ಪತ್ರಿಕೆ..
ಪತ್ರಿಕೆ ಕೇವಲ ಹತ್ತು ಹನ್ನೆರಡು
ಪುಟಗಳ ಹೊಂದಿದ.. ಕೇವಲ
ಕಪ್ಪು ಬಿಳುಪು ಬಣ್ಣ ಬಣ್ಣದ ಪದಗಳ
ಮತ್ತು ಪಟಗಳ ಮುದ್ರಿಸಿಕೊಂಡು ನಮ್ಮ
ಮನೆಯ ಹೊಸ್ತಿಲನ್ನು ರವಿಯ ಕಿರಣಗಳು
ಸ್ಪರ್ಶಿಸುವ ಮೊದಲೆ.. ಮನೆಯ ಬಾಗಿಲನ್ನು
ತಟ್ಟಿ.. ರಾತ್ರಿಯೆಲ್ಲ ಕಲ್ಪನೆಯ ಕನಸುಗಳಲೆ
ತೇಲಾಡಿದ ಮತಿಗೆ ವಾಸ್ತವದ ದರ್ಶನವ ಮಾಡಿಸುವ
ಜ್ಞಾನಕೋಶ...
ಈ ಒಂದು ಮುಂಜಾವಿಗೆ ಬಂದು ಬದುಕಿಗೆ
ಬೆಳಕನು ಚೆಲ್ಲುವ ಈ ಪತ್ರಿಕೆಯ ಹಿಂದೆ ಅದೇಷ್ಟು
ಯುವಕರ.. ಕೆಲಸಗಾರರ.. ಪತ್ರಿಕೆದಾರರ..
ಹಂಚಿಕೆದಾರರ ಪರಿಶ್ರಮವಿರುತ್ತದೆ.. ಒಬ್ಬ ಪತ್ರಕರ್ತ
ಸಾಮಾಜಿಕ.. ರಾಜಕೀಯ.. ಸಾಂಸ್ಕೃತಿಕ...ಬೇಕಾದ್ದು ಬೇಡವಾದದ್ದನ್ನು... ಹಲವು ಅಡೆತಡೆಗಳ ಎದುರಿಸಿ..
ಮಾಡುವ ಕೆಲಸದಲ್ಲಿ ಜೀವ ಬೆದರಿಕೆಯನ್ನು ಹೊಂದಿ
ಸಂಸಾರವನ್ನು ಸದಾ ಆತಂಕದ ಮಡುವಲ್ಲಿ ಮಲಗಿಸಿ
ಮನೆಬಿಟ್ಟು ಹೋದವನು ಮರಳಿ ಗೂಡು ಸೇರಬಲ್ಲನೆ
ಎಂಬ ಅನುಮಾನದಲ್ಲೆ ಊರಿನ ನಾಡಿನ ದೇಶದ ಬಗ್ಗೆ
ಚಿಂತಿಸುತ್ತ.. ವಿಮರ್ಶಿಸುತ್ತ..ತಾನೇನು ಕೊಡಬಲ್ಲೇನು
ಈ ಸಮಾಜಕ್ಕೆ... ಜನ್ಮವನಿತ್ತ ದೇಶಕ್ಕೆ...ಅದರಲ್ಲೂ ಹೆಚ್ಚಾಗಿ ಅಂಧಕಾರದಲ್ಲಿ ಮಲಗಿರುವ ನನ್ನ ಓದುಗರನ್ನು ಮೇಲೆತ್ತಲು
ಎಂತಹ ಅಪಾಯವನ್ನಾದರೂ ಸರಿ ಒಂದು ವಿಷಯಕ್ಕೆ
ನ್ಯಾಯವನ್ನು ದೊರಕಿಸಿಕೊಡಲೆಬೇಕು ಎಂದು ಹೊರಾಡುವ ಈ ಸಮಾಜದ ಕಣ್ಣುಗಳಿಗೆ ನಾವು ಎಷ್ಟು ಕೃತಜ್ಞತೆಗಳ
ಸಲ್ಲಿಸಿದರು ಸಾಲದು..
ಪತ್ರಿಕೆಯೆಂದರೆ ಪತ್ರಕರ್ತ..ಪತ್ರಕರ್ತನೆಂದರೆ ಪತ್ರಿಕೆ..
ಇವರು ಬರೆಯುವದರಿಂದ ಆ ಪತ್ರಿಕೆಗೆ ಜೀವವುಂಟು
ಆ ಪತ್ರಿಕೆಯಲ್ಲಿ ಇವರು ಬರೆಯುತ್ತಿರುವುದರಿಂದಲೆ
ಇವರಿಗೆ ಹೆಸರುಂಟು ಗೌರವವುಂಟು...ಇಷ್ಟೇಲ್ಲಾ ಹೇಳಿ
ಇವರಿಬ್ಬರನು ಮನೆಯಂಗಳಕೆ ತಲುಪಿಸುವ ವಿತರಕರ
ಬಗ್ಗೆ ಹೇಳದೆ ಇರದಾದಿತೇನು...
ಮಳೆಯಲ್ಲಿ ತೊಯ್ದು... ಚಳಿಯಲ್ಲಿ ನಡುಗಿ..
ಬಿಸಿಲಲ್ಲಿ ಬೇವರಿ... ಗಾಳಿ ಇರದ ಸೈಕಲ್ ನ್ನು
ತುಳಿದುಕೊಂಡು ಓಣಿ.. ಓಣಿ.. ಮನೆಯ ಬಾಗಿಲುಗಳ
ತಟ್ಟಿ ಎಚ್ಚರಿಸಿ ಪತ್ರಿಕೆಯ ಹಂಚುವರು.. ಜ್ವರವಿರಲಿ
ಮೈ ಕೈ ನೋವೆ ಇರಲಿ.. ತಲೆನೋವಿರಲಿ ರಾತ್ರಿಪೂರಾ
ಎಚ್ಚರವಿರಲಿ ಇವರು ಕಾಯಕಕ್ಕೆ ಮಾತ್ರ ಗೈರು ಹಾಜರಿಲ್ಲ
ಒಂದು ತಲೆ ನೋವು ಬಂದರೆ ಸಾಕು ಎರಡು ದಿನ ರಜೆ
ಹಾಕುವ ಸರಕಾರಿ ನೌಕರರು... ಇವರನ್ನು ಕಂಡು ಇವರ ಕಾರ್ಯದಕ್ಷತೆಯನ್ನು ಒಪ್ಪಿ ಮೈಗೂಡಿಸಿಕೊಂಡರೆ ಸರಕಾರದ
ಕೆಲಸಗಳು ನಿಲ್ಲದೆ..ಮಲಗದೆ.. ಎದ್ದು ಓಡುಡಾವುದರಲ್ಲಿ ಸಂಶಯವೆಯಿಲ್ಲ
ನಮ್ಮ ಓದುಗರದೊಂದೆ ವಿನಂತಿ..
ನಿಮ್ಮ ಬರಹ ನಿಷ್ಪಕ್ಷಪಾತವಾಗಿರಲಿ..
ಓದುಗರ ಒಳಗಣ್ಣನು ತೆರೆಸುವಂತಿರಲಿ
ನಿಮ್ಮ ಚಿಂತನೆಗಳ ನಮ್ಮ ಮತಿಯಲ್ಲಿ ಬಿತ್ತಿ
ದೇಶಕ್ಕೆ ಸಮಾಜಕ್ಕೆ ಓದುಗುರು ತಮ್ಮನ್ನು ತಾವು
ಯಾವ ರೀತಿಯಾಗಿ ಅರ್ಪಿಸಿಕೊಳ್ಳಬೇಕೆಂಬುದನು
ಲೇಖನಗಳಲ್ಲಿ ತಿಳಿಸಿಕೊಡಿ.. ಭವ್ಯ ಭಾರತವ ಕಟ್ಟುವ
ನಿಟ್ಟಿನಲ್ಲಿ ನಮ್ಮನು ನಿಮ್ಮೊಡಗೂಡಿ..ನಡೆಸಿಕೊಂಡು ಹೋಗಿ
ಅಂಧಕಾರದ ಬದುಕಿಗೆ ಜ್ಞಾನ ತೋರುವ ದೀವಿಗೆಯಾಗಿರಿ
ದೀವಿಗೆಯಾಗಿರಿ
No comments:
Post a Comment