ನಾನು ಮಠ ಮೈಸೂರು ಮಠ
ಎಲ್ಲರೂ ಅಕ್ಕರೆಯಿಂದ ಕರೆಯುವರು
ನನ್ನನ್ನು ಚೌಕಿಮಠ | ನಗರದ ಹೃದಯ
ಭಾಗದಲ್ಲಿ ನಿರ್ಮಿಸಿರುವ ಕಲ್ಲು ಬಂಡೆಯ
ಮಠ
ಮೂಲತಃ ನಾನು ಧಾರ್ಮಿಕ ಮಠ
ಶ್ರಾವಣ ಬಂತೆಂದರೆ ನನ್ನ ಅಂಗಳದೊಳಗೆ
ನಡೆಯದೆ ಇರುವ ಕಾರ್ಯಕ್ರಮಗಳಿಲ್ಲ
ಬರದೆ ಇರುವ ಪುರಾಣಿಕರಿಲ್ಲ, ಹಾಡದೆ
ಇರುವ ಗಾಯಕರಿಲ್ಲ ಎಷ್ಟೊಂದು ಧಾರ್ಮಿಕ
ಕಾರ್ಯಗಳು, ಸಭೆಗಳು, ಸಮಾರಂಭಗಳು
ಅನ್ನಸಂತರ್ಪಣೆ, ಉತ್ಸವಗಳು ಹೀಗೆ ಎಲ್ಲ
ಕಾರ್ಯಕ್ಕೆ ಬೇಕಾಗಿದ್ದ ನನ್ನ ಅಂಗಳ ಇತ್ತೀಚಿನ
ಕೆಲ ವರ್ಷಗಳ ಹಿಂದೆ ಒಂದು ಪ್ರಾಥಮಿಕ ಶಾಲೆಯನ್ನು
ಪ್ರಾರಂಭಿಸಿದ್ದಾರೆ
ಆ ಶಾಲೆ ಆರಂಭವಾದಾಗಿನಿಂದ ನನ್ನ ಅಂಗಳ
ಎಷ್ಟು ಅಮೃತಮಯವಾಗಿದೆಯೆಂದರೆ ಅದು
ವರ್ಣಾತೀತ ಆ ಮಕ್ಕಳ ಮಧುರ ಕಂಠದಿಂದ
ದಿನನಿತ್ಯ ಕುವೆಂಪು,ಠಾಗೋರ ಅವರ ಗೀತೆಗಳ
ಕೇಳುತ ನಿತ್ಯವು ಪುನೀತವಾಗುವ ಬಗೆ, ಓದುವ,
ಆಡುವ, ಬೀಳುವ, ಅಳುವ, ನಗುವ, ಓಡಾಡುವ, ಹಾಡುವ, ಕುಣಿಯುವ ಬರೇ ಮಕ್ಕಳಿಂದಲೆ
ತುಂಬಿರುವ ನನ್ನಂಗಳಕೆ ಮತ್ತೆ ಹೊಸದಾಗಿ ಎರಡು ಶಾಖೆಗಳು ಪ್ರಾರಂಭವಾಗಿವೆ
ಒಂದು ಶಿವಾನುಭವ ಗೋಷ್ಠಿ, ಇನ್ನೊಂದು ಸಾಹಿತ್ಯಸಂಜೆ
ಇವೆರಡು ಆರಂಭವಾದಾಗಿನಿಂದ ನನ್ನ ಅಂಗಳದ ಕಂಬಗಳು ರಂಗು ರಂಗಾಗಿ ಮೀನುಗುತಿವೆ, ದೀಪದ ಹೊನಲು ತುಂಬಿದೆ ಅಲ್ಲದೆ ಮಾತನಾಡಲು ಬಾಯಿ ಬಂದಿವೆ, ಮಾಸದ ಗೋಷ್ಠಿಗಂತು ಶರಣರ ಜೀವನ, ವಚನಗಳು, ತತ್ವಗಳು ಅವರ ಆದರ್ಶಗಳನೆಲ್ಲ ಶಾರದಾಸುತರು ತುಂಬಾ ಮನೋಜ್ಞವಾಗಿ ಮಠದ
ಕಲ್ಲುಗಳು ಅರಳುವಂತೆ, ತುಂಬು ಜೀವನದ
ಮನಸ್ಸುಗಳ ಬದುಕು ಸಾರ್ಥಕವೆನಿಸುವಂತೆ
ವಾಚಿಸುತ್ತಾರೆ
ಹೀಗೇಕೆ? ವಾರದ ಚಿಂತನೆಗೆ ಬರುವ ಕೆಲವು
ವಾಚಕರು ನನ್ನನ್ನೆ ಚಿಂತೆಗೊಳಗಾಗುವಂತೆ
ಮಾಡುವರಲ್ಲ 'ಮಠ ತುಂಬ ದೊಡ್ಡದು ಆದರೆ
ಸಭಿಕರೆ ಕಮ್ಮಿ ' ಎನ್ನುವ ವಾಚಕರು ನಿಮ್ಮ ಅಹಂ ನೇಕೆ
ಬಿಟ್ಟು ಬರುವುದಿಲ್ಲ, ಸಮಯವನೇಕೆ ನೀವು
ಅರಿಯುವುದಿಲ್ಲ, ನಿಮಗೆ ಕೊಟ್ಟ ವಿಷಯಕ್ಕೆಕೆ
ನ್ಯಾಯವನ್ನೊದಗಿಸುವುದಿಲ್ಲ, ವಾರ ವಾರದ ಚಿಂತನೆಗೆ
ಬರಲಾರದೆ ಸಂಘಟಿಕರನೇ ಪ್ರಶ್ನಿಸುವಿರಲ್ಲ
ನೀವೆಷ್ಟು ಸಾಹಿತ್ಯವ ಓದಿದ್ದಿರಿ, ಬರೆದಿದ್ದಿರಿ
ನೀವೆಷ್ಟು ಕವನಗಳನೊದಿರುವಿರಿ, ಬರೆದಿರುವಿರಿ
ನಿಮ್ಮಾತ್ಮಾವಲೋಕನವಮಾಡಿಕೊಳ್ಳಿಯೊಮ್ಮೆ
ನಿಮ್ಮ ವಾಚನದ ಮೂಲಕ ಬಂದವರ ಮನದಲಿ
ಸಾಹಿತ್ಯವರಳಬೇಕು, ಅರಳಿ ಈ ಅಂಗಳ ತುಂಬುವಂತೆ
ಮಾಡಬೇಕು, ಬರುವಿರೇಕೆಯೊಬ್ಬರೆ ಕರೆದು ತನ್ನಿ
ನಿಮ್ಮ ಕುಡಿಗಳನ್ನು, ಶಾಲೆಯಲ್ಲರಳದ ಮನಸ್ಸು
ನನ್ನ ಅಂಗಳದಲ್ಲಾದರೂ ಅರಳಲಿ, ಕನ್ನಡದ ಕೆಚ್ಚು,
ಅಭಿಮಾನ, ನನ್ನ ಮಣ್ಣಿನ ವಾಸನೆಯನರಿಯಲಿ
ಇಷ್ಟಾಗ್ಯೂ ನಿಮ್ಮ ಕೊರಳುಪಟ್ಟಿ ನೆಟ್ಟಗಾಗದಿದ್ದರೆ
ನಿಮ್ಮಂಥ ವಾಚಕರ ಮಾತಿಗೆ ನಾನೊಂದು ಕೇವಲ
ಕಲ್ಲಿನ ಮಠ,
No comments:
Post a Comment