ಬೆನ್ಹತ್ತಿ ಹೋದವನಿಗೆ
ಮುಖವನ್ನು
ತೋರಿಸದೆ...
ಹಸೆಮಣೆಯನ್ನು
ಏರಿದವಳವಳು
ಸಾಕಿ...
ನೊಂದ ಕಣ್ಣ
ಹನಿಗಳಿಗೆ
ಬೆಲೆಯಿಲ್ಲ
ಜಗದಲ್ಲಿ...
ಶರಣಾಗಿಬಿಟ್ಟಿರುವೆ
ನದಕೆ...ನಿನ್ನ
ಮಡಿಲಿನಲ್ಲಿ
Wednesday, October 31, 2018
ಶಾಯರಿ ೩೪೧
ಚು ೩೭೨
ಮುದ ನೀಡುವ ಮಲ್ಲಿಗೆಯ
ಘಮಲಂತೆ ನಿನ್ನ ನುಡಿಗಳು
ರೆಕ್ಕೆಯಿಲ್ಲದೆ ಹಾರಿದಂತಾಗಿದೆ
ನಾನೀಗ...
ಏನೊಂದು ಕೇಳದೆ, ನಿನ್ನೆದೆಯ
ಗೂಡಲ್ಲಿ ಸೇರಿಸಿಕೊಳ್ಳಬೇಕು
ನನ್ನನೀಗ...
Tuesday, October 30, 2018
ಶಾಯರಿ ೩೪೯
ನನ್ನ ಪ್ರೇಮಕಥೆಯ
ಕಟ್ಟನ್ನು....ಏಕೆ
ಬಿಚ್ಚುತ್ತಿರುವೆ
ಸಾಕಿ...
ಪುಟಗಳನ್ನೆಲ್ಲವ
ತಿರುವಿ ಹಾಕಿದರು
ಒಂದೆ...ಒಂದು
ಒಲವಿನ ಪುಟವು
ನಿನಗೆ ಸಿಗದು
ಶಾಯರಿ ೩೪೮
ಅವಳು ಒಮ್ಮೆ....
ಕಣ್ಣು ಮಿಟುಕಿಸಿದ್ದಕ್ಕಾಗಿಯೆ
ಅಲ್ಲವೆ.. ಸಾಕಿ
ನಾನಿಂದು... ನಿನ್ನರಮನೆಯ
ಅಂಗಳದಲ್ಲಿ, ಮಧು
ಬಟ್ಟಲ ಹಿಡಿದುಕೊಂಡು...
ಇರುಳ ತಾರೆಗಳನ್ನು
ಎಣಿಸುತ್ತಿರುವುದು
ಶಾಯರಿ ೩೪೩
ನನ್ನ ಸುತ್ತಲೆಲ್ಲ...
ಅದೇಷ್ಟೊಂದು ತುಂಬಿದ
ಮದ್ಯದ ಹೂಜಿಗಳನ್ನೆ
ತುಂಬಿಟ್ಟಿರುವೆ
ಸಾಕಿ....
ಎಷ್ಟು ಕುಡಿದರು
ಮನಸಿಗೆ...
ಸಂತೃಪ್ತಿಯೆ
ಸಿಗುತ್ತಿಲ್ಲ...
ಯಾಕೆ ಗೊತ್ತಾ....?
ಕುಡಿಸಿ...
ಹಣವನ್ನು
ಕೇಳುತ್ತಿಯಲ್ಲ...!!!
ಇರುಳ ಹೆರಳು ವಿಮರ್ಶೆ
ಇರುಳ ಹೆರಳು....
ಕವಿ: ನೀ. ಶ್ರೀಶೈಲ
ನಮ್ಮ ಅಡ್ನಾಡಿತನಕೆ
ಮುನ್ನುಡಿ- ಬೆನ್ನುಡಿ
ಬರೆಸಿ, ಜೊತೆಗೆ ನಮ್ಮ
ನಲ್ನುಡಿಯನು ಸೇರಿಸಿ
ಸಹೃದಯನೆದೆಯ ಶಾಂತ
ನಿಷ್ಕಲ್ಮಶಾಂತರ್ಯವ
ಕೆಡಿಸಿ, ರಾಡಿಯೆಬ್ಬಿಸುವ
ಕಿಡಿಗೇಡಿತನವೇಕೆ?
ಸ್ವಾಭಿಮಾನವಿರದ ಯಾವೊಬ್ಬ ಕವಿಯು ಈ ತರನಾದ
ಸಾಲುಗಳನ್ನು ಬರೆಯಲು ಸಾಧ್ಯವಿಲ್ಲ. ಈ ಸಾಲುಗಳು ಮುಖಪುಟದ ಅಣ್ಣನವರಾದಂತಹ ನೀ. ಶ್ರೀಶೈಲ ಅವರ ಇರುಳ ಹೆರಳು ಕವನ ಸಂಕಲನದಲ್ಲಿಯವು. ಇವರು ಚುಟುಕು ಪ್ರಿಯರು. ಇರುಳ.... ಇದು ಇವರ ಮೊದಲ ನಿಳ್ಗವಿತೆಯ ಕವನ ಸಂಕಲನ. ಮೊದಲ ಸಂಕಲನದಲ್ಲಿಯೆ ಸಾಕಷ್ಟು ಯಶಸ್ವಿಯು ಆಗಿದ್ದಾರೆ. ಸಾಹಿತ್ಯ ಲೋಕದಲ್ಲಿ ಅಂಬೆಗಾಲಿಡುತ್ತಿರುವ ನಮ್ಮಂತವರು ಮೊದಲ ಕವನ ಸಂಕಲನವನ್ನು ಹೊರ ತರಬೇಕಾದರೆ ಇದನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು ಅಂತೆಂದರೆ ತಪ್ಪಾಗಲಾರದು. ಇವರು ರಸಿಕರು, ಸಮಯಪ್ರಜ್ಞೆ, ಹಾಸ್ಯ ಪ್ರಜ್ಞೆ ಇವರಿಂದ ಕಲಿಯುವುದು ಬಹಳಷ್ಟಿದೆ, ಇವರ ಹಾಸ್ಯ ಪ್ರಜ್ಞೆಯಿಂದ ಮುಖಪುಟದ ಕೆಲವರಿಗೆ ಮುಜುಗರವುಂಟಾದದ್ದುಂಟು.
ಇಟ್ಟುಬಿಡು ಒಮ್ಮೆ
ಹೂ..ಮುತ್ತನೊಂದನು ನನ್ನ
ಶವದ ಕೆನ್ನೆ...ತುಟಿಗೆ !
ಹಣೆಗಿಟ್ಟು ಹೋಗಿಬಿಡು
ನಿನ್ನ ಪಾದದಡಿಯ
ಮಣ್ಣ ತಿಲಕ !
ಈ ಸಾಲುಗಳನ್ನೊದಿದರೆ ಮಿರ್ಜಾ ಗಾಲಿಬ್, ಉಮರ್ ಖಯ್ಯಾಮ್ ಅವರ ಘಜಲ್ ಮತ್ತು ಶಾಯರಿಗಳು ನೆನಪಾಗದೆ ಇರದಿರಲಾರವು. ಅಂತಿಮಾಲಾಪದ ಕವನದಲ್ಲಿ ಬರುವ ಸಾಲುಗಳು ಭಗ್ನ ಪ್ರೇಮಿಗಳ ಎದೆಯನ್ನು ತಣಿಸುವುದರಲ್ಲಿ ಸಂಶಯವೆ..ಇಲ್ಲ.
ಎಚ್ಚರವಿದ್ದರೂ ಒಮ್ಮೆ
ತಪ್ಪುವುದು ಜೋಲಿ
ಬಿರುಗಾಳಿ ಮಳೆಗೆಲ್ಲಿ
ಕಟ್ಟುವಿರಿ ಬೇಲಿ?
ಹೋಗುವಿರೊಂದು
ದಿನ... ನೀವೆ ತೇಲಿ !
ಈ ಸಾಲುಗಳನ್ನು ಎಷ್ಟೆಂದು, ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ನಮ್ಮ ಒಣ ಅಹಂಮಿಕೆಗೆ, ಗಡಿ ರೇಖೆಗಳಲ್ಲಿ ನಮ್ಮನ್ನೆ ನಾವು ಕಟ್ಟಿಹಾಕಿಕೊಳ್ಳುವಿಕೆ, ಕುವೆಂಪು ಅವರ ಓ ನನ್ನ ಚೇತನ ಆಗು ನೀ ಅನಿಕೇತನ ಎಂಬ ಕವನದ ಸಾಲುಗಳನ್ನು ನೆನಪಿಸಿ, ಮನದ ಕೋಣೆಯಲಿ ಹೊದ್ದು ಮಲಗಿದ ಅಂಧಕಾರವನ್ನು ಹೊಡೆದೊಡಿಸದೆ ಇರಲಾರದು. ಅರ್ಥೈಸಿಕೊಳ್ಳದೆ ಇದ್ದಾಗ, ಎಡವುವ ನೋವನ್ನು ಸಹಿಸಿಕೊಳ್ಳಲು ಗಟ್ಟಿಯಾಗಿಯಾದರು ಇರಬೇಕು. ಆ ನೋವನ್ನು ಇನ್ನೊಬ್ಬರ ಹೆಗಲಿಗೆ ಹೊರಸದ ಹಾಗೆ
ಒಟ್ಟಾರೆಯಾಗಿ ನೋಡುವುದಾದರೆ ಈ ಒಂದು ಕವನ ಸಂಕಲನ ನವರಸವನ್ನೆ ಹೊತ್ತು ನಿಂತಿದೆ, ಕಾಲು ಜಾರಿದವಳ ಪಾಡು, ದಂತ ಭಗ್ನ, ಸಾಮಾಜಿಕ ಕಳಕಳಿಯುಳ್ಳ ಕವನಗಳು, ಎಲ್ಲದಕ್ಕಿಂತಲೂ ಮಿಗಿಲಾಗಿ ನೀವುಗಳು ಒಮ್ಮೆ ಕವನವನ್ನು ಓದಿದರೆ ನೇರ ನಿಮ್ಮ ಮನಸ್ಸಿಗೆ ನಾಟಿಬಿಡುತ್ತವೆ. ಪದೆ ಪದೆ ಓದಿಸಿಕೊಳ್ಳುವುದೆ ಇಲ್ಲ. ಆದರೂ ಜಾಣ ರೈತ ಎಂಬ ಕವನದಲ್ಲಿ ಕವಿಗಳು ರೈತನ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಸಾಲುಗಳನ್ನು ಕಟ್ಟಿಕೊಟ್ಟಿದ್ದಾರೆ. ನಿಜ ಅದು ಹಾಸ್ಯ ಶೈಲಿಯಲ್ಲಿಯೆ ಮೂಡಿಬಂದಿದ್ದರೂ ಕೊನೆಯ ಸಾಲುಗಳು ಮಾತ್ರ ನಮ್ಮಂಥಹ ಮಣ್ಣಿನ ಮಕ್ಕಳ ಎದೆಗೊಂದಿಷ್ಟು ಚೂರು ನೋವನ್ನುಂಟು ಮಾಡದೆ ಇರುವುದಿಲ್ಲ.
ನನ್ನೀ ಸಾಲ ಹರಿಯಲಿಕ್ಕಿಲ್ಲ ಈಗ !
ಹೇಗೊ ಮಕ್ಕಳು ದೊಡ್ಡವರಾಗುತ್ತಾರಲ್ಲ ಬೇಗ !!
ಅವರ ತಲೆಯ ಮೇಲೆ ಭಾರ ಹಾಕಿ
ಹೊಡೆದರಾಯಿತು ಲಾಗ !
ಪ್ರಾಸಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ ಈ ಸಂಕಲನದಲ್ಲಿ, ಯೋಧನ ತಾಯ ಹರಕೆ ಕವನವಂತೂ ಓದಿದಾಗಲೆಲ್ಲ ಎದೆತುಂಬಿ ಕಣ್ಣುಗಳು ತೇವವಾಗುವವು. ಒಟ್ಟಿನಲ್ಲಿ ಕೊಟ್ಟ ಹಣಕ್ಕೆ ಮೋಸವಿಲ್ಲ, ಓದಿದ ಮನಗಳೆಂದು ಈ ಸಂಕಲನವನ್ನು ಮರೆಯುವುದಿಲ್ಲ.
ಶಾಯರಿ ೩೪೭
ಹೂಜಿಯಲ್ಲಿ
ಮಲಗಿದ ಮದ್ಯವನ್ನು
ಕುಡಿಯಬಾರದೆಂದರೆ...
ಹೇಗೆ ಸಾಕಿ...
ಇರುಳೆಲ್ಲ..
ಕಣ್ಮುಚ್ಚಲು ಬಿಡದ
ಅವಳ ನೆನಪುಗಳನ್ನು
ಮಲಗಿಸಲಾದರು.... ನಾ
ಚೂರಾದರು..
ಕುಡಿಯಲೆಬೇಕಲ್ಲ..
Monday, October 29, 2018
ಶಾಯರಿ ೩೪೦
ಆಗಾಗ ಅವಳು
ಮುನಿಸಿಕೊಳ್ಳುತ್ತಿದ್ದ
ಹಾಗೆಯೆ..
ನಿನ್ನ
ಮಧು ಬಟ್ಟಲು
ಮುನಿಸಿಕೊಳ್ಳುವುದಲ್ಲ
ಸಾಕಿ...
ಎಷ್ಟೇ ಕುಡಿದರು
ಮತ್ತನೆ...
ಏರಿಸುವುದಿಲ್ಲ...
ರಮಿಸಬೇಕೆಂದರೆ,
ಮನದ ಮಾತು
ಇದಕ್ಕೆ...
ಅರ್ಥವಾಗೊಲ್ಲ
ಶಾಯರಿ ೩೩೯
ಚಳಿಯೇನು...?
ಬಿಸಿಲೇನು..?
ಸಾಕಿ...
ಅವಳ ನೆನಪುಗಳು
ದಿನವಿಡಿ
ನನ್ನನು...
ಚುಚ್ಚದೆ ಬಿಡುತಿಲ್ಲ...
ಚುಚ್ಚುವ ನೋವ
ಮರೆಯಯವವರೆಗೂ..
ನಿನ್ನ ಮದ್ಯವ
ಕುಡಿಯುವುದನ್ನು ನಾ
ಬಿಡುವುದೆ...
ಇಲ್ಲ
Sunday, October 28, 2018
Saturday, October 27, 2018
Me too
ಅನುಭವಿಸಿದ ಯಾತನೆಯನ್ನು
ವರುಷಗಟ್ಟಲೆ ಗರ್ಭಕಟ್ಟುವುದೇಕೊ...?
ಬೀಜ ಬಿತ್ತುವ ಮುನ್ನವೆ...ಮೈ ಕೊಡವಿಕೊಂಡುಬಿಟ್ಟಿದ್ದರೆ...
ಸಸಿಯೊಡೆಯುವ ಸಂದರ್ಭವೆ...
ಬರುತ್ತಿರಲಿಲ್ಲವೇನೊ...
ಏಕೆ ಸಹಿಸಿಕೊಂಡೆ..? ಸಿಡಿದೆಳಲಿಲ್ಲವೇಕೆ..?
ಮಾನಾವಮಾನಗಳ ಅಂಜಿಕೆಯಿದ್ದರೆ...
ಇಂದು ಬಂದದ್ದಾದರು ಏಕೆ..?
ಮೈ ಮುಟ್ಟಿದ ದಿನವೆ ನಿ... ಚಂಡಿಯಾಗಿದ್ದರೆ
ಎದೆಯಬ್ಬಿಸಿ ನಡೆಯುವವರ ನಡುವನ್ನು
ಮುರಿದು... ಮೂಲೆ ಗುಂಪಾಗಿಸುತ್ತಿದ್ದರಲ್ಲವೆ...
ಇಲ್ಲ...ಇಲ್ಲ... ನೀನಾವಾಗ ಧನಿಯನೆತ್ತಲೆ ಇಲ್ಲ...
ನಿನಗೂ ಕಂಡುಕೊಳ್ಳಬೇಕಿತ್ತಲ್ಲವೆ... ನಿನ್ನ
ಬದುಕಿನ ಹಾದಿ..
ಸಹಿಸಿಕೊಂಡೆ... ಸಹಿಸಿಕೊಂಡೆ ಇರಬೇಕಾಗಿತ್ತು...
ಎಲ್ಲಿಯವರೆಗೂ ನೀನು ಸಹಿಸಿಕೊಳ್ಳುತ್ತಿಯೊ... ಅಲ್ಲಿಯವರೆಗೂ ನಿ ಗರತಿ...
ತಿರುಗಿ ಬಿದ್ದಿಯೊ... ಕೈ ಹಾಕಿ ಬಿಡುವರೆಲ್ಲ
ನಿನ್ನ ಶೀಲದ ಥೈಲಿಗೆ...
ಸಂಸಾರಗಳಲ್ಲಿಯೆ ಎಷ್ಟಿಲ್ಲ me too
ಮನವಿಲ್ಲದೆ ಸೆರಗು ಜಾರಿಸಿಕೊಂಡ ಇರುಳುಗಳದೆಷ್ಟಿಲ್ಲ ಗಂಡನ ಕಾಮದಾಟಕ್ಕೆ...
ಅವಳು...... ಅಂದರೆ, ಸಾಗುವುದೆ ಸಂಸಾರ.
ಸಾಗಬೇಕು ಹೆಣ್ಣೆ.. ಎಲ್ಲವ ಸಹಿಸಿಕೊಂಡು
ಇಲ್ಲವೆ..ಸಿಡಿದೆಳಬೇಕು ನಿನ್ನೆಲ್ಲ ಕನಸುಗಳ
ಸುಟ್ಟುಕೊಂಡು
ಶಾಯರಿ ೩೩೭
ಇದ್ದದ್ದು....
ಒಂದೆ ಮನಸ್ಸು
ಅದನ್ನೆ...ಕಳೆದುಕೊಂಡು
ಬಂದಿರುವೆನಿಲ್ಲಿಗೆ
ಸಾಕಿ....
ಮತ್ತಿಗೇಕೆ... ಅದನ್ನೆ
ಹುಡುಕಿಕೊಂಡು
ಹೋಗಲಿ.... ಅದು
ಮದ್ಯದ ಮತ್ತಿನಲ್ಲಿ...
ಶಾಯರಿ ೩೫೯
ನೋವಿಗೆಲ್ಲ,
ಮದ್ದಾಗುತ್ತೇನೆ
ಎಂದಿದ್ದೆಯಲ್ಲ
ಸಾಕಿ....
ನೋವಿನೆದೆಗೆ
ಉರಿಯುವ
ಮದ್ಯವನ್ನೆ
ಸುರಿಯುತ್ತಿರುವೆಯಲ್ಲ...
ಶಾಯರಿ ೩೬೧
ನಾನು ಕುಡಿದು..
ಮತ್ತೇರಿರುವಾಗ,
ನನ್ನೇದಿರು ಅವಳನ್ನು
ತಂದು ನಿಲ್ಲಿಸು
ಸಾಕಿ...
ಅಮಲೇರಿದ
ಹೊತ್ತಿನಲ್ಲಾದರು...
ನನ್ನೆಲ್ಲ ಮನದ
ಮಾತುಗಳನ್ನು
ಅವಳಲ್ಲಿ ತೊಡಿಕೊಳ್ಳಬೇಕು
ಆಗ
ಶಾಯರಿ ೩೬೨
ಪ್ರೀತಿಯೆಂದರೆ...
ಮಧು ಶಾಲೆಯ
ಗಾಜಿನ ಬಟ್ಟಲಿನಂತೆ
ಕಾಪಾಡಿಟ್ಟುಕೊಂಡಷ್ಟು
ಆಯಷ್ಯ ಹೆಚ್ಚಂತೆ
ಸಾಕಿ...
ನಿನ್ನರಮನೆಯ
ಮಧು ಬಟ್ಟಲನ್ನು
ನಾನು ಕೈಗೆತ್ತಿಗೊಂಡಾಗಲೆ
ನನಗರಿವಾದದ್ದು...
ಶಾಯರಿ ೩೬೩
ಮೂಗಿನ
ಮೇಲೆ ಕೈ
ಇಟ್ಟು
ನೋಡದಿರು
ಸಾಕಿ...
ನನ್ನದೆಯ ಮೇಲೆ
ಕಿವಿಯಿಟ್ಟು ಕೇಳು...
ಬಡಿಯುತ್ತಿದ್ದರೆ..
ಅವಳಿನ್ನೂ.. ನನ್ನನು
ಮರೆತಿಲ್ಲ ಅಂತಾನೆ
ಲೆಕ್ಕ..
ಶಾಯರಿ ೩೬೪
ಕುಡಿಯಲಿಕ್ಕೆ...
ಮಧುವನ್ನೆ
ಸುರಿದ ನೀನೇನು
ಸುರಕನ್ಯೆ
ಏನಲ್ಲ
ಸಾಕಿ...
ಕುಡಿದ
ಮತ್ತಿನಲ್ಲಿ
ಅವಳ ಹೆಸರನ್ನೆ
ಜಪಿಸುವಂತಹ
ದೇವದಾಸನು
ನಾನಲ್ಲ..
Friday, October 26, 2018
Thursday, October 25, 2018
ಶಾಯರಿ ೩೬೮
ನನ್ನಧರಕ್ಕಲ್ಲದಿದ್ದರೂ...
ನಿನ್ನ ಮದ್ಯದ
ಬಟ್ಟಲಿಗಾದರು...
ಚುಂಬಿಸಿ ಕೊಡಲಿ
ಅವಳು
ಸಾಕಿ...
ಮತ್ತೇರುವ
ತನಕ...
ಬಟ್ಟಲನ್ನು ಬಿಟ್ಟು
ನಾ....
ಮೇಲೆಳುವುದೆ ಇಲ್ಲ
ಶಾಯರಿ ೩೬೭
ಅವಳಿಲ್ಲದೆ
ನಾ ಉಸಿರಾಡುತ್ತಿರುವುದು
ಭ್ರಮೆಯೆಂದಿನಿಸಿದೆ
ಸಾಕಿ... ನನಗೆ
ನಿನ್ನ ಮದ್ಯದ
ಬಟ್ಟಲೊಂದೆ, ನನ್ನೀರುವಿಕೆಯ
ಸಾಕ್ಷಿಯನ್ನು
ಸಾರುತಿದೆ....
ಶಾಯರಿ ೩೬೫
ಅವಳೆ....
ಬದುಕೆಂದುಕೊಂಡಿದ್ದೆ
ಇಲ್ಲಿಗೆ ಕಳುಹಿಸಿಕೊಟ್ಟಳು
ಸಾಕಿ...
ಮದ್ಯದ ಬಟ್ಟಲನ್ನೆ
ನಂಬಿರುವೆ...
ಮಸಣದ ಹಾದಿಯನ್ನು
ತೋರಿಸಿಬಿಡು
ಶಾಯರಿ ೩೫೮
ನಾನ್ಯಾರಂದು
ಅರಿಯುವ ಮೊದಲೆ
ನಿನ್ನರಮನೆಯ
ಅಂಗಳದಲ್ಲಿ
ಬಿದ್ದಿರುವೆ
ಸಾಕಿ...
ಉಸಿರನ್ನು
ಕಸಿದುಕೊಳ್ಳದ
ಸಮಯವಿದು
ಅವಳನ್ನು ನೆನಪಿಸಿ..
ನೆನಪಿಸಿ...ಉಸಿರಗಟ್ಟಿಸುತಿದೆ
ಶಾಯರಿ ೩೫೭
ಪೂರ್ಣ ಚಂದ್ರನು
ಬೆತ್ತಲಾಗಿ ಬಿದ್ದಿಹನಿಂದು
ಬೀದಿಗೆ....
ಸಾಕಿ..
ಈ ರಾತ್ರಿಗಾದರೂ
ಮುಖದ ಮೇಲಿನ
ದುಪ್ಪಟಿಯನ್ನು
ಸರಿಸಿಬಿಡು.. ನಿನ್ನ
ಸೌಂದರ್ಯ ದರ್ಶನದಿಂದಾರು
ಸ್ವರ್ಗವನ್ನು
ಸೇರಬಲ್ಲೆ
ಶಾಯರಿ
ನಾನ್ಯಾರಂದು
ಅರಿಯುವ ಮೊದಲೆ
ನಿನ್ನರಮನೆಯ
ಅಂಗಳದಲ್ಲಿ
ಬಿದ್ದಿರುವೆ
ಸಾಕಿ...
ಉಸಿರನ್ನು
ಕಸಿದುಕೊಳ್ಳದ
ಸಮಯವಿದು
ಅವಳನ್ನು ನೆನಪಿಸಿ..
ನೆನಪಿಸಿ...ಉಸಿರಗಟ್ಟಿಸುತಿದೆ
ಶಾಯರಿ ೩೫೬
ಹೃದಯವೆ ಸುಟ್ಟು
ಹೋಗಿರುವಾಗ...
ಕಿಡ್ನಿಯ ಚಿಂತೆ
ನನಗೇಕಿಗ
ಸಾಕಿ...
ಎದೆಯ ಬಡಿತವೆ
ನಿಂತು ಹೋಗುತ್ತಿರುವಾಗ,
ಕಿಡ್ನಿ ತುಡಿತದ
ಆಸೆಯೊಂದು
ಬೇಕೆನು.
Wednesday, October 24, 2018
ಶಾಯರಿ ೩೫೫
ಅವಳ ನೆನಪುಗಳು
ಅಳಿಯುವವರೆಗೂ..
ನಿನ್ನ ಮದ್ಯದ
ಬಟ್ಟಲನ್ನು ನಾನು
ಬಿಡುವುದೆ ಇಲ್ಲ
ಸಾಕಿ...
ನೆನಪುಗಳು
ಅಳಿದ ದಿನವೆ
ಈ ಭೂಮಿಯ
ಮೇಲೆ
ನಾನುಳಿಯುವುದೆ
ಇಲ್ಲ...
ಶಾಯರಿ ೩೫೪
ಅವಳು ನೀಡಿದ
ನೋವಿಗೆ...
ಹೊಟ್ಟೆಪಾಡಿಗಾಗಿ
ತಯಾರಿಸಿದ ಮದ್ಯವನ್ನು
ನನಗಿಂದು, ನೀನು
ನೀಡಿರುವೆ ಸಾಕಿ..
ನೋವ ಮರೆಸಿದ
ಕಾರಣಕ್ಕಾಗಿ....
ಅರ್ಪಣೆಯನ್ನು ನಿನಗರ್ಪಿಸಲೊ..
ಮದ್ಯಕ್ಕೊ...
ಶಾಯರಿ ೩೩೬
ಗೋರಿಯೊಳಗೆ
ಹುಗಿಯುವ ಮುನ್ನ...
ನನ್ನೆದೆಯ ಮೇಲೊಂದು
ಹೂವೊಂದನೇಕೆ
ಇಟ್ಟು ಹೋದಳವಳು
ಸಾಕಿ...
ಸುರಿದ ಮಣ್ಣನ್ನಾದರು
ಹೊರಬಲ್ಲೆ... ಹೇಗೆ
ಹೊತ್ತು ಮಲಗಲಿ
ಆ ಗುಲಾಬಿಯನ್ನು
ಶಾಯರಿ ೩೩೫
ತಲೆಕೆಟ್ಟದ್ದು
ಅವಳ ಮೋಹಕ
ನಗುವಿಗಾಗಿ
ಸಾಕಿ...
ಕಡಿಮೆಗೊಳಿಸಿಕೊಳ್ಳಲೆಂದಲ್ಲವೆ
ನಾನಿನ್ನ ಅರಮನೆಗೆ
ಬಂದದ್ದು..
Tuesday, October 23, 2018
ಶಾಯರಿ ೩೩೪
ನಲಿವನ್ನು ಹಂಚಿಕೊಳ್ಳಲು
ಒಂದೆ... ಒಂದು
ಅವಕಾಶವನ್ನು ಅವಳು
ಕೊಡಲೆ ಇಲ್ಲ
ಸಾಕಿ...
ನೋವ ಹಂಚಿಕೊಳ್ಳಬೇಕೆಂದೆ
ಯಾರೊಬ್ಬರೂ..
ಕಿವಿಯಾಗಲಿಲ್ಲ
ಶಾಯರಿ ೩೩೩
ಇಂದು ಚೆಲ್ಲಿದ
ಹಾಲ್ಬೆಳದಿಂಗಳು
ಅವಳಿತ್ತ ಮುತ್ತಿನ
ಮತ್ತನ್ನು ನೆನಪಿಸಿತ್ತು
ಸಾಕಿ...
ಆ ಮತ್ತನ್ನು
ಮರೆಯಲೆಂದೆ
ಕುಡಿದ ಮದ್ಯದ
ಮತ್ತೆಲ್ಲ ಇಳಿದು
ಹೋಗಿತ್ತು..
ಶಾಯರಿ ೩೩೨
ಹಗಲುಗಳ
ಮರೆಯಲೆಂದೆ
ರಾತ್ರಿಗಳ ಮಡಿಲಿಗೆಂದೆ
ನಿನ್ನ ಬಳಿ
ಬಂದೆನಲ್ಲವೆ
ಸಾಕಿ...
ಕತ್ತಲಿಗೂ...
ನನ್ನ ಮೇಲದಷ್ಟು
ಕೋಪ. ಕುಡಿದ
ಮತ್ತನೆಲ್ಲ ಇಳಿಸಿ
ಮತ್ತೆ ಹಗಲಿಗೆ
ದೂಡಿಬಿಡುವುದಲ್ಲ..
ಶಾಯರಿ ೩೩೧
ಬಿಟ್ಟು..ಬಿಡಬೇಕಿದೆ
ನನ್ನೆದೆಯ
ದುಃಖವನ್ನು
ಹಂಚಿಕೊಳ್ಳುವ
ಖಯ್ಯಾಲಿಯನು
ಸಾಕಿ...
ಹಾಡಿಬಿಡು..
ನೀನೆಯೊಂದು
ನೋವ ಮರೆಸುವ
ಖವ್ವಾಲಿಯೊಂದನು
Monday, October 22, 2018
ಶಾಯರಿ ೩೩೦
ನಾನು ಸತ್ತಾಗ...
ಅವಳಿಗೆ, ಅಳದಿರೆಂದು
ನಿ ಹೇಳಿಬಿಡು
ಸಾಕಿ..
ಹುಗಿದ ಗೋರಿಯೊಳಗೆ
ಮಣ್ಣನ್ನಾದರು
ಹೊರಬಲ್ಲೆ...
ಹೇಗೆ ಹೊತ್ತು
ಮಲಗಲಿ... ಅವಳ
ಕಣ್ಣೀರ ಭಾರವನು..
ಶಾಯರಿ ೩೨೯
ಕುಡಿದ ಮತ್ತಿನಲ್ಲೂ
ಅವಳ ಹೆಸರನ್ನೆ
ಜಪಿಸಿದ್ದೆ...
ನಿನಗೆ ಗೊತ್ತಿಲ್ಲ
ಸಾಕಿ...
ಪದೆ..ಪದೆ..
ಕೇಳಲು..ನೀನು
ನಾನೇನು
ಹರಿಕಥೆಯನ್ನು
ಹೇಳುತ್ತಿಲ್ಲ
ಶಾಯರಿ ೩೨೮
ಹೊಗೆ ಹಾಕುವವರ
ಚಿಂತೆ ನಿನಗೇಕಿಗ
ಸಾಕಿ...
ಸುರಿಯುತ್ತಿರು ನಿನ್ನ
ಮದ್ಯವನ್ನು, ಬಟ್ಟಲಿಗೆ...
ಹನಿ....ಹನಿಯು..
ಚೆಲ್ಲದ ಹಾಗೆ
ಶಾಯರಿ ೩೨೭
ಬದುಕು ನೀಡುವ
ವಿಸ್ಮಯಗಳಿಗೇನು
ಕೊರತೆಯಿಲ್ಲ
ಸಾಕಿ...
ಕಾಲ ನೀಡುವ
ಫಲವನ್ನು...
ದಕ್ಕಿಸಿಕೊಳ್ಳಲು
ಸಿದ್ದರಿರಬೇಕಷ್ಟೇ..
ಶಾಯರಿ ೩೨೬
ಅವಳು
ತೊರೆದು ಹೋದುದಕೆ
ಕಾರಣವನ್ನೆ ಕೇಳಲಿಲ್ಲ
ಸಾಕಿ...
ಯಾರು..
ಕುಡಿಯುತ್ತಿರುವುದಕ್ಕೆ
ಇಂದು, ಎಲ್ಲರೂ...
ಕಾರಣವನ್ನೆ
ಕೇಳುತ್ತಿರುವರಲ್ಲ
ನನ್ನನ್ನು...
ಶಾಯರಿ ೩೨೫
ವಿರಹದ ಬಿಸಿಗೆ
ತುಟಿಗಳೆಲ್ಲವು
ಬಿರಿದುಬಿಟ್ಟಿವೆ
ಸಾಕಿ...
ಹಣವಿಲ್ಲ,
ಕುಡಿದು ಬಿಟ್ಟಿರುವ
ಮದ್ಯದ ಬಟ್ಟಲನ್ನಾದರು
ತಾ...
ಸೋಕಿಸಿ... ಚೂರು
ತಣ್ಣಗಾಗಿಸಿಕೊಳ್ಳುವೆ
Wednesday, October 17, 2018
ಸಾಕಿ ೧೨
ಬಾಳಲ್ಲಿ ಬರಿ...ಕತ್ತಲೆಯೆ ತುಂಬಿಕೊಂಡಿರುವಾಗ
ಈ ಅಮವಾಸೆಯ ಕತ್ತಲಿನ ಭಯವಿಂದೇಕೆ ನನಗೆ
ಸಾಕಿ...
ದೂಡುವುದಾದರೆ ಈಗಲೆ ದೂಡಿಬಿಡು..
ನಿನ್ನರಮನೆಯಿಂದ, ಏರಿದ ಮತ್ತದು ಇಳಿಯುವ ಮುನ್ನವೇ...
ಕಹಿಯಾದರು ಸರಿ.. ನಿನ್ನ ಹವಳದ ತುಟಿಯಿಂದ
ನನ್ನ ಕೆನ್ನೆಗೆ ಕೆಂಪು ಮುದ್ರೆಯೊಂದನ್ನು
ಒತ್ತಿಬಿಡು ಸಾಕಿ...
ಮುತ್ತಿನ ಮತ್ತಿನಲೆ ಎಡವಿ, ನಿನ್ನರಮನೆಯ
ಅಂಗಳಕ್ಕೆ ಬಿದ್ದವನು ನಾನು... ದುರಾಸೆಯಿಂದ
ಮತ್ತೆಯವಳ ಮನೆಯ ಹಾದಿಯನ್ನು ತುಳಿಯುವ ಮುನ್ನವೇ...
ನವಿಲು ಗರಿಗಳಿಂದ ತಂಗಾಳಿಯ ಬೀಸಿ..ನಿನ್ನ
ಮಡಿಲಲ್ಲಿ ರಾತ್ರಿಯೆಲ್ಲ....ಎಚ್ಚರವಾಗದಂತೆ
ಮಲಗಿಸಿಕೊಂಡುಬಿಡು ಸಾಕಿ....
ತನ್ನೆದೆಯ ಹಾಲನ್ನು ಕುಡಿಸಿ...ಜೋಗುಳವ ತೂಗಿ
ಮಲಗಿಸಿದವಳ ಕುಡಿಯು ನಡು ರಾತ್ರಿಯಲ್ಲಿ..
ಚಿಟ್ಟನೆ ಚೀರಿದಾಗ... ನನ್ನೆದೆಯ ಬಡಿತವು ನಿಲ್ಲುವ
ಮುನ್ನವೆ....
ನೀನೂ... ಬೇಕಾದರೆ, ಇರುಳೆಲ್ಲ ಜೋಗುಳವ ಹಾಡಿ..
ನಿನ್ನಾಸೆಯನೆಲ್ಲವ ತೀರಿಸಿಕೊಂಡುಬಿಡು
ಸಾಕಿ...
ಅವಳ ನೆನಪಿನಲೆಗಳ ಹೊಡೆತವ ತಾಳದ
ದೇಹವಿದು ಕೃಶವಾಗಿ ಕಸವಾಗುವ
ಮುನ್ನವೇ....
ಶಾಯರಿ ೩೨೪
ಕುಡಿದ ಪ್ರತಿ
ಗುಟುಕಿನಲೂ...
ಕಣ್ತೆರೆಸದಷ್ಟು
ಮತ್ತಿದೆ
ಸಾಕಿ...
ನಿನ್ನ ಮಧು
ಬಟ್ಟಲಿನಲಿ..
ಕುಡಿದ ಮತ್ತೆಲ್ಲವು...
ಅರೆ ಘಳಿಗೆಯಲ್ಲೆ
ಇಳಿದು ಹೋಗುವಂತೆ
ಮಾಡುವ ಶಕ್ತಿಯೂ
ಸಾಕಷ್ಟಿದೆ ಅವಳ
ನೆನಪುಗಳಲಿ...
Tuesday, October 16, 2018
ಶಾಯರಿ ೩೧೪
ಅವಳಂದು ಕೊಟ್ಟ
ನಗುವಿನ
ಸಾಲಕ್ಕೆ
ನಾನಿಂದು
ಮದಿರೆ ಮನೆಯ
ಮಧುವಿನ ಬಟ್ಟಲಿಗೆ
ಬಡ್ಡಿಯನ್ನು
ಕಟ್ಟುತ್ತಿರುವೆ
ಸಾಕಿ....
ಶಾಯರಿ ೩೧೩
ನನ್ನ ಪ್ರೇಮಕ್ಕೆ
ಪುರಾವೆಯಾಗಿ
ಏನನ್ನು
ತೋರಿಸಲಿ
ಸಾಕಿ...
ಬರಿದಾದ
ನನ್ನೆದೆಗೆ, ನಿನ್ನ
ಕಹಿ ಮದ್ಯವನ್ನೆ
ಸುರಿದುಕೊಳ್ಳುತ್ತಿರುವೆ.
ಇದಕ್ಕಿಂತ...
ಬೇರೆ ಬೇಕಾ
ಸಾಕ್ಷಿ..
ಶಾಯರಿ ೩೧೨
ಅವಳಿಗೆ ಗೊತ್ತಿಲ್ಲ,
ಇತಿಹಾಸದಲ್ಲಿ ಮೋಸ
ಹೋದವರ ಪಾಲು
ಎಷ್ಟೆಂಬುದು
ಸಾಕಿ...
ಅರಿವಾಗುವುದೇನು
ಅವಳಿಗೆ....
ಮದಿರೆ ಮನೆಯಲ್ಲಿ
ವಿರಹದ ಪಾಲನ್ನು
ಹಂಚಿಕೊಳ್ಳದೆ,
ನರಳಾಡುತ್ತಿರುವವರ
ಪಾಡು
ಶಾಯರಿ ೩೧೧
ಮರಗುವ..ಕೊರಗುವ
ಶಬ್ದಗಳಿಗೆ ಜೀವ
ಉಂಟೇನು
ಸಾಕಿ...
ಇದ್ದಿದ್ದರೆ...
ಬಟ್ಟಲು ಮದಿರೆಗಾಗಿ,
ನಿನ್ನರಮನೆಯ
ಬಾಗಿಲನ್ನು
ನಾನೇಕೆ ಬಡೆಯುತ್ತಿದ್ದೆ.
ಶಾಯರಿ ೩೧೦
ನನ್ನೆದೆಯ ಇರಿಯಲು
ಕತ್ತಿಯಾದರು
ಏಕೆ ಬೇಕು..?
ಅವಳ ಒಂದು
ಮಾತು ಸಾಕು
ಸಾಕಿ...
ಅಂತರಂಗದರಮನೆಯಿಂದ
ಹೊರ ನೂಕಿದ ನೋವನ್ನು
ಮರೆಯಲೆಂದು ತಾನೆ,
ನಾನಿಲ್ಲಿ
ನಶೆಯಾಗುತ್ತಿರುವುದು.
ಶಾಯರಿ ೩೦೯
ಮುನ್ನೆಡೆಸಿಕೊಂಡು
ಹೋಗುವವಳೆಂದೆ
ತಾನೆ, ನಾನವಳ
ಕೈಯನ್ನು ಹಿಡದದ್ದು
ಸಾಕಿ...
ಹೇಗೆ ಮರೆಯಲಿ
ನಾನು.. ?
ಏನು ಅರಿಯದ
ನನ್ನನು..
ನಿನ್ನರಮನೆಯ ಮುಂದೆ
ಅವಳು ಬಿಟ್ಟು
ಹೋದದ್ದು
ಶಾಯರಿ ೩೧೫
ಹಿಂದೆ ಅವಳೆರಿಸಿ
ಕಳುಹಿಸಿದ ಮತ್ತೆ
ಇನ್ನೂ
ಇಳಿದಿಲ್ಲ ಸಾಕಿ...
ಮತ್ತೆ.. ಮತ್ತೆ...
ಎಡವಿ ಬಿಳುವುದಕ್ಕಿಂತ,
ನಿನ್ನರಮನೆಯಲ್ಲಿ
ಕಲ್ಲಾಗಿ ಕುಳಿತುಬಿಡುವುದೆ
ಲೇಸು..
ಶಾಯರಿ ೩೧೬
ಕಲ್ಲಂತ
ಮನಸ್ಸುಳ್ಳವಳನು
ಕರಗಿಸಲಾರದೆ
ನಾನಿಲ್ಲಿಗೆ ಬಂದದ್ದಲ್ಲವೆ
ಸಾಕಿ...
ಅವಳಿಗೇನು
ಗೊತ್ತು...?
ಗುಟುಕು ಗುಟುಕು
ಮದಿರೆಯ ಕುಡಿಯುತ್ತಾ,
ನಾನಿಲ್ಲಿ
ಕರಗುತ್ತಿರುವುದು
ಶಾಯರಿ ೩೧೭
ಉಸಿರಲಿ..
ಉಸಿರಾಗಿರುವೆನೆಂದವಳು
ಸದ್ದಿಲ್ಲದೆ ಕರಗಿ
ಹೋದಳು
ಸಾಕಿ...
ಎದುಸಿರು
ಬಿಡುತ್ತಿರುವೆ...
ಮೂಸಿಸಿಬಿಡು
ಮಲ್ಲಗೆಯನು ಮೂಗಿಗೆ..
ಕಣ್ಮುಚ್ಚಿಬಿಡುವೆ
Monday, October 15, 2018
ಶಾಯರಿ ೩೦೮
ನನ್ನ ಪ್ರೇಮವನ್ನು
ಅದೇಷ್ಟು ನಿಷ್ಕರುಣೆಯಿಂದಲೆ
ಖೂನಿಮಾಡಿಬಿಟ್ಟಳವಳು
ಸಾಕಿ...
ಸಾಕ್ಷ್ಯಿಗಳು ದೊರಕದೆ
ಅವಳಾದಳು
ನಿರಪರಾಧಿ...
ನ್ಯಾಯ ಸಿಗದೆ
ಹೋದ ನಾನೀಗ..
ನಿನ್ನರಮನೆಯ
ಬಂಧಿ..
ಶಾಯರಿ ೩೧೮
ದ್ವಾಪಾರವೊ...
ಕಲಿಯುಗವೊ..ಕಾಲವು
ಯಾವುದಾದರೇನು
ಸಾಕಿ...
ಅವಳು ನೀಡುವ
ನೋವು ಹೊಸತಾಗಿಲ್ಲ,
ಕುಡಿಯುವ ನಿನ್ನ
ಮದ್ಯದ ಮತ್ತು
ಇನ್ನೂ
ಬದಲಾಗಿಲ್ಲ
ಶಾಯರಿ ೩೧೯
ಅವಳು ಪ್ರೀತಿಯಲ್ಲಾಡಿದ
ಮಾತುಗಳು ಇಂದಿಗೂ
ನೆನಪಾಗಿ
ಚುಚ್ಚುತ್ತಿವೆ ಸಾಕಿ...
ಮುಳ್ಳಿನ ಹಾಸಿಗೆಯ
ಮೇಲೆ, ಮಲಗಿಕೊಳ್ಳಲು
ನಾನೇನು ಸನ್ಯಾಸಿಯೇನು?
ಶಾಯರಿ ೩೨೦
ಒಳ್ಳೆಯದೆ ಎಂದು
ಪ್ರತಿನಿತ್ಯವು..
ಪ್ರೀತಿಯಲ್ಲಿ
ಕುಡಿಸುತ್ತಿದ್ದಳು
ಸಾಕಿ
ಹಾಲು...
ಕೆಟ್ಟದ್ದೆಂದು
ಗೊತ್ತಿದ್ದರು...ಹಾಲಿನ
ರುಚಿಯ ಮರೆಯಲು
ಅನುದಿನವು
ಕುಡಿಯುತ್ತಲಿರುವೆನಿಂದು
ಆಲ್ಕೋಹಾಲು
ಶಾಯರಿ ೩೨೧
ಅವಳು ಮಾಡಿದ್ದು
ಅನ್ಯಾಯವೊ...
ಮೋಸವೊ..
ನನಗೊಂದು ಗೊತ್ತಿಲ್ಲ
ಸಾಕಿ...
ಕೊಲ್ಲುತ್ತಿರುವುದು
ಮಾತ್ರ, ಅದು
ನನ್ನನ್ನೆ...
ಶಾಯರಿ ೩೨೩
ಮಾನಾವಮಾನಗಳ
ಹಂಗು ನನಗಿಲ್ಲ
ಸಾಕಿ...
ಅವಳೇರಿಸಿ
ಹೋದ ಗುಂಗು
ಇಳಿಯುವವರೆಗೂ...
ನಿನ್ನ ಮದ್ಯವ
ಕುಡಿಯುವದನ್ನು
ನಾನು ಬಿಡುವುದೆ
ಇಲ್ಲ...
ಭಾಗ ೧೬
ಸಮಯವನ್ನು ನೋಡಿಕೊಂಡನು ಅಖಿಲನು ಹನ್ನೆರಡು ಐವತ್ತಾಗಿತ್ತು, ' ಬಂದು ನಿಂತು ಅರ್ಧ ಗಂಟೆ ಕಳೆದರು ಯಾವ ವಾಹನವು ಬರುವ ಸೂಚನೆಯ ಕಾಣುತ್ತಿಲ್ಲವಲ್ಲ, ಊರಲ್ಲಿ ಬೇರೆ ಕರ್ಪ್ಯೂ ಒಂದನ್ನು ಹೇರಿರುವದರಿಂದ ಯಾವ ವಾಹನವು ಬರಲಾರವೇನೊ, ಸುಮ್ಮನೆ ನಡೆದು ಹೋಗುವದೆ ಸರಿ, ಎಂದುಕೊಳ್ಳುತ್ತ, ಊರಿನ ಕಡೆಗೆ ಹೆಜ್ಜೆಯನ್ನು ಹಾಕತೊಡಗಿದನು. ಅರ್ಧ ಕಿ. ಮೀ ದೂರ ನಡೆದು ಬಂದಿರಬೇಕು ಹಿಂದಿನಿಂದ ಯಾವುದೊ ಬೈಕು ಬರುವ ಸೌಂಡ ಕೇಳಿ ತಿರುಗಿ ನಿಂತು ಲಿಪ್ಟ್ ಗಾಗಿ ಎಡಗೈಯಿಂದ ಥಮ್ಸಪ್ ಚಿನ್ಹೆಯನ್ನು ಮಾಡಿದನು. ಬೈಕು ಬಂದು ಅಖಿಲನ ಮುಂದೆ ನಿಂತುಕೊಂಡಿತು. ' ಸರ್ ಊರಿನ ತನಕ ಲಿಪ್ಟ್ ಕೊಡ್ತೀರಾ,?' ವಿನಯವಾಗಿ ಬೈಕ ಸವಾರನ ಹತ್ತಿರ ಕೇಳಿಕೊಂಡನು, ' ಇಲ್ರೀ, ಊರ ಹೊರಗೆ ಬಂಟೂರ್ ಕ್ರಾಸ್ ಇದೆಯಲ್ಲ ಅಲ್ಲಿ ತನಕ ಅಷ್ಟೆ ನಾನು ಹೋಗೊದು' ಎಂದನಾವ್ಯಕ್ತಿ, 'ಅಷ್ಟೇ ಸಾಕು ಸರ್, ಊರೊಳೊಗೆ ನಾ ಹೇಗಾದರು ಮಾಡಿ ಹೋಗುವೆ, ಅಲ್ಲಿವರೆಗಾದ್ರೂ ಡ್ರಾಪ್ ಮಾಡಿ,'
'ಸರಿ ಹತ್ತಿ' ಎಂದು ಅಖಿಲನನ್ನು ಕುಳ್ಳರಿಸಿಕೊಂಡು ಬಂದು ಬಂಟೂರ್ ಕ್ರಾಸ್ ಗೆ ಇಳಿಸಿ ಹೊರಟು ಹೋದನು.
'ಇಲ್ಲಿಂದ ಊರೊಳೊಗೆ ಹೇಗಪ್ಪ ಹೋಗೊದು ಆಸ್ಪತ್ರೆಗೆ ಅದು ಅಷ್ಟು ದೂರ,' ಎಂದು ಊರೊಳಗೆ ಕಾಲಿಡುತ್ತಲೆ, ಪೋಲಿಸ್ ಜೀಪೊಂದು ಅವನೆದುರಿಗೆ ದುತ್ತೆಂದು ಬಂದು ನಿಂತುಬಿಟ್ಟಿತು. ಪೋಲಿಸ್ ಜೀಪನ್ನು ನೋಡಿದ ಅಖಿಲನು ಗಡಗಡನೆ ನಡುಗಿ ಹೋದನು. ಗಂಟಲು ಒಣಗಿ ಮಾತೆ ಬಾರದಂತಾಗಿಬಿಟ್ಟಿತು. ಜೀಪ್ ನೊಳಗಿದ್ದ ಎಸ್ಪಿ, ' ಏ ಯಾರೊ ನೀನು ಇಷ್ಟೊತ್ನಲ್ಲಿ ಎಲ್ಲಿಗೆ ಹೋಗ್ತಾ ಇದ್ದೀಯಾ, ' ದರ್ಪದಿಂದ ಕೇಳಿದನು. 'ಸರ್ ನಾನು ಇದೆ ಊರಿನವನೆ, ಇಲ್ಲೆ ಪಕ್ಕದೂರಿನಲ್ಲಿ ನಮ್ಮ ಮಾವನವರ ಆರೋಗ್ಯ ಸರಿಯಾಗಿರಲಿಲ್ಲ ಅವರನ್ನು ಮಾತನಾಡಿಸಿಕೊಂಡು ಬರಲು ಹೋಗಿದ್ದೆ,' ಭಯದಿಂದಲೆ ಒಂದೊಂದೆ ಮಾತುಗಳನ್ನಾಡಿದನು ಅಖಿಲನು ಹೆಗಲಿಗೆ ಹಾಕಿದ ಬ್ಯಾಗನ್ನು ಗಟ್ಟಿಯಾಗಿ ಹಿಡಿದುಕೊಂಡು, ಹೆಜ್ಜೆಗಳನ್ನು ಹಿಂದಕ್ಕೆ ಇಡುತ್ತಾ ' ಹೌದಾ..? ಅದೇನು ಹಣೆಮೇಲೆ ಗಾಯ '
ಅನುಮಾನದಿಂದ ಕೇಳಿದನು ಎಸ್ಪಿ, 'ನಮ್ಮ ಮಾವನ ಮಗ ಮತ್ತು ನಾನು ಬೈಕ ತಗೊಂಡು ಬರುತ್ತಿರುವಾಗ ಒಂದು ನಾಯಿ ಅಡ್ಡ ಬಂದು ಬೈಕ್ ಗಾಲಿಗೆ ಸಿಕ್ಕು ಕೆಳಗೆ ಬಿದ್ದು ಬಿಟ್ಟೆವು ಸರ್, ಆಗ ಆದ ಗಾಯವಿದು.' ಎಂದನು ಸ್ವಲ್ಪ ಧೈರ್ಯದಿಂದ
' ಮತ್ತೇಲ್ಲಿ ಅವನು..?'
'ಊರಲ್ಲಿ ಕರ್ಪ್ಯೂ ಇದೆ ಅಂತ ಗೊತ್ತಾಯಿತು, ಇಲ್ಲೆ ಬಂಟನೂರ್ ಕ್ರಾಸ್ ಗೆ ಇಳಿಸಿ ಹೊರಟು ಹೋದನು ಸರ್'
'ಅದು ಸರಿ ಇಷ್ಟೊತ್ನಲ್ಲಿ ಬರೊ ಅವಶ್ಯಕತೆ ಏನಿತ್ತು, ಬೆಳಿಗ್ಗೆ ಬರಬಹುದಿತ್ತಲ್ಲ'
' ಮನೆಯಲ್ಲಿ ತಾಯಿಗೆ ಹುಷಾರಿಲ್ಲ ಸರ್, ಒಬ್ಬಳೆ ಇದ್ದಾಳೆ, ನಾನು ಒಬ್ಬನೆ ಮಗ, ಊರಲ್ಲಿ ಹೀಗಾಗಿದ್ದಕ್ಕೆ ನಾನು ಈ ನಡು ರಾತ್ರಿಯಲ್ಲೆ ಬರಬೇಕಾಯಿತು ಸರ್'
' ಹಾಗಾ, ಎಲ್ಲಿ ಮನೆ?'
'ಕ್ಯಾನ್ಸರ್ ಆಸ್ಪತ್ರೆಯ ಹಿಂದುಗಡೆ ಒಂದು ಕಾಲೋನಿ ಇದೆಯಲ್ಲ ಸರ್ ಅಲ್ಲೆ'
' ಓ ಹೌದಾ ಬಹಳ ದೂರವಾಯ್ತಲ್ಲಯ್ಯ ಅದು'
'ಹೌದು ಸರ್'
' ಸರಿ ಜೀಪ್ ಹತ್ತು'
ಮೈ ನರನಾಡಿಗಳೆಲ್ಲ ಸಿಡಿದು ಹೋದಂತಹ ಅನುಭವ ಆಗ ಅಖಿಲನಿಗೆ, ' ಯಾಕೆ ಸರ್' ತೊದಲುತ್ತಲೆ ಕೇಳದಿನು
' ಹೆದ್ರಕೊಬೇಡ, ನಾನು ಅಲ್ಲೆ ರೌಂಡ್ಸಗೆ ಹೊಂಟಿದ್ದೀನಿ, ನಿನ್ನನ್ನು ಅದರ ಸಮೀಪದಲ್ಲಿ ಡ್ರಾಪ್ ಮಾಡಿ ಹೋಗುವೆ'
' ಬದುಕಿತು ಬಡಜೀವ' ಎಂದು ಸಮಾಧಾನಗೊಂಡನು ಎಸ್ಪಿಯ ಮಾತಿನಿಂದ. ಜೀಪನ್ನು ಹತ್ತಿ ಕುಳಿತುಕೊಂಡು, ಒಳಗೆಲ್ಲ ನೋಡಿದನು ಇಬ್ಬರು ಪಿ.ಸಿ.ಗಳು ಗನ್ ಸಹಿತ, ಒಬ್ಬ ಡ್ರೈವರ್ ಹಾಗೂ ಎಸ್ಪಿ ಇದ್ದರು, ಜೀಪ್ ಟರ್ನ ತೆಗೆದುಕೊಂಡು ಊರಲ್ಲಿ ಹೊರಟಿತು. ಊರೊಳಗೆ ಸ್ವಲ್ಪ ದೂರ ಬಂದಾಗ ಜೀಪ್ ನಲ್ಲಿಟ್ಟಿದ್ದ ವಾಕಿಟಾಕಿಗೆ ಜೀವ ಬಂದಿತ್ತಾಗ, ಎಸ್ಪಿ ಅದನ್ನೇತ್ತಿಕೊಂಡು ಮಾತನಾಡಲಾರಂಬಿಸಿದರು. ' ಓವರ್, ಓವರ್, ಹ್ಞಾಂ ಸರ್ ಬೆಳಿಗ್ಗೆಯಿಂದ ಟ್ರ್ಯಾಪ್ ಮಾಡಿದ್ದೀವಿ ಸರ್, ಸಿಸಿ ಟಿವಿಯಲ್ಲಿ ಅವರ ಮುಖಗಳು ಅಷ್ಟೊಂದು ಸರಿಯಾಗಿ ಕಾಣುತ್ತಿಲ್ಲ ಸರ್, ಅದು ಅಲ್ಲದೆ ಈ ಕೆಲಸಕ್ಕೆ ಅವನು ಹೊಸಬನಂತಿದ್ದಾನೆ, ನಮ್ಮ ರೀಕಾರ್ಡನಲ್ಲಿ ಯಾವುದೆ ರೀತಿಯ ಸುಳಿವುಗಳಿಲ್ಲ ಕಳ್ಳನ ಬಗ್ಗೆ ಓವರ್..ಓವರ್..' ಎಸ್ಪಿ ಮಾತಾನಾಡುತ್ತಿದ್ದದ್ದು ತಾವು ಮಾಡಿದ ಕಳ್ಳತನದ ಬಗ್ಗೆ ಎಂಬುದು ಗೊತ್ತಾಗಿಬಿಟ್ಟಿತು ಅಖಿಲನಿಗೆ, ಮೈಯೆಲ್ಲಾ ಬೆವೆತು ನೀರು ನೀರಾಗಿ ಬಿಟ್ಟನು, ತನ್ನೊಳಗಿನ ಭಯವನ್ನು ತೋರ್ಪಡಿಸಿಕೊಳ್ಳದೆ, 'ಎಷ್ಟೊಂದು ಸೆಖೆ ಸರ್, ಸ್ವಲ್ಪ ಕುಡಿಯೊದಿಕ್ಕೆ ನೀರ್ ಇದ್ರೆ ಕೊಡ್ತೀರಾ,? ' ಎದುರಿಗೆ ಕುಳಿತಿದ್ದ ಕಾನ್ಸಟೇಬಲ್ ಹತ್ತಿರ ನೀರನ್ನು ಕೇಳಿದನು.
ಕಾಲ ಬುಡದಲ್ಲಿ ಇಟ್ಟುಕೊಂಡಿದ್ದ ನೀರಿನ ಬಾಟಲಿಯನ್ನು ಅವನತ್ತ ಕೊಟ್ಟನು ಕಾನ್ಸಟೇಬಲ್ನು, ಒಂದೆ ಸಲಕ್ಕೆ ಗಟಗಟನೆ ಬಾಟಲಿಯೊಳಗಿನ ನೀರನ್ನೆಲ್ಲ ಖಾಲಿ ಮಾಡಿಬಿಟ್ಟು, ಖಾಲಿ ಬಾಟಲಿಯನ್ನು ಪಿಸಿ ಕೈಯೊಳಗೆ ಕೊಟ್ಟು ಕಣ್ಮುಚ್ಚಿಕೊಂಡು ಕುಳಿತುಕೊಂಡನಾದರು, ಎಲ್ಲಿ ಇವರು ನನ್ನ ಮನೆಗೆ ಬಂದು ಎಲ್ಲವನ್ನು ವಿಚಾರಿಸಿದರೆ, ಕಳ್ಳತನದೊಂದಿಗೆ ಕೊಲೆಯ ಅಪವಾದನೆ ಮೇಲೆ ಪರಪ್ಪನ ಅಗ್ರಹಾರ ಗ್ಯಾರಂಟಿ' ಮನಸ್ಸಿನಲ್ಲಿ ಮಾತನಾಡಿಕೊಳ್ಳುತ್ತಲೆ ಕುಡಿದ ನೀರೆಲ್ಲ ಬೆವರಿನ ರೂಪದಲ್ಲಿ ಹೊರಗೆ ಕಿತ್ತು ಬರಲಾರಂಭಿಸಿತು, ಅಖಿಲನ ಬೆವರಿಕೆಯನ್ನು ಕಂಡ ಪಿಸಿ ' ಎಲ್ಲಿ ನಿನ್ನ ಆಧಾರ ಕಾರ್ಡ ಅಥವಾ ಡ್ರೈವಿಂಗ್ ಲೈಸೆನ್ಸ ಏನಾದರು ಒಂದು ಕೊಡಿಲ್ಲಿ ನೋಡೋಣ' ಎಂದು ಕೇಳಿದಾಗ ಅಖಿಲನಿಗೆ ಕೊರಳಿಗೆ ಯಾರೊ ಹಗ್ಗ ಹಾಕಿ ಬಿಗಿದು ಎಳೆಯುವಂತಹ ಅನುಭವವಾಯಿತು. ' ಹ್ಞಾಂ, ಸರ್ ' ಎಂದು ಪ್ಯಾಂಟಿನ ಹಿಂಬದಿ ಜೇಬಿಗೆ ಕೈ ಹಾಕುವ ಹೊತ್ತಿಗೆ ವಾಕಿಟಾಕಿ ಮತ್ತೆ ಮಾತನಾಡಲಾರಂಭಿಸಿತು, ಎಸ್ಪಿ ಮಾತನಾಡಿ ಜೀಪನ್ನು ರಸ್ತೆ ಮದ್ಯದಲ್ಲಿ ನಿಲ್ಲಿಸಿ, ' ನೋಡ್ರಿ ಆ ದುರ್ಗಾ ಸರ್ಕಲ್ ಲ್ಲಿ ಯಾರೊ ನಾಲ್ಕು ಜನ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರಂತೆ, ಬೇಗನೆ ಗಾಡಿಯನ್ನು ಆ ಕಡೆ ತಿರುಗಿಸು,' ಎಂದು ಅವಸರಿಸುತ್ತಾ, ಅಖಿಲನನ್ನು ದಾರಿಯ ಮದ್ಯದಲ್ಲಿ ಇಳಿಸಿ ಹೊರಟು ಹೋದರು, ನೆಮ್ಮದಿಯ ಉಸಿರನ್ನು ದೀರ್ಘವಾಗಿ ಒಳಗೆಳೆದುಕೊಂಡು ಒಂದೆ ಓಟದಲ್ಲಿ ಆಸ್ಪತ್ರೆಯತ್ತ ಓಟಕ್ಕಿತ್ತನು.
ಆಸ್ಪತ್ರೆಯ ಕ್ಯಾಷ್ ಕೌಂಟರನ ಮುಂದೆ ಬಂದು ನಿಂತು ಒಂದೆ ಸಮನೆ ಎದುಸಿರನ್ನು ಬಿಡಲಾರಂಭಿಸಿದನು, ಓಡಿ ಬಂದ ರಭಸಕ್ಕೆ ಮೈ ತುಂಬಾ ಉಕ್ಕಿದ ಬೇವರು ಮೈ ಮೇಲಿನ ಬಟ್ಟೆಗಳನ್ನೆಲ್ಲ ತೋಯಿಸಿಬಿಟ್ಟಿತ್ತು. ಎದೆಯ ಮೇಲಿನ ಎರಡು ಗುಂಡಿಗಳನ್ನು ಬಿಚ್ಚಿ, ಮೇಲೆ ಹಾಕಿದ ಫ್ಯಾನಿನ ಗಾಳಿಗೆ ಎದೆಯೊಡ್ಡಿ ನಿಂತುಕೊಂಡನು. ಕ್ಯಾಷ್ ಕೌಂಟರ್ ನ ನರ್ಸು ಮಲಗಿಕೊಂಡಿದ್ದಳು, ಸ್ವಲ್ಪ ಸುಧಾರಿಸಿಕೊಂಡ ಅಖಿಲನು ಕೌಂಟರ್ ಹತ್ತಿರ ಬಂದು, ನರ್ಸನ್ನು ಎಬ್ಬಿಸಿದನು. ನಿದ್ರೆ ಮಂಪರಿನಲ್ಲಿ ಕಣ್ಬಿಟ್ಟ ನರ್ಸ್ಸು, ಸಮಯವನ್ನು ನೋಡಿಕೊಂಡಳು ಒಂದು ಮೂವತ್ತೈದೆಂದು ತೋರಿಸುತ್ತಿತ್ತು, 'ಏನ್ರೀ ಅದು ಇಷ್ಟೊತ್ನಲ್ಲಿ,'
' ಸಿಸ್ಟರ್, ನನ್ನ ತಾಯಿಗೆ ಬೆಳಿಗ್ಗೆನೆ ಆಪರೇಷನ್ ಅಗಬೇಕಿದೆ ಅದಕ್ಕೆ ಹಣವನ್ನು ತಂದಿರುವೆ ಕಟ್ಟಲಿಕ್ಕೆ, ಸ್ವಲ್ಪ ಡಾಕ್ಟರ್ ಗೆ ತಾವು ಕೇಳಿ ಹೇಳುತ್ತೀರಾ' ಎದುಸಿರನ್ನು ಬಿಡುತ್ತಾ, ಉದ್ವೇಗದಿಂದ ಕೇಳಿದನು ಅಖಿಲನು.
' ಇಷ್ಟೊತ್ನಲ್ಲಾ, ಅಗೋದಿಲ್ಲ ರೀ, ಬೇಕಿದ್ರೆ ನೈಟ್ ಶಿಪ್ಟ ಡಾಕ್ಟರ್ ಇದ್ದಾರೆ, ಅವರ್ಹತ್ರ ಕೇಳಿಕೊಂಡು ಬನ್ನಿ, ದೊಡ್ಡ ಡಾಕ್ಟರ್ ಬರೋದು ಬೆಳಿಗ್ಗೆ ಆರು ಗಂಟೆಯ ರೌಂಡಿಗೆ, ಅಲ್ಲಿಯವರೆಗೂ ಅವರನ್ನು ಡಿಸ್ಟರ್ಬ್ ಮಾಡೊ ಹಾಗಿಲ್ಲ,' ಸ್ವಲ್ಪ ಸಿಡುಕಿನಿಂದಲೆ ಹೇಳಿದಳು ನರ್ಸು
'ಹಾಗೆಲ್ಲ ಹೇಳ್ಬೇಡಿ ಸಿಸ್ಟರ್, ನಮ್ಮ ತಾಯಿ ತುಂಬ ಸಿರಿಯಸ್ ಆಗಿದ್ದಾರೆ ಅದಕ್ಕೆ' ಎರಡು ಕೈಗಳನ್ನು ಮುಗಿಯುತ್ತಾ,
' ಸರಿ ಪೇಷಂಟ ಹೆಸರನ್ನು ಹೇಳಿ ನಾನು ವಿಚಾರಿಸುತ್ತೇನೆ'
ಅಖಿಲನು ತನ್ನ ತಾಯಿಯ ಹೆಸರನ್ನು ಹೇಳಿದನು.
' ಓಹ್ ಇವರು ನಿಮ್ಮ ತಾಯಿಯೆ'
' ಹೌದು ಯಾಕೆ ಏನಾಯಿತು?'
' ಕ್ಷಮಿಸಿ ಸರ್, ನಿನ್ನೆ ಸಂಜೆ ನಾಲ್ಕು ಗಂಟೆಗೆ ಬಹಳ ಸಿರಿಯಸ್ ಅಗಿತ್ತು, ಮಗಾ, ಮಗ, ಅನ್ನುತ್ತಿದ್ದರು, ನಿಮ್ಮ ಮೊಬೈಲ್ಗೆ ಬಹಳಷ್ಟು ಪ್ರಯತ್ನಪಟ್ಟೆವು ಕರೆಮಾಡಲು, ನಾಟ್ ರಿಚೇಬಲ್ ಅಂತಾ ಬರ್ತಿತ್ತು, ಅವರು ನಾಲ್ಕುವರೆ ಸುಮಾರಿಗೆ ಹೋಗಿಬಿಟ್ಟರು. ಅವರ ಹೆಣವನ್ನು ಮಾರ್ಚುರಿಯಲ್ಲಿ ಇಡಲಾಗಿದೆ, ಉಳಿದ ಬಿಲ್ಲನ್ನು ಕಟ್ಟಿ ಬಾಡಿನ ತೆಗೆದುಕೊಂಡು ಹೋಗಿ,' ನರ್ಸು ಒಂದೆ ಸಮನೆ ಹೇಳುತ್ತಲೆ ಇದ್ದಳು ಉಸಿರನ್ನು ಬಿಡದೆ, ಮಾತುಗಳನ್ನು ಕೇಳುತ್ತಿದ್ದ ಅಖಿಲನ ಕಾಲುಗಳಲ್ಲಿ ನಡುಕ ಬಂದಂತಾಗಿ, ಬಾಡಿನ ತೆಗೆದುಕೊಂಡು ಹೋಗಿ ಎಂಬ ಮಾತನ್ನು ಕೇಳುತ್ತಲೆ ತಲೆ ಸುತ್ತು ಬಂದಂತವನಾಗಿ ಧಪ್ಪನೆ ಬಿದ್ದು ಬಿಟ್ಟನು. ಕೌಂಟರ್ ನಿಂದ ಹೊರಬಂದ ನರ್ಸು, ಅಖಿಲನ ಮುಖದ ಮೇಲೆ ನೀರನ್ನು ಚಿಮುಕಿಸಿ ಎಚ್ಚರಿಸಿದಳು, ಹತ್ತು ನಿಮಿಷ ಸುಧಾರಿಸಿಕೊಂಡ ಅಖಿಲನು ತಾಯಿಯು ಇನ್ನಿಲ್ಲ ಎಂಬ ವಿಷಯವು ಅತಿಯಾಗಿ ಬಾಧಿಸಿ ಆಸ್ಪತ್ರೆಯ ನೆಲದ ಮ್ಯಾಲೆ ಬಿದ್ದು ಅಳುತ್ತಾ, ಹೊರಳಾಡುತ್ತಾ, ಚಿರಾಡತೊಡಗಿದನು. ಅಖಿಲನು ಮಾಡುವ ರೀತಿಯನದನು ನೋಡಿ ಹೆದರಿದ ನರ್ಸು ಒಳಗಡೆ ಹೋಗಿ ಇಬ್ಬರು ವಾರ್ಡ್ ಬಾಯ್ ಗಳನ್ನು ಕರೆದುಕೊಂಡು ಬಂದಳು, ಅವರಿಬ್ಬರು ಬಂದವರೆ, ಅಖಿಲನ ಕೈಗಳನ್ನು ಹಿಡಿದೆತ್ತಿ ಕುಳ್ಳರಿಸಿದರು. ಕ್ಷಣಕಾಲ ಅತ್ತು ಅತ್ತು ಸುಮ್ಮನಾದ ಅಖಿಲನು ಎದ್ದು, ಬ್ಯಾಗನಿಂದ ಹಣನ್ನು ತೆಗೆದು ಬಿಲ್ಲನ್ನು ತುಂಬಿಕೊಂಡು, ಹೆಣವನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳಲಾಗದು ಎಂದ ಸಿಸ್ಟರ್ ನ ಮಾತುಗಳನ್ನು ಕೇಳಿ, ಒಂದು ಅಂಬುಲೆನ್ಸ ಮಾಡಿಕೊಂಡು, ಸ್ಮಶಾನದತ್ತ ಹೊರಡಲು ರೆಡಿಯಾದನು, ಶವಾಗಾರದಲ್ಲಿ ಇಟ್ಟಿದ್ದ ತಾಯಿಯ ಹೆಣವನ್ನು ತಾನೆ ಎರಡು ತೋಳುಗಳಿಂದ ಹೊತ್ತುಕೊಂಡು ಬಂದು ಅಂಬ್ಯುಲೆನ್ಸ್ ಹಾಕಿ, ತಾಯಿಯ ಶವದೇದುರು ಅಳುತ್ತಾ ಕುಳಿತುಕೊಂಡನು. ವಾಹನವು ಸ್ಮಶಾನದತ್ತ ಪಯಣಿಸಿತು.
ಶವದ ಮುಂದೆ ಕುಳಿತುಕೊಂಡು ಅತ್ತು ಅತ್ತು ಸುಸ್ತಾದ ಅಖಿಲನು ಮಗ್ಗುಲಲ್ಲಿದ್ದ ಬ್ಯಾಗನತ್ತ ಕಣ್ಣು ಹಾಸಿದನು, ಆಸ್ಪತ್ರೆಯ ಬಿಲ್ಲನ್ನು ತುಂಬುವ ಅವಸರದಲ್ಲಿ, ಒಂದು ಎರಡು ಸಾವಿರ ನೋಟಿನ ಅಂಚು ಕಡೆಗೆ ಬಂದಿತ್ತು. ಬಲಗೈ ಅಂಗೈಯಿಂದ ಹಣೆಯನ್ನು ಚಚ್ಚಿಕೊಳ್ಳುತ್ತಾ, ' ಯಾರನ್ನು ಉಳಿಸಿಕೊಳ್ಳಬೇಕೆಂದು ಒಂದು ಜೀವ, ಒಂದು ಕುಟುಂಬವನ್ನೆ ಕೊಂದು ನಿನ್ನನ್ನು ಹೊತ್ತು ತಂದೇನೊ.. ನೀನು ನಿರುಪಯುಕ್ತವಾಗಿಬಿಟ್ಟೆಯಲ್ಲ. ನಿನ್ನಿಂದ ಎಲ್ಲವನ್ನು ಪಡೆದುಕೊಳ್ಳಬಲ್ಲೆನೆಂದುಕೊಂಡಿದ್ದೆ. ಇಲ್ಲ..ಅದು ನನ್ನ ತಪ್ಪು ನಿರ್ಣಯ. ಹಣದಿಂದಲೆ ಎಲ್ಲವನ್ನು ಕೊಂಡುಕೊಳ್ಳುವ ಹಾಗಿದ್ದರೆ ಇವತ್ತು ನಾನು ಹೀಗೆ ಅಳುತ್ತಾ ಕೂರುವ ಪ್ರಮೇಯೆ ಬರುತ್ತಿರಲಿಲ್ಲ, ನಿನ್ನನ್ನೆನೊ ಪಡೆದೆ, ಹೇಗೆ..? ಒಂದು ಮಾತೃ ಹೃದಯದ ದೇವಮಾನವನ್ನು ಕೊಂದು. ಪಡೆದುಕೊಂಡದ್ದಾದರು ಏನು..? ನೋವು.. ನಿನ್ನನ್ನು ಎಷ್ಟು ಸುರಿದರು ಮರಳಿ ಕರೆತರಲಾರದ ಲೋಕಕೆ ಹೋದ ತಾಯಿಯ ಜೀವವನ್ನು. ನಿನ್ನ ಹಿಂದೆ ಬಿದ್ದು ನನ್ನ ತಾಯಿಯ ಬಾಯಿಗೆ ಕೊನೆ ಘಳಿಗೆಯಲ್ಲಿ ಎರಡು ಹನಿ ನೀರನ್ನು ಹಾಕದಂತಾಗಿ ಹೋದೆ, ಆದರೆ ಒಬ್ಬನ ಬಾಯಿಗೆ ವಿಷವನ್ನು ಹಾಕಲು ಅವಕಾಶ ಮಾಡಿಕೊಟ್ಟೆ, ಓ ಹಣವೆ...ನಿನೇಷ್ಟೊಂದು ಅವಶ್ಯವೊ...ಅಷ್ಟೇ ವಿನಾಶಕಾರಿ, ನಿನೊಂದು ಬೆಂಕಿ.. ಅರಿವಿನಿಂದ ಹಚ್ಚಿಕೊಂಡರೆ ದೀಪ, ಇಲ್ಲವಾದರೆ ಉರಿದು ಸುಟ್ಟು ಬೂದಿಮಾಡಿಬಿಡುವ ಕಾಳ್ಗಿಚ್ಚು. ಏನು ಮಾಡಲೀಗ ನಿನ್ನನ್ನು ಕಟ್ಟಿಕೊಂಡು ಸೇರಗಿನಲ್ಲಿ ಕಟ್ಟಿಕೊಂಡ ಕೆಂಡದ ಹಾಗಾಗಿದೆಯಲ್ಲ ನನ್ನ ಪರಿಸ್ಥಿತಿ,' ಎಂದು ಅಂದುಕೊಳ್ಳುತ್ತಿರುವಾಗಲೆ, ಅಂಬ್ಯುಲೆನ್ಸ ಮುಖ್ಯ ರಸ್ತೆಯನ್ನು ಬಿಟ್ಟು ಸ್ಮಶಾನದ ದಾರಿಯನ್ನು ಹಿಡಿದುಬಂದು ಸ್ಮಶಾನದಲ್ಲಿ ಬಂದು ಗಾಡಿಯನ್ನು ನಿಲ್ಲಿಸಿ ಅಖಿಲ್ ಮತ್ತು ಶವವನ್ನು ಇಳಿಸಿ ಹೊರಟು ಹೋಯಿತು.
ಶವದ ಮುಂದೆ ಕುಳಿತಿದ್ದ ಅಖಿಲನು ಕತ್ತೆತ್ತಿ ನೋಡಿದನು ರಮೇಶನ ಹೆಣವು ಸುಟ್ಟು ನಿಗಿ ನಿಗಿ ಕೆಂಡವು ಝಗಮಗಿಸುತ್ತಿತ್ತು. ಈಗೇನು ಮಾಡಲಿ ಅಂತ್ಯ ಸಂಸ್ಕಾರಕ್ಕೆ ಕಟ್ಟಿಗೆಯಿಲ್ಲವಲ್ಲ, ಇಷ್ಟೊತ್ನಲ್ಲಿ ಯಾರನ್ನು ಕೇಳುವುದು ಎಲ್ಲಿಯಂತ ಅಲೆದಾಡುವುದು. ಬೆಳಗಾಗುವ ತನಕ ಇಲ್ಲೆ ಇರಲೆ, ಬೇಡ ಬೇಡ ಬೆಳಗಾಗುತ್ತಲೆ ನಾನು ರಮೇಶರ ಮಗಳ ಆಪರೇಷನ್ ಗಾಗಿ ಈ ಅಳಿದುಳಿದ ಹಣವನ್ನು ಕೊಟ್ಟು ನಾನು ದೇಶಾಂತರ ಹೊರಟುಬಿಡಬೇಕು, ಆವಾಗಲೆ ಮನಸ್ಸಿಗೆ ನೆಮ್ಮದಿ, ನನಗೆ ಉಪಯೋಗವಾಗದ ಈ ಹಣ ಅವರ ಮಗಳ ಚಿಕಿತ್ಸೆಗಾದರೂ ಉಪಯೋಗವಾಗಲಿ, ಎಂದು ಮನಸ್ಸಿನಲ್ಲಿ ಗಟ್ಟಿ ನಿರ್ಧಾರವನ್ನು ಮಾಡಿಕೊಂಡು ಶವವನ್ನು ಎತ್ತಿ ದೇವಾಲಯದ ಅಂಗಳದಲ್ಲಿ ಹಾಕಿ, ಮುಖ್ಯ ರಸ್ತೆಗೆ ಬಂದು ದಾರಿಯ ಪಕ್ಕದಲ್ಲಿ ಇದ್ದ ಅಂಗಡಿಯವರನ್ನು ಎಬ್ಬಿಸಿ ಅವರಿಂದ ಗುದ್ದಲಿ ಸಲಿಕೆಯನ್ನು ಪಡೆದುಕೊಂಡು ಬಂದು, ಗುಂಡಿಯನ್ನು ತೋಡಿ, ಅದರಲ್ಲಿ ತಾಯಿಯನ್ನು ಮಲಗಿಸಿ
ಮಣ್ಣನ್ನು ಮುಚ್ಚಿ ಕೈ ಮುಗಿದು ಅಳುತ್ತಾ ಕುಳಿತುಕೊಂಡನು.
ಆಗಲೆ ತೆಳ್ಳಗೆ ಬೆಳಕು ಹರಿಯಲು ಪ್ರಾರಂಭಿಸಿತು, ಮೆಲ್ಲನೆದ್ದು ಬ್ಯಾಗನ್ನು ಹೆಗಲಿಗೆ ಹಾಕಿಕೊಂಡು ಸಲಿಕೆ ಗುದ್ದಲಿಯನ್ನು ಹೊತ್ತುಕೊಂಡು ಬಂದು ಅಂಗಡಿಯ ಹೊರಗೆ ಹಾಕಿದ್ದ ಟೇಬಲ್ ಮೇಲೆ ಕುಳಿತುಕೊಂಡು ಮೆಲ್ಲಗೆ ನಿದ್ರಾ ದೇವಿಯ ಮಡಿಲಿಗೆ ಜಾರಿದನು.