Monday, July 17, 2017

ಅನಾಥ ಕದನ ಜಯಾ

ಅನಾಥ ಅನಾಥ ಅನ್ನುವಿರಿ
ನಿಜವಾಗಿಯೂ ಅನಾಥರು ಯಾರು ಗೊತ್ತೆ..?

ಅನಾಥರು ಎಂದು ನಾವು
ಎಲ್ಲಿಯೂ ಹೇಳಲಿಲ್ಲ ನೀವೆ ನಮ್ಮನ್ನ
ನೋಡಿ ಅನಾಥರು ಎಂದು
ನಾಮಕರಣ ಮಾಡಿಬಿಟ್ಟಿರಿ..

ಎಲ್ಲರು ಇದ್ದು ಅನಾಥರಾದವರು ನೀವು
ತಿನ್ನಲು ಅನ್ನ ವಿದ್ದರು
ತಿನ್ನಲು ಬಾಯಿ ಇಲ್ಲ ನಿಮಗೆ..

ಪ್ರೀತಿಸುವ ಹೃದಯ ವಿದ್ದರು
ಯಾರನ್ನೂ ಮನಬಿಚ್ಚಿ
ಪ್ರೀತಿಸಲಾರಿರಿ ನೀವು..

ಧನಕನಕ ವಿದ್ದರು ಅರಮನೆಯಂತ
ಮನೆಯಿದ್ದರು.
ನೀಡಲಾರಿರಿ ಒಂದು ತುತ್ತು ಭಿಕ್ಷೆಯನ್ನು

ನಿಜವಾದ ಅನಾಥರು ನೀವುಗಳು
ದಯೆ,ಕರುಣೆ,ಪ್ರೀತಿ, ವಿಶ್ವಾಸ,
ಮಾನವೀಯತೆಯನ್ನು ಮರೆತು
ಬದುಕುವಿರಿ ನೀವು..

ನಾವು ಆರ್ಧನಾರೇಶ್ವನ
ಮಕ್ಕಳು ನಾವು
ನಾವು ಎಂದಿಗೂ ನಾವು ಅನಾಥರಲ್ಲ

ನಾ
ಅನಾಥರು...
ಹೊಟ್ಟೆ ಹಸುವೆಂದು ಸುಡು ಬಿಸಿಲಲಿ
ನಿಮ್ಮ ಮನೆಯ ಕದವ ತಟ್ಟುವವನಿಗೆ
ತುತ್ತು ಅನ್ನವ ನೀಡದ ನೀವು ಅನಾಥರು

ಬಾಯಾರಿ ಬಳಲಿ ಕುಡಿಯಲಿಕ್ಕೆ ನೀರು
ಕೊಡದಂತಹ ಕಲ್ಲು ಮನಸ್ಸಿನ ಮುಖಗಳೆ
ನೀವು ಅನಾಥರು... ಪ್ರೀತಿಯ ಬಯಸಿ
ಬಯಸಿ ಊರ ತುಂಬೆಲ್ಲಾ ನಿಮ್ಮ ಹಿಂದೆ
ಸುತ್ತಿ..ಊರಲ್ಲಿರುವ ಗುಲಾಬಿ ಹೂಗಳ
ರಾಶಿಯನೆ ತಂದು ಸುರಿದರೊಪ್ಪದ ಚೆಲುವೆಯರೆ.. ನೀವು ಅನಾಥರು

ತಾಯಿ.. ಮಡದಿ ಮಕ್ಕಳ ಆರೋಗ್ಯ
ಸರಿಯಿಲ್ಲವೆಂದು.. ತೋರಿಸಲು ಹಣವ
ಬೇಡಿದ ಮಿತ್ರನಿಗೆ ಸಹಾಯ ಹಸ್ತವ ಚಾಚದೆ
ಕುಡಿದು.. ಐವತ್ತೇರಡು ಎಲೆಗಳಲಿ ಹಗಲಿರುಳು ಕಳೆದು...ಸಂಸಾರವನು ಕಣ್ಣೀರ
ಕಡಲಿಗೆ ನೂಕುವವರಿಗೆ ಹಣವ ನೀಡುವ
ನಿಮ್ಮಂಥವರು ಅನಾಥರು..

ಮಗುವು ಕೇಳಿದ ಒಂದು ಆಟಿಕೆಯನ್ನು
ಕೊಡಿಸದೆ ಅದೇ ದುಡ್ಡಿನಲ್ಲಿ ಜೂಜಾಡಿ ಬರುವ ಗಂಡು ಜನ್ಮಗಳೆ ಅನಾಥರು..
ತನ್ನ ಪಕ್ಕದ ಮನೆಯ ಹಸುಗೂಸು ತಾಯಿಯ ಎದೆಹಾಲು ಸಾಲದಾಗಿ..ಆ ತಾಯಿ ನಿಮ್ಮ ಮನೆಯವರೆಗೂ ಬಂದು
ಹಾಲನ್ನು ಕೇಳಿದಾಗ ನೀಡದೆ ಮಲತಾಯಿ
ಧೋರಣೆ ತೋರುವ ತಾಯಂದಿರೆ ನೀವು
ಅನಾಥರು..

ಇನ್ನೊಬ್ಬರ ನೋವು ನಲಿವುಗಳಿಗೆ
ಸ್ಪಂದಿಸದ..ಮರುಗದ..ಸದಾ ಮನದಲಿ
ಕಲ್ಮಷವನೆ ತುಂಬಿಕೊಂಡ ಮನಗಳೆಲ್ಲವು
ಎಲ್ಲ ಇದ್ದೂ ಅನಾಥರು..


ಊಟದ ಸಮಯದಲ್ಲಿ ಬಂದು ಬೇಡಿದರೆ ಮುಂದೆ ಹೋಗು ಅನ್ನುವಿರಿ ನೀವು ಅನಾಥರು..

ಹೆತ್ತವರನ್ನು ಸಾಕಲಾರದೆ
ವೃದ್ಧ ಶ್ರಮ ಸೇರಿಸಿ ಬರುವ ನೀವು ಅನಾಥರು..

ಮಡದಿ ಬಂದೂಡನೆ ಒಡಹುಟ್ಟಿದ ಸಹೋದರಿಯರನ್ನು ಹೊರ ಹಾಕುವಿರಿ ನೀವು ಅನಾಥರು..

ವರ್ಷಕೊಮ್ಮೆ ಬರುವ ಗೌರಿ ಹಬ್ಬಕ್ಕೆ
ಒಂದು ಚಿಟಿಕೆ ಅರಿಶಿನ ಕುಂಕುಮ ಕೊಡದೆ ಮನೆ ಮಗಳನ್ನು ಕಸದ ರೂಪದಲ್ಲಿ
ಕಾಣುವ ನೀವು ಅನಾಥರು

ನಾ
ಅಪಘಾತವಾಗಿ ವಿಪರೀತ ರಕ್ತವು
ಸೋರಿ ಹೋಗಿ... ರಕ್ತದಾನವ ಬೇಡಿದರೂ
ನೀಡದ ನೀವು ಅನಾಥರು..

ಮಡದಿಯ ಮಾತಿಗೆ ಕಟ್ಟುಬಿದ್ದು ಹೆತ್ತವರ
ಬಿಟ್ಟು ಬೇರೆ ಮನೆಯ ಮಾಡಿ ಬದುಕುವ
ನಿಮ್ಮಂಥವರು ಅನಾಥರು..

ಪರೀಕ್ಷೆಯ ಸಮಯದಲ್ಲಿ ಓದಲು ಪುಸ್ತಕ
ಕೇಳಿದಾಗ ಕೊಡದೆ ಸತಾಯಿಸುವವರು
ಅನಾಥರು

ಭೂಮಿಗೆ ಬಿತ್ತಲು ಸೇರು ಬೀಜವ
ಬೇಡಿದಾಗ ಕೊಡದ ಕಟುಕ ಮನಸಿನ
ಮನುಜರು ಅನಾಥರು..


ಒಂದು ಹೊತ್ತು ಕುಳಿಗೆ ದುಡಿದು ತಿನ್ನುವರನ್ನು ದರೋಡೆ ಮಾಡುವ ನೀವು ಅನಾಥರು..

ಮಡದಿ ಸತ್ತ ಮೂರು ತಿಂಗಳಲ್ಲಿ ಮರು ಮದುವೆಯಾಗಿ ಮಕ್ಕಳಿಂದ ತಂದೆಯ ಆಸರೆಯನ್ನು ಕಿತ್ತು ಕೊಳ್ಳುವ ನೀವು ಅನಾಥರು..

ಮಡದಿಯ ಮಾತು ಕೇಳಿ
ಸಹೋದರರನ್ನು ದೂರ ಮಾಡಿ ಒಂದಾಗಿದ್ದ ಮನೆಯನ್ನು ಎರಡೂ ಭಾಗ ಮಾಡುವ ನೀವು ಅನಾಥರು

ನಾ
ಗಟ್ಟಿಯಾದ ಹಾಲಿಗೆ ನೀರನು
ಬೇರಸಿ ತಾಯಿ ಕಾಮಧೇನುವಿಗೆ..
ಹಾಲ ಕೊಂಡುಕೊಳ್ಳುವವರಿಗೆ ಮೋಸ
ಮಾಡುವ ನಿಮ್ಮಂಥವರು ಅನಾಥರು

ನೀರು ಗೊಬ್ಬರವ ಹಾಕಿ ಹಗಲಿರುಳು
ಕಷ್ಟಪಟ್ಟು ಬೆಳಸಿದ ಬೆಳೆಯ ಕದ್ದೊಯ್ವ
ಕಳ್ಳರು ಅನಾಥರು..

ತೊಟ್ಟಿಲಲಿ ಮಲುಗೆದ್ದು ಅಳುತಿರುವ
ಮಗುವ ಸಂತೈಸದಿರುವ ಅತ್ತೆ ನಾದಿನಿಯವರು ಅನಾಥರು


ರೈತ ದುಡಿದ ಬೆಳೆಯನ್ನು
ಕದ್ದು ಮರುವರು ಅನಾಥರು

ಮಕ್ಕಳಿಗೆ ಸರ್ಕಾರ ಕಳಿಸುವ ದಿನಸಿ ಮಾರುವವರು ಅನಾಥರು..

ಹೆಣ್ಣನ್ನು ಕೆಲಸದವಳು ಎಂದು ಭಾವಿಸುವರು ಅನಾಥರು..

ಧನಕನಕಕ್ಕೆ ಬೆಲೆ ಕೊಟ್ಟ
ಸ್ನೇಹ ಮಾಡುವ ನೀವು ಅನಾಥರು...

ಹಣಕ್ಕಾಗಿ ಮಾನವೀಯತೆಯನ್ನು ವತ್ತೆ ಇಡುವ ನೀವು ಅನಾಥರು

ನಾ
ಯುದ್ದದಲ್ಲಿ ಹೋರಾಡಿ ಸೈನಿಕ ವೃತ್ತಿಯಿಂದ ನಿವೃತ್ತರಾಗಿ ಮನೆಗೆ ಬಂದರೆ ಅವರ ಯೋಗಕ್ಷೇಮ ನೋಡದಿರುವ ನೀವು ಅನಾಥರು...

ಮಗಳ ಮದುವೆಯಲ್ಲಿ ಲಕ್ಷ ಲಕ್ಷ ವರದಕ್ಷಿಣೆ ನೀಡಿ ಮದುವೆ ಮಾಡುವಿರಿ
ಕಲಸದವರಿಗೆ ಸಂಬಳ ಕೊಡದೇ ಮೋಸ ಮಾಡುವ ನೀವು ಅನಾಥರು...

ರಕ್ತದಾನ ಮಾಡಿ ಬನ್ನಿ ಎಂದು ಯಾರಾದರೂ ಕೇಳಿದರೆ ಹಣದ ಬೇಡಿಕೆ ಇಡುವಿರಿ ನೀವು ಅನಾಥರು


ದೇವರು ವರ ಕೊಟ್ಟರು
ಪೂಜಾರಿ ವರ ಕೊಡಲಾರದೆ ಉಳಿದ ಪ್ರಸಾದವನ್ನು ಆಚೆಗೆ ಹಾಕುವ ನೀವು ಅನಾಥರು..

ಬರಿಗಾಲಲ್ಲಿ ನಡೆದು ನೂರಾರು ಮೈಲಿ ನಡದೆ ದೇವರ ಹರಕೆ ಸಲ್ಲಿಸಲು ಬಂದರನ್ನು ಬಿಕರಿ ಯೆಂದು ದೂರ ತಳ್ಳುವ ನೀವು ಅನಾಥರು..

ಸರ್ಕಾರಿ ಆಸ್ಪತ್ರೆ ಯಲ್ಲಿ ಉಚಿತವಾಗಿ ವೈದ್ಯಕೀಯ ಸೌಲಭ್ಯ ಇದ್ದರು ಹಣ ಕೊಟ್ಟರೆ ಮಾತ್ರ ಪ್ರಸೂತಿ ಮಾಡಿಸು ನೀವು ಅನಾಥರು

ನಾ
ಸಾಹಿತ್ಯ ವಲಯದಲಿ ನಿಮ್ಮವರನು
ಜೊತೆಗೂಡಿ ಎತ್ತರಕ್ಕೆ ಕರೆದೊಯ್ಯದೆ
ನಿಮ್ಮಷ್ಟಕ್ಕೆ ನೀವೆ ಸಾಗುವಿರಲ್ಲ ನೀವಲ್ಲವೆ ಅನಾಥರು

ದಾರಿಯಲ್ಲಿ ಹೋಗುವಾಗ ನಡೆದುಕೊಂಡು ಹೊರಟಿರುವ ದಾರಿಹೋಕನು ನಿಮ್ಮನ್ನು ಸಹಾಯ ಕೇಳಿದರೆ ಬಿಟ್ಟು ಹೋಗುವ ನಿಮ್ಮಂಥವರಲ್ಲವೆ ಅನಾಥರು

ಬರೆದ ಕವನಕ್ಕೆ ಎರಡು ಸಾಲು ಬರೆದು
ಹಾಕದೆ ಒಂದೆ ಮಾತಿನಲ್ಲಿ ಉತ್ತರಿಸುವವರಲ್ಲವೆ ಅನಾಥರು


ಸಾಹಿತ್ಯ ಕ್ಷೇತ್ರ ಕಲಿಸಿದ ಪಾಠ ಮತ್ತೊಬ್ಬರಿಗೆ ಕಲಿಸದೆ ಮುಂದೆ ಸಾಗುವ ನೀವು ಅನಾಥರು.

ದಾರಿಯಲ್ಲಿ ಕಣ್ಣು ಕಾಣದ ಅಂದರು ಸಹಾಯ ಕೇಳಿದರೆ ಅಹಂಕಾರದಿ ಮುಂದೆ ಸಾಗುವ ನೀವು ಅನಾಥರು...

ಅಮ್ಮ ಅಂತ ಮನೆ ಮುಂದೆ ಬಂದ ವೃದ್ಧ ನಿಗೆ ಒಂದು ತುತ್ತು ಅನ್ನ ನೀಡದೆ ಮುಂದು ಹೋಗು ಅನ್ನುವ ನೀವು ಅನಾಥರು

ನಾ
ಯಾವ ಕ್ಷೇತವ ಬಿಡದೆ ಹಾಸು
ಹೊಕ್ಕಿದೆ ಈ ಅನಾಥ ಭಾವ

ದಿನ ದಿನವು ಅನುಕ್ಷಣವು ಓಡುತಿರುವ
ಕಾಲದಿ ಬೇರೆತು ಎಲ್ಲರಲೂ ತುಂಬುತಿದೆ
ಅನಾಥ ಭಾವ

ಕಾಲದೊಡಗೂಡಿ ನಾವು ಕಳೆದು
ಹೋಗುವ ಮುನ್ನವೆ ಎಚ್ಚೆತ್ತುಕೊಳ್ಳದಿದ್ದರೆ
ಸಿಲುಕಿ ನರಳಾಡಬೇಕಾಗುವುದು ಅನಾಥ
ಪ್ರಜ್ಞೆಯಲಿ ದಿನವಿಡಿ..


ಅನಾಥ ಪ್ರಜ್ಞೆ ಹೋಗಲಾರದು
ಸ್ವಾರ್ಥ ಮನೋಭಾವ ಬಿಟ್ಟು ಎಲಾರನ್ನು ಸರಿಸಮ ಕಂಡ ದಿನ ಅನಾಥರು ಈ ಭೂಮಿಯಲ್ಲಿ ಇರಲಾರರು..

ಜಾತಿಬೇದ ಮೇಲುಕೀಳು ಧನಕನಕದಲ್ಲಿ ಎಲ್ಲಾರನ್ನು ಸಮನಾಗಿ ಕಂಡ ದಿನ ಅನಾಥರು ಯಾರು ಇರಲಾರರು..

ಹೆತ್ತವರನ್ನು ವೃದ್ಧಶ್ರಮ ಬಿಡದೆ ಮನೆಯಲ್ಲಿ ಮಕಳ್ಳಂತೆ ಕಾಳಜಿ ವಹಿಸಿದ ದಿನ ಯಾರು ಅನಾಥರು ಇರಲಾರರು..

ನಾ
ಯುಗ ಯುಗಗಳು ಕಳೆದು
ಹೊಸ ತಲೆಮಾರುಗಳೆ ಹುಟ್ಟಿದರು
ಜಾತಿಯ ಕಸವನ್ನು ಸ್ವಚ್ಚಗೊಳಿಸಲಾಗಲಿಲ್ಲ
ಇನ್ನೂ ಎಲ್ಲ ಮನಗಳಲಿ ಸಮಾನತೆಯ ಗುಣವನ್ನು ಕಾಣಲಾಗುವುದೆ

ವೈಚಾರಿಕತೆಯ ತುಂಬುವ ಶಿಕ್ಷಣ ಸಂಸ್ಥೆಗಳಲ್ಲೂ.. ಜಾತೀಕರಣದ ಪಠ್ಯವ ತುಂಬಿ ಬೆಳೆಸುತಿರುವವರಲ್ಲಿ ಕಾಡದಿರುವುದೆ ಅನಾಥ ಪ್ರಜ್ಞೆ

No comments:

Post a Comment