Sunday, November 20, 2016

ದೀನಬಂಧು

ಹಾದಿಯ ದೀಪದೊಳೊದಿ
ದೇಶಕೆ ಬೆಳಕಾದೆ | ಊರು
ಸೂರಿಲ್ಲದವರ ಬಾಳಿಗೆ
ನೇರವಾದೆ

ದಲಿತರ ಪಾಲಿನ ಧೀನ
ಬಂದುವಾದೆ | ತುಳಿತ
ಗೊಳ್ಳುವವರ ಬದುಕಿಗೆ
ಆಸರೆಯಾದೆ

ಜನರ ನಿಂದನೆಗೊಳಗಾಗಿ
ಬೆಂದೆ | ಮಾತನಾಡುವ
ಬಾಯಿಗಳಿಗೆಲ್ಲ ಶಾಸನವ
ತಂದೆ

ಅವರು ಇವರೆಂದು ಬೇಧಿಸದೆ
ಬದುಕಿದೆ | ಯಾರಿಗೂ
ಬೇಧವ ತೋರದೆ ಸಂವಿಧಾನವ
ಬರೆದೆ

No comments:

Post a Comment