Tuesday, July 4, 2017

ಮಾಯದ ಮುತ್ತಾಗದಿರು ಮಳೆಯೆ

ಮುನಿಸಿ ಮೌನವಾದೆಕೆ ಮಳೆರಾಯ
ಮರೆತು ಮಲಗದಿರು ಮೋಡಗಳ..
ಮಧ್ಯದಲಿ.. ಮಣ್ಣಿನ ಮಕ್ಕಳ ಮರೆತು

ದುಡಿದು ದಣಿದ ದೇಹವಿದು
ಧಗಧಗಿಸುತಿದೆ ದಾಹದ ದಳ್ಳುರಿಯಲಿ
ದಯೆತೋರು ಧರೆಗೆ ಧುಮ್ಮಿಕ್ಕಿ..

ಬರಬಿದ್ದು ಬರಡಾಗಿ ಬಾಯ್ತೆರದ
ಭೊದೊಡಲಿಗೆ.. ಬಂಗಾರದ ಬೆಳೆಯ
ಬಿತ್ತಿ ಬೆಳೆಯಲು ಬಾರೊ...ಬೆಳೆರಾಯ

ನರನಾಡಿಗಳಲ್ಲೆಲ್ಲವು ನಿತ್ರಾಣಗೊಳ್ಳುವದರೊಳಗೆ
ನರಜನ್ಮವಿದು ನಲುಗಿ ನಶಿಸುವದರೊಳಗೆ
ನಳನಳಿಸಿಬಿಡು ನಾಡೆಲ್ಲ ನಿಬ್ಬೆರಗಾಗುವಂತೆ

ಮಳೆಯೆ.. ಮಾಯದ ಮುತ್ತಾಗದಿರು
ಮಾಯದ ಮುತ್ತಾಗದಿರು.

No comments:

Post a Comment