ ಹಾಕ್ತಿನಂತಂದ ಅವಾಜ್ ಹಾಕಿದ್ರಂತ?'
'ಹೌದ್ರಿ ಅಂದಿದ್ನಿ, ಇಲ್ನೊಡ್ರಿ ಇಲ್ಲೆ ಮೊನ್ನೆ ತಾನು ಮತ್ತ ತನ್ನಿಬ್ರ ಗೆಳ್ಯಾರನ್ನ ಕರ್ಕೊಂಡ ಬಂದ, ಕೋಳಿ ತಿಂದ ಅದ್ರ ಎಲಬು ಮತ್.. ಕುಡ್ದ ಬಿಸಾಕಿದ ಬಾಟಲಿ ನೋಡ್ರಲ್ಲೆ ಹ್ಯಾಂಗ ಬಿದ್ದಾವು!!. ಮನುಷ್ಯ ಆದವಂಗ ಒಮ್ಮೆ ಹೇಳ್ತಾರ್ರಿ ಎರಡ ಸತಿ ಹೇಳ್ತಾರಿ ಹೊಳ್ಳಾ-ಮುಳ್ಳಾ (ಪದೆಪದೆ) ಅದ ನಾಯಿಪಾಡಂತಂದ್ರ ಹ್ಯಾಂಗರಿ? ಇವ್ರ ತಿಂದ ವಗ್ದದ್ದನ್ನು ನಾವ್ ಎತ್ತಿ ಒಗಿಬೇಕನ್ರಿ? ಹೇಳ್ರಿ ಸಾಹೇಬ್ರ. ಖರೆ ನೀವು ಹೇಳಿದ್ದು ನನ್ನ ಹೊಲ್ದ ಸುತ್ತಮುತ್ತ ಎಲ್ಲಾ ಜಾತಿ ಮಂದಿವು ಹೊಲ ಅದಾವ್ರಿ ನೀರು ಹರ್ದ ಬರ್ತಾವು ಆದ್ರ ಆ ಬಂದ ನೀರನ್ನ ಹಿಂಹ ದುರುಪಯೋಗ ಮಾಡ್ಕೊಳ್ಳದ್ರ್ಯಾ? ಮೊನ್ನಿ ಬ್ಯಾಸ್ಗ್ಯಾಗ ಗಳೆಕ ಅಂತ ಬಂದ ದನಾ ಬಿಸಲ ಹತ್ತಿ ಒಂದ ದನಾ ನಿಂತ ನಿಂತಲ್ಲೆ ಸತ್ತ ಬಿತ್ರೀ. ಇವತ್ತ ನನ್ನ ಮನಿ ಎತ್ತು ಸತ್ತ್ ಹೋಗೈತಿ ನಾಳೆ ಇನ್ನೊಬ್ರದ ಆದ್ರ. ಹೋಗ್ಲಿ ದನ ಸತ್ತರ ಮತ್ತೊಂದ ದನಾನರ ತರಾಕ ಬರ್ತದ ಆದ್ರ ಉಣ್ಣೊ ಮುಂದ ಕೂಳು ನೆತ್ತಿಗತ್ತಿ ಕುಡಿಯಾಕ ನೀರಿಲ್ದ ಯಾವ್ದರ ಮನಷ್ಯನ ಜೀವಾ ಹೋತಂದ್ರ ಹ್ಯಾಂಗ್ರಿ? ಈ ವಿಚಾರ ಇಟ್ಗೊಂಡ ನಾನು ಕೆರಿ ತಗ್ಸಿದ್ರಿ. ನಾನೇನ ಅವ್ರಿಗೆ ಕುಡಿಯಾಕ‌ ಬ್ಯಾಡ ಅಂದಿಲ್ಲ ಹೊತ್ಗೊಂಡ ಹೋಗಾಗ ಬ್ಯಾಡ ಅಂದಿಲ್ಲ ಈ ರೀತಿ ಹೊಲ್ಸಂಬಟ್ಟಿ ಮಾಡುದ್ಕ ನಾನು ಗದರಿಸಿ ಹೇಳಿದ್ದು. ಎಂದು ಇಷ್ಟು ಮಾತನ್ನು ಒಂದೆ ಉಸಿರಿನಲ್ಲಿ ಉಸರುತ್ತಾ ಕೆರೆಯ ದಂಡೆಯ ಮೇಲೆ ಕುಳಿತುಕೊಂಡು ಸುಧಾರಿಸಿಕೊಳ್ಳತೊಡಗಿದನು. 
ಎಸ್.ಐ.ಕಾಶಪ್ಪನವರು ಈರಯ್ಯನಾಡಿದ ಮಾತುಗಳನ್ನು ಕೇಳಿ ಅದರಿಂದ ಹೊರಬರಲು ತುಸು ಹೊತ್ತೆ ತೆಗೆದುಕೊಂಡರು. ನಂತರ ಕೆರೆಯ ಸುತ್ತಮುತ್ತ ಅಲೆದಾಡಿ ನೋಡಿದಾಗ ಈರಯ್ಯರ ಮಾತು ಸತ್ಯವೆನಿಸಿತ್ತು. ಹೆಜ್ಜೆ ಹೆಜ್ಜೆಗೂ ಎಗ್ ರೈಸ್, ಚಿಕನ್ ಪೀಸ್ ಗಳನ್ನು ತಿಂದು ಹಾಕಿದ ಖಾಲಿ ಪೇಪರಗಳು, ಸಿಗರೇಟಿನ ತುಂಡುಗಳು, ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು ಎಲ್ಲವನ್ನು ಸೇರಿಸಿದರೆ ಒಂದು ಗೋಣಿಚೀಲವೆ ಆಗುತ್ತಿತ್ತೇನೊ.
ಕೆರೆಯನ್ನು ಸುತ್ತಾಡಿ ಹೆಣದ ಹತ್ತಿರ ಬರುವ ಹೊತ್ತಿಗೆ
ಅವರ ತಾಯಿ ಬೀಬಿಜಾನ್ ದಡದಡನೆ ಓಡೊಡಿ ಬಂದು ದಕ್ಕನೆಂದು ಕುಳಿತು ಎದೆಯನ್ನು ಬಡಿದುಕೊಳ್ಳುತ್ತಾ ' ಅರೆ ಅಲ್ಲಾ, ಯೇ ಕ್ಯಾ ಹೋಗಯಾರೆ.. ಏಕ್ ಹೀ ಛಿರಾಗ ತಾ ಘರಕಾ ಓ..ಭಿ ಬುಜಗಯಾ, ಮೇರಾ ಘರ ಅಂದೇರಾ ಹೋಗಯಾ ರೆ ಅಲ್ಲಾ, ತೊಡಾತೊ ರೆಹಮ್ ಕರ್ನಾಥಾ... ಕಿಸ್ನೆ ಮಾರೆ ಮೇರೆ ಬೇಟೆಕೊ? ಉಸ್ಕಿ ಸಂಸಾರ ಬರಬಾದ ಹೋ, ಹಾಗೆ ಹೀಗೆ ಅದು ಇದು ಅಂತಂದು ಶಾಪವನ್ನು ಹಾಕುತ್ತಾ, ಮಣ್ಣನ್ನು ತೂರತೊಡಗಿದಳು.
ಕೈಯಲ್ಲಿ ಕಟ್ಟಿಕೊಂಡಿದ್ದ ರಿಸ್ಟ್ ವಾಚ್ ನ್ನು ನೋಡಿದನು ಎಸ್.ಐ. ಕಾಶಪ್ಪನವರು ಸಮಯ ಆರನ್ನು ಸಮೀಪಿಸುತ್ತಿತ್ತು, ಮುಂಗಾರು ಮೋಡದ ವಾತಾವರಣದ ಕಾರಣ ಅದಾಗಲೆ ಕತ್ತಲು ಕವಿದ ಹಾಗಾಗತೊಡಗಿತ್ತು. ಮತ್ತೆ ಹಳ್ಳಿಯಿಂದ ಒಂದು ಡಿಸೇಲ್ ಜನರೇಟರ್ ನ್ನು ತರಿಸಿ ಹೆಣದ ಸುತ್ತ ಬೆಳಕು ಬಿಳುವಂತೆ ಲೈಟಿನ ವ್ಯವಸ್ಥೆಯನ್ನು ಮಾಡಲಾಯಿತು. ಅರ್ಧಗಂಟೆ ಕಳೆಯುವಷ್ಟರಲ್ಲಿ ಶ್ವಾನದಳವು ಬಂದಿತು. ವಾಹನದಿಂದಿಳಿದ ಎರಡು ನಾಯಿಗಳನ್ನು ಹಿಡಿದುಕೊಂಡು ಹೆಣದ ಸುತ್ತಮುತ್ತ ಮೂಸಿಸುವಂತೆ ಸುತ್ತಾಡಿಸಿ, ಅವುಗಳ ಕೊರಳ ಪಟ್ಟಿಯನ್ನು ಸಡಿಲಿಸಿದರು. ಟಾರ್ಚ್ ಲೈಟ್ ಗಳನ್ನು ಹಾಕಿಕೊಂಡು ನಾಯಿಗಳ ಹಿಂದೆ ಹೊರಟರು. ನಾಯಿಗಳು ಕೆರೆಯ ಸುತ್ತ, ಹಳ್ಳದ ದಂಡೆಯ ಸುತ್ತ ಮುತ್ತ ಮೂಸಿ ಮರಳಿ ಕೆರೆಯ ಬಳಿ ಸುತ್ತಾಡಿಕೊಂಡು ಬಂದು ಹೆಣದ ಮುಂದೆ ನಿಂತುಕೊಂಡವು. ಅದಾಗಲೇ ಸಮಯ ಎಂಟನ್ನು ಸಮೀಪಿಸುತ್ತಿತ್ತು. ಎಸ್.ಐ.ಕಾಶಪ್ಪನವರಿಗೆ ಕೇಸಿನ ತಲೆಬುಡವರ್ಥವಾಗದೆ, ಶ್ವಾನಗಳನ್ನು ಮರಳಿ ಕಳಿಸಲಾಯಿತು. ಬಾಡಿಯನ್ನು ಈಗಾಗಲೆ ಬಂದು ನಿಂತಿದ್ದ ಸರಕಾರಿ ಅಂಬುಲೆನ್ಸಗೆ ಸೇರಿಸಿ, ದೇಹ ತಪಾಸಣೆಗೆ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.
ಟ್ರಿಣ್....ಟ್ರಿಣ್... ಎಂದು ಒಂದೆ ಸಮನೆ ರಿಂಗಿಸುತ್ತಿತ್ತು ಟೇಬಲ್ ಮೇಲಿಟ್ಟ ಪೋನು. ಎಸ್. ಐ. ಕಾಶಪ್ಪನವರ ಲೊಚಗುಟ್ಟತ್ತಲೆ ಬಲವಂತವಾಗಿ ಕಣ್ಣನ್ನು ತೆರೆಯುತ್ತಾ ಸಮಯವನ್ನು ನೋಡಿದರು ಬೆಳಗಿನ ಸಮಯ ಹತ್ತಾಗಿತ್ತು. ರಾತ್ರಿಯೆಲ್ಲ ಬಾಡಿಯನ್ನು ಮಹಜರು ಮಾಡಿಸಿ,ಅದರ ರಿಪೋರ್ಟನ್ನು ತಂದು ಸ್ಟೇಶನ್ನಿನ ಬಿರುವಿನಲ್ಲಿಟ್ಟು ಬಾಡಿಯನ್ನು ಮರಳಿ ಹಳ್ಳಿಗೆ ಸಾಗಿಸಿ ರಾತ್ರೊ ರಾತ್ರಿ ಧಪನ್ ಮಾಡಿಸಿಬಿಟ್ಟಿದ್ದರು. ಹಳ್ಳಿಯೊಳಗಿನ ಸಾಮರಸ್ಯ ಕದಡಲು ವಿರೋಧ ಪಕ್ಷಕ್ಕೆ ಅವಕಾಶ ಸಿಗಬಾರದು ಎನ್ನುವುದಕ್ಕೆ ಲೋಕಲ್ ಎಮ್.ಎಲ್.ಎ. ಬಾಡಿಯನ್ನು ರಾತ್ರಿಯೆ ಅಂತ್ಯಕ್ರಿಯೆ ಮಾಡುವಂತೆ ಸೂಚನೆಯನ್ನು ಕೊಟ್ಟಿದ್ದರ ಪರಿಣಾಮ ಅದರ ಕಾರ್ಯಗಳನ್ನೆಲ್ಲ ಮುಗಿಸಿ, ಅಲ್ಲೆ ಸುಡುಗಾಡಿನಲ್ಲಿಯೆ ಹಳ್ಳಿಯೊಳಗಿನ ಸಮಾಜದ ಎಲ್ಲ ಹಿರಿಯರಿಗೆ ಯಾವುದೇ ರೀತಿಯ ಶಾಂತಿಗೆ ಭಂಗ ಬರದಂತೆ ನಡೆದುಕೊಳ್ಳಬೇಕು, ಹಾಗೆನಾದರು ನಡೆದುಕೊಂಡರೆ ಶಿಸ್ತು ಕ್ರಮವನ್ನು ಜರುಗಿಸುವುದಾಗಿ ವಾರ್ನಿಂಗ್ ನ್ನು ನೀಡಿ ಕ್ವಾಟರ್ಸಗೆ ಬಂದು ಮಲಗುವಲ್ಲಿ ಬೆಳಗು ಮುಂಜಾನೆ ನಾಲ್ಕು ಗಂಟೆಯಾಗಿತ್ತು ಹೀಗಾಗಿ ಬಹಳ ಹೊತ್ತು ಮಲಗಿಬಿಟ್ಟಿದ್ದರು.
ಒಂದೆ ಸಮನೆ ಒದರುತ್ತಿದ್ದ ಪೋನ್ ನ್ನು ನಿದ್ದೆಗಣ್ಣಿನಲ್ಲಿಯೆ ರಿಸಿವ್ ಮಾಡಿ 'ಹಲೋ ಯಾರ್ರೀ' ಅಸಹನೆಯಿಂದಲೆ ಕೇಳಿದರು.
'ನಾನ್ರೀ ಎಮ್.ಎಲ್.ಎ. ಪಿ.ಎ. ಮಾತಾಡ್ತಿರೋದು'
'ಓಹ್ ಹೇಳಿ ಸರ್'
'ಕೇಸ್ ಏನಾತ್ರಿ ರಾತ್ರಿದು'
'ಮಹಜರ್ ರಿಪೋರ್ಟ್ ಬಂದಿದೆ ಸರ್. ನಾನದನ್ನ ಇನ್ನೂ ನೋಡಿಲ್ಲ'
'ಏನು? ಇನ್ನೂ ನೋಡಿಲ್ವಾ? ಇನ್ನೊಂದ ತಾಸಿನಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆಯ ಪ್ರೆಸ್ ಮಿಟಿಂಗ ಇದೆ. ಅದರಲ್ಲಿ ಯಾರಾದರೂ ಪತ್ರಕರ್ತರು ಈ ಕೊಲೆಯ ಕುರಿತು ಪ್ರಶ್ನಿಸಿದರೆ? ಏನು ಹೇಳುವುದು?  ಇನ್ನೂ ಹತ್ತು ನಿಮಿಷದಲ್ಲಿ ನನಗೆ ಒಂದು ಸ್ಪಷ್ಟ ಚಿತ್ರಣವನ್ನು ಕೊಡಬೇಕು' ಎಂದು ಮರುಮಾತನಾಡದೆ ಪೋನನ್ನು ಕಟ್ ಮಾಡಿಬಿಟ್ಟನು.
ತಡಬಡಿಸಿ ಎದ್ದ ಎಸ್.ಐ.ಕಾಶಪ್ಪನವರು ಬೆಳಗಿನ ಕಾರ್ಯಗಳನ್ನು ಮುಗಿಸಿ ಸ್ಟೇಶನ್ನಿಗೆ ಬಂದು, ಬಿರುವನ್ನು ತೆಗೆದು ರಿಪೋರ್ಟ್ ನ್ನು ಓದ ತೊಡಗಿದನು. ದೇಹದ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ಆಯುಧಗಳಿಂದ ಇರಿತಕ್ಕೊಳಗಾಗಿಲ್ಲ, ಕುತ್ತಿಗೆಯನ್ನು ಬಲವಾಗಿ ಹಿಂಬದಿಗೆ ಎಳೆದ ಕಾರಣ ಮರಣವಾಗಿದೆ. ಎಂದಷ್ಟೆ ಇತ್ತು. ಇದೆ ವಿಷಯವನ್ನು ಎಮ್.ಎಲ್.ಎ ಪಿ.ಎ. ಗೆ ಕರೆಮಾಡಿ ವಿಷಯವನ್ನು ತಿಳಿಸಿ, ಬಿಸಿಬಿಸಿ ಕಾಫೀಯನ್ನು ತರಿಸಿಕೊಂಡು ಕುಡಿದು, ಸಿಗರೇಟ್ ಒಂದನ್ನು ಹಚ್ಚಿ ಧಮ್ ನ್ನು ಎಳೆದುಬಿಟ್ಟು ಮುಂದಿನ ಕೆಲಸದತ್ತ ಗಮನವನ್ನು ಹರಿಸಿದನು.
ಹತ್ತು ತಿಂಗಳು ಕಳೆದು ಹೋಯಿತು. ಎಸ್.ಐ. ಕಾಶಪ್ಪನವರು ಎಲ್ಲ ರೀತಿಯಲ್ಲಿ ಕೇಸಿನ ತನಿಖೆಯನ್ನು ಮಾಡಿ ಮುಗಿಸಿದ್ದರೂ ಫಲಿತಾಂಶ ಮಾತ್ರ ಶೂನ್ಯವಾಗಿತ್ತು. ಈರಯ್ಯ ಮತ್ತು ಆತನ ಪರಿವಾರ ಹಾಗೂ ಅವನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದಿದ್ದರೂ, ಊರಿನಲ್ಲಿ ಕೆಲವು ಜನ ಹೇಳಿದ ಹಾಗೆ ಸಿಡುಕ ಹಾಗಂತ ಕೊಲ್ಲುವಷ್ಟು ಕ್ರೂರಿ ಏನಲ್ಲ!. ತಾನಾಯಿತು ಪೂಜೆ, ಪುನಸ್ಕಾರಗಳಾಯಿತು ಅಂತ ಬದುಕುತ್ತಿರವವನು ಅಷ್ಟೇ ಅಲ್ಲದೆ ಕೊಲೆ ನಡೆದ ದಿನ ಅವನು ತನ್ನ ಮಗಳನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದ. ಆತನ ಮೊಬೈಲ್ ಪೋನಿನ ಕರೆ ದಾಖಲೆಗಳಲ್ಲಿ ಕೊಲೆಯ ಮುಂಚೆ ಮತ್ತು ನಂತರದಲ್ಲಿ ಅಂತಹ ಯಾವುದೇ ಅನುಮಾನಸ್ಪದ ವ್ಯಕ್ತಿಗಳೊಂದಿಗೆ ಆತನ ಸಂಪರ್ಕ ಕಂಡು ಬಂದಿಲ್ಲ. ವಿಚಾರಣೆ ವೇಳೆಯಲ್ಲಿಯೂ ಸ್ಪರ್ಷವಾಗಿದ್ದಾನೆ ನೂರು ಸಾರಿ ಪ್ರಶ್ನಿಸಿದರು ಒಂದೆ ಉತ್ತರ. ನಾನವನನ್ನು ಕೊಂದಿಲ್ಲ. ಸೋ... ಈರಯ್ಯ ಅಲ್ಲ ಅಂದ ಹಾಗಾಯಿತು.
ಎರಡನೆಯ ಅಂಶ ಅವನ ಹೆಂಡತಿ ಮತ್ತು ಗೆಳೆಯ ಅವರಿಬ್ಬರ ಕರೆ ದಾಖಲೆಯನ್ನು ಪರಿಶೀಲಿಸಿದಾಗ 'ಉಸ್ಕೊ ರಾಸ್ತೆ ಸೆ ಹಠಾದೆಂಗೆ' ಎಂಬ ಮಾತನ್ನು ಪದೆ ಪದೆ ಆಡಿದ್ದರೂ ಅದಕ್ಕೆ ಪುರಾವೆಯಾದಂತಹ ಯಾವುದೇ ಸಾಕ್ಷಿಗಳು ಲಭ್ಯವಾಗಿಲ್ಲ, ಸುಲೇಮಾನ್ ನ ಹೆಂಡತಿಯನ್ನು ಕರೆದುಕೊಂಡು ಬಂದು ವಿಧವಿಧವಾಗಿ ಪ್ರಶ್ನಿಸಿದರು ಆಕೆಯ ಉತ್ತರವು ಒಂದೆ 'ಇಲ್ರೀ.. ನಾವೇನು ಮಾಡಿಲ್ರಿ ಸಚ್ಛ್ ಹೈ ನಾವ್ ಅವ್ರನ್ನ ನಂ ದಾರಿಲಿಂದ ತಗದ ಹಾಕಬೇಕು ಅನ್ಕೊಂಡಿದ್ವಿ ಆದ್ರ ಹಿಂಗಲ್ರೀ, ಅಂವಾ ದುಬೈದಾಗ ಅದಾನು ಅಂವಾ ಬಂದ ತಕ್ಷಣ ಇಸ್ಕೊ (ಇವನಿಗೆ) ತಲಾಖ್ ಕೊಟ್ಟು ಅವ್ನ ಜೊತೆ ಲಗ್ನ ಮಾಡ್ಕೊಂಡ ದುಬೈಗೆ ಹೋಗೊ ಆಸೆ ಇತ್ತ ಅಷ್ಟರೀ ಮತ್ತಿನ್ನೇನಿಲ್ಲ'
ಕೇಸಿನ ಜಾಡಿಗೆ ಮುಳ್ಳು ಹಚ್ಚಿಬಿಟ್ಟ ಹಾಗಾಗಿತ್ತು ಅವನ ಹೆಂಡತಿಯ ಹೇಳಿಕೆಯಿಂದ. ಅವಳ ತವರು ಊರಿನಲ್ಲಿ ಎಲ್ಲ ಕಡೆ ವಿಚಾರಿಸಲಾಗಿ, ಆಕೆ ಭಾಳ ಶೋಕಿ ಮಾಡಾಕಿ ಅದಾಳ್ರಿ, ಆದ್ರ ಮತ್ತೊಬ್ಬ ಗಂಡ್ಸಿನ ಜೊತಿ ಸಂಬಂಧ ಮಾಡ್ಕೊಂಡಾಳ ಅನ್ನೊದ ನಿಮ್ಮಿಂದ ಗೊತ್ತಾತ ನೋಡ್ರಿ' ಅಂತಾ ಎಲ್ಲಾರು ಹೇಳುತ್ತಿದ್ದರು. ಇದ್ದ ಎರಡನೇಯ ಅವಕಾಶವು ಟುಸ್ಸ ಆಯಿತು.
ಮೂರನೇಯದಾಗಿ ತುಂಡು-ಗುಂಡು ಗೆಳೆಯರ ಬಳಗ 'ಏ ಅಂವಾ ವೈಸಾ ಇದ್ದಿಲ್ರೀ..ಭಾಳ ಛಲೊ ದೋಸ್ತಿದ್ದವ ಬ್ಯಾಡ... ಬ್ಯಾಡ ಅನ್ನಾಕಲಿ ವಾರದಾಗ ನಾಕ ಸರ್ತಿ ಆ ಐನೋರ ಕೆರಿ ಹತ್ರ ಪಾರ್ಟಿಗೆ ಕರ್ಕೊಂಡ ಹೋಗ್ತಿದ್ದ, ಜಗ್ಗ ದುಡಿತಿದ್ನರಿ, ಹೆಂಡ್ತಿ ಕರ್ಚಿಗೊಂದಿಷ್ಟು ಕೊಟ್ಟ, ಉಳ್ದದ್ದು ಪಾರ್ಟಿ.. ಪಾರ್ಟಿ..ಪಾರ್ಟಿ.. ದಿಲ್ದಾರರಿ ಅಂವಾ. ತಾಯಿಗೆ ಒಂದ ಸೀರಿ ಕೊಡ್ಸಲಿಕ್ಕ ಆಟಾ ಹೋತು.'
ಯಾವ ಗೆಳೆಯರ ಬಾಯಲ್ಲಿ ಕೇಳಿದರು ಇದೆ ಮಾತು. ಸೋ ಗೆಳೆಯರ ಬಳಗದಿಂದಲೂ ಯಾವುದೇ ದಾರಿ ಕಾಣಲಿಲ್ಲ.
ಹಣಕ್ಕಾಗಿ ಕೊಲೆಯಾಗಿದೆಯಾ? ಸಿರಿವಂತನಲ್ಲ, ಸಾಲಗಾರನಲ್ಲ, ಸಾಲ ಕೊಟ್ಟವನು ಏನಲ್ಲ.
ದ್ವೇಷಕ್ಕಾಗಿ ಕೊಲೆಯಾಗಿದೇಯಾ? ಇದ್ದ ಎರಡು ಅನುಮಾನಗಳು ಉರಿವ ಒಲೆಯ ಒಳಗೆ ನೀರು ಸುರಿದ ಹಾಗಾಗಿದೆ, ಅದು ಇಲ್ಲ.
ಗೆಳೆಯರು, ಬಂಧು ಬಳಗ, ದುರ್ಗಪ್ಪ ಹ್ಞೂಂ.... ಹ್ಞೂಂ... ಫಲಿತಾಂಶ ಮಾತ್ರ ಶೂನ್ಯ...ಶೂನ್ಯ...ಶೂನ್ಯ...
ಎಲ್ಲರ ಕರೆ ದಾಖಲೆಗಳನ್ನು, ಬ್ಯಾಂಕಿನ ಖಾತೆಗಳನ್ನು, ದಿನವಹಿ ಚಟುವಟಿಕೆಗಳನ್ನು, ವಾರಕ್ಕೊಮ್ಮೆ ಸಾಕ್ಷಿಗಳನ್ನು ಕರೆಸಿ, ಮಾನಸಿಕವಾಗಿ ಕುಗ್ಗಿಸಿ, ಬೇರೆ ಬೇರೆ ರೀತಿಯಲ್ಲಿ ಪ್ರಶ್ನಿಸಿ ಸತಾಯಿಸಿದರು ಫಲಿತಾಂಶ ಶೂನ್ಯ. 
ಇನ್ನೆರಡು ತಿಂಗಳು ಕಳೆಯಿತು. ಹಿಂಗಾರು ಸರಿದು ಮತ್ತೆ ಮುಂಗಾರು ಬಂದಿತ್ತು, ಜನ ಎಂದಿನಂತೆಯೆ ತಮ್ಮ ದಿನನಿತ್ಯದ ಕಾಯದಲ್ಲಿ ತೊಡಗಿಕೊಂಡಿದ್ದರು ಬದುಕಿನ ಬಂಡಿ ಸಾಗುತ್ತಲೆ ಇತ್ತು. ಸುಲೇಮಾನ್ ನ ಕೇಸು ಅಲ್ಲಿಗೆ ನಿಂತು ಬಿಟ್ಟಿತ್ತು. ಎಸ್. ಐ. ಕಾಶಪ್ಪನವರ ಮಾತ್ರ ಸೋತು ಸುಣ್ಣವಾಗಿದ್ದರು. ಪದೇ ಪದೇ ಸಾಕ್ಷಿಗಳನ್ನು ಸ್ಟೇಶನ್ನಿಗೆ ಕರೆದು ಮಾನಸಿಕ ಹಿಂಸೆ ನೀಡದಂತೆ ಪಿ.ಎ.ಯಿಂದ ಪೋನು ಬಂದಾಗಿತ್ತು. 
ಸುಲೇಮಾನ ಸತ್ತುಬಿದ್ದ ಜಾಗದಲ್ಲಿ ಈಗ ಹೆಸರಿನ ಪೈರು ಹೂ ತುಂಬಿ ನಿಂತಿತ್ತು.

ವಿ.ಸೂ: ಈ ಅಪರಾಧದ ಸುಳಿವನ್ನು ನೀಡಿದವರಿಗೆ ಸೂಕ್ತ ಬಹುಮಾನವುಂಟು.

Wednesday, November 11, 2020

ಸ್ವಗತ

ಎದೆಯಲ್ಲಿಗ ನೀರವ ಮೌನದ
ಚಳಿ ಸುಳಿಗಾಳಿಯೊಂದು ಬೀಸುತ್ತಿದೆ.
ಭಾವಗಳೆಲ್ಲ ಹೆಪ್ಪುಗಟ್ಟಿ, ಪದಗಳು
ಉಸಿರುಗಟ್ಟಿ, ಅಸ್ತಿತ್ವದ ಉಳಿವಿಗಾಗಿ
ಹೋರಾಡುತ್ತಾ ಬಿಕ್ಕಳಿಸುತ್ತಿವೆ.

ಪದ..ಪದವು ತಾಳಿಬಿಟ್ಟಿದೆ ವೈರಾಗ್ಯ!!
ತಾಳ್ಮೆಯೆಂಬುದು, ಪುರಸಭೆಯ ತೊಟ್ಟಿಯಲ್ಲಿ
ಎಳೆದು ಹಾಕಿದ ಸತ್ತ ನಾಯಿಯ ಕಳೆಬರದಂತೆ
ಕೊಳೆಯುತ್ತಲಿದೆ.
ಈರ್ಷ್ಯವೆಂಬ ಫಂಗಸ್ ಸದ್ದಿಲ್ಲದೆ ದೇಹವನ್ನು
ಆಕ್ರಮಿಸಿಕೊಳ್ಳುತ್ತಿದೆ.

ನನ್ನೊಳಗಿನ ಕವಿಯ ಬಾಯಿಗೆ ಕಾದ
ಸೀಸವನ್ನು ಸುರಿದುಬಿಟ್ಟಿದ್ದರು ಸಾಕಿತ್ತು!!!
ಅಪನಂಬಿಕೆಯಂತಹ ಲಸಿಕೆಯನ್ನು ಹನಿ
ಹನಿಯಾಗಿ ಹಾಕಿಬಿಟ್ಟರು. ಸತ್ತು ಹೋಗುತ್ತಿರುವೆ
ಒಳಗೊಳಗೆ!!! ಹಿಂಸಿಸುತ್ತಿದೆ ಕಪಟಿಗಳ ಕಪಟದಾಟದ ನಿಯತ್ತು!!

ವಿಷವನ್ನೆ ಕೊಟ್ಟರು ಅಮೃತವಾಗುತ್ತಿತ್ತಲ್ಲ ನಂಬಿಕೆಯಲ್ಲಿ!!
ಬೆಲ್ಲವೂ....ಕಹಿಯಾಗುತಿದೆಯಲ್ಲ ಇಂದಿವರ ಜೊತೆಯಲ್ಲಿ!
ಕಾಲವೆ ಹೀಗಿದೇಯೊ? ಇಲ್ಲಾ..... ನನಗೆ ಮತಿ
ಭ್ರಮಣೆಯೊ?
ಹುಚ್ಚು...ಹುಚ್ಚು...ಹುಚ್ಚು... ಕಾಡುವ, ತಿವಿಯುವ
ಅಣಕಿಸಿ-ಕೊಂಕಿಸುವ, ತುಳಿದು ನನ್ನನ್ನೆ ಹರಿದು
ಮುಕ್ಕುತ್ತಿರುವ ರಣಹದ್ದಿನ ಬೇಟೆಯನ್ನಾಡಿಬಿಡಲೆ?

ಇಲ್ಲಾ.... ಬೇಟೆಯಾಗಿಹೋಗಿಬಿಡಲೆ? ಈಜು
ಬರುವುದಿಲ್ಲ ನಿಜ. ಹಾಗಂತ, ಕಾಲಡಿಯಲಿ ಹರಿವ
ಹಳ್ಳವನ್ನು ದಾಟದಿದ್ದರೆ!!? ದಂಡೆಯಲ್ಲಿಯೆ ನಾನು
ಕುಳಿತುಕೊಳ್ಳಬೇಕಾಗಬಹುದು! ಅದು ಅಲ್ಲಿಯೆ ನನ್ನ
ಸಮಾಧಿಯನ್ನು ಕಟ್ಟಿಬಿಡಬಹುದು ಅಲ್ಲವೆ?

ಹಾಗಿದ್ದರೆ ಎದ್ದುಬಿಡಲೆ ಮೈ ಕೊಡವಿಕೊಂಡು?
ಸರಿದು ಬಿಡಲೆ ಲಜ್ಜೆಯಿಲ್ಲದೆ ಪರದೆಯ ಕತ್ತಲಿಗೆ!
ಹೀಗಾದರೆ ಆಹಾರವಾಗುವುದಿಲ್ಲವೇನು ಆಡಿಕೊಳ್ಳುವವರ ನಾಲಿಗೆಗೆ!
ಸರಿ ಹಾಗಿದ್ದರೆ ಎದ್ದು ನಿಲ್ಲುವೆ, ಉತ್ತರಿಸಲು
ಪ್ರಶ್ನಿಸಲು, ಕೊಂಕಿಸಲು, ಕೆಣಕಿಸಲು, ಸೋಲು-ಗೆಲುವಿನ ಸಿಹಿ-ಕಹಿಗಳ ಉಣಬಡಿಸಲು

ನಡೆಯುತ್ತೇನೆ...ನಡೆಯತ್ತೇನೆ..ನಡೆಯುತ್ತಲೆ
ಇರುತ್ತೇನೆ,
ಎಡವಿದ ನೋವನ್ನು ಅರಿತುಕೊಂಡು, ಚುಚ್ಚುವ
 ಮುಳ್ಳುಗಳ ಸಹಿಸಿಕೊಂಡು,ನೆರಳಿರಲಿ-ಬಿಸಿಲಿರಲಿ,
ಛಳಿಯಿರಲಿ-ಮಳೆಯಿರಲಿ, ಒಂಟಿಯಾಗಿಯೆ ಕರೆದುಕೊಂಡು ಹೋಗುವ ಸಾವಿಗೂ... ನಾಚಿಕೆ
ಬರುವಂತಹ ಕೆಲಸವನ್ನು ಮಾಡಲು,
ನಡೆಯುತ್ತೇನೆ... ನಡೆಯತ್ತೇನೆ.... ನಡೆಯುತ್ತೇನೆ...

ಚುಟುಕು

ಕೈ...
ತೊಳೆದುಕೊಂಡುಬಿಡಬೇಕೆಂದಿದ್ದೆ
ಸಾಹಿತ್ಯದ ವಲಯದಿಂದ!
ಕೆಟ್ಟ ಚಟವಾಗಿಬಿಟ್ಟಿದೆಯಿದು!!!
ಪದೇ...ಪದೇ... ಏನಾದರೂ
ಬರೆಯಿಸಿಕೊಳ್ಳದೆ ಸುಮ್ಮನಿರಲಾರದೀ...
ಪದಬಂಧ!
ಸೋತು, ಬರೆಯಲು ಕುಳಿತುಕೊಳ್ಳುತ್ತೇನೆ.
ಸಾಕಲ್ಲವೇನು?
ತಪ್ಪೊ?-ಒಪ್ಪೋ? ತಿದ್ದಿ-ತಿಡಿ, 
ಜೊತೆಜೊತೆಗೆ ಕರೆದೊಯ್ಯತ್ತಿರುವುದು
ಮುಖಪುಟದ ಸ್ನೇಹವೃಂದ!

ಶಾಯರಿ

ರಂಗೀಯನ್ನು ಹುಡುಕುವ
ಹುಚ್ಚು ಹಂಬಲಕ್ಕಾಗಿ,
ನಾನೇಕೆ ಪರಿತಪಿಸಲಿ
ಸಾಕಿ...
ಕುಡಿಯುವ ಪ್ರತಿ
ಗುಟುಕಿನಲೂ.. ಅವಳ
ನೆನಪೆ ತುಂಬಿರುವಾಗ,
ಹುಡುಕುವ ನೆಪದಲ್ಲಿ
ಉಳಿದ ದಿನಗಳನ್ನೇಕೆ
ವ್ಯರ್ಥಪಡಿಸಿಕೊಳ್ಳಲಿ.

Saturday, November 7, 2020

ಶಾಯರಿ

ಕಣ್ಣಿನಲ್ಲಿ ಕಣ್ಣಿಟ್ಟು
ಮಾತನಾಡಲಾಗದೆಂದೆ
ಬೆನ್ನನ್ನು ತೋರಿಸಿ
ನಡೆದುಬಿಟ್ಟಳಲ್ಲ
ಸಾಕಿ...
ಕಾಮಾಲೆ ಕಣ್ಣಿನ
ಜಗಕೆ, ನಾನೀಗೊಬ್ಬ
ಅಮಲುಗಣ್ಣಿನ
ಫಕೀರ...

Friday, October 9, 2020

ಚುಟುಕು


ಯೋಚಿಸಲಿಕ್ಕೇನಿದೆ?
ಹಸಿವು....
ಯಾವಾಗಲೂ ಬೆನ್ನಿಗಂಟಿ
ಕೊಂಡೆ ಇರುತ್ತದೆ!.
ಗಿರಾಕಿಯನ್ನಿಂದು ಬಲೆಗೆ
ಬಿಳಿಸಿಕೊಳ್ಳಲೆಬೇಕು!
ಅಗುಳಿಗಾಗಿ ಅಲ್ಲದಿದ್ದರೂ...
ನಾಳೆಯ ಪಾಳೆಗೆ,
ಬಿರುಕುಬಿಟ್ಟ ತುಟಿಯಂಚುಗಳ
ಮರೆಮಾಚುವ
ಬಣ್ಣಕ್ಕಾಗಿ!

Tuesday, October 6, 2020

ಶಾಯರಿ

ಹುಗಿದ ನನ್ನ 
ಗೋರಿಯ ಮೇಲೆ
ಹೂವಿನ ಚಾದರವ
ಹೊದಿಸದಿರೆಂದು ಹೇಳಿಬಿಡು
ಸಾಕಿ....
ರಂಗೀಯ ಮದುವೆಗೆ,
ಉಡುಗೊರೆಯಾಗಿ ಏನನ್ನು
ಕೊಟ್ಟಿಲ್ಲ!
ಮೊಳ ಮಲ್ಲಿಗೆಯಾದರು
ಅವಳ ಮುಡಿಯೇರಲಿ.

ಕ್ಯಾ ಬಾತ್ ಹೈ ಸಹೋದರಿಯವರೆ.

Monday, October 5, 2020

ಶಾಯರಿ

ಕಾಯಲಿಕ್ಕೆ!!?
ಇನ್ನೇನುಳಿದಿದೆ
ಸಾಕಿ....
ಊರ ಒಳ-ಹೊರಗಿನಲ್ಲಿ
ಜಾಗವಿಲ್ಲ!
ಎದೆಯ ಮೇಲಿನ
ಜೇಬು, ಕುಡಿದು ಬಿಟ್ಟ
ಬಟ್ಟಲು, ನಡೆದು
ಹೋದವಳ ಕುಹಕ
ಜಗತ್ತು. ಎಲ್ಲ......
ಖಾಲಿ....ಖಾಲಿ....
ಖಾಲಿ.

ಶಾಯರಿ

ಒಲವಿನ ಮಡಿಕೆ
ಒಡೆದು ಹೋದದ್ದೆ
ಒಳಿತಾಯಿತೆಂದಾಯಿತು
ಸಾಕಿ...
ಇಲ್ಲದಿದ್ದರೆ,
 ಕ್ಷಣ...ಕ್ಷಣಕ್ಕೂ
ರಂಗೀಯನ್ನು ನೆನಪಿಸಿಕೊಳ್ಳುವ
ಪ್ರಮೇಯೆ....
ಇರುತ್ತಿರಲಿಲ್ಲ!

ಶಾಯರಿ

ಹಠದಲ್ಲಿ ದಾರಿ
ತಪ್ಪಿದ್ದರೆ!!?
ಗುರಿಯನ್ನಾದರು
ಮುಟ್ಟಬಹುದಿತ್ತು
ಸಾಕಿ....
ಎಡವಿದ್ದು ಒಲವಲ್ಲಿ!
ಈಗ...
ನ್ಯಾಯವನ್ನು ಕೇಳಬೇಕಾದರು
ಯಾರಲ್ಲಿ!!?

ಶಾಯರಿ

ಹಠದಲ್ಲಿ ದಾರಿ
ತಪ್ಪಿದ್ದರೆ!!?
ಗುರಿಯನ್ನಾದರು
ಮುಟ್ಟಬಹುದಿತ್ತು
ಸಾಕಿ....
ಎಡವಿದ್ದು ಒಲವಲ್ಲಿ!
ಈಗ...
ನ್ಯಾಯವನ್ನು ಕೇಳಬೇಕಾದರು
ಯಾರಲ್ಲಿ!!?

Saturday, October 3, 2020

ಚುಟುಕು

ಹೀಗೆ ಬಿಟ್ಟ ಕಣ್ಣುಗಳಿಂದ
ದಿಟ್ಟಿಸಿ ನೋಡುತ್ತ,
ಸುಟ್ಟು ಹಾಕಿ ಬಿಡಬೇಡವೇ....
ಹುಡುಗಿ!
ಬೇಕಿದ್ದರೆ ಬಂಧಿಸಿಕೋ...
ನಿನ್ನೆದೆಯರಮನೆಯಲ್ಲಿ!
ನಾನಾರಲ್ಲೂ... ಅಂಗಲಾಚಿ
ಬೇಡಿಕೊಳ್ಳುವುದಿಲ್ಲ,
ನಿಸ್ಸಾರ ಸ್ವಾತಂತ್ರ್ಯದ
'ಬೇಲ್'ಗಾಗಿ!

ಶಾಯರಿ

ನಾ ನಿನ್ನ
ಮಧು ಬಟ್ಟಲಿಗೆ
ಗುಲಾಮನಾಗಿರುವೆ
ಸಾಕಿ...
ವಿರಹವನ್ನು
ಬೇಡು, ಮೊಗೆಮೊಗೆದು
ಕೊಡುತ್ತೇನೆ.
ಕುಡಿದ ಹಳೆಯ
'ಬಾಕಿಯನ್ನು' ಮಾತ್ರ
ಕೇಳಬೇಡ

Wednesday, September 30, 2020

ಶಾಯರಿ

ಈ ಮಣ್ಣಿನಲ್ಲಿ
ಧರ್ಮದ ನಶೆಯೇ...
ಇನ್ನೂ ಇಳಿದಿಲ್ಲ
ಸಾಕಿ...
ಹೂಗಳು 
ಅರಳುವುದಾದರು
ಹೇಗೆ?
ಕಾಮಾಂಧರ ಕಾಲಲಿ
ಸಿಕ್ಕು ಹೋಗುತ್ತಿರುವಾಗ
ಹೊಸಕಿ.

Friday, September 25, 2020

ಶಾಯರಿ

ಎಡೆಬಿಡದೆ ಸುರಿಯುತ್ತಿರುವ
ಮಳೆಯಲ್ಲಿ, 
ನನ್ನ ಹೆಣವನ್ನೊಮ್ಮೆ
ಮಲಗಿಸಿಬಿಡು ಸಾಕಿ...
ತಣ್ಣಗಾಗಲಿ!
ವಿರಹದಲೆ ಕುದ್ದು..ಕುದ್ದು
ಬೆಂದು ಹೋದ ಜೀವವಿದು.
ಗೋರಿಯೊಳಗಿನ 'ಕಾವ'ನ್ನಾದರು
ತಡೆದುಕೊಳ್ಳಲಿ.

ಶಾಯರಿ

ನಮ್ಮಿಬ್ಬರ ನಡುವೆ
ಏನಿತ್ತೆಂದು
ಬಾಯ್ಬಿಟ್ಟು ನಾ
ಹೇಗೆ ಹೇಳಲಿ
ಸಾಕಿ....
ಊರಿಗೆ ಗೊತ್ತಿದ್ದದ್ದು
ನಿನಗೆ ಅರಿವಿಲ್ಲವೆಂದರೆ?
ಈ ಮಧು ಬಟ್ಟಲು
'ಮೃತ್ಯುಪಾನ'ವಾಗುವುದರಲ್ಲಿ
ಸಂದೇಹವಿಲ್ಲ.

Thursday, September 24, 2020

ಶಾಯರಿ

ಬೆಂದು ಹದವಾದ
ಕವಿತೆಗಳ ಕೆಳಗೆ
'ರುಜು'ವನ್ನು
ಮಾಡಲು ರಂಗಿಯೇ...
ಇಲ್ಲವಲ್ಲ
ಸಾಕಿ....
ಮೂಢ ಜನರಿಲ್ಲಿ
ಮೊದಲು ಪ್ರೀತಿಸಿದ್ದನ್ನೆ
'ರುಜುವಾತು'
ಮಾಡೆನ್ನುತ್ತಿದ್ದಾರಲ್ಲ!

Tuesday, September 22, 2020

ಶಾಯರಿ

ರಂಗೀಯನ್ನು
ಮರೆಯಲೆಬೇಕೆಂಬ
ಹುಚ್ಚು ಬಯಕೆಯೇನು
ಇಲ್ಲ
ಸಾಕಿ...
ಅವಳೊಂದು
ನೆಪವಷ್ಟೆ...
ಮದ್ಯದ ಬಟ್ಟಲಿಗೆ
ಮುತ್ತಿಕ್ಕಲು.

Saturday, September 12, 2020

ಚುಟುಕು

ತೊಟ್ಟ 'ಬಟ್ಟೆ'
ಎಂದಿದ್ದರೂ...
ಕೊಳೆಯಾಗಲೆಬೇಕು
ಗೆಳೆಯ!
ಕಳಚುತ್ತಾರಷ್ಟೆ, ಲೌಕಿಕ
ಸುಖಕ್ಕಾಗಿ ಕತ್ತಲ
ಕೋಣೆಗಳಲ್ಲಿ!
ಅವರ 'ತೊಟ್ಟು' ಕಳಚಿ
ಬಿಳುತ್ತದೆ ಹೊರತು,
ಹರಿಯುವುದೆ ಇಲ್ಲ ಎಂದಿಗೂ..‌
ಅಂಧಕಾರದ ಪರದೆಯು..

Friday, September 11, 2020

ಚುಟುಕು

ಹೂವೇನು?... ಮುಳ್ಳೇನು?....
ಮುತ್ತಿಕ್ಕುತ್ತವೆ ಮಂಜಿನ
ಹನಿಗಳು, ಎಂತಹ
ಸೋಜಿಗ!
ಮುತ್ತಿಕ್ಕಲು ಹೋದದ್ದು
ಹೂವಿಗೆ,
ಚುಚ್ಚಿದ್ದು? ಮುಳ್ಳುಗಳು 
ಎದೆಯ ಗೂಡಿಗೆ. ಇದ
ಕಂಡು, ಕೇಳುತ್ತದೆ 'ಏನಾಯಿತು?'
ಎಂದು ಮೂಜಗ!!

Monday, September 7, 2020

ಗಾಯನ

ನಿನ್ನ ಹೆಸ್ರ ಬರದಿಲ್ಲಂದ್ರ ಈ ಹಣಿಮ್ಯಾಗ..
ಮಾಡೊದಿನ್ನೇನೈತೆ ಹೊಕ್ಕೇನಿ ಕುಣಿಯಾಗ
ಉಸ್ರ ಹಾಕ್ಕೊತ ಕುಂದ್ರುದ್ಯಾಕ ನಿನ್ ಹೆಸರಿನ್ಯಾಗ
ನಿನ್ ಹೊರ್ತ ಬಾಳೊದ್ ಹ್ಯಾಂಗ ಕಳ್ಳ ಸಂತಿಯೊಳ್ಗ

ಗೆಜ್ಜಿಕೊಟ್ಟ ಕೈಗೆ ಕೈಯ ಕೊಟ್ಟು ಹ್ಯಾಂಗ ನಡದಿ
ಮಾತ ತಪ್ಪಿ, ಅಲ್ಲಿ ಏಳ ಹೆಜ್ಜಿ ಹ್ಯಾಂಗ ತುಳಿದಿ
ಬೆಂಕಿಯೊಳ್ಗ ನೂಕಿ ನನ್ನ, ಮಾಡಿಕೊಂಡಿಯಲ್ಲ ಶಾದಿ
ನಾ ಕೊಟ್ಟ ಹತ್ತಿಲಿಂದ ಮಾಡ್ಕೊಂಡ ಹೊಂಟಿ  ಗಾದಿ

ಹೋಗೊದ ಹೊಂಟಿ ತೂರೆರ ಹೋಗ ಗಾಳಿಗೆ ನನ್ನ ಬೂದಿ
ನಮ್ಮ ಪ್ರೀತಿಗೆ ಸಾಕ್ಷಿಯಾಗಿ ಉಳಿದುಹೋಗಲಿ ಬೀದಿ
ಮತ್ತ್ಯಾರು ತುಳಿಯದೊ ಬ್ಯಾಡ ನಮ್ಮಿಬ್ಬರ ಹಾದಿ
ಪ್ರೀತಿಗೆ ಕಣ್ಣಿಲ್ಲಂತ ತೋರಿಸಿ ನೀ ಹ್ವಾದಿ...
ಪ್ರೀತಿಗೆ ಕರುಳಿಲ್ಲಂತ ಸಾಬೀತ ಮಾಡಿ ನಡೆದಿ...

Saturday, September 5, 2020

ಮಾಂವ!

ಮೂರ್ ಹೊತ್ತು ಕೆಲ್ಸ-ಬಗ್ಸಿ ಬಿಟ್ಗೊಂಡು
ಬಿಟ್ ಕಣ್ ಬಿಟ್ಗೊತ ಕುಂದ್ರಾವ!
ತವ್ರಿಗ್ ಬಂದ್ ವಾರಾಗಿ ಹೋತು, ನಿಂಗಿನ್ನ
ನನ್ ನೆಪ್ ಬರುವಲ್ದೇನೊ? ಮಾಂವ!

ಕುಚಲಕ್ಕಿ ಅನ್ನ, ಹುರಳಿಕಟ್ಟಿನ ಸಾರ
ಕೈ ತುತ್ ಇಲ್ದನಾ... ಉಣಲಾರ್ದಾಂವ!
ಸಂಜಿಕೆಲ್ಲ ಹೂ ಮುಡ್ಸಿ ರಾತ್ರಿಗೆಲ್ಲ ನಿದ್ದಿಗೆಡ್ಸಿ, 
ಕೋಳಿ ಕೂಗೊ ಮುಂಚೇಕ ಎದ್ದ ಕುಂದ್ರಾಂವ!

ಊರ ಬಾವಿ ನೀರ ಸೇದಿ..ಸೇದಿ ಬಿಂದ್ಗಿಲ್
ತಂದ ಅಡ್ಗಿ ಮನ್ಯಾನ ಹಂಡೆ ತುಂಬ್ಸಾವ!
ಖೊಣ್ಗಿ ರೊಟ್ಟಿ ಬುತ್ತಿ ಕಟ್ಗೊಂಡ ಬಂಡಿ
ಹೂಡಿ ಹೋಗೊ ಮುಂದ ನಡ್ವ ಗಿಲ್ಲಾಂವ!

ಏನ್ ಹೇಳ್ಲಿ?, ಹ್ಯಾಂಗ ತಡಕೊಳ್ಲಿ
ರಾತ್ರಿ ಹಾಸ್ಗ್ಯಾಗೆಲ್ಲ ನೆಪ್ಪಿನ ತಿಗ್ಣಿ ಕಡಿಯಾ ಕುಂತಾವ!
ಮನಿ‌ ಮುಂದಿನ ಮಲ್ಗಿ ಬಳ್ಳ್ಯಾನ  ಹೂವೆಲ್ಲ 
ನೀ.. ಯಾವಾಗ ಬರ್ತಿಯಂತ ಕಾಯಾಕುಂತಾವ!

ಮಂಗ್ಯಾನಂತ ವಾರ್ಗಿ ಗೆಳತ್ಯಾರೆಲ್ಲ, ಮಾವಿನಕಾಯಿ ಯಾವಾಗ ತಿಂತಿಯಂತ ಕೇಳಾಕ್ಹತ್ತಾಂವ!
ಕೇಳಬಾರ್ದನ್ನೆಲ್ಲ ಕೇಳಿ..ಕೇಳಿ ನನ್ನ ಮೈಯೊಳಗಿನ
ಚಳಿನೆಲ್ಲ ಬಿಡ್ಸಾಕುಂತಾವ!

ಜೋಕ್ಮಾರ ಸತ್ರೇನ, ಸುಕ್ಮಾರ ಹುಟ್ಟಿದ್ರೇನ
ಇವತ್ತ್, ಸಂಜಿ ವಸ್ತಿಗರ ಬಂದಬಿಡೊ ಮಾಂವ!
ತಡ್ಕೊಳ್ಳಾಕ ಆಗುವಲ್ದಾಗೈತಿ ಹೊಸ್ಮಾಲಗಿತ್ತಿ
ಹಸಿಬಿಸಿ ಮನ್ಸಿನ ಕನಸ್ನಾಗಿನ ಸಾಂವ!

Thursday, September 3, 2020

ಚುಟುಕು

ಬೇಕಿದ್ದರೆ ಬೆಂಕಿಯನ್ನೆ
ಹಚ್ಚಿಬಿಡು!
ಉರಿದು ಹೋಗುತ್ತೇನೆ
ನೋವಿಲ್ಲದೆ!
ಉಸಿರಾಡುತ್ತಿರಲಿ
ಹೇಗೆ?
ಬಾಳಲ್ಲಿ ನಿನ್ನ
ಹೆಸರಿಲ್ಲದೆ!

Monday, August 31, 2020

ಚುಟುಕು

ಕೊಟ್ಟ ಹೂವನ್ನು ಹೀಗೆ
ಕಿವಿಯಲ್ಲಿಯೆ, ಇಟ್ಟುಕೊಂಡು
ಕೂರಬೇಡ! 
ಮಳೆಗೆ ಮೈ ನೆನೆದು
ನೆಗಡಿಯಾದರೆ!!?.
ಕೊರೋನಾ ಎಂದು
ಕರೆದುಕೊಂಡು ಹೋಗಿ ಬಿಡುತ್ತಾರೆ.
ಆಗ ಅಲ್ಲಿ.........
ನನ್ನ ಹೆಸರನ್ನು ಮಾತ್ರ ಹೇಳಬೇಡ!

ಶಾಯರಿ

ತಪ್ಪಲ್ಲವೇನು? ರಂಗೀಯು
ಎದ್ದು ಹೋದದ್ದು!
ಸಾಕಿ...
ಉತ್ತರವಾಗಬೇಕಿದ್ದವಳು
ನನ್ನನೆ ಪ್ರಶ್ನೆಯನ್ನಾಗಿಸಿ,
ಎದೆಯಲ್ಲಡಗಿದ ನೂರು
ಭಾವಗಳನು ಕೂಡಿಸಿ-ಕಳೆದು
ವ್ಯವಕಲಿಸಿದೆ, ಸೊನ್ನೆಯನ್ನೆ 
ಸುತ್ತಿಟ್ಟುಬಿಟ್ಟಳಲ್ಲ! ಎಣಿಸಲಿಕ್ಕೆ 
ಕೈಯಲ್ಲಿ ಕೊಟ್ಟು ಹೋದದ್ದಾದರು
ಏಕೆ?.....
ವಿರಹವೆಂಬ 'ಮಗ್ಗಿ ಪುಸ್ತಕ!'

Saturday, August 29, 2020

ಶಾಯರಿ

ಈ ರಾತ್ರಿಗಳೆಲ್ಲ
ಬಂಜೆತನವನ್ನೆ ತುಂಬಿಕೊಂಡಿರುವಾಗ,
ಕನಸುಗಳು ಪ್ರಸವಿಸುವವೇನು?
ಸಾಕಿ...
ಪ್ರತಿ ಸಂಜೆಗಳೂ...
ನನಗೆ ಸೂತಕವೆ.
ಕಳೆದುಕೊಳ್ಳಲು ಮದಿರೆ
ಬಟ್ಟಲು ಇದೆಯಲ್ಲ!
ಇನ್ನೇನು ಬೇಕು.

ಚುಟುಕು

ಆಗಾಗ ಹೀಗೆ
ಮೂಗುತಿಯನ್ನು
ಮುಟ್ಟಿ ನೋಡುತ್ತಿರಬೇಡ,
ಮಾಸಿ ಹೋಗಬಹುದು!
ಹೇಳುತ್ತಿರುವುದು
ಪ್ರೀತಿಯಿಂದೇನಲ್ಲ!!!,
ಮತ್ತೆ ಜೇಬಿಗೆ 'ಕತ್ತರಿ'
ಬೀಳುತ್ತದಲ್ಲ ಎಂಬ....
ಕಳವಳದಿಂದ!

ಚುಟುಕು

ಹೆಣೆದುಕೊಂಡ
ಜಡೆಗೇನು ಗೊತ್ತು
ನನ್ನವನ
ಮುನಿಸು!
ಕಾಣುತ್ತಿರುವುದೇನೊ?
ಸಂಜೆಗೆ ಬರುಬಹುದೆಂಬ
ಮಲ್ಲಿಗೆಯ 
ಕನಸು!

Friday, August 28, 2020

ಚುಟುಕು

ಪದಗಳನ್ನು ಹೆಕ್ಕಿ ತೆಗೆದು
ಕವಿತೆಗಳನ್ನೇನೊ
ಗೀಚಿಬಿಡುವೆ!
ಕುಕ್ಕಿ ತಿನ್ನುವವಳ
ನೆನಪುಗಳನ್ನು ಮರೆಯಲಾಗದೆ
ಇಲ್ಲಿ, ಚಡಪಡಿಸುತ್ತಿರುವೆ!

ಚುಟುಕು

ಈ ನಿದಿರೆ
ಬಾರದ ರಾತ್ರಿಗಳನ್ನು
ಬಳುವಳಿಯಾಗಿ ಕೊಟ್ಟದ್ದು
ಅವಳಲ್ಲವೆ
ಸಾಕಿ....
ಎಷ್ಟೇ.... ಕುಡಿದರು
ಮದಿರೆಯ ಮತ್ತೆ
ಎರುತ್ತಿಲ್ಲ, ಕಂಡು
ಹಾಲು ಬೆಳದಿಂಗಳನು.

Monday, August 24, 2020

ಚುಟುಕು

ಆಡುವ ಮಾತುಗಳಲ್ಲಿ
ನೂರೆಂಟು ಅರ್ಥಗಳಿವೆ.
ವ್ಯರ್ಥವಾಗಿ ಹುಡುಕಬೇಡ!
ಹಚ್ಚಿಕೊಳ್ಳುವವರಿಗೆ ಬಣ್ಣ
ಯಾವುದಾದರೇನು?
ನಮಗೆ ಮಸಿಯನ್ನು 
ಬಳೆಯವುದು ಮಾತ್ರ
ಮರೆಯುವುದಿಲ್ಲ!

ಚುಟುಕು

ಸೊಂಕು ಯಾವುದಾದರೆನು?
ಎದುರಿಸಿ ಗೆಲ್ಲಬಲ್ಲೆನು.
ಸೊಂಕಿತ ಮನಸ್ಸುಗಳನ್ನು
ಹೇಗೆ ಎದುರಿಸಲಿ!
ಮದ್ದಿಲ್ಲದ‌ ರೋಗಕ್ಕೆ,
ಸಾವಾದರು ಔಷಧಿಯಾಗಬಹುದು!
ಹುಟ್ಟು- ಸಾವಿನ ನಡುವೆ
ನರಳುವಂತೆ ಮಾಡುವ ಈ
ಜಗದ ಸ್ನೇಹವನ್ನು  ನಾ
ಹೇಗೆ ಗಟ್ಟಿಕೊಳಿಸಿಕೊಳ್ಳಲಿ!

ಚುಟುಕು

ನನಗೆ ಮುಖಕ್ಕೆ
ಬಣ್ಣ ಹಚ್ಚಿಕೊಳ್ಳುವುದು
ಗೊತ್ತಿಲ್ಲ! ಹೀಗಾಗಿ
ಎಲ್ಲರ ಮುಂದೆ
ನಾಟಕವಾಡಲು
ಬರುವುದಿಲ್ಲ!
ಹೇಳಿದ್ದನ್ನು ಕೇಳುತ್ತೇನೆ.
ತಿಳಿದಿದ್ದನ್ನು ಹೇಳುತ್ತೇನೆ.
ಇವೆರಡರ ಮಧ್ಯದಲ್ಲಿ,
ಎದ್ದು ಹೋದವರ ಬೆನ್ನ
ಹಿಂದೆ ಮಾತನಾಡುವುದನ್ನು
ಈಗೀಗ ನಿಲ್ಲಿಸಿಬಿಟ್ಟಿದ್ದೇನೆ.

ಚುಟುಕು

ಎದೆಯ ಕಡಲಿನ
ತುಂಬಾ....
ವಿರಹದ
ನಂಜನ್ನೆ ಸುರಿದು
ಹೋದೆಯಲ್ಲ
ನಂಜಿ!
ಮನಸಿನ ಭಾವನೆಗಳಿಗೆ
ಮೂರು ಕಾಸಿನ
ಬೆಲೆಯನ್ನೆ ಕೊಡದ
ಊಸರವಳ್ಳಿಯ
ಜನರ ಮಾತಿಗಂಜಿ!

ಚುಟುಕು

ಕೇವಲ,
ಕಾಮದ ನೋಟದಲ್ಲೆ
ನನ್ನನ್ನು ಮೈಲಿಗೆಯಾಗಿಸಬೇಡ!
ನಮಗೆಂದೆ
ಮಧುಮಂಚ ಕಾದಿದೆ
ಇಲ್ಲಿ, ಬರುವುದಕ್ಕೆ
ಲಜ್ಜೆಯ
ನೆಪವನ್ನು ಮಾತ್ರ
ಒಡ್ಡಬೇಡ!

ಚುಟುಕು

ಮೊದಲ ಹೆಜ್ಜೆಯನಿಟ್ಟಾಗ
ಎಲ್ಲರೂ...
ನಕ್ಕರು!
ಗೆದ್ದಿರುವೆನೆಂದುಕೊಂಡಿಲ್ಲ
ನಕ್ಕವರೆಲ್ಲ ಇಂದು
ಪಕ್ಕದಲ್ಲೆ ನಿಂತಿದ್ದಾರೆ.

ಶಾಯರಿ

ತುಂಬಿಟ್ಟ ಮಧು
ಬಟ್ಟಲಿಗೆ, ಎಷ್ಟಾದರು
ಲಿಂಬೆಯ ರಸವನ್ನು
ಹಿಂಡಿಟ್ಟುಬಿಡು.
ನನ್ನ ಬದುಕಿನ
ಕಹಿಯನ್ನೇನದು
ಕಡಿಮೆಗೊಳಿಸುವುದಿಲ್ಲ
ಸಾಕಿ...
ಬಟ್ಟಲು ಬರಿದಾಗುತ್ತದೆ
ಮಾತ್ರ.
ನೋವಿನ ಒರತೆ
ಬಸಿಯುತ್ತಲೆ ಇರುತ್ತದೆ
ಸದಾ.

ಶಾಯರಿ

ಹಲ್ಲಿ ಲೊಚಗುಟ್ಟಿದ್ದರೂ...
ಪ್ರೀತಿ ಹುಸಿಯಾಗಿ
ಹೋಯಿತಲ್ಲ
ಸಾಕಿ...
ಪಾಲಿಗೆ ಬಂದ
ವಿಷವನ್ನು ಹಿಡಿದು
ಯಾರಲ್ಲಿ ನ್ಯಾಯವನ್ನು
ಕೇಳಲಿ.

ಚುಟುಕು

ಎದೆಯಲ್ಲಿ  ರಂಗೀಯು
ಎಬ್ಬಿಸಿಹೋದ 
ಚಂಡಮಾರುತಗಳಿಗೆ
ಲೆಕ್ಕವೆ ಇಲ್ಲ!!
ಬದುಕನ್ನೆ ಚೆಂಡನ್ನಾಗಿಸಿ
ಆಟವಾಡಿದ ಕಪಟಿಯ
ನಾಟಕ, ಮುಗ್ದ?
ಜನರಿಗೇಕೊ
ಅರಿವಾಗುತಿಲ್ಲ!!

ಚುಟುಕು

ನಿಜ.
ನಾನು ಕಡಿದು
ಹಾಕುವಷ್ಟು ದೊಡ್ಡ
ಮರವೇನಲ್ಲ!
ಸಾವಿರ ಜನರು
ತುಳಿದು ಹೋದರು
ಸೋಲದೆ, ಎದ್ದು 
ನಿಲ್ಲುವ ಕಾಲಡಿಯ
ಗರಿಕೆ!

ಚುಟುಕು

ನೀನು ಬಿಟ್ಟು

ಹೋದ ಘಳಿಗೆ!

ಎದೆಯ ನೆಲವೀಗ

ಪದಗಳೆ ಹುಟ್ಟದಷ್ಟು

ಬರಡು!!

ಇಲ್ಲಿಗೂ... ಬರಬೇಡವೆಂದು

ದಿಗ್ಬಂಧನವ ಹಾಕಿಬಿಟ್ಟಿದೆ

ಸುಡುಗಾಡು!

Saturday, August 22, 2020

ಚುಟುಕು

ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರು
ಎದೆಯ ನೋವು ವಾಸಿ
ಯಾಗುವುದೆಂಬ ಭರವಸೆಯನ್ನೇನು ಕೊಟ್ಟಿಲ್ಲ
ವೈದ್ಯರು!
ಹೂವಂತ ಅಂಗೈಯನ್ನು
ಎದೆಯ ಮೇಲೆ ಇಟ್ಟುಬಿಡು.
ಅದರ ಕಾವಿನಿಂದಾದರು
ನೋವು ವಾಸಿಯಾಗುವುದಂತೆ?
ಅಂತ ಹೇಳುತ್ತಿರುತ್ತಾರೆ
ಅನುಭವಸ್ಥರು!

ಚುಟುಕು

ಹಚ್ಚಿದ ಬೆಂಕಿ, ಕಾಯಿಸಿಕೊಂಡ
ಮೈ ಎರಡು ತಣ್ಣಗಾಗುತ್ತವೆ
ಮೆಹರಬಾನ್!
ಅಮಾಯಕ ಜೀವಗಳು,
ಸುಣ್ಣದ ಗೋಡೆಗಳು, ಬದುಕ
ಬಂಡಿಗೆ ಆಸರೆಯಾಗಿದ್ದ
ವಾಹನಗಳು.... ಇವರ
ತೀಟೆಗಾಗಿಬಿಟ್ಟವಲ್ಲ!
ಕುರುಬಾನ್!!.

ಚುಟುಕು

ಬರಡು ಎದೆಯ
ಮೇಲೆ, ನೀನು ಹೀಗೆ 
ಸುಮ್ಮನೆ
ಗೀರಿ ಹೋದ ಗಾಯಕ್ಕೆ
ಹಚ್ಚಿದರೆ ಮಲಾಮು
ವಾಸಿಯಾಗುವುದೇನು?
ಬಟ್ಟಲು ಮದಿರೆಯನ್ನಾದರು
ಸುರಿದುಬಿಡು!
ನೋವು ಉಳಿದು, ಗಾಯ
ಕಲೆಯಾಗಿಯಾದರು ಉಳಿದು
ನಿನ್ನ ನೆನಪಿಸಬಲ್ಲದೇನೊ?



ಚುಟುಕು

ಇವರ ಮನೆ
ಬಾಗಿಲಿಗಿಲ್ಲ ಸಾಗವಾನಿ
ಮರದ ಚೌಕಟ್ಟು!
ಅನುಭವಿಸಬಲ್ಲಳಾ? ತಾಯಿ
ಅರಮನೆಯಲ್ಲಿ ಇಂತಹ
ಸುಖವನ್ನು.
ಹಾದಿ-ಬೀದಿಯವರ ಕಣ್ಣು
ಕುಕ್ಕುವ ಮುನ್ನವೆ,
ಹಾಕಿಸಿಡಬೇಕಲ್ಲವೆ ಈ
ಕ್ಷಣದ ಪಟಕ್ಕೊಂದು
ಬಂಗಾರದ ಚೌಕಟ್ಟು!

Friday, August 21, 2020

ಚುಟುಕು

ಮಾಗಿದ ಕೈಯಲ್ಲಿ
ರೂಪಗೊಂಡ 'ದೇವರನ್ನು'
ಮಾರಲೆಬೇಕು...
ಹೊಟ್ಟೆಪಾಡಿಗಾಗಿ!
ಜೀವ ಯಾವುದಾದರೇನು?
ಹೊತ್ತು...ಹೊತ್ತಿಗೂ
ಹೋರಾಡುತ್ತಲೆ ಇರಬೇಕು
ತುತ್ತು ಅನ್ನಕ್ಕಾಗಿ!

ಚುಟುಕು

ಅಹಲ್ಯೆ!
ಕಾಡು ಕಗ್ಗಲ್ಲಾಗಿ
ಬಿದ್ದಿದ್ದರು, ಕಾಯುತ್ತಿದ್ದಳು 
ರಾಮ ಬಂದೆ ಬರುವನೆಂಬ
ಭರವಸೆಯಲ್ಲಿ!
ಸುಖದ ಸುಪ್ಪತ್ತಿಗೆಯೆ
ಸೋರಿ ಹೋಗುತ್ತಿದ್ದರಿಲ್ಲಿ,
ನಲುಗಿ ಹೋಗುತ್ತಿದೆ, ಎಸುಳು
ತನುವು ರಾವಣಾಸುರನ
ಮನಸ್ಥಿತಿಯಲ್ಲಿ!



Thursday, August 20, 2020

ಚುಟುಕು

ಪ್ರೀತಿಯಲ್ಲಿ ಲಾಭವನ್ನು
ಮಾಡಿಕೊಳ್ಳಬಹುದೆಂದು
ಅವಳು ತೋರಿಸಿಕೊಟ್ಟಳು!
ಕೈ ಹಾಕಿದಾಗಲೆಲ್ಲ, ಎದೆಯ
ಮೇಲಿನ ಜೇಬಿಗಿಂತ, ಒಳಗಿನ
ಜೇಬಿಗೆ ಹೆಚ್ಚು ನಷ್ಟ!
ಅಕ್ಕ ಪಕ್ಕದಲ್ಲಿ 
ಯಾರು ಇರುವುದಿಲ್ಲ ಆಗ
ಕೇಳಲು.....ಒಡಲೊಳಗಿನ
ಸಂಕಷ್ಟ!

Wednesday, August 19, 2020

ಚುಟುಕು

ಕಣ್ಣೊಳಗಿನ ಭಾವವನ್ನೆ
ಅರಿತುಕೊಂಡಿದ್ದರೆ
ಸಾಕಿತ್ತು, ಮೌನವ
ಮುರಿಯುವ ಜರೂರತ್ತಾದರು
ಏನಿತ್ತು!?
ಮುರಿದರೂ...ಮಾತು
ಮುತ್ತಾಗಬೇಕಿತ್ತು.
ಎದೆಯ ಸೀಳುವ
ಸಿಡಿಮದ್ದಾಗಬಾರದಿತ್ತು!.

ಚುಟುಕು

ಬದುಕಿಗೆ ಹೆಗಲು
ಕೊಟ್ಟವರ ಬುಡವನ್ನೆ
ಅಲ್ಲಾಡಿಸುವ
ಜನರಿಹರಿಲ್ಲಿ!
ಮೌಲ್ಯಗಳಿಗಿಂತ,
ಧನ-ಕನಕಗಳನ್ನೆ
ಹೆಚ್ಚು... ತೂಗಿ ನೋಡುತ್ತಾರೆ
ನಾಲ್ಕು ದಿನದ
ಸಂತೆಯ ತಕ್ಕಡಿಯಲ್ಲಿ!

ಚುಟುಕು

ಹೀಗೆ...
ಗುಲಾಬಿಗಳನ್ನೆ ತೋರಿಸುತ್ತ
ಸುಮ್ಮನೆ ನನ್ನನು
ಕೊಲ್ಲಬೇಡಿ!
ಬಿಟ್ಟು ಹೋದ
ಹೂವಂತವಳನ್ನೊಮ್ಮೆ
ದಯಮಾಡಿ...
ಕರೆತಂದುಬಿಡಿ!

ಚುಟುಕು

ಅತಿಯಾದದ್ದು ಯಾವಾಗಲೂ
ವಿಷವಂತೆ.
ಎಡೆಬಿಡದೆ ಸುರಿದ
ಮಳೆಗೆ, ಕಾಯಿಗಳು
ಗರ್ಭದಲ್ಲೆ ಚಿಗುರೊಡಿಯುತ್ತಿವೆ.
ಬಿತ್ತಿದವರ ಎದೆಯಲ್ಲಿ
ಹತಾಶೆಯ ಅಗ್ನಿಕುಂಡವನ್ನು
ಹೊತ್ತುರಿಸುತ್ತಿವೆ.

ಚುಟುಕು

ಅವ್ವ-ಅಪ್ಪ....
ತೊಟ್ಟುಬಿಟ್ಟ ಬಟ್ಟೆಗಳ
ಹರಿದು, ಹೊಲಿಸಿದ
ಕೌದಿಗಳಲ್ಲೂ....ಅದೆಂತಹ
ಬೆಚ್ಚಗಿನ ಸುಖವಿದೆ!
ಬ್ರೇಡ್ಡು ತಿಂದು, ನಿದಿರೆಯಿಲ್ಲದೆ
ಕರ್ಲಾನ್ ಬೆಡ್ ನಲ್ಲಿ 
ನರಳಾಡುವುದಕ್ಕಿಂತ...
ಒಪ್ಪೊತ್ತಿನ ಗಂಜಿಯಾದರು ಸರಿ
ಕುಡಿದು ಮಲಗುವುದರಲ್ಲಿ
ಸ್ವರ್ಗ ಸುಖವೆ ಅಡಗಿದೆ!

ಚುಟುಕು

ನನ್ನ ನೋಡಿ, ನೀನು
ಹೀಗೆ ನಕ್ಕಗಾಲೆಲ್ಲ
ಜಾರಿ ಹೋಗುತ್ತದೆ
ಮನಸ್ಸು.
ತನುಮನವನ್ನೆ ನಿಗ್ರಹಿಸಿಕೊಳ್ಳಲು 
ಆಗದೆ ಇರುವಾಗ, 
ಮಾಡಿದರೆಷ್ಟು ಬಂತು... 
ವಿಶ್ವಾಮಿತ್ರನಂತೆ ವ್ಯರ್ಥ
ತಪಸ್ಸು.

ಚುಟುಕು

ಕತ್ತಲು ಕಳೆಯುತ್ತೇನೆಂದೆ
ಮೊಂಬತ್ತಿಯನ್ನು
ಹಚ್ಚಿದೆ!
ಒಂದು...ಎರಡು..
ಮೂರು, ನಾಲ್ಕು ಹೀಗೆ
ಉರಿದು ಹೋದವು
ಸುಮ್ಮನೆ.
ಕಳೆಯುವುದಾದರು ಹೇಗೆ?
ಮದದ ಬಣವೆಗೆ 
ಜ್ಞಾನದ ಕಿಡಿಯನ್ನು
ಸೋಕಿಸದೆ!

ಚುಟುಕು

ನಮಗೇನಿದು
ಹೊಸತಲ್ಲ ಬಿಡಿ!
ಕೆಡುವುದು-ಕಟ್ಟುವುದು,
ಸುಡುವುದು-ಬಳಿಯುವುದು.
ತಡೆದುಕೊಳ್ಳುವುದಾದರು
ಎಷ್ಟು ದಿನವಂಥ! ಹೇಳಿ?
ಬಾಯಲ್ಲಿ ಬೆಣ್ಣೆ ಮಾತು
ಎದೆತುಂಬ ಕಾರ್ಕೋಟಕದ ವಿಷ!
'ನೆಮ್ಮದಿ' ಎಂಬುದನ್ನು ನಾವಿನ್ನೇನು
ಹಣಕೊಟ್ಟು ಕೊಂಡುಕೊಳ್ಳಬೇಕೆ?

ಚುಟುಕು

ಇಲ್ಲಿ...
ಆರಿಸುವವರಿಗಿಂತ
ತುಪ್ಪ ಸುರಿಯುವವರೆ
ಜಾಸ್ತಿ!
ಉರಿದು ಹೋದರೇನಾಯಿತು?
ಹೊಟ್ಟೆ-ಬಟ್ಟೆ ಕಟ್ಟಿ
ಗಳಿಸಿಕೊಂಡ
ಆಸ್ತಿ-ಪಾಸ್ತಿ!.

ಶಾಯರಿ

ಜಗಕೆಲ್ಲ ಬರ
ಬಂದರೂ...
ಮಧು ಬಟ್ಟಲಿಗೆ
ಬರ ಬರುವುದೆ?
ಸಾಕಿ...
ಒಂದು ವೇಳೆ
ಮಧುವಿಗೂ.. ಬರ
ಬಂದರು, 
ರಂಗೀಯ ನೆನಪುಗಳಿಗೆ?

Thursday, August 6, 2020

ಚುಟುಕು

ನನ್ನ ನೋಡಿ, ನೀನು
ಹೀಗೆ ನಕ್ಕಗಾಲೆಲ್ಲ
ಜಾರಿ ಹೋಗುತ್ತದೆ
ಮನಸ್ಸು.
ತನುಮನವನ್ನೆ ನಿಗ್ರಹಿಸಿಕೊಳ್ಳಲು 
ಆಗದೆ ಇರುವಾಗ, 
ಮಾಡಿದರೆಷ್ಟು ಬಂತು... 
ವಿಶ್ವಾಮಿತ್ರನಂತೆ ವ್ಯರ್ಥ
ತಪಸ್ಸು.

Friday, July 24, 2020

ಚುಟುಕು

ರವಿಯಿಂದಿಗೂ...
ಮುಳುಗಿ ಹೋಗುತಿರುವ.
ನಿನೀನ್ನೂ ನನ್ನೊಲವಲ್ಲಿ
ಮಿಂದೆಳುತಿಲ್ಲ!
ಅವನು ಮತ್ತೆ ನಾಳೆ
ಉದಯಿಸುತ್ತಾನೆ.
ನೀನು...
ಉತ್ತರಿಸಬಲ್ಲೇಯಾ?

Wednesday, July 22, 2020

ಚುಟುಕು

ಎಷ್ಟೇ... ಕೂಡಿಸಿ
ಕಳೆದರೂ...
'ನಾ' ನಿನಗೆ
ಸೋಲದ ಹೊರತು
ಪ್ರೀತಿ ದಕ್ಕಲಾರದು!
೧+೧= ಒಂದೆನ್ನದೆ,
ಒಲವಿನ ಅಡಿಪಾಯವೆಂದೂ...
ಗಟ್ಟಿಯಾಗಲಾರದು!

Friday, July 17, 2020

ಚುಟುಕು

ಎದೆಗೆ ಮಾಡಿದ
ಗಾಯವನ್ನು
ಲೆಕ್ಕಿಸದೆ, ಕೆನ್ನೆಗೆ
ಸವರಿಕೊಂಡಿದ್ದಾಳೆ
ಅರಿಷಿಣ!
ಅಕ್ಕಿಕಾಳುಗಳು ಅವಳ
ನೆತ್ತಿಗೆ, ಅಳಿದುಳಿದವು
ನನ್ನ ಬಾಯಿಗೆ. 
ಸಾಕಿನ್ನು ಎತ್ತಿಬಿಡಿ
ಊರ ಹೊರಗಲ್ಲೊಂದು
ನನಗಾಗಿಯೇ...ಕಾಯುತ್ತಿದೆ
ಮಸಣ!

ಶಾಯರಿ

ನಿನ್ನರಮನೆಯ ಮದ್ಯವೆಲ್ಲ
ನನಗೆ ಬೇಕೆಂಬ
ಹುಚ್ಚು ಹಠವೇನಿಲ್ಲ
ಸಾಕಿ...
ರಂಗೀಯ ನೆನಪುಗಳು
ಅಳಿಸಿ ಹೋಗುವವಂತಿದ್ದರೆ
ಈ ಒಂದು ಬಟ್ಟಲು
ಮದಿರೆಯಷ್ಟೆ ಸಾಕು.

ಚುಟುಕು

ಹೀಗೆ...
ಗುಲಾಬಿಗಳನ್ನೆ ತೋರಿಸುತ್ತ
ಸುಮ್ಮನೆ ನನ್ನನು
ಕೊಲ್ಲಬೇಡಿ!
ಬಿಟ್ಟು ಹೋದ
ಹೂವಂತವಳನ್ನೊಮ್ಮೆ
ದಯಮಾಡಿ...
ಕರೆತಂದುಬಿಡಿ!

Thursday, July 16, 2020

ಚುಟುಕು

ಬದುಕಿಗೆ ಹೆಗಲು
ಕೊಟ್ಟವರ ಬುಡವನ್ನೆ
ಅಲ್ಲಾಡಿಸುವ
ಜನರಿಹರಿಲ್ಲಿ!
ಮೌಲ್ಯಗಳಿಗಿಂತ,
ಧನ-ಕನಕಗಳನ್ನೆ
ಹೆಚ್ಚು... ತೂಗಿ ನೋಡುತ್ತಾರೆ
ನಾಲ್ಕು ದಿನದ
ಸಂತೆಯ ತಕ್ಕಡಿಯಲ್ಲಿ!

Tuesday, June 30, 2020

ಚುಟುಕು

ಹೀಗೆ, ಎಲ್ಲರಿಗೂ
ತೆರೆದ ಬೆನ್ನನ್ನು 
ತೋರಿಸುತ್ತಿರಬೇಡ!
ಬೆಣ್ಣೆಯಂತ ಮಾತುಗಳಿಂದಲೆ,
ಸಣ್ಣನೆಯ ಗೀರುಗಳನ್ನು
ಎಳೆದು ಹೋಗುತ್ತಾರೆ.
ನಂಜು ಎರಿದ ಮೇಲೆ
ನೆಮ್ಮದಿಯ ಔಷಧಿಗಾಗಿ 
ಆಗ ತಡಕಾಡಬೇಡ!

ಕಾವೇರಿ ಆನ್ಲೈನ್

KAVERI ONLINE NOTIFICATION: Your Login Name is : www.sharanubesha@gmail.com, Password is : Sharanappa@616885 and Activation Code is : 794693

Monday, June 22, 2020

ಎಡಿಟ್ಸ್

ನೀನು ಬಿಟ್ಟು
ಹೋದ ಘಳಿಗೆ!
ಎದೆಯ ನೆಲವೀಗ
ಪದಗಳೆ ಹುಟ್ಟದಷ್ಟು
ಬರುಡು!!
ಇಲ್ಲಿಗೂ... ಬರಬೇಡವೆಂದು
ದಿಗ್ಬಂಧನವ ಹಾಕಿಬಿಟ್ಟಿದೆ
ಸುಡುಗಾಡು!


ನಿಜ.
ನಾನು ಕಡಿದು
ಹಾಕುವಷ್ಟು ದೊಡ್ಡ
ಮರವೇನಲ್ಲ!
ಸಾವಿರ ಜನರು
ತುಳಿದು ಹೋದರು
ಎದ್ದು ನಿಲ್ಲುವ ನಿಮ್ಮ
ಕಾಲಡಿಯ ಗರಿಕೆ!

ಎದೆಯಲ್ಲಿ ಎದ್ದು
ಹೋದ 
ಚಂಡಮಾರುತಗಳಿಗೆ
ಲೆಕ್ಕವೆ ಇಲ್ಲ!!
ಬದುಕನ್ನು ಚೆಂಡನ್ನಾಗಿಸಿ
ಆಟವಾಡಿದ ಕಪಟಿಯ
ನಾಟಕ ಮುಗ್ದ
ಜನರಿಗೇಕೊ
ಅರಿವಾಗುತಿಲ್ಲ!!

ಹಲ್ಲಿ ಲೊಚಗುಟ್ಡಿದರು
ಪ್ರೀತಿ ಹುಸಿಯಾಗಿ
ಹೋಯಿತಲ್ಲ
ಸಾಕಿ...
ಪಾಲಿಗೆ ಬಂದ
ವಿಷವನ್ನು ಹಿಡಿದು
ಯಾರಲ್ಲಿ ನ್ಯಾಯವನ್ನು
ಕೇಳಲಿ.

ತುಂಬಿಟ್ಟ ಮಧು
ಬಟ್ಟಲಿಗೆ, ಎಷ್ಟಾದರು
ಲಿಂಬೆಯ ರಸವನ್ನು
ಹಿಂಡಿಬಿಡು, ಅದೇನು
ನನ್ನ ಬದುಕಿನ
ಕಹಿಯನ್ನೇನು
ಕಡಿಮೆಗೊಳಿಸುವುದಿಲ್ಲ
ಸಾಕಿ...
ಬಟ್ಟಲು ಬರಿದಾಗುತ್ತದೆ
ಮಾತ್ರ.
ನೋವಿನ ಒರತೆ
ಎಂದು 

ಮೊದಲ ಹೆಜ್ಜೆಯನಿಟ್ಟಾಗ
ಎಲ್ಲರೂ...
ನಕ್ಕರು!
ಗೆದ್ದಿರುವೆನೆಂದುಕೊಂಡಿಲ್ಲ
ನಕ್ಕವರೆಲ್ಲ ಇಂದು
ಪಕ್ಕದಲ್ಲೆ ನಿಂತಿದ್ದಾರೆ.

ಕೇವಲ,
ಕಾಮದ ನೋಟದಲ್ಲೆ
ನನ್ನನ್ನು ಮೈಲಿಗೆಯಾಗಿಸಬೇಡ!
ನಮಗೆಂದೆ
ಮಧುಮಂಚ ಕಾದಿದೆ
ಇಲ್ಲಿ, ಬರುವುದಕ್ಕೆ
ಲಜ್ಜೆಯ
ನೆಪವನ್ನು ಮಾತ್ರ
ಒಡ್ಡಬೇಡ!

ಎದೆಯ ಕಡಲಿನ
ತುಂಬಾ....
ವಿರಹದ
ನಂಜನ್ನೆ ಸುರಿದು
ಹೋದೆಯಲ್ಲ
ನಂಜಿ!
ಮನಸಿನ ಭಾವನೆಗಳಿಗೆ
ಮೂರು ಕಾಸಿನ
ಬೆಲೆಯನ್ನೆ ಕೊಡದ
ಊಸರವಳ್ಳಿಯ
ಜನರ ಮಾತಿಗಿಂಜಿ!

ನನಗೆ ಮುಖಕ್ಕೆ
ಬಣ್ಣ ಹಚ್ಚಿಕೊಳ್ಳುವುದು
ಗೊತ್ತಿಲ್ಲ! ಹೀಗಾಗಿ
ಎಲ್ಲರ ಮುಂದೆ
ನಾಟಕವಾಡಲು
ಬರುವುದಿಲ್ಲ!
ಹೇಳಿದ್ದನ್ನು ಕೇಳುತ್ತೇನೆ.
ತಿಳಿದಿದ್ದನ್ನು ಹೇಳುತ್ತೇನೆ.
ಇವೆರಡರ ಮಧ್ಯದಲ್ಲಿ,
ಎದ್ದು ಹೋದವರ ಬೆನ್ನ
ಹಿಂದೆ ಮಾತನಾಡುವುದನ್ನು
ಈಗೀಗ ನಿಲ್ಲಿಸಿಬಿಟ್ಟಿದ್ದೇನೆ.

ಸೊಂಕು ಯಾವುದಾದರೆನು?
ಎದುರಿಸಿ ಗೆಲ್ಲಬಲ್ಲೆನು.
ಸೊಂಕಿತ ಮನಸ್ಸುಗಳನ್ನು
ಹೇಗೆ ಎದುರಿಸಲಿ!
ಮದ್ದಿಲ್ಲದ‌ ರೋಗಕ್ಕೆ,
ಸಾವಾದರು ಔಷಧಿಯಾಗಬಹುದು!
ಹುಟ್ಟು- ಸಾವಿನ ನಡುವೆ
ನರಳುವಂತೆ ಮಾಡುವ ಈ
ಜಗದ ಸ್ನೇಹವನ್ನು  ನಾ
ಹೇಗೆ ಗಟ್ಟಿಕೊಳಿಸಿಕೊಳ್ಳಲಿ!

ಆಡುವ ಮಾತುಗಳಲ್ಲಿ
ನೂರೆಂಟು ಅರ್ಥಗಳಿವೆ.
ವ್ಯರ್ಥವಾಗಿ ಹುಡುಕಬೇಡ!
ಹಚ್ಚಿಕೊಳ್ಳುವವರಿಗೆ ಬಣ್ಣ
ಯಾವುದಾದರೇನು?
ನಮಗೆ ಮಸಿಯನ್ನು 
ಬಳೆಯವುದು ಮಾತ್ರ
ಮರೆಯುವುದಿಲ್ಲ!

Tuesday, June 16, 2020

ಶಾಯರಿ

ಮದ್ದಿಲ್ಲದ ಸೊಂಕಿಗೆ
ತುತ್ತಾಗಿ, ನರಳಿ...ನರಳಿ
ಬಳಲಿಹೋಗಿದ್ದೇನೆ
ಸಾಕಿ...
ಸಾಕಿನ್ನು, ನೋವಿನಂಗಳ.
ಸುತ್ತಿಸುಬಿಡು ನನ್ನನಿಂದು
ಹರಕು ಛಾಪೆಯಲ್ಲಿ

ಶಾಯರಿ

ಬದುಕಲು ಬಿಡದಂತಹ
ನೆನಪುಗಳೊಟ್ಟಿಗೆ
ಹೇಗೆ ಬದುಕಿಬಿಟ್ಟೆಯೊ?
ಗಾಲಿಬ್..!!!
ಮಧುವನ್ನು ಕುಡಿದೆ
ಮರೆಯತ್ತೆನೆಂದು,
ಗೋರಿಯ ಸೇರಿದ ಕಥೆಯ
ವ್ಯಥೆಯನ್ನು ನಾನು
ಯಾರಲ್ಲಿ ತೊಡಿಕೊಳ್ಳಲಿ!

Tuesday, June 9, 2020

ಚುಟುಕುಗಳು

ನೀನು ಬಿಟ್ಟು
ಹೋದ ಘಳಿಗೆ!
ಎದೆಯ ನೆಲವೀಗ
ಪದಗಳೆ ಹುಟ್ಟದಷ್ಟು
ಬರುಡು!!
ಬರಬೇಡ ಇಲ್ಲಿಗೆ
ಎಂದು ದಿಗ್ಬಂಧನವ
ಹಾಕಿಬಿಟ್ಟಿದೆ
ಸುಡುಗಾಡು!

ಎದೆಗೆ ಮಾಡಿದ
ಗಾಯವನ್ನು
ಲೆಕ್ಕಿಸದೆ, ಕೆನ್ನೆಗೆ
ಸವರಿಕೊಂಡಿದ್ದಾಳೆ
ಅರಿಷಿಣ!
ಅವಳಿಗೆ ಅಕ್ಕಿಕಾಳು
ನೆತ್ತಿಗೆ, ಅಳಿದುಳಿದವು
ನನ್ನ ಬಾಯಿಗೆ. 
ಸಾಕಿನ್ನು ಎತ್ತಿಬಿಡಿ
ಊರ ಹೊರಗಲ್ಲಿ,
ನನಗಾಗಿ ಕಾಯುತಿದೆ
ಮಸಣ!

ನಿಜ.
ನಾನು ಕಡಿದು
ಹಾಕುವಷ್ಟು ದೊಡ್ಡ
ಮರವೇನಲ್ಲ!
ಸಾವಿರ ಜನರು
ತುಳಿದು ಹೋದರು
ಎದ್ದು ನಿಲ್ಲುವ ನಿಮ್ಮ
ಕಾಲಡಿಯ ಗರಿಕೆ!

ಎದೆಯಲ್ಲಿ ಎದ್ದು
ಹೋದ 
ಚಂಡಮಾರುತಗಳಿಗೆ
ಲೆಕ್ಕವೆ ಇಲ್ಲ!!
ಬದುಕನ್ನು ಚೆಂಡನ್ನಾಗಿಸಿ
ಆಟವಾಡಿದ ಕಪಟಿಯ
ನಾಟಕ ಮುಗ್ದ
ಜನರಿಗೇಕೊ
ಅರಿವಾಗುತಿಲ್ಲ!!

ಹಲ್ಲಿ ಲೊಚಗುಟ್ಡಿದರು
ಪ್ರೀತಿ ಹುಸಿಯಾಗಿ
ಹೋಯಿತಲ್ಲ
ಸಾಕಿ...
ಪಾಲಿಗೆ ಬಂದ
ವಿಷವನ್ನು ಹಿಡಿದು
ಯಾರಲ್ಲಿ ನ್ಯಾಯವನ್ನು
ಕೇಳಲಿ.

ತುಂಬಿಟ್ಟ ಮಧು
ಬಟ್ಟಲಿಗೆ, ಎಷ್ಟಾದರು
ಲಿಂಬೆಯ ರಸವನ್ನು
ಹಿಂಡಿಬಿಡು, ಅದೇನು
ನನ್ನ ಬದುಕಿನ
ಕಹಿಯನ್ನೇನು
ಕಡಿಮೆಗೊಳಿಸುವುದಿಲ್ಲ
ಸಾಕಿ...
ಬಟ್ಟಲು ಬರಿದಾಗುತ್ತದೆ
ಮಾತ್ರ.
ನೋವಿನ ಒರತೆ
ಎಂದು 

ಮೊದಲ ಹೆಜ್ಜೆಯನಿಟ್ಟಾಗ
ಎಲ್ಲರೂ...
ನಕ್ಕರು!
ಗೆದ್ದಿರುವೆನೆಂದುಕೊಂಡಿಲ್ಲ
ನಕ್ಕವರೆಲ್ಲ ಇಂದು
ಪಕ್ಕದಲ್ಲೆ ನಿಂತಿದ್ದಾರೆ.

ಕೇವಲ,
ಕಾಮದ ನೋಟದಲ್ಲೆ
ನನ್ನನ್ನು ಮೈಲಿಗೆಯಾಗಿಸಬೇಡ!
ನಮಗೆಂದೆ
ಮಧುಮಂಚ ಕಾದಿದೆ
ಇಲ್ಲಿ, ಬರುವುದಕ್ಕೆ
ಲಜ್ಜೆಯ
ನೆಪವನ್ನು ಮಾತ್ರ
ಒಡ್ಡಬೇಡ!

ಎದೆಯ ಕಡಲಿನ
ತುಂಬಾ....
ವಿರಹದ
ನಂಜನ್ನೆ ಸುರಿದು
ಹೋದೆಯಲ್ಲ
ನಂಜಿ!
ಮನಸಿನ ಭಾವನೆಗಳಿಗೆ
ಮೂರು ಕಾಸಿನ
ಬೆಲೆಯನ್ನೆ ಕೊಡದ
ಊಸರವಳ್ಳಿಯ
ಜನರ ಮಾತಿಗಿಂಜಿ!

Tuesday, June 2, 2020

ಚು

ನೀನು ಬಿಟ್ಟು
ಹೋದ ಘಳಿಗೆ!
ಎದೆಯ ನೆಲವೀಗ
ಪದಗಳೆ ಹುಟ್ಟದಷ್ಟು
ಬರುಡು!!
ಬರಬೇಡ ಇಲ್ಲಿಗೆ
ಎಂದು ದಿಗ್ಬಂಧನವ
ಹಾಕಿಬಿಟ್ಟಿದೆ
ಸುಡುಗಾಡು!

ಎದೆಗೆ ಮಾಡಿದ
ಗಾಯವನ್ನು
ಲೆಕ್ಕಿಸದೆ, ಕೆನ್ನೆಗೆ
ಸವರಿಕೊಂಡಿದ್ದಾಳೆ
ಅರಿಷಿಣ!
ಅವಳಿಗೆ ಅಕ್ಕಿಕಾಳು
ನೆತ್ತಿಗೆ, ಅಳಿದುಳಿದವು
ನನ್ನ ಬಾಯಿಗೆ. 
ಸಾಕಿನ್ನು ಎತ್ತಿಬಿಡಿ
ಊರ ಹೊರಗಲ್ಲಿ,
ನನಗಾಗಿ ಕಾಯುತಿದೆ
ಮಸಣ!

ನನ್ನೆದೆಯ ಗಾಯದ
ಮದ್ದು, ಅವಳ
ಕೆನ್ನೆಯ ಮೇಲೆಯೆ
ನಗುತ್ತಿತ್ತು.
ಅವಳು ಕೊಡಲಿಲ್ಲ!
ನಾನು ಕೇಳಲಿಲ್ಲ!

Sunday, May 24, 2020

ಶಾಯರಿಗಳು

ಅವಳಿಗಿನ್ನೂ...
ನನ್ನಮೇಲದಷ್ಟು
ಕೋಪವಿರಬಹುದು
ಸಾಕಿ....
ಮದುವೆಯ
ಮೊದಲ ರಾತ್ರಿಯಲ್ಲಿ
ಚೂರಾದ ಬಳೆಗಳನ್ನು
ತಂದು.... ನನ್ನ ಗೋರಿಯ
ಮೇಲೆ ಚೆಲ್ಲಿರುವಳಲ್ಲ!!

ಚುಟುಕುಗಳು


ಭಾರವಾಗುವುದಿಲ್ಲೇನು?
ಚೆಲುವೆ, ಮೂಗಿಗೆ
ಈ ನತ್ತು!!
ತರದಿದ್ದರೆ ಸಾಕು...
ನಿನ್ನ ಸೌಂದರ್ಯಕ್ಕೆ
ಕುತ್ತು!!

ಚುಟುಕು

ನನ್ನೊಳಗಿನ ಬರಹಗಾರ
ಮಲಗಿಕೊಂಡಿದ್ದಾನೆ.
ಸತ್ತು ಹೋಗಿಲ್ಲ!
ಲೇಖನಿಯೊಳಗಿನ
'ಶಾಯಿ' ಖಾಲಿಯಾಗಿದೆಯೆ
ಹೊರತು, ನಿಬ್ಬಿನ
ಹರಿತವಿನ್ನು
ಕಡಿಮೆಯಾಗಿಲ್ಲ!

Monday, May 18, 2020

ಹಾಯ್ಕು ೨೦೧-೨೫೦

ಇಂದು ಅವರ
ಹುಟ್ಟು ಹಬ್ಬ.
ಓ!!! ಅವರಿನ್ನೂ... ಬದುಕಿದ್ದಾರ!

Tuesday, April 28, 2020

ಕಥೆ-

'ಲೆ ಹಂಸಿ..., ಹಂಸಿ' ಎರಡು ಸಾರಿ ಮೆತ್ತಗೆ ಕೂಗಿದಳು ಮನೆಯ ಆವರಣದಲ್ಲಿ ಕುಳಿತುಕೊಂಡಿದ್ದಂತಹ  ನೀಲವ್ವ, ಅವಳು ಬರಲಿಲ್ಲ ಈ ಸರ್ತಿ ಬೀದಿಗೂ ಕೇಳುವ ಹಾಗೆ ಚೀರಿ ಕರೆದಳು'ಲೇ ಹಂಸಿ' ಅಷ್ಟೇ ಈ ಸಲ ಮಾತ್ರ ಒಂದೆ ಕೂಗಿಗೆ ಹೊರಗಡೆ ಬಂದಿತ್ತು ಆಕೃತಿ ಆದರೆ ಇದು ಬೇರೆ. ಅಂದರೆ ಹಂಸಿಯ ಮಮ್ಮಿ. 'ಏನತ್ತೆ‌ ಹೀಗೆ ಮನೆಯ ಮುಂದೆ ಕುಳುತುಕೊಂಡು ಹೀಗೆ ಕೂಗಿದರೆ ಹೇಗೆ? ಅದು ಕರೆಯುವುದಾದರು ಹೇಗೆ ಅವಳ ಹೆಸರು ಹಂಸಿಕಾ ಮೊಮ್ಮಗಳ ಹೆಸರನ್ನು ಚೆನ್ನಾಗಿ ಕರೆಯೊದಿಕ್ಕೆ ಬರೋದಿಲ್ವಾ ನಿಮ್ಗೆ, ನಾಳೆ ಅವಳ ಪ್ರೆಂಡ್ಸೆಲ್ಲ ಹಾಗೆ ಕರೆಯುವುದಿಲ್ಲವಾ? ಹಂಸಿ ಅಂತಾ ಕರೆದರೆ ಅವಳಿಗೆ ಎಷ್ಟೊಂದು ನೋವಾಗುತ್ತದೆ ಗೊತ್ತಿಲ್ಲನ ನಿಮ್ಗ ಆಕಿ ಗೆಳ್ತೆರೆಲ್ಲ
ನಾಳೆ ಹಂಗಾ ಕರೆಕ ಹತ್ತಿದ್ರ ಆಕಿ ಅತ್ಗೊಂತ ಮನಿಗ ಬರ್ತಾಳ ಮತ್ತಕಿನ ಸಮಾಧಾನ ಮಾಡೋದ ಎಷ್ಟ ಕಷ್ಟ ಐತಂದ ನಿಮ್ಗೂ ಗೊತ್ತೈತಿ.
'ಅಲ್ವಾ, ನಾನು ಮೊದ್ಲಾಕ ಮೆತ್ಗ ಕರ್ದ್ನೆಲ್ಬೆ ಓ ಅನ್ಲಿಲ್ಲ ಅದ್ಕ ಚೂರ ಜೋರಾಗಿ ಕರ್ದ್ನಿ'
'ಏನ್ ಬೇಕಾಗಿತ್ತ ಹೇಳ್ರಿ ' ಸಿಡಿಮಿಡಿಯಲ್ಲಿ ಕೇಳಿದಳು ಸೊಸೆ ಪಲ್ಲವಿ.
'ಟೈಂ ಎಷ್ಟಾತವ?'
'ಐದ್ಸಲ ಆತೀಗ ಕೇಳಾಕ ಹತ್ತ್ ಏನ್ಮಾಡ್ತಿರಿ ಟೈಂ ತಗೊಂಡು, ಯಾಕ? ಯಾರಾರ ಬರೋರ ಅದಾರನು ಮತ್ತ ನಿಮ್ಮ ಊರಿಂದ' ಕೊಂಕು ನುಡಿಯಲ್ಲಿ ಕೇಳಿದಳು.
'ಹಂಗೆನಿಲ್ಲವ, ನಿಮ್ಮಾಂವ ಇಲ್ಲೆ ಎರ್ಡ ಹೆಜ್ಜಿ ಹೋಗಿ ಬರ್ತಿನಂತಂದ ಹೋದವ್ರು ಇನ್ನ ಬಂದಿಲ್ಲ ಅದ್ಕ ಕೇಳಿದ್ನವ'
'ಹ್ಞೂಂ... ಇವ್ರೊಬ್ರು ಮಾಡಿದ್ನ ತಿಂದ ಕುಂದ್ರಲಾರ್ದನ ಇಂತ ದೊಡ್ಡ ಊರಾಗ ಅಡ್ಯಾಡಕ ಹೋಗ್ಯಾರನು ಅದು ಈ ಮೆಡಿಸನ್ ಸಿಗಲಾರ್ದ ರೋಗ ಬಂದಂತ ಟೈಂನ್ಯಾಗ'
ಈ ಸಲ ಕಲ್ಲವ್ವನ ಎದಿ ಝಲ್ ಎಂದಿತ್ತು ರೋಗದ ಮಾತನ್ನು ಕೇಳಿ
'ಯವ್ವ, ಮಗ್ಗರ ಒಂಚೂರು ಪೋನ ಮಾಡ್ವಾ ಎಲ್ಲೆದನ ಅನ್ನೊದರ ಹುಡ್ಕೊಂಡ ಬರ್ತಾನ ಬರೊ ದಾರ್ಯಾಗ' 
'ಅಯ್ಯ.. ಅವ್ರಿಗೆ ಆಫೀಸ್ನಾನ ಕೆಲಸ ಮಾಡಿ ಮಾಡಿ ಸುಸ್ತಾಗಿ ಬರ್ತಿರ್ತಾರ ಅಂತದ್ರಾಗ ಈ ತಲಿನೋವೊಂದನ್ನು ಅವ್ರಗೆ ಪೋನ್ ಮಾಡಿ ಹೇಳ್ಲೆನು?, ಬರ್ತಾರ ತಗೋರಿ ಇನ್ನ ಟೈಮ್ ರ ಎಷ್ಟ ಆಗೈತಿ, ಊಟದ ಹೊತ್ತಿಗೆ ಬಂದ್ರ ಸಾಕಾಗೈತಿ '
ಕಲ್ಲವ್ವನ ಮರುಮಾತಿಗೂ ಕಾಯದೆ ಮನೆಯೊಳಗೆ ನಡೆದು ದಪ್ಪೆಂದು ಬಾಗಿಲನ್ನು ಹಾಕಿಕೊಂಡಳು. 
ಸೊಸೆಯ ಈ ನಡೆಯಿಂದ ಹೊಟ್ಟೆಯಲ್ಲಿ ಖಾರ ಕಲಿಸಿದಷ್ಟು ಸಂಕಟಗೊಂಡು, ಉಕ್ಕಿ ಬರುವ ದುಃಖವನ್ನು ನುಂಗಿಕೊಂಡು ಎದೆಯ ಮೇಲಿನ ರವಿಕೆಯಿಂದ ಕಂಚಿಯನ್ನು ತೆಗೆದು ಎರಡೆಲೆ ಅಂಬಾಡಿ ಅಡಕೆ, ಕಾಚು ಸುಣ್ಣವನ್ನು ಸವರಿ ಬಾಯಲ್ಲಿ ಹಾಕಿಕೊಂಡು ಕುಳಿತುಕೊಂಡಳು ಗೇಟನ್ನೆ ದಿಟ್ಟಿಸುತ್ತಾ.

ಮತ್ತರ್ದ ಗಂಟೆ ಕಳೆಯಿತು, ಎಂದಿನಂತೆ ಬರುವ ಮಗನು ಇವತ್ತು ಸಮಯಕ್ಕೆ ಸರಿಯಾಗಿ ಬಂದಿರಲಿಲ್ಲ, ಬಾಯೊಳಗೆ ಹಾಕಿಕೊಂಡಿದ್ದಂತಹ ಎಲೆ ಅಡಿಕೆ ಖಾಲಿಯಾಗಿತ್ತು, ಚಡಪಡಿಕೆ ಮತ್ತಷ್ಟು ಶುರುವಾಗಿತ್ತು. ಈ ಸಲ ಮಾತ್ರ ತಡೆದುಕೊಳ್ಳಲಾಗಲಿಲ್ಲ ನಿಧಾನವಾಗಿ ನೆಲದ ಮೇಲೆ ಕೈಯೂರಿ ಎದ್ದು ಮನೆಯೊಳಗೆ ಹೋದಳು. ಪಲ್ಲವಿ ಅಡುಗೆ ಮನೆಯಲ್ಲಿ ಏನೊ ತಯಾರಿಯನ್ನು ಮಾಡುತ್ತಿದ್ದಳು ಬಹಳಷ್ಟ ಹಡಾಹುಡಿಯಿಂದ ಕೂಡಿದ್ದಳು. ಮೊಮ್ಮಗಳು ಹನ್ಸೀಕಾ ಟಿ.ವಿ.ಯೊಳಗಿನ ಕಾರ್ಟೋನ್ ನನ್ನು ನೋಡುತ್ತಾ ಕುಳಿತುಕೊಂಡಿದ್ದಳು. ಅಡುಗೆ ಮನೆಯ ಬಾಗಿಲ ಹತ್ತಿರ ಹೋಗಿ 'ಯವ್ವಾ,?' ಎಂದು ಕೂಗಿದಳು ಮೆತ್ತಗಿನ ಧನಿಯಲ್ಲಿ.
ಪಲ್ಲವಿಗೆ ಅತ್ತೆ ಕೂಗಿದ್ದು ಕೇಳಿಸದಾಗಿತ್ತು, ಕೆಲಸದ ಧಾವಂತದಲ್ಲಿ. ಈ ಸಲ ಮತ್ತೊಮ್ಮೆ ಚೂರು ಜೋರಾಗಿ ಕೂಗಿದಳು. ಅತ್ತೆ ಕರೆದದ್ದಕ್ಕೆ ಸಿಡಿಮಿಡಿಗೊಂಡ ಪಲ್ಲವಿ
'ಏನ್ರಿ ಅತ್ತೇರ? ಭಾಳ ಕಾಟ ಆತಲ್ಲ ನಿಮ್ದು, ಒಂದಿಷ್ಟ ನೆಮ್ದಿಯಾಗಿ ಕೆಲ್ಸ ಮಾಡಾಕನು ಬಿಡೊದಿಲ್ಲ ನೋಡ ನೀವು'
ಏನೊ ಹೇಳಲು ಮುಂದಾದ ಕಲ್ಲವ್ವನಿಗೆ ಮನೆಯ ಕಂಪೌಂಡಿನ ಗೇಟು ತೆರೆದ ಸದ್ದು ಕಿವಿಗೆ ಬಿದ್ದಿತು. ಒಂದೆ ಉಸಿರಿನಲ್ಲಿ ಮನೆಯಿಂದಾಚೆ ಅವಸರಿಸಿ ಹೊರ ಬಂದಿದ್ದಳು.
ಮಗ ಶ್ರೀಕಾಂತ ಗೇಟನ್ನು ತೆಗೆದು ಬೈಕನ್ನು ಕಂಪೌಂಡಿನ ಒಳಗಡೆ ಒತ್ತಿಕೊಂಡು ಬರುತ್ತಿದ್ದನು. ಮಗ ಬಂದಿದ್ದನ್ನು ಕಂಡು ಸ್ವಲ್ಪ ಧ್ಯರ್ಯ ಬಂದಂತಾಗಿ ಅವನ ಹತ್ತಿರ ಹೋದಳು ಕಲ್ಲವ್ವ.
ಕಲ್ಲವ್ವಳ ಹಿಂದೆಯೆ ಸೊಸೆ ಪಲ್ಲವಿನು ಬಂದಿದ್ದಳು. ಅತ್ತೆ ಮಾತನಾಡುವ ಮುನ್ನವೆ ಇವಳು ಶುರುವಿಟ್ಟುಕೊಂಡಳು. 'ಏನ್ರೀ ಎಷ್ಟ ಲೇಟಾಗಿ ಬಂದ್ರೆಲ್ಲ ಇವತ್ತ, ನಾಳೆ ಏನೈತಂದ ಗೊತ್ತಿಲ್ಲನ ನಿಮ್ಗ ಇಷ್ಟೊತ್ತಾಗಿ ಬಂದ್ರ ಕೆಲ್ಸ ಹ್ಯಾಂಗ ಮಾಡೋದ, ಕಿರಾಣಿ ಅಂಗಡಿಗೆ ಹೋಗಿ ಸಾಮಾನೆಲ್ಲ ತರೋದ ಯಾವಾಗ, ನಾ ರೆಡಿ ಮಾಡ್ಕೊಳ್ಳದ' ಅಂತವಳ ಬಾಯೊಳಗಿನ ಮಾತನ್ನು ಶ್ರೀಕಾಂತ ಮಾತು ತುಂಡರಿಸಿಬಿಟ್ಟಿತು.
'ಸಾಕು ಸುಮ್ನಿರ್ತಿಯನು ಒಂದಿಟು. ಕಣ್ಗೆ ಕಾಣ್ಸುವಲ್ದ ನಿಂಗ ಗಾಡಿ ಗಾಲಿ ಪಂಕ್ಚರ್ ಆಗಿದ್ದು, ಅರ್ಧ ದಾರಿಲಿಂದ ಹೆಣಾ‌ನ ಹೊತ್ಗಂಡ ಬಂದಂಗ ಒತ್ಗೊಂಡ ಬಂದೀನಿ, ದಾರ್ಯ್ಯಾಗಿದ್ದ ಎರ್ಡ ಪಂಕ್ಚರ್ ಅಂಗಡಿನು ಬಾಗ್ಲಾ ಹಾಕ್ಯವು ಈ ಸೋಂಕಿನ ಕಾಟಕ್ಕ' ಸಿಡುಕಿಲೆ ನುಡಿದನು. ಗಾಡಿಯನ್ನು ತಳ್ಳಿಕೊಂಡು ಬಂದಿದ್ದರಿಂದ ಮೈಯೆಲ್ಲಾ ಬೆವತು ಹಾಕಿಕೊಂಡ ಶರ್ಟ್ ಬೆವರಿನಲ್ಲಿಯೆ ಮಿಂದು ಹೋಗಿತ್ತು. 
'ನಿಮ್ಮಪ್ಪ ಕೊಡೊದ ಕೊಡ್ಸಿದ ಟೂಬಲೆಸ್ ಟೈಯರ್ ಇರೋ ಗಾಡಿನರ ಕೊಡ್ಸದ ಬಿಟ್ಕೊಟ್ಟು ಇಂಥ ಡಗ್ಗಾ ಗಾಡಿ ಕೊಡ್ಸ್ಯಾನ'
'ಹ್ಞೂಂ.... ಕೊಟ್ಟಿದ್ದನ್ನ ಚನ್ನಾಗಿ ಇಟ್ಗೊಳ್ಳಾಕ ಬರೋದಿಲ್ಲ ಮತ್ತ್ ಬ್ಯಾರೆ ಗಾಡಿ ಕೊಡ್ಸಬೇಕಿತ್ತನ'
ಇಬ್ಬರ ನಡುವೆ ಕಲ್ಲವ ಬಾಯಿ ಹಾಕಿ 'ಯವ್ವಾ ಮನಿ ಅಂಗಳದಾಗ ನಿಂತ್ಗೊಂಡ ಬಾಯಿ ಮಾಡಾಕ ಹೋಗಬ್ಯಾಡ್ರಿ, ಅಕ್ಕಪಕ್ಕದವ್ರ ನೋಡ್ತಾರ' ಅಂದಾಗ ಇಬ್ಬರ ಬಾಯಿಗೂ ಬೀಗ ಬಿದ್ದಿತ್ತು. 
ಸ್ನಾನ ಮಾಡಿ, ಪಲ್ಲವಿ ಮಾಡಿಕೊಟ್ಟ ಚಹಾವನ್ನು ಕುಡಿಯುತ್ತ ಟಿ.ವಿ‌ ಮುಂದೆ ಕುಳಿತುಕೊಂಡನು ಶ್ರೀಕಾಂತ.
ಮೆಲ್ಲಗೆ ಮಗನ ಹತ್ತಿರ ಬಂದು ಕುಳಿತುಕೊಂಡ ಕಲ್ಲವ್ವ 'ಶ್ರೀ...'
'ಹ್ಞೂಂ'
'ಟೈಮು ಏಟಾತ್ಪಾ?'
ಕೈಯಲ್ಲಿದ್ದ ವಾಚನ್ನು ನೋಡುತ್ತಾ, 'ಏಳು ಚಿಲ್ರ ಆಗೈತಿ'
'ಹೌದಾ!!, ಇನ್ನೇನು ಅವ್ರ ಉಂಡು ಮಲ್ಗೊ ಹೊತ್ತು, ಶ್ರೀ..
'ಮತ್ತೇನಬೆ ನಿಂದು'
'ನಿಮ್ಮಪ್ಪ ಯಾಡ ಹೆಜ್ಜಿ ಹಿಂಗ ಹೋಗ್ ಬರ್ತಿನಂತಂದ ಹೋದೊರು ಇನ್ನ ಬಂದಿಲ್ಲ, ಹಾಂಗ ತಟಗ ಒಂದಿಟು ಹೊರಗ ಹಣಕಿ ಹಾಕ್ಕೊಂಡ ಬರ್ತಿಯೇನು?'
'ಏನು?, ಇಂಥಾ ಹೊತ್ನ್ಯಾಗ ಹೊರ್ಗ ಅಡ್ಯಾಡಕ ಹೋಗ್ಯಾನ, ಬುದ್ದಿಗಿದ್ದಿ ನೆಟ್ಗ ಐತಿಲ್ಲೊ ಅತಂದು. ನಾವ್ ಪಾಸ್ ಇಲ್ದ ಅಡ್ಯಾಡಿದ್ರ ಮುಕ್ಳಿ ಮೇಲೆ ಬಾರಿಸಿ ಕಳಸ್ತಾರ. ಅದು ಒತ್ತೊಟ್ಟಿಗಿರ್ಲಿ ಆ ಹಾಳ ಜಡ್ಡನ್ನ ತಾನು ಅಂಟಿಸ್ಗೊಂಡ ಬಂದು ನಮ್ಗು ತಂದು ಹಚ್ಚಿದ್ರ ಏನ ಮಾಡೊದು. ತಿಂದ ಒಂದ ಮೂಲ್ಯಾಗ ಸುಮ್ಕ ಕುಂದ್ರಾಕ ಏನಾಗಿತ್ತಂತ ಅತ್ಗ, ಇನ್ನೊಂದ ಅರ್ಧ ತಾಸ ನೊಡುಣ ತಡಿ, ಬಂದ್ರ ಸರಿ ಇಲ್ದಿದ್ರ ಪೋಲಿಸ್  ಕಂಪ್ಲೇಟ್ ಕೊಡೊಣಂತ. ಇನ್ನ ಏನ ಊಟದ ಟೈಂ ಆಗಿಲ್ಲಲ್ಲ ಇನ್ನ' ಎಂದು ಬಿರುಸಾಗಿಯೆ ಮಾತನಾಡಿದನು ಶ್ರೀ.
ಅವನಾಡಿದ ಮಾತುಗಳನ್ನು ಕೇಳಿ, ಕಲ್ಲಿನ ಮೇಲೆ ಈರುಳ್ಳಿಯನ್ನು ಇಟ್ಟು ಅಂಗೈಯಿಂದ ಜಜ್ಜಿದಾಗ ಹೇಗೆ ಅಪ್ಪಚ್ಚಿಯಾಗುವುದೊ, ಹಾಗೆ ಅವಳೆದೆಯ ಮೇಲೆ ಮಗನ ಮಾತುಗಳು ಗುದ್ದಿದವು. ಹೊಟ್ಟೆಯೊಳಗಿನ ಸಂಕಟವನ್ನು ಹತ್ತಿಕ್ಕಿಕೊಂಡು ಮತ್ತೆ ಮನೆಯ ಅಂಗಳಕ್ಕೆ ಬಂದು ಕುಳಿತುಬಿಟ್ಟಳು ಕಳೆದ ದಿನಗಳನ್ನು ಮೆಲಕು ಹಾಕುತ್ತ.
' ಹನ್ನೆರಡು ಲಕ್ಷ! ಅಷ್ಟಕೊಂಡ ರೊಕ್ಕಾ ನಮ್ಕಡೆ ಎಲ್ಲ ಅದಾವೊ ಯಪ್ಪ, ಇರೋದೆರ್ಡ ಎಕ್ರೆ, ಅದ್ರಾಗಿಂದ ಬಂದ ರೊಕ್ಕದಾಗಿಂದ ನಿನ್ನ ಇಷ್ಟ ಒದ್ಸಿದ್ದ ದೊಡ್ದದಾದದ್ದು, ಅಂತಾದ್ರಾಗ ನೌಕ್ರಿ ಸೇರಾಕ ಅಷ್ಟ ರೋಕ್ಕಾ ಕೇಳಿದ್ರ ನಾನೆಲ್ಲಿಂದ ತರ್ಲೆಪ್ಪ' ಸಣ್ಣಪ್ಪನು ಭಯಮಿಶ್ರಿತ ಧನಿಯಲ್ಲಿ ಕೇಳಿದನು.
'ಅದೆಲ್ಲ ನಂಗ ಗೊತ್ತಿಲ್ಲ ನೋಡ್ಪಾ, ನಾನೀಗ ವ್ಯವಹಾರ್ನ ಕುದ್ರಿಸಿ ಬಂದೀನಿ. ರೊಕ್ಕ ಹೊಂದಿಸಿ ಕೊಡಬೇಕಷ್ಟೆ.‌ ಅದೇನ ಸಣ್ಣ ಪೋಸ್ಟ್ ಅಲ್ಲದು ಜಗ್ ಆಗಿ ಇನಕಂ ಬರೊವಂತದ ಐತಿ.
ಆ ಏಜೆಂಟ್ ನಡುಮನಿ ಸಂಗಯ್ಯನ ಹತ್ರ ಮಾತಾಡೀನಿ ಎರ್ಡ ಎಕ್ರೆಕ ಹತ್ತ  ಲಕ್ಷ ಕೊಡ್ಸತಾನಂತ, ಮತ್ತ ಈ ಮನಿನೊಂದ ಮಾರಿದ್ರ ಅದೊಂದ ನಾಕ ಲಕ್ಷ ಬರ್ತೈತಿ, ಹನ್ನೆರ್ಡ ಅಲ್ಲಿ ಕೊಟ್ಟ, ಇನ್ನೆರಡ ನಿಂ ಹಂತ್ಯಾಕ ಇಟ್ಗೊಂಡಿರಿ, ಇಲ್ಲಾ ಬ್ಯಾಂಕನ್ಯಾಗ ಎಫ್ ಡಿ ನರ ಮಾಡಿಡ್ರಿ ಬಡ್ಡಿ ರೊಕ್ಕ ಬರ್ತದ. ನಾನು ನೌಕ್ರೀ ಸೇರಿದ ಯಾಡ ವರ್ಷದಾಗ ಇದ್ರಪ್ಪನಂತಾದ ಹೊಲ್ಮನಿ ಮಾಡಿ ಕೊಡ್ತೇನ ಬೇಕಿದ್ರ.'
'ಆಯ್ತಪಾ ವಿಚಾರ ಮಾಡಿ ನೊಡೋಣ ತಗೋ '
'ವಿಚಾರ ಅಲ್ಲ, ಇದಾ ಕಡೆದು ' ಎಂದು ಕಡ್ಡಿ ತುಂಡ ಮಾಡಿ ಹೇಳಿದ ಹಾಗೆ ಹೇಳಿ ಹೊರಗೆ ಹೊರಟು ಹೋದನು ಶ್ರೀ.
ಕಲ್ಲವ್ವ ಗಂಡನ ಹತ್ತಿರ ಬಂದು ' ಏನ್ರೀ ಆಸ್ತಿ ಅಳಿಯೊ‌ ಮಾತ್ ಮಾತಾಡ್ತಾನಲ್ರೀ ಇಂವಾ' ಆತಂಕದಿಂದಲೆ ಕೇಳಿದಳು 
'ಒಬ್ನ ಮಗಾ ಅಂತಂದ ನೆತ್ತಿ ಮ್ಯಾಲಿಟ್ಟ ಬೆಳ್ಸಿದ ಪರಿಣಾಮ ಇದ ಕಲ್ಲಿ, ಒಂದೀನಾನರ ಹೊಲ್ಮನಿ ಕೆಲ್ಸಕ್ಕ ತಬ್ಬಿದ್ರ ಅರವಾಗ್ತಿತ್ತು ರೊಕ್ಕದ ಬೆಲಿ. ಶಾಲ್ಯಾಗ ಶ್ಯಾಣೆ ಅದಾನ ಶ್ಯಾಣೆ ಅದಾನ ಅನ್ಕೊಂಡು ಹೊಟ್ಟಿಬಟ್ಟಿ ಕಟ್ಟಿ ಇಲ್ಲಿ ತನ್ಕ ಒದ್ಸಕೊಂತ ಬಂದಿವೆಲ್ಲ ಅದು ನಮ್ ತಪ್ಪು. ಹೋಗ್ಲಿಬಿಡು ಮುಂದ್ಕೆಲ್ಲ ಅವ್ನ ಹೆಸ್ರಿಗೆ ಹೋಗುವಲ್ಲ ಎಲ್ಲಾ, ಅವಂಗ ಅದ್ರಾಗ ಆಸಕ್ತಿ ಇಲ್ಲ ಅಂದ ಮ್ಯಾಲ ನಾವೇನ ಮಾಡೊದೈತ ಹೇಳು?' ನೋವಿನ ಧನಿಯಲ್ಲಿ ಹೇಳಿದನು.
'ತಲೆತಲಾಂತರಗಳಿಂದ ಬಾಳಿ ಬದ್ಕಿದಂತ ಮನಿ ಇದು, ನಮ್ಮವ್ವ ಹೇಳ್ತಿದ್ಲು ಆಕಿ ಈಟ ಇರಾಕಿಂತ ಈ ಮನಿ ನೋಡ್ಯಾಳಂತ ಆವಾಗ ಹ್ಯಾಂಗ ಇದ್ವೊ ಈಗೂ ಅಷ್ಟ ಗಟ್ಟಿಮುಟ್ಟಿ ಅದಾವು ಮನಿ ತೊಲಿಗಳು ಅಂತಂದ್ಲು ನಮ್ಮವ್ವ.'
'ಕಲ್ಲಿ ಸಾವ್ರ ವರ್ಷ ಬಾಳಿದ್ರೇನು ಸಾಯೋದ ತಪ್ಪತೈತನು? ನೋಡಿದಿಲ್ಲ ನಂ ಗಡಾದ ಮ್ಯಾಲಿನ ಶಿವಾಜಿ ಮಹಾರಾಜ್ರ ಕಟ್ಸಿದ ಉಡೇದ ತೊಟ್ಲ, ಅಕ್ಕ-ತಂಗಿ ಹೊಂಡ ಹ್ಯಾಂಗ ಪಾಳ ಬಿದ್ದಾವು. ಅಂತಂಥ ಕೋಟಿ ಕಟ್ಟದವ್ರ ಅಳ್ದ ಹೋಗ್ಯಾರ ಇನ್ನ ನಮ್ದು ಯಾವ ಲೆಕ್ಕ'
'ಮತ್ತ್ ಹೊಟ್ಟಿಬಟ್ಟಿಗೆ ಏನ್ ಮಾಡೊದ ರಿ, ಇದ್ದ ಗಂಗಾಳ್ದನ ಅನ್ನ ಚೆಲ್ಲಿ ಮಂದಿ ಮನಿಗೆ ಭಿಕ್ಷೆಕ ಹೋಗೊನು?'
'ಹೋಗ್ಬೇಕು ಕಲ್ಲಿ, ಹೊಗ್ಬೇಕು. ಮಗನ ಸುಖಕ್ಕ ನಾವ್ ಎಲ್ಲಾ ತಯಾರ್ ಆಗಿರ್ಬೇಕು. ಏನು? ಇವತ್ತ್ ನಂ ಹೊಲ್ದಾಗ ದುಡ್ದದ್ದನ್ನು ನಾಳೆ ಇನ್ನೊಬ್ರ ಹೊಲ್ದಾಗ ದುಡಿಯಾಕ ಹೊಕ್ಕಿವಿ ಅಷ್ಟ. ಅಷ್ಟಕ್ಕೂ ನಾಳೆ ಶ್ರೀಯಪ್ಪಂದು ನೌಕ್ರಿ ಆತಂದ್ರ ಕುಂದ್ರಿಸಿ ಕೂಳ ಹಾಕೊದಿಲ್ಲನು'
'ಆದ್ರೂ ಯಾಕಾ ಇದು ನಂಗ ಅರಿ ಕಂಡ ಬರುವಲ್ದ ಆಗೈತಿ ನೋಡ್ರಿ'
'ಸರಿಯೇನು, ಬೆಸಯೇನು ಹುಡ್ಗ ಆಗ್ಲೆ ನಿರ್ಧಾರ ಮಾಡ್ಕೊಂಡ ಬಿಟ್ಟಾನ. ದೇವ್ರ ಮಾಡ್ದಂಗ ಆಕ್ಕತೆ ನಡಿ ಅತ್ಲಾಗ' ಎನ್ನುತ್ತಾ ಎದ್ದು ನಿಂತನು.
'ಮತ್ತೆಲ್ಲಿಗೆ ಹೊಂಟ್ರಿ?'
'ಏಜೆಂಟ ಸಂಗಯ್ಯನ ಮನಿಕಡೆಗೆ'
ಕಲ್ಲಿಯ ಮರು ಮಾತಿಗೂ ಕಾಯದೆ ಹೊರ ನಡೆದುಬಿಟ್ಟನು ಸಣ್ಣಪ್ಪ.

Sunday, April 26, 2020

ನಿರ್ಭಾವುಕತೆಗಳು

ಬೆಂಕಿಗೆ ಸಿಕ್ಕ
ಕಲ್ಲು ಬಂಡೆಯು
ಸಿಡಿದು
ಹೋಗುತ್ತದೆ
ಪಾಗಲ್!!
ಹೂವಿನಂತವಳೆಂದು
ನೀನೆ.... ಹೇಳುತ್ತಿದ್ದೆಯಲ್ಲ!
ಹೇಳು, ತಾಳಿಕೊಳ್ಳಲಿ ಹೇಗೀಗ
ವಿರಹದ ಬಿಸಿಯ!
ಅದುಮಿಟ್ಟುಕೊಳ್ಳುವುದಾದರು
ಎಲ್ಲಿ? ಅಲೆಗಲೆಗಳಂತ ಉಕ್ಕಿ ಬರುತಿರುವ
ಬಯಕೆಗಳ ಹಸಿಯ!
ಬೇಡ...ಬೇಡವೆಂದರು ತನುವಿದು
ನೆನೆದು ನಿನ್ನ ಬಿಸಿ ಸ್ಪರ್ಶದ ಸವಿಯ
ಏರಿಸಿಕೊಳ್ಳುತಿದೆ ಅಮಲಿನ ನಶೆಯ
ಕೇಳಿಸಿದೇನು ನಿನಗೆ ನನ್ನೊಳಗಿನ
ಒಂಟಿ ಹಕ್ಕಿಯ ನೋವಿನ ಮಿಡಿತ

Saturday, April 25, 2020

ಚುಟುಕು

ಕನಸನ್ನೆ...
ಅವಳ ಮಲ್ಲಿಗೆಯ 
ನಗುವಿಗೆ ಸೋತ
ಮನವಿದು.. ಬೇಡುತಿದೆ
ಮರಳಿ ಮರಳಿ ಅವಳ
ನಗುವನ್ನೆ..

ನಗುವಿಗೆ ಸೋತ
ಮನಸ್ಸಿದು.. ತಾರೆಗಳ
ರಾತ್ರಿಗಳಿಗೂ.. ಬೇಡುತಿದೆ
ಬರೀ.. ಅವಳ
ಕನಸನ್ನೆ..

ವಿರಹದ ಶಾಹಿ 

ವಿರಹದ ಬಿಸಿ ಶಾಯಿಗೆ
ಎದೆಯ ಬಿಳಿ ಹಾಳೆಯು
ಉರಿಯುತಿವುದು...!!!

ಬರೆಯಲಿ ಹೇಗೆ ?
ಪದಗಳ... 
ಎದೆಹಾಳೆಗೆ
ಸಹಿಸಿಕೊಳ್ಳಲಾರದಷ್ಟು
ನೋವಿರುವಾಗ...!!!

ಮೊದಲೆ

ನಿನ್ನ ಮನದ ಮೂಲೆಯಲಿ
ನಮ್ಮೊಲವಿನ ಕುರುಹುವಾಗಿ
ಒಂದೆ ಒಂದು ಹಣ್ಣೇಲೆಯಷ್ಟು
ನೆನಪಿದ್ದರೂ.... 
ಬಂದು ಬಿಡು ಗೆಳತಿ
ನಿನ್ನ ಪ್ರೀತಿಯ ಚಿಗುರು
ವಿರಹಿಗಳ ಹಾದಿಯ ಗೊಬ್ಬರ
ವಾಗುವ ಮೊದಲೆ..

ಹಂಬಲ ಚಪಲ
ಸುರಿವ ಮಳೆಯ
ಕೊನೆಯ ಹನಿಯಾಗಿ
ನಿನ್ನ ಚುಂಬಿಸೊ..
ಹಂಬಲ

ಮೊದಲ ದುಂಬಿಯಾಗಿ
ನಿನ್ನೆದೆಯ ಮಧುವ
ಸವಿಯಬೇಕೆನ್ನುವ
ಚಪಲ..

ಮುತ್ತಿನ ಹನಿಗಳು

ಗೆಳತಿ
ನಿನ್ನ ಮಾತಿಲ್ಲದ ಮೌನಕೆ
ಮುಗಿಲ ಮೋಡವದು
ಹೆಪ್ಪಾಗಿ ಕಪ್ಪಾಗಿ ಮಲಗಿತ್ತದು
ನಿನ್ನಷ್ಟೇ ಮುನಿಸಿನಿಂದಲೆ..
ಈಗ ನೋಡು ನಿನ್ನೀ.. ಬೆಳ್ಳಿ
ಬೆಳದಿಂಗಳ ನಗುವಿಗೆ...
ಮೋಡವದು ಕರಗಿ... ನಾಚಿ
ನೀರಾಗಿ ನಮ್ಮ ಪ್ರೀತಿಯ
ಅಂಗಳಕೆ ಮುತ್ತಿನ ಹನಿಗಳನೆ....
ಸುರಿಸುತಿದೆ..

ನನ್ನ ಬಿಡುತಿಲ್ಲ

ಹೊತ್ತುಗಳು.... ಸರಿದವು
ಮುತ್ತುಗಳು.. ನೆನಪಾದವು
ಬಿಡುವ ಉಸಿರುಸಿರು... ಬಿಸಿಯಾಯ್ತು..
ನಿನ್ನ ನೆನೆ ನೆನೆದು.. 
ಆದರೂ ನೀ..
ಬರಲಿಲ್ಲ...
ನಿನ್ನ ನೆನಪುಗಳು ಮಾತ್ರ 
ನನ್ನ ಬಿಡುತಿಲ್ಲ..

ಯೌವ್ವನದ ಹೊಳೆ

ಮತ್ತೆ.. ಮತ್ತೆ...
ನಿನ್ನ ಬಿಸಿಯಪ್ಪುಗೆಯ
ಅಪ್ಪುಗೆಗೆ ಕಾಯುತಿರುವ
ಈ ತೋಳುಗಳಿಗೆ ತಬ್ಬುಗೆಯ
ಹಸಿವನು ಹೆಚ್ಚಿಸದಿರು..
ನಿನ್ನ ತನುವಿನಪ್ಪುಗೆಗೆ 
ಕಾದು.. ಕಾದು... ಕಾದ
ದೇಹವಿದು ಉರಿದು ಹೋಗುವ
ಮೊದಲೆ.. ಬಂದು ಸುರಿಸಿಬಿಡು
ನಿನ್ನ ಅಧರದ ತಂಪಿನ ಮಳೆ
ನಿನ್ನ ಮುತ್ತಿನ ಮಳೆಯಲಿ
ಹರಿದು ಹೋಗಲಿ.... ಈ
ಯೌವ್ವನದ ಹೊಳೆ

ಕಥಾ೩

ಭಾಗ ೩

ಇದಾಗಿ ಎರಡ್ಮೂರು ತಿಂಗಳುಗಳೆ ಕಳೆದು ಹೋಗಿದ್ದವು, ಮತ್ತೆ ಈ ವಿಚಾರವಾಗಿ ನಾನು ಆ ಕ್ಲಿನರ್ ನ ಭೇಟಿಯಾಗಿ ಮಾತು ಆಡಿರಲಿಲ್ಲ. ಅವತ್ತು ಸಂಜೆ ಐದು.. ಐದುವರೆ ಆಗಿರಬಹುದು.. ನಾನು ಏನೊ ಸಾಮಾನುಗಳನ್ನು ಅಂಗಡಿಯಲ್ಲಿ ಹೊಂದಿಸುತ್ತಿದ್ದೆ ಅಂಗಡಿಯಲ್ಲಿ ಒಂದೆರಡು ಗಿರಾಕಿಗಳಿಗೆ ನನ್ನ ತಮ್ಮನು  ಮೊಬೈಲ್ ಕರೆನ್ಸಿಯನ್ನು ಹಾಕುತ್ತಿದ್ದಾಗ ಇಬ್ಬರು ಒಳಗೆ ಬಂದರು, ಗಂಡಸು ' ಮಾಲಕ್ರ ಈ ಏರಟೆಲ್ ನಂಬರಿಗೆ ಒಂದೈವತ್ತು ರೂಪಾಯಿ ರೊಕ್ಕ ಹಾಕ್ರೀ' ಎನ್ನುತ್ತಾ ನನ್ನ ತಮ್ಮನ ಜೊತೆ ಮಾತನಾಡುತ್ತಾ ನಿಂತನು, ಅವನ ಹಿಂದೆ ಬಂದದ್ದು ಹೆಣ್ಮಗಳು ನನ್ನ ಹಿಂದೆ ನಿಂತುಕೊಂಡಳು, ಅವಳ ಕೈ ಬಳೆಗಳ ಸದ್ದು, ದೇಹಕ್ಕೆ ಹಾಕಿಕೊಂಡ ಸೆಂಟಿನ ವಾಸನೆ, ಝಗಮಗಿಸುವಂತಹ ಸೀರೆ, ಮುಡಿತುಂಬ ಮಲ್ಲಿಗೆ ಕನಕಾಂಬರ ಸಾಲದೆಂಬಂತೆ ಎರಡು ತುಂಬು ಅರಳಿದ ಗುಲಾಬಿಗಳು, ಹಿಂದಿನಿಂದಲೆ ನೋಡಿ‌, ಸೊಸಿ ಮಾವನ ಜಾತ್ರಿ ಜೋರ ಮಾಡ್ಸಿರಬೇಕ ಅಂತ ಮನಸ್ಸಿನಲ್ಲಿಯೆ ನಗುತ್ತಾ ಮತ್ತೆ ಕೆಲಸದತ್ತ ಗಮನವನ್ನು ಹರಿಸಿದೆ, ಆಗ ಅವಳು ಏನೊ ಒಂದು ಸಾಮಾನಿಗಾಗಿ ಅವನನ್ನು ಪೀಡಿಸತೊಡಗಿದಳು, ' ನಂಗ ಬೇಕಂದ್ರ ಬೇಕ ನೋಡಿಗ ಏನ. ಆಗ್ಲಿ, ಆರ ಹೋಗಿ ಮೂರರ ಆಗ್ಲಿ, ಒಂಬತ್ತರ ಆಗ್ಲಿ ನಂಗ ಬೇಕಂದ್ರ ಬೇಕ,' ಎನ್ನುತ್ತಾ ಹಠ ಹಿಡಿದಳು. ನನಗಾಗ ಈ ಧ್ವನಿಯನ್ನು ಎಲ್ಲೊ‌ ಕೇಳಿದ ಹಾಗಿದೆಯಲ್ಲ, ಯಾಕೊ‌ ಬಹಳ ಸ್ವಲ್ಪ ಪರಿಚಿತ ಧ್ವನಿ ಇದ್ದ ಹಾಗಿದೆ ಒಮ್ಮೆ ಮುಖವನ್ನು ನೋಡಲೆ ಬೇಕೆಂದುಕೊಂಡು ಅವಳ ಎದುರಿಗೆ ಹೋಗಿ ನಿಂತಾಗ ಅಕ್ಷರಶಃ ಸಿಡಿಲು ಬಡಿದಂತಹ ಅನುಭವ ನನಗೆ, ಅದೆ.. ಅವಳೆ ಅಂದು ಹೊಟ್ಟೆಗೆ ಹಿಟ್ಟಿಲ್ಲದೆ, ಊರಿಗೆ ಹೋಗಲು ಹಣವಿಲ್ಲದೆ ತಾಳಿ ಮಾರಿ ಊರು ಸೇರಲು ಹವಣಿಸುತ್ತಿದ್ದ ಹೆಣ್ಣು ಇವಳೇನಾ...? ಅಬ್ಬಬ್ಬಾ..!!! ಅದೆಂತಹ ಸಂದರ್ಭ ನನಗೊದಗಿ ಬಂದದ್ದು, ಎಣ್ಣೆ ಕಾಣದ ಕೂದಲಿಂದು ಒಪ್ಪವಾಗಿ ಬಾಚಿ, ಮಾರುದ್ದ ಜಡೆಯ ಕಟ್ಟಿಕೊಂಡು ಮುಡಿತುಂಬ ಘಮಘಮಿಸುವ ಹೂವನ್ನು ಮುಡಿದುಕೊಂಡು, ತುಟಿಯ ತುಂಬ ಕೆಂಪು ರಂಗನು ತುಂಬಿಕೊಂಡು, ಕಣ್ಣಂಚಲೆ ಕೊಲ್ಲಲು ಸಾಕಾಗುವಷ್ಟು ಕಾಡಿಗೆಯನ್ನು ತೀಡಿಕೊಂಡು, ಕೈ ಎತ್ತಲು ಭಾರವೆನಿಸುವಷ್ಟು ಕೆಂಪು ಗಾಜಿನ ಚುಕ್ಕಿ ಬಳೆಗಳು ಎರಡು ಕೈಗಳಲ್ಲಿ ಹಾಕಿಕೊಂಡಿದ್ದರೆ, ಕಣ್ಣಲ್ಲಿ ಉತ್ಸಾಹದ ಚಿಲುಮೆ, ಒಟ್ಟಿನಲ್ಲಿ ನೋಡುತ್ತಿದ್ದರೆ ಬೆಂದ ಮರುಳುಗಾಡು ನೀರುಂಡು ಪಶ್ಚಿಮಘಟ್ಟದಂತಹ ಹಸಿರನ್ನು ಹೊದ್ದು ನಿಂತರೆ ಯಾವ ರೀತಿಯಲ್ಲಿ ಕಲ್ಪಿಸಿಕೊಳ್ಳಬಹುದೊ, ಆ ಕಲ್ಪನೆಗೆ ಹೊಂದಿಕೊಳ್ಳುವಂತಿದ್ದಳು. ಅರೆ..!!! ಒಂದಾಶ್ಚರ್ಯ, ಮಗು..!!! ಮಗವೊಂದು ಇರಲಿಲ್ಲ ಅವಳ ಕಂಕುಳಲ್ಲಿ, ತೆರದ ಬಾಯಿಂದ, ಬಿಟ್ಟ ಕಣ್ಣನ್ನು ಬಿಟ್ಟ ಹಾಗೆ ನೋಡುತ್ತಾ ನಿಂತುಬಿಟ್ಟೆ ಎರಡು ಕ್ಷಣ. ಆಗ ಅವಳು ಒಂದೆರಡು ಸಲ ನನ್ನ ಕಡೆ ನೋಡಿ ದೆವ್ವ ನೋಡಿದವರಂತೆ ಅರೆ ಕ್ಷಣದಲ್ಲಿ ಬೆವರಿನಿಂದ ನೀರು ನೀರಾಗಿಬಿಟ್ಟಳು, ನೀನು ಅವಳಲ್ಲವೆ..? ಎನ್ನುವ ನನ್ನ ಹುಬ್ಬು ಗಂಟಿಕ್ಕಿದ ಸೂಜಿ ನೋಟಕ್ಕೆ ಹೆದರಿದಳೇನೊ ಚಿಟ್ಟನೆ ಚೀರಿ ಕೈಯಲ್ಲಿ ಹಿಡಿದುಕೊಂಡಿದ್ದ ಸಾಮಾನನ್ನು ಕೈ ಬಿಟ್ಟು ಅಂಗಡಿಯಿಂದ ಹೊರಗೊಡಿಬಿಟ್ಟಳು. ಎಲ್ಲರು ಕ್ಷಣಕಾಲ ಹೆದರಿಬಿಟ್ಟಿದ್ದರು ಅವಳ ಆಟಕ್ಕೆ, ಅವಳ ಹಿಂದೆ ಬಂದ ಗಂಡಸು ಕರೆನ್ಸಿಯ ಹಣವನ್ನು ಕೊಟ್ಟು ಅವಳ ಹಿಂದೆಯೆ ಓಡಿ ಹೋದನು. ನನಗೆ ಅವತ್ತು ರಾತ್ರಿಪೂರಾ ನಿದ್ದೆನೆ ಬರಲಿಲ್ಲ, ಅವಳು ಅಂದು ನಡೆದುಕೊಂಡ ರೀತಿ, ಇವತ್ತಿನ ವೇಷಭೂಷಣ, ಕಂಕುಳಲ್ಲಿಯ ಕೂಸು ಏನಾಯಿತು, ಕರುಣೆ ತೋರಿ ಬದಾಮಿವರೆಗೂ... ಬಸ್ಸ್ ಚಾರ್ಜ್ ಇಲ್ಲದೆ ಕರೆದೊಯ್ದ ಆ ಕ್ಲಿನರ್ ನ ನಿಯತ್ತು, ಕನಿಕರವೇನಾಯಿತು, ಅಂದವಳ ಅಸಹಾಯಕತೆಯೊ..? ನಾಟಕವೊ..? ಇಂದಿವಳ ನಿಜ ರೂಪವೊ...? ಹಾದರತೆಯೊ...?  ನನಗೊಂದು ಇವತ್ತಿಗೂ ಅರ್ಥವಾಗುತ್ತಿಲ್ಲ.   ಹೇಗೆ ಹೇಳಲಿ ಇದು ಕಥೆಯಲ್ಲ... ಜೀವನ 

ಕಥಾ೨

ಭಾಗ ೨

ಅಷ್ಟರಲ್ಲಿ 'ಸಾವಕಾರ ನಮಸ್ಕಾರ್ರಿ' ಎಂದ ಗಾಡಿ ಕ್ಲಿನರ್ (ನಿರ್ವಾಹಕ) 
ಕಣ್ಬಿಟ್ಟು ನೋಡಿದೆ, ಪರಿಚಯದವನೆ,
'ನಮಸ್ಕಾರ ಹೇಳಯ್ಯ' ಎಂದೆ,
'ಊರಿಗೆ ಹೊಂಟಿರೇನ್ರಿ' ಎಂದ,
'ಹ್ಞೂಂ... ಇಲ್ಲೆ ಬೇವಿನಕಟ್ಟಿಗೆ, ಒಂದ್ ಬಾಸಿಂಗ ಬಿಡೊ ಕಾರಣ ಇತ್ತ ಅದ್ಕ' ಎಂದು ಅಂಗಿಯ ಜೇಬಿನಿಂದ ಹಣವನ್ನು ತೆಗೆದುಕೊಟ್ಟೆ,
'ಅಲ್ಲಾ...' ಎಂದು ತಲೆಯನ್ನು ಕೆರೆದುಕೊಳ್ಳುತ್ತಲೆ
ಹಣವನ್ನು ಪಡೆಯಲು ಹಿಂಜರಿಯತೊಡಗಿದನು, ಯಾಕೆಂದರೆ ನಮ್ಮಂಗಡಿಯ ಮುಂದೆಯೆ ಅವರು ವಾಹನವನ್ನು ನಿಲ್ಲಿಸುತ್ತಿದ್ದರಿಂದ ನನ್ನಿಂದ ಹೇಗೆ ಹಣವನ್ನು ಪಡೆಯುವುದು  ಎಂದು ಅವನಿಗೊಂದಿಷ್ಟು ಪೇಚಿಗೆ ಸಿಲುಕಿದ ಹಾಗಿತ್ತು, ಅವನ ಮುಖದ ಭಾವನೆಯನ್ನು ಕಂಡು
'ಏ ಇರ್ಲಿ ತಗೊಳೊ ಮಾರಾಯ, ಮುಂಜಾನಿ ನಾಷ್ಟಕರ ಬೇಕಲ್ಲ '
ಎನ್ನುತ್ತಾ ಕೊಟ್ಟೆ, ಹಣವನ್ನು ತೆಗೆದುಕೊಂಡು ಮರಳಿ ಚಿಲ್ಲರೆಯನ್ನು ಕೊಟ್ಟು ಪಕ್ಕಕ್ಕೆ ಸರಿದು ಆ ಹೆಣ್ಣು ಮಗಳತ್ತ ಕೈ ಚಾಚಿ 'ಬಸ್ ಚಾರ್ಜ್ ಕೊಡ್ರಿ' ಎಂದ.
ಅವಳ ಕಣ್ಣಲ್ಲಿ ದುಃಖದ ಕಡಲೆ ಕಟ್ಟಿಕೊಂಡಿತ್ತೇನೊ...ಸರಸರನೆ ಕಣ್ಣಿಂದ ಕಣ್ಣೀರು ಸುರಿಯತೊಡಗಿತು, ಸೀರೆಯ ಸೆರಂಗಂಚಿಂದ ಕಣ್ಣೀರನ್ನು ಒರೆಸಿಕೊಳ್ಳುತ್ತಾ, 'ನನ್ಹತ್ರ ರೊಕ್ಕಾ ಇಲ್ಲಣ್ಣಾ ' ಎಂದಳು.
ಮುಖಸಿಂಡರಿಸಿಕೊಂಡ ಅವನು 'ಮೊದ್ಲ ಹೇಳಿ ಹತ್ತಾಕ ಬರ್ತಿತ್ತಿಲ್ಲ ನಿಂಗ, ಮುಂಜಮುಂಜಾನೆದ್ದ ರೊಕ್ಕಿಲ್ಲಂತದ್ರ, ಮಾಲಕನ ಕೈಯ್ಯಾಗೇನ ಚೊಂಬ ಕೊಡ್ಲೇನ ನಾನು, ಗೊತ್ತಾಗತ್ತಿಲ್ಲ ಬೆ ಹೊಟ್ಟಿ ತೆರ್ದ ಮಕ್ಕಳ ಹಡ್ದಿದಿ ಅಷ್ಟು ತಿಳ್ವಳಿಕಿ ಬ್ಯಾಡನ ನಿಂಗ, ಏ ಡ್ರೈವರ್ ಸಾಬ್ ಗಾಡಿ ಸೈಡ್ಗೆ ಹಾಕಪ.. ಇಲ್ಲೊಂದು ಮುಂಜಾನೆದ್ದ ಲಾಭದ ಗಿರಾಕಿನ ಹತ್ತೈತಿ ಗಾಡ್ಯಾಗ ' ಎನ್ನುತ್ತಾ ಗಾಡಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲುಸಲು‌ ಡ್ರೈವರ್ ನಿಗೆ ಅವಸರಿಸತೊಡಗಿದನು. ಅವಳು ಸರಕ್ಕನೆ ತನ್ನ ರವಿಕೆಯಲ್ಲಿ ಬಚ್ಚಿಟ್ಟುಕೊಂಡಿದ್ದ ತಾಳಿಯನ್ನು ತೆಗೆದು ಅವನ ಮುಂದೆ ಹಿಡಿದು ತೋರಿಸುತ್ತಾ, ' ಅಣ್ಣಾ ಹಂಗ ಮಾಡಬ್ಯಾಡಣ್ಣ, ಇಲ್ಲೆ ಅರ್ಧ ದಾರ್ಯಾಗ ಬಿಟ್ಟು ಹೋಗ್ಬೇಡ, ನೋಡಿಲ್ಲಿ ಬೇಕಿದ್ರ ಬದಾಮಿ ಬಸ್ಟ್ಯಾಂಡನ್ಯಾಗ ಇಳಿದ ತಕ್ಷಣ ಈ ತಾಳಿ ಮಾರಿ ನಿನ್ನ ರೊಕ್ಕ ಕೊಡ್ತೀನ' ಎಂದಳು. ಅವಳ ಮಾತನ್ನು ‌ಕೇಳಿ ಗಾಡಿಯಲ್ಲಿದ್ದ ಎಲ್ಲರು ಒಂದು ಕ್ಷಣ ಸ್ತಬ್ಧಭೂತರಾದರು. ಡ್ರೈವರ್ ಅವಳ ಮಾತನ್ನು ಕೇಳಿ ಗಾಡಿಯನ್ನು ನಿಲ್ಲಿಸದೆ ಓಡಿಸತೊಡಗಿದನು,
'ಎಲ್ಲಿಂದ ಬಂದಿಯವ್ವ' ಎಂದು ಕ್ಲಿನರ್ ಕುತೂಹಲದಿಂದ ಕೇಳಿದ,
' ನಾವು ಇಲ್ಲೆ ಬದಾಮಿ ದಾಟಿ ಒಂದ ಹಳ್ಳಿರಿ, ಈಗೆರಡ ತಿಂಗಳ್ದ ಹಿಂದ ನಾನು ನನ್ನ ಗಂಡ ಮಂಗ್ಳೂರಿಗೆ ದುಡ್ಕೊಂಡ ತಿನ್ನಾಕಂತ ಹೋಗಿದ್ವಿರಿ, ಒಂದ ತಿಂಗಳ ಛಲೊತ್ನ್ಯಾಗ ದುಡ್ದವ್ರ್ಯಾ, ಬಂದ ರೊಕ್ಕಾನೆಲ್ಲ ನನ್ನ ಗಂಡ ಕುಡ್ದ ಜೂಜಿಗೆ ಆಡಾಕ ಹತ್ತಿದ್ನರ್ರಿ, ಮೊನ್ನೆ ರಾತ್ರಿ ಯಾರೊ ಇಬ್ರನ್ನ ಕರ್ಕೊಂಡ ಬಂದ ಈ ಹಸುಗೂಸನ್ನ ಮಾರಾಕ ಹೊಂಟಿದ್ನರ್ರಿ, ಅಲ್ಲೆಲ್ಲಾ ಗುದ್ದಾಡಿ ಬಾಯ್ ಮಾಡಿದ್ದಕ್ಕ ನಮ್ಹಂಗ ಕೆಲ್ಸಕ್ಕ ಬಂದ ಮಂದಿ ಎಲ್ಲಾ ಸೇರಿ ನನ್ನ ಗಂಡನ್ನ ಅವನ ಜೊತಿಗ ಬಂದ್ರವ್ನ ಬಾಸುಂಡೆ ಬರೊ ಹಂಗ ಹೊಡ್ದ ಹೋದರ್ರಿ.. ಇದ ಸಿಟ್ಟಿಲೆ ನನ್ನ ಗಂಡ ಒಡಗಟಗಿ ತಗೊಂಡು ಮೈ ತುಂಬಾ ರಕ್ತ ಬರಂಗ ಹೊಡ್ದ, ಕುಡ್ದ ಬಂದ ಮತ್ತ ಕೈ ತಗೋತಿನಂತ ಹ್ವಾದನ್ರೀ...ಇನ್ನ ಇಂವ ಇಲ್ಲಿದ್ರ ನನ್ನ ಜೀವಾ ಉಳ್ಸಂಗಿಲ್ಲ ಅಂತ ಅನ್ಕೊಂಡ, ಉಟ್ಟ ಬಟ್ಟಿಲೆ ಹಟ್ಟಿ ಬಿಟ್ಟ ಹೊಂಟ ಬಂದೇನ್ರಿ, ಮಂಗ್ಳೂರಿಂದ ನಮ್ಮೂರಿಗ ಬರಾಕ ಟಿಕೆಟ್ಗೆ ರೊಕ್ಕ ಇರಲಾರ್ದಕ್ಕನ ಕಾಲನ ಬೆಳ್ಳಿ ಕಾಲುಂಗ್ರ ಮಾರಿ  ಗಡಾತನ್ಕ ಬಂದಿನ್ರೀ..ಇನ್ನೂ ಒಂದು ಹನಿ ನೀರ ಸೈತ ಬಾಯ್ಯಾಗ ಹಾಕ್ಕೊಂಡಿಲ್ರೀ, ಅಣ್ಣೊರ ನಿಮ್ಗ ಪುಣ್ಯ ಬರತೈತ್ರಿ ಬದಾಮಿ ತಂಕ ಕರ್ಕೊಂಡ ಹೋಗ್ರಿ,  ಈ ತಾಳಿನ ಮಾರಿಸಿಕೊಡ್ರಿ, ನಿಮ್ಮ ರೊಕ್ಕ ಕೊಟ್ಟ ನಾ ಅತ್ಲಾಗ ನಮ್ಮ ತವರ ಮನಿ ಗಾಡಿ ಹಿಡಿತಿನ್ರೀ...' ಎಂದು ತನ್ನ ರಾಮಾಯಣವನ್ನೆಲ್ಲ ಒಂದೆ ಉಸಿರಿನಲ್ಲಿ ಹೇಳಿಬಿಟ್ಟಿದ್ದಳು. ಬಾಯೆಲ್ಲಾ ಒಣಗಿ ಬಿಟ್ಟಿತ್ತು, ಇನ್ನು ಒಂದು ಮಾತನ್ನು ಆಡಲು ಆಗದು ಎನ್ನುವ ಹಾಗೆ ಸೀಟಿಗೊರಗಿ ಕುಳಿತುಬಿಟ್ಟಳು. ಆಗ ನಾನು ಅವಳ ಕರುಣಾಜನಕ ಕಥೆಯಿಂದ ಹೊರಬಂದು, ನನ್ನ ಬ್ಯಾಗನಲ್ಲಿದ್ದ  ನೀರಿನ ಬಾಟಲಿಯನ್ನು ಅವಳಿಗೆ ಕುಡಿಯಲಿಕ್ಕೆಂದು ಕೊಟ್ಟೆ, ಒಂದೆ ಗುಟುಕಿಗೆ ಅರ್ಧದಷ್ಟು ನೀರನ್ನು ಕುಡಿದು ದಣಿವಾರಿಸಿಕೊಂಡಳು. ಅವಳ ಮಾತುಗಳನ್ನು ಕೇಳಿದ ಎಲ್ಲರ ಮೊಗದಲ್ಲು ಅನುಕಂಪದ, ಪಾಪದ ಭಾವನೆ ಎದ್ದು ಕಾಣುತ್ತಿತ್ತು, ಎಲ್ಲೊ ನನ್ನ ಮನದ ಮೂಲೆಯ ಬಣವಿಗೆ ಸಣ್ಣದೊಂದು ನೋವಿನ ಕಿಡಿ ಹೊತ್ತಿದಂತಾಗಿ ನೋವನ್ನು ತಾಳಿಕೊಳ್ಳಲಾದೆ, ಎರಡು ಹನಿ ಕಣ್ಣೀರನ್ನು ಹಾಕಬೇಕೆಂದುಕೊಂಡೆ, ಗಂಡಸಲ್ವ... ಎಂದುಕೊಂಡು ಕಣ್ಮುಚ್ಚಿ ಅವುಡುಗಚ್ಚಿಕೊಂಡೆ.
' ಛೇ...ಛೆ...ಛೆ..ಎಂತ ಮಾತ ಬೆ ತಂಗ್ಯಮ್ಮ, ನನ್ನ ಒಡಹುಟ್ಟಿದ
ತಂಗಿಯಾದ್ರು ಒಂದ, ನೀನಾದ್ರು ಒಂದ, ನಿನ್ನ ತಾಳಿ ಮಾರಿಸಿ ನಾ ಯಾ ನರಕಕ್ಕ ಹೋಗ್ಲೆವ್ವ, ಅಳಬ್ಯಾಡ ನೀನು‌‌, ನೋಡ ರೊಕ್ಕ ಕೊಡದ ಬ್ಯಾಡ, ಮುಂದ ಬದಾಮ್ಯಾಗ ನಿಮ್ಮೂರ ಬಸ್ಸ ಹತ್ತಿಸಿ ಕಳ್ಸೊ ಜವಬ್ದಾರಿ ನಂದ ಐತವ್ವ, ಆ ತಾಳಿನ ಮೊದ್ಲಕ‌ ಜ್ವಾಕ್ಯಾಗಿ ಹಂತ್ಯಾಕ ಇಟ್ಕೊ' ಅಂದ ಆ ಕ್ಲಿನರ್ ನ ಕಣ್ಣಲ್ಲಿ ಎರಡು ಹನಿ ಕಣ್ಣೀರು ಉದುರಿದ್ದನ್ನು ಯಾರು ನೋಡಲೆ ಇಲ್ಲ ಅವನ ಮುಂಗೈಯೊಂದು ಹೊರತುಪಡಿಸಿ, ಇನ್ನೇನು ಅರ್ಧ ಕಿ.ಮಿ. ನಲ್ಲಿ ನಮ್ಮ ನಿಲ್ದಾಣ ಬರುತ್ತದೆಂದು ಗೊತ್ತಾದ ಮೇಲೆ ಕೈ ಚೀಲದಲ್ಲಿದ್ದ ಒಂದು ಅರ್ಧ ಲಿ. ಹಾಲಿನ ಪಾಕೀಟನ್ನು ತೆಗೆದು ನನ್ನವಳ ಕೈಯಿಂದ ಆ ಮಗುವಿಗೆ ಹಾಲನ್ನು ಕುಡಿಸಲು ಕೊಡಿಸಿಬಿಟ್ಟೆ, ನಾವು ಇಳಿಯಬೇಕಾದ ಸ್ಥಳವು ಬಂದಾಗ, ಇಳಿಯುವ ಮುಂಚೆ ತಾಯಿ ಮಗಳನ್ನೊಮ್ಮೆ ದಿಟ್ಟಿಸಿನೋಡಿ, ನಿಟ್ಟುಸಿರೊಂದನು ಬಿಟ್ಟು ಕೆಳಗಿಳಿದೆವು. ಆ ಕ್ಲಿನರ್ ನ ಬೆನ್ನನ್ನು ತಟ್ಟಿ ಹಳ್ಳಿಯೊಳಕ್ಕೆ ಹೆಜ್ಜೆ ಹಾಕಿದೆವು.

ಕಥಾ೧

ಭಾಗ ೧

ಅಂದು ಬೆಳಿಗ್ಗೆ ಬೇಗನೆ ಎದ್ದು ನಾನು, ನನ್ನಾಕೆ ಸ್ನಾನ ಮತ್ತು ಉಪಹಾರವನ್ನು ಮುಗಿಸಿಕೊಂಡು, ವಾರದ ಹಿಂದಷ್ಟೆ ಮದುವೆಯಾಗಿದ್ದತಂಹ ನನ್ನ ಗೆಳೆಯನ ಬಾಸಿಂಗ ಬಿಡುವಂತಹ ಕಾರ್ಯಕ್ರಮಕ್ಕೆಂದು ಅವಸರವಸರವಾಗಿ ಹೊರಟು ನಿಂತೆವು. ಬೇಗನೆ ಹೊರಡಲು ಒಂದು ಕಾರಣವೇನಾಯಿತೆಂದರೆ, ಅವರ ಹಳ್ಳಿಯಲ್ಲಿ  ಹಾಲು ಸಿಗುತ್ತಿರಲಿಲ್ಲವಂತೆ. ಆ ವಿಷಯವನ್ನು ಕೇಳಿ ನಾನು ಆಘಾತಕ್ಕೊಳಗಾದದ್ದುಂಟು, ಹಳ್ಳಿಯಲ್ಲಿಯೆ ಹಾಲು ಸಿಗುವುದಿಲ್ಲ ಅಂದರೆ ಏನು ಅರ್ಥ ಅಂತ. ಅವರ ಹಳ್ಳಿಯಲ್ಲಿ ಎಲ್ಲರು ತಮ್ಮ ಮನೆಗೆ ಎಷ್ಟು ಬೇಕೊ ಅಷ್ಟು ಹಾಲನ್ನು ಉಳಿಸಿಕೊಂಡು ಮಿಕ್ಕ ಹಾಲನ್ನೆಲ್ಲ ಡೈರಿಗೆ ಹಾಕಿಬಿಡುತ್ತಿದ್ದರಂತೆ, ಕಾರಣವೇನೆಂದರೆ, ಮೊದಲು, ಎಲ್ಲರ ಮನೆಯಲ್ಲಿ ದನಕರುಗಳಿರುತ್ತವೆ, ಎರಡು, ಮನೆ ಮನೆಗೆ ಹಾಕಿ ಬರುವ ಹಾಲಿನ ಹಣ ಇವರ ಖರ್ಚಗೆ ಸಾಕಾಗುವುದಿಲ್ಲವಂತೆ, ಮೂರನೇದ್ದು ತಿಂಗಳಿಗೊ, ಎರಡು ತಿಂಗಳಿಗೊ ಒಟ್ಟೊಟ್ಟಿಗೆ ಬರುವ ಡೈರಿಯ ಹಣದಿಂದಾಗಿ ಮಾಡಿದ ಸಾಲಾನೊ, ಮಗಳ ಮದುವೆ ಖರ್ಚಿಗೆಂದೊ, ಬಂಗಾರ ಮಾಡಿಸಲಿಕ್ಕೊ ಹೀಗೆ ಇನ್ನಿತರ ಖರ್ಚು ವೆಚ್ಷಗಳಿಗೆ ಬಳಸಿಕೊಳ್ಳಬಹುದೆಂಬುದು. ಇನ್ನೂ ಒಂದು ಮುಖ್ಯ ವಿಚಾರ ಏನೆಂದರೆ, ಕುಡುಕ ಗಂಡಸರು ಹಾಲು ಹಾಕಿದ ಮನೆ ಮನೆಗೆ ಹೋಗಿ ಮುಂಗಡವಾಗಿ ಹಣವನ್ನು ಪಡೆದುಕೊಂಡು ಕುಡಿದು ಬರುವುದನ್ನು ತಪ್ಪಿಸುವುದಕ್ಕಾಗಿ, ಹಾಲಿನ ಡೈರಿಗೆ ಹಾಕಿದ ಹಣವು ನೇರವಾಗಿ ಇವರ ಬ್ಯಾಂಕ ಖಾತೆಗಳಿಗೆ ಜಮಾವಣೆ ಆಗುವುದಲ್ಲದೆ, ಹಾಗೂ ಹೀಗೂ ಯಾರಿಂದಲೊ ಹಾಲನ್ನು ಹಾಕಿಸಿಕೊಂಡರೆ ಅರ್ಧ ಹಾಲು ಇನ್ನರ್ಧ ನಲ್ಲಿ ನೀರೆ ಬೇರೆತಿರುತ್ತದೆ. ಎಂಬಿತ್ಯಾದಿ ವಿಷಯಗಳನ್ನು ತಿಳಿಸಿ ನನ್ನ ಜ್ಞಾನ ಭಂಡಾರವನ್ನು ಹೆಚ್ಚಿಸಿದ್ದನು.ಅವನು ಅಷ್ಟು ಹೇಳಿದ ಮೇಲೆ ನಮ್ಮೂರು ಗಜೇಂದ್ರಗಡದಿಂದಲೆ ನಾವು ಅರ್ಧ ಲೀಟರ್ ನ ನಾಲ್ಕು ಪಾಕೀಟು ಹಾಲು, ಎರಡು ಲೀ. ಮೊಸರನ್ನು ತೆಗೆದುಕೊಂಡು ಹೊರಟು ನಿಂತೆವು, ಬದಾಮಿ ಕಡೆಗೆ ಬಸ್ಸಿನ ಸೌಲಭ್ಯ ಈಗೀನಷ್ಟಿರಲಿಲ್ಲ. ಖಾಸಗಿ ವಾಹನಗಳಲ್ಲೆ ಓಡಾಡಬೇಕಾಗಿರುತ್ತಿತ್ತು, ಅದು ನಮಗೇನು ಕಷ್ಟಕರವಾಗಿದ್ದಿಲ್ಲ ನಮ್ಮ ಅಂಗಡಿ ಮತ್ತು ಮನೆಯು ಬಸ್ ನಿಲ್ದಾಣದ ಎದುರಿಗೆ ಇದ್ದುದರಿಂದ, ಆ ಖಾಸಗಿ ವಾಹನಗಳು ನಮ್ಮ ಅಂಗಡಿಯ ಎದುರಿಗೆ ನಿಲ್ಲುತ್ತಿದ್ದರಿಂದ ವಾಹನಗಳನ್ನು ಹುಡುಕಿಕೊಂಡು ಹೋಗುವದು ಕಷ್ಟವೆನಿದ್ದಿಲ್ಲ, ಹೋಗಲು ಅನುವಾಗಿದ್ದಂತಹ ಒಂದು ವಾಹನವನ್ನು ಹತ್ತಿ ಕುಳಿತೆವು ಇಬ್ಬರು. ನಮ್ಮಿಬ್ಬರದು ಒಂದಾರೇಳು ತಿಂಗಳುಗಳ ಹಿಂದಷ್ಟೆ ಮದುವೆಯಾಗಿತ್ತು. ಒಬ್ಬರಿಗೊಬ್ಬರು ಒತ್ತೊತ್ತಿಕೊಂಡೆ ಕುಳಿತುಕೊಂಡೆವು, ಟೆಂಪೊ ಹತ್ತು ನಿಮಿಷದ ನಂತರ ಹೊರಟು ನಮ್ಮೂರಿನ ಕಾಲಕಾಲೇಶ್ವರ ಸರ್ಕಲ್ ನಲ್ಲಿ ಮತ್ತೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿತು, ನಾನು ಅಲ್ಲಿಯೆ ಇದ್ದ ನಮ್ಮ ಹೂ ಮಾರುವ ಅಲ್ಲಾಭಕ್ಷಿಯ ಅಂಗಡಿಗೆ ಹೋಗಿ ಕಾರ್ಯಕ್ರಮದ ಪೂಜೆಗೆಂದು ಎರಡು ಮಾಲೆ, ನನ್ನವಳ ಮುಡಿಗೆಂದು ಒಂದು ಮೊಳ ಕನಕಾಂಬರ, ಇನ್ನೊಂದು ಮೊಳ ಮಲ್ಲಿಗೆಯನ್ನು ಕಟ್ಟಿಸಿಕೊಂಡು ಬಂದು ನನ್ನವಳ ಮುಡಿಗೆ ಮುಡಿಸಿ ಕುಳಿತುಕೊಂಡೆ, ಅಕ್ಕಪಕ್ಕದವರು ಮುಸುಮುಸು ನಕ್ಕರು ಲೆಕ್ಕಿಸದೆ, ಅಷ್ಟರಲ್ಲಾಗಲೆ ನಮ್ಮ ಎದುರು ಸೀಟಿನಲ್ಲಿ ಒಬ್ಬ ಮಹಿಳೆ ಹೆಣ್ಣು ಕೂಸನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕುಳಿತುಕೊಂಡಿದ್ದಳು, ಎಣ್ಣೆಯಿಲ್ಲದೆ ಕೆದರಿ ನಿಂತ ಕೂದಲು, 
ಮುಖವನ್ನು ಸರಿಯಾಗಿ ತೊಳೆದುಕೊಂಡಿಲ್ಲ ಎಂಬುದಕ್ಕೆ ಮಸುಕು ಮಸುಕಾಗಿ ಕಾಣುತ್ತಿದ್ದ ಹಣೆಯ ಕುಂಕುಮ, ಜೋರಾಗಿ ಹಿಡಿದೆಳೆದರೆ ಹರಿದೆ ಹೋಗುವುದೇನೊ ಎಂಬಂತಹ ಉಟ್ಟ ಸೀರೆ, ಕಾಲಿಗೆ ಮೆತ್ತಿಗೊಂಡಿದ್ದ ಮಣ್ಣಿನ ಕೆಸರನ್ನು ನೋಡಿದರೆ ಚಪ್ಪಲಿ...? ಅಂತ ನೋಡುವ ಮಾತೆ ಇಲ್ಲ, ಆದರೆ ಕಾಲುಂಗರದ ಬೆರಳುಗಳಲ್ಲಿ ನನ್ನದೆ ಇದು ಜಾಗ ಎನ್ನುವ ಕುರುಹುಗಳಿದ್ದವೆ ಹೊರತು, ಅವುಗಳಿರಲಿಲ್ಲ,
ಬೆಳಿಗ್ಗೆಯಿಂದ ಏನನ್ನು ತಿಂದಿಲ್ಲ ಎನ್ನುವುದಕ್ಕಿಂತ ಏನನ್ನು ಕುಡಿದೆ ಇಲ್ಲ ಎಂಬುದಕ್ಕೆ ಒಣಗಿ ಅದರುತ್ತಿದ್ದ ತುಟಿಗಳು, ಮಗುವಿನ ಹೊಟ್ಟೆಗೂ ಏನು ಇಲ್ಲ ಎಂಬುದಕ್ಕೆ ಅಂಗಾತ ಮಲಗಿದ ಮಗುವಿನ ಹೊಟ್ಟೆಯು ತೆಗ್ಗು ಬಿದ್ದಂತಾಗಿತ್ತು, ಗಣಿಧಣಿಗಳು ನೈಸರ್ಗಿಕ ಸಂಪನ್ಮೂಲಗಳ ಮಹತ್ವವನರಿಯದೆ ಹಣದ ದುರಾಸೆಗೆ ನೆಲವನ್ನು ಅಗೆದು ಬಗೆದು ಕಂದರಗಳ ಸೃಷ್ಟಿಸಿದ ಹಾಗಿತ್ತು. ಒಂದು ಕ್ಷಣ ಅವರಿಬ್ಬರ ಸ್ಥಿತಿಯನ್ನು ನೋಡಿ ಮೈ ಝುಮ್ಮೆಂದು ಕರಳು ಹಿಂಡಿದಂತಾಯಿತು. ಕಣ್ಣು ಮುಚ್ಚಿ ಎರಡು ಕ್ಷಣ ಹಾಗೆ ಕುಳಿತುಕೊಂಡುಬಿಟ್ಟೆ. ಅಷ್ಟರಲ್ಲಿ

ಲೇ

ಅವತ್ತು ಹಾಗೆ ಸುಮ್ಮನೆ ಗಿರಾಕಿಗಳಿಲ್ಲದೆ ಅಂಗಡಿಯಲ್ಲಿ  ಒಬ್ಬನೆ ಕುಳಿತುಕೊಂಡಿದ್ದೆ, ಹೊರಗೆಲ್ಲ ರಸ್ತೆಯಲ್ಲಿ ತಮ್ಮ ತಮ್ಮ ಪಕ್ಷಗಳ ಪ್ರಚಾರ ಕಾರ್ಯದಲ್ಲಿ ಕಾರ್ಯಕರ್ತರು ಹುರುಪಿನಿಂದ, ಅಬ್ಬರದ ಪ್ರಚಾರವನ್ನೆ ಕೈಕೊಂಡಿದ್ದರು. ಹತ್ತು ನಿಮಿಷ ಕಳೆಯಿತು, ಒಂದಿಪ್ಪತ್ತು ಇಪ್ಪತ್ತೈದು ಜನರ ಒಂದು ಪಕ್ಷದ ಗುಂಪು ಅಂಗಡಿಯ ಹತ್ತಿರ ಬಂದು ಆ ಗುಂಪಿನ ಮುಂದಾಳತ್ವವನ್ನು ವಹಿಸಿದಂತ ವ್ಯಕ್ತಿಯು ಬಂದು ತಮ್ಮ ಪಕ್ಷದ ಕರಪತ್ರವನ್ನು ನೀಡುತ್ತಾ, ' ನಮಸ್ಕಾರ ಅಣ್ಣವ್ರ ದಯವಿಟ್ಟು ನಿಮ್ಮ ಓಟನ್ನ ನಮ್ಮ ಸಾಹೇಬ್ರಗೆ ಹಾಕ್ಬೇಕ್ರಿ' ಎಂದು ಗುಟ್ಕಾದಿಂದ ಬಣ್ಣ ಬಡ್ಕೊಂಡಿದ್ದ ಅವನ ಅಳಿದುಳಿದ ಹಲ್ಲುಗಳನ್ನು ಪ್ರದರ್ಶಿಸುತ್ತಾ,  
    ಒಂದು ಕ್ಷಣ ಆ ಕರಪತ್ರವನ್ನು ನೋಡಿ ಆ ವ್ಯಕ್ತಿಯ ಮುಖವನ್ನೊಮ್ಮೆ ನೋಡುತ್ತಾ, ಮೆಲ್ಲಗೆ 'ನಂಗ ಒಂದ ಹದಿನೆಂಟ ಸಾವಿರ ರೂಪಾಯಿ ಕೊಡ್ರೀ.. ಒಂದೊಂದ ಓಟಿಗೆ ಮೂರ ಮೂರ ಸಾವಿರ ರೂಪಾಯಿ ಹಂಗ, ನಮ್ಮನಿಯಾಗ ಒಟ್ಟ ಒಂದಾರ ಓಟ ಅದಾವು, ಇಷ್ಟು ಓಟನ್ನ ನಿಮ್ಮ ಪಕ್ಷಕ್ಕ ಹಾಕ್ತೀವಿ, ಗ್ಯಾರಂಟಿಗೆ ನೀವ್ ಯಾ ದೇವ್ರ ಮೇಲ್ ಪ್ರಮಾಣ ಮಾಡಂದ್ರು ಮಾಡ್ತೀವಿ ಬೇಕಿದ್ರ' ಅಂದೆ ನಾನು
ಆ ವ್ಯಕ್ತಿ ನಾನು ಈ ರೀತಿ ಅವನನ್ನು ಪ್ರಶ್ನಿಸುತ್ತೇನೆಂದು ಎಣಿಸಿರಲಿಕ್ಕಿರಲಿಲ್ಲ, ಕ್ಷಣಕಾಲ ಗಲಿಬಿಲಿಗೊಂಡವನಂತೆ ಕಂಡರು ಸಾವರಿಸಿಕೊಂಡು, ' ಏ..ಏನ್ರೀ ಸರ್ ಏಜ್ಯುಕೇಟೆಡ್ ಆಗಿ ನೀವ್ ಹಿಂಗ ರೊಕ್ಕ ಕೇಳಿದ್ರ ಹ್ಯಾಂಗ್ರಿ.. ಮತ್ತಿನ್ನ ಹಳ್ಳೇನರ ಹ್ಯಾಂಗ ಮಾಡ್ಲಿಕ್ಕೇಳ್ರಿ, ಅದು ಅಲ್ದ ನೀವ್ ಹಿಂಗ ರೊಕ್ಕ ಕೇಳೊದು ಕಾನೂನಿನ ಪ್ರಕಾರ ಅಪರಾಧ ಆಕ್ಕೈತ್ರೀ...' ಎಂದು ತನ್ನವರತ್ತ ನೋಡುತ್ತಲೆ, ಅವನ ಸುತ್ತಲಿದ್ದ ಕೆಲವು ಮಂದಿ 'ಹೌದೌದ್ರೀ..., ಅಲ್ಲನು ಮತ್ತ, ಖರೆ ಐತಿದು, ನಮ್ಮ ಸರ್ ಹೇಳೊದ ಬರೊಬ್ಬರಿ ಐತಿ', ಅಂತ ತಲೆಗೊಂದು ಮಾತಿನ ಮುತ್ತುಗಳು ಉದುರಿದವು.
    ಅವರಾಡಿದ ಮಾತಿಗೆ ನಾನು ತುಸು ನಕ್ಕು, 'ಹೌದಲ್ರೀ ಇದು ನಂಗು ಗೊತ್ತಿರ್ಲಿಲ್ಲ, ತಪ್ಪು...ತಪ್ಪು... ನಾನು ಹಣ ಕೇಳೊದು ತಪ್ಪಾಗ್ತದ, ಅಲ್ವಾ, ' ಎಂದೆ,
ಎಲ್ಲರೂ ಹೌದೌದು ಎನ್ನುವಂತೆ ತಲೆಯಾಡಿಸಿದರು,
' ಮತ್ತ ಇಷ್ಟ ಮಂದಿ ಪ್ರಚಾರಕ್ಕಂತ ಬಂದೀರಿ, ನೀವೆಲ್ಲ ನಿಮ್ಮ ಸ್ವಂತ ರೊಕ್ಕಾನ ಖರ್ಚ ಮಾಡ್ಕೊಂಡು ಪ್ರಚಾರಕ್ಕ ಬಂದಿರೊ, ಇಲ್ಲಾ,... ನಿಮ್ಮ ಸಾಹೇಬ್ರ ಮೇಲಿನ ಅಭಿಮಾನಕ್ಕ ಬಂದೀರೊ...' ಎನ್ನುತ್ತಾ ಎಂದು ನಿಂತೆ,
ನಾ ಕೇಳಿದ ಪ್ರಶ್ನೆಗೆ ಅವನ ಹಿಂದೆ ನಿಂತಿದ್ದ ಕೆಲವರು ಹಾಗೆ ಅಂಗಡಿಯಿಂದ ಹೊರಗೆ ನಡೆದರು,
ಆ ವ್ಯಕ್ತಿಯು ' ಏ ನಾವೆಲ್ಲ ಅವರ ಪಕ್ಕಾ ಅಭಿಮಾನಿಗಳ್ರೀ ಒಂದ ಪೈಸಾನು ಮುಟ್ದಂಗ ಕೆಲ್ಸ ಮಾಡಾಕ ಹತ್ತೀವಿ,' ಎಂದ.
ನಾನು ತಟ್ಟನೆ ಅವನ ಕೈಯನ್ನು ಹಿಡಿದುಕೊಂಡು ಕೈ ಕುಲುಕುತ್ತಾ,  'ಇವತ್ತು ನಾನು ನಿಮ್ಮ ಜೊತಿಗೆ ಪ್ರಚಾರ ಮಾಡಾಕ ಬರ್ತೀನಿ ನಡ್ರಿ ನಿಮ್ಮಂಥಹ ನಿಸ್ವಾರ್ಥ ಕಾರ್ಯಕರ್ತರು ಯಾರ್ ಸಿಗ್ತಾರ್ರೀ ಈಗೀನ ಕಾಲ್ದಾಗ, ಹ್ಞಾಂ, ಮತ್ರ ಸಂಜಿಕ ನಿಮ್ಮ ಸಾಹೇಬ್ರನ್ನ ಭೇಟಿ ಮಾಡಿ, ಅವರ್ಗೊಂದು ಅಭಿನಂದನೆಗಳನ್ನ ತಿಳಿಸಿ, ನನ್ನ ಮನೇನ ಓಟ ಒಷ್ಟು ನಿಮ್ಗ ಹಾಕ್ತೀವ್ರೀ ಅಂತಂದ ಹೇಳ ಬರ್ತೇನ, ಹೋಗೊಣ್ರ್ಯಾ' ಎಂದು ಅಂಗಡಿಯಿಂದ ಆಚೆ ಬರಲು ಅನುವಾದೆ. ಈ ಸಲ ಮಾತ್ರ ಆ ವ್ಯಕ್ತಿಯ ಮುಖ ಮಾತ್ರ ಬಿಳಚಿಕೊಂಡುಬಿಟ್ಟಿತು. ಅವನ ಹಿಂಬಾಲಕರಲ್ಲಿ ಒಬ್ಬ 'ಅದ್ಹೆಂಗ್ರಿ ಮನೇನ ದಗದಾ ಬಗ್ಸಿ ಬಿಟ್ಟ, ಇಂತಾ ರಣರಣ ಬಿಸ್ಲಾಗ ಪುಗ್ಸಟ್ಟೆ, ಅದು ಕೈಲೆ ಖರ್ಚ ಮಾಡ್ಕೊಂಡ ಯಾರ್ ಬರ್ತಾರ್ರೀ ತಲಿಗೀಲಿ ಕೆಟ್ಟೈತನು ನಿಮ್ದು, ' ಅಂದ ಸ್ವಲ್ಪ ಮೂಗಿನಿಂದ ಗುಟುರು ಹಾಕುತ್ತಾ, ' ಹೌದ್ರ್ಯಾ ಮತ್ತ ಒಂದಿನಕ್ಕ ಎಷ್ಟ ತಗೊತಿರಿ ಹಾಗಿದ್ರ,' ಎಂದೆ
' ಇನ್ನೂರ ರೂಪಾಯಿರೀ... ಮುಂಜಾನಿ ನಾಷ್ಟ, ಮಧ್ಯಾಹ್ನದೂಟ, ಸಂಜಿಕೆ ಮನಿಗೆ ಹೋಗ ಮುಂದ ಒಂದ ನೈಂಟಿ,' ಎಂದನು ಗರ್ವದಿಂದಲೆ, ನಾನು ಅಷ್ಟೇ ಶಾಂತವಾಗಿ
'ನೋಡ್ರಪ್ಪ.. ಒಂದಿನಕ್ಕ ಎರಡ್ನೂರ ರೂಪಾಯಿ, ಇನ್ನೂ ಹದಿನೈದ ದಿನ ಐತಿ ಓಟ ಹಾಕೋದು ಅಂದ್ರ ಹದಿನೈದ ದಿನಕ್ಕ ಮೂರು ಸಾವಿರ, ಮತ್ತ ಓಟ ಹಾಕೊ ದಿನ ಎಲ್ಲಾ ಪಕ್ಷದವರ ಒಂದೊಂದಿಷ್ಟು ಕೈ ಬೆಚ್ಗ ಮಾಡ್ತಾರ ಒಟ್ಟಾರೆಯಾಗಿ, ಐದುವರಿ ಸಾವ್ರ ರೊಕ್ಕ ಕೂಡ್ತದ, ಹೌದಲ್ಲೊ' ಅಂದೆ, ಅದಾಗಲೆ ಆ ವ್ಯಕ್ತಿಯ ಹಿಂಬಾಲಕರು ಅರ್ಧದಷ್ಟು ಜನರು ಜಾಗ ಖಾಲಿಮಾಡಿ ಬಿಟ್ಟಿದ್ದರು. ಅವನ ಮೊಗದಲ್ಲಿ ಸಣ್ಣಗೆ ಬೇವರ ಹನಿಗಳು ಗರ್ಭಧರಿಸತೊಡಗಿದವು, ಮತ್ತೆ ನಾನೆ ಮಾತನ್ನು ಮುಂದುವರೆಸುತ್ತಾ, 'ಸರಿ ಇರ್ಲಿ ಬಿಡಿ, ನೀವಂತು ಸಾಲಿ ಕಲ್ತಿಲ್ಲ, ಊರಾಗ ದುಡ್ಕಿಲ್ಲ, ಮಾಡಾಕ ಕೆಲ್ಸಿಲ್ಲ, ಹಿಂಗಾಗಿ ಕೂಲಿ ಆಸೆಗೆ ಬಂದಿರಿ' ಎನ್ನುತ್ತಲೆ, ಹೌದೌದು ಎನ್ನುತ್ತಾ ತಲೆಯಾಡಿಸಿದರಿಬ್ಬರು, ' ನಾ ಕಲ್ತಾವ ಅದೀನಿ,‌ ನೀವು ಕೇಳೊದು ಬರೊಬ್ಬರಿ ಐತಿ, ನಿಮಗ್ಯಾಕ ಬೇಕ್ರಿ ರೊಕ್ಕಾ ಅಂತಂದ ಹೇಳಿ, ಇದು ನ್ಯಾಯವಾದ ಮಾತೈತಿ, ಆದ್ರ ನೀವ್ ನನ್ನ ಹಿಂಗ ಕೇಳ್ದಂಗ, ನಿಮ್ಮ ನಾಯಕರನ್ನ ಯಾಕ ಕೇಳೊದಿಲ್ಲ' ಅಂತಂದೆ, 'ಅವರನ್ನ ಏನಂತ ಕೇಳಬೇಕ್ರೀ..' ಒಬ್ಬ ಸ್ವಲ್ಪ ಸಿಟ್ಟಿಲೆ, 'ಏನಿಲ್ಲೊ ಸಾವಕಾರ ಅಷ್ಟ್ಯಾಕ ಸಿಟ್ಟಿಗೆ ಬರ್ತೀದಿ ನೀನು, ಅಲ್ಲ ನಿಮ್ಮ ನಾಯಕರದ್ದು ಆಸ್ತಿ ಇಲೆಕ್ಷನ್ಗೆ ನಿಂದ್ರೊ ಮುಂಚ್ಯಾಕ, ಅವರಾಸ್ತಿ ಹತ್ತ ಲಕ್ಷೊ, ಒಂದ ಕೋಟಿಯೊ ಇರ್ತದ, ಅವರು ಚುನಾವಣೆ ಗೆದ್ದ, ಐದ ವರ್ಷ ಖುರ್ಚಿ ಮ್ಯಾಲ ಕುಂತ, ಕೆಳಗಿಳಿಯೊದ್ರೊಳಗ, ಅವರಾಸ್ತಿ ದುಪ್ಪಟ್ಟ ಆಗಿರ್ತದ, ಹೆಂಗ ಬಂತ್ರೀ ಇಷ್ಟಕ್ಕೊಂಡ ಆಸ್ತಿ ಅಂತ ಇಲ್ಲಿರೊರು ಯಾರರ ಕೇಳ್ತಿರೇನು?, ಇಲ್ಲ, ಒಂದ ಸಣ್ಣ ಇಂಡಿಕಾ ಕಾರ್ ನ್ಯಾಗ ಓಡಾಡಾಂವ ಅಧಿಕಾರದ ಕೊನಿ ಕೊನಿಗೆ ಹತ್ತ ಹನ್ನೊಂದ ಲಕ್ಷ ರೂಪಾಯಿ ಕಾರ್ನ್ಯಾಗ ಓಡಾಡ್ತೀರ್ತಾನ, ಇದು ಹ್ಯಾಂಗ ಬಂತಂದ ಯಾರರ ಕೇಳ್ತಿರನು.? ಅದು ಇಲ್ಲ, ಅಲ್ರೀ ಒಬ್ಬ ಕನ್ನಡ ಸಾಲಿ ಮಾಸ್ತರನ ಪಗಾರ ಎಷ್ಟೈತಪಾ ಒಂದ ತಿಂಗ್ಳಿಗೆ,     ಇಷ್ಟು ಐದು ವರ್ಷಕ್ಕ.   ಇಷ್ಟಾತ,ಹೌದಾ, ನಿಮ್ಮ ಶಾಸಕರದ್ದು ಎಷ್ಟೈತಪ, ತಿಂಗಳ ಪಗಾರ.      ಇಷ್ಟೈತಿ, ಐದ ವರ್ಷಕ್ಕ.      ಇಷ್ಟಾಗತ್ತ ಮತ್ತ ಉಳ್ದಿದ್ದ ಹಣ ಎಲ್ಲಿಂದ ಬಂತಂದ ಯಾರರ ಕೇಳ್ತಿರೇನು..?'
ಅಂದೆ, ಒಬ್ಬನಿಗೆ ಎಲ್ಲಿಲ್ಲದಷ್ಟು ಕೋಪ ಬಂದ ಬಿಡ್ತು, ಗುಂಪಿನಿಂದ ತೂರಿಕೊಂಡ ಮುಂದ ಬಂದವ್ನ, ' ಏ ತಮ್ಮ ನೀ ಓಟ ಹಾಕ್ತೀನ ಅನ್ನೊಗಿದ್ರ ಹಾಕ, ಇಲ್ದಿದ್ರ ಬಿಡು, ಏನ ನಿಮ್ಮನಿ ಆರ ಓಟ ಬಿಳಲಿಕ್ಕಂದ್ರ  ನಮ್ಮ ನಾಯಕರ ಏನ ಸೋಲುದಿಲ್ಲ, ಅವರ ಸಾಕಷ್ಟ ತ್ವಾಟ ಪಟ್ಟಿ ಅದಾವು, ಅದ್ರಾಗ ಜಬರ್ದಸ್ತ ಇನಕಂ ಬರ್ತೈತಿ, ಗೊತ್ತನ ನಿಂಗ' ಎಂದು ಜೋರು ಧ್ವನಿಯಲ್ಲೆ ದಭಾಯಿಸಿದನು. ' ಹೌದ್ರ್ಯಾ.. ಅಲ್ರೀ ಅದು ನಮ್ಗೂ ಗೊತ್ತೈತ ಬಿಡ್ರಿ ಅವರ ತಮ್ಮ ನಾಮಿನೇಷನ್ ಫೈಲ್ ಮಾಡು ಮುಂದನ ತುಂಬಿರರ್ತಾರ ತಮ್ಮ ಆದಾಯದ ಮುಖ್ಯ ಮೂಲ ಕೃಷಿ ಅಂತಂದ, ಅಲ್ರೀ..ಐದೈದ ವರ್ಷದಾಗ ಇಷ್ಟಿಷ್ಟ ಡಬ್ಬಲ ಆದಾಯ ತೆಗಿತಾರ ಅವರು ಕೃಷಿಯೊಳಗ, ಮತ್ತ ಇವರಿಷ್ಟೆಲ್ಲಾ ಕೃಷಿಯೊಳಗ ಆದಾಯ ತೆಗಿಯೊರು, ನಿಮ್ಮಂಥ ಬಡ ರೈತರ್ಗೆ ಯಾಕ ಅವರು ಹೇಳಿಕೊಡಬಾರ್ದು, ಹೆಚ್ಚ ಆದಾಯ ತೆಗೆಯೋದ ಹೇಗಂತ, ಒಂದಿಷ್ಟ ಸಾಲದ ಭಾದಿ ತಾಳಲಾರ್ದನ ಹೊಲ್ದಾನ ಬೇವಿನ ಮರಕ್ಕ ಊರ್ಲ ಹಾಕ್ಕೊಳ್ಳೊ ಮಂದಿ ಜೀವಾನರ ಉಳಿತಿದ್ವ, ಹೌದಲ್ರಿ ಯಜಮಾನ್ರ, ನಾ ಹೇಳೊದ ಖರೆ ಐತಿಲ್ಲ,' ಎಂದ ಮೆಲ್ಲಗೆ ಅವನ ಹೆಗಲ ಮೇಲೆ ಕೈಯಿಟ್ಟು ಹೇಳಿದೆ, ಇರುವೆ ಸಾಲಿನ ಮೇಲೆ ಒಂದು ಕಡ್ಡಿಯನ್ನು ಓಗೆದರೆ ಹೇಗೆ ಗಲಿಬಿಲಿಗೊಂಡು ಓಡಾಡುತ್ತವು ಹಾಗೆಲ್ಲ ಆ ವ್ಯಕ್ತಿಯ ಹಿಂಬಾಲಕರು ಚಡಪಡಿಸುತ್ತಾ ನನ್ನುತ್ತರಕ್ಕೆ ಉತ್ತರಿಸದೆ, ಎಲ್ಲರೂ ಮೆಲ್ಲಗೆ ಜಾರಿಕೊಂಡುಬಿಟ್ಟರು, ಈ ನಾಕೈದು ಜನರನ್ನು ಹೊರತುಪಡಿಸಿ, ಕೊನೆಗೆ ಅವರು ಅಂಗಡಿಯನ್ನು ದಾಟುವಾಗ ನಾನು ಅವರೊಡಗೂಡಿ ಹೊರಬಂದು 'ನೀವು ನನಗೆ ಪ್ರಶ್ನೆ ಮಾಡಿದ ಹಾಗೆ ನಿಮ್ಮ ನಿಮ್ಮ ನಾಯಕರುಗಳಿಗೆ ನೀವೆನಾದರು ಪ್ರಶ್ನಿಸಿದ್ದೆ ಆದರೆ, ನಾಳೆ ನಿಮ್ಮ ಮಕ್ಕಳು ಅವರ ಮನೆ ಮುಂದೆ ಹೋಗಿ ಹಗಲೆಲ್ಲ ಕಾದು, ಅವರ ಬಂದ ಮ್ಯಾಲ ನಡ ಬಗ್ಗಿಸಿ ಧಣಿ ನಮ್ಮ ಓಣಿಯ್ಯಾಗ ನೀರ ಬರವಲ್ವರೀ ಎಂದ ಹಲ್ಗಿಂಜಕೊಂಡ ಕೇಳೊ ಪ್ರಮೇಯಾ ಬರಂಗಿಲ್ಲ, ನನ್ನ ಮಾತಿಂದ ಏನಾರ ನಿಮ್ಮ ಮನಸ್ಸಿಗೆ ನೋವಾಗಿದ್ರ, ನಿಮ್ಮ ತಮ್ಮನಂತೊನು ಅಂದ್ಕೊಂಡು ಕ್ಷಮಿಸಿಬಿಡ್ರಿ ಅಣ್ಣೊರ' ಎಂದೆ ಆ ವ್ಯಕ್ತಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲೆ ಇಲ್ಲ, ಸುಮ್ಮನೆ ತಲೆಯಾಡಿಸುತ್ತ, ಪಕ್ಕದ ಅಂಗಡಿಯ ಹತ್ತಿರ ನಿಂತಿದ್ದ ತನ್ನ ಗುಂಪಿನತ್ತ ಭಾರವಾದ ಹೆಜ್ಜೆಗಳೊಂದಿಗೆ ನಡೆದನು. ಇಷ್ಟೇಲ್ಲಾ ಆದರೂ ಅವರು ತಿದ್ದುಕೊಳ್ಲುತ್ತಾರೆ, ತಮ್ಮ ನಾಯಕನನ್ನು ಪ್ರಶ್ನಿಸುತ್ತಾರೆ ಅಂತ ನಾನೇನಾದರೂ ತಿಳಿದುಕೊಂಡಿದ್ದರೆ, ನನ್ನಂತಹ ಮೂರ್ಖ ಈ ಲೋಕದಲ್ಲಿ ಯಾರು ಇರೋದಿಲ್ಲ ಅಲ್ವ.. ಏಕೆಂದರೆ ಸಂಜೆ ಅವರು ಕೊಡಿಸುವ ನೈಂಟಿಯಲ್ಲಿ ಎಲ್ಲ ಆದರ್ಶಗಳು ಕೊಚ್ಚೆಯಲ್ಲಿ ಉಚ್ಚೆಯ ರೂಪದಲ್ಲಿ ಹರಿಯುತ್ತಿರುತ್ತವೆ. ಏಷ್ಟೆಯಾದರೂ....
ಮೇರಾ ಭಾರತ್ ಮಹಾನ್

ಉಕ

ಹೊಡಿಬ್ಯಾಡ ಏ ಹುಡ್ಗಿ ನೀ...ಕಣ್ಣ
ಹಿಂದ..ಹಿಂದ ಬರ್ಲಾಕ ನಾನದೀನಿ ಬಲು ಸಣ್ಣ
ಬಲಶಾಲಿ ಭೀಮನಂತೊನದಾನು... ನಿಮ್ಮಣ್ಣ
ಒಂದ ಕೈಯ್ಲೆ ಎತ್ತೋಗುದು ಮುಕ್ಕುಸ್ತಾನ ನನ್ನ ಮಣ್ಣ

ಏನಾದ್ರೇನ...ಚೆಲ್ವಿ, ನೀನದಿದಿ ನಮ್ಮೂರ ಭಾರಿ ಹೆಣ್ಣ
ಹ್ಯಾಂಗ ಹೇಳ್ಲಿ ಮಾತನ್ಯಾಗ...ರಸಪೂರಿ ಮಾವಿನ ಹಣ್ಣ
ಕಣ್ಣ ತಿರ್ಗತಾವ ಬೆಡಗಿ ನೋಡಿ ನಿನ್ನ ಮೈ ಬಣ್ಣ
ಈ ಯುಗಾದಿಗೆ ಏನಾರ ಮಾಡಿ...ಮನಿ ಗ್ವಾಡಿಗೆ ಬಡ್ಸಬೇಕ ಸುಣ್ಣ

ಕಣ್ಣಿಗೆ ತೀಡ್ಕೊಂಡಿಯಲ್ಲ ಕಡು.. ಕಪ್ಪಾನ ಕಾಡ್ಗಿ
ನಡುವಿಗೆ ದಾವಣಿ ಕಟ್ಟಿಕೊಂಡ ಹೊಂಟಿ, ಏನ್ ನಿನ್ನ ನಡ್ಗಿ
ಮ್ಯಾಲ ಕುಂತಾವ ಯಾ ಹೊತ್ನಾಗ ಮಾಡಿರಬೇಕ ಈ ಗಡ್ಗಿ
ಹತ್ರಕ್ಕ ಹೋಗಬೇಕಂದ್ರ ಅವರಣ್ಣ ಹಿಡ್ಕೊಂಡ ಕುಂತಾನಲ್ಲ ಬಡ್ಗಿ

ಹುಡ್ಗಿ...ಒಂಟಿ ಕಣ್ಣಿಲೆ ಹಾರಿಸಿಬಿಟ್ಟಿಯಲ್ಲ ಗುಂಡು
ಗೊತ್ತಿಲ್ಲ ನಿನ್ಗ.... ನಾನಲ್ಲ ಅಂತಿಂಥ ಗಂಡು
ತಲಿಕೆಟ್ರ...ಯಾರಿಗೂ ಹೇದರದಂತ ಜಗಮೊಂಡು
ಬರ್ತೀನ ನಿಮ್ಮನಿಗೆ ವಿಳ್ಯೆದೆಲೆ ತಾಟ ಹಿಡ್ಕೊಂಡು

ಮದ್ವಿ ಆಗೋನ ಮಲ್ಲಿ, ಕಳಕಪ್ಪನ ಗುಡಿಯಾಗ
ಜೇನಿನ ಹೊಳಿನ ಹರ್ಸ್ತೀನಿ ಬಾಳಿನ ಹಾದ್ಯಾಗ
ವರ್ಷ ಕಳಿಯೊದ್ರಾಗ, ಮಗು ಹಾಕ್ತೀನಿ ನಿನ್ನ ಮಡಿಲಾಗ
ಹಗಲು ರಾತ್ರಿ ದುಡಿದುಣ್ಣೊನು ಭೂ ತಾಯಿ ಒಡಲಾಗ

ಕಜಲ್

ಗಂಧದ ಕೊರಡುಗಳೇನು ಬೇಕಿಲ್ಲ.....
ಬೇವಿನ ಕಟ್ಟಿಗೆಗಳಿಂದಾದರೂ ಸರಿ...
ಇಂದು ಸಂಜೆಗೆ, ನನ್ನನು ಸುಟ್ಟು ಹಾಕಿಬಿಡು ಸಾಕಿ...
ನಾಳೆಯವಳ ಮದುವೆ ಮೆರವಣಿಗೆ ಸಾಗುವುದು..!!!
ಹೇಗೆ ಸಹಿಸಿಕೊಳ್ಳಲಿ ನಾನು...? ಬ್ಯಾಂಡ್ ಬಾಜಾದ ಸದ್ದನು...
ಅದಕ್ಕೂ ಮೊದಲೆ, ನನ್ನ ತಮಟೆಯ ಸದ್ದು ಬೀದಿ...
ಬೀದಿಗಳಲ್ಲಿ ಪ್ರತಿಧ್ವನಿಸಿಬಿಡಲಿ...

ಉರಿದು.... ಸುಟ್ಟು ಹೋದ ನನ್ನ ಬೂದಿಯನ್ನು
ಹೊಳೆಯಲ್ಲಿ ವಿಸರ್ಜಿಸಬೇಡ ಸಾಕಿ...ಂ
ಒಡಕು ಮಡಕೆಯಲ್ಲಾದರು ಸರಿ, ಗಾಳಿಗೆ ಹಾರಿ
ಹೋಗದಂತೆ ಮುಚ್ಚಳವ ಮುಚ್ಚಿ...ಬಚ್ಚಿಟ್ಟುಬಿಡು...
ಗಂಗೆಯನ್ನು ಹೊತ್ತು ತರಲೆಂದು ಬರುವ ನೀರೆಯರು....
ಬೂದಿ ಬೇರೆತ ನೀರನ್ನೊಯ್ದು...ಸುರಿಗಿಯನ್ನಾಗಿ ಅವಳ 
ಮೈ ಮೇಲೆ ಸುರಿದಾರು......ಮದುವೆಗೂ ಮುನ್ನವೆ...
ನಾನನುಭವಿಸಿದ ವಿರಹದ ಉರಿ...
ಅವಳನ್ನು ತಬ್ಬಿಕೊಂಡಾತು...

ಗೋರಿಗೆಂದೆ....ಹೂವಿನ ಚಾದರ ಕಟ್ಟುವ ಬುಟ್ಟಿಯಲ್ಲಿ...
ಒಂದೆ.... ಒಂದು ಮೊಗ್ಗಿನ ಎಸಳು ಉಳಿಯದಂತೆ,
ಕಟ್ಟಬೇಕೆಂದು....ಅಲ್ಲಾಭಕ್ಷಿಗೆ ಆಜ್ಞಾಪಿಸಿಬಿಡು ಸಾಕಿ...
ಮತ್ತೈದೆಯ ಮುಡಿಯನೇರುವ ದಂಡಿಯಲ್ಲಿ...ಸಾವಿನ
ಹೂವೊಂದು ಸೇರಿ..... ಅಪಶಕುನವಾದಾತು...!!!!
ಅವಳ ಮುತ್ತೈದೆತನಕ್ಕೆ ಕಂಟಕ ತರುವ ಪಾಪವು...
ನನ್ನನೆ ಸುತ್ತುಕೊಂಡು......ಹುಗಿದ ಮಣ್ಣಿನೊಳಗು ನನಗೆ
ನೆಮ್ಮದಿಯಿಲ್ಲದಂತಾದಾತು...

ಆತ್ಮಕ್ಕೆ ಶಾಂತಿ ಸಿಗಲೆಂದೇನು...ಮಸಣದಲ್ಲೊಂದು
ದೀಪವ ಹಚ್ಚದಿರು ಸಾಕಿ....
ನಿ ಹಚ್ಚಿಟ್ಟ ಹಣತೆಯ ಬೆಳಕಿನಲ್ಲಿ...ಮೊದಲ ರಾತ್ರಿಗೆ
ಅವಳಾರಿಸುವ ದೀಪದ ದೃಶ್ಯವನ್ನು ಕಣ್ತುಂಬಿಕೊಳ್ಳುವ 
ದೌರ್ಭಾಗ್ಯ ನನ್ನದಾಗದಿರಲಿ...ಹೂ ಮಂಚದಲಿ ಅವಳೊಂದಿಗೆ... ಮಲಗದೆ ಹೋದರು...ಈ ಜನ್ಮಕ್ಕೆ,
ಅವಳ್ಹೆಸರಲೆ ಮಣ್ಣಲೆ ಮಲಗುವ ಸೌಭಾಗ್ಯವಾದರು
ಹಾಗೆ ಇರಲಿ....

ಕಜಲ್

ಈ ಸಂಜೆಗೆ... ತುಸು ಹೆಚ್ಚಿಗೆಯೆ ಸುರಿದುಬಿಡು 
ಸಾಕಿ... ನಿನ್ನ ಮದ್ಯವನ್ನು....ಈ ಬಡವನೆದೆಗೆ....,
ಇಂದವಳ ಮದುವೆ ಮೆರವಣಿಗೆಯ ಡೋರಿಯು
ಮೆರೆಯುವುದು.... 
ತಾಳಮೇಳದ ಸದ್ದಿಗೆ ನನ್ನೆದೆಯ ಬಡಿತವು
ನಿಂತು ಹೋದಾತು.....
ಸುದ್ದಿಯ ತಿಳಿದು... ಸಂಭ್ರಮವು ಸತ್ತು ಹೋದಾತು.

ಮಧ್ಯದಮಲಿನಲ್ಲಿ ಮಲಗಿದ ಮೇಲೆ, ಮುಖದ
ತುಂಬಾ... ಹೊದಿಕೆಯೊಂದನ್ನು ಹೊದಿಸಿಬಿಡು ಸಾಕಿ....
ನಾನುಸಿರಾಡುವ ಉಸಿರೂ.... ಅವಳನ್ನು ಸ್ಪರ್ಶಿಸದಿರಲಿ...
ನಿಟ್ಟುಸಿರನ ತಾಪವು ಸೋಕಿ, ಅವಳ ನಗುವು ಕುಂದಿದರೆ..?
ಸತ್ತು ನಾ ಹೋಗಲಿರುವ ನರಕದ ಬಾಗಿಲೂ...
ಮುಚ್ಚಿಕೊಂಡಾತು...!!!!

ಇದೊಂದು ಸಂಜೆ ಕ್ಷಮಿಸಿಬಿಡು ಸಾಕಿ....
ಬಹು ದಿನಗಳ ನಂತರ, ನಿನಗೆಂದೆ ತಂದಿದ್ದ
ಮಲ್ಲಿಗೆಯ ಗುಚ್ಛವನ್ನು... ಹರಿದು ಚೆಲ್ಲಿಬಿಡು...
ದಿಬ್ಬಣದ ಹಾದಿಗೆ, ಹೊತ್ತೊಯ್ಯವ ಬೀದಿಯಲ್ಲಿ
ಅದೇಷ್ಟು ಮುಳ್ಳುಗಳಿವೇಯೊ...ಚುಚ್ಚಿ..ಮೆರವಣಿಗೆಯು
ಅರ್ಧಕ್ಕೆ ನಿಲ್ಲದಿರಲಿ, ನಡು ಮಧ್ಯದಲಿ ಸಿಕ್ಕು...
ನರಳಾಡುವ ನೋವು ನನಗಷ್ಟೇ...ಇರಲಿ...

ಮಧುಶಾಲೆಯ ಅರಮನೆಯ ಮುಂದೆ....ಸುಗಂಧದ
ಧೂಪವನ್ನು ಹಾಕಿಬಿಡು ಸಾಕಿ....
ನಾ ಕುಡಿದುಬಿಟ್ಟ ಬಟ್ಟಲುಗಳ ಮಧ್ಯದ ವಾಸನೆ,
ಅವಳ ಎದೆಯನ್ನು ತಟ್ಟದಿರಲಿ... ಬಟ್ಟಲೊಳಗೆ
ನನ್ನೆದೆಯ ರಕ್ತವದೇಷ್ಟೊ....ಬೇರೆತಿದೆ..!!!! 
ನಾನ್ಹೆಚ್ಚು ದಿನ ಬದುಕಿರಲಾರೆ...ಎಂದವಳಿಗರಿವಾದರೆ...
ರಸಭರಿತವಳ... ಮೊದಲ ರಾತ್ರಿಯು ವಿಷವಾಗಿಬಿಟ್ಟಾತು...
ನನ್ನ ಬದುಕಿಗಿದೆ... ಕೊನೆಯ ಕತ್ತಲಾದಾತು....

ಹೀಗೆ

ತುಫಾಕಿಯ ಗುಂಡುಗಳಿಗಷ್ಟೆ ಇದ್ದ ರಕ್ತದ ರುಚಿ...
ಲೇಖನಿಯ ನಿಬ್ಬಿಗೂ ಸವಿಯುವ ಆಸೆ ಬಂತೇಕೊ...?
ನಂದನವನವಾಗಿಸಬೇಕಿದ್ದ ವಿಚಾರ ಧಾರೆಗಳು
ಧರೆಯನೆ ಹೊತ್ತುರಿಸಲು ಹಪಹಪಿಸುತಿಹುವೇಕೊ....?

ಗಿರಿ...ಕಂದರದೊಳಡಗಿರುವ ನರಿಗಳ ಬುದ್ದಿ 
ನಾಗರಿಕ ನಾಯಕರ ಮತಿಗೂ ಬಳೆದುಕೊಂಡಿತ್ಹೇಗೊ..?
ಧರ್ಮದ ಧಮನಿ...ಧಮನಿಗಳು ಸಿಡಿದು ಪಡೆದ ಉಸಿರಿಗೆ
ಮತ್ತೆ...ಮತ್ತೆ...ಮತಿಯ ದಿಗ್ಭಂದನದಿಂದಲೆ ಉಸಿರುಗಟ್ಟಿಸುತಿರುವಿರೇಕೊ...?

ಅರಳುವ ಹೂಗಳಿಗೆ ಹಾಕಿಕೊಡುವ ದಾರಿ ಇದೇನಯ್ಯ ?
ಮನೆಯ ಸುತ್ತ ಬೇಲಿಯ ಕಟ್ಟಿಕೊಂಡೆ ಬದುಕುವುದು ಸಾಧ್ಯವೇನಯ್ಯ..?
ಅಂಧಕಾರಕೆ ಬೆಳಕಿನ ಹಣತೆಯ ಹಚ್ಚದೆ ಕೆಂಡದಹಾಸು ಹಾಸುವಿರೇನಯ್ಯ...?
ಏರಿಳಿತಗಳ ಸಮವಾಗಿಸುವ ಭರದಲ್ಲಿ ತಾಯಿ ಮಮತೆಯನೆ
ಮರೆಯುವರೇನಯ್ಯ ?

ಸಾಕು...ಸಾಕುಬಿಡಿ ಎದೆಗೆ ಗುರಿಯಿಕ್ಕುವುದನು, ಅರಿವಿಲ್ಲವೇನು..? ಬೆನ್ನು ತೋರಿಸುವ ಹೇಡಿಗಳ ಹೇರುವ ಮಣ್ಣಿದಲ್ಲವೆಂಬುದು
ಹೊಡೆಯುವುದೆ ಆದರೆ, ಹೊಡೆದುರುಳಿಸಿಬಿಡಿ ಮೌಢ್ಯಗಳನು
ಕಟ್ಟುವ ಕಿಚ್ಚೊಂದು ನಿಮ್ಮೆದೆಯಲ್ಲಿ ಉರಿಯುತ್ತಿದ್ದರೆ ಮಾತ್ರ !!

ಚಿಂತನೆಗಳಿರಲಿ...ಚಿತೆಗೇರಿಸುವ ಚಮತ್ಕಾರವ ತೋರದಿರಿ
ಮಥಿಸುತಿರಲಷ್ಟೆ ಮೌನ....ಮತ್ಸರವನ್ನೆ ಮೆಳೈಸಿಕೊಳ್ಳದಿರಲಿ
ಚಿಮ್ಮುತಿರಲಿ ಪದಗಳು...ವಿಷ ಬೀಜಗಳನೆ ಬಿತ್ತದಂತಿರಲಿ 
ಚೆಲ್ಲಿದ ಹನಿ ಹನಿ ಶಾಯಿಯು....ರಕ್ತಚರಿತ್ರೆಯನ್ನ ಸೃಷ್ಟಿಸದಂತಿರಲಿ 

ತಮ್ಮ

ಬುದ್ಧನ ಕಡೆ ಹೊಂಡು...ಬುದ್ಧನ
ಕಡೆ ಹೊಂಡು...ಅಂದೊರೆಲ್ಲ,
ಇನ್ನೂ ಅರ್ಮನಿಯೊಳ್ಗ ಕುಂತಾರೊ
ತಮ್ಮಾ....
ಹೊಂಡ್ರಿ...ಹೊಂಡ್ರಿ...ಅಂತಾ ಬಾಯ್ಬಡ್ಕೊಳೊರೆಲ್ಲ
ಊರಾನ ಮಂದಿನೆಲ್ಲ ಹೊಂಡಿಸಿ, ತಾವ್ ಊರ್ತೂಂಬ ಗಂಟ್ ಮಾಡ್ಹಾಕ ಹತ್ತ್ಯಾರೊ ತಿಮ್ಮ

ಹೀಗೆ

ನನ್ನಾತ್ಮದೊಳಗೆ ಶಾಂತಿಯಿಲ್ಲದಿರುವಾಗ
ನಿಮ್ಮಾತ್ಮಕೆ ನಾ ಹೇಗೆ ಶಾಂತಿಯ ಕೋರಲಿ
ನವರಸಗಳ ಹೊಲಸನೆ ತುಂಬಿಕೊಂಡಿಹ ಮಡಿಕೆಯಿದು
ನಿಮ್ಮ ಹೆಸರನುಸುರಲು ಯೋಗ್ಯವಲ್ಲದ ಜೀವವಿದು
ಮತ್ತೆ...ಮತ್ತೆ...ಹುಟ್ಟಿ ಬನ್ನಿ‌ ಎಂದು ಯಾವ
ನಾಲಿಗೆಯಿಂದ ಪ್ರಾರ್ಥಿಸಲಿ....

ಸಾವಿರ...ಸಾವಿರಗಳ ಕೊಟ್ಟು ಶಿಕ್ಷಣವ ಕಲಿಸಲು
ಬಡಿದಾಡುವೆವಯ್ಯ...
ಲಕ್ಷ..ಲಕ್ಷಗಟ್ಟಲೆ ಪಡೆದರೂ ಜ್ಞಾನವ ಹಂಚದೆ,
ಅನಾಗರೀಕತೆಯನೆ ಹಂಚುತಿರುವರಲ್ಲಯ್ಯ..
ಸುಲಿದು...ಸುಲಿದು...ಪದಗಳನು ಬಜಾರಿನ
ಹರಾಜಿನ ಮೂಟೆಗಳಾಗಿರಿಸಿಹರಯ್ಯ...

ಎಲ್ಲದಕೂ ಬೆಲೆ ಕಟ್ಟುವ ಕಲೆ ನಮಗೆ
ಕರಗತವಾಗಿರುವಾಗ..., ದಾಸೋಹ!!!!
ಅದನ್ನು ಕನಸಿನಲ್ಲಿಯೂ ಕಲ್ಪಿಸಿಕೊಳ್ಳಲಾಗದು.
ಸಂಸ್ಕೃತಿಯನೆ... ಅರಿತುಕೊಳ್ಳಲಾಗದವರೆಲ್ಲ
ಹೋಗಿಬನ್ನಿ‌‌ ಎನ್ನುವರಲ್ಲ... ಅವರಿಗೆಲ್ಲ ಏನು ಗೊತ್ತು
ನಿಮ್ಮ ಕಾಯಕದ ರುಚಿ ಅವರಾರು ಸವಿದಿಲ್ಲ
ದೇಹಿ ಎಂದು ಬೇಡಿ ಬಂದವರ ಹಿಂದೆ ನಾಯಿಗಳನೆ
ಛೂ.. ಬಿಡುವವರಲ್ಲ!!!!

ಕಾಯವ ಬಾಗಿಸದೊಡೆ ಕಾಯಕಕೆಲ್ಲಿ ಬಂತು ಬೆಲೆ
ಬೆವರಿಳಿಸದೆ ಪರರ ಧಾನ್ಯವ ದಾನವಾಗಿಸುವುದು
ದಾಸೋಹದ ಕಗ್ಗೊಲೆ
ದೇವರನ್ನೆ ಕಳೆದುಕೊಂಡು ಸ್ಮಶಾನವಾಗಿಬಿಟ್ಟಿದೆ
ಕರುನಾಡಿನ ನೆಲೆ
ಸಣ್ಣಗಾದರೂ... ವ್ಯಾಪಿಸಬೇಕಿದೆ ಜಗದ ತುಂಬೆಲ್ಲ 
ತ್ರಿವಿಧ ದಾಸೋಹದ ಅಲೆ...

ತಮ್ಮಾ

ಊರ ಹೊತ್ತ ಊರ್ಸಿದವ್ರನ್ನ...ಇವತ್ತ
ಊರ ತುಂಬಾ ಮೆರವಣ್ಗಿ‌ ಮಾಡ್ಕೊಂಡ ಹೊಂಟಾರ್ನೋಡೊ...ತಮ್ಮಾ
ನಾಕ್ಮಂದಿ ಮುಂದ ಶಿಕ್ಷೆ ತಗೋಬೇಕಾದವ್ರು
ಅದ ನಾಕ್ಮಂದಿಗೆ ಬುದ್ದಿ ಹೇಳೊ ಕಟ್ಟಿ ಏರಿಯ್ಯಾರ
ನೋಡು..ಇಂತದ್ಕ ಏನೊ?  ನ್ಯಾಯದವ್ವನ ಕಣ್ಣಿಗೆ
ಕಪ್ಪನ ಬಟ್ಟಿ ಕಟ್ಬಿಟ್ಟಾರು ನೋಡ್ತಿಮ್ಮಾ..

ಹತ್ತಿ ಬಂದವರ್ಯಾರಿಗೂ ತುಳಿದ ಬಂದ
ಮೆಟ್ಲು ನೆಪ್ಪಿರೊದಿಲ್ಲ ನೋಡ್ತಮ್ಮಾ...

ಖಾದಿ ತೊಟ್ಟೊರೆಲ್ಲ...ಗಾಂಧಿಗಳಾಗ್ತರೇನೊ
ತಮ್ಮಾ...
ಹತ್ತ ಹೆಜ್ಜಿ ಹಳ್ಳಿಯಿಂದ ಹಳ್ಳಿಗೆ ಹತ್ತ ಹೆಜ್ಜಿ ಕಾಲ್ಕಿತ್ತಿ
ಇಡ್ಲಿಲ್ಲಂದ್ರ...

ಕ್ವಾಟಿಯಂತ ಮನಿ ಕಟ್ಟಸ್ಕೊಂಡು, ಕಾಯಾಕ ಹುಲಿಯಂತಾದೊಂದು ನಾಯಿನ ಸಾಕ್ಕೊಂಡು..
ಊರೂರ ಕೇರಿ ಮಂದಿ ಮುಂದ ನಿಂತ್ಗೊಂಡು
ಸಮಾನಾತೆಯ ಪಾಠ ಮಾಡಿ ಬರ್ತಾರು ನೋಡ್ತಮ್ಮಾ..

ನಮ್ಮವ್ವ

ಸತ್ತ ಹೆಣಕ್ಕ ಸಿಂಗಾರ ಮಾಡಿ
ಬಾಯ್ಬಡ್ಕೊಂತ
ಕುಂದ್ರತಾರು...
ನೋಡವ್ವ...
ಉಸಿರಿದ್ದಾಗ ಕಿವಿಯಾಗದವ್ರು
ಉಸ್ರ ನಿಂತಮ್ಯಾಲ
ಏನ್..ಹೇಳ್ತಾರೊ
ನಮ್ಮವ್ವ

ಮನಿ ಬಾಗ್ಲಿಗೆ ಬಂದಾಗ
ಎರ್ಡ ರೂಪೆ ಚಾ..‌
ತರ್ಸಿ, ಕುಡ್ಸಿ
ಕಳ್ಸಿಲಿಲ್ಲ 
ಕೇಳವ್ವ...
ಸತ್ತವ್ನ ಮನಿಗೆ
ಇಸ್ಬಾಯಿ ತೊಳ್ಸಾಕಂತ
ಯಾಡ್ನೂರೂಪೆ
ಖರ್ಚ ಮಾಡ್ಕೊಂಡ
ಬಂದಾರ ನೋಡೊ
ನಮ್ಮವ್ವ

ಮ್ಯಾಲನ್ಯಾವ...ಲೆಕ್ಕಾ
ಎಲ್ಲಾ ಬರ್ದಿಟ್ಟಿರ್ತಾನ
ಅಂತಾ ದೊಡ್ಡ...ದೊಡ್ಡ
ಪುರಾಣ ಹೇಳ್ತಾರು
ಕೇಳವ್ವ...
ಸತ್ತ ಹೆಣಕ್ಕ ಹಚ್ಚಿದ
ಬೆಂಕಿ..ಬೂದಿಯಾಗಿಲ್ಲ...
ಕೊಟ್ಟ ರೊಕ್ಕಕ್ಕ, ಲೆಕ್ಕ
ಕೇಳಾಕ, ಆಗ್ಲೆ ಮನಿ
ಹೊಸ್ಲ ಹೊರ್ಗ ನಿಂತಾರಲ್ಲೊ
ನಮ್ಮವ್ವ

ನಮ್ಮವ್ವ

ನಮ್ಮವ್ವ

ಎದಿಮ್ಯಾಲಿನ ಸೀರಿ
ಸೆರ್ಗ ಜಾರಿದ್ರ
ಹೊದ್ಕೊಬೋದು
ಕೇಳವ್ವ...
ಎದಿಯಾಗಿನ ಮನಸ್ಸ
ಒಮ್ಮೆ ಜಾರ್ತಂದ್ರ...
ಸಂಭಾಳ್ಸೋದು ಭಾಳ
ಕಷ್ಟೈತೊ ನಮ್ಮವ್ವ

ಹೀಗೆ

ಮನಸಿನ ನಿರ್ಭಾವತನಕ್ಕೆ
ಮೂಕ ಸಾಕ್ಷಿಯು ನಾನಿಲ್ಲಿ
ಬಾಗಿಲು ಹಾಕಿದವರಾರು? ಗೊತ್ತಿಲ್ಲ...
ಹುಡುಕಿ, ಸುಮ್ಮನೆ ಕುಳಿತಿರುವೆನೀಗ ಕೈ ಚೆಲ್ಲಿ

ಬಾಗಿಲುಗಳಿದ್ದಿದ್ದರೆ ಎಷ್ಟು ಚೆಂದವಿರುತ್ತಿತ್ತು
ಬೀಗ ಹಾಕಿಕೊಂಡು, ಸುಮ್ಮನೆ ಕುಳಿತುಕೊಳ್ಳಬಹುದಿತ್ತು
ನೆರೆ ಮನೆಯವರ ಜಗಳವು ಹೊಸ್ತಿಲು ದಾಟಿ
ಒಳ ಬರುತ್ತಿರಲಿಲ್ಲ, ತೆರದ ಕಿಟಕಿಗಳಿಂದಾದರೂ...
ನೆಮ್ಮದಿಯನ್ನು ಕಂಡುಕೊಳ್ಳಬಹುದಿತ್ತು.

ಹೇಗೆ ತೆರೆಯಲಿ ಕಿಟಕಿಯನ್ನೂ ಧೈರ್ಯಮಾಡಿ!!!
ಸುತ್ತಲಿಂದಲೂ...ಸುತ್ತಿ..ಸುತ್ತಿ... ಸುಳಿಸುಳಿಯಾಗಿ
ಕೊಳೆತ‌ ಮನಸುಗಳ ವಾಸನೆಯೆ, ಹರಡುತಿಹುದಲ್ಲ!!!
ನನ್ನ ಮನೆಯಲ್ಲಿಯೇ ನಾ ಮೂಗು ಮುಚ್ಚಿಕೊಂಡು
ಕುಳಿತುಬಿಡಲೇ?

ಹುಚ್ಚನೆಂದುಬಿಡುವುದಿಲ್ಲವೆ!!!? ಅನ್ನುವುದೇನು?
ಕರೆಯುತ್ತಾರೆ, ಹುಟ್ಟಿಸುತ್ತಾರೆ, ಬರೆಯುತ್ತಾರೆ..
ಊರ ತುಂಬೆಲ್ಲಾ  ಸಸಿ ನೆಟ್ಟು ಬರುತ್ತಾರೆ, ಆಗಾಗ
ಬೇರೆಯವರ ಕೈಯಿಂದ ನೀರನ್ನು ಹನಿಸುತ್ತಾರೆ.

ಸುಮ್ಮನಿದ್ದುಬಿಡಲೆ.... ಹೇಡಿ ಎನ್ನುತ್ತಾರೆ, ಮಾತನಾಡಿ
ಬಿಡಲೆ... ಅಯ್ಯಯ್ಯೊ!!! ಬಾಯ್ಬಡಕ ಎನ್ನುವುದಿಲ್ಲವೆ.
ಹೇಗೆ ಇರಲಿ ನಾನು.. ಕುರಿಯಂತೆ, ಸಾಗುತಿರಲೆ ಮಂದೆಯೊಳಗೆ
ಹೆಜ್ಜೆ ಹಾಕಿದರೆ ನನ್ನ ಗಮ್ಯ...? ಎಲ್ಲಿಯದು ಬರೀ ಶೂನ್ಯ!!!
ಅಕ್ಷರದ ಲೋಕದಲ್ಲೂ ತಾರತಮ್ಯ!!, ಹೇಗಿದ್ದುಬಿಡಲಿ ನಾನು ಸೌಮ್ಯ?

ಬೇಕಿದೆ ನನ್ನ ಮನಸ್ಸಿನ ಬಾಗಿಲಿಗೊಂದು ಕೀಲಿ ಕೈ
ಎತ್ತಿಡಬೇಕಿದೆ, ಯಾರ ಕೈಗೂ ಸಿಗದ ಹಾಗೆ,
ಉಸಿರಬೇಕಿದೆ ಒಂದೆ ಸಲವಾದರು, ನೆಮ್ಮದಿಯ ಉಸಿರನು ಉಸಿರುಗಟ್ಟಿಸುವವರ ಮಧ್ಯದಲ್ಲೆ... ಕಾರಣ
ಬದುಕಬೇಕಿದೆಯಲ್ಲ ನಾನೂ... ಈ ಜಗದಲ್ಲೆ!!

ನಮ್ಮವ್ವ

ಕನ್ನುಡಿ‌ ಮುಂದ
ನಿಂತ್ಗೊಂಡ, ಹಣ್ಗಿಲೆ
ತಲೀ ಕೂದ್ಲಾನ
ಬಾಚ್ಗೊಳ್ಳಾಕ
ಬರುವಲ್ದು ನೋಡವ್ವ...
ವಲಿ ಮುಂದ
ಕುಂದ್ರಿಸಿ, ಕೊಣ್ಗಿ 
ಕೊಟ್ಟು... ಒಂದೊಬ್ಬಿ
ರೊಟ್ಟಿ ಬಡಿಯಂತಾರಲ್ಲೊ
ನಮ್ಮವ್ವ..

ನೆತ್ತಿ ಮ್ಯಾಲಿನ
ಬಿಸ್ಲ್
ತಡ್ಕೊಳ

ನಮ್ಮವ್ವ

ಕನ್ಯೆ ನೋಡೊ ಮುಂದ
ಹುಡ್ಗಿ ಬಂಗಾರ..ಬಂಗಾರ
ಆಗೀರ್ಬೆಕು ಅಂತಿರ್ತಾರ
ನೋಡವ್ವ...
ಬಂಗಾರದಂತ ಹುಡ್ಗಿ
ಸಿಕ್ಕ ಮ್ಯಾಲ, ಕಬ್ಬಿಣ್ದಂಗ
ಕಾಸಿ...ಕಾಸಿ ಬಡಿತಾರಲ್ಲೊ
ನಮ್ಮವ್ವ.

ಹುಡ್ಗಿ ಲಕ್ಷ್ಮೀ ಇದ್ದಂಗಿರ್ಲಿ
ಅಂತಂದ, ಮೈ ತುಂಬಾ ಲಕ್ಷ್ಮೀ
ಹಾಕ್ಕೊಂಡಕ್ಕಿನ ಮನಿ
ತುಂಬ್ಸಕೋತಾರು
ನೋಡವ್ವಾ...
ನಡೆಯೊ ಮುಂದ
ಲಕ್ಷ್ಮೀ ಕಟಾಕ್ಷ ಚೂರ
ಕಮ್ಮ್ಯಾದ್ರ...ಹಟ್ಟಿ 
ಹೊಸ್ತಲಾನ ದಾಟಿಸಿ
ಬಿಡ್ತಾರಲ್ಲೊ ನಮ್ಮವ್ವ

ಹೆಣ್ಣಿನ ಕಣ್ಣೀರ್ಗೆ
ಬೆಲೆ ಐತಿ ಅಂದಾರು,
ನ್ಯಾಯದ ತಕ್ಕಡ್ಯಾಗಿಟ್ಟು
ತೂಗಿ ನೋಡೊರಾದ್ರು
ಯಾರವ್ವ...
ಆಕಿ ಎದಿ ಮ್ಯಾಲಿನ
ಸೆರ್ಗ ಎಳಿಯೊರದಾರು...
ಮನಸ್ಸನ್ನ ಅರಿಯೊರು
ಯಾರ ಅದಾರೊ ನಮ್ಮವ್ವ

ತಮ್ಮಾ

ರೊಕ್ಕದ ಮಾರಿ ನೋಡಿ...
ಹಿಂದ ನಿಂತೋರ ನಂಬ್ಕಿ ಕುತ್ಗಿ
ಮೂರಿಬ್ಯಾಡೊ ತಮ್ಮಾ...
ಗೊತ್ತಿಲ್ಲೇನೊ? ಲಕ್ಷ್ಮೀ.. ಚಂಚಲ್ದಾಳ
ಇವತ್ತಿಲ್ಲೆ, ನಾಳೆ ಅಲ್ಲೆ, ಆಮ್ಯಾಕ
ಹಣಾ ಕೊಟ್ಟ ನಂಬ್ಕಿನ ಕೊಂಡ ತರಾಕ
ಆಗ್ತೈತೇನೊ ತಿಮ್ಮ

ಚಿಉ

ನನ್ನದೂ...
ಇಲ್ಲಿ ಇದೆ ಪಾಡು
ಗೆಳತಿ!
ನಿ ಕುಳಿತುಕೊಂಡ
ಕೆರೆ ದಂಡೆಯೇನೊ
ಗಟ್ಟಿಯಿದ್ದ ಹಾಗಿದೆ...
ನಿನ್ನ ನೆನೆದ ಮನದ
ದಂಡೆಯಿಲ್ಲಿ
ಮೆತ್ತಗಾಗಿದೆ.

ಮೌನವಾಗಿ
ಹೀಗೆ....
ಗಿಡದ ನೆರಳನಲ್ಲಿ
ನಿಂತುಕೊಳ್ಳಬೇಡ
ಗೆಳತಿ...
ಬಿಸಿ ಬರುವ
ತಂಗಾಳಿಯಲ್ಲಿ
ಎದೆಯ ಮಾತುಗಳನ್ನು
ಕಳುಹಿಸಿ ಕೊಟ್ಟಿದ್ದೇನೆ,
ಆಲಿಸದೆ...
ಸುಮ್ಮನಿರಬೇಡ.

ನಾ ಹೇಳುವ
ಮಾತುಗಳೆಲ್ಲ
ಕವಿತೆಗಳಾಗಿವೆ!
ನೀ ಹೇಳುವ
ಮಾತುಗಳಿಗೆ 
ಅವುಗಳೆಲ್ಲ....
ಈಗ
ಕಿವಿಯಾಗಿವೆ!

ಸೃಷ್ಟಿಯ
ಸೊಬಗದು
ಎಂದಿಗೂ
ಮುಗಿಯದ
ಯಾನ!!
ನೋಡುತ್ತಲೆ...
ಮಾಡುತ್ತಿರಬೇಡ
ಕಾಲಹರಣ..
ಮುರಿದುಬಿಡು
ಇಂದಾದರು
ಬಿಗು ಮೌನ!!

ಉಕ್ಕುವ ಬೇವರಿನ
ಬಗ್ಗೆ ಚಿಂತಿಸಬೇಡ...
ಅದು ಕಾಮದಲ್ಲೂ
ಹರಿಯುವುದು...
ಎಂಟಂಕಣದ
ಅರಮನೆಯೇನಿಲ್ಲ
ಬಂದು ಸೇರೊಮ್ಮೆ
ತೋಳ್ಬಂಧನದಲಿ
ಒಲವ ಸುಧೆಯೆ
ಹರಿಯುವುದು...

ಕಾಮ!!!!!!
ಬೇಡ...ಬೇಡವೆನ್ನುತಲೆ
ವಂಶಗಳೆ ಹುಟ್ಟಿ...
ಅಳಿದು ಹೋಗಿವೆ
ಈ ಮಣ್ಣಿನಲ್ಲಿ...
ಎಸಳು ಹೂಗಳನ್ನು
ಹೊಸಕಿ ಹಾಕುತ್ತಿರುವರು
ಕರುಣೆ ಇಲ್ಲದಲಿ..
ಮರೆತು ಬಿಟ್ಟೆಯಾ?
ಕಾಮಸೂತ್ರದ
ಕಟ್ಟನ್ನು ಕಟ್ಟಿಕೊಟ್ಟ
ಕೋಟೆಯಿದೆಂಬುದನು...
ಮರೆತುಬಿಡು, ಹೊರಗೆ
ಬಂದುಬಿಡು ಮೈ ಮೈಲಿಗೆಗಳಿಂದಾಚೆ
ಮಗುವಾಗಿ ಬಿಡು 
ಮಡಿಲೊಳಗೊಮ್ಮೆ... ತೇಲಿಸಿ
ಕರೆದೊಯ್ದು ಬಿಡುವೆ ಈ
ಲೋಕದಾಚೆ...
ಅಲ್ಲಿ ನವರಸಗಳ ಹಂಗಿಲ್ಲ
ಇವರು ಹೀಗೇಕೆ ಎಂದು ಹಂಗೀಸುವರು ಇಲ್ಲ...

ಬಿಟ್ಟು ಹೋದೆಯೆಂದು
ನಾನೇನು
ಸಾಯುವುದಿಲ್ಲ!!!
ಸಾಯುವೆನೆಂದರೆ?
ನಿನ್ನ ನೆನಪುಗಳು
ಬಿಡುವುದಿಲ್ಲ!!

ಸಿಂಹವೂ...
ಇಂದು ಹಳ್ಳಕೆ
ಬಿದ್ದಿದೆ!!!
ಉರಿದುರಿದು
ಮೆರೆಯುತ್ತಿದ್ದವರು
ಸದ್ದಿಲ್ಲದೆ ಮಣ್ಣಲ್ಲಿ
ಹೂತು ಹೋದದ್ದು
ಎಷ್ಟು ಜನರಿಗೆ
ಗೊತ್ತಿದೆ!!

ಎದೆಗೆ ಸುಧೆಯನ್ನು
ಸುರಿಯುತ್ತೇನೆ
ಎಂದವರು...
ಹೊಟ್ಟೆಗೆ ಹಾಲಾಹಲವನ್ನೆ
ಕುಡಿಸಿಬಿಟ್ಟರಲ್ಲ..!!
ಬೆನ್ನಿಗೆ ಚೂರಿ
ಹಾಕಿದ್ದರು ಚಿಂತಿಸುತ್ತಿರಲಿಲ್ಲ,
ನಂಬಿಕೆಯ ಕತ್ತನ್ನೆ
ಹಿಸುಕಿಬಿಟ್ಟರಲ್ಲ...!!

ಎಷ್ಟು ಮತ್ತು
ತುಂಬಿದೆ ಈ
ಒಂಟಿ 
ಕಣ್ಣಿನಲ್ಲಿ....!!!
ನೋಡುಗರ
ಎದೆ ಬಡಿತವು
ನಿಂತು ಹೋಗುವುದೇನೊ?
ಈ ಕ್ಷಣದಲ್ಲಿ!!!

ನನಗೂ...
ಮತ್ತೊಬ್ಬರ ಬೆನ್ನ
ತುಳಿದು, ಮೇಲೆ
ಹೋಗಲು ಸಾಕಷ್ಟು
ಅವಕಾಶಗಳಿವೆ!
ಹೀಗೆ ಹೋದಾಗ,
ಕೀಳರಿಮೆಯೆಂಬ 
ರಣಹದ್ದುಗಳು...
ನನ್ನನು ಕುಕ್ಕಿ
ತಿಂದು ಬಿಡುತ್ತವೆ!!

ಮೌಲ್ಯವಿದ್ದರೆ...
ಹರಿದ ನೋಟು
ಚಲಾವಣೆಗೊಳ್ಳುವುದು!!
ಬರೀ...ಧನವನ್ನೆ
ತುಂಬಿಟ್ಟುಕೊಳ್ಳುತ್ತಿದ್ದರೆ?
ಮಾನವೀಯ ಮೌಲ್ಯ
ದ್ವಿಗುಣಗೊಳ್ಳದು!!

ನಮ್ಮನೂ...
ಬೆಳೆಸುತ್ತಿದ್ದಾರೆ
ಎಂದುಕೊಳ್ಳುವುದು
ತಪ್ಪು...!!!
ನಮ್ಮಿಂದಲೆ
ಅವರು
ಬೆಳೆಯುತ್ತಿದ್ದಾರೆ
ಇದು 
ಒಪ್ಪು..!!!

ಕಲಬೆರಕೆ ಮಾಡಲು
ಬಾರದ, ತೆಂಗಿನಕಾಯಿಯ
ನೀರು... ಒಮ್ಮೊಮ್ಮೆ
ಹುಳಿಯಾಗಿರುವುದು
ಸಾಕಿ...

ಶುಭವಾಗಲೆಂದೆ
ದೇವರ ಮುಂದೆ
ಒಡೆಯುತ್ತಾರೆ
ಕಾಯಿ...!!!
ಶುಭ ಘಳಿಗೆ
ಬರುವವರೆಗಾದರೂ
ನೀನು ಸ್ವಲ್ಪ
ಕಾಯಿ...!!

ನಿದಿರೆ 
ಮಾಡಲು 
ಮುಚ್ಚಿಕೊಳ್ಳಲೆಬೇಕು
ಕಣ್ಣು ರೆಪ್ಪೆಗಳನ್ನು !!
ಮಲಗುವ ಮುಂಚೆ...
ನಾವಿಬ್ಬರು 
ಮುಚ್ಚಿಕೊಳ್ಳಲೆಬೇಕು
ಕೋಣೆಯ ಬಾಗಿಲನ್ನು !!!

ಹುಟ್ಟುತ್ತಲೆ
ಸಾವನ್ನು ಬೆನ್ನಿಗೆ
ಕಟ್ಟಿಕೊಂಡು
ಬಂದವರು ನಾವು!!
ಬಂದಾಗ ಬರಲಿ...
ಅಲ್ಲಿಯವರೆಗಾದರೂ
ತೆಕ್ಕೆಯಲಿ ಕೊಡುತ್ತಿರು
ನೀ... ಪ್ರೀತಿಗೆ
ಕಾವು!!!

ನಾಲಿಗೆಯ
ತುದಿಯಲ್ಲಿ
ಕಾರ್ಕೊಟಕ
ವಿಷವು ತುಂಬಿದೆ
ಕಚ್ಚಿಸಿಕೊಂಡವನು
ನಾನೊಬ್ಬನೇನಾ?
ಮದ್ದಿಲ್ಲದೆ
ತ್ರೇತಾಯುಗದಲ್ಲಿ
ಇದಕ್ಕೆ ಸೀತೆಯು
ಬಲಿಯಾಗಿದ್ದಾಳೆ
ಅವಳಿಗಿಂತಲೂ...
ನಾನು ದೊಡ್ಡವನಾ?

ಮರೆತಿಲ್ಲ
ನಾನು... ಹಳೆ
ಬಾವಿಯ ಕಟ್ಟೆ
ಬರುತ್ತಿದ್ದೆಯಲ್ಲ
ಒಗೆಯಲು ನೀನು
ಬಟ್ಟೆ
ನೀರನ್ನು ಸೇದಿ
ಹಾಕಲು 
ಎಷ್ಟೊಂದು
ಬಲವಿದ್ದವು ನನ್ನ
ರಟ್ಟೆ
ಸೇದಿಸಿಕೊಂಡು
ನೀನು ನನಗೇನು
ಕೊಟ್ಟೆ

ಅವಳನ್ನು
ಕಲ್ಪನೆಗಳ
ಭಾವದಲ್ಲಿ
ಬಂದಿಸಿಟ್ಟೆ....
ಕವಿಯಾಗಿ!!
ಬಿಗಿದಪ್ಪಿ
ಕೊಳ್ಳಲಾಗುತ್ತಿಲ್ಲ!!!
ವಾಸ್ತವದಲ್ಲಿ
ಪ್ರೇಮಿಯಾಗಿ...

ಅವಳು
ತಲೆಯನ್ನು
ನೇವರಿಸಿ...ನೇವರಿಸಿ
ಹಣವನ್ನು ಖಾಲಿ
ಮಾಡಿದಳು...
ಜೊತೆಗೆ ತಲೆಯೂ
ಬೋಳಾಯಿತು!!!
ಬೋಳಾದ ತಲೆ,
ಖಾಲಿಯಾದ ಬಕ್ಕಣವನ್ನು
ನೆನೆಯುತ್ತ ಕೂರುವುದೆ
ನನಗೊಂದು
ಗೋಳಾಯಿತು.

ಗೀತಾಧರ ಅವರ ಕವನಕ್ಕೆ

ಅವಳ ನೋಡಿ
ಹುಚ್ಚೆದ್ದು
ಕುಣಿದಿದೆ ಈ
ಮನಸಿನಾ
ಕೋಡಿ...
ರಾತ್ರಿಗಳು
ಕೂಡಾ 
ಹಗಲಾಗಿಬಿಟ್ಟಿವೆ..
ಅವಳ ಸಂಗವ
ಬೇಡಿ..

ಪರರರನ್ನು ತುಳಿದು
ಬದುಕವ ಕಲೆಯನ್ನು
ಈಗ ಯಾರಿಗೂ
ಹೇಳಿ ಕೊಡುವ
ಹಾಗಿಲ್ಲ!!!
ನಮ್ಮನ್ನು ತುಳಿದರು
ಸರಿ...
ಮತ್ತೊಬ್ಬರನು ಜೊತೆಯಲ್ಲಿ
ಏಳ್ಗೆಯತ್ತ ಕರೆದುಕೊಂಡೆ
ನಡೆಯೋಣ!!

ಕಾಗದಗಳಿಲ್ಲವೆಂದ
ಮೇಲೆ.... ಹೇಳಿಕೊಳ್ಳಬೇಡ
ಸುಂಕದಾರರ ಮುಂದೆ
ನಿನ್ನ ಪಾಡು!!
ಕೊಟ್ಟುಬಿಡೊಂದು
ಬಣ್ಣದ ನೋಟು..
ಅವರಿಗೂ ಸಾಕಾಗಿರುತ್ತದೆ
ಕೇಳಿ...ಕೇಳಿ... ನಮ್ಮಂಥವರ
ಹಾಡು!!

ಏಳೂರ
ನೀರನ್ನು ಹುಡುಕಬೇಡ
ಹುಡುಗಿ ಮುಳುಗಿಸಲು..
ಕೆರೆಗಳೆಲ್ಲ
ಬತ್ತಿ ಹೋಗಿವೆ!!!
ಚಿಂತಿಸಬೇಡ,
ತೊಟ್ಟು ವಿಷವನ್ನು
ಕೊಟ್ಟುಬಿಡು
ಕುಡಿದು....ಸತ್ತು
ಹೋಗುವೆ!!!

ನೆನಪಿಸಬೇಡ
ಮೂರಿದು ಬಿದ್ದ
ಹಳೆಯ
ಮಾತು!!
ಸಂಬಂಧವೆ
ಹಳಸಿದ ಮೇಲೆ
ಬೇಕೆ? ಹೊಸ
ಮಾತು!!

ನಾ ಕೊಟ್ಟ ಪ್ರೇಮದ ಗುಲಾಬಿ ತೊರೆದು
ಒಲವ ಎಸಳುಗಳನೆಲ್ಲವ ಹರಿದು
ಉಳಿದ ಮುಳ್ಳಿನ ಕಡ್ಡಿಯ ನನ್ನೇದೆಗೆ ಇರಿದು
ಹೊರಟು ಹೋದೆಯಲ್ಲ.. ಮರು ಮಾತನಾಡದೆ
ನನ್ನನು ತೊರೆದು

ಪ್ರೀತಿಯಲಿ
ನೀನೇನೊ
ನನ್ನೆದೆಯ ಮಧುವ
ಹೀರಿ ಹೋದೆ...
ಮರಳಿ ಬಾರದೆ
ಹೋದ ನಿನ್ನನು 
ನೆನೆ ನೆನೆದು ನಾ
ಈ ಪ್ರೀತಿಯಲಿ
ಬಾಡಿ ಹೋದೆ...

ವೀಣೆಯಾಗಬಾರದೆ ಮನಸೆ
ಅವಳೊಲವಿನ ರಾಗವ ಮೀಟಲು
ಅವಳಿಲ್ಲದ ಈ ಸಮಯದಲಿ
ವಿರಹಕೆ ಹಾಡಿ.... ಹಾಡಿ....
ಮಲಗಿಸಲು..

ಎಲ್ಲ ವಿಷಯಗಳನ್ನೂ...
ಗಂಟಲಲ್ಲಿಯೆ 
ಹಿಡಿದಿಟ್ಟುಕೊಳ್ಳಲು
ನಾನೇನು
ನೀಲಕಂಠನಲ್ಲ!!
ಹಾಗಂತ, ಕಂಡ
ಕಂಡವರ ಮೇಲೆ
ವಿಷ ಕಾರುವ
ಘಟಸರ್ಪವು
ನಾನಲ್ಲ!!!

ಕೊಳಕು ಬಟ್ಟೆಗಳನ್ನು
ತೊಳೆಯಲು ಈಗ
ಅಗಸನಿಗೇನೊ
ಕೊಡಬೇಕಿಲ್ಲ!
ಇದಕ್ಕಾಗಿಯೆ ಮೆಷಿನ್
ಒಂದು ಬಂದಿದೆ.
ಹೀಗೆ ನಂ ಮನಸಿನ
ಕೊಳೆಯನ್ನು ತೊಳೆದುಕೊಳ್ಳಲು
ಇನ್ನೊಬ್ಬರಿಗೆ ಅವಕಾಶವನ್ನು
ಮಾಡಿಕೊಡುವುದು ಬೇಡ

ಒಂದು ಹೆಣ್ಣಿನ
ಬಗ್ಗೆ ಮಾತನಾಡುವಾಗ
ನೂರು ಬಾರಿ
ಯೋಚಿಸು!
ತಪ್ಪು ಮಾಡಿದ್ದಾಳೆ
ಎಂದವರಿದಾಗ
ಕೆನ್ನೆಗೆರಡು
ಬಾರಿಸು!

ಮದ್ಯವನ್ನು
ಕುಡಿದು ಮಲಗಿದವರನ್ನು
ಬೇಕಿದ್ದರೆ
ಎಬ್ಬಿಸಬಹುದು
ಸಾಕಿ....
ಮದವನ್ನು
ಏರಿಸಿಕೊಂಡು
ಮಲಗಿಕೊಂಡವರನ್ನು
ಎಬ್ಬಿಸಲಾಗದು

ಗೆಳತಿ..
ನಿನ್ನ ಮೋಹಕ ನಗುವಿನಲಿ
ತೂಗಿದೆ ಎನ್ನೆದೆಯ ಜೋಕಾಲಿ 
ಆ ಕಾಲ್ಗೆಜ್ಜೆಯ ಸದ್ದಿಗೆ ಸೋತ
ಒಲವಿದು... ಜಿಕುತಿದೆ ನಿನ್ನದೆ
ನೆನಪಿನಲಿ.

ಮನ್ ಕಿ ಬಾತ್ ತುಮ್ ನಾ ಕಹೀ
ಹೊಂಟೊಸೆ..
ಮೈ ಜಾನ್ ಜಾತಾ ಹ್ಞೂಂ ಜಾನೆಮನ್
ತೇರಿ ಆಂಖೋಸೆ...

ನೀ ಕೊಟ್ಟು ಹೋದ
ಮುತ್ತಿನ ಮಳೆಗಳ
ಮತ್ತೆ... ಇಳಿದಿಲ್ಲವಿನ್ನೂ
ಆಷಾಡವು ಕೂಡುವ
ಮೊದಲೆ... ಇನ್ನಷ್ಟು
ಮುತ್ತುಗಳ ಮಳೆಯ
ಸುರಿಸಿ ಹೋಗಬಾರದೆ 
ತವರಿಗೆ...

ಕೆಲವರು 
ನಗುವುದಕ್ಕೆ
ನಾವು ಕೊಡಲೆಬೇಕು
ನಗದು!!!
ಮರಳಿಸುವೀರಾ
ಎಂದು ಕೇಳಿದಾಗ,
ನಿಮಗೆ ಉತ್ತರವು
ಸಿಗದು!!!

ಸದಾ ಬೆಂಕಿಯುಂಡೆಯನೆ
ಉಗುಳುತ್ತಿದ್ದ
ತೋಪು ಇಂದು
ನಿಶ್ಯಬ್ದವಾಗಿದೆ!!
ಅವಳು ಯಾವ
ಘಳಿಗೆಯಲ್ಲಿ ಕೈ
ಇಟ್ಟು ಹೋದಳೊ...?
ಅಂದಿನಿಂದಲೂ
ತಣ್ಣಗಾಗಿದೆ!!!

ಆದರ್ಶಗಳಲ್ಲಿ
ವೈರುದ್ಯವಿದ್ದವರೂ...
ರಾಜಿಯಾಗಿ
ರಾಜ್ಯಭಾರವನ್ನು
ಮಾಡುತ್ತಾರೆ!!