ಸುಟ್ಟ..
ಮಣ್ಣಿನ ಇಟ್ಟಿಗೆಯಿಂದಲೆ
ಮನೆಯ
ಕಟ್ಟಿಕೊಳ್ಳುವರು
ಸಾಕಿ...
ಜನರೆಲ್ಲ...
ಉರಿದು
ಹೋದ ಮನಗಳ
ಹಣವನ್ನೆ
ಹಿರಿದು...
ಅರಮನೆಯನ್ನೆ
ಕಟ್ಟಿಸಿಕೊಂಡಿರುವೆ...
ಆರಾಧಿಸಲು ನಿನೇನು
ದೇವತೆಯಲ್ಲ... ಹಾಗಂತ
ನಿನ್ನ ತೊರೆಯುವ
ಹಾಗೂ ಇಲ್ಲ...ಈಗಲೆ
ಮಸಣ ಸೇರುವ
ಹುಚ್ಚು ಧೈರ್ಯ
ಯಾರೆದೆಯಲ್ಲೂ
ಇನ್ನೂ ಹುಟ್ಟಿಲ್ಲ...
No comments:
Post a Comment