Saturday, November 5, 2016

ಸಾಹಿತ್ಯ ಸಂಜೆ

ನಮ್ಮೂರಿನಲ್ಲಿ ಪ್ರತಿ
ಶನಿವಾರಕ್ಕೊಮ್ಮೆ ನಡೆಯುತ್ತದೆ
ಸಾಹಿತ್ಯ ಸಂಜೆ ಅದು ಮೈಸೂರು
ಮಠದಲ್ಲಿ

ಸಾಹಿತ್ಯ ಕ್ಷೇತ್ರದ ಹಿರಿಯರು
ಸಾಹಿತ್ಯಭಿಮಾನಿಗಳು ಸೇರಿರುವರು
ಕೇವಲ ಬೆರಳಣಿಕೆಯಷ್ಟು
ದೇಶದ ಸಾಕ್ಷರತೆಯಲ್ಲೆ ಮೊದಲ
ಸ್ಥಾನದಲ್ಲಿರುವ ಕೇರಳವಿಂದು
ಉಗ್ರರ ಚಟುವಟಿಕೆಯ ಮೂಲಸ್ಥಾನ
ವಾದಂತೆ

ರೋಣ ತಾಲೂಕಿನಲ್ಲೆ ಹೆಚ್ಚು
ಮತಗಳನ್ನು ಹೊಂದಿರುವ ಗಜೇಂದ್ರಗಡ
ಇಲ್ಲಿಯ ಸಾಹಿತ್ಯ ಹಿರಿಯರ ಅಹಂನಿಂದಾಗಿ
ಸೊರಗುತಿದೆಂದೆನಿಸುತ್ತಿದೆ

ಸಂಜೆ ತುಂಬಿದರೆ ವಾಗ್ಮೀಯ ವಾರದ
ಪರಿಶ್ರಮ ಸಾರ್ಥಕವೆನಿಸುತ್ತದೆ, ಕವನ
ವಾಚಿಸುವನ ಮನಸ್ಸು ಅರಳುತ್ತದೆ
ಮಠದ ಕಲ್ಲು, ಕಬ್ಬಿಣದ ಕಂಬಗಳಿಗಿಂತ
ಕನ್ನಡದ ಕಂಬಗಳು ಬರವಾಗಿವೆ

ಕಲ್ಲು, ಕಬ್ಬಿಣದ ಕಂಬಗಳು ತಾರಸಿಯ
ಭಾರವನು ಹೊತ್ತು ತಮ್ಮ ಕಾರ್ಯದಕ್ಷತೆಯನು
ತೋರುತಿವೆ, ಎಲ್ಲಿರುವಿರಿ ಕನ್ನಡದ ಕಂಬಗಳೆ
ಗೊರಲೆ ಹತ್ತಿ, ಕಡಿದು ಸುಡುವ, ಸುಟ್ಟು ಕರಕಲಾಗುವ
ಕಂಬಗಳು ಬೇಡ ಈ ಸಂಜೆಗೆ

ಕನ್ನಡದ ಮಂಟಪಕೆ ಎಂಟು ಜ್ಞಾನಪೀಠದ
ಕಂಬಗಳು, ಎಣಿಸಲಾರಷ್ಟು ಕಥೆಗಾರರು
ಕವನಗಾರರು, ಕಾದಂಬರಿಗಾರರು ಚುಟುಕುದಾರರು
ಕವಿಯತ್ರಿಯರನೇಕರೂ ಕಲ್ಲುಗಳಾಗಿ
ಕನ್ನಡದ ಮಂಟಪವ ಕಟ್ಟಿಹರು

ನಾವೊಂದು ಕನ್ನಡದ ಕಂಬ, ಕಲ್ಲಾಗದಿದ್ದರೂ
ಸರಿ ಆ ಮಂಟಪವು ಅದರದಂತೆ, ಕೆಡವದಂತೆ
ಮಾಸದಂತೆ, ಮುಕ್ಕಾಗದಂತೆ, ಪಾಳು ಬೀಳದಂತೆ
ನಮ್ಮೂರಿನಿಂದಲೇ, ಈ ಸಂಜೆಗಳಿಂದಲೆ
ಪ್ರಾರಂಭಿಸೋಣ
ಬನ್ನಿ, ಕರೆದು ತನ್ನಿ 
ಸಾಹಿತ್ಯ ಸಂಜೆಗೆ

No comments:

Post a Comment