ಬಿಸಿ..ಬಿಸಿ ನೆತ್ತರನುಂಡು ಹಸಿಯಾಗಿ
ಹದಗೊಂಡ ನೆಲವಿದು..
ಮೀಸೆಯೂ ಮೂಡದ ರುಂಡಗಳ
ತ್ಯಾಗದ ಬಲಿದಾನದಲರಳಿದ ಮಣ್ಣಿದು
ಮಣ್ಣ ಕಣಕಣದಲೂ...ತಾಯಿ..ಮಡದಿ
ಸಹೋದರಿಯವರ ಕಣ್ಣೀರ ಹನಿಗಳ
ಬೇಸಗೊಂಡ ಭೂಮಿಯಿದು..
ಅವರ ಕಪಿಮುಷ್ಟಿಯೊಳು ಬಂಧಿಯಾದ ನಮ್ಮ
ಪಂಜರದ ಹಕ್ಕಿಯ ಬಿಡುಗಡೆಗೆ
ಯೌವ್ವನ..ಕುಂಕುಮ..ಶೀಲವನ್ನೆ
ಧಾರೆಯರೆದ ಪುಣ್ಯಭೂಮಿಯಿದು
ಅರಿವಿಲ್ಲದಾಗಿ ಹೋಯಿತೆ ಇಂದು....
ಬಂಧನದ ಹಕ್ಕಿಯ ಬಿಡುಗಡೆಗಾಗಿ..
ತಮ್ಮೆದೆಗೂಡಿನ ಹಕ್ಕಿಗಳನೆ ಹಾರಿಬಿಟ್ಟವರ
ನಾಳೆಗಳ ಕನಸುಗಳಿಗೆ ರಕ್ಕೆಯ ಕಟ್ಟಿಕೊಟ್ಟವರ
ಮನೆ ಮನಗಳಲು ಸಂತಸದ ದೀಪವ ಹಚ್ಚಿದವರ
ದುಡಿದನ್ನವನುಧರವು ಸಂತೃಪ್ತಗೊಳ್ಳುವಷ್ಟು
ಉಣ್ಣಲು.. ಅವಕಾಶಗಳ ಮಾಡಿಕೊಟ್ಟವರ
ಮರೆತು ಮಾತನಾಡುವೆವಲ್ಲ "ಬ್ರೀಟಿಷರ ಕಾಲದಲ್ಲೆ
ಚೆನ್ನಾಗಿತ್ತು " ಎಂದು..
ದುಡಿಯದುಣ್ಣುವವನಿಗೇನು ಗೊತ್ತು.. ಬೆವರಿನ ಬೆಲೆ
ಓದದೆ.. ಅರಿಯದೆ ಮಾತನಾಡುವ ಮೂಢನಿಗೇನು
ಗೊತ್ತು.. ಆಡುವ ಮಾತಿನ ಬೆಲೆ
ತಂದೆಯ ಹಣದಲ್ಲಿ ಮೋಜು ಮಾಡುವ..
ಇನ್ನೊಬ್ಬರನು ತುಳಿದಾದರೂ ಸರಿ ನಾ
ಮೇಲೆರಬೇಕೆಂಬುವ ಹುಚ್ಚು ಹಂಬಲ..
ಪರ ನಾರಿಯರನು ಗೌರವಿಸದೆ.. ಕಾಮದ
ಗೊಂಬೆಗಳಂತೆ ನೋಡುವ.. ನಾವು ಕುಳಿತ
ಮೃಗಜಾತಿ ಚರ್ಮವ ಬಿಟ್ಟೆಳದೆ.. ದಿನವಿಡಿ ಅವರಿವರ
ಕಾಲೆಳೆತದಲೆ ಕಾಲ ಕಳೆಯುತಿರುವ ತಾಂತ್ರಿಕ
ಯುಗದ.. ಯಾಂತ್ರಿಕ ಜನರಿಗೆಂದು ಅರಿವಾದಿತು
ಬಿಡುಗಡೆಯ ಬಲಿದಾನದ ಜೀವಗಳ ಬೆಲೆಯ
ಎಚ್ಚೇತ್ತುಕೊಳ್ಳಬೇಕಿದೆ ನಾವೆಲ್ಲರೂ...
ನಮ್ಮ ಬೇಲಿಯ ದಾಟಿ ನಮ್ಮ ಮಧ್ಯದಲ್ಲಿ
ಬೇರು ಬಿಟ್ಟಿರುವ ಅಕ್ರಮ ವಲಸಿಗರ ಹೊರದಬ್ಬಬೇಕು
ನಮ್ಮ ನೆಲದನ್ನವನುಂಡು ನಮಗೆ ವಿಷ ಕಾರುವ
ತಾಯ್ಗಂಡ ಹುಳುಗಳ ಹೊಸಕಿ ಹಾಕಬೇಕು
ಪದೆ.. ಪದೆ.. ಶಾಂತಿ.. ಕ್ರಾಂತಿಗಳ ಹೆಸರಲಿ
ಧರ್ಮ ಪ್ರಚೋದಕರ.. ಮತಾಂತರಗೊಳಿಸುವವರ
ಗಡಿಪಾರು ಮಾಡಬೇಕು... ಎಲ್ಲದಕ್ಕಿಂತಲೂ
ಬಹು ಮುಖ್ಯವಾಗಿ.. ಇದು ನನ್ನ ಮನೆ.. ನನ್ನ
ಓಣಿ.. ನನ್ನೂರು... ನನ್ನ ರಾಜ್ಯ.. ನನ್ನ ದೇಶ ಎಂದು
ಎದೆಯುಬ್ಬಿಸಿ ನಡೆಯುವ ಛಾತಿ ನಮ್ಮಲಿ ಹೊತ್ತಬೇಕು
ಹೊತ್ತಬೇಕು.. ಹೊತ್ತಿಸಬೇಕು..ತಾಯಿ
ಭಾರತಾಂಬೆಯ ಭೂ ಪಟದಲಿ ಮಿನುಗಿಸಬೇಕು
ವಂದೇ ಮಾತರಂ
No comments:
Post a Comment