ಇಬ್ಬರು ತುಂಬಾ ಸುಸ್ತಾದವರಂತೆ ದೇವಾಲಯದ ಹಿಂಬದಿಯ ಗೋಡೆಗೆ ಬೆನ್ನನು ಆಣಿಸಿಕೊಂಡು ಕುಳಿತುಬಿಟ್ಟರು, ರಮೇಶನ ಬಾಯೆಲ್ಲ ಒಣಗಿ ಅಂಟು ಅಂಟಂತಾದಂತಾಗಿ ಮಾತನಾಡಲು ಬರುತ್ತಿರಲಿಲ್ಲ, ಮುಂಜಾನೆ ಮನೆಯಲ್ಲಿ ಒಂದಷ್ಟು ತಿಂದದ್ದೆ ಉಪ್ಪಿಟ್ಟು, ಓಡಾಟ, ಅಡಗಿಕೊಳ್ಳುವಿಕೆ, ಹೆಣದ ಹಿಂದೆ ಅಲೆದಾಟ, ಕೈ ಕಾಲುಗಳೆಲ್ಲ ಸೋತಂತಾಗಿ ಕಣ್ಮುಚ್ಚಿಕೊಂಡು, ಕೈ ಸನ್ನೆಯಲ್ಲೆ ಅಖಿಲನಿಗೆ ನೀರು ಎಂದು ಸನ್ನೆಯನ್ನು ಮಾಡಿದನು. ಅಖಿಲನಿಗೂ ಆವಾಗಲೆ ನೀರು ಮತ್ತು ಹೊಟ್ಟೆ ಹಸಿವಿನ ಅರಿವಾದದ್ದು, ' ಇಲ್ಲೆ ಇರಿ ಸರ್, ಈಗ ಬಂದೆ, ಈ ಬ್ಯಾಗು ಜೋಪಾನ' ಎನ್ನುತ್ತಾ ಎದ್ದು ಮೆಲ್ಲಗೆ ದೇವಾಲಯದ ಹಿಂಬಾಗದಿಂದ ಹೊರಬಂದು, ಅಂತ್ಯಕ್ರಿಯೆಗೆ ಬಂದವರಾರೊ ನೀರಿನ ಬಾಟಲನ್ನು ತಂದಿದ್ದರು. ಅವರ ಹತ್ತಿರ ಹೋಗಿ ಬೇಡಿ ನೀರನ್ನು ತೆಗೆದುಕೊಂಡು ಬಂದು ರಮೇಶನಿಗೆ ಕುಡಿಸಿದನು, ಬಾಟಲ್ ನೀರನ್ನು ಗಟಗಟನೆ ಕುಡಿದು ಎದುಸಿರನ್ನು ಬಿಡಲಾರಂಭಿಸಿದನು ರಮೇಶನು, ಅಖಿಲನು ರಮೇಶನ ಕೈ ಯಿಂದ ಬಾಟಲನ್ನು ಕಸಿದುಕೊಂಡು ಅಳಿದುಳಿದ ನೀರನ್ನು ಕುಡಿದು ಸಮಯವನ್ನು ನೋಡಿಕೊಂಡನು. ಆರು ಮುಕ್ಕಾಲಾಗಿತ್ತು. ಸೂರ್ಯನು ತನ್ನ ದಿನ ಕೆಲಸವನ್ನು ಮುಗಿಸಿಕೊಂಡು ಕರಗುತ್ತಿದ್ದನು. ಅಂತ್ಯಕ್ರಿಯೆಗೆ ಬಂದವರೆಲ್ಲ ಶವಕ್ಕೆ ಅಗ್ನಿ ಸ್ಪರ್ಶವಾದೊಡನೆ ಒಬ್ಬೊಬ್ಬರಾಗಿ ಹೊರಟು ನಿಂತರು. ' ಅಖಿಲ್ ಎಲ್ಲರು ಹೊರಡುತ್ತಿದ್ದಾರೆ, ನಾವು ಅವರ ಜೊತೆ ಇಲ್ಲಿಂದ ಹೊರಟು ಬಿಡೋಣ್ವಾ,' ಎಂದನು ತೇಲುಗಣ್ಣಿನಲ್ಲಿ ರಮೇಶನು.
' ಬೇಡ ಸರ್, ಈ ಅವಸ್ಥೆಯಲ್ಲಿ, ಇನ್ನೊಂದು ತಾಸು ಕಳೆಯಲಿ, ನೋಡಿಯಲ್ಲಿ, ಮುಖ್ಯ ರಸ್ತೆಯ ಬದಿಗೆ ಯಾವುದೊ ಒಂದು ಹೊಟೇಲ್ ಇದ್ದ ಹಾಗಿದೆ, ಅಲ್ಲಿಗೆ ಹೋಗಿ ತಿನ್ನಲಿಕ್ಕೆ ಏನಾದರು ಕಟ್ಟಿಸಿಕೊಂಡು ಬರುತ್ತೇನೆ, ಉಂಡು ಸ್ವಲ್ಪ ಗಟ್ಟಿಯಾಗಿ ತದ ನಂತರ ಒಬ್ಬರ ನಂತರ ಒಬ್ಬರು ಹೊರಟು ಬಿಡೋಣ, ಏನಂತೀರಾ,' ರಮೇಶನು ಎರಡು ನಿಮಿಷ ಯೋಚಿಸಿ ಆಗಲಿ ಎಂದು ತಲೆಯಾಡಿಸಿದನು.
'ಅಖಿಲ್ ನಿನ್ನ ಪೋನ್ ಕೊಡಿಲ್ಲಿ ಮನೆಗೆ ಕರೆ ಮಾಡಿ ತಿಳಿಸುವೆ, ಇಷ್ಟೊತ್ತಾಯ್ತು ಮನೆಗೆ ಪೋನ್ ನ್ನಾದರು ಮಾಡುತ್ತೇನೆ. ಊರಲ್ಲಿ ಗಲಾಟೆಯಾಗಿ ಬಂದ್ ಅಗಿದೆ ಅಲ್ಲದೆ ನನ್ನ ಪೋನ್ ನ್ನು ಮನೆಯಲ್ಲಿಯೆ ಬಿಟ್ಟು ಬಂದಿರುವೆ, ಅವಳದೇಷ್ಟು ಆತಂಕಕ್ಕೊಳಗಾಗಿರುವಳೊ ಏನೊ,' ರಮೇಶನು ಪೋನ್ ಗಾಗಿ ಅಖಿಲನತ್ತ ಕೈ ಚಾಚಿದನು. ಅಖಿಲನು ಸ್ವಲ್ಪ ಹೆದರಿದವನಂತಾಗಿ, ತನ್ನ ಪೋನಿಗಾಗಿ ಜೇಬುಗಳಲ್ಲೆಲ್ಲ ಹುಡುಕಾಡಿದನು, ಅದು ಓಡಿ ಬರುವ ಗದ್ದಲದಲ್ಲಿ ಎಲ್ಲೊ ಬಿದ್ದು ಹೋಗಿತ್ತು. ' ಇಲ್ಲ ಸರ್, ಪೋನ್ ಎಲ್ಲೊ ಕಳೆದುಹೋಗಿದೆ,' ಎಂದನು ಆತಂಕದಿಂದ.
' ಹೌದಾ...?' ಎಂದನು ನಿರುತ್ಸಾಹದಿಂದ ರಮೇಶನು.
ಒಂದೈದು ನಿಮಿಷ ಸುಮ್ಮನಿದ್ದ ರಮೇಶನು, ಬ್ಯಾಗನ್ನು ಅಖಿಲನ ಮುಂದಿಟ್ಟು ' ಇನ್ನೂ ಕಾಯುವುದು ಆಗುವುದಿಲ್ಲ ಅಖಿಲ್, ಮೊದಲು ಹಣವನ್ನು ಹಂಚಿಕೊಂಡು ಬಿಡೋಣ, ನಂತರ ನಮ್ಮ ನಮ್ಮ ಪಾಡು, ಇಲ್ಲಿ ಇರುವಷ್ಟು ಹೊತ್ತು ನನಗೆ ಉಸಿರುಗಟ್ಟಿದ ಭಾವನೆಯುಂಟಾಗುತ್ತಿದೆ, ಆಸ್ಪತ್ರೆಯಲ್ಲಿ ಮಗಳು, ಅಪ್ಪ, ಅವಳು ಏನು ಮಾಡುತ್ತಿದ್ದಾರೊ... ಯಾವ ತೊಂದರೆಯಲ್ಲಿದ್ದಾರೊ.. ಬೆಳಿಗ್ಗೆಯಿಂದ ಒಂದು ಪೋನನ್ನು ಸಹ ಮಾಡಿಲ್ಲ, ನಾನೇನಾಗಿ ಹೋದೆ ಎಂಬ ಚಿಂತೆ ಅವರನ್ನೆಲ್ಲ ಕಾಡುತ್ತಿರಬಹುದಲ್ಲವೆ, ಬೇಗ ಹಣವನ್ನು ಪಾಲು ಮಾಡಿಬಿಡು, ನನಗಿಲ್ಲಿ ಕುಳಿತುಕೊಳ್ಳಲಾಗುತ್ತಿಲ್ಲ.' ಎರಡು ಕೈಯನ್ನು ಮುಗಿದು ಬೇಡಿದನು ರಮೇಶನು ಅಖಿಲನಿಗೆ,
ರಮೇಶನ ಕೈಗಳನ್ನು ಹಿಡಿದು' ಛೆ..ಛೆ... ಕೈಯನ್ನು ಏಕೆ ಮುಗಿಯುವಿರಿ ಸರ್, ನೀವು ಹೇಳಿದ ಹಾಗೆ ಮಾಡೊಣ' ಎನ್ನುತ್ತಾ, ರಮೇಶನ ಕೈಯನ್ನು ಬಿಟ್ಟು ಬ್ಯಾಗನ್ನು ಎತ್ತಿಕೊಂಡು ಅದರ ಜಿಪ್ಸನ್ನು ತೆಗೆದಾಗ ಎಲ್ಲ ಎರಡೆರಡು ಸಾವಿರ ನೋಟಿನ ಕಟ್ಟುಗಳೆ ಜೊತೆಗೊಂದಿಷ್ಟು ಕಾಗದ ಪತ್ರಗಳು, ಡೈರಿಗಳು, ಕ್ಯಾಲ್ಕುಲೇಟರ್ ಇನ್ನೂ ಏನೇನೊ ಇದ್ದವು, ಅವುಗಳನ್ನೆಲ್ಲ ನೆಲಕ್ಕೆ ಹರಡಿ, ಹಣವನ್ನಷ್ಟೆ ಎತ್ತಿಕೊಂಡು ಎಣಿಸಿದರೆ ಕೇವಲ ನಾಲ್ಕು ಲಕ್ಷವಷ್ಟೆ ಇತ್ತು, ಎರಡು ಲಕ್ಷ ರಮೇಶನ ಕೈ ಸೇರಿದರೆ, ಎರಡು ಲಕ್ಷ ಅಖಿಲನ ಕೈಯಲ್ಲಿ ಉಳಿದವು. ರಮೇಶನಿಗೆ ಜಗತ್ತನ್ನೆ ಗೆದ್ದೆ ಎಂಬ ಭಾವದಲ್ಲಿ ಹರ್ಷಿಸಲಾರಂಭಿಸಿದನು. ಅಖಿಲನ ಎರಡು ಕೈಗಳನ್ನು ಹಿಡಿದು 'ನಿನ್ನೆ ಸಂಜೆ ನನಗೆ ದೇವರಾಗಿ ಬಂದು, ನನ್ನೆಲ್ಲ ಕಷ್ಟಗಳನ್ನು ತಿರಿಸಿಬಿಟ್ಟೆ ನೋಡು ಅಖಿಲ್, ಬಹುಶಃ ನಾವಿಬ್ಬರು ಸಂಧಿಸದೆ ಇದ್ದಿದ್ದರೆ, ಇವತ್ತು ನನ್ನ ಮಗಳನ್ನು ನಾನು ಮತ್ತೆ ನೋಡುವ ಭಾಗ್ಯ ಇರುತ್ತಿರಲಿಲ್ಲ, ನೀನು ಮಾಡಿದ ಈ ಉಪಕಾರಕ್ಕೆ ನಾನೇಷ್ಟು ಜನ್ಮವೆತ್ತಿ ನಿನ್ನ ಋಣವನ್ನು ತೀರಿಸಲು ಸಾಧ್ಯವಿಲ್ಲ' ಕೈಗಳನ್ನು ಕಣ್ಣಿಗೆ ಒತ್ತಿಕೊಲ್ಳುತ್ತಾ ಅಳಲಾರಂಭಿಸಿದನು ರಮೇಶನು. ಇತ್ತ ಒಳಗೊಳಗೆ ಅಖಿಲನು ತಳಮಳಗೊಳ್ಳತೊಡಗಿದನು. ತನ್ನ ತಾಯಿಯ ಆಪರೇಷನ್ ಗಾಗಿ ಹಣವು ಕಡಿಮೆ ಬಿಳುತ್ತದಲ್ಲ, ಇನ್ನೂ ಸುಮಾರು ಹತ್ತಿರ ಹತ್ತಿರ ಒಂದುವರೆ ಲಕ್ಷಾನಾದ್ರು ಬೇಕು, ಏನು ಮಾಡುವುದೀಗ' ಎಂದು ಚಿಂತಿಸುತ್ತಿರುವಾಗಲೆ, ರಮೇಶನು ಹಣವನ್ನೆಲ್ಲ ಬ್ಯಾಗನಲ್ಲಿ ತುಂಬಿಕೊಂಡು ಹೊರಡಲೆಂದು ಎದ್ದು ನಿಂತನು. ಬೆಳಿಗ್ಗೆಯಿಂದ ಹೊಟ್ಟೆಗೆ ಸರಿಯಾಗಿ ಏನನ್ನು ತಿಂದಿರದ ಕಾರಣ, ರಮೇಶನಿಗೆ ಸ್ವಲ್ಪ ತಲೆ ಸುತ್ತು ಬಂದಂತಾಗಿ ದೇವಾಲಯದ ಗೋಡೆಯನ್ನು ಹಿಡಿದುಕೊಂಡು ನಿಂತುಕೊಂಡುನು. ಅಖಿಲನು ದಡಕ್ಕನೆ ಎದ್ದು, ರಮೇಶನ ತೋಳನ್ನು ಹಿಡಿದು, ' ಸರ್ ಇನ್ನೈದು ನಿಮಿಷ ತಡೆಯಿರಿ, ನಾನೀಗಲೆ ಹೋಗಿ ತಿನ್ನಲಿಕ್ಕೆ ಏನನ್ನಾದರು ಕಟ್ಟಿಸಿಕೊಂಡು ಬರುತ್ತೇನೆ, ತಿಂಡಿಯನ್ನು ತಿಂದ ನಂತರ ಅರೆ ಕ್ಷಣವು ನಿಲ್ಲದೆ ಇಲ್ಲಿಂದ ಹೊರಟು ಬಿಡೋಣ' ಎನ್ನುತ್ತಾ ರಮೇಶನನ್ನು ಕೆಳಗೆ ಕುಳ್ಳರಿಸಿದನು. ' ಇಲ್ಲಿಗಾಗಲೆ ಬಹಳ ಕತ್ತಲಾಗಿಬಿಟ್ಟಿದೆ ಅಖಿಲ್ ಈ ಕತ್ತಲಿನಲ್ಲಿ ಇಲ್ಲೇನನ್ನು ತಿನ್ನುವುದು'.
' ನೀವಿಲ್ಲೆ ಇರಿ ಹಾಗಿದ್ದರೆ ದೇವಾಲಯದಲ್ಲಿ ಯಾರಾದರು ಇದ್ದಾರೇಯೆ ಎಂದು ನೋಡಿಕೊಂಡು ಬರುತ್ತೇನೆ'
ರಮೇಶನನ್ನು ಅಲ್ಲಿಯೆ ಬಿಟ್ಟು ದೇವಾಲಯದ ಒಳಗೆ ಬಂದನು. ಗರ್ಭಗುಡಿಯಲ್ಲಿ ಶಿವನ ನಗುಮೊಗದ ಸುಂದರ ಮೂರ್ತಿಯಿತ್ತು, ಕಾಲ ಭೈರವ ಎಂಬ ಹೆಸರನ್ನು ಬರೆದಿದ್ದರು ಗರ್ಭಗುಡಿಯ ಗೋಡೆಯ ಮೇಲೆ. ದೇವರ ಮುಂದೆ ಒಂದು ಸಣ್ಣ ದೀಪ ಉರಿಯುತ್ತಿತ್ತು, ಆ ದೇವಾಲಯದ ಎದುರಿಗೆ ಶವಕ್ಕೆ ಅಗ್ನಿಯನ್ನು ಸ್ಪರ್ಶಿಸಿ ಎಲ್ಲರು ನಡೆದಿದ್ದರು, ಅಲ್ಲಲ್ಲಿ ಅಳಿದುಳಿದ ಕಟ್ಟಿಗೆ, ಬೆಂಕಿಯನ್ನು ಹಚ್ಚಲೆಂದು ತಂದಿದ್ದ ಹಳೆ ಗಾಡಿಯ ಟೈರಗಳನ್ನು ಅಲ್ಲೆ ಎಸೆದು ಹೋಗಿದ್ದರು. ಆ ಶವಕ್ಕೆ ಇಟ್ಟ ಕಟ್ಟಿಗೆಯು ಅರ್ಧಕ್ಕೂ ಹೆಚ್ಚಿಗೆ ಸುಟ್ಟು ಹೋಗಿತ್ತು, ಮರಳಿ ದೇವಾಲಯದ ಹಿಂದೆ ಬಂದ ಅಖಿಲನು ಬ್ಯಾಗುಗಳನ್ನು ಹೆಗಲಿಗೆ ಹಾಕಿಕೊಂಡು ರಮೇಶನನ್ನು ಕೈ ಹಿಡಿದು ಕರೆದುಕೊಂಡು ಬಂದು ದೇವಾಲಯದಲ್ಲಿ ಕುಳ್ಳರಿಸಿ. ಬ್ಯಾಗಗಳನ್ನು ಅವನ ಪಕ್ಕದಲ್ಲಟ್ಟು. ಸುತ್ತಲು ಒಮ್ಮೆ ಸೂಕ್ಷ್ಮವಾಗಿ ಕಣ್ಣಾಡಿಸಿದನು. ಯಾವ ನರಪೀಳ್ಳೆಯು ಕಾಣಲಿಲ್ಲ. ಸಮಾಧಾನಗೊಂಡು, ಮುಖ್ಯ ರಸ್ತೆಯಲ್ಲಿದ್ದ ಅಂಗಡಿಯ ಹತ್ತಿರ ತಿನ್ನಲು ಏನನ್ನಾದರೂ ತರಲು ಕಳ್ಳ ಹೆಜ್ಜೆಗಳನ್ನು ಹಾಕತೊಡಗಿದನು.
' ಬೇಡ ಸರ್, ಈ ಅವಸ್ಥೆಯಲ್ಲಿ, ಇನ್ನೊಂದು ತಾಸು ಕಳೆಯಲಿ, ನೋಡಿಯಲ್ಲಿ, ಮುಖ್ಯ ರಸ್ತೆಯ ಬದಿಗೆ ಯಾವುದೊ ಒಂದು ಹೊಟೇಲ್ ಇದ್ದ ಹಾಗಿದೆ, ಅಲ್ಲಿಗೆ ಹೋಗಿ ತಿನ್ನಲಿಕ್ಕೆ ಏನಾದರು ಕಟ್ಟಿಸಿಕೊಂಡು ಬರುತ್ತೇನೆ, ಉಂಡು ಸ್ವಲ್ಪ ಗಟ್ಟಿಯಾಗಿ ತದ ನಂತರ ಒಬ್ಬರ ನಂತರ ಒಬ್ಬರು ಹೊರಟು ಬಿಡೋಣ, ಏನಂತೀರಾ,' ರಮೇಶನು ಎರಡು ನಿಮಿಷ ಯೋಚಿಸಿ ಆಗಲಿ ಎಂದು ತಲೆಯಾಡಿಸಿದನು.
'ಅಖಿಲ್ ನಿನ್ನ ಪೋನ್ ಕೊಡಿಲ್ಲಿ ಮನೆಗೆ ಕರೆ ಮಾಡಿ ತಿಳಿಸುವೆ, ಇಷ್ಟೊತ್ತಾಯ್ತು ಮನೆಗೆ ಪೋನ್ ನ್ನಾದರು ಮಾಡುತ್ತೇನೆ. ಊರಲ್ಲಿ ಗಲಾಟೆಯಾಗಿ ಬಂದ್ ಅಗಿದೆ ಅಲ್ಲದೆ ನನ್ನ ಪೋನ್ ನ್ನು ಮನೆಯಲ್ಲಿಯೆ ಬಿಟ್ಟು ಬಂದಿರುವೆ, ಅವಳದೇಷ್ಟು ಆತಂಕಕ್ಕೊಳಗಾಗಿರುವಳೊ ಏನೊ,' ರಮೇಶನು ಪೋನ್ ಗಾಗಿ ಅಖಿಲನತ್ತ ಕೈ ಚಾಚಿದನು. ಅಖಿಲನು ಸ್ವಲ್ಪ ಹೆದರಿದವನಂತಾಗಿ, ತನ್ನ ಪೋನಿಗಾಗಿ ಜೇಬುಗಳಲ್ಲೆಲ್ಲ ಹುಡುಕಾಡಿದನು, ಅದು ಓಡಿ ಬರುವ ಗದ್ದಲದಲ್ಲಿ ಎಲ್ಲೊ ಬಿದ್ದು ಹೋಗಿತ್ತು. ' ಇಲ್ಲ ಸರ್, ಪೋನ್ ಎಲ್ಲೊ ಕಳೆದುಹೋಗಿದೆ,' ಎಂದನು ಆತಂಕದಿಂದ.
' ಹೌದಾ...?' ಎಂದನು ನಿರುತ್ಸಾಹದಿಂದ ರಮೇಶನು.
ಒಂದೈದು ನಿಮಿಷ ಸುಮ್ಮನಿದ್ದ ರಮೇಶನು, ಬ್ಯಾಗನ್ನು ಅಖಿಲನ ಮುಂದಿಟ್ಟು ' ಇನ್ನೂ ಕಾಯುವುದು ಆಗುವುದಿಲ್ಲ ಅಖಿಲ್, ಮೊದಲು ಹಣವನ್ನು ಹಂಚಿಕೊಂಡು ಬಿಡೋಣ, ನಂತರ ನಮ್ಮ ನಮ್ಮ ಪಾಡು, ಇಲ್ಲಿ ಇರುವಷ್ಟು ಹೊತ್ತು ನನಗೆ ಉಸಿರುಗಟ್ಟಿದ ಭಾವನೆಯುಂಟಾಗುತ್ತಿದೆ, ಆಸ್ಪತ್ರೆಯಲ್ಲಿ ಮಗಳು, ಅಪ್ಪ, ಅವಳು ಏನು ಮಾಡುತ್ತಿದ್ದಾರೊ... ಯಾವ ತೊಂದರೆಯಲ್ಲಿದ್ದಾರೊ.. ಬೆಳಿಗ್ಗೆಯಿಂದ ಒಂದು ಪೋನನ್ನು ಸಹ ಮಾಡಿಲ್ಲ, ನಾನೇನಾಗಿ ಹೋದೆ ಎಂಬ ಚಿಂತೆ ಅವರನ್ನೆಲ್ಲ ಕಾಡುತ್ತಿರಬಹುದಲ್ಲವೆ, ಬೇಗ ಹಣವನ್ನು ಪಾಲು ಮಾಡಿಬಿಡು, ನನಗಿಲ್ಲಿ ಕುಳಿತುಕೊಳ್ಳಲಾಗುತ್ತಿಲ್ಲ.' ಎರಡು ಕೈಯನ್ನು ಮುಗಿದು ಬೇಡಿದನು ರಮೇಶನು ಅಖಿಲನಿಗೆ,
ರಮೇಶನ ಕೈಗಳನ್ನು ಹಿಡಿದು' ಛೆ..ಛೆ... ಕೈಯನ್ನು ಏಕೆ ಮುಗಿಯುವಿರಿ ಸರ್, ನೀವು ಹೇಳಿದ ಹಾಗೆ ಮಾಡೊಣ' ಎನ್ನುತ್ತಾ, ರಮೇಶನ ಕೈಯನ್ನು ಬಿಟ್ಟು ಬ್ಯಾಗನ್ನು ಎತ್ತಿಕೊಂಡು ಅದರ ಜಿಪ್ಸನ್ನು ತೆಗೆದಾಗ ಎಲ್ಲ ಎರಡೆರಡು ಸಾವಿರ ನೋಟಿನ ಕಟ್ಟುಗಳೆ ಜೊತೆಗೊಂದಿಷ್ಟು ಕಾಗದ ಪತ್ರಗಳು, ಡೈರಿಗಳು, ಕ್ಯಾಲ್ಕುಲೇಟರ್ ಇನ್ನೂ ಏನೇನೊ ಇದ್ದವು, ಅವುಗಳನ್ನೆಲ್ಲ ನೆಲಕ್ಕೆ ಹರಡಿ, ಹಣವನ್ನಷ್ಟೆ ಎತ್ತಿಕೊಂಡು ಎಣಿಸಿದರೆ ಕೇವಲ ನಾಲ್ಕು ಲಕ್ಷವಷ್ಟೆ ಇತ್ತು, ಎರಡು ಲಕ್ಷ ರಮೇಶನ ಕೈ ಸೇರಿದರೆ, ಎರಡು ಲಕ್ಷ ಅಖಿಲನ ಕೈಯಲ್ಲಿ ಉಳಿದವು. ರಮೇಶನಿಗೆ ಜಗತ್ತನ್ನೆ ಗೆದ್ದೆ ಎಂಬ ಭಾವದಲ್ಲಿ ಹರ್ಷಿಸಲಾರಂಭಿಸಿದನು. ಅಖಿಲನ ಎರಡು ಕೈಗಳನ್ನು ಹಿಡಿದು 'ನಿನ್ನೆ ಸಂಜೆ ನನಗೆ ದೇವರಾಗಿ ಬಂದು, ನನ್ನೆಲ್ಲ ಕಷ್ಟಗಳನ್ನು ತಿರಿಸಿಬಿಟ್ಟೆ ನೋಡು ಅಖಿಲ್, ಬಹುಶಃ ನಾವಿಬ್ಬರು ಸಂಧಿಸದೆ ಇದ್ದಿದ್ದರೆ, ಇವತ್ತು ನನ್ನ ಮಗಳನ್ನು ನಾನು ಮತ್ತೆ ನೋಡುವ ಭಾಗ್ಯ ಇರುತ್ತಿರಲಿಲ್ಲ, ನೀನು ಮಾಡಿದ ಈ ಉಪಕಾರಕ್ಕೆ ನಾನೇಷ್ಟು ಜನ್ಮವೆತ್ತಿ ನಿನ್ನ ಋಣವನ್ನು ತೀರಿಸಲು ಸಾಧ್ಯವಿಲ್ಲ' ಕೈಗಳನ್ನು ಕಣ್ಣಿಗೆ ಒತ್ತಿಕೊಲ್ಳುತ್ತಾ ಅಳಲಾರಂಭಿಸಿದನು ರಮೇಶನು. ಇತ್ತ ಒಳಗೊಳಗೆ ಅಖಿಲನು ತಳಮಳಗೊಳ್ಳತೊಡಗಿದನು. ತನ್ನ ತಾಯಿಯ ಆಪರೇಷನ್ ಗಾಗಿ ಹಣವು ಕಡಿಮೆ ಬಿಳುತ್ತದಲ್ಲ, ಇನ್ನೂ ಸುಮಾರು ಹತ್ತಿರ ಹತ್ತಿರ ಒಂದುವರೆ ಲಕ್ಷಾನಾದ್ರು ಬೇಕು, ಏನು ಮಾಡುವುದೀಗ' ಎಂದು ಚಿಂತಿಸುತ್ತಿರುವಾಗಲೆ, ರಮೇಶನು ಹಣವನ್ನೆಲ್ಲ ಬ್ಯಾಗನಲ್ಲಿ ತುಂಬಿಕೊಂಡು ಹೊರಡಲೆಂದು ಎದ್ದು ನಿಂತನು. ಬೆಳಿಗ್ಗೆಯಿಂದ ಹೊಟ್ಟೆಗೆ ಸರಿಯಾಗಿ ಏನನ್ನು ತಿಂದಿರದ ಕಾರಣ, ರಮೇಶನಿಗೆ ಸ್ವಲ್ಪ ತಲೆ ಸುತ್ತು ಬಂದಂತಾಗಿ ದೇವಾಲಯದ ಗೋಡೆಯನ್ನು ಹಿಡಿದುಕೊಂಡು ನಿಂತುಕೊಂಡುನು. ಅಖಿಲನು ದಡಕ್ಕನೆ ಎದ್ದು, ರಮೇಶನ ತೋಳನ್ನು ಹಿಡಿದು, ' ಸರ್ ಇನ್ನೈದು ನಿಮಿಷ ತಡೆಯಿರಿ, ನಾನೀಗಲೆ ಹೋಗಿ ತಿನ್ನಲಿಕ್ಕೆ ಏನನ್ನಾದರು ಕಟ್ಟಿಸಿಕೊಂಡು ಬರುತ್ತೇನೆ, ತಿಂಡಿಯನ್ನು ತಿಂದ ನಂತರ ಅರೆ ಕ್ಷಣವು ನಿಲ್ಲದೆ ಇಲ್ಲಿಂದ ಹೊರಟು ಬಿಡೋಣ' ಎನ್ನುತ್ತಾ ರಮೇಶನನ್ನು ಕೆಳಗೆ ಕುಳ್ಳರಿಸಿದನು. ' ಇಲ್ಲಿಗಾಗಲೆ ಬಹಳ ಕತ್ತಲಾಗಿಬಿಟ್ಟಿದೆ ಅಖಿಲ್ ಈ ಕತ್ತಲಿನಲ್ಲಿ ಇಲ್ಲೇನನ್ನು ತಿನ್ನುವುದು'.
' ನೀವಿಲ್ಲೆ ಇರಿ ಹಾಗಿದ್ದರೆ ದೇವಾಲಯದಲ್ಲಿ ಯಾರಾದರು ಇದ್ದಾರೇಯೆ ಎಂದು ನೋಡಿಕೊಂಡು ಬರುತ್ತೇನೆ'
ರಮೇಶನನ್ನು ಅಲ್ಲಿಯೆ ಬಿಟ್ಟು ದೇವಾಲಯದ ಒಳಗೆ ಬಂದನು. ಗರ್ಭಗುಡಿಯಲ್ಲಿ ಶಿವನ ನಗುಮೊಗದ ಸುಂದರ ಮೂರ್ತಿಯಿತ್ತು, ಕಾಲ ಭೈರವ ಎಂಬ ಹೆಸರನ್ನು ಬರೆದಿದ್ದರು ಗರ್ಭಗುಡಿಯ ಗೋಡೆಯ ಮೇಲೆ. ದೇವರ ಮುಂದೆ ಒಂದು ಸಣ್ಣ ದೀಪ ಉರಿಯುತ್ತಿತ್ತು, ಆ ದೇವಾಲಯದ ಎದುರಿಗೆ ಶವಕ್ಕೆ ಅಗ್ನಿಯನ್ನು ಸ್ಪರ್ಶಿಸಿ ಎಲ್ಲರು ನಡೆದಿದ್ದರು, ಅಲ್ಲಲ್ಲಿ ಅಳಿದುಳಿದ ಕಟ್ಟಿಗೆ, ಬೆಂಕಿಯನ್ನು ಹಚ್ಚಲೆಂದು ತಂದಿದ್ದ ಹಳೆ ಗಾಡಿಯ ಟೈರಗಳನ್ನು ಅಲ್ಲೆ ಎಸೆದು ಹೋಗಿದ್ದರು. ಆ ಶವಕ್ಕೆ ಇಟ್ಟ ಕಟ್ಟಿಗೆಯು ಅರ್ಧಕ್ಕೂ ಹೆಚ್ಚಿಗೆ ಸುಟ್ಟು ಹೋಗಿತ್ತು, ಮರಳಿ ದೇವಾಲಯದ ಹಿಂದೆ ಬಂದ ಅಖಿಲನು ಬ್ಯಾಗುಗಳನ್ನು ಹೆಗಲಿಗೆ ಹಾಕಿಕೊಂಡು ರಮೇಶನನ್ನು ಕೈ ಹಿಡಿದು ಕರೆದುಕೊಂಡು ಬಂದು ದೇವಾಲಯದಲ್ಲಿ ಕುಳ್ಳರಿಸಿ. ಬ್ಯಾಗಗಳನ್ನು ಅವನ ಪಕ್ಕದಲ್ಲಟ್ಟು. ಸುತ್ತಲು ಒಮ್ಮೆ ಸೂಕ್ಷ್ಮವಾಗಿ ಕಣ್ಣಾಡಿಸಿದನು. ಯಾವ ನರಪೀಳ್ಳೆಯು ಕಾಣಲಿಲ್ಲ. ಸಮಾಧಾನಗೊಂಡು, ಮುಖ್ಯ ರಸ್ತೆಯಲ್ಲಿದ್ದ ಅಂಗಡಿಯ ಹತ್ತಿರ ತಿನ್ನಲು ಏನನ್ನಾದರೂ ತರಲು ಕಳ್ಳ ಹೆಜ್ಜೆಗಳನ್ನು ಹಾಕತೊಡಗಿದನು.
No comments:
Post a Comment