ನೀನು ತೊರೆದು ಹೋದ
ದಿನದಿಂದ
ಎದೆಯ ಕಣ್ಣೀರ ಪಾತ್ರೆಯು ತುಂಬಿ
ಕಂಗಳ ಬಟ್ಟಲಲಿ ಜಿನುಗುತಿಹುದು
ಹನಿ ಹನಿಯಾಗಿ
ಮಾತನಾಡದೆ ಮರೆಯಾದೆ
ನಾನಾಡುವ ಮಾತುಗಳ ಉಸಿರಲಿ
ಬೆರೆತು ಉಸಿರಾಗುವೆನೆಂದವಳು
ಮುಳ್ಳು ಚುಚ್ಚಿದ ಗಾಲಿಯ ಗಾಳಿಯು
ಹಾರಿದಂತೆ ಕರಗಿಹೋದೆ
ನಡೆಸದೆ ಕುಳ್ಳರಿಸಿ ನಡೆದೆ
ಬಾಳಿನುದ್ದಕೂ ಬರುವೆನೆಂದವಳು
ದಾರಿಯನರಿಯದ ಘಟ್ಟಗಳ
ತೆಪ್ಪಲಲಿ ಬಿಟ್ಟು
ಸಾಯಿಸದೆ ಮಲಗಿಸಿ ಹೋದೆ
ಹೀಗೆ ಕಹಿ ನೆನಪುಗಳೆಂಬ ಭತ್ತದ
ಬಣವೆಯ ಹುಲ್ಲಿನ ಮೇಲೆ
ನಾನು ನಂಬಿದ್ದೆ ಬ್ರಹ್ಮ ಬರಹವನು
ಇಂದು ನೀನು ಸುಳ್ಳಾಗಿಸಿದೆ
ಕಾರಣ
ಮುಂದಿನ ಬದುಕು ನೀ ಬರೆದುದಾಗಿದೆ
No comments:
Post a Comment