ರಮೇಶ ಎಂದಿನಂತೆಯೆ ಆ ದಿನವು ಬಂದು ಪಾರ್ಕಿನ ಅಂಚಿನಲ್ಲಿರುವ ಕೊನೆಯ ಬೆಂಚಿನಲ್ಲಿ ಕುಳಿತು, ಓದಲಿಕ್ಕೆಂದು ತಂದಿದ್ದ ಆ ದಿನದ ಸುದ್ದಿಯನ್ನು ತಿಳಿಸುವ ಸಂಜೆ ಪತ್ರಿಕೆಯನ್ನು ಪಕ್ಕದಲ್ಲಿಟ್ಟು ತನ್ನ ಎಡಗಡೆಕಡೆಗೊಮ್ಮೆ ನೋಡಿದ, ಅನತಿ ದೂರದಲ್ಲಿ, ಗಿಡದ ಕೆಳಗೆ ಹಾಕಿದ್ದ ಬೆಂಚಿನ ಮೇಲೆ, ಕಳೆದೆರಡು ತಿಂಗಳಿಂದ ಒಬ್ಬ ವ್ಯಕ್ತಿ ಬಂದು ಕುಳಿತುಕೊಳ್ಳುವುದು, ತಾನು ಹೊರಡುವ ಒಂದೈದು ನಿಮಿಷದ ಮೊದಲು ಅವನು ಪಾರ್ಕನ್ನು ಬಿಟ್ಟು ಹೋಗುತ್ತಿದ್ದುದನ್ನು ಗಮನಿಸಿದ್ದನು. ಇವತ್ತು ನೋಡಿದಾಗ ಆ ಆಕೃತಿ ತನಗಿಂತ ಮುಂಚೆಯೆ ಬಂದು ಕುಳಿತುರುವುದನ್ನು ಕಂಡು, ನಿಟ್ಟುಸಿರೊಂದನು ಬಿಟ್ಟು ಕಣ್ಮುಚ್ಚಿದನು, ಹತ್ತು ನಿಮಿಷದ ನಂತರ ಯಾರೊ ಭುಜವನ್ನು ತಟ್ಟಿ ಎಬ್ಬಿಸಿದಂತಾಯಿತು, ಮೈ ಮೇಲೆ ಹಲ್ಲಿ ಬಿದ್ದವರಂತೆ ತಟ್ಟನೆ ಕಣ್ಬಿಟ್ಟು ನೋಡಿದನು, ಅತ್ತ ಕಡೆಯ ಬೆಂಚಿನ ಆಕೃತಿ ಎದುರಿಗೆ ಬಂದು ನಿಂತಿತ್ತು. ' ಕ್ಷಮಿಸಿ, ನಿಮಗೆ ತೊಂದರೆಯನ್ನು ಕೊಡುತ್ತಿರುವುದಕ್ಕೆ, ನನ್ನ ಹೆಸರು ಅಖಿಲ್ ಅಂತ, ತಮ್ಮ ಹೆಸರು ? ಅಭ್ಯಂತರವಿಲ್ಲದಿದ್ದರೆ,' ಎನ್ನುತ್ತಾ ಶೇಖಹ್ಯಾಂಡ ನೀಡಲು ಕೈಯನ್ನು ಮುಂದೆ ಚಾಚಿದ. 'ರಮೇಶ ಅಂತ, ಬನ್ನಿ ಕುಳಿತುಕೊಳ್ಳಿ' ಎನ್ನುತ್ತಾ ಪಕ್ಕಕ್ಕೆ ಸರಿದು ಕುಳಿತನು. ಕೈಯನ್ನು ಕೊಡದೆ.
'ಮತ್ತೊಮ್ಮೆ ತಮ್ಮಲ್ಲಿ ಕ್ಷಮೆಯನ್ನು ಕೇಳುತ್ತಾ, ನೇರವಾಗಿ ವಿಷಯಕ್ಕೆ ಬಂದು ಬಿಡುತ್ತೇನೆ, ಸರಿನಾ?'
ಹಣೆಯ ಹುಬ್ಬುಗಳನ್ನು ಗಂಟು ಹಾಕಿಕೊಂಡ ರಮೇಶನು
'ನನ್ಹತ್ರ ಇವನಿಗೇನು ಕೆಲಸ' ಎಂದು ಮನದಲ್ಲೆ ಲೆಕ್ಕಿಸುತ್ತ,
:ಹ್ಞೂಂ, ಪರ್ವಾಗಿಲ್ಲ ಹೇಳಿ'
'ನಾನು ನಿಮ್ಮನ್ನು ಒಂದು ವಾರದಿಂದ ಗಮನಿಸ್ತಾ ಇದ್ದೀನಿ, ಒಬ್ಬರೆ ನನ್ನ ಹಾಗೆ ಬಂದು ಏನೊ ಗಾಢವಾಗಿ ವಿಚಾರ ಮಾಡುವರಂತೆ ಕುಳಿತುಕೊಂಡು, ಹೊತ್ತಾದ ಮೇಲೆ ಈ ಪಾರ್ಕನಿಂದ ಭಾರವಾದ ಹೆಜ್ಜೆಗಳೊಂದಿಗೆ ನಡೆದು ಹೋಗುತ್ತಿರಿ, ಯಾಕೆ ಮನೆ ಅಥವಾ ಆಫೀಸ್ ನಲ್ಲಿ ಏನಾದರು ಸಮಸ್ಯೆನಾ.?'
ಅವನನ್ನೆ ದಿಟ್ಟಿಸಿ ನೋಡಿದ ರಮೇಶ, ಅಂತ ಗಟ್ಟಿ ಆಳೇನು ಅಲ್ಲ, ವಯಸ್ಸಿನಲ್ಲಿ ಎರಡ್ಮೂರು ವರ್ಷ ನನಗಿಂತಲು ಕಡಿಮೆ ಇರಬಹುದು. ಆದರೂ ವಯಸ್ಸಿಗೆ ಮೀರಿದ ಜಾಣತನ. ಇವನೇಕೆ ನನ್ನ ಬಗ್ಗೆ ಇಷ್ಟೊಂದು ಕಾಳಜಿಯನ್ನು ವಹಿಸಿ ಕೇಳುತ್ತಿರುವನು ಎಂದು ಮನದಲ್ಲೆ ಅಂದುಕೊಳ್ಳುತ್ತಾ, ಮತ್ತೆ ಹಣೆಯ ಹುಬ್ಬುಗಳನ್ನು ಗಂಟಿಕ್ಕಿ ಅಖಿಲ್ ನನ್ನು ದುರುಗುಟ್ಟುತ್ತಾ ನೋಡತೋಡಗಿದನು.
ರಮೇಶನ ನೋಟ ಮತ್ತು ಅವನು ಮೌನವಾಗಿರುವುದನ್ನು ಕಂಡು, ಅಖಿಲ್ ಮತ್ತೆ ತಾನೆ ಮಾತನಾಡಲಾರಂಭಿಸಿದನು. ' ಏನಪ್ಪಾ ಇವನು ಗುರುತು ಪರಿಚಯ ಇಲ್ದೇನೆ ಬಂದು ಏನೇನೊ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ ಎಂದುಕೊಳ್ಳಬೇಡಿ, ನೋಡಿ ಸರ್ ಸುಖಾನ ಹಂಚಿಕೊಂಡ್ರೆ ಹೆಚ್ಚಾಗುತ್ತದಂತೆ, ದುಃಖಾನ ಹಂಚಿಕೊಂಡ್ರೆ ಕಡಿಮೆಯಾಗುತ್ತದಂತೆ, ಆದ್ದರಿಂದ ಮೊದಲು ನನ್ನ ಮನಸಿನ ದುಃಖಾನ ನಿಮ್ಮ ಮುಂದೆ ಹೇಳ್ಕೊಂಡಬಿಡ್ತೀನಿ, ಹೇಳ್ಲಾ,' ರಮೇಶನ ಮುಖವನ್ನು ತೀಕ್ಷ್ಣವಾಗಿ ನೋಡುತ್ತಾ, ರಮೇಶನಿಗೆ ಒಂಥರಾ ಮಾನಸಿಕ ಹಿಂಸೆಯಾದಂತಾಯಿತಾದರು, 'ಈಗಾರೇಳು ತಿಂಗಳಿಂದ ಯಾರೊಂದಿಗೂ ಮನಸ್ಸು ಬಿಚ್ಚಿ ಮಾತನಾಡದ ಕಾರಣ ಇವನೊಂದಿಗಾದರು ಮಾತಾಡೋಣ, ನೋಡೊಣ ಏನು ಹೇಳುತ್ತಾನೆ ಅಂತಾ ಒಮ್ಮೆ ಕೇಳೊಣ ಬಿಡು' ಎಂದು ಮನದಲ್ಲಿ ಮಾತನಾಡಿಕೊಳ್ಳುತ್ತಾ, 'ಹ್ಞೂಂ..' ಎಂದು ತಲೆಯಾಡಿಸಿದನು.
' ನೋಡಿ ನಾನು ಚಿಕ್ಕವನಿರುವಾಗಲೆ ನನ್ನ ತಂದೆಯವರು ತೀರಿಕೊಂಡರಂತೆ, ಅವರ ಮುಖವನ್ನು ನೋಡಿದ ನೆನಪು ನನಗಿಲ್ಲ, ಗಂಡನ ಮನೆ ಬಿಟ್ಟು ಮರಳಿ ನನ್ನ ತಾಯಿ ತವರಿನ ಮನೆಗೆ ಬಂದರೆ, ಅಲ್ಲಿ ಪಡಬಾರದ ಕಷ್ಟಗಳನ್ನು ಪಟ್ಟು, ಇದೆ ಊರಿನಲ್ಲಿ ನಮ್ಮ ದೂರದ ಸಂಬಂಧಿಕರೊಬ್ಬರಿಗೆ ಮಕ್ಕಳಾಗಿಲ್ಲದ ಕಾರಣ ಅವರು ನಮ್ಮ ತಾಯಿ ಮತ್ತು ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದರಂತೆ, ನಾನಂತು ಆತನನ್ನು ಬಾಯ್ತುಂಬಾ ಅಜ್ಜಾನೆ ಅಂತಾ ಕರಿತಾ ಇದ್ದೆ, ಆತನಿಗೂ ಬಹಳಷ್ಟು ವಯಸ್ಸಾಗಿತ್ತು, ನಮ್ಮ ತಾಯಿ ಕೂಲಿನಾಲಿ ಮಾಡಿ ತಕ್ಕ ಮಟ್ಟಿಗೆ ನನ್ನನು ಓದಿಸಿ, ಒಂದು ಜನರಲ್ ಸ್ಟೋರ್ ಅಂಗಡಿಯಲ್ಲಿ ಕೆಲಸವನ್ನು ಸಿಗುವಂತೆಯೂ ಮಾಡಿದ್ದರು. ಬದುಕಿನ ಬಂಡಿ ಚೆನ್ನಾಗಿಯೆ ನಡೆದಿತ್ತು, ಯಾರ ಕೆಟ್ಟ ದೃಷ್ಟಿ ತಾಗಿತೊ ಗೊತ್ತಿಲ್ಲ, ಈಗ ಆರೇಳು ತಿಂಗಳ ಹಿಂದೆ, ನನ್ನಜ್ಜನು ತೀರಿಹೋದ, ಅವನಿಲ್ಲದ ಮನೆಯಂಗಳ ಎಲ್ಲ ಈಗ ಖಾಲಿ..ಖಾಲಿ. ನನ್ನನು ಎತ್ತಿಯಾಡಿಸಿ, ಅತ್ತಾಗ ರಮಿಸಿ, ನಕ್ಕಾಗ ಹೆಗಲ ಮೇಲೆರಿಸಿಕೊಂಡು, ಗಲೀಜನ್ನು ಮಾಡಿಕೊಂಡಾಗ ನನ್ನ ಹಿಂಬದಿಯನ್ನು ತೊಳೆದು, ಜಳಕ ಮಾಡಿಸಿ ಬಟ್ಟೆಯನ್ನು ಹಾಕುತ್ತಿದ್ದದ್ದು, ಶಾಲೆಯವರೆಗೂ ಬಂದು ನನ್ನನ್ನು ಬಿಟ್ಟು ಬರುತ್ತಿದ್ದದ್ದು, ಕೇಳಿದಾಗ ಒಂದಿಷ್ಟು ಚಿಲ್ಲರೆ ಕಾಸನ್ನು ಜೇಬಿಗೆ ಹಾಕುತ್ತಿದ್ದದ್ದು, ಅವನ ಬಿಳಿ ಮೀಸೆಯನ್ನು ತಿರುವಿ ತಿರುವಿ ಹುರಿಗೊಳಿಸುತ್ತಿದ್ದದ್ದು, ಕೆಲಸದಿಂದ ಬಂದ ಮೇಲೆ ಕರೆದು ತನ್ನ ಪಕ್ಕದಲ್ಲೆ ಕುಳ್ಳರಿಸಿಕೊಂಡು, ಆ ದಿನದ ಎಲ್ಲ ಆಗುಹೋಗುಗಳನ್ನು ಹಂಚಿಕೊಳ್ಳುತ್ತಿದ್ದದ್ದು, ಬದುಕು ಎಷ್ಟೊಂದು ಕಠಿಣ, ಹೇಗೆ ಬದುಕಿ ಬಾಳಬೇಕು ಎನ್ನುವ ಬುದ್ದಿ ಮಾತುಗಳು ಎಲ್ಲವು ಹಸಿಹಸಿ ನೆನಪುಗಳು ಮಾತ್ರ ಈಗ. ಆ ನೆನಪುಗಳ ಸುರುಳಿಯಿಂದ ಹೊರಬರುವ ಮೊದಲೆ ಮತ್ತೊಂದು ಆಘಾತವು ಎದುರಾಗಿದೆ ಈಗ. ಇರುವುದೊಂದು ಚಿಕ್ಕ ಗುಡಿಸಲು, ಚಿಕ್ಕ ಅಡಿಗೆ ಮನೆ ಮತ್ತು ಒಂದು ಕೋಣೆ, ಕುಂದ್ರೊದಿಕ್ಕೇನೊ ಕೊರತೆಯಿಲ್ಲ, ಹಾಗಂತ ಕಾಲು ಚಾಚಿಕೊಂಡು ಮಲಗುವಷ್ಟು ದೊಡ್ಡದೇನು ಇಲ್ಲ. ಇತ್ತೀಚೇಗೆ ಅಂದ್ರೆ ನಾಲ್ಕು ತಿಂಗಳ ಹಿಂದೆ ನಮ್ಮ ತಾಯಿಗೆ ಹುಷಾರಿಲ್ಲದಂತಾಯಿತು. ಅಲ್ಲೆ ಒಂದು ವಾರ ನಮ್ಮ ಮನೆಯ ಹತ್ತಿರ ಇರುವ ಚಿಕ್ಕ ಆಸ್ಪತ್ರೆಯಲ್ಲಿ ತೋರಿಸಿದೆ, ಗುಣವಾಗಲಿಲ್ಲ ಈಗ ಮೂರು ತಿಂಗಳ ಹಿಂದೆ ದೊಡ್ಡಾಸ್ಪತ್ರೆಯಲ್ಲಿ ಅಡ್ಮೀಟ್ ಮಾಡಿರುವೆ ಅವರ ದೇಹವನ್ನು ಸ್ಕ್ಯಾನ್ ಮಾಡಲಾಗಿ, ಎದೆಯಲ್ಲಿ ಸ್ತನ ಕ್ಯಾನ್ಸರ್ ಆಗಿದೆಯಂತೆ, ಅದರ ಆಪರೇಷನ್ ಗೆ ಲಕ್ಷಗಟ್ಟಲೆ ಹಣವು ಬೇಕು. ಈಗ ಕೇವಲ ಔಷಧಿಗಳಿಗಾಗಿಯೆ ಕಂಡ ಕಂಡಲ್ಲಿ ಸಾಲವನ್ನು ಮಾಡಿಬಿಟ್ಟಿರುವೆ, ಕೆಲಸ ಮುಗಿಸಿಕೊಂಡು ಮನೆಯ ಹತ್ತಿರ ಹೋಗಬೇಕೆಂದರೆ ಸಾಲದವರ ಕಾಟ, ಅದಕ್ಕೆ ರಾತ್ರಿ ಆಗುವುವರೆಗೂ ಇಲ್ಲಿಯೆ ಕುಳಿತು, ಕತ್ತಲಾದ ಮೇಲೆ ಮನೆಗೆ ಹೋಗುತ್ತಿರುವೆ, ಬೆಳಿಗ್ಗೆ ಯಾರು ಎದ್ದೇಳದ ಸಮಯದಲ್ಲಿ ಮನೆಯಿಂದ ಹೊರಡುತ್ತೇನೆ, ಕೆಲವು ರಾತ್ರಿಗಳನ್ನು ಆ ಬೆಂಚಿನ ಮೇಲೆ ಕಳೆದಿರುವೆ, ಪಾರ್ಕಿನ ಕಾವಲುಗಾರನ ಕಣ್ತಪ್ಪಿಸಿ. ಸಾಲಗಾರರಿಗೆಲ್ಲ ಈಗ ನಾ ಕೆಲಸ ಮಾಡುತ್ತಿರುವ ಹೊಸ ಅಂಗಡಿಯ ವಿಳಾಸವೊಂದು ಗೊತ್ತಿಲ್ಲ ನನ್ನ ಪುಣ್ಯಕ್ಕೆ. ಹಾಗಂತ ನಾನೇನು ನಿಮ್ಮ ಬಳಿ ಹಣವನ್ನಾಗಲಿ, ಸಹಾಯವನ್ನಾಗಲಿ ಕೇಳುವುದಿಲ್ಲ, ಯಾಕೊ ಇತ್ತೀಚೆಗೆ ಒಂದು ವಾರದಿಂದ ಮನಸ್ಸಿಗೆ ಅದೇಷ್ಟು ಸಂಕಟವಾಗತೊಡಗಿದೆಯೆಂದರೆ ತಡೆದುಕೊಳ್ಳಲಾರದಷ್ಟು, ಎಲ್ಲ ಸಂಕಟಗಳು ನನ್ನನ್ನು ಎಲ್ಲಿ ಉಸಿರುಗಟ್ಟಿಸಿ ಕೊಂದು ಬಿಡುವವೊ ಎಂಬಷ್ಟು ಭಯವನ್ನು ಹುಟ್ಟುಹಾಕಿಬಿಟ್ಟೆವೆ ನನ್ನೆದೆಯಲ್ಲಿ. ನಿಮ್ಮನ್ನು ನೋಡಿದ ದಿನದಿಂದ ನನ್ನ ಮನಸ್ಸಿನೊಳಗೆ ನಡೆಯುತ್ತಿರುವ ತೋಳಲಾಟವನ್ನು ನಿಮ್ಮ ಮುಂದೆ ಹಂಚಿಕೊಳ್ಳಬೇಕಿನ್ನಿಸಿತು. ಹೇಳಿಕೊಂಡೆ, ಇದೇನಿದು ಗುರುತು ಪರಿಚಯವಿರದ ನನ್ನ ಮುಂದೆ ಇವೆಲ್ಲ ಏಕೆ ಹೇಳಿಕೊಳ್ಳುತ್ತಿದ್ದಾನೆ ಎಂದು ಆಶ್ಚರ್ಯಚಕಿತರಾಗಿ ನೋಡಬೇಡಿ, ಗೊತ್ತಿದ್ದವರಾರು ನಮ್ಮ ಮನಸ್ಸಿನ ದುಗುಡಕ್ಕೆ ಸಮಾಧಾನಿಸಲಾರರು, ಕಷ್ಟ ಎಂದಾಗ ಎಲ್ಲರೂ ಪಲಾಯನವಾದಿಗಳೆ' ಎಂದು ವೇದಾಂತದ ನುಡಿಗಳನ್ನು ನುಡಿಯುತ್ತಾ, ಕಣ್ಣಂಚಲಿ ಜಿನುಗಿದ ಹನಿಗಳನ್ನು ಎರಡು ಕೈಗಳಿಂದ ಒರೆಸಿಕೊಳ್ಳುತ್ತಾ ತನ್ನ ಮಾತುಗಳನ್ನು ಮುಗಿಸಿ, ಎರಡು ಕೈಗಳಿಂದ ಕಣ್ಣನ್ನು ಮುಚ್ಚಿಕೊಂಡು ಕುಳಿತುಕೊಂಡನು.
'ಮತ್ತೊಮ್ಮೆ ತಮ್ಮಲ್ಲಿ ಕ್ಷಮೆಯನ್ನು ಕೇಳುತ್ತಾ, ನೇರವಾಗಿ ವಿಷಯಕ್ಕೆ ಬಂದು ಬಿಡುತ್ತೇನೆ, ಸರಿನಾ?'
ಹಣೆಯ ಹುಬ್ಬುಗಳನ್ನು ಗಂಟು ಹಾಕಿಕೊಂಡ ರಮೇಶನು
'ನನ್ಹತ್ರ ಇವನಿಗೇನು ಕೆಲಸ' ಎಂದು ಮನದಲ್ಲೆ ಲೆಕ್ಕಿಸುತ್ತ,
:ಹ್ಞೂಂ, ಪರ್ವಾಗಿಲ್ಲ ಹೇಳಿ'
'ನಾನು ನಿಮ್ಮನ್ನು ಒಂದು ವಾರದಿಂದ ಗಮನಿಸ್ತಾ ಇದ್ದೀನಿ, ಒಬ್ಬರೆ ನನ್ನ ಹಾಗೆ ಬಂದು ಏನೊ ಗಾಢವಾಗಿ ವಿಚಾರ ಮಾಡುವರಂತೆ ಕುಳಿತುಕೊಂಡು, ಹೊತ್ತಾದ ಮೇಲೆ ಈ ಪಾರ್ಕನಿಂದ ಭಾರವಾದ ಹೆಜ್ಜೆಗಳೊಂದಿಗೆ ನಡೆದು ಹೋಗುತ್ತಿರಿ, ಯಾಕೆ ಮನೆ ಅಥವಾ ಆಫೀಸ್ ನಲ್ಲಿ ಏನಾದರು ಸಮಸ್ಯೆನಾ.?'
ಅವನನ್ನೆ ದಿಟ್ಟಿಸಿ ನೋಡಿದ ರಮೇಶ, ಅಂತ ಗಟ್ಟಿ ಆಳೇನು ಅಲ್ಲ, ವಯಸ್ಸಿನಲ್ಲಿ ಎರಡ್ಮೂರು ವರ್ಷ ನನಗಿಂತಲು ಕಡಿಮೆ ಇರಬಹುದು. ಆದರೂ ವಯಸ್ಸಿಗೆ ಮೀರಿದ ಜಾಣತನ. ಇವನೇಕೆ ನನ್ನ ಬಗ್ಗೆ ಇಷ್ಟೊಂದು ಕಾಳಜಿಯನ್ನು ವಹಿಸಿ ಕೇಳುತ್ತಿರುವನು ಎಂದು ಮನದಲ್ಲೆ ಅಂದುಕೊಳ್ಳುತ್ತಾ, ಮತ್ತೆ ಹಣೆಯ ಹುಬ್ಬುಗಳನ್ನು ಗಂಟಿಕ್ಕಿ ಅಖಿಲ್ ನನ್ನು ದುರುಗುಟ್ಟುತ್ತಾ ನೋಡತೋಡಗಿದನು.
ರಮೇಶನ ನೋಟ ಮತ್ತು ಅವನು ಮೌನವಾಗಿರುವುದನ್ನು ಕಂಡು, ಅಖಿಲ್ ಮತ್ತೆ ತಾನೆ ಮಾತನಾಡಲಾರಂಭಿಸಿದನು. ' ಏನಪ್ಪಾ ಇವನು ಗುರುತು ಪರಿಚಯ ಇಲ್ದೇನೆ ಬಂದು ಏನೇನೊ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ ಎಂದುಕೊಳ್ಳಬೇಡಿ, ನೋಡಿ ಸರ್ ಸುಖಾನ ಹಂಚಿಕೊಂಡ್ರೆ ಹೆಚ್ಚಾಗುತ್ತದಂತೆ, ದುಃಖಾನ ಹಂಚಿಕೊಂಡ್ರೆ ಕಡಿಮೆಯಾಗುತ್ತದಂತೆ, ಆದ್ದರಿಂದ ಮೊದಲು ನನ್ನ ಮನಸಿನ ದುಃಖಾನ ನಿಮ್ಮ ಮುಂದೆ ಹೇಳ್ಕೊಂಡಬಿಡ್ತೀನಿ, ಹೇಳ್ಲಾ,' ರಮೇಶನ ಮುಖವನ್ನು ತೀಕ್ಷ್ಣವಾಗಿ ನೋಡುತ್ತಾ, ರಮೇಶನಿಗೆ ಒಂಥರಾ ಮಾನಸಿಕ ಹಿಂಸೆಯಾದಂತಾಯಿತಾದರು, 'ಈಗಾರೇಳು ತಿಂಗಳಿಂದ ಯಾರೊಂದಿಗೂ ಮನಸ್ಸು ಬಿಚ್ಚಿ ಮಾತನಾಡದ ಕಾರಣ ಇವನೊಂದಿಗಾದರು ಮಾತಾಡೋಣ, ನೋಡೊಣ ಏನು ಹೇಳುತ್ತಾನೆ ಅಂತಾ ಒಮ್ಮೆ ಕೇಳೊಣ ಬಿಡು' ಎಂದು ಮನದಲ್ಲಿ ಮಾತನಾಡಿಕೊಳ್ಳುತ್ತಾ, 'ಹ್ಞೂಂ..' ಎಂದು ತಲೆಯಾಡಿಸಿದನು.
' ನೋಡಿ ನಾನು ಚಿಕ್ಕವನಿರುವಾಗಲೆ ನನ್ನ ತಂದೆಯವರು ತೀರಿಕೊಂಡರಂತೆ, ಅವರ ಮುಖವನ್ನು ನೋಡಿದ ನೆನಪು ನನಗಿಲ್ಲ, ಗಂಡನ ಮನೆ ಬಿಟ್ಟು ಮರಳಿ ನನ್ನ ತಾಯಿ ತವರಿನ ಮನೆಗೆ ಬಂದರೆ, ಅಲ್ಲಿ ಪಡಬಾರದ ಕಷ್ಟಗಳನ್ನು ಪಟ್ಟು, ಇದೆ ಊರಿನಲ್ಲಿ ನಮ್ಮ ದೂರದ ಸಂಬಂಧಿಕರೊಬ್ಬರಿಗೆ ಮಕ್ಕಳಾಗಿಲ್ಲದ ಕಾರಣ ಅವರು ನಮ್ಮ ತಾಯಿ ಮತ್ತು ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದರಂತೆ, ನಾನಂತು ಆತನನ್ನು ಬಾಯ್ತುಂಬಾ ಅಜ್ಜಾನೆ ಅಂತಾ ಕರಿತಾ ಇದ್ದೆ, ಆತನಿಗೂ ಬಹಳಷ್ಟು ವಯಸ್ಸಾಗಿತ್ತು, ನಮ್ಮ ತಾಯಿ ಕೂಲಿನಾಲಿ ಮಾಡಿ ತಕ್ಕ ಮಟ್ಟಿಗೆ ನನ್ನನು ಓದಿಸಿ, ಒಂದು ಜನರಲ್ ಸ್ಟೋರ್ ಅಂಗಡಿಯಲ್ಲಿ ಕೆಲಸವನ್ನು ಸಿಗುವಂತೆಯೂ ಮಾಡಿದ್ದರು. ಬದುಕಿನ ಬಂಡಿ ಚೆನ್ನಾಗಿಯೆ ನಡೆದಿತ್ತು, ಯಾರ ಕೆಟ್ಟ ದೃಷ್ಟಿ ತಾಗಿತೊ ಗೊತ್ತಿಲ್ಲ, ಈಗ ಆರೇಳು ತಿಂಗಳ ಹಿಂದೆ, ನನ್ನಜ್ಜನು ತೀರಿಹೋದ, ಅವನಿಲ್ಲದ ಮನೆಯಂಗಳ ಎಲ್ಲ ಈಗ ಖಾಲಿ..ಖಾಲಿ. ನನ್ನನು ಎತ್ತಿಯಾಡಿಸಿ, ಅತ್ತಾಗ ರಮಿಸಿ, ನಕ್ಕಾಗ ಹೆಗಲ ಮೇಲೆರಿಸಿಕೊಂಡು, ಗಲೀಜನ್ನು ಮಾಡಿಕೊಂಡಾಗ ನನ್ನ ಹಿಂಬದಿಯನ್ನು ತೊಳೆದು, ಜಳಕ ಮಾಡಿಸಿ ಬಟ್ಟೆಯನ್ನು ಹಾಕುತ್ತಿದ್ದದ್ದು, ಶಾಲೆಯವರೆಗೂ ಬಂದು ನನ್ನನ್ನು ಬಿಟ್ಟು ಬರುತ್ತಿದ್ದದ್ದು, ಕೇಳಿದಾಗ ಒಂದಿಷ್ಟು ಚಿಲ್ಲರೆ ಕಾಸನ್ನು ಜೇಬಿಗೆ ಹಾಕುತ್ತಿದ್ದದ್ದು, ಅವನ ಬಿಳಿ ಮೀಸೆಯನ್ನು ತಿರುವಿ ತಿರುವಿ ಹುರಿಗೊಳಿಸುತ್ತಿದ್ದದ್ದು, ಕೆಲಸದಿಂದ ಬಂದ ಮೇಲೆ ಕರೆದು ತನ್ನ ಪಕ್ಕದಲ್ಲೆ ಕುಳ್ಳರಿಸಿಕೊಂಡು, ಆ ದಿನದ ಎಲ್ಲ ಆಗುಹೋಗುಗಳನ್ನು ಹಂಚಿಕೊಳ್ಳುತ್ತಿದ್ದದ್ದು, ಬದುಕು ಎಷ್ಟೊಂದು ಕಠಿಣ, ಹೇಗೆ ಬದುಕಿ ಬಾಳಬೇಕು ಎನ್ನುವ ಬುದ್ದಿ ಮಾತುಗಳು ಎಲ್ಲವು ಹಸಿಹಸಿ ನೆನಪುಗಳು ಮಾತ್ರ ಈಗ. ಆ ನೆನಪುಗಳ ಸುರುಳಿಯಿಂದ ಹೊರಬರುವ ಮೊದಲೆ ಮತ್ತೊಂದು ಆಘಾತವು ಎದುರಾಗಿದೆ ಈಗ. ಇರುವುದೊಂದು ಚಿಕ್ಕ ಗುಡಿಸಲು, ಚಿಕ್ಕ ಅಡಿಗೆ ಮನೆ ಮತ್ತು ಒಂದು ಕೋಣೆ, ಕುಂದ್ರೊದಿಕ್ಕೇನೊ ಕೊರತೆಯಿಲ್ಲ, ಹಾಗಂತ ಕಾಲು ಚಾಚಿಕೊಂಡು ಮಲಗುವಷ್ಟು ದೊಡ್ಡದೇನು ಇಲ್ಲ. ಇತ್ತೀಚೇಗೆ ಅಂದ್ರೆ ನಾಲ್ಕು ತಿಂಗಳ ಹಿಂದೆ ನಮ್ಮ ತಾಯಿಗೆ ಹುಷಾರಿಲ್ಲದಂತಾಯಿತು. ಅಲ್ಲೆ ಒಂದು ವಾರ ನಮ್ಮ ಮನೆಯ ಹತ್ತಿರ ಇರುವ ಚಿಕ್ಕ ಆಸ್ಪತ್ರೆಯಲ್ಲಿ ತೋರಿಸಿದೆ, ಗುಣವಾಗಲಿಲ್ಲ ಈಗ ಮೂರು ತಿಂಗಳ ಹಿಂದೆ ದೊಡ್ಡಾಸ್ಪತ್ರೆಯಲ್ಲಿ ಅಡ್ಮೀಟ್ ಮಾಡಿರುವೆ ಅವರ ದೇಹವನ್ನು ಸ್ಕ್ಯಾನ್ ಮಾಡಲಾಗಿ, ಎದೆಯಲ್ಲಿ ಸ್ತನ ಕ್ಯಾನ್ಸರ್ ಆಗಿದೆಯಂತೆ, ಅದರ ಆಪರೇಷನ್ ಗೆ ಲಕ್ಷಗಟ್ಟಲೆ ಹಣವು ಬೇಕು. ಈಗ ಕೇವಲ ಔಷಧಿಗಳಿಗಾಗಿಯೆ ಕಂಡ ಕಂಡಲ್ಲಿ ಸಾಲವನ್ನು ಮಾಡಿಬಿಟ್ಟಿರುವೆ, ಕೆಲಸ ಮುಗಿಸಿಕೊಂಡು ಮನೆಯ ಹತ್ತಿರ ಹೋಗಬೇಕೆಂದರೆ ಸಾಲದವರ ಕಾಟ, ಅದಕ್ಕೆ ರಾತ್ರಿ ಆಗುವುವರೆಗೂ ಇಲ್ಲಿಯೆ ಕುಳಿತು, ಕತ್ತಲಾದ ಮೇಲೆ ಮನೆಗೆ ಹೋಗುತ್ತಿರುವೆ, ಬೆಳಿಗ್ಗೆ ಯಾರು ಎದ್ದೇಳದ ಸಮಯದಲ್ಲಿ ಮನೆಯಿಂದ ಹೊರಡುತ್ತೇನೆ, ಕೆಲವು ರಾತ್ರಿಗಳನ್ನು ಆ ಬೆಂಚಿನ ಮೇಲೆ ಕಳೆದಿರುವೆ, ಪಾರ್ಕಿನ ಕಾವಲುಗಾರನ ಕಣ್ತಪ್ಪಿಸಿ. ಸಾಲಗಾರರಿಗೆಲ್ಲ ಈಗ ನಾ ಕೆಲಸ ಮಾಡುತ್ತಿರುವ ಹೊಸ ಅಂಗಡಿಯ ವಿಳಾಸವೊಂದು ಗೊತ್ತಿಲ್ಲ ನನ್ನ ಪುಣ್ಯಕ್ಕೆ. ಹಾಗಂತ ನಾನೇನು ನಿಮ್ಮ ಬಳಿ ಹಣವನ್ನಾಗಲಿ, ಸಹಾಯವನ್ನಾಗಲಿ ಕೇಳುವುದಿಲ್ಲ, ಯಾಕೊ ಇತ್ತೀಚೆಗೆ ಒಂದು ವಾರದಿಂದ ಮನಸ್ಸಿಗೆ ಅದೇಷ್ಟು ಸಂಕಟವಾಗತೊಡಗಿದೆಯೆಂದರೆ ತಡೆದುಕೊಳ್ಳಲಾರದಷ್ಟು, ಎಲ್ಲ ಸಂಕಟಗಳು ನನ್ನನ್ನು ಎಲ್ಲಿ ಉಸಿರುಗಟ್ಟಿಸಿ ಕೊಂದು ಬಿಡುವವೊ ಎಂಬಷ್ಟು ಭಯವನ್ನು ಹುಟ್ಟುಹಾಕಿಬಿಟ್ಟೆವೆ ನನ್ನೆದೆಯಲ್ಲಿ. ನಿಮ್ಮನ್ನು ನೋಡಿದ ದಿನದಿಂದ ನನ್ನ ಮನಸ್ಸಿನೊಳಗೆ ನಡೆಯುತ್ತಿರುವ ತೋಳಲಾಟವನ್ನು ನಿಮ್ಮ ಮುಂದೆ ಹಂಚಿಕೊಳ್ಳಬೇಕಿನ್ನಿಸಿತು. ಹೇಳಿಕೊಂಡೆ, ಇದೇನಿದು ಗುರುತು ಪರಿಚಯವಿರದ ನನ್ನ ಮುಂದೆ ಇವೆಲ್ಲ ಏಕೆ ಹೇಳಿಕೊಳ್ಳುತ್ತಿದ್ದಾನೆ ಎಂದು ಆಶ್ಚರ್ಯಚಕಿತರಾಗಿ ನೋಡಬೇಡಿ, ಗೊತ್ತಿದ್ದವರಾರು ನಮ್ಮ ಮನಸ್ಸಿನ ದುಗುಡಕ್ಕೆ ಸಮಾಧಾನಿಸಲಾರರು, ಕಷ್ಟ ಎಂದಾಗ ಎಲ್ಲರೂ ಪಲಾಯನವಾದಿಗಳೆ' ಎಂದು ವೇದಾಂತದ ನುಡಿಗಳನ್ನು ನುಡಿಯುತ್ತಾ, ಕಣ್ಣಂಚಲಿ ಜಿನುಗಿದ ಹನಿಗಳನ್ನು ಎರಡು ಕೈಗಳಿಂದ ಒರೆಸಿಕೊಳ್ಳುತ್ತಾ ತನ್ನ ಮಾತುಗಳನ್ನು ಮುಗಿಸಿ, ಎರಡು ಕೈಗಳಿಂದ ಕಣ್ಣನ್ನು ಮುಚ್ಚಿಕೊಂಡು ಕುಳಿತುಕೊಂಡನು.
No comments:
Post a Comment