Friday, May 3, 2019

ಇವರಂತೆ

ಬಿಲದೊಳಗೆ ಅವಿತು ಕುಳಿತ ನರಿಗಳೂ ಕೂಡಾ ಘರ್ಜಿಸುತ್ತಿವೆ ಸಿಂಹದಂತೆ
ಗೂಬೆಗಳು ಹಾರುತ್ತಿವೆಯಂತೆ
ಬಾನೆತ್ತರಕ್ಕೆ ಹದ್ದಿನಂತೆ
ನಿಂತಿರುವುದೆ ತುಂಡು ಭೂಮಿಯಲ್ಲಿ
ಗೆದ್ದಿರುವರಂತೆ ಜಗತ್ತನ್ನೇ..

ಬೆನ್ನಿಗೆ ಚೂರಿ ಇರಿಯುವವರೆಲ್ಲ
ಪರಾಕ್ರಮಿಗಳಂತೆ
ನಡು ನೀರಿನಲ್ಲಿ ತೆಪ್ಪದ ದಿಕ್ಕನ್ನು
ತಪ್ಪಿಸುವವರು ನಾಯಕರಂತೆ
ಬೆಕ್ಕೂ ಇಂದು ಧೈರ್ಯವಾಗಿ, ಕಣ್ಬಿಟ್ಟುಕೊಂಡೆ ಹಾಲನ್ನು ಕುಡಿಯುತ್ತಿದೆಯಂತೆ...
ಜಗತ್ತೆ ಕಣ್ಮುಚ್ಚಿಕೊಂಡಿದೆ ಎಂದು

ಗುರುವನ್ನೆ ಗುಲಾಮರನ್ನಾಗಿಸಿಕೊಂಡವರು
ಜಗದ್ಗುರುಗಳಾಗಿರುವರಂತೆ...
ಕಂಡ..ಕಂಡವರ ಮನೆಗೆ ಕನ್ನ ಹಾಕಿದವರಿಂದು
ಸಾಧು ಸಜ್ಜನರಂತೆ..

ನಾರಿ ಸೇರಗಿಗೆ ಕೈ ಹಾಕಿದವರಿಂದು
ಧರ್ಮರಾಯರಾಗಿದ್ದಾರೆ...
ಶಕುನಿಗಳಂತವರೆಲ್ಲ... ನಮ್ಮೆಲ್ಲರಿಗೆ
ದಾರಿ ತೋರಿಸುವ ಪಂಜಾಗಿದ್ದಾರೆ..
ಯಾವುದು ಸರಿ...ಯಾವುದು ತಪ್ಪು...
ಎಂದು ವಿವೇಚಿಸಲು ಸಮಯವಿಲ್ಲದ
ನಮ್ಮಂಥವರು ಮಂದೆಗಳಾಗಿದ್ದೇವೆ...

ಹೇಳುವುದು, ಹಂಚಿಕೊಳ್ಳುವುದು, ವಿಮರ್ಶಿಸಿಕೊಳ್ಳಲು ಸಾಕಷ್ಟು ವಿಷಯವೆ ಇದೆ. ಎದುರುಬದುರು ಕುಳಿತು ಚರ್ಚಿಸುವ ಮನಸ್ಸುಗಳೆ ಇಲ್ಲ ಆತ್ಮೀಯರೆ. 'ನಾನು ಆಗಿ ಬಿಡಲೆ ಗುಂಪಿನಲ್ಲಿ ಗೋವಿಂದ' ‍
ಆಗಿಬಿಟ್ಟರೆ? ನಿನಗೆಲ್ಲಿ ಬೆಲೆಯಿದೆಯೊ...
ಕನ್ನಡದ ಕಂದ 🙏🙏🙏

No comments:

Post a Comment