Tuesday, July 11, 2017

ಜೀವಾಮೃತವಾಗು

ಮಳೆಯ ಹನಿಗಳಿಲ್ಲದೆ ಧರೆಯ
ಒಡಲಿದು ಬಳಲಿ ಬೆಂಡಾಗಿದೆ..
ಕರಿಮೋಡಗಳ ಆಗಮನದ
ನೀರಿಕ್ಷೆಯಲಿ ಕಾದ ಕಂಗಳಲಿ
ಹಸುವಿನಳುವಿನ ನೆತ್ತರ ಕಣ್ಣೀರು
ಸುರಿಸುತಿದೆ...

ಬೊಳು ಬೊಳಾದ ಮರದ
ರೆಂಬೆಗಳಲಿ ಬದುಕಿನ ಗೂಡನು
ಕಟ್ಟಲಾಗದ ಹಕ್ಕಿಗಳು.... ತಿನ್ನಲು
ಕಾಳು ಕಡಿಗಳಿಲ್ಲದೆ.. ಒಣಗಿಬಿದ್ದ
ತರಗೆಲೆಗಳ ಮೇಲೆ ಹೆಣವಾಗಿ
ಬಿದ್ದೀವೆ

ರವಿಯ ಕಡು ತಾಪಕೆ.... ಎಲ್ಲೊ..
ಮೂಲೆಯಲಿ ಹೊತ್ತಿದ ಅಗ್ನಿಯು
ಕಾನನದ ತುಂಬಾ ತನ್ನ ಕೆನ್ನಾಲಿಗೆಯ
ಚಾಚಿದೆ... ಹಸಿವಿನಿಂದ ನಡೆಯಲು...
ಓಡಲು ಬಾರದ ವನ್ಯ ಜೀವಿಗಳೆಲ್ಲ
ಅಗ್ನಿಗಾಹುತಿಯಾಗಿ.. ಬೂದಿಯಾಗಿವೆ..

ಕೊರಕಲು ಬಿಟ್ಟು ಭೂವಿಯ
ಒಡಲಿಗೆ ಹನಿಗಳ ಅಮೃತದ
ಸಿಂಚನವಗೈಯ್ಯು...
ನೀನಿಲ್ಲದೆ ಬಾಯಾರಿ ಬೀರಿದ
ಅಧರಗಳಿಗೆ ಜೀವಾಮೃತವಾಗು

No comments:

Post a Comment