ವಾರದ ೮೪ ನೇ ಸಾಹಿತ್ಯ ಚಿಂತನಾಗೋಷ್ಠಿಯಲ್ಲಿ ವಿಜ್ಞಾನದಲ್ಲಿ ಮಹಿಳೆಯರ ಪಾತ್ರ ಈ ವಿಷಯದ ಕುರಿತು ಶ್ರೀಮತಿ ಎಸ್.ಡಿ.ಕೋಲಕಾರ ಶಿ. ಇವರು ಈಗಾಗಲೇ ವಿಜ್ಞಾನದ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿರುವಂತಹ ಮಂಗಲಾ ನಾರ್ಲಿಕರ್ - ಇವರು ತಮ್ಮನ್ನು ಒಬ್ಬ ಅರೆಕಾಲಿಕ ವಿಜ್ಞಾನಿ ಎಂದು ಕರೆದುಕೊಳ್ಳುತ್ತಾರೆ. ಇವರು ತಮ್ಮ ಪಿ.ಎಚ್ಡಿಯನ್ನು ಮದುವೆಯಾಗಿ ೧೬ ವರ್ಷಗಳ ನಂತರದಲ್ಲಿ ಪೂರ್ಣಗೊಳಿಸುತ್ತಾರೆ. ಅವರು ಪುಣೆ ಮತ್ತೆ ಮುಂಬೈನ ವಿಶ್ವವಿದ್ಯಾಲಯಗಳಲ್ಲಿ ಪ್ರೊಫೆಸರ್ ಅಗಿ ಕಾರ್ಯವನ್ನು ನಿರ್ವಹಿಸಿದ್ದಾರಲ್ಲದೆ ಇಂದಿಗೂ ತಮ್ಮ ಮನೆಯಂಗಳದಲ್ಲಿ ಬಡ ಮಕ್ಕಳಿಗೆ ಗಣಿತವನ್ನು ಹೇಳಿಕೊಡುತ್ತಿದ್ದಾರೆ. ಇವರಷ್ಟೆ ಅಲ್ಲದೆ, ಜಾನಕಿ ಅಮ್ಮಾಲ- ಸಸ್ಯಶಾಸ್ತ್ರಜ್ಞೆ, ಆನಂದಿಭಾಯಿ ಜೋಷೆ- ವೈದ್ಯಕೀಯ, ಆಶೀಮಾ ಚಟರ್ಜಿ, ರಾಜೇಶ್ವರಿ ಚಟರ್ಜಿ, ಅಣ್ಣಾ ಮನಿ ಹೀಗೆ ಇನ್ನೂ ಅನೇಕ ಮಹನೀಯರ ಜೀವನಗಾಥೆ, ಅವರ ಬದುಕಿನ ಏಳುಬೀಳು, ಅವರ ಮಹತ್ಸಾಧನೆಗೆ ಪ್ರೇರೇಪಿಸಿದಂತಹ ಅಂಶಗಳ ಕುರಿತು ಹಾಗೂ ೫೧೪ ವಿಜ್ಞಾನದ ನೊಬೆಲ್ ಪಾರಿತೋಷಕದಲ್ಲಿ ೧೦ ಜನ ಮಹಿಳೆಯರು ಪಡೆದಿದ್ದನ್ನು ಅತ್ಯಂತ ಗರ್ವದಿಂದ ಹೇಳಿಕೊಂಡರಲ್ಲದೆ,ಮುಂದಿನ ಯುವ ಪೀಳಿಗೆ ವಿಜ್ಞಾನದ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಶಕ್ಕೆ ಕೀರ್ತಿಯನ್ನು ತಂದುಕೊಡಬೇಕೆಂದು ಆಶೀಸಿದರು.
ಅತಿಥಿಗಳಾಗಿ ಆಗಮಿಸಿದ್ದಂತಹ ಡಾ.ಆಯ್.ಜೆ.ಮ್ಯಾಗೇರಿ ಇವರು ಕಸಾಪ ದ ಕಾರ್ಯವೈಖರಿಯನ್ನು ಶ್ಲಾಘೀಸುತ್ತಾ ತಾವು ಲಂಡನ್ ಗೆ ಹೋದ ಸಮಯದಲ್ಲಿ ಷೇಕ್ಸ್ಪಿಯರ್ ಮನೆಗೆ ಭೇಟಿಕೊಟ್ಟ ಸಂದರ್ಭವನ್ನು ನೆನಪಿಸಿಕೊಂಡು,ಮಹಿಳೆ ಹುಟ್ಟಿನಿಂದಲೇ ವಿಜ್ಞಾನಿ ಆಗಿದ್ದು ಮನೆಯನ್ನು ನಡೆಯುವ ಹಾಗು ಯುದ್ಧ ವಿಮಾನ ಚಲಾಯಿಸುವ ಧೀಮಂತಳಾಗಿದ್ದಾಳೆ ಎಂದರಲ್ಲದೆ,.ಮುಂದಿನ ದಿನಮಾನಗಳಲ್ಲಿ ಗಜೇಂದ್ರಗಡದ ಸಾಹಿತ್ಯದ ಕಂಪು ನಾಡಿನಾದ್ಯಂತ ಪಸರಿಸಲೆಂದು ಹೇಳಿದರು.
ಅಧ್ಯಕ್ಷೀಯ ಭಾಷಣದಲ್ಲಿ ಆಯ್.ಎ.ರೇವಡಿಯವರು ಸಾಧನೆಗೈದ ಮಹಿಳಾ ಸಾಧಕಿಯರ ಮಾತನಾಡುತ್ತಾ, ಈಗೀನ ಯುವಪೀಳಿಗೆಯು ಪ್ರತಿಭಾ ಪಲಾಯನಗೈಯ್ಯುವುದನ್ನು ಖಂಡಿಸುತ್ತಾ, ಇಲ್ಲೆ ಇದ್ದು ದೇಶಕ್ಕೆ ಸೇವೆಯನ್ನು ಮಾಡುವುದರ ಮೂಲಕ ದೇಶದ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹಾರಿಸಬೇಕೆಂದು ನುಡಿದರು.
ಸರಕಾರಿ ಮಾದರಿಯ ಶಾಲೆಯ ಮಕ್ಕಳು ಸಂಗೊಳ್ಳಿ ರಾಯಣ್ಣನ ನಾಟಕವನ್ನು ಮಾಡಿ ತೋರಿಸುವುದರ ಮೂಲಕ ಜನಮನವನ್ನು ಗೆದ್ದರಲ್ಲದೆ, ಯಾವ ಆಂಗ್ಲ ಮಾಧ್ಯಮದ ಶಾಲೆಗಳಿಗಿಂತಲೂ ನಾವು ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬಿ.ವಿ.ಮುನವಳ್ಳಿ,, ಇಂದಿರಾ ಪಾಟೀಲ, ಎ.ಕೆ.ವಂಟಿ, ರಮೇಶ ಮೆಣಸಗಿ, ಆಯ್ .ಜೆ. ಮ್ಯಾಗೇರಿ
ಎನ್.ಎ. ಅಮಟೆ, ಎಸ್.ಎಮ್.ನೂಲ್ವಿ, ಗ್ಯಾನೇಶ ಗೊಂದಳೆ , ಹೆಚ್.ವಿ. ಕಂಬಳಿ, ಶರಣಮ್ಮ ಅಂಗಡಿ, ಭಾರತಿ ಮಿಟಗಲ್ಲ, ಶಾಸ್ತ್ರೀಜಿ ಜ್ಯೋಶಿ, ಡಿ.ಆರ್.ಮ್ಯಾಗೇರಿ
No comments:
Post a Comment