Wednesday, November 23, 2016

ಬದುಕಿನ ಸತ್ಯ

ಮುಂಜಾವಿನ ನಸುಕಿನಲಿ
ಹೊರಟಿದ್ದೇನು ವಿಹಾರಕ್ಕೆಂದು
ಕಾಣಿತೊಂದು ನಿತ್ಯ ಸತ್ಯವದು
ಬದುಕಿನ ವಿಪರ್ಯಾಸವದು

ಅವನು ರೈತ ಎರಡು ಹೊತ್ತು
ಹೊಟ್ಟೆಯ ಊಟದಗುಳಿಗಾಗಿ
ನಡೆದಿರುವನು ಭೂತಾಯಿ
ಸೇವೆಗೆ, ದೇಹವ ಬಗ್ಗಿಸಿ
ರವಿಕಿರಣಕೆ ಕಾಯವ ಕಾಯಿಸಿ
ಬೆವರ ಹರಿಸುವನು
ಭಾನು ಭೂಮಿ ತೋರಿದರೆ ಕರುಣೆ 
ಒಯ್ಯುವನು ಒಂದಗಳನು ಮನೆಗೆ

ಇವನು ಉದ್ಯಮಿ ದಿನದ ನಾಲ್ಕು
ಹೊತ್ತುಂಡು ಹೊಟ್ಟೆಯ ಭಾರವ
ಕರಗಿಸಲು ಬರುವನು ವಿಹಾರಕ್ಕೆ
ಉಸ್ಸೆಂದು ಕೂರುವನು, ಅಲೆದಾಡದೆ
ಬಾಯಾರಿತೆಂದು ಕುಡಿಯುವನು
ಜ್ಯೂಸ್ ನ್ನು ಮಲಗಿಯೂ ಬಿಡುವನು
ಯೋಗಾಸನದ ನೆಪದಲ್ಲಿ

ಹೊಟ್ಟೆಯ ಹೊರೆಯಲು ಪಡಪಾರದ
ಕಷ್ಟವ ಪಟ್ಟು , ವರುಣನ ಕೃಪೆ, ಭೂ ತಾಯಿಯ
ಕರುಣೆಯಿದ್ದರೆ ತಾನುಣ್ಣವದರ ಜೊತೆಗೆ
ಜಗಕೆ ಅನ್ನವನಿಯ್ಯುವನು

ಹೊಟ್ಟೆಯ ಹೊತ್ತುಕೊಂಡು, ಇನ್ನೊಬ್ಬರ
ದುಡಿಮೆಯ ಅನ್ನವನುಂಡು ಭೂಮಿಗೆ ಭಾರವಾಗಿ
ತಮಗೂ ತಾವೆ ಭಾರವಾಗಿ ಬರುವರಿವರು ವಾಯು
ವಿಹಾರಕ್ಕೆ

ಅವನದು ಹೊಟ್ಟೆಯ ಹೊರೆಯುವದರ ಚಿಂತೆ
ಇವನದು ಹೊಟ್ಟೆಯ ಹೊರುವುವದರ ಚಿಂತೆ

No comments:

Post a Comment