Thursday, June 8, 2017

ಮರ್ಯಾದ ಹತ್ಯೆ

ಮರ್ಯಾದೆ ಹತ್ಯೆ

ಪಾಲಕರೆ...
ನಿಮ್ಮ ಬದುಕ ಬನದಲಿ ಮುದ್ದಾದ ಹೂವ ಅರಳಿಸಿ
ಆ ಹೂವ ನಳನಳಿಸಲು ಬಾಳೆಲ್ಲ ಹೋರಾಡುವಿರಲ್ಲ
ನಿಮ್ಮಾಸೆಗಳ ಸಾಯಿಸಿ
ನೀವು ಮಾಸು ಬಟ್ಟೆಯ ತೊಟ್ಟರು ಸಂತೋಷಿಸುತ್ತಿದ್ದರಲ್ಲ
ಅವಳಿಗೆ ರಂಗು ರಂಗಿನ ಅಂಗಿಯ ತೊಡಿಸಿ
ಅವಳಿಗಿಷ್ಟವಾದ ನೀರ್ಜಿವ ಗೊಂಬೆಗೆ ಎಷ್ಟೇ
ಹಣವಾದರೂ ಸರಿ ಕೊಟ್ಟು ತಂದು... ಅವಳ
ಮಡಿಲಲಿ ಹಾಕುತ್ತಿದ್ದೀರಲ್ಲ

ಸೂಜೆ ಮೊನೆಯಷ್ಟು ಅವಳ ಮನಸ್ಸಿಗೆ ನೋವಾಗದಂತೆ
ಅಗಳಷ್ಟಾದರು ಅವಳುಣ್ಣುವ ಅಡುಗೆ ಖಾರವಾಗದಂತೆ
ಆ ಕಲ್ಲು ಗೋಡೆಗಳ ತುಂಬ.. ಅವಳು ಜೊಲ್ಲು ಸುರಿಸುತ
ಬೊರಲಾಗಿ ಮಲಗಿದ ಪಟದಿಂದ ಹಿಡಿದು ಮೊನ್ನೆ ಮೊನ್ನೆ
ವರೆಗೂ.. ಪಿಯುಸಿ ಯಲ್ಲಿ ಉತ್ತಮ ಅಂಕ ಪಡೆದಾಗ..
ಅವಳ ಬಾಯಿಗೆ ಸಿಹಿಯನಿಡುವ ಪಟಗಳನ್ನೆಲ್ಲವ ಆ
ಗೋಡೆಯ ಇಂಚು ಜಾಗವ ಬಿಡದೆ ತುಂಬಿಸಿಬಿಟ್ಟಿದ್ದರಲ್ಲ
ನನ್ನ ಮಗಳೆಂದು ತಪ್ಪು ಹೆಜ್ಜೆಯನೀಡದವಳೆಂದು ಬೀಗುತ್ತಿದ್ದವರು ಇಂದೇಕೆ......‌ ಆ ಒಂದು ತಪ್ಪಿಗಾಗಿ
ನಡು ಬೀದಿಯಲ್ಲಿ ನಿಲ್ಲಿಸಿ ಮೈ ತುಂಬ ಸೀಮೆಯೆಣ್ಣೆಯ
ಸುರಿದು ಹೊತ್ತಿಸಿಬಿಟ್ಟಿರಲ್ಲ ಬೆಂಕಿಯ... ನೀವೆ ಸಾಕಿದ
ಗೀಣಿಗೆ...

ಎಷ್ಟು ಕಠೋರವ ಮಾಡಿಕೊಂಡಿದ್ದೀರಿ ನಿಮ್ಮ ಎದೆಯನ್ನು
ಬಹುಶಃ ಆ ಕಲ್ಲು ಬಂಡೆಯೇನಾದರೂ ಕರಗುತ್ತಿತ್ತೇನೊ
ಆ ಉರಿಯ ತಾಪಕೆ ಹೆಣ್ಣು ಜೀವ ಒದ್ದಾಡುವುದ ಕಂಡು
ಏಕೆ ? ಎಷ್ಟೊ ತಪ್ಪುಗಳ ಕಡೆಗಣಿಸಿದ ನೀವು ಈ ಒಂದು
ತಪ್ಪನ್ನು ಕ್ಷಮಿಸಿದ್ದರೆ... ಅವಳಿಗೆ ತಿದ್ದುಕೊಳ್ಳಲೊಂದು
ಅವಕಾಶವ ಮಾಡಿಕೊಟ್ಟಿದ್ದರೆ... ಬದುಕುತ್ತಿದ್ದೇಳೆನೊ
ಇನ್ನೂ ನಾಲ್ಕು ದಿನ ಹೆಚ್ಚಿಗೆ..  ಮಾಡಿಬಿಟ್ಟಿರಲ್ಲ ಮರ್ಯಾದ
ಹತ್ಯೆಯ... ಆ ಹೂವೊಂದು ಬೇರೆ ಜಾತಿಯ ಹೂವೊಂದಿಗೆ
ಬೇರೆತಿತೆಂದು.. ಅದು ಈ ಹಾಳು ಸಮಾಜಕ್ಕೆ ಹೆದರಿ..

ಮಾನವನ ಏಳ್ಗೆಗೆ ಹೋರಾಡದೆ... ಸಮಾಜದ ಸ್ವಾಸ್ಥ್ಯವ
ಬಯಸದೆ... ಮೇಲು ಕೀಳೆಂಬ ಭಾವನೆಯ ತೊಡೆದು
ಹಾಕದೆ... ಬರೀ ಜಯಂತಿಗಳಿಗಾಗಿ ಬಾಗಿಲ ಬಳಿ ಪಟ್ಟಿಯ
ಎತ್ತಲು ಬರುವ.. ನೀ ಹಾಳಾಗಿ ಊರು ಬಿಡುವುದು
ಬಂದರೂ ಬೆಂಬಲಕ್ಕೆ ನಿಲ್ಲದ.. ನಿನ್ನ ಮಡದಿ ಮಕ್ಕಳಿಗೆ
ರಕ್ಷಣೆಯ ನೀಡದ ಈ ಜಡ್ಡು ಸಮಾಜಕ್ಕೆ ಹೆದರಿ...
ಮಾಡಿದ ಮರ್ಯಾದ ಹತ್ಯೆಗೆ ಕೊಟ್ಟರೇನೊ ಪ್ರಶಸ್ತಿ..
ಯಾವಾಗಲೂ... ಓಡಿ ಹೋದವಳ ಪಾಲಕರು ಎಂಬ
ಚುಚ್ಚು ನುಡಿಗಳ ಬಿಟ್ಟು...

ಮಾಡದಿರಿ ಹತ್ಯೆ.. ಒಂದು ಕಟ್ಟಿಗೆಯ ಸುಡಲು ನಾಳೆಯ
ಅಡುಗೆಯ ಬಗ್ಗೆ ಯೋಚಿಸುವ ನಾವು.. ಕರುಳು ಬಳ್ಳಿಯ
ಹೀಗೆ ಸುಟ್ಟು ಹಾಕದಿರಿ... ಹಿರಿಯರು ನೀವು ಮಾಡಿದ
ತಪ್ಪುಗಳ ತಿದ್ದಿ... ಬದುಕಿಗೆ ಸರಿ ದಾರಿಯ ತೋರುವವರು
ಇಲ್ಲವೆ ನಿಮಗೂ ಮೃಗಗಳಿಗೂ ಏನು ವ್ಯತ್ಯಾಸ..?

ಇದು ೧
೨ ಮಗಳೆ ಬರಿಯುತ್ತಲಿದ್ದೇನೆ..

No comments:

Post a Comment