ಈ
ಕತ್ತಲಿಗಳಿಗೂ...
ನನ್ನ ಮೇಲದಷ್ಟು
ಹಗೆತನವಿರಬಹುದು
ಸಾಕಿ....
ಒಂದೆರಡು
ಮದಿರೆಯ
ಬಟ್ಟಲುಗಳ
ಸವಿಯುವ
ಮುನ್ನವೆ...
ಹಗಲೆಂಬ
ನರಕಕ್ಕೆ
ಮತ್ತೆ ದೂಡಿ
ಬಿಡುವುವಲ್ಲ...
ಈ
ಕತ್ತಲಿಗಳಿಗೂ...
ನನ್ನ ಮೇಲದಷ್ಟು
ಹಗೆತನವಿರಬಹುದು
ಸಾಕಿ....
ಒಂದೆರಡು
ಮದಿರೆಯ
ಬಟ್ಟಲುಗಳ
ಸವಿಯುವ
ಮುನ್ನವೆ...
ಹಗಲೆಂಬ
ನರಕಕ್ಕೆ
ಮತ್ತೆ ದೂಡಿ
ಬಿಡುವುವಲ್ಲ...
ನನಗೇತಕೊ...
ಈ ಮಲ್ಲಿಗೆಯ
ಮೇಲೆ
ಅನುಮಾನ
ಮೂಡುತಿಹುದು
ಸಾಕಿ....
ಇಂದು
ನಿನ್ನ ಮದಿರೆಯ
ಮಂದಿರದಲ್ಲಿ
ಸೂಸುತ್ತಿರುವ
ಸುಗಂಧವನು
ಅಂದು
ಅವಳ ಮುಡಿಗೆ
ಮುಡಿಸುವಾಗ
ಇದ್ದಿದ್ದರೆ...?
ನಿನಗೆ
ಹೇಗೆ
ಹೇಳಲಿ
ಸಾಕಿ...
ಮನದೊಳಡಗಿದ
ದುಗುಡುಗಳ
ನೋವ..
ಮನದ
ಮಾತುಗಳನೆಲ್ಲವ
ಅವಳ
ಸೀರೆ
ಸೆರಗಂಚಿನ
ಗಂಟಿನಲಿ
ಸಿಕ್ಕು
ನರಳುತ್ತಿರುವಾಗ
ಮನಸಿನ ಬ್ಯಾನಿ...ನಿಂಗ
ತಿಳಿವಲ್ದೇನೊ.. ಮಾರಾಯಾ....
ಹರೆಯದ ಉರಿ.. ಚೂರಾದ್ರು
ತಟ್ಟವಲ್ದೇನ... ನನ್ನ ರಾಯ
ಹರಿಯೊ..ಹೊಳಿ ಸುಮ್ನ
ಹರಿಯ್ಯಾಕ ಹತ್ತೈತಿ ಮಾತ ಕೇಳಲಾರ್ದ
ಅವಳ
ತುಟಿಯಂಚಿನ
ಮಧುವಿಗೂ...
ನಿನ್ನ ಬಟ್ಟಲೊಳಗಿನ
ಮಧುವಿಗೂ..
ಅದೇಷ್ಟು
ಅಂತರವಿದೆ
ಸಾಕಿ....
ಅವಳು
ನೀಡಿದ...
ತುಟಿಯಂಚಿನ
ಮುತ್ತಿನ
ಮತ್ತು ಇಂದಿಗೂ..
ಇಳಿಯಿತ್ತಿಲ್ಲ..
ನಿನ್ನ
ಬಟ್ಟಲೊಳಗಿನ
ಮದಿರೆ..
ಹೊತ್ತು...ಹೊತ್ತಿಗೆ
ಇಳಿದುಬಿಡುವುದಲ್ಲ...
ಸ್ವರ್ಗದಲ್ಲಿಯೆ
ನಿಶ್ಚಯವಾಗುತ್ತದಂತೆ
ಸಾಕಿ..
ಏಳೇಳು
ಜನ್ಮಗಳ
ನಂಟು...
ಇನ್ನೇಷ್ಟು
ಜನ್ಮಗಳಿವೇಯೊ...?
ಬಿಡಿಸಿಕೊಳ್ಳಲಾಗದ
ನೋವಿನ
ಗಂಟು...
ನಿನ್ನ
ಬಟ್ಟಲೊಳಗಿನ
ಮದಿರೆಗೂ...
ನಾನದೇಷ್ಟು.ಸುಳ್ಳು
ಹೇಳುತಿರುವೆ...
ಸಾಕಿ...
ನೀನೆ..
ಅವಳ
ನೆನಪುಗಳ
ಮರೆಸುವ
ಮದ್ದೆಂದು...
ಅವಳಿಗೆ
ದಿನವೂ....
ಗುಲಾಬಿಯನ್ನು
ಕೊಟ್ಟು
ಕಳುಹಿಸುತ್ತೇನೆ...
ಸಾಕಿ
ನನ್ನನ್ನು
ಒಪ್ಪಿಕೊಳ್ಳುತ್ತಾಳೆಂದಲ್ಲ..
ಗುಲಾಬಿಯೊಳಗಿನ
ನಗುವು...
ಸದಾ
ಅವಳ
ತುಟಿಯಂಚಲೇ...
ಇರಲೆಂದು..
ನಾ ಸತ್ತ
ಮೇಲೆ
ಅವಳಿಗೆ
ನಿ ಹೇಳಿ
ಕಳುಹಿಸದಿರು
ಸಾಕಿ...
ಅವಳ
ಕಣ್ಣಿಂದ
ಜಾರುವ
ಕಣ್ಣೀರ
ಹನಿಗಳ
ಭಾರವ
ಹೊತ್ತು ನಾ
ಹೋಗಲಾರೆ...
ನನ್ನೆದೆಯ
ಕಪಾಟಿನಲ್ಲಿ
ಅವಳ
ನೂರೆಂಟು
ನೆನಪುಗಳ
ಪತ್ರಗಳಿವೆ
ಸಾಕಿ...
ಹೊರಗೆಳೆದು
ಎಲ್ಲವನ್ನು
ಸುಟ್ಟು ಹಾಕಬೇಕಿಂದಿರುವೆ
ಏನು ಮಾಡಲಿ
ಕಪಾಟಿನ ಕೀಲಿ
ಕೈ...
ಕಳೆದುಹೋಗಿದೆ..
ನಿನ್ನೀ....
ಉಪಚಾರಕ್ಕೆ
ಕೊಡಲೇನೂ
ಇಲ್ಲ
ನನ್ನ ಬಳಿ
ಸಾಕಿ...
ನನ್ನೆದೆಯ
ಒಲವನ್ನೆಲ್ಲ
ಈಗಾಗಲೇ
ಅವಳಲ್ಲಿ
ಅಡುವಾಗಿ
ಇಟ್ಟು
ಬಂದಿರುವೆನಲ್ಲ..
ನಾನು
ಅಳಿಯಬೇಕೆಂದಿದ್ದರೆ
ಅವಳು ನನಗೆ
ಬೆನ್ನು
ತೋರಿಸಿದ
ದಿನವೆ
ಸಾಯುತ್ತಿದ್ದೆ
ಸಾಕಿ...
ಬದುಕುವುದಿಲ್ಲ
ಹೆಚ್ಚಿಗೆ...
ಮದಿರೆಯನ್ನು
ಕುಡಿದರೆ...
ಅಂತಾ
ಗೊತ್ತಿದ್ದರೂ
ಕುಡಿಯುತ್ತಿರುವೆ
ಬದುಕಲು...
ನನ್ನ ಮನವು
ಕಡಲಿನ
ತೀರದಂತಾಗಿದ್ದರೆ
ಎಷ್ಟೋ
ಸುಖವಿರುತ್ತಿತ್ತು
ಸಾಕಿ...
ಕ್ಷಣ.. ಕ್ಷಣಗಳಿಗೆ
ಇಟ್ಟ ಹೆಜ್ಜೆಯ
ಗುರುತುಗಳು
ಅಳಿಸಿ
ಹೋಗುತ್ತಿದ್ದವಲ್ಲ
ಅಲೆಗಳಿಗೆ...
ಮನದ
ಕಹಿಗಳು
ಮುಚ್ಚಿ ಹೋಗುತ್ತಿದ್ದವಲ್ಲ
ಸಂತಸದ ಅಲೆಗಳಿಗೆ
ಅವಳ
ಮದುವೆ
ದಿಬ್ಬಣ
ಜೋರಾಗಿಯೆ
ಸಾಗುತ್ತಿತ್ತು
ಸಾಕಿ...
ನಾ ಕೊಟ್ಟು
ಕಳುಹಿಸಿದ
ಮಲ್ಲಿಗೆ ದಂಡೆಯನ್ನು
ದಿಬ್ಬಣದ
ಹಾದಿಗೆ
ಹಾಕಿ..
ಮದುವೆಗೂ
ಮದಿರೆಗೂ
ಒಂದೆ
ವ್ಯತ್ಯಾಸ
ಸಾಕಿ...
ಮದುವೆಯಾದ
ಮೇಲೆ...
ಮತ್ತೆಲ್ಲ
ಇಳಿದು
ಹೋಗುತ್ತದೆ...
ಮದಿರೆ
ಕುಡಿದ ಮೇಲೆ
ಮತ್ತೆಲ್ಲ....
ತಲೆಗೇರುತ್ತದೆ..
ಊರ ಹೊರಗೆ
ಹೇಗಿಟ್ಟರೆಲ್ಲರೂ
ನಿನ್ನನು
ಸಾಕಿ...
ಬಾಯಾರಿ ಬಂದ
ತನುಮನ ಧಣಿಗಳ
ದಣಿವಾರಿಸುವವಳು
ನೀನು..
ಹಣವೊಂದಿದ್ದರೆ...
ಊರ
ಹಾಳು ಮಾಡುವ
ಗರತಿಯರೆಲ್ಲ
ಊರಲ್ಲೆ
ಇರುವರಲ್ಲ..
ಗಂಟನ್ನು
ಕಟ್ಟಿಕೊಂಡು...
ನನ್ನೊಲವಿನ
ಬತ್ತಿದೆದೆಗೆ
ಒಂದು ಹನಿ
ಪ್ರೀತಿಯನ್ನಾದರೂ
ಅವಳಂದು
ಸುರಿದಿದ್ದರೆ
ಸಾಕಿ..
ಬಟ್ಟಲು....ಬಟ್ಟಲುಗಳ
ಮದಿರೆಯನ್ನು
ನನ್ನೆದೆಯ
ದಾಹವನಿಂಗಿಸಿಕೊಳ್ಳಲು
ಕುಡಿಯುತ್ತಿರಲಿಲ್ಲ..
ಅವಳ
ಕುಡಿ ನೋಟಕೆ
ಜಾರಿ ಬಿದ್ದವನನ್ನು
ಅವಳಂದು
ಕೈ ಹಿಡಿದು
ಎತ್ತದೆ.. ಇದ್ದೀದ್ದರೆ
ಸಾಕಿ...
ನಿನ್ನ
ಮದಿರೆ
ಕೊಳದ
ಕೊಚ್ಚೆಯ
ಮೀನು
ನಾನಾಗುತಿರಲಿಲ್ಲ...
ಒಲವಿನ
ಉಡುಗೊರೆಯಾಗಿ
ನಾನವಳಿಗೆ
ಕಳುಹಿಸಿದ್ದೆ
ಸಾಕಿ
ಮುತ್ತೈದೆಯ
ಬಟ್ಟಲು
ಸಾಯುವವರೆಗೂ
ಕೈ ಬಿಡದಂತಹ
ಕೊಡುಗೆಯೊಂದನ್ನು
ಕೊಟ್ಟು
ಕಳುಹಿಸಿದ್ದಳು
ಅದು ನಿನ್ನ
ಮದಿರೆಯ
ಬಟ್ಟಲು...
ನೀನಾದರೂ...
ಮದಿರೆಯ
ಬಟ್ಟಲುಗಳಿಗೆ
ವಿನಂತಿಸಿಕೊ...
ಸಾಕಿ..
ಕನಸಲೂ
ಬಂದವಳು
ಕಾಡದಂತೆ
ನನ್ನ ಮತ್ತೇರಿಸಿ
ಮಲಗಿಸಿಬಿಡಲು...
ಮರಣದ
ನಂತರ
ಈ ಗೋಡೆಯ
ಮೇಲೆ ನನ್ನ
ಇತಿಹಾಸವನ್ನು
ಕೆತ್ತಿಸಿಬಿಡು
ಸಾಕಿ..
ಜನರಿಗೆ
ಗೊತ್ತಾಗಬೇಕಲ್ಲವೆ...
ನಾನು ಸತ್ತದ್ದು
ನಿನ್ನ ಮದಿರೆಯ
ಮತ್ತಿನಿಂದಲ್ಲ
ಅವಳೊಲವಿನ
ಮತ್ತಿನಿಂದ...
ಎಂದು
ನಾನು
ನಿನ್ನ ಸೇರಗಿನ
ಹಿಂದೆ ಅವಿತು
ಕುಳಿತಿರುವುದನ್ನು
ಯಾರಿಗೂ
ಹೇಳಬೇಡ
ಸಾಕಿ...
ಪಾಪ...
ಜನರಿಗೆ
ಪ್ರೀತಿಯ
ಮೇಲಿನ
ನಂಬಿಕೆಯೆ
ಹೋದಾತು...
ನೀನು
ಪೂಜಿಸುವ
ದೇವರು
ಕಣ್ಬಿಟ್ಟನೇನು ?
ಸಾಕಿ....
ನಾನೊಂದು
ವರವ
ಪಡೆದುಕೊಳ್ಳಬೇಕಾಗಿದೆ,
ಮದಿರೆಯ
ಮತ್ತಿಲ್ಲದೆ
ಕಾಡುವ
ರಾತ್ರಿಗಳನ್ನು
ಕೊಲ್ಲಲು...
ಒಣ ಬಣವಿಗೆ
ಹೊತ್ತಿದ
ಬೆಂಕಿಯನ್ನು
ಆರಿಸಬಹುದು
ಸಾಕಿ...
ಪನ್ನೀರನ್ನಾದರೂ
ಉಗ್ಗಿ...
ಕುಡಿಯುತಿರುವೆ
ಎದೆಯೊಳಗೆ
ಉರಿಯುತಿರುವ
ವಿರಹದ ತಾಪವನು
ತಂಪಗಾಗಿಸಿಕೊಳ್ಳಲು
ಬಟ್ಟಲೊಳಗಿನ
ಮದಿರೆಯನು
ಹಿಗ್ಗಿ..
ಮಾಡಿದ
ಪಾಪ ಕರ್ಮಗಳ
ಕಳೆದುಕೊಳ್ಳಲು
ನೂರೆಂಟು
ನದಿಗಳುಂಟು
ಸಾಕಿ...
ನನ್ನ ಮಣ್ಣಲಿ
ಕಳೆದುಹೋದ
ಪ್ರೀತಿಯ
ಪಡೆದುಕೊಳ್ಳಲು
ಮುಳುಗೇಳಲೂ
ಒಂದು ಚಿಕ್ಕ
ಕೊಳವು
ಇಲ್ಲವಿಲ್ಲಿ...
ಹೋಳಿ
ಹುಣ್ಣಿಮೆಯಲಷ್ಟೇ
ಇರುಳಿಡಿ...
ನಾನು
ಭಾರಿಸುತಿದ್ದೆ
ಹಲಿಗೆಯನ್ನು
ಸಾಕಿ....
ಅವಳು ಬಿಟ್ಟು
ಹೋದ
ದಿನದಿಂದ
ಹಗಲಿರಳು
ಮನವು ಬಾರಿಸುತಿಹುದು
ಅವಳ ಹೆಸರಲೆ
ಹಲಿಗಿ
ಕೇಳಿದ
ಜನರಿಗೆಲ್ಲ
ನಾನೆಂಥ
ಉತ್ತರಿಸಲಿ
ಸಾಕಿ...
ಮದಿರೆ
ಮಂದಾಕಿನಿಯ
ಮನೆಯ
ದಾರಿಯನ್ನು
ತೋರಿಸಿದ್ದು
ಅವಳೆ ಅಂಥ...
ಯಾರಿಗೂ
ಗೊತ್ತಿರದ
ಸತ್ಯವೊಂದನ್ನು
ನಿನಗಿಂದು
ಹೇಳುವೆ
ಸಾಕಿ...
ಅವಳ ಹಂಸ
ನಡಿಗೆಗೆ ಹೇಗೆ
ಸೋತಿದ್ದೇನೊ...
ಹಾಗೆ ನಿನ್ನ
ನವಿಲ ನಾಟ್ಯದ
ನಡುವಿಗೂ
ನಾನಿಂದು
ಶರಣಾಗಿರುವೆ
ಹೊಸ್ತಿಲಿಗೆ
ಮೊಳೆ ಜಡಿದು
ಅವಳನ್ನು ಮನ
ಮನೆಗಳಲ್ಲಿ
ತುಂಬಿಸಿಕೊಳ್ಳಬೇಕೆಂದಿದ್ದೆ
ಸಾಕಿ...
ಮನದಿಂದ
ಹೊರನೂಕಿ
ನಿನ್ನ ಮದಿರೆ
ಮನೆಯ ಹೊಸ್ತಿಲಿಗೆ
ನನ್ನನೆ ಮಳೆ
ಜಡಿದು
ನಡೆದು ಬಿಟ್ಟಳಲ್ಲಾಕಿ..
ಸೂರ್ಯನಿಗೂ
ನನಗೂ
ಆಗಿಬರದು
ಸಾಕಿ...
ನಿನ್ನ ಅಂಗಳದಿ
ಬಿದ್ದಿರುವ
ಚಂದಿರನಿಗೆ
ಯಾರು ಗೆಳೆಯರಿಲ್ಲವಂತೆ
ಅದಕ್ಕೆ..
ನಾನೀಗ ಬಂದಿರುವೆ
ನಾನೇನು
ನೀಲಕಂಠನಲ್ಲ
ಸಾಕಿ..
ವಿಷವನ್ನು ಗಂಟಲಲ್ಲೆ
ಕಟ್ಟಿಟ್ಟುಕೊಳ್ಳಲು
ಕುಡಿದುಬಿಟ್ಟಿರುವೆ..
ಅದರುರಿಯ
ತಣ್ಣಗಾಗಿಸಲು
ನಿನ್ನ ಮದಿರೆಯೆಂಬ
ಮದ್ದನು
ಕುಡಿಯುತಿರುವೆ
ಹಾಲನೇರೆದು
ತಂಪಗಾಗಿಸುವೇಕೆ ?
ಅವನ ನೆತ್ತಿಯನ್ನು
ಸಾಕಿ...
ಹಾಲು ಹಿಡಿದ
ಕೈಗಳಿಗೆ
ಹಾಲಾಹಲವನೆ...
ಕೊಟ್ಟು
ಕುಳಿತವನವನು
ಆ ಕಲ್ಲು
ದೇವರ ಮೇಲೆ
ಸುಮಗಳನೇಕೆ
ಸುರಿಯುವೆ...
ಸಾಕಿ
ಸಾಕುಮಾಡು...
ಹೂವುಗಳಿಗೆ
ನೋವಾಗುವುದಿಲ್ಲವೇನು ?
ಹೂವಿನ
ಹಿಂದೆ ಅಲೆದ
ನಾನು
ಈಗ
ಕಲ್ಲಾಗಿಲ್ಲವೇನು ?
ನನ್ನ ದೇಹದ
ಮೇಲೆ... ಕತ್ತಿಯಿಂದ
ಅವಳು ದೊಡ್ಡ
ಗಾಯವನ್ನೆ
ಮಾಡಿದ್ದರೂ... ಚಿಕ್ಕ
ಸೂಜಿಯಿಂದಲೆ
ಹೊಲೆದುಕೊಳ್ಳುತ್ತಿದ್ದೆ
ಸಾಕಿ...
ಎದೆಗೆ ಚಿಕ್ಕ
ವಿರಹದ
ರಂಧ್ರವನ್ನೆ ಹಾಕಿ
ಹೋಗಿರುವಳಲ್ಲ...
ಒಳಗಿಳಿಯುತ್ತಿರುವ
ಮದಿರೆಗಷ್ಟೆ ಗೊತ್ತು
ಕೀವಾಗ ಸೋರುತ್ತಿರುವುದರ
ನೋವು..
ಕಳೆ ಕೀಳುವ ಭರದಲ್ಲಿ ಚಿಗುರನ್ನೆ ಚಿವುಟಿ ಬಿಟ್ಟರು
ಮುಳ್ಳುಗಳ ಸುಡುವ ತರಾತುರಿಯಲ್ಲಿ ಹೂವುಗಳನ್ನೆ ಸುಟ್ಟರು
ಹಡೆದವಳ ಅಳಲಿಗೆ ಕಿವಿಯಾಗದೆ ಹೋದರು
ಆಡುವ ಮೈದಾನದಲ್ಲಿ ಗೋರಿಯ ತೋಡಿಟ್ಟರು
ಮನೆ ಮುಂದಿನ ಅಂಗಳಕೆ ನೆತ್ತರನ್ನೆ ಸಾರಿಸಿದರು
ಹಸುಗೂಸುಗಳ ಮಾಂಸದ ತುಂಡುಗಳನೆ ಚುಕ್ಕಿಯಾಗಿಸಿದರು
ಬಿಸಿ ನೆತ್ತರಲಿ ಬೆರೆತ ಒಡಲ ಕಣ್ಣೀರನು ಅರಿಯದಾದರು
ಮೇರೆಯ ಗುರ್ತಿಸುವ ಅಹಂನಲ್ಲಿ ಅಟ್ಟಹಾಸವ ಮೇರೆದರು
ಆಡದೆ...ಹಾಡದೆ..ಮಣ್ಣುಗೂಡಿದ ಕನಸುಗಳ ಪಾಡನ್ನು ಕೇಳುವರಾರು ?
ಬರಿದಾದ ತಾಯಿ ಮಡಲಿಗೆ ನಗು ಬಾಗಿನ ತುಂಬುವರಾರು ?
ರವಿಕೆಯಲಿ ತೊಟ್ಟಿಕ್ಕುವ ಅಮೃತದ ಹನಿಗಳಿಗೆ ಉತ್ತರಿಸುವರಾರು ?
ಅಂಬಾರಿ ಹೊರುವ ಹೆಗಲಿಗೆ ಹೆಗಲಾಗುವರಾರು ?
ತೊಟ್ಟಿಲೊಳಗಿನ ಹೇಸಿಗೆಗೆ ನೊಣವೊಂದು ಗುಂಯ್ಯಗುಡುತ್ತಲಿಹುದು ತೊಳೆಯುವರಾರು ?
ಬೀದಿಯಲಿ ಬಿದ್ದ ಹೆಣಗಳಿಗೆ ರಣಹದ್ದುಗಳು ಕೇಕೆ ಹಾಕುತಿಹವು ಓಡಿಸುವರಾರು ?
ಮತ್ತೆ ನೀ.. ಗರ್ಭಿಣಿಯಾಗೆಂದು ಗೃಹಿಣಿಗೆ ಹೇಳುವರಾರು ?
ಹಡೆದುಕೊಡು ಹಬ್ಬಿಸುವೆ ನಿನ್ನ ಬಳ್ಳಿಯನೆಂದು ಧೈರ್ಯವ ತುಂಬುವರಾರು ?
ಲವಣ ಗರ್ಭವ ಸೇರಿದರು, ಊರು ಬಿಟ್ಟವರು, ಹುಡುಕುವರಾರು ?
ತೆರೆ..ತೆರೆಗಳಲಿ ತೇಲಿ ಬಂದ ಹೆಣಗಳನು ಹೂಳುವರಾರು ?
ನೋವಿನ ಕಡಲಲೆ ಮುಳುಗಿರುವ ತಾಯ್ಬಳಗವನು ರಕ್ಷಿಸುವರಾರು ?
ಈ ಅಕ್ಷರ ಬಡವನೆದೆಯಲಿ ಉರಿಯುತಿರುವ ಭಾವಗಳನು ಸಂತೈಸುವರು ಯಾರು ?
ನಾನು
ಸೋತದ್ದು
ಕೆಂಪು ಕೆನ್ನೆಯ
ಮೇಲೆ
ಚಂಚಲದಿ
ಕುಣಿದಾಡುವವಳ
ಮುಂಗುರುಳಿಗೆ
ಸಾಕಿ...
ಸೋತ
ಫಲಕ್ಕೆ ನಾ
ಪಡೆದದ್ದು...
ಮಬ್ಬು ಗತ್ತಲಿನ
ಮದಿರೆಯ
ಮತ್ತಿನುರುಳು...
ಹೂವು
ದೇವರ ನೆತ್ತಿಯ
ಮೇಲಾದದ್ದರೇನು..?
ಬಾಡಿದ ಮೇಲೆ
ತಿಪ್ಪೆಗೆ
ಎಸೆಯುವರಲ್ಲ
ಸಾಕಿ...
ಇನ್ನೂ
ಘಮಿಸುತ್ತಲೆ
ಇದ್ದ ಪ್ರೀತಿಯನ್ನು
ವಿರಹದ
ಬುಟ್ಟಿಗೆ ಎಸೆದು
ನಡೆದಳಲ್ಲ
ಆಕಿ....
ನದಿ ತೀರದ
ಬಂಡೆಯ ಮೇಲೆ
ನನ್ನ ಪ್ರೀತಿಯ
ಕುರುಹುಗಾಗಿ
ಅವಳ ಹೆಸರನ್ನು
ಬರೆದಿದ್ದೆ
ಸಾಕಿ...
ಕೆಲವು
ದಿನಗಳ ನಂತರ
ಯಾರೊ ಅದರ
ಕೆಳಗೆ ಬರೆದಿದ್ದರು...
" ಎಚ್ಚರ ಇಲ್ಲಿ
ಸುಳಿಯಿದೆ."
ಈ ವರ್ಷವಾದರೂ
ನನಗೆ ಬೆಲ್ಲವ
ಕೊಡುವಳೆಂದುಕೊಂಡಿದ್ದೆ
ಸಾಕಿ...
ಬೆಲ್ಲವ ಪಡೆದ
ನಕ್ಕು... ಸುಮ್ಮನೆ
ನಡೆದುಬಿಟ್ಟಳು..
ನನಗೆ..
ಉಳಿದದ್ದೇನು ?
ಬಾಕಿ...
ನಾ... ಕೊಟ್ಟು
ಕಳುಹಿಸಿದ ಮಲ್ಲಿಗೆಯ
ದಂಡಿಯಲ್ಲಿ
ಅಷ್ಟೊಂದು
ಘಮವಿರಲಿಲ್ಲವೇನೊ...?
ಸಾಕಿ...
ಕೊಟ್ಟದ್ದನ್ನು...
ಒಮ್ಮೆಯೂ ಮೂಸಿ
ನೋಡದೆ...
ಕಸದ ಬುಟ್ಟಿಗೆ
ಎಸೆದು
ನಡೆದಿದ್ದಳಾಕಿ...
ನಾನು
ಸೋತದ್ದು....
ಅವಳ ಕೈ
ಬಳೆಯ ನಾದಕ್ಕೆ
ಸಾಕಿ
ವಿಧಿ ನೋಡು...
ನನ್ನ ಕರೆತಂದು
ಕುಳ್ಳರಿಸಿದ್ದು
ನಿನ್ನ ಕಾಲ್ಗೆಜ್ಜೆಯ
ಸದ್ದಿಗೆ..
ಮನದ
ಮನೆಯಲ್ಲಿ
ಒಲವ
ಜ್ಯೋತಿಯನ್ನು
ಬೆಳಗಿಸೆಂದಿದ್ದೆ
ಅವಳಿಗೆ
ಸಾಕಿ..
ಹಚ್ಚಿದ್ದಳು...
ತುಪ್ಪದ ದೀಪವನ್ನೆ
ಮಣ್ಣಲಿ ಮುಚ್ಚಿ..
ಕಲ್ಲುಗಳಿಂದ
ಕಟ್ಟಿದ ನನ್ನ
ಗೋರಿಯ ಮೇಲೆ..
ಅವಳ ಮನದಿಂದ
ಹೊರಬರದಂತೆ
ಶತಪ್ರಯತ್ನವ
ಪಟ್ಟೆ...ಸಾಕಿ
ಆಗಲೇ... ಇಲ್ಲ
ನಿಟ್ಟುಸಿರ ಬಿಟ್ಟಳು
ನನ್ನನ್ನು
ಹೊರನೂಕಿ
ನಿನ್ನ
ಮದಿರೆಯ
ಮನೆಯಿಂದ
ಹೊರಬರಲು
ಎಷ್ಟೋ...
ಪ್ರಯತ್ನಿಸುತ್ತಿರುವೆ
ಸಾಕಿ
ಕುಳ್ಳರಿಸಿ ಬಿಟ್ಟಿದೆ
ಮದಿರೆಯ ಮತ್ತು
ನನ್ನನ್ನು
ಕಟ್ಟಿಹಾಕಿ
ಹೆಣ್ಣು
ಬೆಂಕಿಯಂತೆ
ಎಂದೆನ್ನುತ್ತಿದ್ದರೆಲ್ಲರೂ..
ಸಾಕಿ
ಬಿಟ್ಟು ಹೋದ
ಘಳಿಗೆಯಿಂದ
ಅವಳ ಕಾವು
ನನಗೀಗ
ತಟ್ಟುತಿಹುದು
ಎಡವಿ ಬಿದ್ದ
ನೋವಿಗೆ ಮೆಲ್ಲಗೆ
ಮದ್ದನ್ನು
ಹಚ್ಚುತ್ತಿದ್ದಳು
ಆಕಿ...
ಒಡೆದು ಚೂರಾದ
ಹೃದಯಕೆ...
ಕಷಾಯವೆಂಬ
ಮದಿರೆಯನ್ನು
ಕುಡಿಸುತ್ತಿದ್ದದು
ನೀನೆ ಸಾಕಿ...
ಅವಳ ಅಧರಗಳಿಗೆ
ಹಚ್ಚುವ ಬಣ್ಣ...
ಈಗಾಗಲೇ
ಖಾಲಿಯಾಗಿದೆ
ಸಾಕಿ...
ಏನು ಮಾಡಲಿ ?
ಸೌಂದರ್ಯ ವರ್ಧಕ
ಅಂಗಡಿಯಲ್ಲಿ
ಇನ್ನೂ ಹಾಗೆ
ಇದೆಯಲ್ಲ...
ಹಳೆ ಬಾಕಿ
ಹೆಣ್ಣು ದೇವತೆಯನ್ನು
ಒಲಿಸಿಕೊಳ್ಳಲು...
ಮೂಕ ಪ್ರಾಣಿಗಳನ್ನು
ಬಲಿಕೊಡುವರಲ್ಲ
ಸಾಕಿ...
ಅವಳ ಪ್ರೀತಿಗೆ
ನನ್ನ ಬದುಕನ್ನೆ
ಬಲಿ ಕೊಟ್ಟಿರುವೇನಲ್ಲ !!!
ಉಳಿದದ್ದಾದರೂ
ಏನಿದೆ ನನ್ನಲಿ
ಬಾಕಿ...
ಅವಳು
ನಟಿಸುವ
ಚಾತುರ್ಯದ
ಕಲೆಗೆ
ಮಾರು ಹೋಗಲೆ ಬೇಕು
ಸಾಕಿ....
ರಾಮನಂತಿದ್ದವನನ್ನು
ದೇವದಾಸನನ್ನಾಗಿ
ಪರಿವರ್ತಿಸಿದ ಅವಳ
ಕಲೆಗೆ
ಶರಣೆನ್ನಲೇಬೇಕು...
ಹೂವಿನ ಜೊತೆ
ಸೇರಿ... ನಾರು
ಸ್ವರ್ಗ ಸೇರಿತಂತೆ
ಸಾಕಿ...
ಹೂವಿನ ಗೆಳೆತನವ
ಮಾಡಿ ನಾನು...
ಸ್ವರ್ಗದಂತಹ
ನಿನ್ನ ಮಧು ಮನೆಯ
ಸೇರಿರುವೆ..
ಅಯ್ಯೋ...
ಇಂದು ಹುಣ್ಣಿಮೆ
ಬೇಗ...ಬೇಗ
ತಡಮಾಡಬೇಡ
ಸಾಕಿ...
ಮನೆಯ ಕಿಡಕಿ
ಬಾಗಿಲುಗಳನ್ನೆಲ್ಲವನ್ನು....
ಮುಚ್ಚಿಬಿಡು
ಅವಳೊಡಗೂಡಿ
ಎಷ್ಟೊ ಬಾರಿ ನಾನವನನ್ನು
ಅನುಮಾನಿಸಿದ್ದೆ...
ಅವಳಿಲ್ಲದೆ... ನಾ
ನರಳುತೀರುವ
ಸ್ಥಿತಿಯನ್ನು ಅವನು
ಕಂಡರೆ....?
ಹಗಲೆಲ್ಲ...
ನಿನ್ನ ಮನೆಯ
ಹೊರಬಾಗಿಲನ್ನೆ....
ನೋಡುತ್ತಾ
ಕುಳಿತುಬಿಡುವೆ
ಸಾಕಿ...
ಅವಳು ಮರಳಿ
ಬಂದು
ಕರೆಯಬಹುದೆಂದಲ್ಲ !!!!
ತಾಳಲಾಗದ
ನೋವಿಗೆ...
ಮುಕ್ತಿಯ ಕೊಡಲು
ಸಾವಾದರೂ
ಬರಬಹುದೆಂದು !!!
ಇರುಳೆಲ್ಲ
ಕುಡಿದು..ಕುಡಿದು
ನಿನ್ನ ಡುಪ್ಪಟ್ಟಿಯ
ಅಂಚನು ಹಿಡಿದುಕೊಂಡೆ
ಮಲಗುವನೆಂದು
ಜಗವೆಲ್ಲ ಝರಿಯುವುದು
ಸಾಕಿ...
ನನ್ನೊಲವು...
ನನ್ನ ಕೈಯನ್ನು
ಹಿಡಿದಿದ್ದರೆ...
ಅವಳೊಂದಿಗೆ ನಾನು
ರಾತ್ರಿ ದೀಪವ
ಆರಿಸುತ್ತಿದ್ದಿಲ್ಲವೇನು ?
ಆಗೀನ ರಾತ್ರಿಗಳಿಗೂ....
ಈಗೀನ ರಾತ್ರಿಗಳಿಗೂ....
ಏನೂ ವ್ಯತ್ಯಾಸವೆ
ಇಲ್ಲದಂತಾಗಿದೆ
ಸಾಕಿ...
ನನ್ನೊಂದಿಗೆ
ಅವಳಿದ್ದಾಗ...
ಕನಸುಗಳ
ಮತ್ತಿನಲಿ ಮಲಗುತ್ತಿದ್ದೆ
ಅವಳಿಲ್ಲದಿರುವಾಗ
ನಿನ್ನ ಮದಿರೆಯ
ಮತ್ತಿನಲಿ
ಮಲಗುತಿರುವೆ...
ಕಾಡ ಕಗ್ಗಲ್ಲ
ಬಂಡೆಗೂ...
ಜೀವ
ತುಂಬುವಂತಳಾಗಿದ್ದಳು
ನನ್ನವಳು
ಸಾಕಿ...
ಜೀವ ತುಂಬಿದ
ನನ್ನನ್ನು
ಕಲ್ಲಾಗಿಸಿ
ಹೋದಳವಳು
ಯಾಕೊ...?
ಅವಳ
ಮುಡಿಗೆ ಮಲ್ಲಿಗೆ
ಮುಡಿಸುವ
ಸೌಭಾಗ್ಯವು
ದೊರಕಿದ್ದರೆ
ಸಾಕಿ...
ಮುಂಗೈಗೆ ದಂಡಿಯ
ಸುತ್ತಿಕೊಂಡು..
ಇಳಿ ಹೊತ್ತಿನಲಿ
ನವಿಲಂತೆ ನರ್ತಿಸಿ
ಸುಸ್ತಾಗಿ ಕುಳಿತ
ತೊಡೆಗಳ ಮೇಲೆ
ತಲೆಯನಿಟ್ಟು
ಕಣ್ಣೀರನಿಡುವ
ದೌರ್ಭಾಗ್ಯವು
ಬರುತ್ತಿರಲಿಲ್ಲ...
ಎಂದಾದರೊಂದು
ದಿನ ಸಾಯುವುದು
ನಿಶ್ಚಿತವೆಂಬುದು
ನನಗೆ...ಗೊತ್ತು
ಸಾಕಿ..
ಅವಳ
ಮಡಿಲಲಿ ಹಣೆಗೆ
ಮುತ್ತೊಂದನು
ಪಡೆಯದೆ..
ಸಾಯುತ್ತಿರುವೇನಲ್ಲ...
ಇದೊಂದೆ ಚುಚ್ಚುತಿಹುದು
ಎದೆಯನ್ನು
ತಾಕಿ..
ಕೋಣ ಸವಾರನಿಗೂ
ಲಂಚವನ್ನು
ಕೊಡುವ ಹಾಗಿದ್ದರೆ
ಸಾಕಿ...
ಮಧು ಬಟ್ಟಲಿನ
ಗಾಜಿನ ತುಟಿಗಳಿಗೆ
ಅನುದಿನವು...
ನಾ...
ದಾಸನಾಗುವ
ಪ್ರಮೇಯೆ
ಬರುತ್ತಿರಲಿಲ್ಲ
ನಿನ್ನ ಮದಿರೆ
ಮನೆಯಿಂದ,
ಯಾರಾದರೂ ಸ್ವರ್ಗಕ್ಕೊ...
ನರಕಕ್ಕೊ..ಹೋಗವವರಿದ್ದರೆ
ಅವರ ಜೇಬಲ್ಲಿ
ಸ್ವಲ್ಪ ಹಣವಿಟ್ಟಿರು
ಸಾಕಿ...
ನನಗಿನ್ನು ತಾಳದಾಗಿದೆ
ಅವಳಿಲ್ಲದ
ವಿರಹದುರಿಯನು
ಯಮನಾದರೂ
ಬಂದು ನನ್ನನ್ನು
ಕರೆದೊಯ್ಯಲಿ...
ಆ ಹಣವನ್ನು
ಲಂಚವಾಗಿಯಾದರೂ
ತೆಗೆದುಕೊಂಡು..
ಅವಳಿಗೆ,
ನೀ....ಹೇಳಿ
ಕಳುಹಿಸು
ಸಾಕಿ...
ನಾ ಸತ್ತು,
ನನ್ನನು
ಹುಗೀದ ಗೋರಿಯ
ಮೇಲೆ... ಒಂದೇ
ಒಂದು ಹೂವನ್ನೂ
ಇಟ್ಟು... ಕಣ್ಣೀರು
ಹಾಕಬಾರದೆಂದು
ಬರುವುದಾದರೆ...
ಈಗಲೆ ಬಾ...ಎನ್ನು
ಅವಳ್ಹೆಸರಲಿ...
ಬಿಕ್ಕುತಿರುವ ಬಾಯಿಗೆ
ಎರಡು ಹನಿ
ನೀರನ್ನಾದರೂ ಹಾಕಿ
ಹೋಗಲಿ...
ಅವಳಿಲ್ಲದೆ...
ಬದುಕುವುದಕ್ಕೆ
ಮನಸ್ಸಾಗುತ್ತಿಲ್ಲ
ಸಾಕಿ...
ಸಾಯಲು..?
ಭಯವಾಗುತ್ತಿದೆ...
ಗುಟುಕು.. ಗುಟುಕು
ಕುಡಿಯುತ್ತಿರುವೆ
ಮದಿರೆಯನು...
ಸಾಯಲಿಕ್ಕೊಂದಿಷ್ಟು
ಧೈರ್ಯ ಸಿಗಲೆಂದು
ಅವಳ
ಜಾಣ್ಮತೆಯ ಅರಿವು
ನಿನಗಿಲ್ಲ
ಸಾಕಿ...
ಒಲವಿನ ಹಣ್ಣನು
ಸವಿದು...
ನೋವಿನ ಬೀಜವನು
ಎದೆಯಲ್ಲೆ...
ಬಿತ್ತಿ ಹೋಗಿದ್ದಾಳಾಕಿ
ನನ್ನೆದೆಯ
ಸಿಂಹಾಸನವನ್ನು
ಅವಳು
ಆಕ್ರಮಿಸಿಕೊಂಡಿದ್ದಾಗ
ಮನವದೇಷ್ಟೊ....
ಹಗುರವಾಗಿತ್ತು
ಸಾಕಿ....
ಮತ್ತಾರದೊ...
ಅರಮನೆಯ ಆಸೆಗಾಗಿ
ನನ್ನಂತರಂಗದರಮನೆಯ
ತೊರೆದು ಹೋದಾಗ
ಸಹಿಸಲಾರದಷ್ಟು
ಭಾರವಾಗಿತ್ತು..
ಸಂಜೆ
ಮಬ್ಬು ಗತ್ತಲಲ್ಲಿ
ಅವಳ ಕೆಂಪು
ಕೆನ್ನೆಯ ಮೇಲೆ
ಅದೇಷ್ಟೊ ಮುತ್ತುಗಳ
ಮುದ್ರೆಯನ್ನೊತ್ತಿದ್ದೆ..
ಸಾಕಿ...
ಪ್ರೀತಿಯು ಹಳಸಿದಾಗ
ಕರವಸ್ತ್ರದಲಿ
ಮುಖವನೊಮ್ಮೆ ವರೆಸಿ
ನನ್ನ ಕೈಗಿಟ್ಟಿದ್ದಳು..
ಆಕಿ...
ನಿನ್ನ ಮುತ್ತುಗಳಿಗೆ
ಯಾವ ಬೆಲೆಯು ಇಲ್ಲ
ಬಜಾರಿನಲ್ಲಿ ಎಂದು
ತುಂತುರು
ಮಳೆಗೆ ಅವಳು
ಮೈಯೊಡ್ಡಿ ಹುಚ್ಚೆದ್ದು
ಕುಣಿಯುತ್ತಿದ್ದಳು
ಸಾಕಿ....
ಸೋಕಿದ ಹನಿ
ಹನಿಗಳೆಲ್ಲವು
ನಾಟ್ಯವಾಡುತ್ತಿದ್ದವು
ಅವಳ ಮೈ ಮಾಟದ
ಮೇಲೆ..
ತೊರೆದು ಹೋದವಳ
ಮರೆಯಲು.. ಅದೆ
ಮಳೆಗೆ ನಾನು...
ಮೈಯೊಡ್ಡಿ ನಿಂತೆ
ಕಣ್ಣಿಂದ ಜಾರಿದ
ಹನಿಯ ಉಪ್ಪು
ಮಳೆಗೆ ತಬ್ಬಿತೇನೊ...?
ಮಳೆಯೆ...
ನಿಂತು ಬಿಟ್ಟಿತು...!!!!!
ಮಧುವನ್ನು ಹೀರಿ
ಹಾರಿ ಹೋಗುತ್ತಿದ್ದ
ಭ್ರಮರವನ್ನು ಕಂಡು
ಹಲಬುತ್ತಿತ್ತು...
ಸುಮವು
ಸಾಕಿ....
ಇಲ್ಲಿ...
ಸುಮವೆ ಭ್ರಮರಕ್ಕೆ
ಜೇನಿನಾಸೆ ತೋರಿಸಿ,
ನೂಕಿರುವಳು ಮದಿರೆ
ಬಟ್ಟಲಿನ...
ಸುಳಿಯಲ್ಲಿ
ಈ ಮಂದ
ಬೆಳಕಿನಲೂ
ನನ್ನ ನೋಡಿ
ನಗುತಿಹುದು
ಮದಿರೆಯ
ಬಟ್ಟಲು
ಸಾಕಿ....
ಅವಳಿಲ್ಲವೆಂದೆ
ನನ್ನ ಬಳಿಗೆ
ಬಂದೆ...
ಮರೆಯಲು
ನಾನಿಲ್ಲದೆ
ಹೋಗಿದ್ದರೆ,
ಎಂದು...
ನನಗೇಕೊ...
ಮದಿರೆ ಬಟ್ಟಲುಗಳ
ಮೇಲೆ
ಅನುಮಾನ
ಮೂಡುತಿಹುದು
ಸಾಕಿ...
ಬಟ್ಟಲೊಳಗಿನ
ಮಧುವು
ಕೂಡಾ...
ಅವಳ
ತುಟಿಯಂಚಿಂದಲೆ
ಜಾರಿರಬಹುದೆಂದು !!!
ಸುಳ್ಳುಗಳ
ಸರಮಾಲೆಯಲ್ಲೆ
ನನ್ನನ್ನು
ಬಂಧಿಸಿದ್ದಳವಳು
ಸಾಕಿ...
ನೆಮ್ಮದಿಯಾಗಿದ್ದೆ
ಸುಳ್ಳುಗಳನ್ನೆ
ನಂಬಿ
ಸದ್ದಿಲ್ಲದೆ...
ಸತ್ಯವೊಂದನ್ನು
ಹೇಳಿ...
ಪ್ರೀತಿಯ
ಗಲ್ಲಿಯಲ್ಲಿ...
ಗಲ್ಲಿಗೇರಿಸಿ
ಬಿಟ್ಟಳಾಕಿ...
ಅವಳ
ಮಾತಲ್ಲಿ
ಎಷ್ಟೊಂದು
ಮತ್ತಿತ್ತು...
ಸಾಕಿ
ಅರಿವಾದದ್ದು
ನಂಜೆರಿದಾಗಲೆ
ಅವಳ
ತುಟಿಯಲ್ಲಿ
ಅದೇಷ್ಟು
ವಿಷವು
ತುಂಬಿತ್ತು..
ನಿನಗೆ
ಹೇಗೆ ಹೇಳಲಿ
ಸಾಕಿ...
ಒತ್ತೊತ್ತಿ ಬರುವ
ಅವಳ ನೆನಪಿಗಳ
ಒರೆತ...
ಇರುಳುಗಳಿಗೆ
ಬೆಂಕಿ ಇಟ್ಟರೂ...
ಬೂದಿಯಾಗುತಿಲ್ಲ
ಕಹಿ ಕನಸುಗಳ
ಭೂತ
ಕುಡಿದುಬಿಟ್ಟ ಮದಿರೆ
ಬಟ್ಟಲುಗಳ
ಲೆಕ್ಕವಿಡಬಹದು
ಸಾಕಿ...
ಚುಚ್ಚುವ.. ಅವಳ
ಮೋಹಕ ನಗುವಿನ
ಕ್ಷಣಗಳನು...ಮುಚ್ಚಿಡಲಾದರೂ
ಎಲ್ಲಿ ? ಮನದ ಬಾಗಿಲ
ಕದವನ್ನು
ಹಾಕಿ..!!!!!!
ಬಂಡೆಗಲ್ಲಿನಿಂದ
ತಲೆಯನ್ನು
ಜಜ್ಜಿದ್ದರೂ...
ತಣ್ಣಗೆ ಕಣ್ಮುಚ್ಚುತ್ತಿದ್ದೆ
ಸಾಕಿ
ಹೊರಲಾರದ
ವಿರಹದ ಕಲ್ಲೊಂದನ್ನು
ಎದೆಯ ಮೇಲಿರಿಸಿ
ನಡೆದಿರುವಳಲ್ಲ....
ಉಸಿರಾಡಲಿ ಹೇಗೆ
ಅವಳ ಹೆಸರನು
ಉಸುರದೆ...
ಅವಳ
ಮನದ ಕದವನು
ಅದೇಷ್ಟೊ
ದಿನಗಳವರೆಗೂ
ತಟ್ಟಿದೆ...
ಕದವು ಹೋಗಲಿ
ಕಿಟಕಿಯನ್ನಾದರೂ
ತೆರೆಯಲಿಲ್ಲ
ಸಾಕಿ...
ಮದಿರೆ ಮತ್ತೇರಿ
ಮಲಗಿದ್ದೆ... ಬೀದಿಯ
ಕೊನೆಯಲ್ಲಿ.. ನೋಡಿ
ಥೂ... ಎಂದಳು
ಬದುಕಲಿಕ್ಕೆ
ಇನ್ನೇನುಳಿದಿದೆ...
ಬಾಕಿ...
ದೇವರು
ಅವನೆಂತಹ
ನಿಷ್ಕರುಣಿ ಎಂಬುದನ್ನು
ನೀನೇನು ಬಲ್ಲೆ
ಸಾಕಿ...
ಅವಳ
ಪ್ರೀತಿಯನ್ನು
ಜಯಿಸುವ
ಜಾಣ್ಮೆಯೊಂದನ್ನು
ನನಗೆ ನೀಡಲಿಲ್ಲ
ಕಹಿ ನೆನಪುಗಳ
ಮರೆಯುವ
ದಡ್ಡತನವನ್ನು
ಮೊದಲೆ...
ದಯಪಾಲಿಸಲಿಲ್ಲ
ಸುಡು ಬಿಸಿಲ
ಬೇವಿನ ನೆರಳಲ್ಲಿ
ಕಬ್ಬಿನ....
ಹಾಲನ್ನೆ
ಕುಡಿಸಿದ್ದೆನವಳಿಗೆ
ತಂಪಗಾಗಲು
ಸಾಕಿ...
ಕೆಂಡದ ಹಾಸಿನಲಿ
ನಿಲ್ಲಿಸಿ...
ಅಗಲಿಕೆಯ
ಬೇವಿನ ರಸವನ್ನು
ಕೈಗೆ ಕೊಟ್ಟು
ಹೋದವಳು
ಆಕಿ..
ಅವಳೊಂದಿಗೆ
ಬಾನಲ್ಲಿ
ಸ್ವಚ್ಛಂದವಾಗಿ
ಹಾರಾಡಬೇಕೆಂದಿದ್ದೆ
ಸಾಕಿ...
ಹಾರಿಸಿಬಿಟ್ಟಳು...
ನನ್ನನು ವಿರಹದ
ಬಿರುಗಾಳಿಯಲಿ
ಪ್ರೇಮ ಪಟದ
ಸೂತ್ರವನು
ಚಿವುಟಿ..
ಒಲಿಸಿಕೊಂಡಿದ್ದೆ ....
ಅವಳನ್ನು
ಸಾಕಿ...
ಈ ಅಕ್ಷರ ಬಡವನ
ಎದೆಯಲಿ ಅಳಿದುಳಿದ
ಪದಗಳ ಅವಳ
ಪಾದುಗೆಗೆ
ಹಾಕಿ..
ಪದಗಳದಷ್ಟಲ್ಲದೆ...
ಎದೆಯ
ಜೇಬಿನಲ್ಲೂ...
ಬಡತನವ ಕಂಡು
ನಡು ದಾರಿಯಲ್ಲೆ
ಕೈ ಬಿಟ್ಟಿದ್ದಳಾಕಿ...
ನೀನಿರುವುದರ
ಅರಿವು
ನನಗಿರಲಿಲ್ಲ
ಸಾಕಿ...
ಗಲ್ಲಿ..ಗಲ್ಲಿಯ
ತಿರುವುಗಳಲಿ
ನಡೆದು....
ನಿನ್ನನು
ಹುಡುಕುವ
ಹಾಗೆ ಮಾಡಿದ್ದೆ
ಆಕಿ...
ಕಡಲಿನ
ನೀರು ಉಪ್ಪಾದರೂ...
ಉರಿವ ಬೆಂಕಿಯನ್ನೂ
ನಂದಿಸುತ್ತದೆ...
ಸಾಕಿ
ಬಟ್ಟಲೊಳಗಿನ
ಮಧುವು
ಕಹಿಯೆ... ಆದರೂ
ಅವಳ ನೆನಪಿನ
ಬೆಂಕಿಯನ್ನು
ಆರಿಸುತ್ತದೆ...
ಚೂರಾದರು
ಕರುಳನ್ನು
ತಾಕಿ...
ಎದೆಯ ಬಣವಿಗೆ
ಹಚ್ಚಿದ ವಿರಹದ
ಬೆಂಕಿ ಆರುತಲೆ
ಇಲ್ಲ... ಸಾಕಿ
ಕುಡಿದ
ಮಡಿಕೆಗಳೆಲ್ಲವು
ಬರಿದಾದವು....
ಅವಳು ಹೊತ್ತಿಸಿದ
ಉರಿ ಒಂದಿನಿತೂ...
ಕಡಿಮೆಯಾಗುತಿಲ್ಲ
ಆಯುಧವಿಲ್ಲದೆ
ಬೇಟೆಯಾಡುವ
ಕಲೆ...
ಅವಳೊಬ್ಬಳಿಗೆ
ಮಾತ್ರ ಗೊತ್ತು
ಸಾಕಿ...
ಅದಕ್ಕೆ...ನೋಡು
ಮದಿರೆ ಮನೆಯ
ಬಾಗಿಲನು
ತಟ್ಟುತಿರುವೆ
ವಾಸಿಯಾಗದ
ಗಾಯವ ಮಾಡಿಕೊಂಡು
ಇತಿಹಾಸದಲ್ಲಿ
ಅವಳು ಶಿಲ್ಪ
ರೂಪಿಸಿದ
ಕುರುಹುಗಳೇ....
ಇಲ್ಲ
ಸಾಕಿ....
ರೂಪಿಸುವುದಕ್ಕಿಂತಲೂ...
ಜಗದಲ್ಲಿ
ಅವಳು
ಭಗ್ನಗೊಳಿಸಿದ್ದೆ
ಹೆಚ್ಚು
ನಿನಗೆ ಗೊತ್ತಿಲ್ಲ
ಸಾಕಿ...
ಅವಳಿಗಾಗಿ
ಎಷ್ಟೋ
ರಾತ್ರಿಗಳಲ್ಲಿ ತಾರೆಗಳ
ಎಣಿಸುವ ಹುಚ್ಚು
ಸಾಹಸಕ್ಕೆ
ಬಿದ್ದದ್ದು...
ಅರಿವಾಗಲೇ...ಇಲ್ಲ
ಬಿಟ್ಟು ಹೋದ
ಮೇಲೆ ಉಳಿದ
ದಿನಗಳ ಎಣಿಸಲವಳು
ಉಡುಗೊರೆಯಾಗಿ
ನನಗೆ ನೀಡಿದ್ದು...
ಹೇಗೆ ಬರೆಯಲಿ
ಸಾಕಿ...
ಅವಳು ಮಾಡಿದ
ಮೋಸದ ಪ್ರೀತಿಯನು
ಬಿಳಿ ಹಾಳೆಗಳೂ...
ಒಪ್ಪುತ್ತಿಲ್ಲ
ಹೇಗೆ ಮರೆಯಲಿ
ಸಾಕಿ...
ಬಟ್ಟಲೊಳಗಿನ
ಮದಿರೆಯು
ಅವಳ
ನೆನಪುಗಳನ್ನೆ..
ಮರೆಸುತ್ತಿಲ್ಲ..
ಅವಳ
ಕುಹಕ ನಗುವಿನ
ಸದ್ದು
ನನ್ನೆದೆಯನೆ
ಇರಿಯುತಿದೆ
ಸಾಕಿ...
ನಿನ್ನ ಕಾಲ್ಗೆಜ್ಜೆಯ
ಸದ್ದಿನಲಿ
ನೋವ ಮರೆಸುವ
ಮದ್ದಿದೆ...
ಅದಕೆ ಬಂದಿರುವೇನು...
ಮದಿರೆಯ ಮನೆ
ಬಾಗಿಲವ
ನೂಕಿ..
ಎಷ್ಟೊ...
ಬಿಳಿ ಕಾಗದೆದೆಗಳ
ಮೇಲೆ ಮನದ
ನೋವನ್ನೆಲ್ಲಾ....
ಬರೆದು ಹಾಕಿದೆ
ಸಾಕಿ..
ಒಂದರೆಘಳಿಗೆಯಾದರೂ
ನೋವು
ಕಡಿಮೆಯಾಗಲಿಲ್ಲ...
ಕುಡಿದ ನಿನ್ನ
ಬಟ್ಟಲಿನ...
ಮದಿರೆಯ
ಒಂದು
ಗುಟುಕು...
ದಿನಪೂರ್ತಿ...
ಅವಳನ್ನು
ನೆನಪಿಸಲೇ.....
ಇಲ್ಲ
ಅವಳ
ಕೆಂದುಟಿಯಲಂದು
ನನ್ನ ಹೆಸರನು
ಕೂಗಿರದೆ
ಇದ್ದಿದ್ದರೆ...
ಸಾಕಿ
ಇಂದು
ನಿನ್ನ
ಮಧು
ಮನೆಗೆ ನಾ...
ಗಿರಾಕಿಯಾಗಿರುತ್ತಿದ್ದಿಲ್ಲ...
ಇಳಿ ಸಂಜೆಯ ಹೊತ್ತಿನಲ್ಲಿ
ಹಾರುವ ಜೋಡಿ ಹಕ್ಕಿಗಳ ಕಂಡು
ಮನವು ತಾಳಿತಾದರೂ...ಹೇಗೆ ?
ನೀನಿಲ್ಲದ ವಿರಹವೆ ಜೊತೆಯಿರುವಾಗ !!!
ಅನುದಿನವು ಬೀಸುತ್ತಿದ್ದ ಮುಸ್ಸಂಜೆಯ
ತಂಗಾಳಿಗೂ ಮುನಿಸಾಗಿದೆ ಇಂದು
ರಮೀಸುವುದಾದರೂ ಹೇಗೆ? ತುಂಟಾಟದ ನಿನ್ನ ಮುಂಗುರುಳುಗಳು ಜೊತೆಗಿಲ್ಲದಿರುವಾಗ
ಕಹಳೆ ಊದಿ ಯುದ್ಧ ಸಿದ್ಧತೆಗೆ
ತೊಡಗಿಕೊಂಡಿವೆ ಮನಸ್ಸಿನ ಭಾವನೆಗಳು
ಸಂತೈಸಲಾದರೂ ಹೇಗೆ ? ಆ ಮಡಿಲಿಗೆ
ನಾ ಮಗುವಾಗಲು ನಿ ಜೊತೆಯಿಲ್ಲದಿರುವಾಗ
ಉರಿವ ರವಿಯು ತಣ್ಣಗಾದರೂ...
ಈ ಸಂಜೆಯೇತಕೊ...ತಂಪಗಾಗುತಿಲ್ಲ
ತಣ್ಣಗಾಗಿಸಲೆ ಹೇಗೆ? ಹುಣ್ಣಿಮೆ ಬೆಳದಿಂಗಳ
ನಗುವ ಚೆಲ್ಲಲು ನಿ ಜೊತೆಯಿಲ್ಲದಿರುವಾಗ
ನೀ...ಜೊತೆಯಿಲ್ಲದಿರೆ..
ಕರಗದು ಕಡು ಕಪ್ಪಗತ್ತಲು
ಬೆಳಕು ಮೂಡುವುದಾದರೂ ಹೇಗೆ ?
ಆಶಾಕಿರಣವಾಗಿ ನಿ ನನ್ನ ಜೊತೆಗಿರದೆ
ಉರಿವ ಬಿಸಿಲಿಗೆ
ಸುರಿದು ಹೋದ
ಮಳೆ ಹನಿಗಳ
ನೆನಪಿಲ್ಲ...
ಕೊರೆವ ಚಳಿಗೆ
ಬೇಸಿಗೆಯ ಬೆಚ್ಚನೆಯ
ಆಲಿಂಗನದ ಅರಿವಿಲ್ಲ
ಋತು...ಋತುಗಳೆ
ಕರಗಿದವು ಗೆಳತಿ...
ಕಾಲನ ಗರ್ಭದಲಿ..
ನಿನ್ನ ನೆನಪುಗಳು
ಮಾತ್ರ ನನ್ನನು
ಮರೆಯದೆ ಬಿಡುತಿಲ್ಲ
ಹಾಂಗ ಸರಸಬ್ಯಾಡ ನಿನ್ನ ಮುಂಗುರುಳ
ಮೊದ್ಲ ಅದೀನ ನಾ.. ಹೆಂಗರುಳ
ನಿನ್ನ ನಗುವಿನ ಜೋಳಗ್ಯಾಗ ಬಿದ್ದ
ನಾ ಹೆಂಗ ಕಳಿಲೆ... ಹಗಲಿರುಳ
ಕಬ್ಬಿನ ತೋಟಕ್ಕ ನುಗ್ಗಿದ ಸಲಗನ
ಹಂಗಾಗೈತಿ ನನ್ನ ಮನಸ್ಸು.. ಮಾತ ಕೇಳವಲ್ದು
ಬೆಲ್ಲದ ಪೆಂಟಿಗೆ ಮುಗಿಬಿದ್ದ ಇರುವಿ
ಹಂಗ ಆಗೈತಿ ಕನಸು... ರಾತ್ರಿ ನಿದ್ದಿನ ಹತ್ತವಲ್ದು
ಆ ನಿನ್ನ ನಗೂನ್ಯಾಗ ಇಷ್ಟ ಮತ್ತ
ಐತೆಂದು ನಂಗ ಗೊತ್ತ....ಇರಲಿಲ್ಲ
ಜೇನ ತುಂಬಿದ ತುಟಿ ರಸಾನ...ನಾ
ಕುಡಿಲಾರ್ದ ಬಿಡ್ತೀರಲಿಲ್ಲ...
ಸಾಕ ಬಿಡ...ಜೋಡ ಜಡಿಯಾಗ
ಕೆಂಪಾನ ರಿಬ್ಬನ್ ಕಟ್ಗೊಂಡ ಹುಡ್ಗಿ
ಬರೀ...ಹಚ್ಗೊಂಡ ಕಪ್ಪ ಕಾಡ್ಗಿ ಕಣ್ಣಿಲೆ
ನೋಡಿ...ನೋಡಿ..ಕೊಲ್ಲಬ್ಯಾಡ ನನ್ನ ಗುಂಡ್ಗಿ
ಮುಪ್ಪಿನ
ಭಾರ
ಉರುಗೋಲಿಗಷ್ಟೆ
ಗೊತ್ತು
ಸಾಕಿ....
ಬದುಕಿರುವೆ....
ನನ್ನೆದೆಯ
ನೋವಿನ
ಭಾರವನೆಲ್ಲ
ನಿನ್ನ ಮಧು
ಬಟ್ಟಲಿಗೆ
ಹಾಕಿ
ನೀ... ನೋಡುವ ನೋಟ
ಕಾಮದ್ದೊ...? ಪ್ರೇಮದ್ದೊ...?
ನನಗೇನು ಗೊತ್ತೊ ?....ಮಲ್ಲ
ಆದರೂ... ಆ ಅಮಲುಗಣ್ಣಿಗೆ
ನಾ... ಸೋತಿರುವೆನಲ್ಲ..!!!
ನೀನೇನು...ನೀರೆಯರ ಸೀರೆಗಳನು
ಕದೆಯುವವನಲ್ಲ
ನನಗೂ... ಅರಿವಾಗದಂತೆ ಸದ್ದಿಲ್ಲದೆ
ನನ್ನ ಮನವ ಕದ್ದೆಯಲ್ಲ
ಅಮವಾಸೆಯ ಕತ್ತಲಲೂ...ಕಣ್ಣಲಿ
ಒಲವ ಚಂದ್ರನ ಬಿಂಬವ ತುಂಬಿದೆಯಲ್ಲ
ನನಗೆ ಗೊತ್ತು... ನೀನೆಂತಹ ಮಳ್ಳ
ಹಗಲಿರುಳುಗಳ ಸುಖವನೆ ಕದ್ದ ಕಳ್ಳ
ಬರೀಯ ಮಾತುಗಳಲೆ ನನ್ನನದೇಷ್ಟು
ಬೇಯಿಸುವೆಯಲ್ಲ...
ಆ ಕಣ್ಣ ಕಾಂತಿಯಿಂದಾದರೂ...
ತಣಿಸಬಾರೆಯಾ....ನಲ್ಲ
ಬಡಿದು...ಬಡಿದುಕೊಂಡು
ಕೆಂಪಗಾಗಿದೆ ಗಲ್ಲ
ಆ ತುಟಿಯಂಚಿಂದ ತಂಪಾಗಾಗಿಸು
ಬಾರೊ.. ನೀಡಿ ಒಂದು ಬೆಲ್ಲ
ನನಗೊಬ್ಬಳಿಗೆ ಗೊತ್ತು ನೀನು
ಎಲ್ಲರಂತವ...ನಲ್ಲ..
ವಾರದ ೮೫ ನೇ ಉಪನ್ಯಾಸಕರಾಗಿ ಆಗಮಿಸಿದ್ದಂತಹ
ಶ್ರೀಮತಿ ಎಸ್. ಎಮ್.ಕುಲಕರ್ಣಿ, ಪ್ರಧಾನಗುರುಮಾತೆ, ಜ.ತೋಂಟದಾರ್ಯ ಪ್ರಾಥಮಿಕ ಶಾಲೆ. ಸಂಗೀತ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತು ಮಾತನಾಡುತ್ತಾ , ಮನೆಯೆ ಮೊದಲ ಪಾಠ ಶಾಲೆ ಎಂಬಂತೆ ಮನೆಯಲ್ಲಿ ತಾಯಿಯಿಂದಲೆ ಸಂಗೀತಾಭ್ಯಾಸವನ್ನು ಪ್ರಾರಂಭಿಸಬೇಕು ಎಂದು ಹೇಳುತ್ತಾ, ಹಿಂದಿನ ಕಾಲದ ಮಹಿಳೆಯರು ವಳ್ಳಿನಲ್ಲಿ ಬ್ಯಾಳಿಯನ್ನು ಹಾಕಿ ಒರಗಿತ್ತಿಯರೊಂದಿಗೆ ಜನಪದ ಹಾಡನ್ನು ಹಾಡುತ್ತಾ.. ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರಲ್ಲದೆ, ಭತ್ತಗಳನ್ನು ಕುಟ್ಟುವುದು, ಹೊಲಗಳಲ್ಲಿ ಕಳೆ ತೆಗೆಯುವಾಗ ನೆತ್ತಿಯ ಮೇಲಿನ ಸುಡು ಸೂರ್ಯನ ಶಾಖವನ್ನು ಮರೆಯಲು ಹಾಡುತ್ತಿದ್ದರು, ಸಂಸಾರದ ಜಂಜಾಟಗಳಿಂದ ಹೊರಬರಲು ಭಕ್ತಿಗೀತೆ ಭಾವಗೀತೆಗಳನ್ನು ಹಾಡಿಕೊಳ್ಳುತ್ತಾ ಗೃಹಿಣಿಯರು ಮನೆಯೊಳಗಿನ ಎಲ್ಲ ಸಂಕಷ್ಟಗಳನ್ನು ಮರೆಯಬಹುದಾಗಿದೆ ಎನ್ನುತ್ತಾ ಈಗಾಗಲೆ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಲತಾ ಮಂಗೇಶ್ಕರ, ಎಂ.ಡಿ.ಪಲ್ಲವಿ, ಮಂಜುಳಾ ಗುರುರಾಜ, ನಮ್ಮ ಧಾರವಾಡದವರೆ ಆದ ಶಾಸ್ತ್ರೀಯ ಸಂಗೀತಗಾರರಾದಂತಹ ಗಂಗೂಬಾಯಿ ಹಾನಗಲ್, ಸಂಗೀತಾ ಕಟ್ಟಿ ಹೀಗೆ ಅನೇಕರನ್ನು ನೆನೆಯುತ್ತಾ ದಾಸರಪದ, ವಚನ, ಭಾವಗಿತೆಯನ್ನು ಹಾಡುವುದರ ಮೂಲಕ ತಮ್ಮ ಉಪನ್ಯಾಸವನ್ನು ಮುಕ್ತಾಯಗೊಳಿಸಿದರು. ಗೀತಾ ಯಾಳಗಿಯವರು ಕವನ ವಾಚನವನ್ನು ಮಾಡಿದರು. ಅಧ್ಯಕ್ಷರ ನುಡಿಯಲ್ಲಿ ಕಸಾಪ ಮಹಿಳಾ ಘಟಕದ ಅಧ್ಯಕ್ಷರಾದಂತಹ ಶರಣಮ್ಮ ಅಂಗಡಿಯವರು ಮಾತನಾಡುತ್ತಾ ಇಪ್ಪತ್ತೊಂದನೇ ಶತಮಾನದಲ್ಲೂ ಮಹಿಳೆಯರ ಶೋಷಣೆಯು ನಿಂತಿಲ್ಲ ಅಲ್ಲದೆ ಇಂದಿನ ಮಹಿಳೆಯರು ಎಲ್ಲ ರಂಗದಲ್ಲಿ ಮುನ್ನುಗ್ಗುತ್ತಿರುವುದು ಖುಷಿಯ ಮತ್ತು ಸಮಾಧಾನಕರ ವಿಷಯವೆನ್ನುತ್ತಾ ತಮ್ಮ ಭಾಷಣವನ್ನು ಮೊಟಕುಗೊಳಿಸಿದರು. ಶ್ರೀ ಜಗದ್ಗುರು ತೋಂಟದಾರ್ಯ ಶಾಲೆಯ ಮಕ್ಕಳಿಂದ ಮನಸೊರೆಗೊಳ್ಳುವಂತಹ ನೃತ್ಯವನ್ನು ಮಾಡದರು. ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷರಾದಂತಹ ಐ.ಎ.ರೇವಡಿ, ಕೆ.ಎಸ್. ಗಾರವಾಡ ಹೀರೆಮಠ, ಬಿ.ಟಿ. ಹೊಸಮನಿ ಬಿ.ವ್ಹಿ.ಮುನವಳ್ಳಿ , ಐ.ಎ.ರೇವಡಿ, ಹೆಚ್ಚ.ಎ.ಚಿಂತಗುಂಟಿ, ಇಂದಿರಾ ಪಾಟೀಲ್ , ಎ.ಎಸ್.ನರಗುಂದ, ಸಂಗಮ್ಮ ಸಿನ್ನೂರ, ವಿಜಯಲಕ್ಷ್ಮಿ ಕಮ್ಮಾರ, ವಿಜಯಲಕ್ಷ್ಮೀ ಕೋಟಿ, ದಾನಮ್ಮ ಪಟ್ಟೇದ, ಆರ್.ಎಸ್.ಇಟಗಿ ಎಮ್.ಎಸ್. ಮಕಾನದಾರ, ಹುಚ್ಚಪ್ಪ ಹಾವೇರಿ, ಶರಣಪ್ಪ ಬೇವಿನಕಟ್ಟಿ ಮುಂತಾದ ಕನ್ನಡದ ಮನಸ್ಸುಗಳು ಉಪಸ್ಥಿತರಿದ್ದರು.