Friday, June 2, 2017

ನಗುತಿರುವೆಯಲ್ಲ

ರಾಮ... ರಾಮ... ರಾಮನೆಂದು
ಕರೆದವಳು ನೀನೇಕೆ ಸೀತೆಯಾಗಲಿಲ್ಲ
ಕೃಷ್ಣ..... ಮುರಾರಿ.... ಮುಕುಂದ ಎಂದು
ಕೂಗುತ್ತಿದ್ದವಳು.. ರಾಧೆಯ ಪ್ರೀತಿಯ
ರಸದಗಂಗೆಯನೇಕೆ ಹರಿಸಲಿಲ್ಲ..

ಪ್ರೇಮ ಬನದಲಿ ನಿನ್ನೊಲವ ಜೇನ
ಹನಿಯ ಸಿಂಚನವಗೈದವಳು..
ಬಾಳ ಪಯಣದಲಿ ರಾಣಿ ಇಲ್ಲದ
ಜೇನು ಗೂಡನು ಬಿಟ್ಟು ನಡೆದೆಯೇಕೆ

ನೀನಾಡುವ ಮಾತುಗಳೆಲ್ಲವು ಸುಳ್ಳಾದರೂ..
ಆ ಮಾತೊಳಡಗಿದ ಒಲವು
ಸುಳ್ಳೆಂದುಕೊಂಡಿರಲಿಲ್ಲ...
ಪ್ರೀತಿಯ ಮಡಿಲಿಗೆ ನಗುವ ಮಲ್ಲಿಗೆ
ಸುರಿಯುವೆನೆಂದವಳು..
ನೋವುಗಳ ಹೂಗಳ ಸರಮಾಲೆಯ
ಪೋಣಿಸಿ... ಒಪ್ಪವಾಗಿ ಎನ್ನೆದೆಯ
ಬುಟ್ಟಿಯಲ್ಲಿ ಇಟ್ಟು ಹೋದೆಯಲ್ಲ...

ಸಾಕುಬಿಡು ಇನ್ನೂ... ತೋರದಿರು
ಆ ಹುಸಿ ನಗುವನು...
ಕೆನ್ನೆಯ ಚೂಟಿ ತೊಟ್ಟಿಲು ತೂಗುವರಲ್ಲ...
ಹೃದಯವ ತೋಡಿ ನೀ... ನಗುತಿರುವೆಯಲ್ಲ..

No comments:

Post a Comment