Friday, June 30, 2017

ಶೇಖರಜ್ಯೋತಿ ಮಗಳಿಗೆ

ಆ ರವಿವರ್ಮನ ಕುಂಚವು
ನಿನ್ನಂದದ ಕೆನ್ನೆಗಳ ಸ್ಪರ್ಶಿಸಿದ್ದರೆ...
ಇನ್ನೂ... ಅದೇಷ್ಟೊ ವರ್ಣಮಯ
ತೈಲವರ್ಣಗಳ ಚಿತ್ರಿಸುತ್ತಿತ್ತೊ...

ಕಾಳಿದಾಸನು ನಿನ್ನ ಸ್ನಿಗ್ದ ಸೌಂದರ್ಯವ
ಕಂಡಿದ್ದರೆ ನಿನ್ನ ಸೊಬಗಿಗಿನ್ನೆರಡು ಕಾವ್ಯ
ಗಳ ರಚಿಸಿ.. ಶಾಕುಂತಲೆಯ ಮೊಗದಲ್ಲೂ
ನಾಚಿಗೆಯ ತರಿಸುತ್ತದಿದ್ದನೇನೊ...ಅಂದಕೆ
ಚೆಂದದ ಪದಗಳ ಸಾಲುಗಳ ಕಟ್ಟಿ..

ಕಣ್ಣುಗಳ ಕಾಂತಿಗೆ ಇಂದ್ರನ ಸುರಲೋಕವೆ
ಮಂಕಾಗಿರುವುದೇನೊ... ರಂಭೆ..ಊರ್ವಶಿ
ತಿಲೋತ್ತಮೆ..ಮೇನಕೆಯರ ನಾಟ್ಯವು
ಸೊರಗಿರಬಹುದೇನೊ...ಆ ಜೋಡಿ ತಾರೆಗಳ
ಹೊಳಪಿಗೆ ಚಂದ್ರನು ನಾಚಿ.. ಮೋಡದ
ಮರೆಯಲ್ಲಿ  ಅವಿತುಕೊಂಡಾನೇನೊ...

ಕೆಂದುಟಿಯ.. ಕೆಂಗುಲಾಬಿಯ ರಂಗಿಗೆ
ಪಾರ್ವತಿಯ ಹೂ ಬನವೆ ಬಡವಾಗಿವುದೇನೊ
ನಿನ್ನ ರೂಪವ ಸಾಕಾರಗೊಳಿಸಲೆಂದೆ ಏನೊ..
ಜಕಣಾಚಾರಿಯು ನಾಡಿನಾದ್ಯಂತ ಶಿಲೆಯ
ಕಲೆಯ ಬಲೆಯ ಹೆಣೆದನೇನೊ...

ನೀಳ ಕೇಶರಾಶಿಗೆ.. ಸ್ವಚ್ಛಂದ ಬಾನಲಿ
ಹಕ್ಕಿಗಳು ಹಾರುವುದ ಮರೆತು
ಮಲಗಿರಬಹುದೇನೊ.. ಹೀಗೆ ಆಗಿರಬೇಕು
ಅಲ್ಲವೆ ಚೆಲುವೆ..ಸೃಷ್ಟಿಯಲ್ಲಿ  ನಿನ್ನ ಅಂದಕೆ
ಬೇಲೂರ ಶಿಲಾಬಾಲಿಕೆಯರೇನು..
ಗಂಧರ್ವ ಕನ್ಯೆಯರು ಸಾಟಿಯೆ.. ನಮ್ಮ
ಕರುನಾಡ ಚಂದನದ ಚೆಲುವೆಗೆ...

ತಾಕದಿರಲಿ ಮಗಳೆ ನೀನಗಾರ ಕೆಟ್ಟ ಕಣ್ಣ ದೃಷ್ಟಿ

No comments:

Post a Comment