Monday, August 7, 2017

ಸಹೋದರಿಯವರು

ಹೇಗೆ ಮರೆಯಲಿ ಅವರೆಲ್ಲರ  ಪ್ರೀತಿಯ..
ಈ ದಿನವಾದರೂ ನೆನೆಯದೆ ಹೋದರೆ..
ಬಾಳೊಂದು ಅರ್ಧಚಂದ್ರನಂತಾಗದೆ
ಈ ಮುಖಪುಟದಲ್ಲಿ ಬರೆಯುವುದಕ್ಕೂ
ಅರ್ಥವಿಲ್ಲದಂತಾಗದೆ

ಮುಖಪುಟಕ್ಕೆ ಬಂದಾಗ ನನ್ನ ಸಾಲುಗಳಿಗೆ
ಪ್ರೋತ್ಸಾಹಿಸುತ್ತಾ ಬೆಳಸಿದ ಗೀತಾಧರ ಅವರು
ಮರಳಿ ಈ ಪುಟದಿಂದ ನಿರ್ಗಮಿಸುವ ನಿರ್ಧಾರಕ್ಕೆ
ಬಂದಾಗ ತಡೆದು.. ತಾವು ಬರೆದ ಕವನದ
ಸಾಲುಗಳಿಗೆ ಜಗಳವಾಡಿಯಾದರೂ ಸರಿ ಪ್ರತಿ
ಸಾಲುಗಳ ಬರೆಯಿಸಿಕೊಳ್ಳುತ್ತಿದ್ದ ಜಯಾ. ಬಿ. ಶೆಟ್ಟಿ
ಇವರ ನಾ ಹೇಗೆ ಮರೆಯಲಿ

ಸ್ತ್ರೀಯರ ನೋವಿನ ಸಾಲುಗಳಿಗೆ ಸದಾ ಸ್ಪಂದನೆ
ನೀಡಿ ಬೆಳಸಿದ ಸಿ. ಶಶಿಕಲಾ ಅವರು
ಕವನಕ್ಕೆ ಕವನವ ಕಟ್ಟಿ ಎರಡೆ ಎರಡು ತಾಸಿನಲ್ಲಿ
ಮೂವತ್ತೆರಡು ಪ್ರೇಮ ಕವನಗಳನ್ನು ಬರೆಯುವ
ಜುಗಲ್ ಬಂದಿಯನ್ನು ಬರೆಯಿಸಿದ.. ಬರೆಸುತ್ತಿರುವ
ಜಯಲಕ್ಷ್ಮೀ ಸಹೋದರಿಯವರು
ಕವನದ ಸಾಲುಗಳ ಒಳಾರ್ಥವನ್ನು ಅರಿತು
ಹುರಿದುಂಬಿಸುವ ಶರ್ಮೀಳಾ ಶೆಟ್ಟಿಯವರು
ವಾಸ್ತವಿಕ.. ಹೋರಾಟದ ಸಾಲುಗಳಿಗೆ ಮೆಚ್ಚಿ
ತಿದ್ದಿ.. ಅಭಿಪ್ರಾಯವ ನೀಡುವ ಪ್ರವೇಣಿ ಸ್ಪೂರ್ತಿ ಅಕ್ಕನವರು

ಪ್ರತಿ ಕವನದ ಸಾಲುಗಳಲ್ಲೂ ಹೊಸತನವ ಹೆಕ್ಕಿ
ನನ್ನಿಂದಲೂ ಹೊಸತನಕ್ಕಾಗಿ ಮೀಡಿಯುವಂತಹ
ಸಾಲುಗಳ ಬರೆಯುವ ಸುಧಾಕೃಷ್ಣ ಪಾಂಡವಪುರ ಅವರು
ಚುಟುಕಾದರೂ ಸರಿ ಗದ್ಯವಾದರೂ ಸರಿ ಎಂದು ಬರೆದು
ಹಾಕುವ ತ್ರೀವೇಣಿ ಪಾಂಡವಪುರ ಅವರು
ಒಡಹುಟ್ಟಿದನಕ್ಕನಂತೆ ಸಂತೆಯಲ್ಲಿ ಕಾವ್ಯದೂಟದೊಂದಿಗೆ
ಮನೆಯೂಟವನ್ನು ಬಡಿಸಿದ ನಾಗವೇಣಿ ಅವರು
ಚಿತ್ರದೊಂದಿಗೆ ಅದ್ಭುತ ಸಾಲುಗಳ ಕಟ್ಟಿಕೊಡುವ
ಚೈತನ್ಯ ಸಹೋದರಿಯವರು
ದಿನಕ್ಕೆ ಎರಡು ಮೂರು ಕವನಗಳನ್ನು
ಬರೆದು ಹಾಕುವ ಸುರಭಿ ಲತಾ ಅವರು

ಸದಾ ಸೊಗಸಾದ ಸಾಲುಗಳ ಹೊತ್ತು ಬರುವ
ಸುಮಾ ಸಂತೋಷ್ ಸಹೋದರಿಯವರು
ಸುಧಾ..ಸುಮಾ ಸತೀಷ..ಸಾನ್ವಿ ದೇಶಪಾಂಡೆ..
ಶಾರದಾ ಪಾಪು ಬೆಳಿಗ್ಗೆಯಿಂದ ಸಂಜೆವರೆಗೂ ಸದಾ ಕಾಲೆಳೆದು ಗೋಳು ಹೊಯ್ದುಕೊಳ್ಳುವ ಸುರಭಿ ಅವರು
ನಿತ್ಯ ಹಸನ್ಮುಖಿ ಮಂಜುಳಾ ಮೃತ್ಯುಂಜಯ ಸಹೋದರಿಯವರು
ಇಲ್ಲಿ ಹೆಸರು ಹಾಕದೆ ಮರೆತಿದ್ದರೆ ಕ್ಷಮಿಸಿ
ಎಂದು ಕೇಳಿಕೊಳ್ಳುತ್ತಾ
ಎಲ್ಲ ಸಹೋದರಿ ಅಕ್ಕಂದಿರಿಗೆ ರಕ್ಷಾ ಬಂಧನದ
ಶುಭಾಶಯಗಳು
ನಿಮ್ಮ ಬೆಂಬಲ ಆಶೀರ್ವಾದ ಸದಾ ಹೀಗೆ ಇರಲೆಂದು
ಆಶೀಸುತ್ತಾ.. ಆ ದೇವರು ತಮ್ಮೆಲ್ಲರಿಗೂ ಸಿರಿ ಸಂಪತ್ತು
ನೀಡದಿದ್ದರೂ.. ತಾಳಿಯ ಭಾಗ್ಯವನ್ನು ಗಟ್ಟಿಯಾಗಿ
ಬರುವ ದಿನಗಳಲಿ  ಸಂತಸವ ಹೊತ್ತು ಕಳಿಸಲಿ
ಎಂದು ಈ ಮುಖಪುಟದ ಸಹೋದರರ ಪರವಾಗಿ ಬೇಡಿಕೊಳ್ಳುತ್ತೇವೆ

No comments:

Post a Comment