ನನಗೆ ಅರಿವು ಬಂದಾಗಿನಿಂದ
ನೋಡುತ್ತಿದ್ದೇನೆ ಕೇಳುತ್ತಿದ್ದೇನೆ
ಇನ್ನೂ ಓದುತ್ತಲೆ ಇದ್ದೇನೆ
ಯಾವ ಪತ್ರಿಕೆಯಲ್ಲಾಗಲಿ
ದೂರದರ್ಶನದಲ್ಲಾಗಲಿ ಸಭೆ
ಸಮಾರಂಭಗಳಲ್ಲಾಗಲಿ ವಾಚಿಸುವ
ಕವಿಯಾಗಲಿ ಬರಹಗಾರನಾಗಿರಲಿ
ಇದರ ಬಗ್ಗೆ ಬರೆದು ವಾಚಿಸದೆ ಇರುವವಂತಿರುವರಿಲ್ಲ
ಅದುವೆ ಮಸೀದಿ ಮಂದಿರ ಮತ್ತು ಚರ್ಚ್
ಈ ಮಣ್ಣಿನಲಿ ಮಾತೊಂದಿದೆ
ಧರ್ಮದಿಂದಲೆ ವಿಶ್ವಕ್ಕೆ ಶಾಂತಿ
ಎಲ್ಲಿಹುದು ?
ಧರ್ಮದಿಂದಲೆ ಹಚ್ಚುತಿರುವಲ್ಲ ವಿಶ್ವಕ್ಕೆ ಬೆಂಕಿ
ಕಟ್ಟಿದ ಕಲ್ಲುಗಳಿಗೇನೂ ಗೊತ್ತು
ಅದು ಮಂದಿರ ಮಸೀದಿ ಚರ್ಚ್ ಎಂದು
ಅದನೊಡೆದು ಇದನ್ನು ಕಟ್ಟುವರು ಇದನೊಡೆದು
ಅದನ್ನ ಕಟ್ಟುವರು
ಮಂದಿರ ಚರ್ಚ್ ಗಳಲಿರುವ ಕಲ್ಲು ಮೂರ್ತಿಗಳಿಗೆ
ಮಸೀದಿಯ ಗೋಡೆಗಳಿಗೇನೂ ಗೊತ್ತು
ತಾವು ಯಾವ ಜಾತಿಯೆಂದ
ಕುಲವ ಹುಟ್ಟಿಸಿದವರು ಹೇಳದ ಹೊರತು
ಎಲ್ಲ ಧರ್ಮಗಳು ಸಾರುವದು ತೋರುವದು
ಮಾನವ ಜನ್ಮಕ್ಕೆ ಮುಕ್ತಿಯ ದೊರಕಿಸಿ ಕೊಡುವದಾಗಿದೆ
ಎಂದು ಎಂದವರು ಸದಾ ಹಸನ್ಮುಖ ಮೊಗದ
ಪರಮಹಂಸರು
ಯಾವ ಕಟ್ಟಡದ ಮೆಟ್ಟಿಲೇರಿದರೂ ಮುಕ್ತಿಗೆ
ದಾರಿ ದೀವಿಗೆಯ ತೋರಬೇಕು
ಏನು ಮಾಡುವುದು
ಒಳಗಿರುವ ಜನರೇನೂ ಸಾಮಾನ್ಯರಲ್ಲ
ಬರುವ ಜನರಿಗೆ ಮುಕ್ತಿಯ ಮಾರ್ಗ ತೋರದೆ
ರಾಜಕೀಯಕ್ಕೆ ಜಾತಿಯ ಆಧಾರದ ಓಟ್ ಬ್ಯಾಂಕಿನಂತೆ
ಇವರ ಧರ್ಮದ ಪ್ರಚಾರಕ್ಕಾಗಿ ಮತಾಂತರದ
ಮಾತುಗಳ ಮೂಲಕ ಅವರ ಸುಪ್ತ ಮನಸ್ಸಿಗೆ
ಕಿಡಿಯನಿಟ್ಟು ಸ್ವಾಸ್ಥ ಸಮಾಜದಲ್ಲಿ ಧರ್ಮದ
ಹೊಗೆಯನೆಬ್ಬಿಸುವರು
ಕುಂತಿರುವ ನಿಂತಿರುವ ಇಲ್ಲದಿರುವ ಕಟ್ಟಡದೊಳಗಿನ
ದೇವರಾದರೂ ಏನು ಮಾಡಬೇಕು ಸೂತ್ರದಾರಿಯ
ಮುಂದೆ ಇವರಾಡುವ ನಾಟಕವ ಕಂಡು ಮನದಲಿ
ನಗುವುದನೊಂದ ಬಿಟ್ಟು
ಬರುವ ಭಕ್ತರಿಗಾದರೂ ಬುದ್ದಿಯಿಲ್ಲ ಯಾಕೆಂದರೆ
ಅವರ ಬುದ್ದಿ ಬಾಗಿಲ ಬಳಿ ಬಿಟ್ಟ ಮೆಟ್ಟನು
ಕಾಯುತ್ತಿರುವದಲ್ಲ
ಮನಸಿನ ಶಾಂತಿ ಬದುಕಿನ ಮುಕ್ತಿ ಎರಡು
ನಿಮ್ಮ ನಡೆ ನುಡಿಗಳಲೆ ಅಡಗಿದೆ
ಮನದ ಕದವ ತೆರೆದು ನೋಡಿರಿ
ಲೋಕವನೊಮ್ಮೆ ಒಳಗಣ್ಣಿಂದ ಕಾಣಿರಿ
ದಾನವ ನೀಡುವ ಶಾಂತಿಗಿಂತ ಮಿಗಿಲಿಲ್ಲ
ಇನ್ನೊಬ್ಬರ ಏಳ್ಗೆಗೆ ಬಾಳುವ ಬದುಕಿಗಿಂತ ಮುಕ್ತಿಯಿಲ್ಲ
ನಿಮ್ಮ ಮನಕೆ ನೀವು ಶಾಂತಿಯ ತರಲಾರದೆ
ಸಮಾಜ ನಾಡು ವಿಶ್ವದಲಿ ಶಾಂತಿಯ ಹೇಗೆ
ಕಾಣುವಿರಿ ತುಂಬುವಿರಿ
ನಿಮ್ಮ ದಾರಿಗೆ ಮುಕ್ತಿಯ ಪಡೆಯದೆ
ಪರರಿಗೆ ಯಾವ ಹಾದಿಯ ತುಳಿಸುವಿರಿ
ಸಾಕಿನ್ನೂ ಪ್ರಕೋಪಗಳಿಗೆ ಬುಡಸಡಿಲುಗೊಳ್ಳುವ
ಭೂಕಂಪಗಳಿಗೆ ಉರುಳುವ, ಗುಡುಗು ಸಿಡಿಲಿಗೆ
ಕತ್ತರಿಸಿ ಛಿದ್ರಗೊಳ್ಳುವ ಕಟ್ಟಡಗಳ ನಂಬದೆ
ಮನದ ದೇವರ ಮನುಷ್ಯರ ಏಳ್ಗೆಯಲಿ
ಪ್ರತಿಫಲಾಕ್ಷೆ ಬಯಸದೆ ಮಾಡುವ ಕಾರ್ಯಗಳಲಿ
ಕಾಣೊನ
No comments:
Post a Comment