Sunday, November 20, 2016

ಮನದಿಂದ ಗೋಡೆಗೆ

ಬಸವ ಬುದ್ಧ, ಗಾಂಧೀ ಭೋಸ್
ದೇವಿ ಚೆನ್ನಮ್ಮ, ಬೇಂದ್ರೆ ಕುವೆಂಪು
ಜೋಷಿ ಹಾನಗಲ್, ವಿಶ್ವೇಶ್ವರಯ್ಯ ಮಿರ್ಜಾ
ಕನ್ನಡದ ಎಲ್ಲ ಮಹನೀಯರು
ಬಂದಿಹರು ಮನದಿಂದ ನಿಲ್ದಾಣದ
ರಸ್ತೆಯ ಗೋಡೆಗಳಿಗೆ, ರಂಗು ರಂಗಿನ
ಹರಿದು ಕಾಲ ಕಸವಾಗುವ ಭಿತ್ತಿಪತ್ರಗಳೊಳಗೆ

ಬಿಸಿಲುಮಳೆಗಾಳಿಗೆ ನಗುತ
ಚಿತ್ರಿತವಾಗಿಹರು ಕಲ್ಲು ಗೋಡೆಗಳ ಮೇಲೆ
ನೋಡಿ ನಾವು ಕಟ್ಟಿರುವ ನಾಡನೆನುತ
ಇಂದು ಮನದಿಂದ, ನಾಳೆ ಪುಸ್ತಕದಿಂದ
ಮುಂದೆ ನಾಡಿನಿಂದ ಇವರನ್ನು ಗಡಿಪಾರು
ಮಾಡಿದರು ಮಾಡುವರು ಏಕೆಂದರೆ ಇವರಿರುವುದೀಗ
ಕೇವಲ ಭಿತ್ತಿಪತ್ರಗಳ ಮೇಲೆ, ಸುಣ್ಣ ಬಳಿಯುವ
ಗೋಡೆಗಳ ಮೇಲೆ

ಚಿತ್ರಿಸುವುದಕೆ ಇವರನು ಗೋಡೆಗಳಿಗೆ, ನಿಲ್ದಾಣಗಳಿಗೆ
ಮತ್ತೆಲ್ಲಿ ಚಿತ್ರಿಸುವರಿವರು ಮನೆಯ ಗೋಡೆಗಳು ನೀರ್ಭಾವ 
ತೈಲವರ್ಣಗಳ ಚೌಕಟ್ಟುಗಳಿಂದ ತುಂಬಿದ್ದರೆ,ಕಪಾಟುಗಳು, 
ಕಾರ್ಬೋಡುಗಳು ಇವರಿಗೆ ಸನ್ಮಾನಿಸಿದ ಫಲಕಗಳಿಂದ,
ಊಡುಗರೆಗಳಿಂದ ತುಂಬಿ ತುಳುಕುತಿರುವಾಗ ಇವರನ್ನು 
ಇವರ ಸಾಹಿತ್ಯವನ್ನು ಇಡುವುದಾದರೂ ಇನ್ನೇಲ್ಲಿ

ಇವರನ್ನು ಮನದಲಿಡಬಹುದಾಗಿತ್ತು ಕಾರಣ ಅದು
ಕಾಂಚಣದ ಜಪದಲಿ ತೊಡಗಿದೆ
ಓದಲು ಸಮಯವನಾದರೂ ತೆಗೆಯಬೇಕಾಗಿತ್ತು
ಇಲ್ಲ ಊಣ್ಣಲು ಮಲಗಲು ಸಮಯವಿಲ್ಲದಿರುವಾಗ
ಇನ್ನು ಓದಲೆಲ್ಲಿ ಓದಿ ಮಕ್ಕಳಿಗೆ‌ ತಿಳಿಸುವುದಾದರೂ ಎಲ್ಲಿ?
ಪುಣ್ಯಕ್ಕೆ ನಿಲ್ದಾಣದ ಗೋಡೆಗಳಾದರು ಇವೆ
ಇವರನ್ನು ಚಿತ್ರಿಸಲು

No comments:

Post a Comment