Wednesday, November 23, 2016

ಚೆನ್ನಮ್ಮ

ಕುದುರೆಯನೇರಿಕೊಂಡು
ಬರುತಿದೆಯೊಂದು ಕಾಳಿ ಕಣ್ಣಿನ
ನೆತ್ತರ ಹಸಿವಿನ, ಕತ್ತಿಯ ಹಿಡಿದು
ಬರುತಿದೆಯೊಂದು ಕಿತ್ತೂರಿನ
ಹೆಣ್ಣು ಹುಲಿ

ಹಸುಳೆಯ ಬೆನ್ನಿಗೆ ಕಟ್ಟಿಕೊಂಡು
ಸೈನ್ಯವನು ಮುನ್ನೆಡೆಸಿಕೊಂಡು
ಅಡ್ಡ ಸಿಕ್ಕ ಕೆಂಪಂಗಿಯರ ರುಂಡವನು
ಚಂಡಾಡಿ, ನೆತ್ತರಲೆ ತೊಯ್ದು
ಕಣ್ಣಿಂದಲೆ ಬೆಂಕಿಯ ಸುರಿಸುತ
ಕೋಟೆಯ ಕಾಯುತ ನಿಂತಿಹಳು
ನೆತ್ತರವ ಹರಿಸಲು

ದೇಶಕ್ಕಾಗಿ ಹೋರಾಡದಿದ್ದರೂ
ಕತ್ತಿಯ ಹೀರಿದಿದ್ದಳು ದತ್ತು ಪುತ್ರನ
ಶಾಸನಕ್ಕಾಗಿ, ತಾ ಹುಟ್ಟಿದ ಮಣ್ಣಿನ
ಋಣವ ತೀರಿಸಲಿಕ್ಕಾಗಿ, ಕನ್ನಡಿಗರ
ಸ್ವಾಭಿಮಾನವನೆತ್ತಿ ಹಿಡಿಯಲಿಕ್ಕಾಗಿ

ರಾಣಿ ಚೆನ್ನಮ್ಮಳು ಸೀರೆಯ ಸೇರಗನು
ತಲೆಮೇಲೆ ಹೊದ್ದರೆ ಗರತಿಯಂತಿದ್ದವಳು
ಅದೇ ಸೇರಗು ನಡುವ ಬಿಗಿದರೆ
ರುಂಡಗಳ ಮಾಲೆಯ ಕಟ್ಟುವ
ರಣಚಂಡಿಯಂತಿದ್ದಳು

ಹರಹರ ಮಹಾದೇವ ಎನ್ನುವ ಅವಳ
ಯುದ್ಧದ ಮಹಾ ಮಂತ್ರವ ಹರಿಸಿದ್ದಳು
ಸೈನಿಕರ ಕಣಕಣಗಳ ನರದೊಳಗೆ
ಧುಮುಕಿ ವಿಜೃಂಭಿಸಿದ್ದಳು ರಣರಂಗದೊಳಗೆ
ಗದ್ದುಗೆಯ ಆಸೆಗಾಗಿ , ಸುವರ್ಣಂಧರಾಸೆಯಾಗಿ
ಬೆನ್ನು ಕಾಯುವವರೇ ಬೆನ್ನಿಗೆ ಚೂರಿ ಹಾಕಿದರು
ಸಂಚಲಿ ಬಲೆಯ ಬೀಸಿ ಹುಲಿಯ
ಸೆರೆಯಾಗಿಸಿದರು

ಆ ಕಿತ್ತೂರಿನ ಹೆಣ್ಣು ಹುಲಿ
ಲೋಕಕೆ ತೋರಿಸಿಕೊಟ್ಟಳು ಕನ್ನಡದ
ಹೆಣ್ಣು ಒಲಿದರೆ ಹೂಮಾಲೆ
ಕೆದಕಿದರೆ ಕಟ್ಟುವಳು ರುಂಡಮಾಲೆ

No comments:

Post a Comment