Wednesday, July 12, 2017

ನಿರೀಕ್ಷೆ

ನಿರೀಕ್ಷೆ..

ನಾಳೆಗಳ ನಿರೀಕ್ಷೆಗಳಲೆ ನಾನು
ಬದುಕುತಿರುವದು....ಉಸುರುತಿರುವುದು...
ಬರೆಯುತಿರುವುದು...ಯಾವುದೊ ಒಂದು
ವೇದಿಕೆ ನನಗಾಗಿ ಕಾದಿದೆ ಎಂದು ಓದಿ..
ಓದಿ.. ಸಜ್ಜಾಗುತಿರುವುದು..

ನಿರೀಕ್ಷಿಸುವೆ ನಾನು ಅತಿಯಾಗಿ.. ನಾ
ಬರೆಯುವ ಕವನಗಳಿಗೆ.. ವಿಮರ್ಶಿಸಿ
ಅದರ ಒಳಹೊರವನು ಅರಿತು ಎರಡು
ಸಾಲು ಬರೆದು ಹಾಕುವರೆಂದು...

ಮೆಚ್ಚಿ ಬೆನ್ನ ತಟ್ಟಿ.. ಮುಂದಿನ ಬರೆಯುವ
ಕವನಗಳಿಗೆ ಪ್ರೋತ್ಸಾಹಿಸುವರೆಂದು.. ಇದ್ದ
ತಪ್ಪುಗಳ ತಿದ್ದಿ ತಿಳಿಹೇಳುವರೆಂದು.. ಈಗಷ್ಟೇ ಅಂಬೆಗಾಲಿಡುತಿರುವೆನಗೆ
ದಾರಿ ದೀಪವಾಗುವಿರೆಂದು..

ನಿರೀಕ್ಷಿಸುವೆ ಬಹಳಷ್ಟು ಮುಖಪುಟದ ಸಹೋದರಿಯವರಿಂದ ಉತ್ತಮವಾಗಿ
ಬರೆದು ಹಾಕಿ ನಾವು ಬರೆಯುವ ಎರಡು
ಸಾಲುಗಳಿಗೆ ಸ್ಪೂರ್ತಿಯಾಗುವರೆಂದು
ಹೊಸ ಹೊಸ ಚಿಂತನೆಗಳ ಬಿತ್ತುವರೆಂದು

ನನ್ನ ನಿರೀಕ್ಷೆಗಳ ಸುಳ್ಳಾಗಲಿಲ್ಲ..
ಮಿತ್ರ ಚಂದ್ರಶೇಖರ ಮಾ. ಅವರು
ಒಂದು ವೇದಿಕೆಯ ಒದಗಿಸಿಕೊಟ್ಟರು
ಸಾಹಿತ್ಯ ಸಂಜೆ ಸಮ್ಮೇಳನಗಳ ವೇದಿಕೆಯ
ನೀಡಿತು.. ನಮ್ಮ ಮುಖಪುಟದ ಹಿರಿಯರು
ದೊಡ್ಡಮನಸ್ಸಿನ ಶಂಕರ ದೊಡ್ಡಮನಿಯವರು
ದೊಡ್ಡದೊಂದು ಅವಕಾಶವನ್ನೆ ಮಾಡಿಕೊಟ್ಟರು..

ನಮ್ಮಲ್ಲಿರುವ ಶಕ್ತಿಯ ನಂಬಿ ನಿರೀಕ್ಷೆಯ
ಮಾಡಿದರೆ..ಅದಕ್ಕೆ ಪ್ರತಿಫಲ ಎಲ್ಲಾದರೂ
ಸಿಕ್ಕೆ ಸಿಗುತ್ತದೆ.. ಅದನ್ನು ನಾವು ಬಳಸಿಕೊಳ್ಳಬೇಕಷ್ಟೆ..  ನಿಜ ಕೆಲವೊಮ್ಮೆ
ನಮ್ಮ ನಿರೀಕ್ಷೆಗಳು ಸುಳ್ಳಾಗುತ್ತವೆ.. ನೋವನ್ನು ತರುತ್ತವೆ... ಏಕೆ? ಮೋಡ
ಕವಿದ ಭಾನು ನಾಲ್ಕು ಹನಿಯ ಮಳೆಯ
ಸುರಿಸದೆ ಹೋಗಿ ಬಿಡುವುದಲ್ಲವೆ..

ನಿರೀಕ್ಷೆಗಳಿರಬೇಕು ಬಾಳಿನ ಹೋರಾಟಕ್ಕೆ
ಒಂದು ನಿರೀಕ್ಷೆ ಸುಳ್ಳಾದಾಗಲೆಲ್ಲ ಮತ್ತೆ ಹತ್ತು ಹಲವು ನಿರೀಕ್ಷೆಗಳನ್ನು ಹೊಂದಬೇಕು
ಆವಾಗಲೇ ಸೋಲು ನಮ್ಮ ಕಾಲಡಿಯಲ್ಲಿ
ಇರುವುದು.. ನಿರೀಕ್ಷೆಗಳ ಕಹಿ ರೂಢಿಯಾಗುವುದು..

ಅಲ್ಲವೆ...?

No comments:

Post a Comment