ಊರ ಹೊತ್ತ ಊರ್ಸಿದವ್ರನ್ನ...ಇವತ್ತ
ಊರ ತುಂಬಾ ಮೆರವಣ್ಗಿ ಮಾಡ್ಕೊಂಡ ಹೊಂಟಾರ್ನೋಡೊ...ತಮ್ಮಾ
ನಾಕ್ಮಂದಿ ಮುಂದ ಶಿಕ್ಷೆ ತಗೋಬೇಕಾದವ್ರು
ಅದ ನಾಕ್ಮಂದಿಗೆ ಬುದ್ದಿ ಹೇಳೊ ಕಟ್ಟಿ ಏರಿಯ್ಯಾರ
ನೋಡು..ಇಂತದ್ಕ ಏನೊ? ನ್ಯಾಯದವ್ವನ ಕಣ್ಣಿಗೆ
ಕಪ್ಪನ ಬಟ್ಟಿ ಕಟ್ಬಿಟ್ಟಾರು ನೋಡ್ತಿಮ್ಮಾ..
ಹತ್ತಿ ಬಂದವರ್ಯಾರಿಗೂ ತುಳಿದ ಬಂದ
ಮೆಟ್ಲು ನೆಪ್ಪಿರೊದಿಲ್ಲ ನೋಡ್ತಮ್ಮಾ...
ಖಾದಿ ತೊಟ್ಟೊರೆಲ್ಲ...ಗಾಂಧಿಗಳಾಗ್ತರೇನೊ
ತಮ್ಮಾ...
ಹತ್ತ ಹೆಜ್ಜಿ ಹಳ್ಳಿಯಿಂದ ಹಳ್ಳಿಗೆ ಹತ್ತ ಹೆಜ್ಜಿ ಕಾಲ್ಕಿತ್ತಿ
ಇಡ್ಲಿಲ್ಲಂದ್ರ...
ಕ್ವಾಟಿಯಂತ ಮನಿ ಕಟ್ಟಸ್ಕೊಂಡು, ಕಾಯಾಕ ಹುಲಿಯಂತಾದೊಂದು ನಾಯಿನ ಸಾಕ್ಕೊಂಡು..
ಊರೂರ ಕೇರಿ ಮಂದಿ ಮುಂದ ನಿಂತ್ಗೊಂಡು
ಸಮಾನಾತೆಯ ಪಾಠ ಮಾಡಿ ಬರ್ತಾರು ನೋಡ್ತಮ್ಮಾ..
No comments:
Post a Comment