Wednesday, July 12, 2017

ಜಯಲಕ್ಷ್ಮಿ ಕದನ ೪

ಜಯಲಕ್ಷ್ಮಿ

ಕಾಡುತ್ತಿರುವ
ನೆನಪುಗಳಿಗೆ
ಯಲ್ಲಿ ಕೊಡಲಿ
ಜಾಗವ
ನೀ ಹಚ್ಚಿದ
ಕಿಡಿಯಲ್ಲಿ
ಹೃದಯ ಸುಟ್ಟು
ಬೂದಿಯಾಗಿದೆ
ಈ ಕಾಡುವ
ನೆನಪುಗಳನ್ನು ಯಲ್ಲಿ
ಇಡಲಿ
ನನೆಪಾದರೆ ಸಾಕು
ಮನ ತುಂಬುವುದು
ಕಣ್ಣುಗಳು
ಮಂಜು ಆಗುವುದು
ಒಮ್ಮೆ ಬಂದು
ಹೇಳಬಾರದೆ
ನೆನಪುಗಳನ್ನು
ಯಲ್ಲಿ ಬಚ್ಚಿಡ
ಬೇಕೆಂದು

ನಾನು
ಕಾಡುವ ನೆನಪುಗಳ
ಬಯಸಿ ಬಯಸಿ
ಪಡೆದೆಯಲ್ಲ ಗೆಳತಿ
ನನ್ನನೂ ಮನದಿಂದ
ದೂರ ನೂಕಿ..
ಕಾದ ಕೆಂಡದ
ನೆನಪುಗಳ ಎದೆಯಲಿ
ಇಟ್ಟುಕೊಂಡು ಬರೀ..
ವಿರಹದ ವಲೆಯನೆ
ಉರಿಸುತಿರುವೆಯಲ್ಲಾ
ನೆನಪುಗಳನ್ನೆಲ್ಲ ಸುಟ್ಟು
ಬೂದಿ ಮಾಡುತಿರುವೆಯಲ್ಲ

ಕರೆದುಬಿಡು ನನ್ನನೊಮ್ಮೆ
ಬರುವೆ ನಿನ್ನೆದೆಗೆ
ಮುಂಗಾರು ಮಳೆಯಾಗಿ
ಕಹಿ ನೆನಪಿನ ಬೂದಿ
ಎಲ್ಲವ ತೊಳೆದು
ಹೊಸ ಆಸೆಗಳ
ಬೀಜವ ಬಿತ್ತಿ..
ಬದುಕಿನ ಕನಸುಗಳ
ಸಾಕಾರಗೊಳಿಸುವೆ
ಕೂಗಿಬಿಡುವೊಮ್ಮೆ
ಎನ್ನೆದೆಗೆ ಕೇಳುವ ಹಾಗೆ..


ಅಯ್ಯೋ ಗೆಳೆಯ
ಬುದ್ದಿ ಮತಿಯಾಯಿತೆ
ಹೃದಯವನ್ನು ಸುಟ್ಟು
ಬೂದಿಯನ್ನು
ಕಾವೇರಿಯಲ್ಲಿ
ಹರಿದು ಬಿಟ್ಟು
ಒಮ್ಮೆ ಕೊಗು ಎನ್ನುವೆಯಲ್ಲ

ಎಷ್ಟೇ ಆದರೂ ಗಂಡು
ಅಹಂ ಏಲ್ಲಿ ಬಿಡುವಿರಿ
ನಾನು ಹೃದಯವನ್ನು ಸುಟ್ಟಿದ್ದು ಮುಲಾಮು
ನಾ ಹಚ್ಚಬೇಕು

ಅವಳು ಕರೆಯುವ
ಮೊದಲು ನಾ ಹೋಗಬೇಕು
ಅನ್ನವ ಅರಿವು ಬಾರದೆ ಹೊಯಿತೆ

ನಾ
ಗೆಳತಿ..
ನೀ ಬರೆದ ಸಾಲುಗಳನ್ನು
ಯಾರಾದರೂ ಓದಿದರೆ
ನಿನಗೆ ಮತಿಭ್ರಮಣೆ
ಆಗಿರಬಹುದೆಂದು ತಿಳಿಯುವರು
ಸುಗುಣೆ.. ಕುಡಿಯಲು
ನೀರಿಲ್ಲದ ಕಾವೇರಿ
ಕೊಳ್ಳದಲ್ಲಿ... ನಿನ್ನ
ಹೃದಯವ ಸುಟ್ಟು ಬೂದಿಯ
ಹರಿಸಿದೆನೆಂದರೆ ಜನ
ನಕ್ಕಾರು ಒಲವೆ...

ನೀ ಸುಟ್ಟುಕೊಂಡಿರುವ
ಹೃದಯಕ್ಕೆ ನಾನಗಿ
ಬರುವೆ ಮುಲಾಮು
ಸುಮ್ಮನೆ ನೋವಿನ
ವೇದನೆಯಲಿ ನರಳಬೇಡ

ಬರೆದು ಕಳೆಸು
ನೋವಿಗೊಂದು ಪತ್ರ
ನಿನ್ನ ನೋವಿಗೆ
ಮದ್ದಾಗಿ ಬರುವನು
ಈ ಕರ್ನಾಟಕದ ಸುಪುತ್ರ


ಅಯ್ಯೋ ಗೆಳೆಯ
ಮಳೆ ಇಲ್ಲ ಅನ್ನುವ
ಕಾರಣ ಕೊಟ್ಟ
ನಿ ನುಳಿಚಿಕೊಬೇಡ
ಕಾವೇರಿ ಚಾಮುಂಡಿಯ
ಮಡಿಲಿನಲ್ಲಿ  ಹರಿಯುತ್ತಿರುವವಳು
ಅವಳನ್ನು ನಂಬಿ ಬಿತ್ತನೆ ಮಾಡಿದ ಮಕ್ಕಳಿಗಾಗಿಯೇ
ಉಸಿರು ಬಿಗಿ ಹಿಡಿದು ಹರಿಯುತ್ತಿರುವವಳು

ಅಂತಹವಳ ಮಡಿಲಲ್ಲಿ
ನನ್ನ ಬೂದಿಯನ್ನು
ಬಿಟ್ಟು ಬಂದು
ಹುಸಿಯ ನೋಡಿಯದಿರು
ನೋಡಿದವರು ನಕ್ಕಾರು
ಕರ್ನಾಟಕ ಸುಪುತ್ರ
ಇಂದು ಹುಸಿಯ ನುಡಿದನೆಂದು

ನಾ
ನಿಜ ಅವಳು ಉಸಿರು
ಬಿಗಿ ಹಿಡಿದೆ ಹರಿಯುತ್ತಿರುವವಳು
ಜೋರಾಗಿ ಹರಿದರೆ ನೆರೆ ರಾಜ್ಯದವರು
ತಮ್ಮ ಕಾಲುವೆಗಳಿಗೆ ಹರಿಸಿಕೊಳ್ಳುವರಲ್ಲ
ಕಾವೇರಿಯ ನಂಬಿದ ಕೆಂಪೆಗೌಡನ
ಊರಿನವರು ಅದೇ ನೀರಿಗಾಗಿ
ಹಾಹಾಕಾರ ತೆಗೆಯುತಿರುವರು ಒಡತಿ

ನಮ್ಮ ಪ್ರೀತಿಯ ಬೂದಿಯು
ಆ ಕಾವೇರಿಯಲ್ಲಿ ಹರಿಯಬಿಟ್ಟಿದ್ದೆ
ಆದರೆ.. ಆ ನೀರನು ಕುಡಿದ ಕವಿಮಿತ್ರ
ಶೇಖರಜ್ಯೋತಿಯು ಸುಮ್ಮನಿರುತ್ತಿದ್ದನೆ..
ಬರೆದು ಹಾಕುತ್ತಿರಲಿಲ್ಲವೆ ನಮ್ಮ ಪ್ರೇಮ
ಮರಣದ ಇತಿಹಾಸದ ಮೆಲುಕುಗಳನ್ನು

ಸುಳ್ಳನಾಡುವದಕೂ ಒಂದು
ಮಿತಿ ಇರಲಿ ಮಲ್ಲಿಗೆ..
ನೀನಿಲ್ಲದೆ ಸೊರಗಿದೆ
ಮನದ ಗದ್ದುಗೆ..
ಬಂದು ವೀರಾಜಮಾನವಾಗಿಸು
ನನ್ನೆದೆಯಲಿ ಮೆಲ್ಲಗೆ


ಆಹಾ ಗೆಳೆಯ
ಪ್ರತಿನಿತ್ಯ ಅವರು
ಪ್ರೇಮ ಕವಿತೆಯನ್ನು ಬರೆಯುತ್ತಲೆ ಇರುವರು

ಮೊನ್ನೆತಾನೆ ಶಿಶುನಾಳರ
ಮಡಿಲಲ್ಲಿ ರ
ಶಂಕರ್ ಸರ್ ಕೃಪೆಯಿಂದ
ಕವನ ವಾಚನ ಮಾಡಿ ಮೆಚ್ಚುಗೆ ಪಡೆದು ಬಂದರು

ಅಲ್ಲಿಗೆ ಬಂದ ನಮ್ಮ ಗೆಳತಿ
ಕೊಟ್ಟ ಕೊಡುಬಳೆ ನಿಪ್ಪಟ್ಟು ಸವಿದು ಆ ವಾತಾವರಣದಿಂದ ಹೊರ ಬಾರದೆ ಅದೇ ಗುಂಗಿನಲ್ಲಿ
ನನ್ನ ಅತ್ತಿಗೆಯ ಬಳಿ

ಅಲ್ಲಿಯ ಚರ್ಚೆ ನಡೆಯತ್ತಿದೆ
ಸಲ್ಲ  ತಾಳ್ಮೆ ಗೆಳೆಯ
ನಾಳೆ ಪ್ರಾರಂಭ
ನನ್ನ ಹೃದಯ ಸುಟ್ಟ
ನಿಮ್ಮ ಮೇಲೆ ಕವನದ
ಯುದ್ಧಕ್ಕೆ ಸಿದ್ದರಾಗಿರಿ

ನಾ
ನಿನ್ನ ಪ್ರೇಮ ಯುದ್ಧದಲಿ
ನಾನೆಂದೊ ನಿನಗೆ ಸೋತು
ಶರಣಾದವನು.. ನಿನ್ನ
ಪ್ರೇಮ ಪಂಜರದೊಳು
ಬಂಧಿಯಾದ ಹಕ್ಕಿ ನಾನು

ಮಿತ್ರನು ಪಾಪ.. ಕೊಡುಬಳೆಯೊಂದಿಗೆ
ಎರಡು ತತ್ತಿಗಳನ್ನು ಉಂಡವನು..
ಮಲಗಲಿ ಬಿಡು ಅವರು ಚಂದ್ರಿಕೆ...
ನಮ್ಮಿಬ್ಬರ ಕಾದಾಟದಲಿ ಶಶಿಯು
ಕರಗಿ ರವಿಯು ಬರಬಹುದು..

ಬಾ.. ಬಾಳೆದಿಂಡೆ.. ನಿನ್ನೆಲ್ಲ ಮುಖಪುಟದ
ಸೈನ್ಯವನೆ ಹೂಡಿ ಬಾ... ಮುನ್ನೆಡಿಸಿಕೊಂಡು
ಬಾ.. ಕಾದಿರುವೆ ನಿನಗಾಗಿ ಈ ಪುಟದಲಿ
ಏಕಾಂಗಿಯಾಗಿ... ನಿನ್ನ ಪ್ರೇಮದ ಹೂ
ಬಾಣಗಳಿಗಂತೂ ನನ್ನ ಸೋಲು ನಿಶ್ವಿತ
ವಿರಹದ ಈಟಿಗಳಿಗಂತಾದರೆ... ನನ್ನ
ಬತ್ತಳಿಕೆಯಲ್ಲಿ ಅಸ್ತ್ರಗಳೇನು ಕಡಿಮೆಯಿಲ್ಲ..


ಹಹಹಹ
ನಾನು ಯಾರನ್ನು
ಕರೆತರಲಾರೆನು
ನಾನು ಏಕಾಂಗಿ
ಒನ್ ಮ್ಯಾನ್ ಆರ್ಮಿ ನಾನು

ಹಾವ ಬತ್ತಳಿಕೆ ಬಳಸಿದರು ಸರಿಯೇ
ಕಣ್ಣಿರು ಸುರಿಸಿದರು ಸರಿಯೇ..

ನಾನು ಸ್ವಾಭಿಮಾನ ಸೋಲಲಾರೆ
ಹೇಗೆ ನನ್ನ ಹೃದಯ
ಸುಟ್ಟಿತು ಅಂದಯೇ ತೀರ್ಮಾನ ವಾಯಿತು..

ನಾನು ಯಾವ ಮಲ್ಲಿಗೆ ಸಂಪಿಗಿಗೆಗೆ ಸೋತು ಶರಣಾಗತಿಯನ್ನು ಪಡೆಯಲಾರೆ..

ಒಮ್ಮೆ ಬಾಡಿದು ಹೂ ಮತ್ತೆ
ಅರುಳುವುದೆ.
ಒಮ್ಮೆ ಒಡೆದ ಕನ್ನಡಿ ಕೊಡುವುದೆ
ಒಮ್ಮೆ ಒಡೆದ ಮನಸ್ಸು ಸೇರುವುದೆ..
ಒಮ್ಮೆ ಗಾಯದ ಕಲೆ ಮತೆ ಹೋಗುವುದೆ..

ಅಸಾಧ್ಯ ನೀನು ಗಂಡು ಎನ್ನುವ ಅಹಂನಿಂದ ಮಾತಾಡಿದರು
ನಾನು ಹೆಣ್ಣು ನನ್ನ ಗೆಳೆಯ
ಚನ್ನಾಗಿರಲಿ ಎಂದು
ಬಿಟ್ಟುಕೊಡುವೆ
ಮತ್ತೊಬ್ಬರಿಗೆ ತ್ಯಾಗ ಮಾಡುವೆ

ನಾ
ನನಗೆ ಗೊತ್ತು ನೀನು ಒನಕೆ
ಓಬವ್ವನೆ.. ಅಕ್ಷರಗಳಲ್ಲಿ.. ಮಾತಿನಲ್ಲಿ
ಸಿಕ್ಕ ತಲೆಯು ಈ ಪುಟದಲ್ಲಿ ಬದುಕಿ
ಉಳಿದದ್ದು ಯಾವುದಾದರೂ ಇದೆಯೆ...?

ನಿಜ.. ಒಮ್ಮೆ ಬಾಡಿದ ಹೂ ಮತ್ತೆ
ಅರಳದು.. ಆದರೆ ಪ್ರೀತಿಯಲಿ
ಮತ್ತೊಂದ ಮೊಗ್ಗನು ಅರಳಿಸಬಹುದು
ಒಡೆದ ಕನ್ನಡಿ ಕೂಡದು.. ಮನಸಿನ
ಕನ್ನಡಿಗಳು ಕೂಡಲಾರವೇನು...
ಒಡೆದ ಮನಸ್ಸು ಕೂಡಲಾರದು
ಒಲವಿಂದ ಮತ್ತೆ ಒಂದಾಗದೆ..
ಗಾಯದ ಕಲೆ ಮಾಸಿದರೂ ನೋವು
ಮಾಸದು ಅದನ್ನರಿತು.. ಬಾಳಲಿ ಎಡವದಂತೆ ಬದುಕಬಹುದಲ್ಲವೆ

ತ್ಯಾಗದ ಮಾತೆಲ್ಲಿ ಬಂತು ಕಳ್ಳಿ
ಅಂಗಳದಿ ಅರಳಿದ ಸುಮವನು
ಬುಡದ ಸಮೇತ ಕಿತ್ತೊಗೆಯುವ
ಹಾಗೆ ನಿನ್ನ ಪ್ರೀತಿಯ ತೋಟದಿಂದ
ಬೇಡ ಬೇಡವೆಂದೂ ಅಂಗಲಾಚಿದರೂ
ಕಿತ್ತಿ ಒಗೆದುಬಿಟ್ಟೆಯಲ್ಲ... ನಿನಗಿದು
ನ್ಯಾಯವೆ... ಹಣ್ಮನಕ್ಕಿದು ತರವೆ..


ಹಹಹಹಹ
ಮಾತಿನ ಮಲ್ಲ ಎಂದು ಗೊತ್ತು
ಈ ಮಾತಿನ ಕಲೆಯನ್ನು ಬಳಸಿ ಪ್ರೀತಿಯ ಗಾಳಹಾಕಿ
ಮೀನನ್ನು ಬಲೆ ಹಿಡಿಯುವ ರೀತಿಯಲ್ಲಿ ನನಗೆ ಬಲೆ ಹಾಕಿದ್ದು..

ಸುಂದರ ಪ್ರಮದ ಹೂ ತೋಟದಲ್ಲಿ ಅರಳಿನಿಂತ ಗುಲಾಬಿ ನಾನು
ಅದಕ್ಕೆ ನಿನು ಮುಳ್ಳಿನಂತೆ ಕಾವಲು ಕಾಯುವುದನ್ನು ಬಿಟ್ಟು..

ಅಂತ ಇಂತ ಹರಳಿದ ಬಣ್ಣ ಬಣ್ಣದ ಹೂವನ್ನು ಸವಿಯಲು ಹೋದ ದುಂಬಿ ನಿನು..

ಇಂದು ಅಮಾಯಕನಂತೆ ವರ್ತಿಸುವೆಯ ಇದು ಸರಿಯೇ
ದೇವರ ಮಡಿಯ ಮಲ್ಲಿಗೆ ನಾನು
ಕಾಡು ಹೂಗಾಗಿ ನನ್ನ ವಸಿಕಿದ್ದು ಸರಿಯೇ
ಆ ಹೂವಿಗಾಗಿ ನನಗೆ ಮೋಸ ಮಾಡಿದ ಮಳ್ಳ ಕಳ್ಳ ನಿನು ಗೆಳೆಯ

ನಾ
ಎಂತಹ ಎದೆ ಸಿಡಿಯುವ
ನುಡಿಗಳನಾಡಿಬಿಟ್ಟೆ ಸಂಪಿಗೆ
ಮೋಹಕ ನಗುವಿನ ಬಲೆಯಲಿ
ಎನ್ನ ಮನವ ಸೆರೆಹಿಡಿದ
ಗಿರಿಕನ್ಯೆ ನೀನು..

ನಿನ್ನ ಪ್ರೇಮ ಸುಮದ ಗಂಧವನೆ
ಸರಿಯಾಗಿ ಸವಿಯದ ಈ ಮುದ್ದು
ಹುಡುಗನಿಗೆ ಅದೆಂತಹ ಬಿರುದನಿಟ್ಟುಬಿಟ್ಟೆ

ಸದಾ ನಿನ್ನ ಮಡಿಲಲಿ ಮಲಗಿಸಿ
ಹಣೆಗೊಂದು ಸವಿಮುತ್ತ ನೀಡಿ
ನೀನೆ ಈ ಹಣೆಯ ಸಿಂಧೂರ
ಎನ್ನುತ್ತಿದ್ದವಳ ಬಾಯಲ್ಲಿ
ಇದೆಂತಹ ಕರ್ಣ ಕಠೋರ ಮಾತುಗಳು

ನೀನೆಂದು ಈ ಮನೆದೇವರ
ಎದೆಯ ಪುಷ್ಪವೆಂದು ನಿನ್ನ
ಶಿರವನು ಸದಾ ನನ್ನೆದೆಯ ಮೇಲೆ
ಮಲಗಿಸಿ ಆ ಮುಂಗುರುಳಲಿ
ಬೆರಳಾಡಿಸಿ.. ನಿನ್ನ ಕೆಂಪು ಕೆನ್ನೆಯ
ಚಿವುಟಿದ್ದು ಮರೆತೆಯಾ..

ನೀನು ಸುರಲೋಕದ ಪಾರಿಜಾತ
ನಿನ್ನ ಬಿಟ್ಟು ಈ ಲೋಕದಲಿ
ಮತ್ತಾರ ವರಿಸಲಿ ಸುಕೋಮಲೆ
ಬೇರೆಯವರ ನಾ ಕಣ್ಣೆತ್ತಿ ನೋಡಿದರು
ನೀ ಅರಿಯುತ್ತಿರಲಿಲ್ಲವೆ ನನಗೆ ಮಸಾಲೆ..


ಅಯ್ಯೋ ಗೆಳೆಯ ಸಾಕು ಹೊಗಳಿಕೆ ಮಾತುಗಳಿಗೆ
ಸೋಲುವುದಿಲ್ಲ

ಈಶ್ವರನು ಹೀಗೆಯೆ ಗೌರಿಯ ಮನ ಓಲಿಸಲು ನಾನ ಆಟಗಳನ್ನು ಕಟ್ಟಿ
ಅವಳು ಒಪ್ಪದೇ ಹೋದಾಗ ಗಂಗೆಯನ್ನು ಶಿರದಲ್ಲಿ ಧರಿಸಿ ಕೇಶರಾಶಿಯಲ್ಲಿ ಬಚ್ಚಿಟ್ಟನಂತೆ.

ಕಾಡು ಪರಿಜಾತ ನಾನಲ್ಲ
ಗೌರಿಯು ನಾನಲ್ಲ
ಅವಳು ಲೋಕ ಕಲ್ಯಾಣಕ್ಕೆ ಒಪ್ಪಿದಳು ಪರಶಿವವನ್ನು
ಮನ್ನಿಸಿ ಆರ್ಧನಾರೇಶ್ವರ ಅವತಾರ ತಾಳಿದರು..

ನಿನು ಯಾವ ಉದ್ದರಾದ ಕಾರ್ಯಕ್ಕೆ ನನ್ನ ಹೃದಯವನ್ನು ಸುಟ್ಟೆ ಗೆಳೆಯ ಕಾರಣವನ್ನು ಹೇಳದೆ ಹೋದೆಯಲ್ಲ.

ನಿನ್ನ ಮಾಯಾಜಾಲದಲ್ಲಿ ನಾ ಬೀಳಲಾರೆ ನಡೆ ಮುಂದೆ
ಮರಳು ಮಾತಿಗೆಲ್ಲ ಜಗ್ಗಲಾರೆ ನಾನು..

ಯಾವ ಹೊತ್ತ ದಲ್ಲಿ ಯಾವ ಹಾವು ಇದಿಯು ನಾ ಅರಿಯೇ

ನಾ

ಕೊನೆಯದಾಗಿ ಹೇಳುವೆ ಕೇಳು ಸುಮತಿ
ಪದೇ ಪದೇ ಎಣಿಸಿದರೆ ಲೆಕ್ಕವದು
ಚೊಕ್ಕಾಗುವುದು..
ಪದೇ ಪದೇ ತಪ್ಪುಗಳ ಎಣಿಸುತ್ತ
ಕುಳಿತರೆ ಬದುಕದು ಕೊಳೆತು
ನಾರುವುದು...

ನಿಂತ ನೀರಾಗದಿರಲಿ ಮನ
ಕಾಲಾಡಿಸುವರದೇಷ್ಟಿಲ್ಲ ಜನ
ಕೊಲ್ಲುವರು ಮಾತಿನಲಿ
ಅಣುಕಿಸಿ ಪ್ರತಿ ಕ್ಷಣ ಕ್ಷಣ
ಕಿವಿಗೊಡದಿರು ಹೂವೆ
ನೀನು ಅರೆಕ್ಷಣ

ಕಾದು ಕುಳಿತಿದೆ ನಿನ್ನ ಅಂಗಳದ
ಹೊರಗೆ ಹಕ್ಕಿಯೊಂದು ಪ್ರೀತಿಯ
ಬಲವಿಲ್ಲದೆ ದಯೆತೋರು ಬಿಡೊಮ್ಮೆ
ಈ ನಿನ್ನ ಚೆಲುವಂಗೆ..

ನೋಡು ಗೆಳೆಯ
ನಾ ಪದೆ ಪದೆ ಹೇಳಲಾರೆ
ಗಂಡು ಅನ್ನುವ ಅಹಂ ಬಿಟ್ಟು ನಿನ್ನ ತಪ್ಪು ಅರಿತು
ಎಲ್ಲಾ ತಪ್ಪುಗಳನ್ನು ತಿದ್ದಿಕೊಂಡು ನಡೆಯುವುದನ್ನು ಕಲತಿಕೊ

ಒಮ್ಮೆ ಬೇಡ ಎಂದು ದೂರ ತಳ್ಳಿದ ಮೇಲೆ ಅಯಿತು
ಆಟ ಮುಗಿಯಿತು
ನಿನ್ನ ನಾನು ಹೃದಯದಲ್ಲಿ ದೇವತಾ ಮೂರ್ತಿ ಮಾಡಿ ಪೂಜಿಸುವೆ.

ನಿನ್ನ ವರತು ಯಾರನ್ನು ನಾ ಪ್ರೀತಿಸಲಾರೆ
ಹಾಗೆಯೇ ಮನ್ನಿಸಿ ಪುನಃ
ಹೃದಯದಲ್ಲಿ ಸ್ಥಾನ ನೀಡಲಾರೆ

ಒಮ್ಮೆ ಹೋದಮೇಲೆ ಆಯಿತು
ಹೊಗುವಾಗ ಇರಲಿಲ್ಲವೇ ನನ್ನ ನೆನಪು
ಪದೇ ಪದೇ ಅಲ್ಲ ಸಾವಿರ ಸಾರಿ ಕಳಿದರು ಅಷ್ಟೇ..

ನಾನು ನಾನೇ ನಿನು ನಿನೇ
ಹೋಗು ಬಂದ ದಾರಿಗೆ ಸೋಂಕವಿಲ್ಲ ಎಂದು
ಆ ಹೂವಿಗಾದರು ಆಸರೆಯಾಗಿ ಬದುಕು

ನಾ
ಮಾತು ಮಾತಿಗೂ ನಿನ್ನೆ ಪ್ರೀತಿಸುವೆ
ಎಂದವಳು ಇಂದೇಕೆ ನಿನ್ನ ಮನದಿಂದ
ನನ್ನ ಹೆಸರನು ಅಳಿಸಿದೆ..
ನನ್ನ ಅಹಂ ಎನ್ನುತ್ತಿರುವೆಯಲ್ಲ ಚೆಲುವೆ
ಬರೆದಿರುವ ಇಷ್ಟು ಸಾಲುಗಳಲ್ಲಿ ನನ್ನ
ಪ್ರೇಮ ನಿವೇದನೆಯನೊಂದು ಹೊರತು
ಪಡಿಸಿ.. ಒಂದೇ ಒಂದು ಸಾಲಲ್ಲಾದರೂ..
ಪದವಾದಲ್ಲಾದರೂ ನನ್ನ ಅಹಂನ್ನು
ತೋರಿಸಿಬಿಡು.. ನಿನಗೆ ಶರಣಾಗಿ ಬಿಡುವೆ

ಬಂದ ದಾರಿಗೆ ಸುಂಕವಿಲ್ಲ ಎಂದು
ಹೋಗಲು ನಾನು ಬೇಡುತಿರುವುದು
ಕಲ್ಲು ಮೂರ್ತಿಯ ದೇವತೆಯನ್ನಲ್ಲ
ನನ್ನ ಮನದ ಅಧಿ ದೇವತೆಯಾದ
ನಿನ್ನಲಿ ನಾನು ಭಿನ್ನವಿಸಿಕೊಳ್ಳುತ್ತಿರುವುದು


ಗೆಳೆಯ ಇವಗ ಸಮಯವಿಲ್ಲ
ಕರ್ತವ್ಯ ನನ್ನ ಕೂಗಿ ಕರೆಯುತ್ತಿದೆ..

ಕರ್ತವ್ಯದ ಮುಂದೆ ನಿಮ್ಮ
ಮಾತುಗಳಿಗೆ ಉತ್ತರಿಸಲು ಸಮಯವಿಲ್ಲ

ಗೆಳೆಯ ಅಹಂ ತೋರಿಸುವುದಕ್ಕೆ
ಈ ಒಂದು ಉದಾಹರಣೆ ಸಾಕಲ್ಲವೇ.

ಗೆಳತಿ ಕರ್ತವ್ಯ ಕ್ಕೆ ಹೊರಡುವಳು ಇಂತಹ
ಸಮಯದಲ್ಲಿ ನಾನು ಕಾಡುವುದು ಸರಿಯೇ
ಯೆಂದು ಒಮ್ಮೆ ಯೋಚಿಸಲಿಲ್ಲವೇ

ನಾ
ಕಾಯುವೆ ಗೆಳತಿ ಈ ಉಸಿರಿರುವವರೆಗೂ
ಇಷ್ಟು ದಿನಗಳೆ ಕಾದ ನನಗೆ ಇನ್ನಾರು ತಾಸು
ಕಾಯಲಾಗುವುದಿಲ್ಲವೆ

ನನ್ನ ಕರ್ತವ್ಯವು ಕರೆಯುತಿಹುದು
ಓಗೋಡಬೇಕಿದೆ ಕಾಲನ ಕರೆಗೆ
ನಿನ್ನ ಕರ್ತವ್ಯಕ್ಕೆ ನಾನು ಅಡ್ಡಿ
ಮಾಡಿ ನಾನು ಅಹಂನ್ನು ತೋರುತ್ತಿಲ್ಲ
ನನ್ನ ಪ್ರೇಮ ನಿವೇದನೆಯ ನೆನಪಿಸಿದನಷ್ಟೆ..

ನಿನ್ನ ಕೆಲಸದ ಭರದಲ್ಲಿ.. ನಿನ್ನೊಲವಿಗಾಗಿ
ಕಾಯುತಿರುವ ಈ ಪ್ರೀತಿಯ ಹಸುಗೂಸುನು
ಮರೆಯದಿರು ಕಾಯುತಿರುವೆ.. ನಿನ್ನ ಬರುವಿಕೆಗಾಗಿ..

No comments:

Post a Comment