ನನ್ನದೂ...
ಇಲ್ಲಿ ಇದೆ ಪಾಡು
ಗೆಳತಿ!
ನಿ ಕುಳಿತುಕೊಂಡ
ಕೆರೆ ದಂಡೆಯೇನೊ
ಗಟ್ಟಿಯಿದ್ದ ಹಾಗಿದೆ...
ನಿನ್ನ ನೆನೆದ ಮನದ
ದಂಡೆಯಿಲ್ಲಿ
ಮೆತ್ತಗಾಗಿದೆ.
ಮೌನವಾಗಿ
ಹೀಗೆ....
ಗಿಡದ ನೆರಳನಲ್ಲಿ
ನಿಂತುಕೊಳ್ಳಬೇಡ
ಗೆಳತಿ...
ಬಿಸಿ ಬರುವ
ತಂಗಾಳಿಯಲ್ಲಿ
ಎದೆಯ ಮಾತುಗಳನ್ನು
ಕಳುಹಿಸಿ ಕೊಟ್ಟಿದ್ದೇನೆ,
ಆಲಿಸದೆ...
ಸುಮ್ಮನಿರಬೇಡ.
ನಾ ಹೇಳುವ
ಮಾತುಗಳೆಲ್ಲ
ಕವಿತೆಗಳಾಗಿವೆ!
ನೀ ಹೇಳುವ
ಮಾತುಗಳಿಗೆ
ಅವುಗಳೆಲ್ಲ....
ಈಗ
ಕಿವಿಯಾಗಿವೆ!
ಸೃಷ್ಟಿಯ
ಸೊಬಗದು
ಎಂದಿಗೂ
ಮುಗಿಯದ
ಯಾನ!!
ನೋಡುತ್ತಲೆ...
ಮಾಡುತ್ತಿರಬೇಡ
ಕಾಲಹರಣ..
ಮುರಿದುಬಿಡು
ಇಂದಾದರು
ಬಿಗು ಮೌನ!!
ಉಕ್ಕುವ ಬೇವರಿನ
ಬಗ್ಗೆ ಚಿಂತಿಸಬೇಡ...
ಅದು ಕಾಮದಲ್ಲೂ
ಹರಿಯುವುದು...
ಎಂಟಂಕಣದ
ಅರಮನೆಯೇನಿಲ್ಲ
ಬಂದು ಸೇರೊಮ್ಮೆ
ತೋಳ್ಬಂಧನದಲಿ
ಒಲವ ಸುಧೆಯೆ
ಹರಿಯುವುದು...
ಕಾಮ!!!!!!
ಬೇಡ...ಬೇಡವೆನ್ನುತಲೆ
ವಂಶಗಳೆ ಹುಟ್ಟಿ...
ಅಳಿದು ಹೋಗಿವೆ
ಈ ಮಣ್ಣಿನಲ್ಲಿ...
ಎಸಳು ಹೂಗಳನ್ನು
ಹೊಸಕಿ ಹಾಕುತ್ತಿರುವರು
ಕರುಣೆ ಇಲ್ಲದಲಿ..
ಮರೆತು ಬಿಟ್ಟೆಯಾ?
ಕಾಮಸೂತ್ರದ
ಕಟ್ಟನ್ನು ಕಟ್ಟಿಕೊಟ್ಟ
ಕೋಟೆಯಿದೆಂಬುದನು...
ಮರೆತುಬಿಡು, ಹೊರಗೆ
ಬಂದುಬಿಡು ಮೈ ಮೈಲಿಗೆಗಳಿಂದಾಚೆ
ಮಗುವಾಗಿ ಬಿಡು
ಮಡಿಲೊಳಗೊಮ್ಮೆ... ತೇಲಿಸಿ
ಕರೆದೊಯ್ದು ಬಿಡುವೆ ಈ
ಲೋಕದಾಚೆ...
ಅಲ್ಲಿ ನವರಸಗಳ ಹಂಗಿಲ್ಲ
ಇವರು ಹೀಗೇಕೆ ಎಂದು ಹಂಗೀಸುವರು ಇಲ್ಲ...
ಬಿಟ್ಟು ಹೋದೆಯೆಂದು
ನಾನೇನು
ಸಾಯುವುದಿಲ್ಲ!!!
ಸಾಯುವೆನೆಂದರೆ?
ನಿನ್ನ ನೆನಪುಗಳು
ಬಿಡುವುದಿಲ್ಲ!!
ಸಿಂಹವೂ...
ಇಂದು ಹಳ್ಳಕೆ
ಬಿದ್ದಿದೆ!!!
ಉರಿದುರಿದು
ಮೆರೆಯುತ್ತಿದ್ದವರು
ಸದ್ದಿಲ್ಲದೆ ಮಣ್ಣಲ್ಲಿ
ಹೂತು ಹೋದದ್ದು
ಎಷ್ಟು ಜನರಿಗೆ
ಗೊತ್ತಿದೆ!!
ಎದೆಗೆ ಸುಧೆಯನ್ನು
ಸುರಿಯುತ್ತೇನೆ
ಎಂದವರು...
ಹೊಟ್ಟೆಗೆ ಹಾಲಾಹಲವನ್ನೆ
ಕುಡಿಸಿಬಿಟ್ಟರಲ್ಲ..!!
ಬೆನ್ನಿಗೆ ಚೂರಿ
ಹಾಕಿದ್ದರು ಚಿಂತಿಸುತ್ತಿರಲಿಲ್ಲ,
ನಂಬಿಕೆಯ ಕತ್ತನ್ನೆ
ಹಿಸುಕಿಬಿಟ್ಟರಲ್ಲ...!!
ಎಷ್ಟು ಮತ್ತು
ತುಂಬಿದೆ ಈ
ಒಂಟಿ
ಕಣ್ಣಿನಲ್ಲಿ....!!!
ನೋಡುಗರ
ಎದೆ ಬಡಿತವು
ನಿಂತು ಹೋಗುವುದೇನೊ?
ಈ ಕ್ಷಣದಲ್ಲಿ!!!
ನನಗೂ...
ಮತ್ತೊಬ್ಬರ ಬೆನ್ನ
ತುಳಿದು, ಮೇಲೆ
ಹೋಗಲು ಸಾಕಷ್ಟು
ಅವಕಾಶಗಳಿವೆ!
ಹೀಗೆ ಹೋದಾಗ,
ಕೀಳರಿಮೆಯೆಂಬ
ರಣಹದ್ದುಗಳು...
ನನ್ನನು ಕುಕ್ಕಿ
ತಿಂದು ಬಿಡುತ್ತವೆ!!
ಮೌಲ್ಯವಿದ್ದರೆ...
ಹರಿದ ನೋಟು
ಚಲಾವಣೆಗೊಳ್ಳುವುದು!!
ಬರೀ...ಧನವನ್ನೆ
ತುಂಬಿಟ್ಟುಕೊಳ್ಳುತ್ತಿದ್ದರೆ?
ಮಾನವೀಯ ಮೌಲ್ಯ
ದ್ವಿಗುಣಗೊಳ್ಳದು!!
ನಮ್ಮನೂ...
ಬೆಳೆಸುತ್ತಿದ್ದಾರೆ
ಎಂದುಕೊಳ್ಳುವುದು
ತಪ್ಪು...!!!
ನಮ್ಮಿಂದಲೆ
ಅವರು
ಬೆಳೆಯುತ್ತಿದ್ದಾರೆ
ಇದು
ಒಪ್ಪು..!!!
ಕಲಬೆರಕೆ ಮಾಡಲು
ಬಾರದ, ತೆಂಗಿನಕಾಯಿಯ
ನೀರು... ಒಮ್ಮೊಮ್ಮೆ
ಹುಳಿಯಾಗಿರುವುದು
ಸಾಕಿ...
ಶುಭವಾಗಲೆಂದೆ
ದೇವರ ಮುಂದೆ
ಒಡೆಯುತ್ತಾರೆ
ಕಾಯಿ...!!!
ಶುಭ ಘಳಿಗೆ
ಬರುವವರೆಗಾದರೂ
ನೀನು ಸ್ವಲ್ಪ
ಕಾಯಿ...!!
ನಿದಿರೆ
ಮಾಡಲು
ಮುಚ್ಚಿಕೊಳ್ಳಲೆಬೇಕು
ಕಣ್ಣು ರೆಪ್ಪೆಗಳನ್ನು !!
ಮಲಗುವ ಮುಂಚೆ...
ನಾವಿಬ್ಬರು
ಮುಚ್ಚಿಕೊಳ್ಳಲೆಬೇಕು
ಕೋಣೆಯ ಬಾಗಿಲನ್ನು !!!
ಹುಟ್ಟುತ್ತಲೆ
ಸಾವನ್ನು ಬೆನ್ನಿಗೆ
ಕಟ್ಟಿಕೊಂಡು
ಬಂದವರು ನಾವು!!
ಬಂದಾಗ ಬರಲಿ...
ಅಲ್ಲಿಯವರೆಗಾದರೂ
ತೆಕ್ಕೆಯಲಿ ಕೊಡುತ್ತಿರು
ನೀ... ಪ್ರೀತಿಗೆ
ಕಾವು!!!
ನಾಲಿಗೆಯ
ತುದಿಯಲ್ಲಿ
ಕಾರ್ಕೊಟಕ
ವಿಷವು ತುಂಬಿದೆ
ಕಚ್ಚಿಸಿಕೊಂಡವನು
ನಾನೊಬ್ಬನೇನಾ?
ಮದ್ದಿಲ್ಲದೆ
ತ್ರೇತಾಯುಗದಲ್ಲಿ
ಇದಕ್ಕೆ ಸೀತೆಯು
ಬಲಿಯಾಗಿದ್ದಾಳೆ
ಅವಳಿಗಿಂತಲೂ...
ನಾನು ದೊಡ್ಡವನಾ?
ಮರೆತಿಲ್ಲ
ನಾನು... ಹಳೆ
ಬಾವಿಯ ಕಟ್ಟೆ
ಬರುತ್ತಿದ್ದೆಯಲ್ಲ
ಒಗೆಯಲು ನೀನು
ಬಟ್ಟೆ
ನೀರನ್ನು ಸೇದಿ
ಹಾಕಲು
ಎಷ್ಟೊಂದು
ಬಲವಿದ್ದವು ನನ್ನ
ರಟ್ಟೆ
ಸೇದಿಸಿಕೊಂಡು
ನೀನು ನನಗೇನು
ಕೊಟ್ಟೆ
ಅವಳನ್ನು
ಕಲ್ಪನೆಗಳ
ಭಾವದಲ್ಲಿ
ಬಂದಿಸಿಟ್ಟೆ....
ಕವಿಯಾಗಿ!!
ಬಿಗಿದಪ್ಪಿ
ಕೊಳ್ಳಲಾಗುತ್ತಿಲ್ಲ!!!
ವಾಸ್ತವದಲ್ಲಿ
ಪ್ರೇಮಿಯಾಗಿ...
ಅವಳು
ತಲೆಯನ್ನು
ನೇವರಿಸಿ...ನೇವರಿಸಿ
ಹಣವನ್ನು ಖಾಲಿ
ಮಾಡಿದಳು...
ಜೊತೆಗೆ ತಲೆಯೂ
ಬೋಳಾಯಿತು!!!
ಬೋಳಾದ ತಲೆ,
ಖಾಲಿಯಾದ ಬಕ್ಕಣವನ್ನು
ನೆನೆಯುತ್ತ ಕೂರುವುದೆ
ನನಗೊಂದು
ಗೋಳಾಯಿತು.
ಗೀತಾಧರ ಅವರ ಕವನಕ್ಕೆ
ಅವಳ ನೋಡಿ
ಹುಚ್ಚೆದ್ದು
ಕುಣಿದಿದೆ ಈ
ಮನಸಿನಾ
ಕೋಡಿ...
ರಾತ್ರಿಗಳು
ಕೂಡಾ
ಹಗಲಾಗಿಬಿಟ್ಟಿವೆ..
ಅವಳ ಸಂಗವ
ಬೇಡಿ..
ಪರರರನ್ನು ತುಳಿದು
ಬದುಕವ ಕಲೆಯನ್ನು
ಈಗ ಯಾರಿಗೂ
ಹೇಳಿ ಕೊಡುವ
ಹಾಗಿಲ್ಲ!!!
ನಮ್ಮನ್ನು ತುಳಿದರು
ಸರಿ...
ಮತ್ತೊಬ್ಬರನು ಜೊತೆಯಲ್ಲಿ
ಏಳ್ಗೆಯತ್ತ ಕರೆದುಕೊಂಡೆ
ನಡೆಯೋಣ!!
ಕಾಗದಗಳಿಲ್ಲವೆಂದ
ಮೇಲೆ.... ಹೇಳಿಕೊಳ್ಳಬೇಡ
ಸುಂಕದಾರರ ಮುಂದೆ
ನಿನ್ನ ಪಾಡು!!
ಕೊಟ್ಟುಬಿಡೊಂದು
ಬಣ್ಣದ ನೋಟು..
ಅವರಿಗೂ ಸಾಕಾಗಿರುತ್ತದೆ
ಕೇಳಿ...ಕೇಳಿ... ನಮ್ಮಂಥವರ
ಹಾಡು!!
ಏಳೂರ
ನೀರನ್ನು ಹುಡುಕಬೇಡ
ಹುಡುಗಿ ಮುಳುಗಿಸಲು..
ಕೆರೆಗಳೆಲ್ಲ
ಬತ್ತಿ ಹೋಗಿವೆ!!!
ಚಿಂತಿಸಬೇಡ,
ತೊಟ್ಟು ವಿಷವನ್ನು
ಕೊಟ್ಟುಬಿಡು
ಕುಡಿದು....ಸತ್ತು
ಹೋಗುವೆ!!!
ನೆನಪಿಸಬೇಡ
ಮೂರಿದು ಬಿದ್ದ
ಹಳೆಯ
ಮಾತು!!
ಸಂಬಂಧವೆ
ಹಳಸಿದ ಮೇಲೆ
ಬೇಕೆ? ಹೊಸ
ಮಾತು!!
ನಾ ಕೊಟ್ಟ ಪ್ರೇಮದ ಗುಲಾಬಿ ತೊರೆದು
ಒಲವ ಎಸಳುಗಳನೆಲ್ಲವ ಹರಿದು
ಉಳಿದ ಮುಳ್ಳಿನ ಕಡ್ಡಿಯ ನನ್ನೇದೆಗೆ ಇರಿದು
ಹೊರಟು ಹೋದೆಯಲ್ಲ.. ಮರು ಮಾತನಾಡದೆ
ನನ್ನನು ತೊರೆದು
ಪ್ರೀತಿಯಲಿ
ನೀನೇನೊ
ನನ್ನೆದೆಯ ಮಧುವ
ಹೀರಿ ಹೋದೆ...
ಮರಳಿ ಬಾರದೆ
ಹೋದ ನಿನ್ನನು
ನೆನೆ ನೆನೆದು ನಾ
ಈ ಪ್ರೀತಿಯಲಿ
ಬಾಡಿ ಹೋದೆ...
ವೀಣೆಯಾಗಬಾರದೆ ಮನಸೆ
ಅವಳೊಲವಿನ ರಾಗವ ಮೀಟಲು
ಅವಳಿಲ್ಲದ ಈ ಸಮಯದಲಿ
ವಿರಹಕೆ ಹಾಡಿ.... ಹಾಡಿ....
ಮಲಗಿಸಲು..
ಎಲ್ಲ ವಿಷಯಗಳನ್ನೂ...
ಗಂಟಲಲ್ಲಿಯೆ
ಹಿಡಿದಿಟ್ಟುಕೊಳ್ಳಲು
ನಾನೇನು
ನೀಲಕಂಠನಲ್ಲ!!
ಹಾಗಂತ, ಕಂಡ
ಕಂಡವರ ಮೇಲೆ
ವಿಷ ಕಾರುವ
ಘಟಸರ್ಪವು
ನಾನಲ್ಲ!!!
ಕೊಳಕು ಬಟ್ಟೆಗಳನ್ನು
ತೊಳೆಯಲು ಈಗ
ಅಗಸನಿಗೇನೊ
ಕೊಡಬೇಕಿಲ್ಲ!
ಇದಕ್ಕಾಗಿಯೆ ಮೆಷಿನ್
ಒಂದು ಬಂದಿದೆ.
ಹೀಗೆ ನಂ ಮನಸಿನ
ಕೊಳೆಯನ್ನು ತೊಳೆದುಕೊಳ್ಳಲು
ಇನ್ನೊಬ್ಬರಿಗೆ ಅವಕಾಶವನ್ನು
ಮಾಡಿಕೊಡುವುದು ಬೇಡ
ಒಂದು ಹೆಣ್ಣಿನ
ಬಗ್ಗೆ ಮಾತನಾಡುವಾಗ
ನೂರು ಬಾರಿ
ಯೋಚಿಸು!
ತಪ್ಪು ಮಾಡಿದ್ದಾಳೆ
ಎಂದವರಿದಾಗ
ಕೆನ್ನೆಗೆರಡು
ಬಾರಿಸು!
ಮದ್ಯವನ್ನು
ಕುಡಿದು ಮಲಗಿದವರನ್ನು
ಬೇಕಿದ್ದರೆ
ಎಬ್ಬಿಸಬಹುದು
ಸಾಕಿ....
ಮದವನ್ನು
ಏರಿಸಿಕೊಂಡು
ಮಲಗಿಕೊಂಡವರನ್ನು
ಎಬ್ಬಿಸಲಾಗದು
ಗೆಳತಿ..
ನಿನ್ನ ಮೋಹಕ ನಗುವಿನಲಿ
ತೂಗಿದೆ ಎನ್ನೆದೆಯ ಜೋಕಾಲಿ
ಆ ಕಾಲ್ಗೆಜ್ಜೆಯ ಸದ್ದಿಗೆ ಸೋತ
ಒಲವಿದು... ಜಿಕುತಿದೆ ನಿನ್ನದೆ
ನೆನಪಿನಲಿ.
ಮನ್ ಕಿ ಬಾತ್ ತುಮ್ ನಾ ಕಹೀ
ಹೊಂಟೊಸೆ..
ಮೈ ಜಾನ್ ಜಾತಾ ಹ್ಞೂಂ ಜಾನೆಮನ್
ತೇರಿ ಆಂಖೋಸೆ...
ನೀ ಕೊಟ್ಟು ಹೋದ
ಮುತ್ತಿನ ಮಳೆಗಳ
ಮತ್ತೆ... ಇಳಿದಿಲ್ಲವಿನ್ನೂ
ಆಷಾಡವು ಕೂಡುವ
ಮೊದಲೆ... ಇನ್ನಷ್ಟು
ಮುತ್ತುಗಳ ಮಳೆಯ
ಸುರಿಸಿ ಹೋಗಬಾರದೆ
ತವರಿಗೆ...
ಕೆಲವರು
ನಗುವುದಕ್ಕೆ
ನಾವು ಕೊಡಲೆಬೇಕು
ನಗದು!!!
ಮರಳಿಸುವೀರಾ
ಎಂದು ಕೇಳಿದಾಗ,
ನಿಮಗೆ ಉತ್ತರವು
ಸಿಗದು!!!
ಸದಾ ಬೆಂಕಿಯುಂಡೆಯನೆ
ಉಗುಳುತ್ತಿದ್ದ
ತೋಪು ಇಂದು
ನಿಶ್ಯಬ್ದವಾಗಿದೆ!!
ಅವಳು ಯಾವ
ಘಳಿಗೆಯಲ್ಲಿ ಕೈ
ಇಟ್ಟು ಹೋದಳೊ...?
ಅಂದಿನಿಂದಲೂ
ತಣ್ಣಗಾಗಿದೆ!!!
ಆದರ್ಶಗಳಲ್ಲಿ
ವೈರುದ್ಯವಿದ್ದವರೂ...
ರಾಜಿಯಾಗಿ
ರಾಜ್ಯಭಾರವನ್ನು
ಮಾಡುತ್ತಾರೆ!!
No comments:
Post a Comment