Saturday, September 21, 2019

ನಿರ್ಭಾವುಕತೆ ೯

ಚುಚ್ಚಿದ ನತ್ತಿನ
ನೋವು... ಅನುದಿನವೇನು
ಇರುವುದಿಲ್ಲ!!!
ಆಡಿದ ಮಾತು ಮಾತ್ರ,
ಕ್ಷಣ...ಕ್ಷಣವು ಚುಚ್ಚುತಲೆ
ಇರುತ್ತದೆ...
ಬೇವು...ಬೆಳ್ಳಿ..ಬಂಗಾರ
ಯಾವುದಾದರೇನು?, ಸಿಂಗರಿಸಿಕೊಳ್ಳುವುದಕ್ಕೆ!!!
ಮೌನ, ಬಂಗಾರವಾದರೇನು?
ಬೇಕಿಲ್ಲ ನನಗೀಗ...
ಬೆಳ್ಳಿಯಂತಾದರು ಸರಿ,
ಮಾತನಾಡಿಬಿಡು ಒಮ್ಮೆ...
ಮುರಿದು ಮನಸಿನ ಮುನಿಸು.

No comments:

Post a Comment