ರಾಮ... ರಾಮ... ರಾಮನೆಂದು
ಕರೆದವಳು ನೀನೇಕೆ ಸೀತೆಯಾಗಲಿಲ್ಲ
ಕೃಷ್ಣ..... ಮುರಾರಿ.... ಮುಕುಂದ ಎಂದು
ಕೂಗುತ್ತಿದ್ದವಳು.. ರಾಧೆಯ ಪ್ರೀತಿಯ
ರಸದಗಂಗೆಯನೇಕೆ ಹರಿಸಲಿಲ್ಲ..
ಪ್ರೇಮ ಬನದಲಿ ನಿನ್ನೊಲವ ಜೇನ
ಹನಿಯ ಸಿಂಚನವಗೈದವಳು..
ಬಾಳ ಪಯಣದಲಿ ರಾಣಿ ಇಲ್ಲದ
ಜೇನು ಗೂಡನು ಬಿಟ್ಟು ನಡೆದೆಯೇಕೆ
ನೀನಾಡುವ ಮಾತುಗಳೆಲ್ಲವು ಸುಳ್ಳಾದರೂ..
ಆ ಮಾತೊಳಡಗಿದ ಒಲವು
ಸುಳ್ಳೆಂದುಕೊಂಡಿರಲಿಲ್ಲ...
ಪ್ರೀತಿಯ ಮಡಿಲಿಗೆ ನಗುವ ಮಲ್ಲಿಗೆ
ಸುರಿಯುವೆನೆಂದವಳು..
ನೋವುಗಳ ಹೂಗಳ ಸರಮಾಲೆಯ
ಪೋಣಿಸಿ... ಒಪ್ಪವಾಗಿ ಎನ್ನೆದೆಯ
ಬುಟ್ಟಿಯಲ್ಲಿ ಇಟ್ಟು ಹೋದೆಯಲ್ಲ...
ಸಾಕುಬಿಡು ಇನ್ನೂ... ತೋರದಿರು
ಆ ಹುಸಿ ನಗುವನು...
ಕೆನ್ನೆಯ ಚೂಟಿ ತೊಟ್ಟಿಲು ತೂಗುವರಲ್ಲ...
ಹೃದಯವ ತೋಡಿ ನೀ... ನಗುತಿರುವೆಯಲ್ಲ..
No comments:
Post a Comment