ಗೆಳೆಯ..
ನೀ ತಿಕ್ಕಿದಷ್ಟು ಮೀರುಗುವೆ
ಚಿನ್ನದಂತೆ..
ಯಾವ ನೀರಿನಲ್ಲಿಟ್ಟಿರೂ ನಮ್ಮ
ಪ್ರೀತಿಗೆ ತುಕ್ಕು ಹಿಡಿಯದಂತೆ
Monday, July 31, 2017
ಗೆಳೆಯ
Sunday, July 30, 2017
ಬದುಕಿನ ದಾರಿ
ನಡೆಯುವ ದಾರಿ ಹೊದ್ದು
ಮಲಗಿದೆ ನಾಳೆಯೆನುಂಬುದನರಿಯದ
ಕತ್ತಲನು.. ಮತಿಯ ಬೆಳಕ ಚೆಲ್ಲಿ
ಸಾಗಬೇಕಿದೆ..
ಇರುವ ದಾರಿಯಲ್ಲಿ ನಿಂತ
ಕಂಬಗಳು ಕಮಕ್ ಗಿಮಕ್
ಎನ್ನದೆ ನಿಂತಿವೆ...ಹೋಗು ಬರುವವರಿಗೆ
ದೀಪದ ಬೆಳಕ ಚೆಲ್ಲಿ ಚೆಲ್ಲಿ
ಬರಿದಾಗಿವಿರುವೆವೆಂದು...
ಇನ್ನೆನು ಧಾರಾಕಾರವಾಗಿ
ಸುರಿದು ನಿನ್ನ ಗಮ್ಯವ ಮುಟ್ಟಿಸಗೊಡದೆ
ನನ್ನೊಡನೆ ಕಷ್ಟಗಳ ಸುಳಿಯಲ್ಲಿ
ಸೆಳೆದೊಯ್ವೆನೆಂದು ಯುದ್ದಕ್ಕೆ
ನಿಂತ ಕರಿಮೋಡಗಳ ಗುಂಪು
ಏರಿಳಿತದ ಈ ಹಾದಿಯಲಿ
ಭರವಸೆಯ ಬೆಳಕೊಂದೆ ಈ
ಹಸಿರು ಮರಗಳ ಕನಸುಗಳೆಂಬ ಸಾಲು
ಇವುಗಳ ಕಾಣುತ್ತ.. ದಾಟುತ್ತ..
ಬದುಕಿನ ಕೊನೆಯ ಘಟ್ಟವನ್ನು
ತಲುಪಬಲ್ಲೇನೆ..
ಇನ್ನೂ ಇಲ್ಲೆ ನಿಂತಿರುವೆ ಅರ್ಧ ದಾರಿಯಲ್ಲಿ
ಸಾಗಿ ನಿಲ್ಲಬೇಕಿದೆ ಬದುಕೆಂಬ ಶಿಖರದ ತುದಿಯಲ್ಲಿ
ಗೆಲ್ಲುವೆನೆ ಎಂಬ ಅಳುಕು ಕಾಡುತಿದೆ ಮನದಲ್ಲಿ
ಧೀರ್ಘ ಉಸಿರನೊಮ್ಮೆ ಒಳಗೆಳೆದು ಬಿಟ್ಟು
ನಡೆದೆಬಿಟ್ಟಿರುವೆನು ಗೆಲ್ಲುವೆನೆಂಬ ಛಲದಲ್ಲಿ
ಮೇಘರಾಜ
ಓ... ಮೇಘರಾಜ ನೀನೇಕೆ ನಿದ್ರಿಸುತ್ತಿರುವೆ
ಕುಂಭಕರ್ಣನ ಹಾಗೆ... ನಮ್ಮಳಲು ಕೇಳುತ್ತಿಲ್ಲವೆ
ಸಾಲು.. ಸಾಲು ಭಜನೆ ಪೂಜೆಗಳು ನಿನ್ಮನವ ತಣಿಸುತ್ತಿಲ್ಲವೆ
ಹಸಿವು ಬಾಯಾರಿಕೆಯಿಂದ ಕೂಗುವ
ದನಕರುಗಳ ಕೂಗು ಕಣ್ಣುಗಳನ್ನು ತೆರೆಸುತ್ತಿಲ್ಲವೆ
ನಿನ್ನ ನೆನೆ ನೆನೆದು ಮಣ್ಣಿನ ಮಕ್ಕಳು
ಬಿಡುತ್ತಿರುವ ನಿಟ್ಟುಸಿರು ನಿನಗೆ ತಟ್ಟುತ್ತಿಲ್ಲವೆ
ಮೊದಲೇಕೆ ಸುರಿಸಿದೆ ಭರವಸೆಯ
ನಾಲ್ಕು ಹನಿ ಮುತ್ತಗಳನು..
ನಂಬಿ ಮನೆಯ ಹಳೆಯ ಟ್ರಂಕಿನೊಳಗಿನ
ಬಟ್ಟೆಯ ಗಂಟೊಳು ಕಟ್ಟಿಟ್ಟಿದ್ದ.. ಆಪತ್ಕಾಲದ
ಹಣವನೆಲ್ಲವ ಖರ್ಚು ಮಾಡಿ ಬಿತ್ತಿದೆವಲ್ಲ
ಬೀಜಗಳನು....
ಗರ್ಭವ ಸೀಳಿ... ತಾಯಿ ಮಡಿಲಲಿ ನಳನಳಿಸಿ
ಬೆಳೆಯಬೇಕಾದ ಸಸಿಗಳಿಗಿಂದು ಅಮೃತವನುಣಿಸದೆ
ಮಲತಾಯಿ ಧೋರಣೆಯನೇಕೆ ತೋರುತಿರುವೆ...
ನೋಡಿಲ್ಲಿ... ನಿನ್ನ ಕರುಣೆಯ ಹನಿಗಳಿಲ್ಲದೆ
ಒಣಗುತಿವೆ ಬೆಳೆಗಳೆಲೆಗಳು.. ಬಾಡಿ ಉದುರುತಿರುವುದು
ಎಲೆಗಳಲ್ಲ... ನಮ್ಮ ನಂಬಿಕೆಯ ಬಾಳಿನ ದಿನಗಳು
ಕೇಳಿಲ್ಲಿ... ಮೊದಲ ಮಗಳು ಮನೆಗೆ ಬಂದಿಹಳು
ತುಂಬು ಗರ್ಭಿಣಿ.. ಅವಳ ಉಡಿಯ ತುಂಬ ಬೇಕಿದೆ ಸೀಮಂತ ಕಾರಣವ ಮಾಡಿ.. ಅವಳ ಒಡಲ ಮಗುವಿಗೊಂದು ತೊಟ್ಟಿಲು ತೂಗಿ ಲಾಲಿ ಹಾಡಬೇಕಾದಂತ ಕನಸುಗಳು ಕಮರುತಿವೆ..
ಎರಡನೇಯ ಮಗಳು ಹಬ್ಬಕ್ಕೆಂದು ಬಂದವಳು
ಇಲ್ಲೆ ಇರುವಳು... ಮದುವೆಯ ವರದಕ್ಷಿಣೆಯ ಹಣವ
ಕೊಟ್ಟು ಕಳಿಸಬೇಕಿದೆ.... ಅವಳೂ... ನಾಲ್ಕು ಜನ ತನ್ನ
ಒರಗಿತ್ತಿಯರ ಹಾಗೆ ಗಂಡನ ಮನೆಯಲ್ಲಿ ಸುಖವಾಗಿ
ಸಂಸಾರ ಮಾಡಬೇಕು.. ಗಂಡ ಬಿಟ್ಟವಳೆಂಬ ಅಪವಾದ
ಬಾರದಿರಲೆಂದು ನಡೆಸುತಿರುವ ಹೋರಾಟವು
ಹುಸಿಯಾಗುತಿಹುದು...
ಮೂರನೆ ಮಗಳು... ಓದಿ ನಮ್ಮ ಮನೆಗೆ..
ನಮ್ಮೂರಿಗೆ ಒಂದು ಹೆಸರು ತರುತ್ತೇನೆ ಎಂಬವಳ
ಅತ್ಮ ವಿಶ್ವಾಸಕ್ಕೆ ಹಣದ ತೊರೆಯನು ಹರಿಸಲಾರದೆ
ಹೈರಾಣಾಗಿರುವೆ...
ನೀ ಬಾರದೆ ಈ ಲೋಕದಲಿ..
ಬದುಕುವುದಾದರೂ ಹೇಗೆ ಈ ಭೂಮಿಯಲಿ
ನಾನೆ ಬರಲೆ ನಿನ್ನಲ್ಲಿಗೆ... ಏನು ಮಾಡಲಿ
ಒಬ್ಬಂಟಿಗನಲ್ಲವಲ್ಲ ಬಾಳಲಿ
ಸುರಿದು ಹರಿದಾಡಿಬಿಡೊ ಈ ಧರೆಯಲಿ
ನೀ ಬರುವೆ ಎಂಬ ಆಶಾ ಕಿರಣ
ಮಸುಕಾಗುವ ಮೊದಲೆ ಧುಮುಕಿಬಿಡು
ಧರಣಿಗೆ... ಬೆಳಕಿನ ಕಿರಣವಾಗು ನಿನ್ನನೆ ನಂಬಿದ
ನೊಂದ ಮನಗಳಲಿ...
ಗೆಳೆಯ
ಗೆಳೆಯ
ಆ ಚಂದಿರನಿಗೂ ಬೆಳ್ಳಿ
ಬೆಳದಿಂಗಳ ಚೆಲ್ಲದಂತೆ ತಾಕೀತು
ಮಾಡಿರುವೆ...ನನ್ನವನು ನನ್ನರಮನೆಯ
ಬಾಗಿಲು ಬಡಿಯುವವರೆಗೂ
ಮೋಡದಲ್ಲಿ ಮರೆಯಾಗಿರಬೇಕೆಂದು..
Friday, July 28, 2017
ಕೆರೆಗಳ ಗೋಳು
ಓ.. ನನ್ನ ಭಾಂದವರೆ..
ನನ್ನ ದಂಡೆಯ ಮೇಲೆ ಕುಳಿತು
ನಿಮ್ಮೆಲ್ಲ ನಿಸರ್ಗ ಕ್ರಿಯೆಗಳಿಗೆ ಚೊಂಬು
ನೀರನು ಹೊತ್ತು ತರದೆ.. ನನ್ನ ನೀರಿನಲ್ಲೆ
ಎಲ್ಲವ ಮುಗಿಸಿಕೊಂಡು ಹೋಗುತ್ತಿದ್ದ..
ಮೀಸೆ ಹೊತ್ತ ಗಂಡಸರೆ.. ಕಾಣುತ್ತಿಲ್ಲವೆ
ನಿಮಗೆ ಎನ್ನಯ ಗೋಳು.. ಹೊಟ್ಟೆ ಬಿರಿಯುವ
ಹಾಗೆ ತುಂಬಿ ಕೂತಿದೆ ಹೂಳು...ಸರಕಾರ
ಕೊಟ್ಟ ಹಣದಿಂದ ಮನೆಯ ಮುಂದೆಯೆ
ನಿಸರ್ಗ ಕ್ರಿಯೆಗೆ ಶೌಚಾಲಯವ ಕಟ್ಟಿಸಿಕೊಂಡೆನ್ನ
ಮರೆತಿರುವಿರಲ್ಲ...
ಓ.. ನಾರಿ ಮಣಿಗಳೆ..ಬುಟ್ಟಿಯ ತುಂಬಾ
ಒಗೆಯುವ ಬಟ್ಟೆಯ ಹೊತ್ತು..ಕಂಕುಳಲ್ಲಿ
ಮಗುವ ಹೊತ್ತು..ನನ್ನ ದಂಡೆಯಲ್ಲಿ ಕಲ್ಲನೊಂದಿಟ್ಟು
ನಿಮ್ಮ ಮನೆ ಯಜಮಾನನ ಸಿಟ್ಟನ್ನೆಲ್ಲವ ನನ್ನ
ನೀರಿನ ಮೇಲೆ ತಿರಿಸಿಕೊಳ್ಳುತ್ತಿದ್ದರಲ್ಲ..
ಒಗೆದ ಬಟ್ಟೆಗಳ ದಂಡೆಯ ಮೇಲೆ ಹರವಿ..
ಪಕ್ಕದ ಮನೆಯ ಗಿರಿಜಾ ಗಂಡ ಅಂತವ್ನಂತೆ..
ಅದು ತಂದ್ನಂತೆ.. ಇದು ಮಾರಿದ್ನಂತೆ..ಅಂತ
ಅಂತೆ ಕಂತೆಗಳ ಹರಟಿ ಹೋಗುತ್ತಿದ್ದ ನೀವಿಂದು
ಸರಕಾರ ಹಾಕಿಕೊಟ್ಟ ಗಲ್ಲಿ... ಗಲ್ಲಿ... ಮನೆ... ಮನೆಯ
ಮುಂದಿನ ನಳಕ್ಕೆ ಅಂಟುಕೊಂಡು ಎನ್ನ ತೊರೆದಿರುವಿರಲ್ಲ..
ಓ.. ಊರ ಹಿರಿತಲೆಗಳೆ.. ನಿಮ್ಮ ಹಬ್ಬ ಹರಿದಿನಗಳಿಗೆ
ಮೂಖ ಬಸವಣ್ಣ.. ಎಮ್ಮೆಗಳ ಸ್ನಾನಕ್ಕೆ.. ಕುಡಿಯಲಿಕ್ಕೆ
ಈಜಾಡಲಿಕ್ಕೆ..ನಿಮ್ಮ ಹೊಲಗದ್ದೆಗಳಿಗೆ ನನ್ನೊಡಲಲಿ
ಸೇರಿಕೊಂಡ ಹೂಳನೆಲ್ಲವ ಹೊತ್ತುಯ್ಯುವದಕ್ಕೆ..
ಮೀನುಗಳ ಸಾಕಿ ಆದಾಯ ಗಳಿಸುವುದಕ್ಕೆ.. ಭೂ ತಾಯಿ
ಒಡಲ ಅಂತರ್ಜಲವ ಹೆಚ್ಚಿಸುವುದಕ್ಕೆ.. ಹೀಗೆ ಅನೇಕ
ಕಾರ್ಯಗಳಿಗೆ ಉಪಯೋಗಿಸುತ್ತಿದ್ದ ನನ್ನನ್ನು ಆಧುನಿಕತೆಯ
ಭರದಲ್ಲಿ.. ಒಣಗಿ ಬಿದ್ದಿರುವ ಪಾಳುಭೂಮಿ ಎಂದು
ನಿರ್ಧರಿಸಿ ಇಂದು ಸರಕಾರ ಸಾವಿರದ ಐನೂರು ಕೆರೆಗಳನ್ನು
ಮುಚ್ಚುವ ಹುನ್ನಾರವನ್ನು ನಡೆಸಿದೆ..
ಕಾಣುವುದಕ್ಕೆ ಕಣ್ಣಿಲ್ಲವೆ.. ಕೇಳುವುದಕ್ಕೆ ಕಿವಿಯಿಲ್ಲವೆ
ಓದುವದಕ್ಕೆ ಬುದ್ದಿಯಿಲ್ಲವೆ ಎಲ್ಲಕೂ ಮೀಗಿಲಾಗಿ ಅರಿಯುವುದಕ್ಕೆ ಮನವಿಲ್ಲವೆ... ಒಂದು ಮಳೆಗೆ ಮುಳುಗಿದ
ಅರ್ಧ ಬೆಂಗಳೂರಿನ ಜನರು ರಾಜ ಕಾಲುವೆಯ ನೆಪದಲ್ಲಿ
ಎಷ್ಟೊ ಬಡಬಗ್ಗರ ಮನೆಗಳನ್ನು ನೆಲಸಮ ಮಾಡಿತು..
ಎಲ್ಲ ಮಧ್ಯಮ ವರ್ಗದ ಜನರ ಕನಸುಗಳನ್ನು ನುಚ್ಚು ನೂರು
ಮಾಡಿತು.... ಹಾಗೆ ಮುಂದುವರಿಯುತಾ ಇಲ್ಲ.. ಮಧ್ಯದಲ್ಲಿ ನಟನೊಬ್ಬನ ಮನೆ.. ಪ್ರಭಾವಿ ರಾಜಕೀಯ ವ್ಯಕ್ತಿಯ
ಆಸ್ಪತ್ರೆ ಅಡ್ಡ ಬಂದ ಕಾರಣಕ್ಕೆ ಆ ಕಾರ್ಯಕ್ಕೆ ಇತಿಶ್ರೀಯ
ಹಾಡಿ ಬಿಟ್ಟರು.. ಮನೆ ಕಳೆದುಕೊಂಡವರ ಪಾಡೇನು
ನನಗೆ ದಾರಿ ತೋರುವ ನೆಪದಲ್ಲಿ ನೂರಾರು ಕುಟುಂಬಗಳ
ಬೀದಿಗೆ ತಂದು ಬಿಟ್ಟರು..
ಇನ್ನೂ ರಾಜ್ಯದ ಉದ್ಯಮಿಗಳ ಹಣದಾಸೆಗಾಗಿ
ನೀರ್ಜಿವ ಕೆರೆಗಳೆಂದು ನಮ್ಮನು ಸಂಪೂರ್ಣವಾಗಿ
ಮುಚ್ಚಿಹಾಕಿ.. ಹಣದ ಮೂಟೆಯ ಕಟ್ಟಿ ನಡೆಯುವರು
ನೀರು ನೀರೆಂದು ಸಾಮಾನ್ಯ ಜನರು ದಾಹದಿಂದಲೆ
ಸಾಯುವರು.. ಇನ್ನೂ ಬಹಳ ದಿನಗಳು ಉಳಿದಿಲ್ಲ
ಮಕ್ಕಳೆ ನೀರಿಗಾಗಿ ಬಡಿದಾಡಿ ಸಾಯುವುದು..
ಆ ದಿನಗಳು ಬರುವ ಮುನ್ನವೆ ನೀವು ಎಚ್ಚೆತ್ತುಕೊಳ್ಳಿ
ನಮ್ಮನು ಉಳಿಸಿಕೊಳ್ಳಿ ಹನಿ ಹನಿ ನೀರಿನ
ಮಹತ್ವವನ್ನು ಅರಿತುಕೊಳ್ಳಿ..
ಇಲ್ಲವಾದಲ್ಲಿ... ನಿಮ್ಮ ಗುಂಡಿಯನ್ನು ನೀವೆ
ತೊಡಿಕೊಳ್ಳಿ..
ಹೊತ್ತು ಮತ್ತು
ಹೀಗೆಯೆ ನಿಲ್ಲಲಿ ಈ
ಸಮಯ ನನ್ನನ್ನಪ್ಪಿದ ನಿನ್ನ
ತೋಳುಗಳ ಬಲವು ಕುಂದುವವರೆಗೂ
ಮಿಡಿಯದೆ ನಿಲ್ಲದಿರಲಿ ನಿನ್ನ
ಹೃದಯ.. ಪ್ರತಿ ಬಡಿತದಲ್ಲೂ
ನನ್ನ ಹೆಸರು ಹೇಳುವದನು... ಎದೆಯ
ಮೇಲೆ ಕಿವಿಯಿಟ್ಟು ಕೇಳುತಿರುವಾಗ
ಬಾಡದಿರಲಿ ಈ ಒಲವ ತುಂಬಿದ
ಸಮಯ... ಸುಮದೆದೆಯನು ದುಂಬಿಯು
ಹೀರುವಂತೆ.. ನನ್ನಧರದ ಸವಿಯನೆಲ್ಲವ
ಹೀರುವವರೆಗಾದರೂ ಇರಲಿ ಹಾಗೆ..
ಮಾತಿನ ಹೊತ್ತುಗಳಿಗಿಂತ ನಿನ್ನ
ಮನದ ಮೌನದ ಮಾತುಗಳನ್ನೆಲ್ಲವ
ಕಿವಿಗೊಟ್ಟು ಕೇಳುವವರೆಗಾದರೂ
ನಿಲ್ಲಲಿ ಈ ಹೊತ್ತು... ಇಳಿಯುವವರೆಗೂ
ನಿನ್ನ ಮತ್ತು
ನೀನು
ಮಾತೆ ಬರದ ತುಟಿಗಳಿಗೆ ಜೊತೆಗೂಡಿ
ಪದವ ಕಲಿಸಿಕೊಟ್ಟವಳು ನೀನು
ನಿನ್ನ ಹೆಸರನ್ನೆ ಜಪಿಸುತ್ತಿದ್ದ
ಮನಕೆ ದೂರವಾಗಿ ಮೌನದ
ಬೀಜವ ಬಿತ್ತಿದವಳು ನೀನು
Wednesday, July 26, 2017
ಕಾರ್ಗಿಲ್ ಮರೆಯುವುದಾದರೂ ಹೇಗೆ
ಮರೆಯುವುದಾದರೂ ಹೇಗೆ ?
ಯುದ್ಧ ಭೂಮಿಯಲ್ಲಿ ಎದೆಗೆ
ಗುಂಡನುಂಡು ಮಡಿದ ಮಣ್ಣಿನ
ಮಕ್ಕಳಿಗೆ ಗೌರವ ನೀಡುವದಕ್ಕಾಗಿ
ನಮ್ಮ ರಾಷ್ಟ್ರ ನಾಯಕರು ಶವದ
ಪೆಟ್ಟಿಗೆಗಳ ಖರೀದಿಸುವಾಗ.. ತಾವು
ಮಾಡಿದಂತಹ ಹಗರಣಗಳ.. ಅವರ
ತ್ಯಾಗ ಬಲಿದಾನಗಳಿಗೆ ಇವರು ಕೊಟ್ಟ
ಬಹುಮಾನಗಳ ಮರೆಯುವುದಾದರೂ ಹೇಗೆ..?
ಮರೆಯುವುದಾದರೂ ಹೇಗೆ..?
ಮಡಿದ ವೀರರ ಮಡದಿಯರಿಗೆ
ಸರಿಯಾದ ಪರಿಹಾರ ಧನವನ್ನು
ಒದಗಿಸದೆ..ಅವರ ಕರುಳ ಬಳ್ಳಿಗಳಿಗೆ
ಅನಾಥ ಪ್ರಜ್ಞೆ ಮೂಡುವಂತೆ ಮಾಡುವ
ರಾಜಕಾರಣಿಗಳ ನರಿ ಬುದ್ದಿಯನು
ಮರೆಯುವುದಾದರೂ ಹೇಗೆ..?
ಮರೆಯುವುದಾದರೂ ಹೇಗೆ..?
ಸ್ನೇಹಿತರಂತೆ ವರ್ತಿಸಿ ಬೆನ್ನಿಗೆ ಚೂರಿ
ಹಾಕುವ ನೆರೆ ರಾಷ್ಟ್ರಗಳ ರಾಯಭಾರಿ
ಗಳೊಂದಿಗೆ ಕುಳಿತು ಕುಶಲೋಪಚಾರಿ
ನಡೆಸುವ ಕುರುಡ ಜಾಣರಂಥಹ
ಭವಿಷ್ಯದ ನಾಯಕರಿರುವಾಗ
ಮರೆಯುವುದಾದರೂ ಹೇಗೆ..?
ಅವರ ನೆತ್ತರು ಬಸಿದು ಕಾದ
ಈ ದೇಶವನು..ತಮ್ಮ ಸಂಸಾರವ
ಮರೆತು ನಮ್ಮೆಲ್ಲರ ಸುಖ ಸಂತೋಷಕ್ಕಾಗಿ
ಅವರೆಲ್ಲ ಹಗಲಿರುಳನು ಗಡಿಯನ್ನು
ಕಾಯುತಿರುವುದನ್ನು..
ನಾವು ಮರೆಯುವುದಾದರೂ ಹೇಗೆ..?
ವಂದೇ ಮಾತರಂ
ಗುಳ್ಳೆ ನರಿಗಳಂತೆ ನಮ್ಮ ನೆಲದಲ್ಲಿ ಬೀಲವ
ತೊಡಿಕೊಂಡು.. ನಮ್ಮ ಸರಹದ್ದನ್ನು ಮೀರಿ
ನೆಲಜಲವನ್ನು ಅತಿಕ್ರಮಿಸಿಕೊಂಡು...
ದೇಶದ ಆಂತರಿಕ ಭದ್ರತೆಯನ್ನು.. ಧರ್ಮ
ಧರ್ಮಗಳ ನಡುವೆ ಆಂತರಿಕ ಕಲಹವನ್ನು
ಜನ ಸಾಮಾನ್ಯರ ಪ್ರಾಣಹರಣ ಮಾಡಲು
ಉಗ್ರರ ನುಸುಳುವಿಕೆಗೆ ಸಹಾಯ ಮಾಡುತ್ತಿದ್ದವರನ್ನು
ಸದ್ದಿಲ್ಲದೆ.. ಕಗ್ಗತ್ತಲಲಿ ಬೆಟ್ಟಗಳನೇರಿ... ಕಡು ವೈರಿಗಳ
ಸದೆ ಬಡಿದು... ಅಡಗಿ ಕುಳಿತು ಮೇಲಿಂದ ಷಂಡರಂತೆ
ಗುಂಡು ಹಾರಿಸಿ ಕೇಕೆ ಹಾಕಿ ನಗುತ್ತಿದ್ದವರ
ಹುಟ್ಟಡಗಿಸಿ..ಹಸಿದ ಚಿರತೆ ಜಿಂಕೆಯನು ಓಡಾಡಿಸಿ
ಓಡಾಡಿಸಿ ಬೇಟೆಯಾಡಿ.. ತಿಂದು ತೇಗಿದಂತೆ
ನಮ್ಮ ನೆಲದಲ್ಲಿ ಅಕ್ರಮವಾಗಿ ಕಾಲಿಟ್ಟವರು
ಹೆಣವಾಗಿ ಹೋಗುವರೆಂಬ ಸತ್ಯವನು ಜಗಕೆ
ಸಾರಿ ಹೇಳಿದ ದಿನವಿದು..
ಮರೆಯಲಾಗದ ದಿನವಿದು ಭರತ ಸಂಜಾತಗಳಿಗೆ
ವಿಶ್ವ ಭೂಪಟದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಟ್ಟಂತಹ
ತ್ರಿವರ್ಣ ಧ್ವಜವು ಸ್ವಚ್ಛಂದ ಸ್ವತಂತ್ರವಾಗಿ ಹಾರಾಡುವಂತಹ
ಮಕ್ಕಳೆಲ್ಲರಿಗೂ ವಿಜಯೋತ್ಸವದ ಕಥೆಯನ್ನು ಹೇಳುವಂಥಹ
ಶತ್ರುಗಳು ನಮ್ಮ ನೆಲದಲ್ಲಿ ಕಾಲಿಡಲು ಹತ್ತತ್ತು ಸಾರಿ
ಯೋಚಿಸಿ ಗಡಿ ರೇಖೆಯ ದಾಟಲು ಹೆದರಿ ಗಡಗಡನೆ
ನಡುಗುವಂತಹ...ಮನುಕುಲ ಇರುವವರೆಗೂ ನೆನೆಯುವಂತೆ
ಇತಿಹಾಸ ಪುಟದಲಿ ಸೇರಿದ ಈ ದಿನವ ಮರೆಯಲಾಗುವುದೆ..
ನಿಜ ಮರೆಯಲಾಗುವುದೆ ಈ ದಿನ....
ಕಂಡೊಡನೆ ಮನಸಿಗೆ ಮುದ ನೀಡಿ.. ಬಾಳಿನ
ಜಂಜಾಟಗಳಿಗೆ ಮುಕ್ತಿಯ ದೊರಕಿಸಿ ಕೊಡುವ
ಪ್ರಶಾಂತತೆಯನೆ ಹೊದ್ದು ಮಲಗಿದ್ದ ಕಣಿವೆಗಳಲ್ಲಿ
ಮದ್ದು ಗುಂಡುಗಳ ಸದ್ದಿಗೆ... ದೊಡ್ಡ ದೊಡ್ಡ ಪರ್ವತಗಳೆ
ನಡುಗಿದ್ದವು... ಬಾಂಬುಗಳ ಸಿಡಿತಕ್ಕೆ ಸಿಕ್ಕು ಛಿದ್ರಗಳಾಗಿದ್ದವು
ನಮ್ಮವರದ್ದೊ...ವೈರಿಗಳದ್ದೊ ಗುಂಡಿಗೆ ಸಿಕ್ಕು ಅವರ
ದೇಹಗಳಿಂದ ಸುರಿದು ಬರುವ ನೆತ್ತರನು ಮೆಲ್ಲಗೆ
ಹೀರುತ್ತಿದ್ದವು...ಹಚ್ಚ ಹಸಿರಿನ ಹಿಮಾದ್ರಿಯ ತೆಪ್ಪಲಿನಲ್ಲಿ
ಹರಿಯುವ ಕೆಂಪು ರಕ್ತದ ಕಾಲುವೆಗೆ ಸಾಕ್ಷಿಯಾದವು..
ಛಿದ್ರಗೊಂಡ ದೇಹಗಳನು ಕುಕ್ಕಿ ಕುಕ್ಕಿ ತಿನ್ನುವ ರಣಹದ್ದುಗಳ
ಓಡಿಸಲಾಗದೆ ಹತಾಶೆಗಳಾಗಿದ್ದವು... ಮಡಿದ ವೀರರ
ಮಡದಿ ಮಕ್ಕಳ ಅಳುವಿನಾಕ್ರಂದನಕೆ ಕಿವುಡಾದವು.. ಅವರ
ಕೆಂಗಣ್ಣಿನ ಕಣ್ಣೀರಿನ ತಾಪಕೆ ನಲುಗಿಹೋದವು..
ಹೇಗೆ ಮರೆಯುವುದು ವಿಧವೆಯರನ್ನು...ಕೈ ಕಾಲುಗಳ
ಕತ್ತರಿಸಿಕೊಂಡು ಬಾಳುತಿರುವವರನ್ನು..ದೇಹದ ತುಂಬೆಲ್ಲಾ
ಹೊಕ್ಕಿರುವ ಗುಂಡುಗಳನ್ನು ತೆಗೆಯಲಾಗದೆ.. ಅವು
ನೀಡುವ ನೋವುಗಳ ಸಹಿಸಿಕೊಳ್ಳುತ್ತಿರುವುದನ್ನು
ಮರೆಯದು.. ಮರೆಯಲಾಗದು..ಮುಂದಿನ
ಪೀಳಿಗೆಯು ಮರೆಯದಂತೆ... ಭವಿಷ್ಯದಲ್ಲಿ ಯುದ್ಧವೆಂಬ
ಕರಾಳಛಾಯೆ ಮೂಡದಂತೆ ಬದುಕಬೇಕಿದೆ..
ಸ್ವಾರ್ಥ ರಾಜಕೀಯಕ್ಕಾಗಿ... ಸಾಮ್ರಾಜ್ಯದ ವಿಸ್ತರಣೆಯ
ದುರಾಸೆಗಾಗಿ.. ಮನುಕುಲಕ್ಕೆ ಶಾಂತಿ.. ಸನ್ಮಾರ್ಗ ನೀಡದ
ಧರ್ಮ ಸ್ಥಾಪನೆಗಾಗಿ...ಹೂಡುವ ಯುದ್ದವು...ಎಂದಿಗೂ
ಜಯಿಸಲಾರದು.. ಬಂದೂಕಿನಿಂದ ಹಾರಿದ ಗುಂಡಿಗೇನು
ಗೊತ್ತು..ಅವರು ನಮ್ಮವರೊ ಪರಕೀಯರೊ ಎಂಬುದ
ಸಿಕ್ಕ ದೇಹವ ಹೊಕ್ಕು ಘಾಸಿಗೊಳಿಸದೆ ಬಿಡದು...
ಏನೇ ಆದರೂ ನಮ್ಮ ನೆಲವನ್ನು ಕಬಳಿಸಲು... ನಮ್ಮ ಸಂಸ್ಕೃತಿಯನ್ನು ವಿನಾಶಮಾಡಲು ಬಂದವರನ್ನು
ಮಾತ್ರ ನಾವು ಶಿಕ್ಷಿಸದೆ ಬಿಡೆವು..
ವಂದೇ ಮಾತರಂ
Tuesday, July 25, 2017
ನಿನ್ನಾಟಕೆ ಎಣೆಯುಂಟೆ
ನಿನ್ನಾಟಕೆ ಎಣೆಯುಂಟೆ....
ನಿನ್ನಾಟಕೆ ಎಣೆಯುಂಟೆ ಭಗವಂತ
ಉಸಿರು ಕೊಟ್ಟ ಜೀವವ ಕಸಿದು
ಉಳಿಸಿಬಿಟ್ಟೆಯಲ್ಲ ನನ್ನನ್ನೊಬ್ಬನನ್ನೆ
ಈ ಬರಡು ಬದುಕಿನ ಬೆನ್ನಿಗೆ ಹಸಿವನ್ನು
ಹೊಸೆದು...
ಎಷ್ಟು ದಿನಗಳಿಂದ ಕಾಯುತ್ತಿದ್ದೆಯೊ...
ಮರಣ ಕುಣಿಕೆಯನು ಹೊಸೆದು
ತೀರಿಸಿಕೊಂಡುಬಿಟ್ಟೆಯಲ್ಲ.. ಒಂಚೂರು
ಕಹಿಯನುಳಿಸಿಕೊಳ್ಳದೆ ಎಲ್ಲವ ಮಸೆದು
ಸಾವು ನೋವೆಂಬುದನರಿಯದ ಮನಕೆ
ಕೊಟ್ಟೆಯಲ್ಲ.... ಅಮ್ಮಾ.. ಎಂಬ
ಹಸಿವಿನಳುವಿನ ಕಾಣಿಕೆ
ತೋರಿದೆಯಲ್ಲೊ ಎಂತಹ ದೊಡ್ಡಸ್ಥಿಕೆ
ತಾಯೆಂಬ ಪದವ ಮಾಡಿದೆಯಲ್ಲೊ
ಬದುಕಿನಲ್ಲಿನ್ನೂ ನನಗೆ ಮರಿಚೀಕೆ
ನನಗಿನ್ನೇನು ಉಳಿಸಿದೆ ಈ ಜಗದಲಿ
ನನ್ನಮೃತವ ಕೊಂದೆನ್ನ ಮಾಡಿರುವೆಯಲ್ಲ ತಬ್ಬಲಿ
ಇನ್ನಾವ ಎದೆಯ ಕ್ಷೀರಧಾರೆಯ ಸವಿಯಲಿ
ನಾ ಮಲಗುವ ಮಡಿಲನೆ ಮಲಗಿಸಿಬಿಟ್ಟಿರುವೆಯಲ್ಲ... ಮಣ್ಣಲಿ
ನನ್ನುಸಿರಿಗೆ ಉಸಿರನು ಕೊಟ್ಟ ಉಸಿರನ್ನೆ
ಕರಗಿಸಿಬಿಟ್ಟೆಯಲ್ಲ ಗಾಳಿಯಲಿ..
ನೀ... ಉರುಳಿಸುವ ದಾಳವ ಬಲ್ಲವರಾರು
ಕೊಟ್ಟು ಕಸಿದು ಅಳಿಸುವ ಪರಿ ಅರಿತವರಾರು
ಹಾಲುಗಲ್ಲದ ಹಸುಳೆಯ ಕಂಗಳಿಗೂ...
ಕಣ್ಣೀರಿನ ಕಟ್ಟೆಯ ಕಟ್ಟಿ ಕೊಡುವ ಕಲೆಯ ಕಲಿತವರಾರು
ತಾಯಿಲ್ಲದ ನೋವಿಗೆ... ಹೊತ್ತು ಹೊತ್ತಿಗೂ ಕಿತ್ತು
ತಿನ್ನುವ ಹಸಿವಿನ ನೋವನು ಮರೆಸುವ ಮದ್ದನು
ಕೊಡುವಿರಾ....? ಯಾರಾದರೂ...
Sunday, July 23, 2017
ಬಂಧಿಸು
ನಿನ್ನ ಕಣ್ಣೀನ ಸೆರೆಮನೆಯಲ್ಲಿ
ಬಂಧಿ ಈಗ ನಾ..
ಅವೆರಡಿಂದ ಬಿಡಿಸಿಕೊಂಡು
ಬರಲಾರದಷ್ಟು ಬಡ ಪ್ರೇಮಿ ನಾ..
ಒಳಗಣ್ಣನೊಮ್ಮೆ ತೆರೆದು ನಿನ್ನ
ಪ್ರೀತಿಯ ಒಪ್ಪಿಗೆಯ ಜಾಮೀನು
ನೀಡಿ ಕಳಿಸು..
ಇಲ್ಲವೆ ನಿನ್ನೊಲವ ಬೇಡಿ ಬಂದ
ಈ ಮನಕೆ ಕ್ಷಮಾದಾನವು ನೀಡದೆ
ಪ್ರೇಮಬಂಧನದಲಿ ಬಂಧಿಸು
Saturday, July 22, 2017
ಬಣ ಬಣ
ಅವಳಿಲ್ಲದ ಆಷಾಡದಲ್ಲಿ
ಜೇಬು...ತುಂಬಿ ತುಳುಕುತ್ತಿತ್ತು
ಝಣ ಝಣವೆಂದು...
ಶ್ರಾವಣಕೆ ಬಂದವಳು
ಸೀರೆ ಒಡವೆಗಳೆಂದು ಮಾಡಿದಳು
ನನ್ನ ಜೇಬನ್ನು ಬಣಬಣವೆಂದು
ನೀನೆ ಅಲ್ಲವೆ
ಹೇಳದೆ ಕೇಳದೆ ಮನದ
ಕೋಟೆಯ ಆಕ್ರಮಿಸಿ
ಹೃದಯಸಿಂಹಾಸನವದಲಿ
ವೀರಾಜಿಸುತಿರುವವಳು
ನೀನೆ ಅಲ್ಲವೆ..
ದಿನವಿಡಿ ಮಾಡುವ ಕೆಲಸಗಳಲ್ಲಿ
ನೆನಪಾಗಿ ಕಾಡಿ ಕಾಡಿ ನನ್ನನ್ನು
ನಿನ್ನ ಮೋಹದಲಿ ಮಬ್ಬಾಗಿ
ಕುಳ್ಳರಿಸುವಂತೆ ಮಾಡುವವಳು
ನೀನೆ ಅಲ್ಲವೆ..
ಮನೆಯಲ್ಲಿ ರಾತ್ರಿಗೆ ಊಟಕ್ಕೆ
ಕುಳಿತಾಗ... ಅನ್ನದ ತಾಟಿನಲ್ಲಿ
ಉಣ್ಣದೆ ನಿನ್ನ ನೆನೆ ನೆನೆದು ಬೆರಳಾಡಿಸುತ
ಕುಳ್ಳರಿಸುವಂತೆ ಮಾಡಿದ್ದು
ನೀನೆ ಅಲ್ಲವೆ..
ರಾತ್ರಿಪೂರಾ.. ಈ ಕಂಗಳಿಗೆ
ನಿನ್ನ ನಗುವನು ಕಾವಲಿಟ್ಟು
ನಿದಿರೆಗಳನೆಲ್ಲವ ಗಧರಿಸಿ
ಬೆದರಿಸಿ ಹೊರಗಟ್ಟಿಬಿಟ್ಟು
ರಾತ್ರಿಯಿಡಿ ನಿನ್ನ ಜಪವ ಮಾಡುವ
ಹಾಗೆ ಮಾಡಿದವಳು
ನೀನೆ ಅಲ್ಲವೆ..
ಮಾತು ಮಾತಲೂ ನಿನ್ನ ಹೆಸರಿನ
ಪದಗಳನೆ ತುಂಬಿ... ಬದುಕಿನ
ಪುಟಗಳಲಿ ಬರೀ... ನಿನ್ನೊಲವನೆ
ತುಂಬಿದವಳು
ನೀನೆ ಅಲ್ಲವೆ
ಅರಿತಿಲ್ಲ
ಎಲ್ಲರೂ ಹೇಳುವರು ನೀವು
ಬರೆಯುವ ಪ್ರೇಮದ ಸಾಲುಗಳಿಗೆ
ಸೋಲದವರಾರು ಇಲ್ಲ....
ವಿಧಿಯೆ...... ನಾ ಬರೆದ
ಪ್ರತಿ ಸಾಲುಗಳ ಪದಗಳು
ಅವಳ ನಿರಾಕರಣೆಯ ನೋವಿಂದ
ಅರಳಿದವೆಂಬುದ ಅವರಾರು
ಅರಿತಿಲ್ಲ..
ರವಿಯ ಉದಯ
ಇರುಳು ಮರೆಗೆ ಸರಿದು
ಹಗಲು ನಡೆದು ಬಂದು
ಚಿಗುರೆಲೆಯ ಇಬ್ಬನಿಗೆ
ಮುತ್ತಿಕ್ಕಿ ನಗಲು..
ನಾಚಿಕೆಯ ಬೆಳ್ಳಿ ಬೆಳಕು
ಚೆಲ್ಲಿತು ಜಗದಲಲ್ಲೆಲ್ಲಾ..
ತಂಗಾಳಿಗೆ ತನುವು ಸೋತು
ಮಲಗಿರಲು.. ಉಲ್ಲಾಸಕೆ
ಮಡದಿ ಒಲಮೆಯ ಪೇಯವ
ತಂದಿರಲು.. ರಾತ್ರಿ ಕನಸುಗಳ
ನೆನೆದು ಎದ್ದು ಕೂರುವ ಸವಿ
ಘಳಿಗೆಗೆಳ ದಿನವು ಊಣಬಡಿಸುವ
ರವಿಯ ಹೊಗಳಲು ನನ್ನಲೂ
ಪದಪುಂಜಗಳು ಸಾಲವು
ಸೊಗಸಾಗಿವೆ ಸಹೋದರಿಯವರೆ ಸಾಲುಗಳು ಶುಭದಿನ
Friday, July 21, 2017
ಕಾದ ತನು ಮನ
ನನ್ನ ಮನವಿದು ಕಾದಿದೆ
ಆಷಾಡದ ಕಾರ್ಮೋಡವು
ಕಳೆದು ಮೂಡುವ ಶ್ರಾವಣದ
ಹೊಂಗಿರಣಕೆ....
ನನ್ನೊಲವಿನರಮನೆಗೆ ನಿನ್ನ
ಕರೆದು ತರಲು ಕಾದು
ಕೂತಿದೆ ತನು ಮನ
ಕಿಚ್ಚು ಹಚ್ಚಬೇಕು
ಮನಸಲ್ಲಿ ನಿನ್ನ ಮಲ್ಲಿಗೆಯ
ಮೊಗದ ನಗುವ ಹೊತ್ತು
ಬರುತಿಹೆನು ನಿನಗಾಗಿ
ಎದೆ ತುಂಬಾ ಒಲವನ್ನು ಹೊತ್ತು
ಕೂಡುವ ಕಾತರತೆಯು ಹೆಚ್ಚುತಿದೆ
ತನುಮನಗಳಲ್ಲಿ..
ನಿನ್ನ ಸೇರುವ ಕಾತುರತೆಯ ಕಂಡು
ಬೀದಿ ದೀಪಗಳು ನಗುವ ಚೆಲ್ಲಿವೆ ಹಾದಿಯಲ್ಲಿ
ಇಂದಿನ ಇರುಳಿಗೆ ಕನಸಿನ
ಹೂ ಮಾಲೆಯನೆ ಹೊತ್ತು ತರುವೆನು
ಬಾಡದ ನೆನಪುಗಳ ನಿನ್ನ ಮೈ ಮನ
ಗಳಲ್ಲಿ ತುಂಬಿ ಬಿಡುವೆನು
ನಾ ನೀಡುವ ಮುತ್ತಿನ ಮುದ್ರೆಗಳಿಗೆ
ಹೊತ್ತುಗಳು ನಾಚಬೇಕು
ಎಂದು ಮರೆಯದ ಈ ಮೊದಲ
ರಾತ್ರಿಗೆ ನಾ ಕಿಚ್ಚು ಹಚ್ಚಬೇಕು
Thursday, July 20, 2017
ಮುಂದೇನು ?
ಮಾತು ಮಾತಿಗೂ ಕೇಳುವೆಯಲ್ಲ
ಮುಂದೇನು.. ಮುಂದೇನು
ಮಾತನಾಡುವ ಎದೆಯ ಮೇಲೆಯೆ
ಒರಗಿರುವೆಯಲ್ಲ ಕೇಳಿಸದೆನು..
ಮನದ ಮಾತು
ಹೂವರಳಿ ಮುದುಡುವವರೆಗೂ..
ನಿನ್ನ ಕಂಗಳಿಂದ ನನ್ನ ಕಂಗಳನು
ಕಟ್ಟಿಹಾಕಿರುವೆ.. ಆದರೂ ಅರಿಯೇಯೆನು
ಕಣ್ಣಾಸೆಗಳನು...
ಸಂಜೆಗೆ ಸುಮವು ಬಾಡಿ ಹೋದರು
ನಿನ್ನಧರದ ಸುಮ ನನ್ನಧರಕೆ ಗಂಧವ
ತುಂಬುತಿರುವಾಗ ತಿಳಿಯದೆ ಇರುವೆಯೇನು
ತುಟಿಯಂಚಿನ ಮಾತನು..
ಸುಳಿಗಾಳಿಯೂ ಸುಳಿಯದ ಹಾಗೆ
ಬಂಧಿಯಾಗಿ ಈ ತೋಳುಗಳಲಿ
ತನುವೆಲ್ಲ ಬಿಸಿಯೇರಿದ್ದರೂ..
ಕೇಳುವೆಯಲ್ಲ ಮತ್ತೆ...ಮತ್ತೆ..
ಮುಂದೇನು..
ಚೆಲುವು
ಮೂಡಿರೆ ಬಾನಲಿ ನೆನಪಿನ ತಾರೆಗಳು
ನಿದಿರೆಯೊಳು ಕಾಡುತಿವೆ ನಿನ್ನವೆ ಕನಸುಗಳು
ಕಂಗಳಿಗೆ ಅದೇನು ಮಾಡಿದೇಯೊ ನಿನ್ನಂದವು
ಕಂಗಳೆರೆಡು ಮಲಗಲೇ...ಒಪ್ಪುತ್ತಿಲ್ಲ
ನೆನೆ ನೆನೆದು ನಿನ್ನ ಚೆಲುವು
ಹಂಬಲ ಚಪಲ ೪೩೯
ಸುರಿವ ಮಳೆಯ
ಕೊನೆಯ ಹನಿಯಾಗಿ
ನಿನ್ನ ಚುಂಬಿಸೊ..
ಹಂಬಲ
ಮೊದಲ ದುಂಬಿಯಾಗಿ
ನಿನ್ನೆದೆಯ ಮಧುವ
ಸವಿಯಬೇಕೆನ್ನುವ
ಚಪಲ..
Wednesday, July 19, 2017
ಅರಿವಿಲ್ಲದೆ
ಬಾಳಿನ ಸಂಗಾತಿ..
ಹೇಳದೆ ಕೇಳದೆ ಎದೆ
ಮನೆಯ ಬಾಗಿಲ ನೂಕಿ ಬಂದಾಕಿ
ಮರಭೂಮಿಯಲ್ಲಿ ಪ್ರೇಮ
ಸಸಿಯ ನೆಟ್ಟು ನಡೆದೆಯಲ್ಲ
ನೀನು ನನ್ನರಿವಿಲ್ಲದೆ....
ಮಾಡಿದ ಕರೆಗಳಿಗೆಲ್ಲ ನಿರುತ್ತರವ
ಕೊಟ್ಟೆ... ಬದುಕದೆ ನಿನ್ನ ನೆನಪಲಿ
ಓದಿ..ಓದಿ..ನರಳಲು ನೂರೊಂದು
ಪತ್ರಗಳ ಕಂತೆಯನೆ.. ಬಿಟ್ಟೆ..
ಸೂಜಿಯ ಮೊನೆಯಂತೆ ಚುಚ್ಚುವ
ನಿನ್ನ ನಗುವಿನ ಸದ್ದನು ಎದೆಯಲಿ
ತುಂಬಿಬಿಟ್ಟೆ.... ನೋವಿಗೆ ತಾಳದ
ಮನವಿದು ಎಷ್ಟೇ ಕೂಗಿ ಕೂಗಿ ಕರೆದರು
ಯಮನನ್ನು..ನನ್ನ ನೋವಿಗೆ ಕಿವಿಗೊಡದ
ಹಾಗೆ ಅವನನ್ನು ಕಿವುಡನನ್ನಾಗಿಸಿದೆ...
ಹೊಳೆಯ ದಾಟಿದ ಮೇಲೆ ಅಂಬಿಗನ
ಹಂಗೇಕೆ ಎಂಬಂತೆ...ಪ್ರೀತಿಯ ಹೊಳೆಯಲಿ
ಒಲವಿನ ದೋಣಿಯಲಿ ವಿಹಾರಿಸಿ..ವಿರಹದ
ದಡದಲಿ ನನ್ನನೊಬ್ಬನೆ ಕಾಯಲು ಕುಳ್ಳರಿಸಿ
ನಡದೆಯಲ್ಲ...
ದಿನ ಬೆಳಗೊ.. ಸೂರ್ಯನಿಗೂ ಗ್ರಹಣ
ಹಿಡಿಯುವುದು...ಕಳೆಯುವುದು..ನೀನು
ಮಾತ್ರ ಕರಗದ... ಮರೆಯದ ಗ್ರಹಣವನು
ಪ್ರೀತಿಗೆ ಹಿಡಿಸಿ ಮರೆಯಾಗಿಬಿಟ್ಟೆ..
ನಮ್ಮ ತುಂಬು ಪ್ರೀತಿಯ ಕನ್ನಡಿಯನ್ನು
ಕಲ್ಲು ಬಂಡೆಯ ಮೇಲೆ ಒಡೆದು ಚೂರು
ಚೂರು ಹಾಗೆ ಕೈ ಬಿಟ್ಟು... ಓಡಿದೆಯಲ್ಲ
ನನ್ನ ಸ್ಥಿತಿಯು ಏನಾಗುವುದೊ...
ಎಂಬರಿವಿಲ್ಲದೆ
ಅವಳ ಕನಸನ್ನೆ
ಅವಳ ಮಲ್ಲಿಗೆಯ
ನಗುವಿಗೆ ಸೋತ
ಮನವಿದು.. ಬೇಡುತಿದೆ
ಮರಳಿ ಮರಳಿ ಅವಳ
ನಗುವನ್ನೆ..
ನಗುವಿಗೆ ಸೋತ
ಮನಸ್ಸಿದು.. ತಾರೆಗಳ
ರಾತ್ರಿಗಳಿಗೂ.. ಬೇಡುತಿದೆ
ಬರೀ.. ಅವಳ
ಕನಸನ್ನೆ..
ವರುಣ
ವರುಣ ಎಷ್ಟು
ಹೆಪ್ಪುಗಟ್ಟಿರುವೆ
ಮುನಿದು
ಮೋಡದಲಿ..
ಕೋಪವ ಮರೆತು
ಬಂಧಿಯಾಗಬಾರದೆ
ಸುರಿದು.. ಭೂದೇವಿಯ
ತೆಕ್ಕೆಯಲಿ...
Tuesday, July 18, 2017
ನಿನ್ನ ಕರೆಗೆಂದೆ
ಸನಿಹವಿದ್ದಾಗವೇಕೆ ಸಲ್ಲದ
ನುಡಿಗಳನಾಡಿ ದೂರ ತಳ್ಳಿದೆ
ನೀನೊಬ್ಬಳೆ ದೂರದಲಿ ಕೂತು
ನನಗೆ ಕೇಳಿಸದ ಹಾಗೆ ಬಂದು ಬಿಡು
ಎಂದು ಕರೆದರೆ ಬರಲಾದರೂ ಹೇಗೆ..
ಮುತ್ತುಗಳ ಮೋಡವನು ಕಟ್ಟಿ ತಡೆ
ಹಿಡಿಯಲಿ ಅದೇಷ್ಟು ಘಳಿಗೆ..
ಕೂಗೆ ಮನವಿದು ಕಾದಿದೆ
ನಿನ್ನ ಕರೆಗೆಂದೆ..
Monday, July 17, 2017
ದೇವನು ಕ್ರೂರಿಯೆ
ಹೌದು ದೇವನು ಕ್ರೂರಿಯೆ...
ಆದರೂ ಅವನಿಗೆ ನನ್ನದೊಂದು ಶರಣು..
ಮನದಲ್ಲಿ ದುಃಖದ ಕಟ್ಟೆಯನ್ನೆ ಕಟ್ಟಿಕೊಂಡಿದ್ದರೂ.. ಇನ್ನೊಬ್ಬರ
ನೋವಿಗೆ ಸ್ಪಂದಿಸುವ.. ಮೀಡಿಯುವ
ಮನಸ್ಸನು ನೀಡಿದ್ದಕ್ಕೆ...
ತಾವು ದಿನನಿತ್ಯ ಕಣ್ಣೀರಿನಲ್ಲೆ ಕೈ
ತೊಳೆಯುತ್ತಿದ್ದರೂ.. ದುಃಖದಲ್ಲಿರುವ ಇನ್ನೊಬ್ಬರ ಕಣ್ಣೀರನು ಒರೆಸುವ ಗಟ್ಟಿ
ಕೈಗಳನ್ನು ಕೊಟ್ಟಿದ್ದಕ್ಕೆ
ನೀಡಿದ ಪ್ರೀತಿಗೆ ಮೋಸ ಮಾಡುವ
ಮನಸ್ಸುಗಳಿದ್ದರೂ ಅವುಗಳ ಕ್ಷಮಿಸಿ
ಮತ್ತೆ ಮತ್ತೆ ಪ್ರೀತಿಯ ಹಂಚುವಂತಹ
ತಾಯಿ ಮನಸ್ಸನ್ನು ನೀಡಿದ್ದಕ್ಕೆ
ಜೇಬಲ್ಲಿ ಹಣವಿಲ್ಲದಿದ್ದರೂ.. ನಾಲ್ಕು
ಜನರು ಮೆಚ್ಚಿ ಹೊಗಳುವ ಗುಣವನ್ನು
ಬಾಳಲ್ಲಿ ತುಂಬಿದ್ದಕ್ಕೆ...
ಹೇಳಲಾಗದ.. ಕರಗಲಾರದ.. ಮರೆಯಲಾರದ ನೋವುಗಳಿದ್ದರೂ
ಅವೆಲ್ಲವ ಮೆಟ್ಟಿ ಸದಾ ಮೊಗದಲಿ
ಮಂದಹಾಸದ ಚಿಲುಮೆಯನ್ನಿಟ್ಟಿದ್ದಕೆ
ಏಷ್ಟೆಂದು ಶರಣು ಹೇಳಲಿ ನಿನಗೆ ನಾ..
ಇಷ್ಟೇಲ್ಲಾ ನೀ ನೀಡಿರುವಾಗ
ಆದರೂ ನಮ್ಮೆಲ್ಲ ಮೂಡನಂಬಿಕೆಗಳಿಗೆ ನಿನ್ನ ನಾವು ಹೊಣೆ ಮಾಡುವೆವಲ್ಲ..
ಕಲ್ಲು ದೇವರು ಎಂದು ತಿಳಿದಿದ್ದು ತಾವು
ಉಪವಾಸವ ಗೈದು ಅವನಿಗೆ ನೈವೇದ್ಯವ
ಒಯ್ಯುವರಲ್ಲ.. ಅವನು ಕೇಳಿದ್ದನೆ..
ಬದುಕಿಗೆ ಅವಶ್ಯವಿರುವ ವಸ್ತುಗಳ ಖರೀದಿಸದೆ.. ಉಣ್ಣದ ತೊಡದ ದೇವರಿಗೆ
ಹರಕೆಗಳ ಮೇಲೆ ಹರಕೆಯ ತೀರಿಸುವರಲ್ಲ
ವಾರ ವೃತಗಳು ನಿಮ್ಮ ಮನಸ್ಸನ್ನು ನಿಗ್ರಹಿಸಲು ಮಾಡಿಕೊಂಡಿರುವ ಸಾಧನಗಳು.. ಅಲ್ಲದೆ ನೀವೊಬ್ಬರೆ ಕೂಗಿದ
ತಕ್ಷಣ ನಿಮಗೆ ಓಗೊಟ್ಟು ತಕ್ಷಣವೆ ಬರಲಾಗುವುದಿಲ್ಲವಲ್ಲ.. ನೂರ್ಹತ್ತು ಕೋಟಿ ಜನರ ಮನವಿಯ ಅನುಗ್ರಹಿಸುತ್ತ.. ಬರುವಾಗ ಸ್ವಲ್ಪ ತಡವಾಗುವುದು ಅಲ್ಲಿಯವರೆಗೂ ಕಾಯದೆ ನಿಮಗೆ ಇರಲಾಗದೆ ಹೇಳುವಿರಲ್ಲ ನೀವೆ ನಮ್ಮ ಕೂಗು ನಿನಗೆ ಕೇಳುತ್ತಿಲ್ಲವೆ ಎಂದು..?
ಇದು ನನ್ನನುಭವ.. ತಪ್ಪಿದ್ದರೆ ಕ್ಷಮಿಸಿ
ಅದ್ಭುತವಾಗಿ ಬರೆದಿರುವಿರಿ ಸಹೋದರಿಯವರೆ ಶುಭೋದಯ
ಸಾರು ಬಾ ಹೆಣ್ಣೆ
ಹೆಣ್ಣೆ...
ಗೆದ್ದುಬಿಡು ನೀ..ನಾನೊಬ್ಬಳು
ಹೆಣ್ಣು ಅಬಲೆಯೆಂಬುದನು...
ಮಾತು ಮಾತಿಗೂ ಕಣ್ಣೀರು
ತಂದು ಮೂಲೆ ಸೇರುವ ಬದುಕನು..
ನಿನ್ನ ತಪ್ಪಿಲ್ಲದಿದ್ದರೂ ಅವರು ಕೊಡುವ
ಬಾಸುಂಡೆಗಳಿಗೆ ತೋರುವ ನಿನ್ನ ಬೆನ್ನನು..
ದುಡಿಯಲು ಹೊರಗೆ ಹೋದ ಸ್ಥಳಗಳಲ್ಲಿ
ನೀಡುವ ಲೈಂಗಿಕ ಕಿರುಕುಳವನು...
ತಾಳಿ ಕಟ್ಟುವ ವೇಳೆ ಬಾಗಿಸಿದ ತಲೆಯನ್ನು
ಬಾಳ ತುಂಬ ಅನ್ಯಾಯವಾದರೂ ಸರಿ
ತಲೆ ತಗ್ಗಿಸಿ ನಡೆಯಬೇಕೆಂಬ ಗೊಡ್ಡು
ಸಂಪ್ರದಾಯವನ್ನು..
ಎಷ್ಟಿದ್ದರೂ ಗಂಡಿನ ಕಾಮಕ್ಕೆ ಹೇರುವ
ಮಕ್ಕಳ ಯಂತ್ರವೆಂಬುದನು..
ಹೆಣ್ಣೆ...
ಹೊರಗೆ ಬಾ ಆ ಕೋಣೆಯಿಂದ
ನೀನು ನೋವುಂಡು ಹೋದಾಗಲೆಲ್ಲ
ನಿನ್ನ ದುಃಖಕ್ಕೆ ಕಿವಿಯಾಗದ...ನೊಂದ
ಮನಸ್ಸಿಗೆ ಸಾಂತ್ವಾನದ ಮಾತುಗಳ ಹೇಳದ
ಕಲ್ಲು ಗೋಡೆಗಳ ಬಂಧನವ ತೊಡೆದು ಬಾ...
ನಿನ್ನ ಸಾಧನೆಯ ಹೆಜ್ಜೆಗಳಿಗೆ ಮೆಟ್ಟಿಲುಗಳಾಗದೆ
ನಿನ್ನ ಕನಸಿನ ಗೋಪರಕ್ಕೆ ಭದ್ರ ಬುನಾದಿಯ
ನೊದಗಿಸದ ಕಲ್ಲು ಗೋಡೆಗಳ ತೊಡೆದು ಬಾ..
ಇವನಿಲ್ಲದೆ...ಈ ಕೆಲಸವಿಲ್ಲದೆ ಬದುಕಿಲ್ಲ
ಎಂಬ ಕಲ್ಪನಾ ಕೋಟೆಯ ಜಯಿಸಿ ಬಾ
ಹೆಣ್ಣೆ...
ಅಚ್ಚಳಿಯದೆ ಉಳಿಸು ಬಾ ನಿನ್ನ ಹೆಜ್ಜೆಗಳ
ಸೌಟು ಹಿಡಿಯುವ ಕೈ..ಸೀರೆಯ ಸೆರಗು
ಸದಾ ಸುರಿಸುವ ಕಣ್ಣೀರನ್ನು ಒರೆಸುವದರಲ್ಲೆ
ಮಾಸಿ ಹೋಗುವದದೆನ್ನುವವರ ದಾರಿಯಲ್ಲಿ
ಮಾಸದೆ ಉಳಿಸು ಬಾ ನಿನ್ನ ಹೆಜ್ಜೆಗಳನು
ನೀ ನಡೆವ ದಾರಿಯ ಕಂಡು ಹಿಯ್ಯಾಳಿಸುವ
ಮನಗಳು ಮೆಚ್ಚಿ... ಸದಾ ಬಾಸುಂಡೆಗಳ
ರುಚಿಯನ್ನೆ ತೋರಿಸುತ್ತಿದ್ದ ಕೈಗಳು ನಿನ್ನ
ಸಾಧನೆಯ ಮೆಚ್ಚಿ ಬೆನ್ನ ತಟ್ಟಿ ಮೆಚ್ಚುವ ಹಾಗೆ
ಹೆಣ್ಣೆ...
ಸಾರು ಬಾ ನೀ ಲೋಕಕೆ...
ನೀವು ತೊಡಿಸುವ ಬಳೆಗಳು ಸಂಕೋಲೆಗಳಲ್ಲ..
ಬಳೆಯ ತೊಟ್ಟ ಕೈಗಳು ದೇಶವನಾಳಿತು...
ಗಗನವ ಮುಟ್ಟಿ ಬಂದಿತು.. ಶತುೃಗಳ ರುಂಡವ ಚೆಂಡಾಡಿ ಬಂದಿತು...ಅನಾಥ ಮಕ್ಕಳ ಪಾಲಿನ ತಾಯಿಯಾಯಿತು... ಹಾಡುವ ಹಕ್ಕಿಯಾಯಿತು... ಸಾರಿ ಸಾರಿ ಹೇಳು ಬಾ
ನಾನಿಲ್ಲದೆ ಈ ಲೋಕದಲಿ ತೃಣವಾದರೂ ಪ್ರೀತಿ ಮೂಡಲಾರದು ಅರಳಲಾರದೆಂದು..
ಸಾರು ಬಾ ಹೆಣ್ಣೆ ಸಾರಿ... ಸಾರಿ..
ಸಾರು ಬಾ..
ಅನಾಥ ಕದನ ಜಯಾ
ಅನಾಥ ಅನಾಥ ಅನ್ನುವಿರಿ
ನಿಜವಾಗಿಯೂ ಅನಾಥರು ಯಾರು ಗೊತ್ತೆ..?
ಅನಾಥರು ಎಂದು ನಾವು
ಎಲ್ಲಿಯೂ ಹೇಳಲಿಲ್ಲ ನೀವೆ ನಮ್ಮನ್ನ
ನೋಡಿ ಅನಾಥರು ಎಂದು
ನಾಮಕರಣ ಮಾಡಿಬಿಟ್ಟಿರಿ..
ಎಲ್ಲರು ಇದ್ದು ಅನಾಥರಾದವರು ನೀವು
ತಿನ್ನಲು ಅನ್ನ ವಿದ್ದರು
ತಿನ್ನಲು ಬಾಯಿ ಇಲ್ಲ ನಿಮಗೆ..
ಪ್ರೀತಿಸುವ ಹೃದಯ ವಿದ್ದರು
ಯಾರನ್ನೂ ಮನಬಿಚ್ಚಿ
ಪ್ರೀತಿಸಲಾರಿರಿ ನೀವು..
ಧನಕನಕ ವಿದ್ದರು ಅರಮನೆಯಂತ
ಮನೆಯಿದ್ದರು.
ನೀಡಲಾರಿರಿ ಒಂದು ತುತ್ತು ಭಿಕ್ಷೆಯನ್ನು
ನಿಜವಾದ ಅನಾಥರು ನೀವುಗಳು
ದಯೆ,ಕರುಣೆ,ಪ್ರೀತಿ, ವಿಶ್ವಾಸ,
ಮಾನವೀಯತೆಯನ್ನು ಮರೆತು
ಬದುಕುವಿರಿ ನೀವು..
ನಾವು ಆರ್ಧನಾರೇಶ್ವನ
ಮಕ್ಕಳು ನಾವು
ನಾವು ಎಂದಿಗೂ ನಾವು ಅನಾಥರಲ್ಲ
ನಾ
ಅನಾಥರು...
ಹೊಟ್ಟೆ ಹಸುವೆಂದು ಸುಡು ಬಿಸಿಲಲಿ
ನಿಮ್ಮ ಮನೆಯ ಕದವ ತಟ್ಟುವವನಿಗೆ
ತುತ್ತು ಅನ್ನವ ನೀಡದ ನೀವು ಅನಾಥರು
ಬಾಯಾರಿ ಬಳಲಿ ಕುಡಿಯಲಿಕ್ಕೆ ನೀರು
ಕೊಡದಂತಹ ಕಲ್ಲು ಮನಸ್ಸಿನ ಮುಖಗಳೆ
ನೀವು ಅನಾಥರು... ಪ್ರೀತಿಯ ಬಯಸಿ
ಬಯಸಿ ಊರ ತುಂಬೆಲ್ಲಾ ನಿಮ್ಮ ಹಿಂದೆ
ಸುತ್ತಿ..ಊರಲ್ಲಿರುವ ಗುಲಾಬಿ ಹೂಗಳ
ರಾಶಿಯನೆ ತಂದು ಸುರಿದರೊಪ್ಪದ ಚೆಲುವೆಯರೆ.. ನೀವು ಅನಾಥರು
ತಾಯಿ.. ಮಡದಿ ಮಕ್ಕಳ ಆರೋಗ್ಯ
ಸರಿಯಿಲ್ಲವೆಂದು.. ತೋರಿಸಲು ಹಣವ
ಬೇಡಿದ ಮಿತ್ರನಿಗೆ ಸಹಾಯ ಹಸ್ತವ ಚಾಚದೆ
ಕುಡಿದು.. ಐವತ್ತೇರಡು ಎಲೆಗಳಲಿ ಹಗಲಿರುಳು ಕಳೆದು...ಸಂಸಾರವನು ಕಣ್ಣೀರ
ಕಡಲಿಗೆ ನೂಕುವವರಿಗೆ ಹಣವ ನೀಡುವ
ನಿಮ್ಮಂಥವರು ಅನಾಥರು..
ಮಗುವು ಕೇಳಿದ ಒಂದು ಆಟಿಕೆಯನ್ನು
ಕೊಡಿಸದೆ ಅದೇ ದುಡ್ಡಿನಲ್ಲಿ ಜೂಜಾಡಿ ಬರುವ ಗಂಡು ಜನ್ಮಗಳೆ ಅನಾಥರು..
ತನ್ನ ಪಕ್ಕದ ಮನೆಯ ಹಸುಗೂಸು ತಾಯಿಯ ಎದೆಹಾಲು ಸಾಲದಾಗಿ..ಆ ತಾಯಿ ನಿಮ್ಮ ಮನೆಯವರೆಗೂ ಬಂದು
ಹಾಲನ್ನು ಕೇಳಿದಾಗ ನೀಡದೆ ಮಲತಾಯಿ
ಧೋರಣೆ ತೋರುವ ತಾಯಂದಿರೆ ನೀವು
ಅನಾಥರು..
ಇನ್ನೊಬ್ಬರ ನೋವು ನಲಿವುಗಳಿಗೆ
ಸ್ಪಂದಿಸದ..ಮರುಗದ..ಸದಾ ಮನದಲಿ
ಕಲ್ಮಷವನೆ ತುಂಬಿಕೊಂಡ ಮನಗಳೆಲ್ಲವು
ಎಲ್ಲ ಇದ್ದೂ ಅನಾಥರು..
ಜ
ಊಟದ ಸಮಯದಲ್ಲಿ ಬಂದು ಬೇಡಿದರೆ ಮುಂದೆ ಹೋಗು ಅನ್ನುವಿರಿ ನೀವು ಅನಾಥರು..
ಹೆತ್ತವರನ್ನು ಸಾಕಲಾರದೆ
ವೃದ್ಧ ಶ್ರಮ ಸೇರಿಸಿ ಬರುವ ನೀವು ಅನಾಥರು..
ಮಡದಿ ಬಂದೂಡನೆ ಒಡಹುಟ್ಟಿದ ಸಹೋದರಿಯರನ್ನು ಹೊರ ಹಾಕುವಿರಿ ನೀವು ಅನಾಥರು..
ವರ್ಷಕೊಮ್ಮೆ ಬರುವ ಗೌರಿ ಹಬ್ಬಕ್ಕೆ
ಒಂದು ಚಿಟಿಕೆ ಅರಿಶಿನ ಕುಂಕುಮ ಕೊಡದೆ ಮನೆ ಮಗಳನ್ನು ಕಸದ ರೂಪದಲ್ಲಿ
ಕಾಣುವ ನೀವು ಅನಾಥರು
ನಾ
ಅಪಘಾತವಾಗಿ ವಿಪರೀತ ರಕ್ತವು
ಸೋರಿ ಹೋಗಿ... ರಕ್ತದಾನವ ಬೇಡಿದರೂ
ನೀಡದ ನೀವು ಅನಾಥರು..
ಮಡದಿಯ ಮಾತಿಗೆ ಕಟ್ಟುಬಿದ್ದು ಹೆತ್ತವರ
ಬಿಟ್ಟು ಬೇರೆ ಮನೆಯ ಮಾಡಿ ಬದುಕುವ
ನಿಮ್ಮಂಥವರು ಅನಾಥರು..
ಪರೀಕ್ಷೆಯ ಸಮಯದಲ್ಲಿ ಓದಲು ಪುಸ್ತಕ
ಕೇಳಿದಾಗ ಕೊಡದೆ ಸತಾಯಿಸುವವರು
ಅನಾಥರು
ಭೂಮಿಗೆ ಬಿತ್ತಲು ಸೇರು ಬೀಜವ
ಬೇಡಿದಾಗ ಕೊಡದ ಕಟುಕ ಮನಸಿನ
ಮನುಜರು ಅನಾಥರು..
ಜ
ಒಂದು ಹೊತ್ತು ಕುಳಿಗೆ ದುಡಿದು ತಿನ್ನುವರನ್ನು ದರೋಡೆ ಮಾಡುವ ನೀವು ಅನಾಥರು..
ಮಡದಿ ಸತ್ತ ಮೂರು ತಿಂಗಳಲ್ಲಿ ಮರು ಮದುವೆಯಾಗಿ ಮಕ್ಕಳಿಂದ ತಂದೆಯ ಆಸರೆಯನ್ನು ಕಿತ್ತು ಕೊಳ್ಳುವ ನೀವು ಅನಾಥರು..
ಮಡದಿಯ ಮಾತು ಕೇಳಿ
ಸಹೋದರರನ್ನು ದೂರ ಮಾಡಿ ಒಂದಾಗಿದ್ದ ಮನೆಯನ್ನು ಎರಡೂ ಭಾಗ ಮಾಡುವ ನೀವು ಅನಾಥರು
ನಾ
ಗಟ್ಟಿಯಾದ ಹಾಲಿಗೆ ನೀರನು
ಬೇರಸಿ ತಾಯಿ ಕಾಮಧೇನುವಿಗೆ..
ಹಾಲ ಕೊಂಡುಕೊಳ್ಳುವವರಿಗೆ ಮೋಸ
ಮಾಡುವ ನಿಮ್ಮಂಥವರು ಅನಾಥರು
ನೀರು ಗೊಬ್ಬರವ ಹಾಕಿ ಹಗಲಿರುಳು
ಕಷ್ಟಪಟ್ಟು ಬೆಳಸಿದ ಬೆಳೆಯ ಕದ್ದೊಯ್ವ
ಕಳ್ಳರು ಅನಾಥರು..
ತೊಟ್ಟಿಲಲಿ ಮಲುಗೆದ್ದು ಅಳುತಿರುವ
ಮಗುವ ಸಂತೈಸದಿರುವ ಅತ್ತೆ ನಾದಿನಿಯವರು ಅನಾಥರು
ಜ
ರೈತ ದುಡಿದ ಬೆಳೆಯನ್ನು
ಕದ್ದು ಮರುವರು ಅನಾಥರು
ಮಕ್ಕಳಿಗೆ ಸರ್ಕಾರ ಕಳಿಸುವ ದಿನಸಿ ಮಾರುವವರು ಅನಾಥರು..
ಹೆಣ್ಣನ್ನು ಕೆಲಸದವಳು ಎಂದು ಭಾವಿಸುವರು ಅನಾಥರು..
ಧನಕನಕಕ್ಕೆ ಬೆಲೆ ಕೊಟ್ಟ
ಸ್ನೇಹ ಮಾಡುವ ನೀವು ಅನಾಥರು...
ಹಣಕ್ಕಾಗಿ ಮಾನವೀಯತೆಯನ್ನು ವತ್ತೆ ಇಡುವ ನೀವು ಅನಾಥರು
ನಾ
ಯುದ್ದದಲ್ಲಿ ಹೋರಾಡಿ ಸೈನಿಕ ವೃತ್ತಿಯಿಂದ ನಿವೃತ್ತರಾಗಿ ಮನೆಗೆ ಬಂದರೆ ಅವರ ಯೋಗಕ್ಷೇಮ ನೋಡದಿರುವ ನೀವು ಅನಾಥರು...
ಮಗಳ ಮದುವೆಯಲ್ಲಿ ಲಕ್ಷ ಲಕ್ಷ ವರದಕ್ಷಿಣೆ ನೀಡಿ ಮದುವೆ ಮಾಡುವಿರಿ
ಕಲಸದವರಿಗೆ ಸಂಬಳ ಕೊಡದೇ ಮೋಸ ಮಾಡುವ ನೀವು ಅನಾಥರು...
ರಕ್ತದಾನ ಮಾಡಿ ಬನ್ನಿ ಎಂದು ಯಾರಾದರೂ ಕೇಳಿದರೆ ಹಣದ ಬೇಡಿಕೆ ಇಡುವಿರಿ ನೀವು ಅನಾಥರು
ಜ
ದೇವರು ವರ ಕೊಟ್ಟರು
ಪೂಜಾರಿ ವರ ಕೊಡಲಾರದೆ ಉಳಿದ ಪ್ರಸಾದವನ್ನು ಆಚೆಗೆ ಹಾಕುವ ನೀವು ಅನಾಥರು..
ಬರಿಗಾಲಲ್ಲಿ ನಡೆದು ನೂರಾರು ಮೈಲಿ ನಡದೆ ದೇವರ ಹರಕೆ ಸಲ್ಲಿಸಲು ಬಂದರನ್ನು ಬಿಕರಿ ಯೆಂದು ದೂರ ತಳ್ಳುವ ನೀವು ಅನಾಥರು..
ಸರ್ಕಾರಿ ಆಸ್ಪತ್ರೆ ಯಲ್ಲಿ ಉಚಿತವಾಗಿ ವೈದ್ಯಕೀಯ ಸೌಲಭ್ಯ ಇದ್ದರು ಹಣ ಕೊಟ್ಟರೆ ಮಾತ್ರ ಪ್ರಸೂತಿ ಮಾಡಿಸು ನೀವು ಅನಾಥರು
ನಾ
ಸಾಹಿತ್ಯ ವಲಯದಲಿ ನಿಮ್ಮವರನು
ಜೊತೆಗೂಡಿ ಎತ್ತರಕ್ಕೆ ಕರೆದೊಯ್ಯದೆ
ನಿಮ್ಮಷ್ಟಕ್ಕೆ ನೀವೆ ಸಾಗುವಿರಲ್ಲ ನೀವಲ್ಲವೆ ಅನಾಥರು
ದಾರಿಯಲ್ಲಿ ಹೋಗುವಾಗ ನಡೆದುಕೊಂಡು ಹೊರಟಿರುವ ದಾರಿಹೋಕನು ನಿಮ್ಮನ್ನು ಸಹಾಯ ಕೇಳಿದರೆ ಬಿಟ್ಟು ಹೋಗುವ ನಿಮ್ಮಂಥವರಲ್ಲವೆ ಅನಾಥರು
ಬರೆದ ಕವನಕ್ಕೆ ಎರಡು ಸಾಲು ಬರೆದು
ಹಾಕದೆ ಒಂದೆ ಮಾತಿನಲ್ಲಿ ಉತ್ತರಿಸುವವರಲ್ಲವೆ ಅನಾಥರು
ಜ
ಸಾಹಿತ್ಯ ಕ್ಷೇತ್ರ ಕಲಿಸಿದ ಪಾಠ ಮತ್ತೊಬ್ಬರಿಗೆ ಕಲಿಸದೆ ಮುಂದೆ ಸಾಗುವ ನೀವು ಅನಾಥರು.
ದಾರಿಯಲ್ಲಿ ಕಣ್ಣು ಕಾಣದ ಅಂದರು ಸಹಾಯ ಕೇಳಿದರೆ ಅಹಂಕಾರದಿ ಮುಂದೆ ಸಾಗುವ ನೀವು ಅನಾಥರು...
ಅಮ್ಮ ಅಂತ ಮನೆ ಮುಂದೆ ಬಂದ ವೃದ್ಧ ನಿಗೆ ಒಂದು ತುತ್ತು ಅನ್ನ ನೀಡದೆ ಮುಂದು ಹೋಗು ಅನ್ನುವ ನೀವು ಅನಾಥರು
ನಾ
ಯಾವ ಕ್ಷೇತವ ಬಿಡದೆ ಹಾಸು
ಹೊಕ್ಕಿದೆ ಈ ಅನಾಥ ಭಾವ
ದಿನ ದಿನವು ಅನುಕ್ಷಣವು ಓಡುತಿರುವ
ಕಾಲದಿ ಬೇರೆತು ಎಲ್ಲರಲೂ ತುಂಬುತಿದೆ
ಅನಾಥ ಭಾವ
ಕಾಲದೊಡಗೂಡಿ ನಾವು ಕಳೆದು
ಹೋಗುವ ಮುನ್ನವೆ ಎಚ್ಚೆತ್ತುಕೊಳ್ಳದಿದ್ದರೆ
ಸಿಲುಕಿ ನರಳಾಡಬೇಕಾಗುವುದು ಅನಾಥ
ಪ್ರಜ್ಞೆಯಲಿ ದಿನವಿಡಿ..
ಜ
ಅನಾಥ ಪ್ರಜ್ಞೆ ಹೋಗಲಾರದು
ಸ್ವಾರ್ಥ ಮನೋಭಾವ ಬಿಟ್ಟು ಎಲಾರನ್ನು ಸರಿಸಮ ಕಂಡ ದಿನ ಅನಾಥರು ಈ ಭೂಮಿಯಲ್ಲಿ ಇರಲಾರರು..
ಜಾತಿಬೇದ ಮೇಲುಕೀಳು ಧನಕನಕದಲ್ಲಿ ಎಲ್ಲಾರನ್ನು ಸಮನಾಗಿ ಕಂಡ ದಿನ ಅನಾಥರು ಯಾರು ಇರಲಾರರು..
ಹೆತ್ತವರನ್ನು ವೃದ್ಧಶ್ರಮ ಬಿಡದೆ ಮನೆಯಲ್ಲಿ ಮಕಳ್ಳಂತೆ ಕಾಳಜಿ ವಹಿಸಿದ ದಿನ ಯಾರು ಅನಾಥರು ಇರಲಾರರು..
ನಾ
ಯುಗ ಯುಗಗಳು ಕಳೆದು
ಹೊಸ ತಲೆಮಾರುಗಳೆ ಹುಟ್ಟಿದರು
ಜಾತಿಯ ಕಸವನ್ನು ಸ್ವಚ್ಚಗೊಳಿಸಲಾಗಲಿಲ್ಲ
ಇನ್ನೂ ಎಲ್ಲ ಮನಗಳಲಿ ಸಮಾನತೆಯ ಗುಣವನ್ನು ಕಾಣಲಾಗುವುದೆ
ವೈಚಾರಿಕತೆಯ ತುಂಬುವ ಶಿಕ್ಷಣ ಸಂಸ್ಥೆಗಳಲ್ಲೂ.. ಜಾತೀಕರಣದ ಪಠ್ಯವ ತುಂಬಿ ಬೆಳೆಸುತಿರುವವರಲ್ಲಿ ಕಾಡದಿರುವುದೆ ಅನಾಥ ಪ್ರಜ್ಞೆ