Monday, July 17, 2017

ದೇವನು ಕ್ರೂರಿಯೆ

ಹೌದು ದೇವನು ಕ್ರೂರಿಯೆ...
ಆದರೂ ಅವನಿಗೆ ನನ್ನದೊಂದು ಶರಣು..

ಮನದಲ್ಲಿ ದುಃಖದ ಕಟ್ಟೆಯನ್ನೆ ಕಟ್ಟಿಕೊಂಡಿದ್ದರೂ.. ಇನ್ನೊಬ್ಬರ
ನೋವಿಗೆ ಸ್ಪಂದಿಸುವ.. ಮೀಡಿಯುವ
ಮನಸ್ಸನು ನೀಡಿದ್ದಕ್ಕೆ...

ತಾವು ದಿನನಿತ್ಯ ಕಣ್ಣೀರಿನಲ್ಲೆ ಕೈ
ತೊಳೆಯುತ್ತಿದ್ದರೂ.. ದುಃಖದಲ್ಲಿರುವ ಇನ್ನೊಬ್ಬರ ಕಣ್ಣೀರನು ಒರೆಸುವ ಗಟ್ಟಿ
ಕೈಗಳನ್ನು ಕೊಟ್ಟಿದ್ದಕ್ಕೆ
ನೀಡಿದ ಪ್ರೀತಿಗೆ ಮೋಸ ಮಾಡುವ
ಮನಸ್ಸುಗಳಿದ್ದರೂ ಅವುಗಳ ಕ್ಷಮಿಸಿ
ಮತ್ತೆ ಮತ್ತೆ ಪ್ರೀತಿಯ ಹಂಚುವಂತಹ
ತಾಯಿ ಮನಸ್ಸನ್ನು ನೀಡಿದ್ದಕ್ಕೆ
ಜೇಬಲ್ಲಿ ಹಣವಿಲ್ಲದಿದ್ದರೂ.. ನಾಲ್ಕು
ಜನರು ಮೆಚ್ಚಿ ಹೊಗಳುವ ಗುಣವನ್ನು
ಬಾಳಲ್ಲಿ ತುಂಬಿದ್ದಕ್ಕೆ...
ಹೇಳಲಾಗದ.. ಕರಗಲಾರದ.. ಮರೆಯಲಾರದ ನೋವುಗಳಿದ್ದರೂ
ಅವೆಲ್ಲವ ಮೆಟ್ಟಿ ಸದಾ ಮೊಗದಲಿ
ಮಂದಹಾಸದ ಚಿಲುಮೆಯನ್ನಿಟ್ಟಿದ್ದಕೆ
ಏಷ್ಟೆಂದು ಶರಣು ಹೇಳಲಿ ನಿನಗೆ ನಾ..
ಇಷ್ಟೇಲ್ಲಾ ನೀ ನೀಡಿರುವಾಗ

ಆದರೂ ನಮ್ಮೆಲ್ಲ ಮೂಡನಂಬಿಕೆಗಳಿಗೆ ನಿನ್ನ ನಾವು ಹೊಣೆ ಮಾಡುವೆವಲ್ಲ..
ಕಲ್ಲು ದೇವರು ಎಂದು ತಿಳಿದಿದ್ದು ತಾವು
ಉಪವಾಸವ ಗೈದು ಅವನಿಗೆ ನೈವೇದ್ಯವ
ಒಯ್ಯುವರಲ್ಲ.. ಅವನು ಕೇಳಿದ್ದನೆ..
ಬದುಕಿಗೆ ಅವಶ್ಯವಿರುವ ವಸ್ತುಗಳ ಖರೀದಿಸದೆ.. ಉಣ್ಣದ ತೊಡದ ದೇವರಿಗೆ
ಹರಕೆಗಳ ಮೇಲೆ ಹರಕೆಯ ತೀರಿಸುವರಲ್ಲ
ವಾರ ವೃತಗಳು ನಿಮ್ಮ ಮನಸ್ಸನ್ನು ನಿಗ್ರಹಿಸಲು ಮಾಡಿಕೊಂಡಿರುವ ಸಾಧನಗಳು.. ಅಲ್ಲದೆ ನೀವೊಬ್ಬರೆ ಕೂಗಿದ
ತಕ್ಷಣ ನಿಮಗೆ ಓಗೊಟ್ಟು ತಕ್ಷಣವೆ ಬರಲಾಗುವುದಿಲ್ಲವಲ್ಲ.. ನೂರ್ಹತ್ತು ಕೋಟಿ ಜನರ ಮನವಿಯ ಅನುಗ್ರಹಿಸುತ್ತ.. ಬರುವಾಗ ಸ್ವಲ್ಪ ತಡವಾಗುವುದು ಅಲ್ಲಿಯವರೆಗೂ ಕಾಯದೆ ನಿಮಗೆ ಇರಲಾಗದೆ ಹೇಳುವಿರಲ್ಲ ನೀವೆ ನಮ್ಮ ಕೂಗು ನಿನಗೆ ಕೇಳುತ್ತಿಲ್ಲವೆ ಎಂದು..?

ಇದು ನನ್ನನುಭವ.. ತಪ್ಪಿದ್ದರೆ ಕ್ಷಮಿಸಿ
ಅದ್ಭುತವಾಗಿ ಬರೆದಿರುವಿರಿ ಸಹೋದರಿಯವರೆ ಶುಭೋದಯ

No comments:

Post a Comment